ಮೊಬೈಲ್‍ನಲ್ಲಿ ಯಾವಾಗ್ಲೂ ಬ್ಯುಸಿ: ರೊಚ್ಚಿಗೆದ್ದು ಪತ್ನಿಯನ್ನೇ ಕೊಂದ ಟೆಕ್ಕಿ

ಬೆಂಗಳೂರು: ಪತ್ನಿ ಯಾವಾಗಲೂ ಮೊಬೈಲ್‍ನಲ್ಲೇ ಇರುತ್ತಾಳೆ. ಅವಳಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ್ದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸ ರೆಡ್ಡಿ (32) ಬಂಧಿತ ಆರೋಪಿ. ವೆಂಗಮ್ಮ(20) ಪತಿಯಿಂದಲೇ ಕೊಲೆಯಾದ ದುರ್ದೈವಿ. ಬೆಂಗಳೂರಿನ ಎಚ್‍ಎಎಲ್ ಬಳಿ ಮಾ.9 ರಂದು ಕೊಲೆ ನಡೆದಿತ್ತು. ಪತ್ನಿಯ ನಡತೆ ಶಂಕಿಸಿ ದಿಂಬಿನಿಂದ ಉಸಿರುಗಟ್ಟಿಸಿ ಪತ್ನಿಯನ್ನು ಶ್ರೀನಿವಾಸ ಕೊಲೆಗೈದಿದ್ದನು.

ಪತಿ ಪತ್ನಿ ಇಬ್ಬರು ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದರು. ಆದ್ರೆ ಪತ್ನಿ ಸದಾ ಯಾರೊಂದಿಗೋ ಮೊಬೈಲ್‍ನಲ್ಲಿ ಚಾಟ್ ಮಾಡುತ್ತಿದ್ದಳು. ಕಾಲ್‍ನಲ್ಲಿ ಬ್ಯುಸಿ ಇರುತ್ತಿದ್ದಳು. ಬೇಕಂತಲೇ ಮಕ್ಕಳು ಬೇಡ ಎಂದು ಹೇಳುತ್ತಿದ್ದಳು. ಅದಕ್ಕೆ ನಾನು ಪತ್ನಿಯನ್ನು ಕೊಂದೆ ಎಂದು ಆರೋಪಿ ಹೇಳಿದ್ದಾನೆ.

ಮಾ.9ರಂದು ಆರೋಪಿ ಜ್ಯೂಸ್‍ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತ್ನಿ ಕುಡಿಸಿದ್ದನು. ಬಳಿಕ ಅದನ್ನು ಕುಡಿದು ಪತ್ನಿ ನಿದ್ರೆಗೆ ಜಾರಿದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಈ ವಿಷಯ ಯಾರಿಗೂ ತಿಳಿಬಾರದು ಅಂತ ವಾಟರ್ ಹೀಟರ್‍ನಿಂದ ಶಾಕ್ ಹೊಡೆದು ಪತ್ನಿ ಸತ್ತಳು ಎಂದು ಆರೋಪಿ ಎಲ್ಲರ ಬಳಿ ಹೇಳಿದ್ದನು. ಅಲ್ಲದೆ ಯಾರಿಗೂ ತಿಳಿಯದಂತೆ ಆರೋಪಿ ನೆಲ್ಲೂರಿಗೆ ಶವ ಸಾಗಿಸಿದ್ದಾಗ ಅಲ್ಲಿನ ಪೊಲೀಸರು ಬೆಂಗಳೂರು ಎಚ್‍ಎಎಲ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಆತನ ವಿರುದ್ಧ ಬೆಂಗಳೂರು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *