ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ- ಸಹಶಿಕ್ಷಕಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನ

ಕೊಪ್ಪಳ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಅಂತ ಆರೋಪಿಸಿ ಸಹಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಗಂಗಾವತಿ ತಾಲೂಕಿನ ಜಂಗಮರ ಕಲ್ಗೂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಮುದಿಗೌಡ ಸಹಶಿಕ್ಷಕಿ ಭಾಗ್ಯಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದ್ರಿಂದ ನೊಂದ ಶಿಕ್ಷಕಿ ಜುಲೈ 13 ರಂದು 14 ಪುಟದ ಡೆತ್ ನೋಟ್ ಬರೆದು ಫಿನಾಯಿಲ್ ಕುಡಿದು ಆತ್ಮಹತ್ಯೆ ಯತ್ನ ಮಾಡಿದ್ದಾರೆ. ಬಳಿಕ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಖ್ಯ ಆರೋಪಿ ಮಂಜುನಾಥ ಸದ್ಯ ತಲೆಮರೆಸಿಕೊಂಡಿದ್ದಾನೆ. ಶಾಲೆಯ ಮೇಲ್ಗಡೆಯಿರೋ ಕೊಠಡಿಯೊಳಗೆ ಇರುವಾಗ ಮಂಜುನಾಥ ನನ್ನ ಮೈ ಮುಟ್ಟೋದು, ಅಸಭ್ಯವಾಗಿ ವರ್ತಿಸೋದು ಮಾಡಿದ್ದಾನೆ. ಈ ವಿಷಯವನ್ನ ನಿನ್ನ ಪತಿಗೆ ಯಾಕೆ ಹೇಳಿದ್ಯಾ ಅಂತ ಮಾನಸಿಕವಾಗಿ ಚಾಂದಪಾಷಾ, ಹಾಗೂ ಶಂಕರಪ್ಪ ಅನ್ನೋವ್ರು ತುಂಬಾ ತೊಂದ್ರೆ ಕೊಡ್ತಿದ್ರು ಅಂತ ನೊಂದ ಶಿಕ್ಷಕಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಆದ್ರೆ ಈ ಆರೋಪವನ್ನ ಆರೋಪಿತರು ತಳ್ಳಿ ಹಾಕ್ತಿದ್ದಾರೆ. ನಾವು ಆ ರೀತಿಯಾಗಿ ಸಹ ಶಿಕ್ಷಕಿಗೆ ಕಿರುಕುಳ ನೀಡಿಲ್ಲವೆಂದು ವಾದಿಸಿದ್ದಾರೆ.

ಸದ್ಯ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಮುಖ್ಯ ಶಿಕ್ಷಕ ಮಂಜುನಾಥ, ಇನ್ನೊರ್ವ ಮುಖ್ಯ ಶಿಕ್ಷಕ ಚಾಂದಪಾಷಾ, ಇಸಿಒ ಶಂಕರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *