ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕನ ಕುಟುಂಬಕ್ಕೆ ಶಾಸಕರಿಂದ 5 ಲಕ್ಷ ರೂ.

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಬಸ್ತಿಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕ ಅಶೋಕ್ ಕುಟುಂಬಕ್ಕೆ ಶಾಸಕ ಟಿ.ಡಿ.ರಾಜೇಗೌಡ ಅವರು ಶಾಸಕರ ಪರಿಹಾರ ನಿಧಿಯಿಂದ 5 ಲಕ್ಷದ ಚೆಕ್ ವಿತರಿಸಿದ್ದಾರೆ.

ಜುಲೈ 11 ರಂದು ಬಸ್ತಿ ಹಳ್ಳದ ಮೇಲೆ ಕೊಗ್ರೆ ಗ್ರಾಮಕ್ಕೆ ಹೋಗುತ್ತಿದ್ದ ಶೃಂಗೇರಿ ತಾಲೂಕಿನ ಮೇಗೂರಿನ ಅಶೋಕ್ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದರು. ಎನ್.ಆಡಿ.ಆರ್.ಎಫ್ ತಂಡ ಮೂರು ದಿನಗಳ ಕಾಲ ಶವಕ್ಕಾಗಿ ಶೋಧ ನಡೆಸಿ, ನೀರಿನ ರಭಸ ಕಂಡು ವಾಪಸ್ಸಾಗಿದ್ದರು.

ಸ್ಥಳೀಯರೇ ಚಂದಾ ಎತ್ತಿ ಖಾಸಗಿ ಈಜು ಪಟುಗಳನ್ನ ಕರೆಸಿ ಮೃತ ದೇಹ ಹುಡುಕಿಸಿದ್ದರು. 9 ದಿನಗಳ ಕಾಲ ನಿರಂತರವಾಗಿ ಶವ ಹುಡುಕಿದ್ದರಿಂದ ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಬಸ್ತಿ ಹಳ್ಳದಿಂದ ಹತ್ತು ಕಿ.ಮೀ. ದೂರದ ಭದ್ರಾ ಗೇಟ್ ಬಳಿ ಅಶೋಕ್ ಮೃತ ದೇಹ ಪತ್ತೆಯಾಗಿತ್ತು.

ಶುಕ್ರವಾರ ಮೃತ ಅಶೋಕ್ ಮನೆಗೆ ಭೇಟಿ ನೀಡಿದ್ದ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು ಅಶೋಕ್ ಕುಟುಂಬಕ್ಕೆ ಚೆಕ್ ನೀಡಿ ಸಾಂತ್ವಾನ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *