ಟೆಕ್ಕಿ ದಂಪತಿಯಿಂದ ನಡುರಸ್ತೆಯಲ್ಲೆ ರಂಪಾಟ

ಬೆಂಗಳೂರು: ಎಣ್ಣೆ ಮತ್ತಿನಲ್ಲಿದ್ದ ಟೆಕ್ಕಿ ದಂಪತಿ ನಡುರಸ್ತೆಯಲ್ಲೆ ರಂಪಾಟ ಮಾಡಿ ಪೊಲೀಸರನ್ನೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಎಳೆದಾಡಿರುವ ಘಟನೆ ಹೆಬ್ಬಾಳ ಸರ್ಕಲ್ ಬಳಿ ನಡೆದಿದೆ.

ಭಾನುವಾರ ರಾತ್ರಿ ಎಂಟು ಗಂಟೆಗೆ ಮಾನ್ಯತಾ ಟೆಕ್‍ಪಾರ್ಕ್ ಕಡೆಯಿಂದ ಸೂರಜ್ ಶರ್ಮ, ಹನ್ನೋರ ಶರ್ಮ ಟೆಕ್ಕಿ ದಂಪತಿ ವೇಗವಾಗಿ ಕಾರು ಚಲಾಯಿಸಿಕೊಂಡು ಬರುತ್ತಿರುತ್ತಾರೆ. ಹೆಬ್ಬಾಳ ಸರ್ಕಲ್ ಬಳಿ ಕಾರು ನಿಲ್ಲಿಸಿ ಪೇದೆ ರವಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲು ಮುಂದಾಗುತ್ತಾರೆ.

ಆಗ ಕಂಠಪೂರ್ತಿ ಕುಡಿದಿದ್ದ ಟೆಕ್ಕಿ ದಂಪತಿ ಸ್ಕೋಡ್ ಕಾರ್ ನಲ್ಲಿ ಸರ್ಕಲ್ ಮಧ್ಯದಲ್ಲಿ ನಿಲ್ಲಿಸಿ ರಂಪಾಟ ಮಾಡಿದ್ದಾರೆ. ಕಾರು ಸರ್ಕಲ್ ಮಧ್ಯದಲ್ಲೆ ನಿಲ್ಲಿಸಿದ್ದರಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು. ಕಾರ್ ಪಕ್ಕ ಹಾಕಲು ಪೊಲೀಸರು ಮನವಿ ಮಾಡಿಕೊಂಡಿದ್ದರು ಸುಮ್ಮನ್ನಾಗದ ಟೆಕ್ಕಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಕುರಿತು ಸೂರಜ್ ಶರ್ಮ ವಿರುದ್ಧ ಸೆಕ್ಷನ್ 353 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಹೆಬ್ಬಾಳ ಸಂಚಾರಿ ಪೊಲೀಸರು ಕಾರನ್ನ ವಶಪಡಿಸಿಕೊಂಡಿದ್ದಾರೆ.

ಇನ್ನು ಟೆಕ್ಕಿ ದಂಪತಿ ವಿರುದ್ಧ ಹೆಬ್ಬಾಳ ಟ್ರಾಫಿಕ್ ಪೇದೆ ರವಿ ಕೋಡಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಹಾಗೂ ರಸ್ತೆ ಮಧ್ಯ ಕಾರು ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಟೆಕ್ಕಿ ದಂಪತಿಗಾಗಿ ಬಲೆ ಬೀಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *