Tag: youtube

  • ಯೂಟ್ಯೂಬರ್‌ ವಿರುದ್ಧ 500 ಕೋಟಿ ಮಾನನಷ್ಟ ಕೇಸ್‌ ಹಾಕಿದ ಅಕ್ಷಯ್‌ ಕುಮಾರ್‌

    ಯೂಟ್ಯೂಬರ್‌ ವಿರುದ್ಧ 500 ಕೋಟಿ ಮಾನನಷ್ಟ ಕೇಸ್‌ ಹಾಕಿದ ಅಕ್ಷಯ್‌ ಕುಮಾರ್‌

    – 4 ತಿಂಗಳಿನಲ್ಲಿ ಲಕ್ಷಗಟ್ಟಲೇ ಹಣ ಸಂಪಾದನೆ
    – ಸಬ್‌ಸ್ಕ್ರೈಬರ್ಸ್ ಸಂಖ್ಯೆ 2 ಲಕ್ಷ ‌ ಏರಿಕೆ

    ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ತನ್ನ ವಿರುದ್ಧವಾಗಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದಕ್ಕೆ ಯೂಟ್ಯೂಬರ್‌ ವಿರುದ್ಧ ಕೋಟಿಗಟ್ಟಲೇ ಮಾನನಷ್ಟ ಪ್ರಕರಣವನ್ನು ದಾಖಲಿಸಿದ್ದಾರೆ.

    ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ತನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಪ್ರಸ್ತಾಪ ಮಾಡಿದ್ದಕ್ಕೆ ಯೂಟ್ಯೂಬರ್‌ ರಶೀದ್ ಸಿದ್ದಿಕಿ ವಿರುದ್ಧ 500 ಕೋಟಿ ರೂ. ಮಾನನಷ್ಟ ಕೇಸ್‌ ಹೂಡಿದ್ದಾರೆ.

    ಸಿದ್ದಿಕಿ ಹೇಳಿದ್ದು ಏನು?
    ಎಂಎಸ್ ಧೋನಿ: ದಿ ಅನ್‌ ಟೋಲ್ಡ್‌ ಸ್ಟೋರಿಯಂತಹ ಹಿಟ್‌ ಚಿತ್ರದಲ್ಲಿ ಸುಶಾಂತ್‌ ನಟಿಸಿದ್ದಕ್ಕೆ ಅಕ್ಷಯ್‌ ಕುಮಾರ್‌ ಅಸಮಾಧಾನವನ್ನು ಹೊಂದಿದ್ದರು. ಅಷ್ಟೇ ಅಲ್ಲದೇ ಅಕ್ಷಯ್ ಕುಮಾರ್ ಅವರು ಸುಶಾಂತ್‌ ಪ್ರಕರಣದ ಸಂಬಂಧ ಆದಿತ್ಯ ಠಾಕ್ರೆ ಮತ್ತು ಮುಂಬೈ ಪೊಲೀಸರೊಂದಿಗೆ ರಹಸ್ಯ ಸಭೆಯನ್ನು ನಡೆಸಿದ್ದರು.

    ಸುಶಾಂತ್‌ ಸಿಂಗ್‌ ಗೆಳತಿ ರಿಯಾ ಚಕ್ರವರ್ತಿ ಜೊತೆ ಅಕ್ಷಯ್‌ ಕುಮಾರ್‌ ಸಂಪರ್ಕ ಹೊಂದಿದ್ದರು. ರಿಯಾ ಕೆನಡಾಗೆ ತೆರಳಲು ಅಕ್ಷಯ್‌ ಕುಮಾರ್‌ ಸಹಾಯ ಮಾಡಿದ್ದರು ಎಂದು ಸಿದ್ದಿಕಿ ವಿಡಿಯೋದಲ್ಲಿ ಆರೋಪಿಸಿದ್ದ.

     

    ಈ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಸಚಿವ ಆದಿತ್ಯ ಠಾಕ್ರೆ ಅವರ ವಿರುದ್ಧ ನಕಲಿ ಸುದ್ದಿ ಹರಡಿದ ಆರೋಪದ ಹಿನ್ನೆಲೆಯಲ್ಲಿ ರಶೀದ್ ಸಿದ್ದಿಕಿಯನ್ನು ಬಂಧಿಸಲಾಗಿತ್ತು. ನ್ಯಾಯಾಲಯ ಈತನಿಗೆ ಈ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದ್ದು ಪೊಲೀಸ್‌ ತನಿಖೆಗೆ ಸಹಕಾರ ನೀಡಬೇಕೆಂದು ಸೂಚಿಸಿದೆ.

    ಎಷ್ಟು ಹಣ ಸಂಪಾದನೆ?
    ಬಿಹಾರ ಮೂಲದ ಸಿವಿಲ್ ಎಂಜಿನಿಯರ್ ಸಿದ್ದಿಕಿ ಎಫ್‌ಎಫ್‌ ನ್ಯೂಸ್‌ ಹೆಸರಿನಲ್ಲಿ ಯೂ ಟ್ಯೂಬ್‌ ಚಾನೆಲ್‌ ತೆರೆದಿದ್ದಾನೆ. ಸಬ್‌ ಸ್ಕ್ರೈಬರ್ಸ್‌ ಸಂಖ್ಯೆ ಲಕ್ಷಕ್ಕೂ ಹೆಚ್ಚು ಇರುವ ಕಾರಣ ಯೂ ಟ್ಯೂಬ್‌ನಿಂದ ಅಧಿಕೃತ ಟಿಕ್‌ ಮಾರ್ಕ್‌ ಸಹ ಸಿಕ್ಕಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 15 ಲಕ್ಷ ರೂ. ಗಳಿಸಿದ್ದ. ಸುಶಾಂತ್‌ ಸಿಂಗ್‌ ಪ್ರಕರಣದಿಂದಾಗಿ ಆತನ ಸಬ್‌ಸ್ಟ್ರೈಬರ್ಸ್‌ ಸಂಖ್ಯೆ 1 ಲಕ್ಷದಿಂದ 3 ಲಕ್ಷಕ್ಕೆ ಏರಿಕೆಯಾಗಿತ್ತು.

    ಯಾವ ತಿಂಗಳಿನಲ್ಲಿ ಎಷ್ಟು?
    ಸುಶಾಂತ್‌ ಸಿಂಗ್‌ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈ ವರ್ಷದ ಜೂನ್‌ 20ರಂದು. ಶುಶಾಂತ್‌ ಸಿಂಗ್‌ ಪ್ರಕರಣದಿಂದಾಗಿ ಈತನ ವಿಡಿಯೋಗಳ ವ್ಯೂ ಜಾಸ್ತಿಯಾಗಿ ದಿಢೀರ್‌ ಲಕ್ಷಗಟ್ಟಲೇ ಹಣವನ್ನು ಸಂಪಾದನೆ ಮಾಡಿದ್ದಾನೆ.

    ಏಪ್ರಿಲ್‌ನಲ್ಲಿ 7,120 ರೂ., ಮೇ 296 ರೂ. ಜೂನ್‌ 38,200 ರೂ., ಜುಲೈ 2,75,025 ರೂ., ಆಗಸ್ಟ್‌ 5,57,658 ರೂ., ಸೆಪ್ಟೆಂಬರ್‌ 6,50,898 ರೂ., ಅಕ್ಟೋಬರ್‌ 2,38,180 ರೂ., ನವೆಂಬರ್ ತಿಂಗಳಿನಲ್ಲಿ‌ 35,901 ರೂ. ಹಣವನ್ನು ಸಿದ್ದಿಕಿ ಸಂಪಾದಿಸಿದ್ದಾನೆ ಎಂದು ಮಾಧ್ಯಮ ವರದಿ ಮಾಡಿದೆ.

  • ಅಕ್ಟೋಬರ್ 12ರಿಂದ ಸಂವೇದ ಪಾಠ ಸರಣಿ ಆರಂಭ: ಸುರೇಶ್ ಕುಮಾರ್

    ಅಕ್ಟೋಬರ್ 12ರಿಂದ ಸಂವೇದ ಪಾಠ ಸರಣಿ ಆರಂಭ: ಸುರೇಶ್ ಕುಮಾರ್

    ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಸಂವೇದ ಇ-ಕ್ಲಾಸ್ ಪಾಠ ಸರಣಿಯ ಎರಡನೆ ಅವಧಿ ಅಕ್ಟೋಬರ್ 12ರಿಂದ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಈ ಅವಧಿಯಲ್ಲಿ 5, 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ವಿಡಿಯೋ ಪಾಠಗಳು DSERT Jnanadeepa ಮತ್ತು Makkalavani ಯುಟ್ಯೂಬ್ ಚಾನೆಲ್‍ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇಷ್ಟರಲ್ಲಿಯೇ ಈ ತರಗತಿಗಳು ದೂರದರ್ಶನದ ಚಂದನ ವಾಹಿನಿಯಲ್ಲಿಯೂ ಮರುಪ್ರಸಾರಗೊಳ್ಳಲಿವೆ ಎಂದು ಮಾಹಿತಿ ನೀಡಿದರು.

    2020-21ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳನ್ನು ಆರಂಭಿಸಬೇಕಾಗಿದೆಯಾದರೂ ಕೋವಿಡ್-19ರ ಪ್ರಸರಣದಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ದೂರದರ್ಶನ ಚಂದನ ವಾಹಿನಿಯಿಂದ ಪ್ರತಿ ದಿನ 4 ಘಂಟೆ ಅವಧಿಯಲ್ಲಿ ಪ್ರಥಮ ಹಂತದಲ್ಲಿ ಪ್ರೌಢಶಾಲೆಯ 8 ರಿಂದ 10ನೆಯ ತರಗತಿಯ ಮಕ್ಕಳಿಗೆ ವಿಡಿಯೋ ಪಾಠ ತಯಾರಿಸಿ ಪ್ರಸಾರ ಮಾಡಲಾಗುತ್ತಿದ್ದು, ಸಮಯ ಲಭ್ಯತೆ ಆಧಾರದಲ್ಲಿ ಉಳಿದ ತರಗತಿಗಳ ಪಾಠ ಪ್ರಸಾರವು ಆಗಲಿದೆ ಎಂದು ಅವರು ಹೇಳಿದ್ದಾರೆ.

    ಇಲಾಖೆಯ ಎಲ್ಲಾ ಹಂತದ ಶಿಕ್ಷಕರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಯೂಟ್ಯೂಬ್‍ಗಳಲ್ಲಿ ಮಕ್ಕಳು ಪಾಠ ವೀಕ್ಷಿಸುವಂತೆ ಗಮನ ಹರಿಸಿ ಮೇಲ್ವಿಚಾರಣೆ ಮಾಡಲು ಸೂಚಿಸಿದೆ. ಪೋಷಕರು ಮಕ್ಕಳು ಪಾಠ ವೀಕ್ಷಿಸಲು ಪ್ರೋತ್ಸಾಹಿಸಿ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಸುರೇಶ್ ಕುಮಾರ್ ಕೋರಿದ್ದಾರೆ.

  • ಯೂಟ್ಯೂಬ್ ವಿಡಿಯೋ ನೋಡಿ ಕಳ್ಳತನ- ಎಂಬಿಎ ಪದವೀಧರ ಅರೆಸ್ಟ್

    ಯೂಟ್ಯೂಬ್ ವಿಡಿಯೋ ನೋಡಿ ಕಳ್ಳತನ- ಎಂಬಿಎ ಪದವೀಧರ ಅರೆಸ್ಟ್

    – 7 ಲಕ್ಷ ರೂ. ಸಾಲ ತೀರಿಸಲು ಕಳ್ಳತನಕ್ಕಿಳಿದ ಯುವಕ

    ಹೈದರಾಬಾದ್: ಎಂಬಿಎ ಪದವಿ ಪೂರ್ಣಗೊಳಿಸಿದರೂ ಉತ್ತಮ ಉದ್ಯೋಗ ಲಭಿಸದ ಕಾರಣ ಯುವಕ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡಿ ಕಳ್ಳತನಕ್ಕಿಳಿದು ಪೊಲೀಸರ ಅತಿಥಿಯಾಗಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

    ವಿನೋದ್ ರಾಜ್ (26) ಬಂಧಿತ ಯುವಕನಾಗಿದ್ದು, ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮವರಂ ಬಳಿಯ ಗ್ರಾಮವೊಂದರ ನಿವಾಸಿ. ಈತ ಎಂಬಿಎ ಪದವಿ ಪೂರ್ಣಗೊಳಿಸಿ ಉತ್ತಮ ಉದ್ಯೋಗದ ನಿರೀಕ್ಷೆಯೊಂದಿಗೆ ಪ್ರಯತ್ನಿಸಿದರು ಯಾವುದೇ ಉದ್ಯೋಗ ಲಭಿಸಿರಲಿಲ್ಲ. ಆದರೆ ಸ್ನೇಹಿತರು, ಕುಟುಂಬದ ಆಪ್ತರ ಬಳಿ ಮಾಡಿದ್ದ 7 ಲಕ್ಷ ರೂ. ಸಾಲ ತೀರಿಸಲು ಗೂಗಲ್‍ನಲ್ಲಿ ಸುಲಭವಾಗಿ ಹಣ ಗಳಿಸುವ ಮಾರ್ಗಗಳ ಬಗ್ಗೆ ಸರ್ಚ್ ಮಾಡಿದ್ದ.

    ಆರೋಪಿ ಆನ್‍ಲೈನ್‍ನಲ್ಲಿ ಹುಡುಕಾಟ ನಡೆಸುತ್ತಿದ್ದ ವೇಳೆ ಮನೆಗಳಲ್ಲಿ ಕಳ್ಳತನ ಮಾಡುವುದು ಹೇಗೆ ಎಂಬ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ನೋಡಿದ್ದ. ಅದಕ್ಕೆ ಅಗತ್ಯವಿದ್ದ ವಸ್ತುಗಳನ್ನು ಖರೀದಿ ಮಾಡಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಸರ್ಕಾರಿ ಉದ್ಯೋಗಿಯ ಮನೆಯಲ್ಲಿ ಕಳ್ಳತನ ಮಾಡಿ 5 ತೊಲೆ ಬಂಗಾರ, 5 ಕೆಜಿ ಬೆಳ್ಳಿ ಮತ್ತು ಕ್ಯಾಮೆರಾ ಕದ್ದು ಎಸ್ಕೇಪ್ ಆಗಿದ್ದ. ಆ ಬಳಿಕ ಕಂಪ್ಯೂಟರ್ ಸೆಂಟರ್ ಸೇರಿದಂತೆ ಹಲವು ಮನೆಗಳಲ್ಲಿ ಸರಣಿ ಕಳ್ಳತನ ಮಾಡಿಲು ಯಶಸ್ವಿಯಾಗಿದ್ದ. ಈ ವೇಳೆ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸರಣಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲು ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

    ಸದ್ಯ ಬಂಧಿತ ಆರೋಪಿ ವಿನೋದ್ ರಾಜ್‍ನಿಮದ ಸುಮಾರು 3.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಉದ್ಯೋಗ ಸಿಗದೆ ಹಲವು ಚಟಗಳಿಗೆ ದಾಸನಾಗಿದ್ದ ವಿನೋದ್, ಅದಕ್ಕಾಗಿ ಸಾಲ ಮಾಡಿಕೊಂಡಿದ್ದ. ಈ ಸಾಲಗಳನ್ನು ತೀರಿಸಲು ಕಳ್ಳತನದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದ ಎಂದು ಕ್ರೈಂ ಬ್ರ್ಯಾಂಚ್ ಎಸಿಪಿ ಪೆಂಟರಾವ್ ತಿಳಿಸಿದ್ದಾರೆ.

  • ಯುಟ್ಯೂಬ್‍ನಿಂದ ದಿಢೀರ್ ಡಿಲೀಟ್ ಆಯ್ತು ಚಂದನವನ ತಾರೆಯರೆಲ್ಲ ಅಭಿನಯಿಸಿದ್ದ ಹಾಡು

    ಯುಟ್ಯೂಬ್‍ನಿಂದ ದಿಢೀರ್ ಡಿಲೀಟ್ ಆಯ್ತು ಚಂದನವನ ತಾರೆಯರೆಲ್ಲ ಅಭಿನಯಿಸಿದ್ದ ಹಾಡು

    ಬೆಂಗಳೂರು: ಇತ್ತೀಚೆಗೆ ಬದಲಾಗು ನೀನು ಬದಲಾಯಿಸು ನೀನು ಹಾಡಿನ ಮೂಲಕ ಸ್ಯಾಂಡಲ್‍ವುಡ್ ಎಲ್ಲ ತಾರೆಯರು ಸೇರಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಿದ್ದರು.

    ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತುತ ಪಡಿಸಿದ್ದ ಹಾಡನ್ನು ಪವರ್ ಓಡೆಯರ್ ನಿರ್ದೇಶನ ಮಾಡಿದ್ದರು. ಎಲ್ಲ ಕಲಾವಿದರ ಮನೆಗೆ ಹೋಗಿ ಹಾಡನ್ನು ಚಿತ್ರೀಕರಣ ಮಾಡಿದ್ದರು. ಅಂತಯೇ ಜೂನ್ 5ರಂದು ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ದಿ ಬೀಟ್ ಆಡಿಯೋದಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿತ್ತು.

    ಆದರೆ ಈಗ ಏಕಾಏಕಿ ಬದಲಾಗು ನೀನು ಬದಲಾಯಿಸು ನೀನು ಹಾಡು ಡಿಲೀಟ್ ಆಗಿದೆ. ಈ ಒಂದು ಹಾಡಿನಲ್ಲಿ ಸುದೀಪ್ ಅವರನ್ನು ಹೊರತು ಪಡಿಸಿ ದರ್ಶನ್, ಯಶ್, ಅಪ್ಪು, ಶಿವಣ್ಣ, ಗಣೇಶ್, ಸುಮಲತಾ, ಅಬಿಷೇಕ್, ಉಪೇಂದ್ರ ಸೇರಿದಂತೆ ಬಹುತೇಕ ಕನ್ನಡದ ಕಾಲವಿದರು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಹಾಡಿ ದಿಢೀರ್ ಡಿಲೀಟ್ ಆಗಿರೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

    ಸಾರ್ವಜನಿಕರಲ್ಲಿ ಕೊರೊನಾ ನಂತರದ ದಿನಗಳ ಬಗ್ಗೆ ಅರಿವು ಮೂಡಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಈ ಹಾಡನ್ನು ಮಾಡಿಸಲಾಗಿತ್ತು. ಸ್ಯಾಂಡಲ್‍ವುಡ್‍ನ ಎಲ್ಲಾ ಗಾಯಕರು ಇದರಲ್ಲಿ ಧನಿಯಾಗಿದ್ದರು. ಈ ಹಾಡು ಪವನ್ ಒಡೆಯರ್ ಮತ್ತು ಇಮ್ರಾನ್ ಸರ್ಧರಿಯಾ ಅವರ ನೇತೃತ್ವದಲ್ಲಿ ಮೂಡಿ ಬಂದಿತ್ತು. ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಸಾಥ್ ನೀಡಿದ್ದರು. ಜೊತೆಗೆ ರಾಜಕಾರಣಿಗಳು ಕೂಡ ಸಾಂಗಿನಲ್ಲಿ ಕಾಣಿಸಿಕೊಂಡಿದ್ದರು.

  • ಯೂಟ್ಯೂಬ್ ನೋಡಿ ಅಪ್‍ಗ್ರೇಡ್ ಆಗಿದ್ದ ಕಳ್ಳರು ಅರೆಸ್ಟ್

    ಯೂಟ್ಯೂಬ್ ನೋಡಿ ಅಪ್‍ಗ್ರೇಡ್ ಆಗಿದ್ದ ಕಳ್ಳರು ಅರೆಸ್ಟ್

    – ಹುಬ್ಬಳ್ಳಿಯ ವ್ಯಕ್ತಿಯಿಂದ ಬೆಂಗ್ಳೂರಿನಲ್ಲಿ ಕಳ್ಳತನ

    ಬೆಂಗಳೂರು: ಟೆಕ್ನಾಲಜಿ ಬಳಸಿಕೊಂಡು ಬೀಗ ಒಡೆದು ಕಳ್ಳತನ ಮಾಡುವುದಕ್ಕೆ ಏನೇನು ಬೇಕೋ ಎಲ್ಲವನ್ನೂ ತಯಾರಿಸಿಕೊಂಡಿದ್ದ ಕಳ್ಳರ ಗುಂಪನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ತಂಗ ಅಲಿಯಾಸ್ ತಂಗರಾಜ, ಜೀವನ್, ಶ್ರೀನಿವಾಸ ಹಾಗೂ ಲಕ್ಷ್ಮೀನಾರಾಯಣ ಬಂಧಿತ ಆರೋಪಿಗಳು. ಬಂಧಿತ ಕಳ್ಳರು ಅದೆಷ್ಟು ಫ್ರೊಫೆಷನಲ್ ಆಗಿ ಫೀಲ್ಡ್ ಗೆ ಇಳಿದ್ದರು ಅಂದ್ರೆ ಪೊಲೀಸರಿಗೆ ಶಾಕ್ ಆಗಿತ್ತು. ಆರೋಪಿಗಳು ಯೂಟ್ಯೂಬ್ ನೋಡಿ ಕಳ್ಳತನದ ತಂತ್ರವನ್ನು ಅಪ್ಡೇಟ್ ಮಾಡಿಕೊಂಡಿದ್ದರು.

    ಈ ಗ್ಯಾಂಗ್ ಪ್ರಮುಖ ಲೀಡರ್ ತಂಗ ಅಲಿಯಾಸ್ ತಂಗರಾಜ. ಇವನು ಮೂಲತಃ ಹುಬ್ಬಳ್ಳಿಯವನಾಗಿದ್ದು, ಕಳೆದ ಹತ್ತು ವರ್ಷದ ಹಿಂದೆ ಬೆಂಗಳೂರಿಗೆ ಬರುತ್ತಿದ್ದಾನೆ. ಕೆಲಸ ಅಂದ್ರೆ ಕಾಲ್ಕೀಳ್ತಿದ್ದ ಈ ತಂಗರಾಜ ಮೋಜು ಮಸ್ತಿಯ ಜೀವನಕ್ಕಾಗಿ ಕಳ್ಳತನ ಮಾಡುವುದಕ್ಕೆ ಶುರುಮಾಡಿದ್ದ. ಬೆಂಗಳೂರಿನ ಕಾಮಾಕ್ಷಿಪಾಳ್ಯ, ಜ್ಞಾನ ಭಾರತಿ, ಕೆಂಗೇರಿ ಹೀಗೆ ಹಲವಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿ ಜೈಲು ಕೂಡ ಸೇರಿದ್ದ. ಹೀಗಿದ್ದವನು ಇತ್ತೀಚೆಗೆ ಬಹಳ ನೀಟಾಗಿ ಪ್ಲ್ಯಾನ್ ಮಾಡಿಕೊಂಡು ಕಳ್ಳತನ ಮಾಡುವುದಕ್ಕೆ ತನ್ನ ಮೂವರು ಸಹಚರರನ್ನ ಸೇರಿಸಿಕೊಂಡಿದ್ದ.

    ತಂಗರಾಜ್ ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಸಲೀಸಾಗಿ ಮನೆ ಕಿಟಕಿ ಹಾಗೂ ಬಾಗಿಲನ್ನು ಮುರಿಯುವ ಹೈಡ್ರಾಲಿಕ್ ಕಟ್ಟಿಂಗ್ ಪ್ಲೇಯರನ್ನು ಖರೀದಿಸಿದ್ದ. ಬೆಂಗಳೂರಿನಲ್ಲಿ ಪೊಲೀಸರು ಆಕ್ಟಿವ್ ಇದ್ದಾರೆ ಅಂತ ಉತ್ತರ ಕರ್ನಾಕದ ಭಾಗದಲ್ಲಿ ಈ ತಂಗು ಗ್ಯಾಂಗ್ ಮನೆಗಳನ್ನು ದೋಚುವ ಕೆಲಸವನ್ನ ಮಾಡಿತ್ತು. ಬೆಳಗಿನ ಜಾವದಲ್ಲೇ ಸೈಲೆಂಟಾಗಿ ಬೀಗ ಹಾಕಿರುವ ಮನೆಗಳನ್ನ ಗುರುತಿಸಿ ಸೈಲೆಂಟಾಗಿ ಬೀಗಗಳನ್ನು ಮುರಿಯುತ್ತಿದ್ದರು. ಕಳ್ಳತನಕ್ಕೆ ತಮ್ಮ ಸ್ವಂತ ಬೈಕು, ಕಾರುಗಳನ್ನ ಬಳಸಿದರೆ ಸಮಸ್ಯೆಯಾಗುತ್ತೆ ಅಂತ ಡಸ್ಟರ್ ಹಾಗೂ ಇನ್ನಿತರ ದುಬಾರಿ ಕಾರುಗಳನ್ನ ಕಳ್ಳತನ ಮಾಡುತ್ತಿದ್ದರು. ಅದೇ ವಾಹನದಲ್ಲಿ ಮನೆಗಳನ್ನ ದೋಚುವ ಕೆಲಸವನ್ನು ಮಾಡುತ್ತಿದ್ದರು.

    ಹೈಫೈ ಆಗಿ ಜೀವನ ನಡೆಸಬೇಕು ಎನ್ನುವ ಕಾರಣಕ್ಕೆ ಸಿಕ್ಕ ಸಿಕ್ಕಲ್ಲಿ ಮನೆಗಳನ್ನ ದೋಚುತ್ತಿದ್ದ ಈ ಗ್ಯಾಂಗ್ ಅನ್ನು ಇದೀಗ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ತುಮಕೂರಿನ ಕೊರಟಗೆರೆ ಬಳಿ ಬ್ಯಾಂಕ್ ಸಾಲ ತೀರಿಸಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯ ಟಿವಿಗಳನ್ನೇ ಈ ತಂಗರಾಜನ ಗ್ಯಾಂಗ್ ಕಳ್ಳತನ ಮಾಡಿಕೊಂಡು ಬಂದಿದ್ದರಂತೆ. ಗೋವಾ, ಮಹಾರಾಷ್ಟ್ರ ಇನ್ನಿತರ ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನ ಎಸಗಿ ಸೈ ಅನಿಸಿಕೊಂಡಿದ್ದ ಆರೋಪಿಗಳು ಇದೀಗ ಅಂದರ್ ಆಗಿದ್ದಾರೆ.

  • ಬೆಂಜ್ ಕಾರನ್ನು ಹೆಲಿಕಾಪ್ಟರ್‌ನಿಂದ ಎಸೆದು ಕೋಪ ತೀರಿಸಿಕೊಂಡ ಮಾಲೀಕ

    ಬೆಂಜ್ ಕಾರನ್ನು ಹೆಲಿಕಾಪ್ಟರ್‌ನಿಂದ ಎಸೆದು ಕೋಪ ತೀರಿಸಿಕೊಂಡ ಮಾಲೀಕ

    ಮಾಸ್ಕೋ: ಎರಡು ಕೋಟಿ ಬೆಲೆ ಬಾಳುವ ಮರ್ಸಿಡಿಸ್ ಬೆಂಜ್ ಎಸ್‍ಯುವಿ ಕಾರನ್ನು ಮಾಲೀಕನೊಬ್ಬ 1 ಸಾವಿರ ಅಡಿ ಎತ್ತರದಿಂದ ಎಸೆದು ತನ್ನ ಕೋಪವನ್ನು ತೀರಿಸಿಕೊಂಡಿದ್ದಾನೆ.

    ರಷ್ಯಾದ ಇಗೊರ್ ಮೊರಾಜ್ 2.70 ಲಕ್ಷ ಡಾಲರ್ (ಅಂದಾಜು 2 ಕೋಟಿ ರೂ.) ನೀಡಿ ಮರ್ಸಿಡಿಸ್ ಬೆಂಜ್ ಎಎಂಜಿ ಜಿ63 ಕಾರನ್ನು ಖರೀದಿ ಮಾಡಿದ್ದ. ಬೆಂಜ್ ಕಾರಿನ ಮಾಲೀಕನಾಗುವ ಕನಸು ನನಸು ಆಗಿದ್ದರೂ ಕಾರಿನಲ್ಲಿ ತಾಂತ್ರಿಕ ದೋಷ ಇತ್ತು. ಹಾಗಾಗಿ ಕಾರನ್ನು ಹೆಲಿಕಾಪ್ಟರ್ ನಲ್ಲಿ 1000 ಅಡಿ ಎತ್ತರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಅದನ್ನು ಕೆಳಗೆ ಬೀಳಿಸಿ ಸಂಪೂರ್ಣವಾಗಿ ದ್ವಂಸ ಮಾಡಿದ್ದಾನೆ.

    ಕಾರನ್ನು ಗ್ಯಾರೆಜ್‍ಗೆ ಬಿಟ್ಟರೆ ಮ್ಯೆಕಾನಿಕ್ ಕೂಡ ಕೆಲ ತಾಂತ್ರಿಕ ತೊಂದರೆಗಳು ಸರಿಯಾಗುವುದಿಲ್ಲ ಎಂದು ಹೇಳುತ್ತಿದ್ದ. ಬಹಳ ಕನಸು ಕಟ್ಟಿಕೊಂಡು ಕಾರನ್ನು ತೆಗೆದುಕೊಂಡ ನನಗೆ ಬಹಳ ನಿರಾಸೆಯಾಗಿತ್ತು, ಆದ್ದರಿಂದ ನಾನು ಈ ಕಾರನ್ನು 1000 ಅಡಿ ಎತ್ತರದಿಂದ ಬೀಳಿಸಿದ್ದೇನೆ ಎಂದು ಹೇಳಿದ್ದಾನೆ. ಈ ವಿಚಾರದ ಬಗ್ಗೆ 7 ನಿಮಿಷಗಳ ವಿಡಿಯೋ ಮಾಡಿ ಯೂಟ್ಯೂಬ್‍ಗೆ ಆಪ್ಲೋಡ್ ಮಾಡಿರುವ ಮೊರಾಜ್, ಈ ವಿಡಿಯೋದಲ್ಲಿ ಕಾರು ಖರೀದಿಸಿದ ನಂತರ ಕಾರು ಹೆಚ್ಚು ಸಮಯ ಗ್ಯಾರೆಜ್‍ನಲ್ಲೇ ಇತ್ತು ಎಂದು ಹೇಳಿದ್ದಾನೆ.

    ರಷ್ಯಾದ ಮಾಧ್ಯಮವೊಂದು ಸುದ್ದಿ ಮಾಡಿದ್ದು, ಕಾರಿನಲ್ಲಿ ಯಾವ ರೀತಿಯ ತೊಂದರೆಯು ಇರಲಿಲ್ಲ. ಬದಲಿಗೆ ಇಗೊರ್ ಮೊರಾಜ್ ಬಹಳ ಶೋಕಿ ವ್ಯಕ್ತಿಯಾಗಿದ್ದು, ಆತ ತನ್ನ ಗೆಳಯರ ಜೊತೆ ಚಾಲೆಂಜ್ ಕಟ್ಟಿಕೊಂಡು ಕಾರನ್ನು ಹೆಲಿಕಾಪ್ಟರ್ ಮೂಲಕ ಮೇಲೆ ತೆಗೆದುಕೊಂಡು ಹೋಗಿ ಕೆಳಗೆ ಬೀಳಿಸಿದ್ದಾನೆ. ಅದನ್ನು ಸಂಪೂರ್ಣ ವಿಡಿಯೋ ಮಾಡಿ ಯೂಟ್ಯೂಬ್ ಗೆ ಹಾಕಿದ್ದಾನೆ ಎಂದು ವರದಿ ಮಾಡಿದೆ.

    ಇಗೊರ್ ಮೊರಾಜ್‍ಗೆ ಯೂಟ್ಯೂಬ್‍ಗೆ ಆಪ್ಲೋಡ್ ಮಾಡಿರುವ ವಿಡಿಯೋವನ್ನು 5 ಲಕ್ಷ ಜನ ವೀಕ್ಷಿಸಿದ್ದು, ಈ ಘಟನೆಯ ಸಂಬಂಧ ರಷ್ಯಾದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

    ಕಾರಿನ ವಿಶೇಷತೆ ಏನು?
    ಮರ್ಸಿಡಿಸ್-ಎಎಂಜಿ ಜಿ 63 ಅನ್ನು 2018 ರಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು 4.0-ಲೀಟರ್ ಬೈ-ಟರ್ಬೊ ವಿ 8 ಪೆಟ್ರೋಲ್ ಎಂಜಿನ್ ಹೊಂದಿದೆ. 585 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಕಾರಿನ ಹೊಸ ಆವೃತ್ತಿಯು 9-ಸ್ಪೀಡ್ ಆಟೋಮ್ಯಾಟಿಕ್ ಎಎಂಜಿ ಸ್ಪೀಡ್‍ಶಿಫ್ಟ್ ಟ್ರಾನ್ಸ್ ಮಿಷನ್ ಹೊಂದಿದೆ. ಕಾರು ಕೇವಲ 4.5 ಸೆಕೆಂಡುಗಳಲ್ಲಿ 0 ರಿಂದ ಗಂಟೆಗೆ 100 ಕಿ.ಮೀ ವೇಗವನ್ನು ಕ್ರಮಿಸುವ ಸಾಮಥ್ರ್ಯವನ್ನು ಹೊಂದಿದೆ. ಎಎಂಜಿ ಜಿ 63 ಗಂಟೆಗೆ 220 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

  • ಟ್ವಿಟ್ಟರ್‌ನಲ್ಲಿ 5 ಕೋಟಿ ಫಾಲೋವರ್ಸ್ – ವಿಶ್ವದ ಮೂರನೇ ಜನಪ್ರಿಯ ರಾಜಕಾರಣಿಯಾದ ಮೋದಿ

    ಟ್ವಿಟ್ಟರ್‌ನಲ್ಲಿ 5 ಕೋಟಿ ಫಾಲೋವರ್ಸ್ – ವಿಶ್ವದ ಮೂರನೇ ಜನಪ್ರಿಯ ರಾಜಕಾರಣಿಯಾದ ಮೋದಿ

    – ಇನ್‍ಸ್ಟಾ, ಎಫ್‍ಬಿಯಲ್ಲೂ ಸಿಕ್ಕಾಪಟ್ಟೆ ಫೇಮಸ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಲ್ಲೆಡೆ ಸಿಕ್ಕಾಪಟ್ಟೆ ಫೇಮಸ್ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಮೋದಿ ಅವರಿಗೆ ಬರೋಬ್ಬರಿ 50 ದಶಲಕ್ಷ(5 ಕೋಟಿ) ಮಂದಿ ಫಾಲೋವರ್ಸ್ ಹೊಂದುವ ಮೂಲಕ ವಿಶ್ವದ ಮೂರನೇ ಜನಪ್ರಿಯ ರಾಜಕಾರಣಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

    ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಯರು, ಕ್ರೀಡಾಪಟುಗಳಂತೆ ಪ್ರಧಾನಿ ಮೋದಿ ನವ ಪೀಳಿಗೆ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಟ್ವಿಟ್ಟರ್ ಮಾತ್ರವಲ್ಲದೆ ಫೇಸ್‍ಬುಕ್, ಇನ್‍ಸ್ಟಾಗ್ರಾಮ್ ಮತ್ತು ಯೂಟ್ಯೂಬ್‍ನಲ್ಲಿಯೂ ಪ್ರಧಾನಿ ಸಕ್ರಿಯವಾಗಿದ್ದು ಜನರ ಜೊತೆ ಸಂಪರ್ಕದಲ್ಲಿದ್ದಾರೆ.

    ಮೋದಿ ಅವರು 2009ರಲ್ಲಿ ಗುಜರಾತಿನ ಸಿಎಂ ಆಗಿದ್ದಾಗ ಟ್ವಿಟರ್ ಅಕೌಂಟ್ ಹೊಂದುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾದ ಜನಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದರು. ಪ್ರಧಾನಿಯಾಗಿ ಆಯ್ಕೆಯಾದ ಬಳಿಕವಂತೂ ಮೋದಿ ಟ್ವಿಟ್ಟರ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ತಮ್ಮ ನಿರಂತರವಾದ ಟ್ವೀಟ್‍ಗಳ ಮೂಲಕ ಸಕ್ರಿಯವಾಗಿದ್ದು, ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದ್ದಾರೆ.

    ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಟ್ವಿಟ್ಟರ್‌ನಲ್ಲಿ 10.84 ಕೋಟಿ ಫಾಲೋವರ್ಸ್ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ 6.4 ಕೋಟಿ ಫಾಲೋವರ್ಸ್ ಇದ್ದಾರೆ. ಈ ಎರಡು ನಾಯಕರ ನಂತರ ಮೋದಿ ಅವರು ವಿಶ್ವದಲ್ಲೇ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಮೂರನೇ ರಾಜಕಾರಣಿಯಾಗಿದ್ದಾರೆ.

    ಕೇವಲ ಟ್ವಿಟ್ಟರ್ ಮಾತ್ರವಲ್ಲದೆ ಫೇಸ್‍ಬುಕ್ ಮತ್ತು ಇನ್‌‌ಸ್ಟಾಗ್ರಾಮ್‌ನಲ್ಲಿಯೂ ಮೋದಿ ಜನಪ್ರಿಯತೆಗೆ ಕೊರತೆಯಿಲ್ಲ. ಮೋದಿ ಅವರು ಫೇಸ್‍ಬುಕ್‍ನಲ್ಲಿ 44 ದಶಲಕ್ಷ(4.4 ಕೋಟಿ) ಫಾಲೋವರ್ಸ್ ಹೊಂದಿದ್ದಾರೆ. ಹಾಗೆಯೇ ಇನ್‍ಸ್ಟಾಗ್ರಾಮ್‍ನಲ್ಲಿ 28 ದಶಲಕ್ಷಕ್ಕೂ(2.8 ಕೋಟಿ) ಅಧಿಕ ಮಂದಿ ಮೋದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಜೊತೆಗೆ ಮೋದಿ ಅವರ ಅಧಿಕೃತ ಯೂಟ್ಯೂಬ್ ಖಾತೆಯನ್ನು 3.4 ದಶಲಕ್ಷ(34 ಲಕ್ಷ) ಮಂದಿ ಸಬ್‍ಸ್ಕ್ರೈಬ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವೃತ್ತಿಪರರ ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ನಲ್ಲಿ ಕೂಡ ಮೋದಿ ಸಕ್ರಿಯವಾಗಿದ್ದು, ಅದರಲ್ಲಿ 3 ದಶಲಕ್ಷ(30 ಲಕ್ಷ) ಫಾಲೋವರ್ಸ್ ಹೊಂದಿದ್ದಾರೆ.

  • ಮೊಬೈಲ್‍ಗಾಗಿ ಅಪ್ರಾಪ್ತನಿಂದ ಯೂಟ್ಯೂಬ್ ಗಾಯಕನ ಕೊಲೆ

    ಮೊಬೈಲ್‍ಗಾಗಿ ಅಪ್ರಾಪ್ತನಿಂದ ಯೂಟ್ಯೂಬ್ ಗಾಯಕನ ಕೊಲೆ

    ಮುಂಬೈ: ಮೊಬೈಲ್‍ಗಾಗಿ ಅಪ್ರಾಪ್ತ ಬಾಲಕನೊಬ್ಬ ಯೂಟ್ಯೂಬ್ ಗಾಯಕನನ್ನು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ತೇಜ್ ಕುಮಾರ್ ರಾಮ್ (22) ಕೊಲೆಯಾದ ಗಾಯಕ. ತೇಜ್ ಕುಮಾರ್ ಭೋಜ್‍ಪುರಿ ಗಾಯಕನಾಗಿದ್ದು, ಜೊತೆಗೆ ರೆಡ್ ಚಿಲ್ಲಿ ಹೋಟೆಲಿನ ಡೆಲಿವರಿ ಬಾಯ್ ಆಗಿ ಕೂಡ ಕೆಲಸ ಮಾಡುತ್ತಿದ್ದನು. ಮೊಬೈಲ್ ವಿಚಾರಕ್ಕಾಗಿ ಆತನನ್ನು ಕೊಲೆ ಮಾಡಲಾಗಿದ್ದು, ಸದ್ಯ ಆರೋಪಿಗಳಾದ ದರ್ಪನ್ ವಾಲೆಕರ್ ಹಾಗೂ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

    ಶನಿವಾರ ಬೆಳಗ್ಗೆ ತೇಜ್ ಕುಮಾರ್ ಫುಡ್ ಡೆಲಿವರಿ ನೀಡಲು ಠಾಗೂರ್ ನಗರಕ್ಕೆ ಹೋಗುತ್ತಿದ್ದನು. ಈ ವೇಳೆ ಇಬ್ಬರು ತೇಜ್ ಕುಮಾರ್ ನನ್ನು ನಿಲ್ಲಿಸಿ ಆತನ ಮೊಬೈಲ್ ಕೇಳಿದ್ದಾರೆ. ಆದರೆ ತೇಜ್ ಮೊಬೈಲ್ ಕೊಡಲು ನಿರಾಕರಿಸಿದ್ದಾನೆ. ಮೊಬೈಲ್ ಕೊಡಲು ನಿರಾಕರಿಸಿದ್ದಾಗ ಆರೋಪಿಗಳು ಆತನನ್ನು ಹೊಡೆದು ಬಳಿಕ ಚಾಕುವಿನಿಂದ ಇರಿದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಜೋಶಿ ತಿಳಿಸಿದ್ದಾರೆ.

    ಈ ಘಟನೆ ನಂತರ ತೇಜ್ ಕುಮಾರ್ ನನ್ನು ಮಹಾತ್ಮ ಫುಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲೇ ತೇಜ್ ಮೃತಪಟ್ಟಿದ್ದನು. ಕಳ್ಳರು ಆತನಿಂದ ದರೋಡೆ ಮಾಡಲು ಯತ್ನಿಸಿದ್ದಾರೆ. ಸದ್ಯ ಇಬ್ಬರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಹೇಳಿದ್ದಾರೆ.

    ತೇಜ್‍ಕುಮಾರ್ ರಾಮ್ ತಾನು ಹಾಡಿದ ಭೋಜ್‍ಪುರಿಯಲ್ಲಿ ಹಾಡನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡುತ್ತಿದ್ದನು. ಅಲ್ಲದೆ ಯೂಟ್ಯೂಬ್‍ನಲ್ಲಿ ಆತನಿಗೆ ಸಾಕಷ್ಟು ಹಿಂಬಾಲಕರು ಕೂಡ ಇದ್ದಾರೆ.

  • 55 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್

    55 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್

    ಸಿಯೋಲ್: ಎರಡು ಯೂಟ್ಯೂಬ್ ಜಾನೆಲ್ ನಡೆಸುತ್ತಿರುವ 6 ವರ್ಷದ ಪುಟ್ಟ ಬಾಲಕಿ ಯೂಟ್ಯೂಬ್ ಸ್ಟಾರ್ 55 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾಳೆ.

    ದಕ್ಷಿಣ ಕೊರಿಯಾದ ಬಾಲಕಿ ಬೋರಾಮ್, ಯೂಟ್ಯೂಬ್‍ನಲ್ಲಿ 30 ದಶಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾಳೆ. ಬಾಲಕಿ ಎರಡು ಚಾನೆಲ್‍ಗಳನ್ನು ನಡೆಸುತ್ತಿದ್ದು, ಬೋರಾಮ್ ಟ್ಯೂಬ್ ವ್ಲಾಗ್ 17.5 ಮಿಲಿಯನ್ ಚಂದಾದಾರರು ಮತ್ತು ಬೋರಮ್ ಟ್ಯೂಬ್ ಟಾಯ್ ರಿವ್ಯೂ 13.6 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾಳೆ.

    ಈ ಪುಟ್ಟ ಸೆಲೆಬ್ರಿಟಿ ಗಂಗ್ನಮ್‍ನ ಚಿಯೊಂಗ್ಡ್ಯಾಮ್-ಡಾಂಗ್‍ನಲ್ಲಿ 258.3 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಿರುವ 1975ರ ಕಟ್ಟಡವನ್ನು ಖರೀದಿಸಿದ್ದಾರೆ. ಇದು ಸಿಯೋಲ್‍ನ ಸಮೃದ್ಧ ಪ್ರದೇಶಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.

    ಬಾಲಕಿ ಬೋರಾಮ್ ಪೋಷಕರು ಆರು ವರ್ಷಗಳ ಹಿಂದೆ ಪುತ್ರಿಯ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. ಸದ್ಯ ಈ ಕಂಪನಿಯೇ 55 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಖರೀದಿಸಿದೆ.

    ಯೂಟ್ಯೂಬ್ ಸ್ಟಾರ್ ಬೋರಾಮ್ ಪ್ರತಿ ತಿಂಗಳಿಗೆ ಮಾಸಿಕ 16 ಕೋಟಿ ರೂ. ಆದಾಯವನ್ನು ಹೊಂದಿದ್ದಾಳೆ. ಈ ಪುಟ್ಟ ಬಾಲಕಿ ತಾನು ಆಟವಾಡುವ ಹಾಗೂ ಪೋಷಕರೊಂದಿಗೆ ಕಾಲ ಕಳೆಯುವ ಮುದ್ದಾದ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್‍ಗೆ ಅಪ್‍ಲೋಡ್ ಮಾಡುತ್ತಾಳೆ. ಈ ವಿಡಿಯೋಗಳು ಅನೇಕರ ಮನ ಗೆದ್ದಿವೆ.

    ಕೊರಿಯಾದ ಇತರ ಯೂಟ್ಯೂಬ್ ಚಾನೆಲ್‍ಗಳಿಗಿಂತ ಬೋರಾಮ್‍ನ ಚಾನಲ್‍ಗಳು ಮಾರ್ಕೆಟಿಂಗ್ ಲಾಭದಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ. ಬಾಲಕಿಯ ಹಲವಾರು ವಿಡಿಯೋಗಳು ಲಕ್ಷಾಂತರ ವೀವ್ಸ್ ಗಳಿಸಿವೆ. ಅಷ್ಟೇ ಅಲ್ಲದೆ ಬಾಲಕಿ ತನ್ನ ವಿಡಿಯೋಗಳ ಮೂಲಕ ಉತ್ಪನ್ನಗಳನ್ನು ಉತ್ತೇಜಿಸಲು ಬ್ರಾಂಡ್‍ಗಳೊಂದಿಗೆ ಪಾಲುದಾರಿಕೆ ಹೊಂದಿದ್ದಾಳೆ. ಹೀಗಾಗಿ ಆದಾಯವು ಮತ್ತಷ್ಟು ಹೆಚ್ಚಾಗಿದೆ.

    ಬೋರಾಮ್ ಮಿಲಿಯನೇರ್ ಆದ ಮೊದಲ ಮಗು ಅಲ್ಲ. ಫೋಬ್ರ್ಸ್ ಪಟ್ಟಿಯಲ್ಲಿ ಹೆಚ್ಚು ಆದಾಯ ಗಳಿಸುವ 10 ಯೂಟ್ಯೂಬ್ ತಾರೆಗಳಲ್ಲಿ ಟಾಯ್ಸ್ ರಿವ್ಯೂ ನಡೆಸುತ್ತಿರುವ ಏಳು ವರ್ಷದ ರಿಯಾನ್ ಅಗ್ರಸ್ಥಾನದಲ್ಲಿದ್ದಾನೆ.

  • ಕಾಣದಂತೆ ಮಾಯವಾದನು: ಟ್ಯಾಗ್ ಲೈನ್ ಕೊಟ್ಟು ಬಂಪರ್ ಬಹುಮಾನ ಗೆಲ್ಲೋ ಅವಕಾಶ!

    ಕಾಣದಂತೆ ಮಾಯವಾದನು: ಟ್ಯಾಗ್ ಲೈನ್ ಕೊಟ್ಟು ಬಂಪರ್ ಬಹುಮಾನ ಗೆಲ್ಲೋ ಅವಕಾಶ!

    ದುನಿಯಾ ವಿಜಯ್ ಅಭಿನಯದ ಜಯಮ್ಮನ ಮಗ ಚಿತ್ರವನ್ನು ನಿರ್ದೇಶನ ಮಾಡಿ ಗೆಲುವು ಕಂಡಿದ್ದವರು ವಿಕಾಸ್. ಈ ಮೂಲಕವೇ ಯಶಸ್ವೀ ನಿರ್ದೇಶಕರಾಗಿಯೂ ಗುರುತಿಸಿಕೊಂಡ ವಿಕಾಸ್ ಆ ನಂತರದಲ್ಲಿ ಒಂದಷ್ಟು ಕಾಲ ಗ್ಯಾಪ್ ತೆಗೆದುಕೊಂಡು ಇದೀಗ ಕಾಣದಂತೆ ಮಾಯವಾದನು ಚಿತ್ರದ ಹೀರೋ ಆಗಿ ಪ್ರತ್ಯಕ್ಷರಾಗಿದ್ದಾರೆ. ಈಗಾಗಲೇ ಟ್ರೈಲರ್ ಮುಖೇನ ಅಲೆಯೆಬ್ಬಿಸಿರೋ ಈ ಸಿನಿಮಾ ತಂಡ ಪ್ರೇಕ್ಷಕರಿಗೊಂದು ಭರ್ಜರಿ ಸ್ಪರ್ಧೆ ಏರ್ಪಡಿಸಿದೆ. ಇದಕ್ಕೆ ಬಂಪರ್ ಬಹುಮಾನವನ್ನೂ ಕೊಡಲು ತಯಾರಾಗಿದೆ.

    ಕಾಣದಂತೆ ಮಾಯವಾದನು ಚಿತ್ರವೀಗ ತೆರೆಗಾಣುವ ಸನ್ನಾಹದಲ್ಲಿದೆ. ಈ ಹೊತ್ತಿನಲ್ಲಿಯೇ ಇದಕ್ಕೊಂದು ಸೂಕ್ತವಾದ ಟ್ಯಾಗ್ ಲೈನ್ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆಯಲ್ಲಾ? ಅದನ್ನು ಆನಂದ್ ಆಡಿಯೂ ಯೂಟ್ಯೂಬ್ ಚಾನೆಲ್ ಮೂಲಕ ಒಮ್ಮೆ ವೀಕ್ಷಿಸಿ ಅದಕ್ಕೆ ತಕ್ಕುದಾದ ಟ್ಯಾಗ್ ಲೈನ್ ಅನ್ನು ಕಮೆಂಟ್ ಬಾಕ್ಸ್ ಮೂಲಕ ಸೂಚಿಸಬಹುದು. ಹೀಗೆ ಒಂದು ಸಲ ಕಮೆಂಟ್ ಬಾಕ್ಸ್ ಮೂಲಕ ಒಂದೇ ಟ್ಯಾಗ್ ಲೈನ್ ಅನ್ನು ಸೂಚಿಸಬಹುದು. ಆದರೆ ಒಬ್ಬರು ಎಷ್ಟು ಟ್ಯಾಗ್ ಲೈನುಗಳನ್ನಾದರೂ ಬಿಡಿ ಬಿಡಿಯಾಗಿ ದಾಖಲಿಸಬಹುದು. ಇದರಲ್ಲಿ ಆಯ್ಕೆಯಾದ ಟ್ಯಾಗ್ ಲೈನಿಗೆ ಐವತ್ತು ಸಾವಿರ ರೂಪಾಯಿ ಬಹುಮಾನ ನೀಡಲು ಚಿತ್ರತಂಡ ತೀರ್ಮಾನಿಸಿದೆ. ಇದು ಅಂತಿಮಗೊಳ್ಳುತ್ತಲೇ ಬಿಡುಗಡೆಯ ದಿನಾಂಕ ಘೋಷಣೆ ಮಾಡಲೂ ಚಿತ್ರತಂಡ ಯೋಜನೆ ಹಾಕಿಕೊಂಡಿರುವಂತಿದೆ.

    ಸದರಿ ಟ್ರೈಲರ್ ಮೂಲಕವೇ ಕಾಣದಂತೆ ಮಾಯವಾದನು ಭಿನ್ನ ಜಾಡಿನ ಹಾರರ್ ಕಥಾನಕ ಹೊಂದಿರೋ ಚಿತ್ರವೆಂಬುದು ಸಾಬೀತಾಗಿದೆ. ಆತ್ಮದ ಪ್ರೇಮವೃತ್ತಾಂತ ಹೊಂದಿರೋ ಕಾಣದಂತೆ ಮಾಯವಾದನು ಸಿನಿಮಾ ಪಕ್ಕಾ ಆಕ್ಷನ್ ಮೂವಿಯಾಗಿಯೂ ಎದುರುಗೊಳ್ಳಲು ರೆಡಿಯಾಗಿದೆ. ಇದರೊಂದಿಗೆ ನಿರ್ದೇಶರಾಗಿದ್ದ ವಿಕಾಸ್ ಆಕ್ಷನ್ ಹೀರೋ ಆಗಿ ಅವತರಿಸುವ ಕಾತರದಲ್ಲಿದ್ದಾರೆ. ನಿರ್ದೇಶಕ ರಾಜ್ ಪತ್ತಿಪಾಟಿ ಕನ್ನಡಕ್ಕೆ ಅಪರೂಪವಾದಂಥಾ ಕಥೆಯೊಂದಿಗೆ ಈ ಚಿತ್ರವನ್ನು ರೋಚಕವಾಗಿ ಕಟ್ಟಿ ಕೊಟ್ಟಿದ್ದಾರೆ.

    https://www.youtube.com/watch?v=GNaimyGV1m4