ಕಾವೇರಿ ತೀರ್ಪಿನ ಬಗ್ಗೆ ತಮಿಳುನಾಡು ಪರ ವಕೀಲ ಎ. ನವನೀತ್ ಕೃಷ್ಣನ್ ಪ್ರತಿಕ್ರಿಯೆ

ನವದೆಹಲಿ: ಕಾವೇರಿ ತೀರ್ಪಿನ ಬಗ್ಗೆ ತಮಿಳುನಾಡು ಪರ ವಕೀಲ ಎ ನವನೀತ್ ಕೃಷ್ಣನ್ ಸುದ್ದಿ ಸಂಸ್ಥೆಗೆ ಪತ್ರಿಕ್ರಿಯೆ ನೀಡಿದ್ದಾರೆ.

ಮೊದಲಿಗೆ ತಮಿಳುನಾಡಿಗೆ ನೀಡಲಾಗಿದ್ದ 192 ಟಿಎಂಸಿ ನೀರು ಸುಪ್ರೀಂ ಕೋರ್ಟ್ ಆದೇಶದಂತೆ ಇಳಿಕೆಯಾಗಿದೆ. ಬೆಂಗಳೂರಿಗೆ ನೀರು ಒದಗಿಸಲು 14.75 ಟಿಎಂಸಿಯಷ್ಟು ಹೆಚ್ಚುವರಿ ನೀರು ಕರ್ನಾಟಕ್ಕೆ ನೀಡಲಾಗಿದೆ. ತಮಿಳುನಾಡು ಸರ್ಕಾರ ಈ ಬಗ್ಗೆ ಸಮರ್ಪಕ ನಿರ್ಧಾರಗಳನ್ನ ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತೇವೆ ಎಂದು ನವನೀತ್ ಕೃಷ್ಣನ್ ಹೇಳಿದ್ದಾರೆ.

ನ್ಯಾಯಾಲಯದ ತೀರ್ಪಿನ ಬಗ್ಗೆ ನಮಗೆ ನಂಬಿಕೆ ಇದೆ ಹಾಗೂ ಅದನ್ನು ಗೌರವಿಸುತ್ತೇವೆ. ಖಂಡಿತವಾಗಿಯೂ ಇದು ಸಾಕಾಗುವುದಿಲ್ಲ. ನೀರಿನ ಕೊರತೆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಹೇಳಿದ್ದೇವೆ. ಇದರ ಪರಿಹಾರಕ್ಕೆ ಅವರು ಎರಡು ಯೋಜನೆಗಳನ್ನ ಹೊಂದಿದ್ದಾರೆ. ಅದರಲ್ಲಿ ಒಂದು ಗೋದಾವರಿ ಮತ್ತು ಕಳ್ಳಾನೈ ನದಿಗಳನ್ನ ಜೋಡಣೆ ಮಾಡುವುದು ಎಂದು ಅವರು ಹೇಳಿದ್ರು.

Comments

Leave a Reply

Your email address will not be published. Required fields are marked *