ಮಹಿಳಾ ಟೆಕ್ಕಿ ಆತ್ಮಹತ್ಯೆ – ಗಂಡನ ಕಿರುಕುಳ ಅರೋಪ

ಬೆಂಗಳೂರು: ನಗರದಲ್ಲಿ ಮಂಡ್ಯ ಮೂಲದ ಮಹಿಳಾ ಟೆಕ್ಕಿಯೊಬ್ಬರು ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಈ ಫೋಟೋದಲ್ಲಿರುವ ಈ ಸುಂದರ ಯುವತಿಯೇ ನೋಡಿ ಬದುಕು ಸಾಕು ಅಂತಾ ನೇಣಿಗೆ ಶರಣಾದ ದುರ್ದೈವಿ. ಮಂಡ್ಯ ಮೂಲದ ಈ ಯುವತಿಯ ಹೆಸರು ಸಂಗೀತಾ. ಚೆನ್ನಾಗಿ ಓದಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇದೇ ಜಾಗದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನೆಲಮಂಗಲ ಮೂಲದ ವಿನಯ್ ಅನ್ನೋರ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಎರಡು ಮನೆಯವರನ್ನು ಒಪ್ಪಿಸಿ ಕಳೆದ ಒಂದುವರೇ ವರ್ಷದ ಹಿಂದೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಮೊದ ಮೊದಲಿಗೆ ಚೆನ್ನಾಗಿ ಇದ್ದ ಈ ಇಬ್ಬರು ದಂಪತಿ, ಕಳೆದ ಐದಾರು ತಿಂಗಳಿನಿಂದ ಚಿಕ್ಕಪುಟ್ಟ ವಿಚಾರಕ್ಕೆ ಗಲಾಟೆ ಮಾಡ್ಕೋತಿದ್ರು ಆ ಗಲಾಟೆಯ ಮುಂದುವರಿದ ಭಾಗವಾಗಿ ನಿನ್ನೆ ಸಂಜೆ ಸಂಗೀತಾ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಪತ್ನಿಯ ಶಿರಚ್ಛೇದ ಮಾಡಿ ಪೊಲೀಸ್ ಠಾಣೆಗೆ ಹೊತ್ತೊಯ್ದ

ಅವನು ಅನುಮಾನದ ಪಿಶಾಚಿ, ಅವನ ಕಿರುಕುಳದಿಂದಲೇ ನಮ್ಮ ಮಗಳು ನೇಣಿಗೆ ಶರಣಾಗಿರುವುದು ಎಂದು ಸಂಗೀತಾಳ ಪೋಷಕರು ಆಳಿಯ ವಿನಯ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗಳು ಚೆನ್ನಾಗಿರಲಿ ಅಂತಾ ಪ್ರೀತಿಸಿದ ಹುಡುಗನಿಗೇ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದೇವು. ಆದರೆ ಆಳಿಯ ವಿನಯ್‍ಗೆ ಸಂಗೀತಾಳ ಬಗ್ಗೆ ಅನುಮಾನ. ಯಾರ ಜೊತೆಗೂ ಫೋನ್‍ನಲ್ಲಿ ಮಾತಾಡೋವಾಗಿಲ್ಲ. ಯಾರ ಜೊತೆಗೆ ಓಡಾಡೋಗಿಲ್ಲ. ಮನೆಯಲ್ಲಿ ಚಿಕ್ಕಪುಟ್ಟ ವಿಚಾರಗಳಿಗೂ ಜಗಳ ತೆಗೆದು ಗಲಾಟೆ ಮಾಡುತ್ತಿದ್ದ. ಊಟ ಸರಿಯಾಗಿ ಮಾಡಲ್ಲ, ಬೇಕಾಬಿಟ್ಟಿ ಮಾಡಿ ಹಾಕುತ್ತಾಳೆ ಎಂದು ಸಂಗೀತಾಗೆ ಕಿರುಕುಳ ನೀಡುತ್ತಿದ್ದ. ಇದೇ ಕಾರಣಕ್ಕೆ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಗೀತಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪತಿ ವಿನಯ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್‌ ಸೋಂಕಿತನ ಪತ್ನಿ, ಬಾಮೈದುನನಿಗೂ ಸೋಂಕು- ಗುಜರಾತ್‌ನಲ್ಲಿ 3ಕ್ಕೇರಿದ ಸಂಖ್ಯೆ

Comments

Leave a Reply

Your email address will not be published. Required fields are marked *