ಬೈಕಿಗೆ ಬಿಎಂಟಿಸಿ ಡಿಕ್ಕಿ – ಟೆಕ್ಕಿ ತಲೆ ಮೇಲೆ ಹರಿದ ಬಸ್

ಬೆಂಗಳೂರು: ಬೈಕಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಟೆಕ್ಕಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಕೆ.ಆರ್.ಪುರ ಸಮೀಪದ ಬಿ.ನಾರಾಯಣಪುರ ಬಸ್ ನಿಲ್ದಾಣದ ಬಳಿ ನಡೆದಿದೆ.

ನೊಮಾನ್ ನೌಷಾದ್ (24) ಮೃತ ದುರ್ದೈವಿ. ಈಗ ಬೆಂಗಳೂರಿನ ಕಲ್ಯಾಣನಗರ ನಿವಾಸಿಯಾಗಿದ್ದು ಸಾಫ್ಟವೇರ್ ಉದ್ಯೋಗಿ ಎಂದು ಗುರುತಿಸಲಾಗಿದೆ.

ನೌಷಾದ್ ಇಂದು ಮುಂಜಾನೆ ಕೆಲಸಕ್ಕೆಂದು ತನ್ನ ಬೈಕಿನಲ್ಲಿ ಕೆ.ಆರ್ ಪುರದಿಂದ ನಾರಾಯಣಪುರ ಮಾರ್ಗವಾಗಿ ಹೋಗಿದ್ದರು. ಈ ವೇಳೆ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರನ ಕೆಳಗೆ ಬಿದ್ದಿದ್ದಾನೆ. ಆಗ ಬಸ್ ಟೆಕ್ಕಿ ತಲೆಯ ಮೇಲೆ ಹತ್ತಿದೆ. ಆದ್ದರಿಂದ ಟೆಕ್ಕಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಕೆ.ಆರ್.ಪುರಂ ಸಂಚಾರಿ ಪೋಲಿಸರು ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *