Tag: youth

  • ಯುವತಿ ಮುಂದೆ ಅಸಭ್ಯವಾಗಿ ವರ್ತಿಸಿದ ಯುವಕನ ಬಂಧನ

    ಯುವತಿ ಮುಂದೆ ಅಸಭ್ಯವಾಗಿ ವರ್ತಿಸಿದ ಯುವಕನ ಬಂಧನ

    ಬೆಂಗಳೂರು: ಯುವತಿಯ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ವಿಕೃತಿ ಮೆರೆದ ಯುವಕನನ್ನು ಸಿಲಿಕಾನ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

    ವಿದ್ಯಾರಣ್ಯಪುರ ನಿವಾಸಿ ಕಾರ್ತಿಕ್ ಬಂಧಿತ ಅರೋಪಿಯಾಗಿದ್ದು, ಈ ಘಟನೆ ಜುಲೈ 27ರಂದು ಸಂಜೆ 4.30ರ ಸುಮಾರಿಗೆ ನಡೆದಿದೆ. ನಗರದ ನ್ಯೂ ಬಿಇಎಲ್ ರಸ್ತೆ ಎಜಿಎಸ್ ಲೇಔಟ್‍ನ ಪಾರ್ಕ್ ಬಳಿ ಕಾರ್ತಿಕ್ ಯುವತಿ ಮುಂದೆ ಅಸಭ್ಯವಾಗಿ ವರ್ತಿಸಿದ್ದನು.

    ಅಲ್ಲದೇ ಯುವತಿ ಮನೆಗೆ ಹೋಗಬೇಕಾದ್ರೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ವಿಕೃತ ಕಾಮಿ, ಆಕೆಯ ಬಳಿ ಬಂದು ಪ್ಯಾಂಟ್‍ನ ಜಿಪ್ ಬಿಚ್ಚಿ ವಿಕೃತವಾಗಿ ವರ್ತಿಸಿದ್ದನು. ಭಯಗೊಂಡ ಯುವತಿ ಮನೆಗೆ ತೆರಳಿ ಪಾಲಕರಿಗೆ ವಿಷಯ ತಿಳಿಸಿದ್ದಳು. ಯುವತಿಯ ತಂದೆ ನೆರೆಹೊರೆಯವರ ನೆರವಿನೊಂದಿಗೆ ಸ್ಥಳಕ್ಕೆ ತೆರಳಿ ಸಮೀಪದ ಕಟ್ಟಡದಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ರು. ಈ ವೇಳೆ ಕಾರಿನ ನೋಂದಣಿ ಸಂಖ್ಯೆ ಗೊತ್ತಾಗಿದ್ದು, ಅದರ ಆಧಾರದಲ್ಲಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಸದ್ಯ ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಸಾಹಿತಿ ಎನಿಸಿಕೊಂಡಿರೋ ವಿದ್ಯಾರ್ಥಿಗೆ ಬೇಕಿದೆ ವಸತಿ-ಊಟದ ಸೌಲಭ್ಯ

    ಸಾಹಿತಿ ಎನಿಸಿಕೊಂಡಿರೋ ವಿದ್ಯಾರ್ಥಿಗೆ ಬೇಕಿದೆ ವಸತಿ-ಊಟದ ಸೌಲಭ್ಯ

    ಬೀದರ್: ಓದಿನ ಮೇಲೆ ಶ್ರದ್ಧೆ-ಆಸಕ್ತಿ ಇದ್ರೆ ಬಡತನ ಅಡ್ಡಿಯಾಗಲಾರದು ಎಂಬುದಕ್ಕೆ ಈ ಕಥೆ ಸಾಕ್ಷಿ. ಬಡ ಪ್ರತಿಭಾವಂತ ರಾಜು ಎಂ ಪವಾರ್ ಬೀದರ್ ತಾಲೂಕಿನ ಚಿಲ್ಲರ್ಗಿ ಗ್ರಾಮದವರು. ತಂದೆ ಮಾರುತಿ ಪವಾರ್ ತಾಯಿ ರಂಗಾಬಾಯಿ. ಇವರಿಗೆ 4 ಮಕ್ಕಳು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂಬ ಪೋಷಕರ ಹಠದಿಂದ ಕಬ್ಬು ಕಟಾವು ಮಾಡುವ ಕೆಲಸಕ್ಕೆ ಹೋಗಿ ಬಂದ ಹಣದಿಂದ ಮಕ್ಕಳನ್ನ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ.

    ಮಗ ರಾಜು ಎಂ ಪವಾರ್ ಓದುವ ಹಠಕ್ಕೆ ಬಿದ್ದು, ಸರ್ಕಾರಿ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ 566 ಅಂಕ ಶೇಕಡಾ 90.56% ಪಡೆದು ಶಾಲೆಗೆ ಹೆಸರು ತಂದಿದ್ದಾನೆ. 9ನೇ ತರಗತಿಯಲ್ಲಿ ಓದುತ್ತಿದ್ದಾಗ ಶಿಕ್ಷಕರ ಪ್ರೇರಣೆಯಿಂದಾಗಿ `ಅಂಕುರ್’ ಎಂಬ ಕವನ ಸಂಕಲನ ಬರೆದು ಪುಸ್ತಕ ರೂಪದಲ್ಲಿ ಹೊರ ತಂದು ಸಾಹಿತಿ ಎನ್ನಿಸಿಕೊಂಡಿದ್ದಾನೆ.

    ಎಸ್‍ಎಸ್‍ಎಲ್‍ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ರಾಜು ಮುಂದೆ ಸೈನ್ಸ್ ಆಯ್ಕೆ ಮಾಡಿಕೊಳ್ಳುವ ಕನಸು ಕಂಡು ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣ ಇಲ್ಲದೇ ದಿಕ್ಕು ತೋಚದೆ ಕಂಗಲಾಗಿದ್ದ. ಆದ್ರೆ ಕ್ಯಾಮೆರಾನ್ ಇಂಡಿಪೆಂಡೆಂಟ್ ಪಿಯು ಕಾಲೇಜಿನವರು ಬಡ ವಿದ್ಯಾರ್ಥಿ ರಾಜುಗೆ ಉಚಿತ ಪುಸ್ತಕ ಮತ್ತು ಶಿಕ್ಷಣ ನೀಡುತ್ತಿದ್ದಾರೆ.

    ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿರುವ ರಾಜು, ತನ್ನ ಮನೆಯಿಂದ 30 ಕೀ.ಮೀ ದೂರದಲ್ಲಿರುವ ಕಾಲೇಜಿಗೆ ಹೋಗಲು ಇರುವುದೊಂದೇ ಬಸ್. ಈ ಬಸ್ ಮೂಲಕ ಹೋಗಿ ಬರಬೇಕು. ಆದ್ರೆ ಕನ್ನಡ ಶಾಲೆಯಲ್ಲಿ ಓದಿರುವ ರಾಜು ಇಂಗ್ಲೀಷ್‍ನಲ್ಲಿ ಕಲಿತು ಓದಬೇಕಾಗಿದ್ದು, ಹೆಚ್ಚು ಸಮಯ ಓದಿಗೆ ಮೀಸಲಿಡಬೇಕಿದೆ. ಆದ್ರೆ ದೂರದ ಊರಿಗೆ ಶಿಕ್ಷಣಕ್ಕಾಗಿ ಹೋಗಿ ಬರಬೇಕಿರುವುದು ಈತನ ಕಲಿಕೆಗೆ ಅಡ್ಡಿಯಾಗಿದೆ.

    ದಿನವೂ ಬೀದರ್ ಹೋಗಿ ಬರುವುದರಿಂದ ಕಲಿಕೆಗೆ ಕಷ್ಟವಾಗುತ್ತಿದೆ. ಆದ್ರೆ ಆದರೆ ಕಿತ್ತು ತಿನ್ನುವ ಬಡತನ ನಗರದಲ್ಲಿ ಉಳಿದುಕೊಳ್ಳಲು ಅಡ್ಡಿಯಾಗಿದೆ. ಯಾರಾದ್ರೂ ದಾನಿಗಳು ವಸತಿ-ಊಟದ ಸೌಲಭ್ಯ ಕಲ್ಪಿಸಿಕೊಡಿ. ಮುಂದೆ ಓದಿ ಸಾಧನೆ ಮಾಡಿ ಕುಟುಂಬಕ್ಕೆ ಹಾಗು ಸಮಾಜಕ್ಕೆ ಹೊರೆಯಾಗದಿರಲು ಸಹಾಯ ಮಾಡಿ ಎಂದು ವಿದ್ಯಾರ್ಥಿ ರಾಜು ಮತ್ತು ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=zB5pJGVAswo

  • ತ್ರಿಪುರ ಮೂಲದ ಜೋಡಿ ಬೆಂಗ್ಳೂರಲ್ಲಿ ವಾಸ- ಯುವಕನ ಬಂಧಿಸಿ ಪೊಲೀಸರಿಂದ ವಿಚಾರಣೆ

    ತ್ರಿಪುರ ಮೂಲದ ಜೋಡಿ ಬೆಂಗ್ಳೂರಲ್ಲಿ ವಾಸ- ಯುವಕನ ಬಂಧಿಸಿ ಪೊಲೀಸರಿಂದ ವಿಚಾರಣೆ

    ಬೆಂಗಳೂರು: ತ್ರಿಪುರ ಮೂಲದ ಜೋಡಿಯೊಂದು ಅಲ್ಲಿಂದ ಪರಾರಿಯಾಗಿ ಬಂದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಸದ್ಯ ಪೊಲೀಸರು ಯುವಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ತ್ರಿಪುರ ಮೂಲದ ಸೋರಾಬ್ ಹುಸೈನ್ ಬಂಧತನಾಗಿದ್ದು, ಈತ ಅಲ್ಲಿನ ಅಪ್ರಾಪ್ತೆಯನ್ನು ಪ್ರೀತಿಸಿ, ಆಕೆಯ ಮನಃ ಪರಿವರ್ತನೆ ಮಾಡಿ ಸುತ್ತಾಡಿ ಬೆಂಗಳೂರಿಗೆ ಕರೆತಂದು ಇಲ್ಲಿಯೇ ವಾಸವಿದ್ದಾನೆ. ಯುವಕ ಮುಸ್ಲಿಂ ಧರ್ಮಕ್ಕೆ ಸೇರಿದವನಾಗಿದ್ದು, ಯುವತಿ ಹಿಂದೂ ಧರ್ಮದವಾಳಾಗಿದ್ದಾಳೆ. ಸದ್ಯ ಇದೀಗ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ.

    ಏನಿದು ಪ್ರಕರಣ?:
    ಸೋರಾಬ್, ಫೇಸ್‍ಬುಕ್ ಮೂಲಕ ಅಪ್ರಾಪ್ತೆಯನ್ನು ಪರಿಚಯಿಸಿಕೊಂಡಿದ್ದನು. ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿ ಕಳೆದ ಮೂರು ತಿಂಗಳ ಹಿಂದೆ ತ್ರಿಪುರದಿಂದ ಈ ಜೋಡಿ ಪರಾರಿಯಾಗಿ ಚೆನ್ನೈ, ಮತ್ತು ಊಟಿಯಲ್ಲಿ ಸುತ್ತಾಡಿ ವಾರದ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದು, ಬೆಂಗಳೂರಿನ ಮಹದೇಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ನಾರಾಯಣಪುರದ ಶೆಡ್‍ವೊಂದರಲ್ಲಿ ವಾಸವಾಗಿದ್ದರು. ಈ ಹಿಂದೆ ಅಪ್ರಾಪ್ತೆ ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದರ ತ್ರಿಪುರದಲ್ಲಿ ನಾಪತ್ತೆ ಪ್ರಕರಣದ ದೂರು ದಾಖಲಿಸಿದ್ದರು. ಈ ಸಂಬಂಧ ತ್ರಿಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದರು. ಅಲ್ಲದೇ ಆಕೆಯ ಫೋನ್ ಕರೆಗಳನ್ನು ಟ್ರ್ಯಾಪ್ ಮಾಡುತ್ತಿದ್ದರು.

    ಅಪ್ರಾಪ್ತೆ ಕಾಣೆಯಾಗಿರುವ ಬಗ್ಗೆ ಅಲ್ಲಿನ ಸಂಘಟನೆಯೊಂದು ಕೂಡ ಈ ಪ್ರೇಮಿಗಳಿಗೆ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ನಗರದ ಸಂಘಟನೆಯೊಂದಕ್ಕೆ ಇವರ ಸುಳಿವು ದೊರೆತಿದ್ದು, ವಿಳಾಸ ತಿಳಿದುಕೊಂಡ ಸಂಘಟನೆಯ ಸದಸ್ಯರು ಪೊಲೀಸರೊಂದಿಗೆ ತೆರಳಿ ಯುವಕನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರೂ ಸಹ ದ್ವಂದ್ವ ಹೇಳಿಕೆ ನೀಡುತ್ತಿರುವುದರಿಂದ ಲವ್ ಜಿಹಾದ್ ಎಂಬ ಶಂಕೆ ವ್ಯಕ್ತವಾಗುತ್ತಿದೆ.

    ಈಗಾಗಲೇ ತ್ರಿಪುರ ಪೊಲೀಸರಿಗೆ ಮಾಹಿತಿ ತಲುಪಿದ್ದು, ಆಕೆಯನ್ನು ಕರೆದೊಯ್ಯಲು ತ್ರಿಪುರ ಪೊಲೀಸರು ಆಗಮಿಸುತ್ತಿದ್ದಾರೆ. ಮೂರು ದಿನಗಳ ಹಿಂದೆ ನಮ್ಮ ಸಂಘಟನೆ ತ್ರಿಪುರ ರಾಜ್ಯಾಧ್ಯಕ್ಷರಿಂದ ಕರೆ ಬರುತ್ತೆ, ಅವರು ಈ ಘಟನೆ ಬಗ್ಗೆ ಹೇಳಿದಾಗ ನಾವು ಹುಡುಕಾಟ ನಡೆಸಿದ್ದೆವು. ಆಗ ಕಳೆದ ಒಂದು ವಾರದಿಂದ ಬಿ. ನಾರಾಯಣಪುರದ ಶೆಡ್ ವೊಂದರಲ್ಲಿ ಗಾರೆ ಕೆಲಸ ಮಾಡಿಕೊಂಡು ವಾಸವಾಗಿದ್ದು, ಮರಳಿ ಚನ್ನೈಗೆ ಹೋಗಲು ಪ್ಲಾನ್ ಮಾಡಿದ್ದರು. ಕಳೆದ ಮೇ 18ಕ್ಕೆ ಆಕೆಯ ಸಹೋದರ ತ್ರಿಪುರದಲ್ಲಿ ನಾಪತ್ತೆಯ ಪ್ರಕರಣ ದಾಖಲಿಸಿದ್ದರು. ಆಕೆಗೆ 16 ವರ್ಷ ಇರುವುದರಿಂದ ಇದು ಲವ್ ಜಿಹಾದ್ ಆಗಿರುವ ಶಂಕೆ ವ್ಯಕ್ತವಾಗಿದೆ ಅಂತ ಸಂಘಟನೆಯ ಸದಸ್ಯ ಶಂಕರ್ ಭಟ್ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಇತ್ತೀಚೆಗೆ ಹಿಂದೂ ಯುವತಿಯರನ್ನು ಮರುಳು ಮಾಡಿ ಮತಾಂತರ ಮಾಡುವುದೇ ಒಂದು ದೊಡ್ಡ ದಂಧೆಯಾಗಿದ್ದು, ಇದೀಗ ಈ ಪ್ರಕರಣವು ಲವ್ ಜಿಹಾದ್ ಪ್ರಕರಣವೇ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ಪೊಲೀಸರು ಸೂಕ್ತ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬಿಳಲಿದೆ.

  • ಸಹೋದರಿಯೆಂದು ತಿಳಿಯದೇ 6 ವರ್ಷ ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿದ ಸಹೋದರ!

    ಸಹೋದರಿಯೆಂದು ತಿಳಿಯದೇ 6 ವರ್ಷ ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿದ ಸಹೋದರ!

    ಲಕ್ನೋ: ಯುವಕನೊರ್ವ ತನ್ನ ಸಹೋದರಿಯೆಂದು ತಿಳಿಯದೇ 6 ವರ್ಷ ಪ್ರೀತಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಘಟನೆಯೊಂದು ಉತ್ತರ ಪ್ರದೇಶದ ಬಿಲಾರಿಯಲ್ಲಿ ನಡೆದಿದೆ.

    6 ವರ್ಷಗಳಿಂದ ಆಕೆ ತನ್ನ ಸಹೋದರಿ ಎಂಬುದು ತಿಳಿಯದೇ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ತನ್ನ ಸಹೋದರಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಆಕೆಯಿಂದ ಬೇಸರಗೊಂಡು ಮತ್ತೊಂದು ಯುವತಿಯ ಜೊತೆ ಮದುವೆಯಾಗಲು ಯುವಕ ನಿರ್ಧರಿಸಿದ್ದನು. ಈ ವಿಷಯ ತಿಳಿಯುತ್ತಿದ್ದಂತೆ ಯುವತಿ ಪೊಲೀಸ್ ಠಾಣೆಗೆ ಹೋಗಿ ಆ ಯುವಕನೊಂದಿಗೆ ಮದುವೆ ಮಾಡಿಸುವುದ್ದಾಗಿ ಹಠ ಹಿಡಿದ್ದಳು.

    ಯುವತಿ ಮಾತನ್ನು ಕೇಳಿ ಪೊಲೀಸರು ಯುವಕನ ಬಗ್ಗೆ ವಿಚಾರಿಸಿದ್ದಾಗ ಆ ಯುವತಿ ಯುವಕನಿಗೆ ಚಿಕ್ಕಮ್ಮನ ಮಗಳು ಆಗಬೇಕು ಎಂಬ ವಿಷಯ ಗೊತ್ತಾಗುತ್ತದೆ. ಇಬ್ಬರು 6 ವರ್ಷದಿಂದ ಪ್ರೀತಿಸಿ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದರು ಎಂಬ ವಿಷಯ ಕೂಡ ತಿಳಿದು ಪೊಲೀಸರು ದಂಗಾದರು. ಅಲ್ಲದೇ ಆ ಯುವಕ ಪ್ರೀತಿ ಹೆಸರಲ್ಲಿ ಯುವತಿ ಜೊತೆ ನಾಟಕವಾಡುತ್ತಿದ್ದನು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

    ಯುವಕ ತನ್ನ ಚಿಕ್ಕಮ್ಮನ ಮಗಳನ್ನು 6 ವರ್ಷಗಳಿಂದ ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಪದೇ ಪದೇ ದೈಹಿಕ ಸಂಪರ್ಕ ಬೆಳೆಸುತ್ತಿದ್ದನು. ಈ ವಿಷಯ ತಿಳಿದ ಯುವಕನ ಕುಟುಂಬದವರು ಆತನ ಮದುವೆಯನ್ನು ಬೇರೆ ಯುವತಿಯ ಜೊತೆ ಮಾಡಲು ನಿರ್ಧರಿಸಿದ್ದರು. ತನ್ನ ಪ್ರಿಯಕರ ಬೇರೆ ಯುವತಿಯ ಜೊತೆ ಮದುವೆಯಾಗುತ್ತಿರುವುದ್ದನ್ನು ತಿಳಿದು ಯುವತಿ ಪೊಲೀಸ್ ಠಾಣೆ ಮಟ್ಟಿಲೇರಿದ್ದಾಳೆ.

    ಯುವಕ 3 ದಿನ ಹಿಂದೆಯೇ ತನ್ನ ಮನೆಯನ್ನು ಬಿಟ್ಟು ಓಡಿ ಹೋಗಿದ್ದನು. ಆಗ ಯುವತಿ ಆತನ ಮನೆ ತಲುಪಿದ್ದಾಳೆ. ಅಲ್ಲದೇ ಯುವತಿ ತನ್ನ ಪ್ರಿಯಕರ ಕಾಣೆಯಾಗಿದ್ದಾನೆ ಎಂದು ದೂರನ್ನು ಕೂಡ ನೀಡಿದ್ದಾಳೆ. ಯುವತಿಯ ದೂರು ದಾಖಲಿಸಿಕೊಂಡ ಪೊಲೀಸರು ಆ ಯುವಕನನ್ನು ಹುಡುಕಿದ್ದಾರೆ. ಬಳಿಕ ಇಬ್ಬರ ಕುಟುಂಬದವರು ಇಬ್ಬರಿಗೂ ಮದುವೆ ಮಾಡಿಸುವುದಾಗಿ ಹೇಳಿ ಆ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿಕೊಟ್ಟರು.

    ಯುವತಿ ಮರುದಿನ ತನ್ನ ಮದುವೆಗೆಂದು ಕೋರ್ಟ್ ತಲುಪಿದ್ದಾಗ ಯುವಕ ಹಾಗೂ ಆತನ ಕುಟುಂಬದವರು ಬರಲಿಲ್ಲ. ನಂತರ ಯುವತಿ ಕೋಪಗೊಂಡು ಯುವಕನ ಮನೆ ತಲುಪಿದ್ದಾಗ ಆತನ ಮನೆಯಲ್ಲಿ ಮದುವೆಯ ಎಲ್ಲ ತಯಾರಿ ನಡೆದಿದ್ದು, ಯುವಕ ಬೇರೆ ಯುವತಿಯ ಜೊತೆ ಮದುವೆಯಾಗಲು ಸಿದ್ಧನಿದ್ದನು. ತಕ್ಷಣ ಯುವತಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

    ಪೊಲೀಸರು ಸ್ಥಳಕ್ಕೆ ತಲುಪುವ ಮೊದಲೇ ಯುವಕನ ಕುಟುಂಬದವರು ಆತನ ಮದುವೆಯನ್ನು ನಿಲ್ಲಿಸಿ ಮನೆಯಿಂದ ಓಡಿ ಹೋಗಲು ಸಹಾಯ ಮಾಡಿದ್ದಾರೆ. ಆ ಯುವಕನನ್ನು ಹುಡುಕಿ ಕೊಡುವುದಾಗಿ ಯುವತಿ ಪೊಲೀಸರ ಹತ್ತಿರ ಹಠ ಮಾಡುತ್ತಿದ್ದಾಳೆ. ತನ್ನ ಮದುವೆ ಆ ಯುವಕನ ಜೊತೆ ಆಗಲಿಲ್ಲವೆಂದರೆ ಆತ್ಮಹತ್ಯೆ ಮಾಡಿಕೊಳ್ಳುವುದ್ದಾಗಿ ಯುವತಿ ಪೊಲೀಸರ ಹತ್ತಿರ ಹೇಳಿದ್ದಾಳೆ.

  • 3 ವರ್ಷದ ಹಿಂದೆ ಮುಸ್ಲಿಂ ಯುವತಿ ಜೊತೆ ನಿಶ್ಚಿತಾರ್ಥ- 3 ದಿನಗಳ ಹಿಂದೆ ಹಿಂದೂ ಯುವತಿಯೊಂದಿಗೆ ಮದುವೆ?

    3 ವರ್ಷದ ಹಿಂದೆ ಮುಸ್ಲಿಂ ಯುವತಿ ಜೊತೆ ನಿಶ್ಚಿತಾರ್ಥ- 3 ದಿನಗಳ ಹಿಂದೆ ಹಿಂದೂ ಯುವತಿಯೊಂದಿಗೆ ಮದುವೆ?

    -ಹಿಂದೂ, ಮುಸ್ಲಿಂ ಯುವತಿಯರ ಬಾಳಲ್ಲಿ ಮುಸ್ಲಿಂ ಯವಕನ ಚೆಲ್ಲಾಟ

    ಚಿಕ್ಕಬಳ್ಳಾಪುರ: ಮೂರು ವರ್ಷದ ಹಿಂದೆ ಮುಸ್ಲಿಂ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಮುಸ್ಲಿಂ ಯುವಕನೊರ್ವ, ಮೂರು ದಿನಗಳ ಹಿಂದೆ ಹಿಂದೂ ಯುವತಿಯ ಜೊತೆ ಪರಾರಿಯಾಗಿ ಮದುವೆಗೆ ಮುಂದಾಗಿದ್ದಾನೆ.

    ಇದರಿಂದ ಒಂದೆಡೆ ಪ್ರೀತಿ-ಪ್ರೇಮ ಅಂತ ನಿಶ್ಚಿತಾರ್ಥ ಮಾಡಿಕೊಂಡು ಮೋಸ ಹೋದ ಮುಸ್ಲಿಂ ಯುವತಿ ಹಾಗೂ ಮತ್ತೊಂದೆಡೆ ಮಗಳ ಮನಸ್ಸು ಕೆಡಿಸಿ ಮೋಸ ಮಾಡಿದ್ದಾನೆ ಅಂತ ಹಿಂದೂ ಯುವತಿಯ ತಂದೆ-ತಾಯಿ ಪೊಲೀಸರ ಮೊರೆ ಹೋಗಿದ್ದಾರೆ.

    ಏನಿದು ಪ್ರಕರಣ?:
    ಮೆಹಬೂಬ್ ಪಾಷಾ ಯುವತಿಯರಿಗೆ ಮೋಸ ಮಾಡಿದ ವ್ಯಕ್ತಿ. ಮೆಹಬೂಬ್ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ನಿವಾಸಿ. ಹೋಟೆಲ್ ನಡೆಸ್ತಿರೋ ಮೆಹಬೂಬ್, 3 ವರ್ಷಗಳ ಹಿಂದೆ ರೈಲಿನಲ್ಲಿ ಪರಿಚಯವಾದ ಡಿ ಪಾಳ್ಯ ಗ್ರಾಮದ ಮುಸ್ಲಿಂ ಯುವತಿ ಜೊತೆ ಪ್ರೀತಿ-ಪ್ರೇಮ ಅಂತ ಸುತ್ತಾಡಿ ಕೊನೆಗೆ ಯುವತಿಯ ಮನೆಯವರನ್ನು ಕಾಡಿ-ಬೇಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ನಿಶ್ಚಿತಾರ್ಥ ಆದ ಮೇಲೆ ಮದುವೆ ಮಾಡಿಕೊಳ್ಳುವ ಬದಲು ಕುಂಟು ನೆಪ ಹೇಳಿಕೊಂಡು ಈ ವರ್ಷ, ಮುಂದಿನ ವರ್ಷ ಅಂತ ಮದುವೆ ಮುಂದೂಡಿದ್ದ ಅಸಾಮಿ ಇದೀಗ ಮೂರು ದಿನಗಳ ಹಿಂದೆ ಗಂಗಸಂದ್ರ ಗ್ರಾಮದ ಹಿಂದೂ ಯುವತಿ ಜೊತೆ ಪರಾರಿಯಾಗಿದ್ದಾನೆ. ಸದ್ಯ ಹಿಂದೂ ಯುವತಿ ಹಾಗೂ ಮೆಹಬೂಬ್ ಪಾಷಾ ಇಬ್ಬರು ಗೌರಿಬಿದನೂರು ಉಪನೋಂದಾಣಾಧಿಕಾರಿಗಳ ಕಚೇರಿಯಲ್ಲಿ ವಿವಾಹ ಮಾಡಿಕೊಳ್ಳೋಕೆ ಅರ್ಜಿ ಕೂಡ ಸಲ್ಲಿಸಿದ್ದಾರೆ.

    ಈ ಮೆಹಬೂಬ್ ಪಾಷಾ ಕಳೆದ ವರ್ಷವೂ ಕೂಡ ಬೇರೊಂದು ಯುವತಿ ಜೊತೆಗೆ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ್ದನಂತೆ. ಆ ವೇಳೆ ಮುಸ್ಲಿಂ ಯುವತಿ ಗಲಾಟೆ ಮಾಡಿ ಕ್ಯಾತೆ ತೆಗೆದಾಗ ಮುಂದಿನ ವರ್ಷ ಮದುವೆಯಾಗುವುದಾಗಿ ನಂಬಿಸಿದ್ದನಂತೆ. ಆದರೆ ಈಗ ಮತ್ತೊಂದು ವರ್ಷ ಕಳೆಯೋದ್ರ್ರೊಳಗೆ ಮತ್ತೊಂದು ಯುವತಿ ಜೊತೆ ಮದುವೆಗೆ ಮುಂದಾಗಿದ್ದಾನೆ. ಹೀಗಾಗಿ ಒಂದೆಡೆ ನೊಂದ ಮುಸ್ಲಿಂ ಯುವತಿ, ಮತ್ತೊಂದೆಡೆ ಹಿಂದೂ ಯುವತಿ ತಂದೆ-ತಾಯಿ ಚಿಕ್ಕಬಳ್ಳಾಪರ ಎಸ್‍ಪಿ ಕಾರ್ತಿಕ್ ರೆಡ್ಡಿ, ಗೌರಿಬಿದನೂರು ಠಾಣೆಯ ಪೊಲೀಸರ ಮೊರೆ ಹೋಗಿದ್ದಾರೆ.

    ಇತ್ತ ನಿಶ್ಚಿತಾರ್ಥದ ಹೆಸರಲ್ಲಿ ಮೋಸ ಮಾಡಿದ ಮೆಹಬೂಬ್ ಪಾಷಾ ಗೆ ತಕ್ಕ ಶಿಕ್ಷೆಯಾಗಬೇಕು ಅಂತ ಮುಸ್ಲಿಂ ಯುವತಿ ಪಟ್ಟು ಹಿಡಿದಿದ್ದಾಳೆ. ಮತ್ತೊಂದೆಡೆ ನಮ್ಮ ಮಗಳನ್ನ ಏನಾದ್ರೂ ಮಾಡಿ ನಮಗೆ ನ್ಯಾಯ ಕಳಿಸಿಕೊಡಿ ಅಂತ ಹಿಂದೂ ಯುವತಿಯ ಪೋಷಕರು ಪೊಲೀಸರ ಬಳಿ ಅವಲತ್ತುಕೊಳ್ತಿದ್ದಾರೆ. ಮೆಹಬೂಬ್ ಪಾಷಾ ವಿರುದ್ಧ ಎರಡು ಕುಟುಂಬದವರು ಲವ್-ಜಿಹಾದ್ ಆರೋಪ ಕೂಡ ಹೊರಿಸಿದ್ದಾರೆ. ಹೀಗಾಗಿ ಮೆಹಬೂಬ್ ಪಾಷಾ ಹಾಗೂ ಹಿಂದೂ ಯುವತಿ ಇಬ್ಬರನ್ನ ಕರೆಸಿ ಪೊಲೀಸರು ವಿಚಾರಣೆ ಮಾಡೋಕೆ ಮುಂದಾಗಿದ್ದಾರೆ.

  • ವಿದ್ಯಾರ್ಥಿನಿಯರನ್ನ ಚುಡಾಯಿಸುತ್ತಿದ್ದ ಯುವಕರು ಹುಬ್ಬಳ್ಳಿ ಪೊಲೀಸ್ ಬಲೆಗೆ ಬಿದ್ರು

    ವಿದ್ಯಾರ್ಥಿನಿಯರನ್ನ ಚುಡಾಯಿಸುತ್ತಿದ್ದ ಯುವಕರು ಹುಬ್ಬಳ್ಳಿ ಪೊಲೀಸ್ ಬಲೆಗೆ ಬಿದ್ರು

    ಹುಬ್ಬಳ್ಳಿ: ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಒಂಬತ್ತು ಜನ ಯುವಕರನ್ನು ಹುಬ್ಬಳ್ಳಿಯ ಚೆನ್ನಮ್ಮ ಪಡೆಯ ಮುಫ್ತಿ ಪೊಲೀಸರು ಬಂಧಿಸಿದ್ದಾರೆ.

    ನಗರದ ನಿವಾಸಿಗಳಾದ ಅಮನ್, ಇಮಾಮ್ ಗೌಸ್, ತೌಸಿಫ್, ಮೈನುದ್ದೀನ್ ಸೈಯದ್, ಮೆಹಬೂಬ್, ಜಾಕೀಸ್ ಹುಸೇನ್, ಸಲ್ಮಾನ್ ಬಂಧಿತ ಯುವಕರು. ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಲ್ಲ, ಆದರೂ ನಗರದ ನೆಹರು ಕಾಲೇಜು ಹಾಗೂ ಬಿಡ್ನಾಳ ಆರ್.ಪಾಟೀಲ್ ಸ್ಕೂಲ್ ಬಳಿ ನಿಂತು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದರು.

    ಎಂದಿನಂತೆ ಇಂದು ಕೂಡಾ ನೆಹರು ಕಾಲೇಜಿನ ಮುಂದೆ ಬಂಧಿತ ಯುವಕರು ನಿಂತು, ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದರು. ಖಚಿತ ಮಾಹಿತಿ ಪಡೆದು ಅಲ್ಲಿಗೆ ಚನ್ನಮ್ಮ ಪಡೆಯ ಮಫ್ತಿ ಪೊಲೀಸರು ಬಂದು ಯುವಕರನ್ನು ಬಂಧಿಸಿದ್ದಾರೆ. ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೀರು ಎರಚಿದ್ದನೆಂದು ದ್ವೇಷ- ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

    ನೀರು ಎರಚಿದ್ದನೆಂದು ದ್ವೇಷ- ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

    ಬೆಂಗಳೂರು: ಊರಹಬ್ಬದ ವೇಳೆ ಬಣ್ಣದ ನೀರು ಎರಚಿದ್ದಕ್ಕೆ ಹಳೆ ದ್ವೇಷವನ್ನು ಮುಂದಿಟ್ಟುಕೊಂಡು ಯುವಕನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಕಾಟನ್‍ಪೇಟೆಯಲ್ಲಿ ನಡೆದಿದೆ.

    ಗೋವಿಂದ್‍ರಾಜು ಮೃತ ದುರ್ದೈವಿ. ಊರಹಬ್ಬದಲ್ಲಿ ಗೋವಿಂದರಾಜು ಹಾಗೂ ಶಂಕರ್ ಬಣ್ಣದ ನೀರು ಎರಚಾಡಿದ್ದಾರೆ. ನೀರು ಎರಚಿದ್ದನ್ನೆ ಮುಂದಿಟ್ಟುಕೊಂಡು ಆರೋಪಿ ಶಂಕರ್ ತನ್ನ ಬಳಿಯಿದ್ದ ಚಾಕುವಿನಿಂದ ಗೋವಿಂದ್ ರಾಜುನನ್ನು ಬರ್ಬರವಾಗಿ ಹತ್ಯಗೈದಿದ್ದಾನೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಂಕರ್‍ನನ್ನು ಕಾಟನ್‍ಪೇಟೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತನನ್ನೇ ಗುಂಡಿಕ್ಕಿ ಹತ್ಯೆ- 10 ವರ್ಷದ ಹಿಂದಿನ ಜಗಳ ಅಂತ್ಯ

  • ಯುವತಿಯೊಂದಿಗೆ ಜಮೀನಿನಲ್ಲಿದ್ದ ಯುವಕರನ್ನು ಪ್ರಶ್ನಿಸಿದಕ್ಕೆ ಎರಡು ಗ್ರಾಮಗಳ ನಡುವೆ ಗಲಾಟೆ!

    ಯುವತಿಯೊಂದಿಗೆ ಜಮೀನಿನಲ್ಲಿದ್ದ ಯುವಕರನ್ನು ಪ್ರಶ್ನಿಸಿದಕ್ಕೆ ಎರಡು ಗ್ರಾಮಗಳ ನಡುವೆ ಗಲಾಟೆ!

    ಮೈಸೂರು: ಇಬ್ಬರು ಯುವಕರೊಂದಿಗೆ ಯುವತಿಯೊಬ್ಬಳು ರೈತನ ಜಮೀನಿನಲ್ಲಿ ಕಾಣಿಸಿಕೊಂಡಿದ್ದಾಳೆ. ಈ ವೇಳೆ ಯುವಕರನ್ನು ಪ್ರಶ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗ್ರಾಮಗಳ ಜನರ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹಂಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹಂಡುವಿನಹಳ್ಳಿ ಗ್ರಾಮದ ಬಳಿ ಯುವಕರಿಬ್ಬರು ಯುವತಿಯೊಬ್ಬಳನ್ನು ಜಮೀನಿಗೆ ಕರೆತಂದಿದ್ದರು. ಇದನ್ನು ಕಂಡ ಜಮೀನಿನ ಮಾಲೀಕ ದೇವಣ್ಣ ಯುವಕರನ್ನು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಯುವಕರು ತಮ್ಮ ಸ್ನೇಹಿತರನ್ನು ಕರೆಸಿಕೊಂಡು ಹಂಡುವಿನಹಳ್ಳಿ ಗ್ರಾಮಕ್ಕೆ ನುಗ್ಗಿ, ಜಮೀನಿನ ಮಾಲೀಕ ದೇವಣ್ಣನ ಪುತ್ರ ನಾಗರಾಜು ಮೇಲೆ ಹಲ್ಲೆ ಮಾಡಿದ್ದಾರೆ.

    ಯುವಕರ ಗುಂಪಿನ ವರ್ತನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಯುವಕರನ್ನು ಹಿಡಿದು ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ನಂಜನಗೂಡು ಗ್ರಾಮಾಂತರ ಪೊಲೀಸರು, ಹಂಡುವಿನಹಳ್ಳಿ ಗ್ರಾಮದ ರಾಮಮಂದಿರದಲ್ಲಿ ಕೂಡಿಹಾಕಿದ್ದ ಇಬ್ಬರು ಯುವಕರನ್ನು ತಮ್ಮ ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕಾವೇರಿ ನದಿಯಲ್ಲಿ ಕೊಚ್ಚಿಹೋದ ಯುವಕ: ಸಹಾಯಕ್ಕಾಗಿ ಅಂಗಲಾಚುತ್ತಿರುವ ಮತ್ತೊಬ್ಬ ಯುವಕ!

    ಕಾವೇರಿ ನದಿಯಲ್ಲಿ ಕೊಚ್ಚಿಹೋದ ಯುವಕ: ಸಹಾಯಕ್ಕಾಗಿ ಅಂಗಲಾಚುತ್ತಿರುವ ಮತ್ತೊಬ್ಬ ಯುವಕ!

    ಮಂಡ್ಯ/ ಹೈದರಾಬಾದ್: ಅಪಾಯಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಯುವಕನೊಬ್ಬ ಕೊಚ್ಚಿಹೋದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಬಳಿಯ ಗೂಳಿತಿಟ್ಟು ಬಳಿ ನಡೆದಿದೆ.

    ಇಂದು ಸುಪ್ರಸಿದ್ಧ ಪಕ್ಷಿಧಾಮವಾದ ರಂಗನತಿಟ್ಟು ವೀಕ್ಷಿಸಲು ಇಬ್ಬರು ಯುವಕರು ಆಗಮಿಸಿದ್ದಾರೆ. ಈ ವೇಳೆ ರಂಗನ ತಿಟ್ಟು ಬಳಿಯ ಗೂಳಿತಿಟ್ಟಿನ ಬಳಿ ಕೆಆರ್‍ಎಸ್‍ನಿಂದ ನದಿಗೆ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕಾವೇರಿ ನದಿಯ ನೀರಿನ ರಭಸಕ್ಕೆ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಇದರಲ್ಲಿ ಓರ್ವ ಯುವಕ ನದಿ ಮಧ್ಯೆ ಸಿಲುಕಿ, ತಾಳೆ ಗಿಡದ ಸಹಾಯದಿಂದ ಪಾರಾಗಿದ್ದು, ರಕ್ಷಣೆ ಮಾಡುವಂತೆ ಅಂಗಲಾಚುತ್ತಿದ್ದಾನೆ.

    ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಇವರಲ್ಲಿ ಓರ್ವ ಯುವಕ ನದಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾನೆ.

    15 ಮಂದಿ ನಾಪತ್ತೆ:ಆಂಧ್ರಪ್ರದೇಶದ ಪೂರ್ವ ಗೋಧಾವರಿಯಲ್ಲಿ ಪ್ರಯಾಣಿಕರ ದೋಣಿಯೊಂದು ಮುಳುಗಿದ ಪರಿಣಾಮ 15 ಮಂದಿ ನಾಪತ್ತೆಯಾಗಿದ್ದಾರೆ. ದೋಣಿಯಲ್ಲಿ 40 ಮಂದಿ ಪ್ರಯಾಣಿಸುತ್ತಿದ್ದು, ಬಹುತೇಕ ಮಂದಿ ವಿದ್ಯಾರ್ಥಿಗಳೇ ಇದ್ದರು ಎಂದು ತಿಳಿದು ಬಂದಿದೆ.

    ವರದಿಯ ಪ್ರಕಾರ ಗೋಧಾವರಿ ನದಿಗೆ ಕಟ್ಟಲಾಗಿದ್ದ ಸೇತುವೆಯ ಕಂಬಕ್ಕೆ ದೋಣಿ ಗುದ್ದಿದ್ದರಿಂದ ಅವಘಡ ಸಂಭವಿಸಿದ್ದು, ನಾಪತ್ತೆಯಾದರವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ, ಘಟನೆ ಸಂಬಂಧ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

  • ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರ ದುಸ್ಸಾಹಸ – ಕೊಚ್ಚಿ ಹೋದ ಯುವಕ

    ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರ ದುಸ್ಸಾಹಸ – ಕೊಚ್ಚಿ ಹೋದ ಯುವಕ

    ಮೈಸೂರು: ಜಿಲ್ಲೆಯ ನಂಜನಗೂಡಿನ ಹತ್ತಿರ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರು ಯುವಕರು ನದಿಯಲ್ಲಿ ಸ್ವಿಮ್ಮಿಂಗ್ ಮಾಡುವ ದುಸ್ಸಾಹಸಕ್ಕೆ ಇಳಿದಿದ್ದರು. ಆದರೆ ಅವರಲ್ಲಿ ಒಬ್ಬ ಯುವಕ ನಾಪತ್ತೆಯಾಗಿದ್ದಾನೆ.

    ಎಚ್.ಡಿ ಕೋಟೆ ತಾಲೋಕಿನ ಮಾದಾಪುರ ಸೇತುವೆ ಬಳಿ ಈ ಘಟನೆ ನಡೆದಿದೆ. ಸೇತುವೆ ಮೇಲೆ ಹರಿಯುತ್ತಿರುವ ನೀರಿಗೆ ಮೂವರು ಬಿದ್ದಿದ್ದರು. ಆದರೆ 24 ವರ್ಷದ ಉಮೇಶ್ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾನೆ. ಜೊತೆಯಲ್ಲಿದ್ದ ಚಿಕ್ಕನಾಯ್ಕ, ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಉಮೇಶ್‍ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರ ದುಸ್ಸಾಹಸ!

    ಭೋರ್ಗರೆದು ಹರಿಯುತ್ತಿರುವ ನೀರಿನಲ್ಲಿ ಯುವಕರು ಸ್ವಿಮ್ಮಿಂಗ್ ಮಾಡಲು ಪ್ರಾಣಾಪಾಯವನ್ನು ಲೆಕ್ಕಿಸದೇ ಇಂತಹ ದುಸ್ಸಾಹಸಕ್ಕೆ ಇಳಿದಿದ್ದರು. ಜಲಾಶಯ ತುಂಬಿದ್ದ ಪರಿಣಾಮ ಕಪಿಲಾ ನದಿಗೆ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿತ್ತು.

    ಎಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.