ಟೋಲ್ ಕೇಳಿದ್ದಕ್ಕೆ ಗುಂಡು ಹಾರಿಸಿದ ಕಾರು ಚಾಲಕ

ಚೆನ್ನೈ: ತಮಿಳುನಾಡಿನ ಮಧುರೈ ಜಿಲ್ಲೆಯ ಟೋಲ್ ಪ್ಲಾಜಾದಲ್ಲಿ ಚಾಲಕನೊಬ್ಬ ಟೋಲ್ ಸಿಬ್ಬಂದಿ ಹಣ ಕೇಳುತ್ತಿದ್ದಂತೆ ಕಾರಿನಿಂದ ಇಳಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.

ಶಶಿಕುಮಾರ್(25) ಇನ್ನೊಬ್ಬ ವ್ಯಕ್ತಿಯೊಂದಿಗೆ ಎಸ್‍ಯುವಿ ಕಾರಿನಲ್ಲಿ ತೆರಳುತ್ತಿದ್ದ, ಟೋಲ್ ಗೇಟ್ ಬಳಿ ಕಾರ್ ನಿಲ್ಲಿಸಿದ ನಂತರ ಸಿಬ್ಬಂದಿ ಟೋಲ್ ಹಣವನ್ನು ಪಾವತಿಸುವಂತೆ ಕೇಳಿದ್ದಾರೆ. ನಂತರ ಯುವಕ ತನ್ನ ಎಸ್‍ಯುವಿ ಕಾರಿನಿಂದ ಇಳಿದು ತನ್ನ ಪಿಸ್ತೂಲನ್ನು ಆಕಾಶಕ್ಕೆ ಮುಖಮಾಡಿ ಗುಂಡು ಹಾರಿಸಿದ್ದಾನೆ. ಆಗ ಡ್ರೈವರ್ ಸೀಟ್‍ನಲ್ಲಿದ್ದ ವ್ಯಕ್ತಿ ಶಶಿಕುಮಾರ್‍ನನ್ನು ಸ್ಥಳದಲ್ಲಿಯೇ ಬಿಟ್ಟು ಕಾರ್ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

ಶಶಿಕುಮಾರ್ ಪಿಸ್ತೂಲಿಗೆ ಪರವಾನಗಿ ಪಡೆದಿದ್ದಾನಾ ಎಂಬುದು ತಿಳಿದು ಬಂದಿಲ್ಲ. ಸ್ಥಳದಲ್ಲೇ ಇದ್ದ ಶಶಿಕುಮಾರ್‍ನನ್ನು ಬಂಧಿಸಲಾಗಿದ್ದು, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವುದೇ ಪ್ರಾಣ ಹಾನಿ ಹಾಗೂ ಆಸ್ತಿ ಹಾನಿ ಸಂಭವಿಸಿಲ್ಲ. ತನಿಖೆ ನಡೆಸಲಾಗುತ್ತಿದೆ. ಶಶಿಕುಮಾರ್ ತಿರುಚಿರಾಪಳ್ಳಿಯಿಂದ ವಿರುಧುನಗರಕ್ಕೆ ತೆರಳುತ್ತಿದ್ದ. ಘಟನೆಯು ಚೆನ್ನೈ ದಕ್ಷಿಣದಿಂದ 450 ಕಿ.ಮೀ. ದೂರದಲ್ಲಿರುವ ಕಪ್ಪಲೂರು ಟೋಲ್ ಪ್ಲಾಜಾದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *