Tag: Yuvaraj Singh

  • ಧೋನಿಯನ್ನು ಯಾವತ್ತೂ ಕ್ಷಮಿಸಲ್ಲ – ಯುವರಾಜ್ ಸಿಂಗ್ ತಂದೆ ಕಿಡಿ

    ಧೋನಿಯನ್ನು ಯಾವತ್ತೂ ಕ್ಷಮಿಸಲ್ಲ – ಯುವರಾಜ್ ಸಿಂಗ್ ತಂದೆ ಕಿಡಿ

    – ಧೋನಿ ತಮ್ಮ ಮುಖವನ್ನು ಕನ್ನಡಿಯಲ್ಲಿ ಒಮ್ಮೆ ನೋಡಿಕೊಳ್ಳಲಿ ಅಂತ ಲೇವಡಿ

    ಮುಂಬೈ: ನನ್ನ ಮಗನ ಭವಿಷ್ಯಕ್ಕೆ ಅಡ್ಡಗಾಲು ಹಾಕಿದ ಮಹೇಂದ್ರ ಸಿಂಗ್ ಧೋನಿಯನ್ನು (MS Dhoni) ನಾನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಯುವರಾಜ್ ಸಿಂಗ್ (Yuvaraj Singh) ತಂದೆ, ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ (Yograj Singh) ಧೋನಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಭಾರತ ತಂಡದ ಪರ ಏಳು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಯೋಗರಾಜ್ ಸಿಂಗ್ ಅವರ ತಂದೆ ಸಾರ್ವಜನಿಕವಾಗಿ ಧೋನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮಗನ ಭವಿಷ್ಯವನ್ನು ಧೋನಿ ಹಾಳು ಮಾಡಿದ್ದಾರೆ. ಹೀಗಾಗಿ ನಾನು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಎಷ್ಟೇ ದೊಡ್ಡ ಕ್ರಿಕೆಟಿಗನಾದರೂ ಧೋನಿ ನನ್ನ ಕ್ಷಮೆಗೆ ಅರ್ಹರಲ್ಲ ಎಂದು ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ಯೋಗರಾಜ್ ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ದರ್ಶನ್‌ ಗ್ಯಾಂಗ್‌ನ ಮತ್ತಿಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾ

    ಧೋನಿ ತಮ್ಮ ಮುಖವನ್ನು ಕನ್ನಡಿಯಲ್ಲಿ ಒಮ್ಮೆ ನೋಡಿಕೊಳ್ಳಲಿ. ಅವರು ದೊಡ್ಡ ಕ್ರಿಕೆಟಿಗನೇ ಇರಬಹುದು. ಆದರೆ ಅವರು ನನ್ನ ಮಗನ ವಿರುದ್ಧ ಏನೆಲ್ಲಾ ಮಾಡಿದ್ದಾನೆ ಎಂಬುದು ಈಗ ಹೊರಗೆ ಬರುತ್ತಿದೆ. ಅದನ್ನು ನನ್ನ ಜೀವನದಲ್ಲಿ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ನಾನು ನನ್ನ ಜೀವನದಲ್ಲಿ 2 ತಪ್ಪುಗಳನ್ನು ಮಾಡಿಲ್ಲ. ಮೊದಲನೆಯದಾಗಿ ಯಾರೇ ತಪ್ಪು ಮಾಡಿದರೂ ನಾನು ಅವರನ್ನು ಕ್ಷಮಿಸಿಲ್ಲ. ಎರಡನೆಯದಾಗಿ ತಪ್ಪು ಮಾಡಿದವರನ್ನು ನಾನು ಯಾವತ್ತಿಗೂ ತಬ್ಬಿಕೊಂಡಿಲ್ಲ. ಅದು ನನ್ನ ಕುಟುಂಬವೇ ಆಗಿರಲಿ, ಮಕ್ಕಳೆ ಆಗಿರಲಿ. ನಾನು ಅದನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: Kolkata Horror | ಟ್ರೈನಿ ವೈದ್ಯೆ ʻಹತ್ಯಾʼಚಾರ ನಡೆದಿದ್ದ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅರೆಸ್ಟ್‌

    ಎಂ.ಎಸ್ ಧೋನಿ ವಿರುದ್ಧ ಯೋಗರಾಜ್ ಸಿಂಗ್ ಈ ರೀತಿಯಾಗಿ ಆರೋಪಿಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಧೋನಿಯನ್ನು ಬಹಿರಂಗವಾಗಿ ದೂರಿದ್ದರು. 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಿಎಸ್‌ಕೆ (CSK) ಸೋಲಲು ಧೋನಿಯೇ ಪ್ರಮುಖ ಕಾರಣ. ಅವರಿಗೆ ಅಸೂಯೆ ಜಾಸ್ತಿ ಇದೆ ಎಂದು ಯೋಗರಾಜ್ ಸಿಂಗ್ ಆರೋಪಿಸಿದ್ದರು. ಇದನ್ನೂ ಓದಿ: Breaking: ಮುಡಾ ಹಗರಣದ ಮೊದಲ ವಿಕೆಟ್ ಪತನ – ಹಿಂದಿನ ಆಯುಕ್ತ ದಿನೇಶ್ ಕುಮಾರ್ ಸಸ್ಪೆಂಡ್‌!

  • ವರಮಹಾಲಕ್ಷ್ಮಿ ಹಬ್ಬದಂದೇ ಯುವರಾಜ್ ಸಿಂಗ್ ಮನೆಗೆ ‘ಲಕ್ಷ್ಮಿ’ಯ ಆಗಮನ

    ವರಮಹಾಲಕ್ಷ್ಮಿ ಹಬ್ಬದಂದೇ ಯುವರಾಜ್ ಸಿಂಗ್ ಮನೆಗೆ ‘ಲಕ್ಷ್ಮಿ’ಯ ಆಗಮನ

    ನವದೆಹಲಿ: ವರಮಹಾಲಕ್ಷ್ಮಿ ಹಬ್ಬದಂದೇ (Varamahalakshmi Festival) ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‍ರೌಂಡರ್, ವಿಶ್ವಕಪ್ ವಿಜೇತ ತಂಡದ ಸದಸ್ಯ ಯುವರಾಜ್ ಸಿಂಗ್ (Yuvraj Singh) ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

    ಹೌದು, ಯುವಿ ಪತ್ನಿ ಹೇಜಲ್ ಕೀಚ್ (Hazel Keech) ಅವರು ಆಗಸ್ಟ್ 25ರಂದು (ಇಂದು) ಹೆಣ್ಣು ಮಗುವಿಗೆ (Girl Baby) ಜನ್ಮ ನೀಡಿದ್ದಾರೆ. ಈ ಮೂಲಕ ದಂಪತಿ ಹಬ್ಬದಂದೇ ಲಕ್ಷ್ಮಿಯನ್ನು ಸ್ವಾಗತಿಸಿದ್ದಾರೆ. ಈ ಸಂಬಂಧ ಸ್ವತಃ ಯುವಿ ಅವರೇ ತಮ್ಮ ಟ್ವಿಟ್ಟರ್ ಅಕೌಂಟ್‍ನಿಂದ ತಿಳಿಸಿದ್ದಾರೆ. ಪತ್ನಿ ಹಾಗೂ ಮಗುವಿನ ಜೊತೆಗಿನ ಫೋಟೋ ಶೇರ್ ಮಾಡಿ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

    ಫೋಟೋ ಜೊತೆಗೆ ನಿದ್ದೆಯಿಲ್ಲದ ರಾತ್ರಿಗಳು ಹೆಚ್ಚು ಸಂತೋಷಕರವಾಗಿದ್ದು, ನಮ್ಮ ಪುಟ್ಟ ರಾಜಕುಮಾರಿ ಔರಾಳನ್ನು ನಾವು ಸ್ವಾಗತಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಯುವಿ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಯುವರಾಜ್ ಸಿಂಗ್ ಹಾಗೂ ಹೇಜಲ್ ಕೀಚ್ ದಂಪತಿಗೆ ಈಗಾಗಲೇ ಒಂದೂವರೆ ವರ್ಷದ ಮಗನಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ʻಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್‌ ಜೊತೆ ಖ್ಯಾತ ಕ್ರಿಕೆಟರ್‌ ತಂದೆ ನಟನೆ

    ʻಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್‌ ಜೊತೆ ಖ್ಯಾತ ಕ್ರಿಕೆಟರ್‌ ತಂದೆ ನಟನೆ

    ಕ್ರಿಕೆಟ್ ಕ್ಷೇತ್ರದಲ್ಲಿ ಮಿಂಚಿದ ಅನೇಕ ಸ್ಟಾರ್ ಕ್ರಿಕೆಟಿಗರು ತಮ್ಮ ನಿವೃತ್ತಿಯ ನಂತರ ಬೇರೆ ಕ್ಷೇತ್ರಗಳತ್ತ ಮುಖ ಮಾಡೋದು ಸರ್ವೇ ಸಾಮಾನ್ಯ. ಇತ್ತೀಚೆಗಷ್ಟೇ ಎಂ.ಎಸ್ ಧೋನಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೀಗ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್(Yuvaraj Singh) ತಂದೆ ಯೋಗರಾಜ್ ಸಿಂಗ್(Yogaraj Singh) ಕೂಡ ಸಿನಿಮಾಗೆ ಎಂಟ್ರಿ ಕೊಡ್ತಿದ್ದಾರೆ.

    ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಎಂ.ಎಸ್ ಧೋನಿ ನಂತರ ಮಾಜಿ ಕ್ರಿಕೆಟಿಗ ಆಗಿರುವ ಯೋಗರಾಜ್ ಸಿಂಗ್ ಇದೀಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಖ್ಯಾತ ಕ್ರಿಕೆಟರ್ ಯುವರಾಜ್ ಸಿಂಗ್ ತಂದೆ ಕೂಡ ಕ್ರಿಕೆಟ್ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಕಮಲ್ ಹಾಸನ್(Kamal Haasan) ನಟನೆಯ `ಇಂಡಿಯನ್ 2′ (Indian 2) ಚಿತ್ರದಲ್ಲಿ ಯೋಗರಾಜ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಹನ್ಸಿಕಾ ಮೋಟ್ವಾನಿಗೆ ರೊಮ್ಯಾಂಟಿಕ್‌ ಆಗಿ ಪ್ರಪೋಸ್‌ ಮಾಡಿದ ಭಾವಿ ಪತಿ

     

    View this post on Instagram

     

    A post shared by Yograj Singh (@yograjofficial)

    `ಇಂಡಿಯನ್ 2′ ಸಿನಿಮಾ ಶುರುವಾಗಿ ಹಲವು ವರ್ಷಗಳೇ ಆಗಿದೆ. ಆದರೆ ಕೆಲವು ಕಾರಣಗಳಿಂದ ಈ ಚಿತ್ರ ಸ್ಥಗಿತಗೊಂಡಿತ್ತು. ಇದೀಗ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರದ ಸಕ್ಸಸ್ ನಂತರ ಈ ಚಿತ್ರ ಮತ್ತೆ `ಇಂಡಿಯನ್ 2′ ಪ್ರಾಜೆಕ್ಟ್ ಶುರುವಾಗಿದೆ. ಮಾಜಿ ಕ್ರಿಕೆಟರ್ ಯೋಗರಾಜ್ ಸಿಂಗ್ ಈ ಚಿತ್ರದಲ್ಲಿ ಪವರ್‌ಫಯಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟಿ20 ವಿಶ್ವಕಪ್ ಗೆದ್ದ ಇತಿಹಾಸಕ್ಕೆ ಇಂದಿಗೆ 14 ವರ್ಷ

    ಟಿ20 ವಿಶ್ವಕಪ್ ಗೆದ್ದ ಇತಿಹಾಸಕ್ಕೆ ಇಂದಿಗೆ 14 ವರ್ಷ

    – ಧೋನಿ ಯುಗ ಆರಂಭದ ದಿನಗಳು
    – ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ
    – ಐತಿಹಾಸಿಕ ದಿನ ಸ್ಮರಿಸಿ ಬಿಸಿಸಿಐ ಟ್ವೀಟ್

    ಮುಂಬೈ: ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇಂದಿಗೆ ಬರೋಬ್ಬರಿ 14 ವರ್ಷಗಳು ಕಳೆದಿದ್ದು, ಈ ಐತಿಹಾಸಿಕ ದಿನವನ್ನು ಭಾರತೀಯ ಕ್ರಿಕೆಟ್ ಮಂಡಳಿ ಸ್ಮರಿಸಿ ಟ್ವೀಟ್ ಮಾಡಿದೆ.

    2007ರ ಏಕದಿನ ವಿಶ್ವಕಪ್‍ನಲ್ಲಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ತಂಡ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದಾದ ಕೆಲ ದಿನಗಳ ಬಳಿಕ ಬಿಸಿಸಿಐ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯನ್ನು ಟಿ20 ತಂಡದ ನಾಯಕನಾಗಿ ಮಾಡಿ ದಕ್ಷಿಣ ಆಫ್ರಿಕಾಕ್ಕೆ ಕಳುಹಿತ್ತು. ಏಕದಿನ ವಿಶ್ವಕಪ್ ಸೋಲಿನ ಹತಾಶೆಯಲ್ಲಿದ್ದ ಭಾರತೀಯರು ಟಿ20 ವಿಶ್ವಕಪ್‍ನಲ್ಲಿ ಭಾರತ ಗೆಲ್ಲುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ.

    ಸಚಿನ್, ಗಂಗೂಲಿ, ದ್ರಾವಿಡ್‍ರಂತಹ ದಿಗ್ಗಜ ಆಟಗಾರರಿಲ್ಲದೆ ಟಿ20 ಆಡಲು ಭಾರತ ಮುಂದಾಗಿತ್ತು. ವೀರೇಂದ್ರ ಸೆಹ್ವಾಗ್, ಧೋನಿ, ಯುವರಾಜ್ ಸಿಂಗ್ ಬಿಟ್ಟರೆ ಉಳಿದ ಯಾವೊಬ್ಬ ಆಟಗಾರರು ಕೂಡ ಟಿ20 ಯಲ್ಲಿ ಒಂದು ಪಂದ್ಯವನ್ನು ಆಡಿರಲಿಲ್ಲ. ಹೊಸ ಹುರುಪಿನೊಂದಿಗೆ ಹೊಸ ತಂಡವೊಂದನ್ನು ಬಿಸಿಸಿಐ ಕಟ್ಟಿ ಕಳುಹಿಸಿತ್ತು. ಅನನುಭವಿ ಆಟಗಾರರನ್ನು ಕಟ್ಟಿಕೊಂಡು ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾವನ್ನು ವಿಶ್ವ ಚಾಂಪಿಯನ್ ಮಾಡಿದ್ದು ಈಗ ಇತಿಹಾಸ. ಇದನ್ನೂ ಓದಿ: ಶಾರ್ಜಾದಲ್ಲಿ ಶೈನ್ ಆಗುತ್ತಾ ರಾಯಲ್ ಚಾಲೆಂಜರ್ಸ್: ಇಂದು ಚೆನ್ನೈ-ಬೆಂಗಳೂರು ಕದನ

    ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ, ಫೈನಲ್‍ನಲ್ಲಿ ಪಾಕಿಸ್ತಾನವನ್ನು ಎದುರಿಸಬೇಕಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಗೌತಮ್ ಗಂಭೀರ್ (75), ರೋಹಿತ್ ಶರ್ಮಾ (30), ಯುವರಾಜ್ ಸಿಂಗ್ (14) ರನ್‍ಗಳೊಂದಿಗೆ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 19.3 ಓವರ್‍ಗಳಲ್ಲಿ 152 ರನ್‍ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಸೋತು ಶರಣಾಯಿತು. ಇದನ್ನೂ ಓದಿ: ದಾಖಲೆಯ ಹೊಸ್ತಿಲಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ

    ಚೊಚ್ಚಲ ಟಿ20 ವಿಶ್ವಕಪ್‍ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡ, ಈ ಬಾರಿ ಮತ್ತೆ ಟಿ20 ವಿಶ್ವಕಪ್ ಗೆಲ್ಲುವ ಕನಸನ್ನು ಹೊತ್ತಿದೆ. ಇದೇ ಅ.17ರಿಂದ ನವೆಂಬರ್ 15ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ಈ ಬಾರಿಯ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ.

  • ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಅಮೆರಿಕದ ಆಟಗಾರ

    ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಅಮೆರಿಕದ ಆಟಗಾರ

    ಮಸ್ಕತ್: ಯುಎಸ್‍ಎ ಕ್ರಿಕೆಟ್ ಆಟಗಾರ ಜಸ್ಕರನ್ ಮಲ್ಹೋತ್ರ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ್ದಾರೆ.

    ವಿಕೆಟ್ ಕೀಪರ್ ಹಾಗೂ ಬಲಗೈ ದಾಂಡಿಗ ಜಸ್ಕರನ್, ಪಪುವಾ ನ್ಯೂಗಿನಿ ವಿರುದ್ಧ ಒಮನ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟಿನಲ್ಲಿ ಯುವರಾಜ್ ಸಿಂಗ್, ಹರ್ಷಲ್ ಗಿಬ್ಸ್, ಹಾಗೂ ಪೊರ್ಲಾಡ್ ರ ವಿಶ್ವದಾಖಲೆ ಸಾಲಿಗೆ ಸೇರಿದ್ದಾರೆ.  ಇದನ್ನೂ ಓದಿ: ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ

    16 ಸಿಕ್ಸರ್ ಹಾಗೂ 4 ಫೋರ್‍ಗಳನ್ನು ಸಿಡಿಸಿದ ಜಸ್ಕರನ್ 124 ಬಾಲ್‍ಗಳಲ್ಲಿ ಒಟ್ಟು 173 ರನ್ ಗಳಿಸಿ ನಾಟೌಟ್ ಆಗಿ ಉಳಿದರು ಭಾರತದ ಚಂಡೀಗಡದ ಮೂಲದವರಾದ ಜಸ್ಕರನ್ ಮಲ್ಹೋತ್ರ ಯುಎಸ್‍ಎ ಕ್ರಿಕೆಟ್ ತಂಡದ ಪರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಇದನ್ನೂ ಓದಿ: ಇದೇ ಧೋನಿಯ ಕೊನೆಯ ಐಪಿಎಲ್?

    ಈ ಹಿಂದೆ 2007ರ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸೌತ್ ಆಫ್ರಿಕಾದ ಹರ್ಷಲ್ ಗಿಬ್ಸ್ ಒಂದೇ ಓವರ್‍ನಲ್ಲಿ ಆರು ಸಿಕ್ಸರ್ ಚಚ್ಚಿ ವಿಶ್ವ ದಾಖಲೆ ಮಾಡಿದ್ದರು. ಇದೀಗ ಜಸ್ಕರನ್ ಏಕದಿನ ಕ್ರಿಕೆಟ್‍ನಲ್ಲಿ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.  ಇದನ್ನೂ ಓದಿ: ಟೀಂ ಇಂಡಿಯಾ ಮೆಂಟರ್ ಸ್ಥಾನ ಸಿಗುತ್ತಿದ್ದಂತೆ ಧೋನಿಗೆ ಸ್ವಹಿತಾಸಕ್ತಿ ಸಂಕಷ್ಟ

    https://twitter.com/usacricket/status/1436060985610100738

    ಯುವರಾಜ್ ಸಿಂಗ್ 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಕ್ರಿಕೆಟ್‍ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ 6 ಎಸೆತವನ್ನು ಸಿಕ್ಸರ್‍ಗೆ ಅಟ್ಟಿದ್ದರು.

  • ಮನೀಶ್ ಪಾಂಡೆ ಮದುವೆಯಲ್ಲಿ ಎಲ್ಲರ ಗಮನ ಸೆಳೆದ ಯುವರಾಜ್: ವಿಡಿಯೋ

    ಮನೀಶ್ ಪಾಂಡೆ ಮದುವೆಯಲ್ಲಿ ಎಲ್ಲರ ಗಮನ ಸೆಳೆದ ಯುವರಾಜ್: ವಿಡಿಯೋ

    ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಟೈಲಿಶ್ ಆಟಗಾರ ಮನೀಶ್ ಪಾಂಡೆ ಆರತಕ್ಷತೆಯಲ್ಲಿ ಮಾಜಿ ಆಟಗಾರ ಯುವರಾಜ್ ಸಿಂಗ್ ಪಂಜಾಬಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ ಅವರು ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಸೋಮವಾರ ಮನೀಶ್ ನಟಿ ಆಶ್ರಿತಾ ಶೆಟ್ಟಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಆಚರಣೆ ಎರಡು ದಿನಗಳ ಕಾಲ ನಡೆದಿದೆ. ಮನೀಶ್ ಅವರ ಆರತಕ್ಷತೆಯಲ್ಲಿ ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಭಾಗವಹಿಸಿದ್ದರು. ಈ ವೇಳೆ ಅವರು ಡೋಲು ಸದ್ದಿಗೆ ಬಾಂಗ್ರಾ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ತುಳು ನಟಿಯನ್ನು ವರಿಸಲಿದ್ದಾರೆ ಕ್ರಿಕೆಟಿಗ ಮನೀಶ್ ಪಾಂಡೆ

    ಯುವರಾಜ್ ಅವರು ಒಬ್ಬರೇ ನೃತ್ಯ ಮಾಡುತ್ತಿರುವುದನ್ನು ನೋಡಿ ಮನೀಶ್ ಕೂಡ ಅವರ ಜೊತೆ ಸೇರಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಡೋಲು ಬಾರಿಸುತ್ತಿದ್ದವರು ಯುವರಾಜ್ ಹಾಗೂ ಮನೀಶ್ ಡ್ಯಾನ್ಸ್ ನೋಡಿ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ರಾತ್ರಿ ಟ್ರೋಫಿ ಗೆದ್ದು ಮರುದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಶ್ ಪಾಂಡೆ

    ಯುವರಾಜ್ ಸಿಂಗ್ ತಮ್ಮ ಇನ್‍ಸ್ಟಾದಲ್ಲಿ ಮನೀಶ್ ಹಾಗೂ ಆಶ್ರಿತಾ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಪ್ರೀತಿಯ ಮನೀಶ್ ಹಾಗೂ ಆಶ್ರಿತಾ ನೀವು ಜೀವನದಲ್ಲಿ ಯಾವಾಗಲೂ ಸಂತೋಷವಾಗಿರಿ ಎಂದು ನಾನು ಹಾರೈಸುತ್ತೇನೆ. ಉಳಿದರು ನಮ್ಮ ಹಿಂದೆ ನಿಂತಿರುವ ಡೋಲು ಬಾರಿಸುವವನನ್ನು ನೋಡಿ” ಎಂದು ಬರೆದುಕೊಂಡಿದ್ದರು.

    ಸೋಮವಾರ ಮನೀಶ್, ನಟಿ ಆಶ್ರಿತಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದರು. ಹಿಂದಿನ ದಿನ ಎಂದರೆ ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮನೀಶ್ ಅವರ ನಾಯಕತ್ವದಲ್ಲಿ ತಮಿಳುನಾಡಿನ ತಂಡದ ವಿರುದ್ಧ ಕರ್ನಾಟಕ ತಂಡ ಜಯಗಳಿಸಿತ್ತು. ಈ ಪಂದ್ಯದಲ್ಲಿ ಮನೀಶ್ 60 ರನ್‍ಗಳನ್ನು ಗಳಿಸಿದ್ದರು.

     

    View this post on Instagram

     

    Nice dance #yuvrajsingh and #manishpandey #ashritashetty with my team #dholibros Rocking ???????????? performance

    A post shared by Vijay Bhatt (@vijaybhatt888) on

  • ಯುವಿ ಸಿಕ್ಸರ್ ದಾಖಲೆ ಮುರಿಯದಿದ್ರೂ ‘ಸೊನ್ನೆ’ ಸುತ್ತಬೇಕಾದವ 35 ಎಸೆತದಲ್ಲಿ ಸೆಂಚುರಿ ಬಾರಿಸಿದ!

    ಯುವಿ ಸಿಕ್ಸರ್ ದಾಖಲೆ ಮುರಿಯದಿದ್ರೂ ‘ಸೊನ್ನೆ’ ಸುತ್ತಬೇಕಾದವ 35 ಎಸೆತದಲ್ಲಿ ಸೆಂಚುರಿ ಬಾರಿಸಿದ!

    – ಮೊದಲ 14 ಎಸೆತಗಳಲ್ಲಿ 18 ರನ್, ನಂತರದ 21 ಎಸೆತದಲ್ಲಿ 82 ರನ್

    ಪೊಚೆಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಬ್ಯಾಟಿಂಗ್ ಗೆ ಬಂದಿದ್ದು 10ನೇ ಓವರ್. ಎದುರಿಸಿದ 2ನೇ ಎಸೆತದಲ್ಲಿ ಕೈಚೆಲ್ಲಿದ ಕ್ಯಾಚ್, ಆರಂಭದ 14 ಎಸೆತಗಳಲ್ಲಿ 18 ರನ್, ನಂತರದ 21 ಎಸೆತಗಳಲ್ಲಿ 82 ರನ್, ಒಂದೇ ಓವರ್ ನಲ್ಲಿ 5 ಸಿಕ್ಸರ್, ಸ್ವಲ್ಪದರಲ್ಲೇ ತಪ್ಪಿದ ಯುವರಾಜ್ ಸಿಂಗ್ ದಾಖಲೆಯನ್ನು ಸರಿಗಟ್ಟುವ ಅವಕಾಶ. ಕೇವಲ 35 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಕೀರ್ತಿ ಡೇವಿಡ್ ಮಿಲ್ಲರ್ ಪಾಲಾಯ್ತು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಗೌರವವನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡರು. ಹೌದು, ದಕ್ಷಿಣ ಆಫ್ರಿಕಾ ತಂಡದ ಆಟಗಾರ ಡೇವಿಡ್ ಮಿಲ್ಲರ್ ಬಾಂಗ್ಲಾ ತಂಡದ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

    2ನೇ ಬಾಲಲ್ಲಿ ಶೂನ್ಯಕ್ಕೆ ಔಟಾಗಬೇಕಿತ್ತು!: ತನಗೆ ಬಾಂಗ್ಲಾ ವಿಕೆಟ್ ಕೀಪರ್ ನೀಡಿದ ಜೀವದಾನವನ್ನು ವರದಾನವಾಗಿ ಪರಿಗಣಿಸಿದ ಡೇವಿಡ್ ಮಿಲ್ಲರ್ ಆರಂಭದಲ್ಲಿ ಮುಗ್ಗರಿಸುತ್ತಲೇ ಬ್ಯಾಟಿಂಗ್ ಮಾಡಿದರು. 10ನೇ ಓವರ್ ನ ಕೊನೆಯ ಎಸೆತದಲ್ಲಿ ಬ್ಯಾಟಿಂಗ್ ಗೆ ಕ್ರೀಸ್ ಗೆ ಆಗಮಿಸಿದ್ದ ಮಿಲ್ಲರ್ ಯಾವುದೇ ರನ್ ಗಳಿಸಲಿಲ್ಲ.

    ಓವರ್ ಮುಗಿದ ಹಿನ್ನೆಲೆಯಲ್ಲಿ ಹಶೀಂ ಆಮ್ಲ ಸ್ಟ್ರೈಕ್ ಗೆ ಬಂದರು. 11ನೇ ಓವರ್ ನ ಮೊದಲ ಎಸೆತದಲ್ಲಿ ಹಶೀಂ ಆಮ್ಲ 1 ರನ್ ಗಳಿಸಿ ಮಿಲ್ಲರ್ ಗೆ ಸ್ಟ್ರೈಕ್ ನೀಡಿದರು. ಈ ಓವರ್ ಎಸೆಯುತ್ತಿದ್ದ ರೂಬೆಲ್ ಹುಸೈನ್ ನಂತರದ ಎಸೆತವನ್ನು ಶಾರ್ಟ್ ಬಾಲ್ ಮಾಡಿದರು. ಈ ವೇಳೆ ಬಾಲ್ ಮಿಲ್ಲರ್ ಗ್ಲೌಸ್ ಸವರಿಕೊಂಡು ವಿಕೆಟ್ ಕೀಪರ್ ಬಳಿಗೆ ಹೋಯಿತು. ವಿಕೆಟ್ ಕೀಪರ್ ಗ್ಲೌಸ್ ಗೆ ಕ್ಯಾಚ್ ಹೋದರೂ ಬ್ಯಾಲೆನ್ಸ್ ತಪ್ಪಿದ ಕಾರಣ ಮುಷ್ಫಿಕುರ್ ಕ್ಯಾಚ್ ಕೈ ಚೆಲ್ಲಿದರು. ನಂತರ ಹಲವಾರು ಎಸೆತಗಳಲ್ಲಿ ಮಿಲ್ಲರ್ ಮುಗ್ಗರಿಸಿದರು.

    ಆರಂಭದಲ್ಲಿ ನನಗೆ ಬ್ಯಾಟ್ ಮಾಡುವಾಗ ಸಮಸ್ಯೆ ಎದುರಾಯಿತು. ಆರಂಭದ 10 ಬಾಲ್ ನಲ್ಲಿ ನಾನು 2 ಬಾರಿ ಔಟಾಗಬೇಕಿತ್ತು. ಆದರೆ ನಾನು ಬಚಾವಾದೆ. ಆದರೆ ಕೊನೆಯಲ್ಲಿ ನನ್ನ ಬ್ಯಾಟಿಂಗ್ ನನಗೆ ತೃಪ್ತಿ ಹಾಗೂ ಸಂತೋಷ ತಂದು ಕೊಟ್ಟಿದೆ ಎಂದು ಹೇಳಿದರು. ಒಟ್ಟು 36 ಎಸೆತಗಳನ್ನು ಎದುರಿಸಿದ ಡೇವಿಡ್ ಮಿಲ್ಲರ್ 9 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಅಜೇಯರಾಗಿ ಉಳಿದರು.

    ಯುವಿ ದಾಖಲೆ ಸರಿಗಟ್ಟಿದವರಿಲ್ಲ!: ಇನ್ನಿಂಗ್ಸ್‍ನ 19ನೇ ಓವರ್ ನ ಆರಂಭದ 5 ಎಸೆತಗಳನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ಬಾರಿಸಿದ್ದರು. ಕೊನೆಯ ಎಸೆತವನ್ನೂ ಅವರು ಸಿಕ್ಸರ್ ಬಾರಿಸುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಈ ಮೂಲಕ ಯುವರಾಜ್ ಸಿಂಗ್ ಒಂದೇ ಓವರ್ ಗೆ ಬಾರಿಸಿದ 6 ಸಿಕ್ಸರ್ ಗಳ ದಾಖಲೆಯನ್ನು ಮಿಲ್ಲರ್ ಸರಿಗಟ್ಟುವ ಅವಕಾಶವೂ ಇತ್ತು. ಆದರೆ ಕೊನೆಯ ಎಸೆತದಲ್ಲಿ ಕೇವಲ 1 ರನ್ ಮಾತ್ರ ಗಳಿಸುವುದು ಸಾಧ್ಯವಾಯ್ತು.

    ಮಿಲ್ಲರ್ ಆಮ್ಲ ಜೊತೆಯಾಟ: ಮಿಲ್ಲರ್ ಹಾಗೂ ಹಶೀಂ ಆಮ್ಲ ಜೋಡಿ ನಾಲ್ಕನೇ ವಿಕೆಟ್‍ಗೆ ಕೇವಲ 41 ಎಸೆತಗಳ ನೆರವಿನಿಂದ 79 ರನ್‍ಗಳ ಜೊತೆ ಆಟವನ್ನು ನೀಡಿದರು. ಆಮ್ಲ ಈ ಪಂದ್ಯದಲ್ಲಿ 51 ಎಸೆತಗಳಲ್ಲಿ 85 ಗಳಿಸಿ ಮಿಲ್ಲರ್‍ಗೆ ಉತ್ತಮ ಜೊತೆ ಆಟವನ್ನು ನೀಡಿದರು. 85 ರನ್ ಗಳ ಈ ಇನ್ನಿಂಗ್ಸ್ ನಲ್ಲಿ 1 ಸಿಕ್ಸರ್ ಹಾಗೂ 11 ಬೌಂಡರಿಗಳಿದ್ದವು.

    ಈ ಹಿಂದಿನ ಸೆಂಚುರಿ ದಾಖಲೆ!: ಈ ಹಿಂದೆ ಟಿ20 ಮಾದರಿಯಲ್ಲಿ ಅತ್ಯಂತ ವೇಗದ ಶತಕವನ್ನು ಸಿಡಿಸಿದ ದಾಖಲೆಯನ್ನು ದಕ್ಷಿಣ ಆಫ್ರಿಕಾದ ರಿಚರ್ಡ್ ಲೆವಿ ಹೊಂದಿದ್ದರು. ರಿಚರ್ಡ್ ಲೆವಿ 2012ರಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಡೇವಿಡ್ ಮಿಲ್ಲರ್ ಸ್ಫೋಟಕ ಶತಕದಿಂದ ನಿಗದಿತ 20 ಓವರ್ ಗಳಲ್ಲಿ 224 ರನ್‍ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ದಕ್ಷಿಣ ಆಫ್ರಿಕಾ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾ 141 ರನ್‍ಗಳಿಗೆ ಆಲೌಟಾಯಿತು. ಈ ಮೂಲಕ ದಕ್ಷಿಣ ಆಫ್ರಿಕಾ 83 ರನ್‍ಗಳ ಗೆಲುವು ಸಾಧಿಸಿತು.

    ಟಿ20ಯಲ್ಲಿ ದಾಖಲಾಗಿರುವ ಅತ್ಯಂತ ವೇಗದ ಟಾಪ್ 5 ಶತಕಗಳ ವಿವರ ಇಂತಿದೆ. ಡೇವಿಡ್ ಮಿಲ್ಲರ್- 101, 35 ಎಸೆತ, ರಿಚರ್ಡ್ ಲೆವಿ – 117, 45 ಎಸೆತ, ಪ್ಲಾಪ್ ಡೂಪ್ಲೆಸಿಸ್ – 119, 46 ಎಸೆತ, ಕರ್ನಾಟಕದ ಲೋಕೇಶ್ ರಾಹುಲ್ – 110, 46 ಎಸೆತ, ಕ್ರಿಸ್ ಗೇಲ್ – 100, 47 ಎಸೆತ ಹಾಗೂ ಅರೋನ್ ಫಿಂಚ್ – 156, 47 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ.

    ಐಪಿಎಲ್‍ನಲ್ಲಿ ದಾಖಲೆ: 2013ರಲ್ಲಿ ಕ್ರಿಸ್ ಗೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಕೇವಲ 30 ಎಸೆತಗಳಲ್ಲಿ ಶತಕವನ್ನು ಪೂರೈಸಿದ್ದರು. ಅಲ್ಲದೇ 2004 ರಲ್ಲಿ ಆಂಡ್ರೂ ಸೈಮಂಡ್ಸ್ 34 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು.