Tag: zilla panchayat member

  • ಜಿ.ಪಂ ಸದಸ್ಯೆ ಪೊಲೀಸರ ವಶಕ್ಕೆ – ಆನಂದಪುರ ಆಹಾರ ಘಟಕದ ಮುಂದೆ ಹೈಡ್ರಾಮಾ

    ಜಿ.ಪಂ ಸದಸ್ಯೆ ಪೊಲೀಸರ ವಶಕ್ಕೆ – ಆನಂದಪುರ ಆಹಾರ ಘಟಕದ ಮುಂದೆ ಹೈಡ್ರಾಮಾ

    ಶಿವಮೊಗ್ಗ: ಪೌಷ್ಟಿಕ ಆಹಾರ ಘಟಕ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ.

    ಆನಂದಪುರದಲ್ಲಿ ಸಾಗರ ಮತ್ತು ಸೊರಬ ತಾಲೂಕಿನ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಘಟಕವಿದೆ. ಇದನ್ನು ಸಾಗರಕ್ಕೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಈ ಘಟಕದ ಸ್ಥಳಾಂತರ ವಿರೋಧಿಸಿ ಜಿ.ಪಂ. ಸದಸ್ಯೆ ಅನಿತಾಕುಮಾರಿ ಘಟಕದ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಆರೋಪಿಸಿ ಪೊಲೀಸರು ಜಿ.ಪಂ. ಸದಸ್ಯೆ ಅನಿತಾಕುಮಾರಿ ಮತ್ತು ಆನಂದಪುರ ಗ್ರಾ.ಪಂ ಸದಸ್ಯ ಸಿರಿಜಾನ್ ಅವರನ್ನು ವಶಕ್ಕೆ ಪಡೆದರು.

    ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಘಟಕದ ಏಕಾಏಕಿ ಸ್ಥಳಾಂತರ ಕುರಿತು ಈ ಹಿಂದೆ ಜಿಲ್ಲಾ ಪಂಚಾಯಿತಿ ಸಭೆಯಲ್ಲು ಚರ್ಚೆ ನಡೆದಿತ್ತು. ಆದರೆ ಅಧಿಕಾರಿಗಳು ಇಂದು ಪೊಲೀಸ್ ರಕ್ಷಣೆಯಲ್ಲಿ ದಿಢೀರ್ ಸ್ಥಳಾಂತರ ಕಾರ್ಯ ಆರಂಭಿಸಿದ್ದರು. ಆದರೆ ಘಟಕದಲ್ಲಿದ್ದ 400 ಟನ್ ಅಕ್ಕಿ, ಗೋಧಿಗೆ ಲೆಕ್ಕವೇ ಇಲ್ಲ. ಈ ಕುರಿತು ತನಿಖೆ ನಡೆಸಬೇಕು ಅಲ್ಲಿಯವರಗೂ ಯಾವುದೇ ಕಾರಣಕ್ಕೂ ಘಟಕ ಸ್ಥಳಾಂತರ ಮಾಡದಂತೆ ಜಿ.ಪಂ.ಸದಸ್ಯೆ ಅನಿತಾಕುಮಾರಿ ಆಗ್ರಹಿಸಿದ್ದಾರೆ.

  • ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಕ್ಕಳಿಸಿ ಅತ್ತ ಮಹಿಳಾ ಸದಸ್ಯೆ!

    ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಕ್ಕಳಿಸಿ ಅತ್ತ ಮಹಿಳಾ ಸದಸ್ಯೆ!

    ಮಂಡ್ಯ: ಜನಸಾಮಾನ್ಯರ ಕಷ್ಟ ಬಗೆಹರಿಸಬೇಕಾದ ಚುನಾಯಿತ ಸದಸ್ಯರೇ ತಮಗಾಗುತ್ತಿರುವ ಕಷ್ಟ ಹೇಳಿಕೊಂಡು ಬಿಕ್ಕಳಿಸಿ ಅತ್ತ ಘಟನೆ ಮಂಡ್ಯ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆದಿದೆ.

    ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಂದಮ್ಮ ಎಂಬವರು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಎದುರು ಕಣ್ಣೀರು ಹಾಕಿ ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.

    ಏನಿದು ಘಟನೆ: ನಾಗಮಂಗಲ ತಾಲ್ಲೂಕಿನ, ಶಿಕಾರಿಪುರ ಗ್ರಾಮದ ಹಾಸ್ಟೆಲ್ ವಾರ್ಡನ್‍ಗಳಾದ ಲೋಕೇಶ್ ಮತ್ತು ಪಾರ್ವತಿ ಎಂಬವರು ರೌಡಿಗಳ ಮೂಲಕ ನನಗೆ ಧಮ್ಕಿ ಹಾಕಿಸಿದ್ದಾರೆ ಎಂದು ಸುನಂದಮ್ಮ ಆರೋಪಿಸಿದ್ದಾರೆ. ಅನಗತ್ಯವಾಗಿ ತಮ್ಮಗೆ ಕಿರುಕುಳ ನೀಡುತ್ತಿರುವ ಕುರಿತು ಎರಡು ವರ್ಷದಿಂದ ದೂರು ಸಲ್ಲಿಸುತ್ತಿದ್ದರು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸುನಂದಮ್ಮ ಆರೋಪಿಸಿದ್ದಾರೆ.

    ಸಭೆಯಲ್ಲಿ ಈ ಕುರಿತು ಎಲ್ಲರ ಎದುರು ವಿಷಯ ಪ್ರಸ್ತಾಪಿಸಿದ ಸುನಂದಮ್ಮ ಅವರು ದುಃಖ ತಡೆಯಲಾಗದೇ ಕಣ್ಣೀರು ಹಾಕಿದರು. ಈ ವೇಳೆ ಸಭೆಯಲ್ಲಿ ಹಾಜರಿದ್ದ ಕೆಲ ಸದಸ್ಯರು ಸುನಂದಮ್ಮ ಪರ ಧ್ವನಿಗೂಡಿಸಿದ್ದು, ಕೊನೆಗೆ ಎಲ್ಲ ಸದಸ್ಯರು ಸೇರಿ ಅವರನ್ನು ಸಮಾಧಾನ ಪಡಿಸಿದ್ದಾರೆ. ಅಲ್ಲದ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಲುವೆ ತಡೆಗೋಡೆ ಒಡೆದು ಜಿ.ಪಂ ಕಾಂಗ್ರೆಸ್ ಸದಸ್ಯನ ದರ್ಪ ಅಡಗಿಸಿದ ರೈತರು

    ಕಾಲುವೆ ತಡೆಗೋಡೆ ಒಡೆದು ಜಿ.ಪಂ ಕಾಂಗ್ರೆಸ್ ಸದಸ್ಯನ ದರ್ಪ ಅಡಗಿಸಿದ ರೈತರು

    ರಾಯಚೂರು: ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯರೊಬ್ಬರು ತುಂಗಭದ್ರಾ ಎಡದಂಡೆ ಕಾಲುವೆಗೆ ತಡೆಗೋಡೆ ಕಟ್ಟಿ, ತಮ್ಮ ಜಮೀನಿಗೆ ನೀರು ಹರಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿದ್ರೆ, ಸಾರ್ವಜನಿಕರ ಮೇಲೆ ಗೂಂಡಾಗಿರಿ ಮಾಡಿದ್ದಾರೆ. ಆಕ್ರೋಶಗೊಂಡ ರೈತರು ಕಾಲುವೆಗೆ ಕಟ್ಟಲಾಗಿದ್ದ ತಡೆಗೋಡೆಯನ್ನು ಒಡೆದು ಹಾಕಿದ್ದಾರೆ.

    ಯಾರು ಈ ಜನಪ್ರತಿನಿಧಿ: ಸಿಂಧನೂರಿನ ಗುಡದೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ದುರಗಪ್ಪ ಗುಡಗಲದಿನ್ನಿ ಅಕ್ರಮವಾಗಿ ನೀರು ಪಡೆಯುತ್ತಿರುವ ಜನಪ್ರತಿನಿಧಿ. ತುಂಗಭದ್ರಾ ಎಡದಂಡೆ ಕಾಲುವೆಯ 49 ನೇ ಉಪಕಾಲುವೆಗೆ ತಡೆಗೊಡೆ ಕಟ್ಟಿ, ತಮ್ಮ 12 ಎಕರೆ ಜಮೀನಿಗೆ ನೀರು ಹರಿಸಿಕೊಂಡಿದ್ದರು.

    ತಡೆಗೋಡೆ ಕಟ್ಟಿದ್ದರಿಂದ ಕೆಳಭಾಗದ ಕೋಳಬಾಳ, ಕನ್ನೂರು, ಹೆಡಗಿಬಾಳ ಕ್ಯಾಂಪ್, ಮದ್ದಾಪುರ, ಎಲೆಕೂಡ್ಲಿಗಿ, ಗೋನಾಳ ಸೇರಿ ಇನ್ನೂ ಹಲವು ಗ್ರಾಮದ ರೈತರ ಜಮೀನಿಗೆ ನೀರು ಪೂರೈಕೆ ಆಗುತ್ತಿರಲಿಲ್ಲ. ಕಾಲುವೆಗೆ ನೀರು ಬಿಟ್ಟಿದ್ದರೂ ತಮ್ಮ ಹೊಲಗಳ ಸಮೀಪದ ಕಾಲುವೆಗೆ ನೀರು ಬಾರದಿದ್ದಕ್ಕೆ ಸಂದೇಹ ವ್ಯಕ್ತಪಡಿಸಿ, ಕೆಲವು ರೈತರು ಕಾಲುವೆ ಪರಿಶೀಲನೆ ಮಾಡಿದ್ದರು. ಈ ವೇಳೆ ದುರಗಪ್ಪ ಗುಡಗಲದಿನ್ನಿ ಕಾಲುವೆಗೆ ತಡೆಗೊಡೆ ಕಟ್ಟಿದ್ದು ತಿಳಿದು, ನೀರು ಬಿಡುವಂತೆ ಅವರು ಕೇಳಿದ್ದರು. ಆದರೆ ಇದಕ್ಕೆ ಒಪ್ಪದ ದುರಗಪ್ಪ ಗೂಂಡಾಗಿರಿ ದರ್ಪ ಮೆರೆದಿದ್ದರು.

    ಕೆಲವು ರೈತರು ದುರಗಪ್ಪ ಗುಡಗಲದಿನ್ನಿ ವಿರುದ್ಧ ನೀರಾವರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಪೊಲೀಸರ ಎದುರೇ ರೈತರೇ ಕಾಂಕ್ರೀಟ್‍ನಿಂದ ಕಟ್ಟಿದ್ದ ತಡೆಗೋಡೆಯನ್ನು ಒಡೆದುಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಿಎಂ ಎಲೆಕ್ಷನ್ ವೇಳೆ ಕಾರ್ ಟೈರ್‍ನಲ್ಲಿ ಸಾಗಿಸಿದ್ರಂತೆ ಕಂತೆ ಕಂತೆ ನೋಟು- ಜಿಪಂ ಸದಸ್ಯನಿಂದ ಹೊಸ ಬಾಂಬ್

    ಸಿಎಂ ಎಲೆಕ್ಷನ್ ವೇಳೆ ಕಾರ್ ಟೈರ್‍ನಲ್ಲಿ ಸಾಗಿಸಿದ್ರಂತೆ ಕಂತೆ ಕಂತೆ ನೋಟು- ಜಿಪಂ ಸದಸ್ಯನಿಂದ ಹೊಸ ಬಾಂಬ್

    ತುಮಕೂರು: ಜಿಲ್ಲೆಯ ಹೊನವಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯ ಜಿ.ನಾರಾಯಣ ಹೊಸ ಬಾಂಬ್ ಸಿಡಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ ನವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದಾಗ ನಡೆದಂತಹ ಉಪಚುನಾಚಣೆಯಲ್ಲಿ ನಾನೇ ಸ್ವತಃ ದುಡ್ಡು ಹಂಚಿದ್ದೇನೆ. ನನ್ನಲ್ಲಿದ್ದ ಸ್ಯಾಂಟ್ರೋ ಕಾರಿನ ಟೈರ್‍ನಲ್ಲಿ 4 ಲಕ್ಷ ರೂ. ತೆಗೆದುಕೊಂಡು ಹೋಗಿ ಹಂಚಿದ್ದೇನೆ ಎಂದು ಸೋಮವಾರದಂದು ತಿಪಟೂರಿನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ.

    ಸಿದ್ದರಾಮಯ್ಯನವರು ಸಿಎಂ ಆಗಬೇಕು ಎಂಬ ಕನಸು ಕಂಡಿದ್ದೆ. ಈಗ ಅವರು ಪ್ರಧಾನಿಯೂ ಆಗಬೇಕು ಎಂಬ ಹಂಬಲ ಇದೆ. ಆದರೆ ಸಿದ್ದರಾಮಯ್ಯಗೋಸ್ಕರ ದುಡಿದ ನನಗೆ ಕಾಂಗ್ರೆಸ್ ನವರೇ ದ್ವೇಷ ಮಾಡ್ತಾ ಇದ್ದಾರೆ ಎಂದು ನೋವನ್ನು ತೋಡಿಕೊಂಡರು. ಅಲ್ಲದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಿಪಟೂರು ಕ್ಷೇತ್ರದಿಂದಲೇ ಸ್ಪರ್ಧಿಸಿ ವಿಧಾನಸೌಧ ಪ್ರವೇಶಿಸುತ್ತೇನೆ ಅಂದ್ರು.

    ಇದು ಸೂರ್ಯ ಚಂದ್ರರಿರುವಷ್ಟೇ ಸತ್ಯ ಎಂದು ಆಕ್ರೋಶಭರಿತರಾಗಿ ಹೇಳಿ ಇನ್ನೊಂದು ವಿವಾದ ಸೃಷ್ಟಿಸಿದ್ದಾರೆ. ವೇದಿಕೆಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ಇದ್ದರೂ ಜಿ.ನಾರಾಯಣ ಈ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.