Tag: Young

  • ರಣ ಬಿಸಿಲಿನ ಝಳಕ್ಕೆ 2 ದಿನದ ಹಿಂದೆ ಮದುವೆಯಾಗಿದ್ದ ಯುವಕ ಬಲಿ!

    ರಣ ಬಿಸಿಲಿನ ಝಳಕ್ಕೆ 2 ದಿನದ ಹಿಂದೆ ಮದುವೆಯಾಗಿದ್ದ ಯುವಕ ಬಲಿ!

    ಕಲಬುರಗಿ: ರಣ ಬಿಸಿಲಿನ ಝಳ ಕಲಬುರಗಿಯಲ್ಲಿ ಮೊದಲ ಬಲಿ ಪಡೆದಿದ್ದು, ಎರಡು ದಿನಗಳ ಹಿಂದೆ ಮದುವೆಯಾಗಿದ್ದ ಕಲಬುರಗಿ ನಗರದ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ.

    ಮಹ್ಮದ್ ಶರೀಫ್ ಮೃತ ಯುವಕ. ಕಲಬುರಗಿಯ ಎಮ್‍ಎಸ್‍ಕೆ ಮಿಲ್‍ನಲ್ಲಿ ಕೆಲಸ ಮಾಡುತ್ತಿದ್ದ ಮಹ್ಮದ್ ಶರೀಫ್ ಗುರುವಾರ ಮನೆಗೆ ಬಂದ ಮೇಲೆ ನೀರು ಕುಡಿದು ತಕ್ಷಣ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

    ಕಲಬುರಗಿಯಲ್ಲಿ 41 ರಿಂದ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ತಾಪಮಾನ ಪ್ರತಿನಿತ್ಯ ಹೆಚ್ಚಳವಾಗುತ್ತಿದೆ. ಯುವಕನ ಸಾವಿನ ಕುರಿತು ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮಾನವ ಹಕ್ಕು ರಕ್ಷಣೆಗೆ ಅರ್ಜಿ – ವಿಚಾರಣೆಗೆ ಒಪ್ಪಿದ ಸುಪ್ರೀಂ

    ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮಾನವ ಹಕ್ಕು ರಕ್ಷಣೆಗೆ ಅರ್ಜಿ – ವಿಚಾರಣೆಗೆ ಒಪ್ಪಿದ ಸುಪ್ರೀಂ

    ನವದೆಹಲಿ: ಕರ್ತವ್ಯದ ವೇಳೆ ರಕ್ಷಣಾ ಪಡೆಗಳ ಸಿಬ್ಬಂದಿಯ ಮಾನವ ಹಕ್ಕುಗಳ ರಕ್ಷಣೆ ಕುರಿತು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯ ಸೋಮವಾರ ಸಮ್ಮತಿ ಸೂಚಿಸಿದೆ.

    ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ವಿರುದ್ಧ ನಡೆಯುತ್ತಿರುವ ಕಲ್ಲು ತೂರಾಟ ಹಾಗೂ ವಿಧ್ವಂಸಕ ಕೃತ್ಯ ನಡೆಸಲು ಮುಂದಾಗುವ ಗುಂಪುಗಳಿಂದ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ವಿವರಿಸಿ ಇಬ್ಬರು ಯುವತಿಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಭದ್ರತಾ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಪ್ರಸ್ತಾಪಿಸಿ ಅರ್ಜಿ ಸಲ್ಲಿಸಿದ್ದಾರೆ.

    19 ವರ್ಷದ ಪ್ರೀತಿ ಕೇದಾರ್ ಗೋಖಲೆ ಹಾಗೂ 20 ವರ್ಷದ ಕಾಜಲ್ ಮಿಶ್ರಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಭದ್ರತಾ ಪಡೆಗಳ ಮೇಲೆ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಹತ್ತಿಕ್ಕಲು ಸರಿಯಾದ ನೀತಿ ರೂಪಿಸಿ ಎಂದು ಅರ್ಜಿಯಲ್ಲಿ ಮನವಿ ಸಲ್ಲಿಸಿದ್ದಾರೆ.

    ಕರ್ತವ್ಯದಲ್ಲಿದ್ದಾಗ ಕಲ್ಲುತೂರಾಟ ನಡೆದಾಗ ಭದ್ರತಾ ಪಡೆಗಳು ತಮ್ಮ ಆತ್ಮ ರಕ್ಷಣೆಗಾಗಿ ಬಲ ಪ್ರಯೋಗ ಮಾಡುತ್ತಾರೆ. ಆದರೆ ಯೋಧರ ವಿರುದ್ಧವೇ ಕೇಸ್ ದಾಖಲಾಗುತ್ತದೆ. ಆದರೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದರ ಜೊತೆಯಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಮೊದಲ ಬಾರಿಗೆ ಕಲ್ಲು ತುರಾಟ ನಡೆಸಿದವರ ವಿರುದ್ಧ ದಾಖಲಾದ 9,760 ಎಫ್‍ಐಆರ್ ರದ್ದುಗೊಳಿಸಲಾಗುವುದು ಎಂದು ವಿಧಾನಸಭೆಯಲ್ಲಿ ಘೋಷಿಸುತ್ತಿದ್ದಾರೆ. ನಿಜವಾಗಿಯೂ ಇದು ಶಾಕಿಂಗ್ ಅಂಶ ಎಂದು ಅರ್ಜಿಯಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

    ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾ. ಸಂಜೀವ್ ಖನ್ನಾ ಅವರ ಪೀಠ ಅರ್ಜಿ ವಿಚಾರಣೆಗೆ ಸಮ್ಮತಿ ನೀಡಿದೆ. ಈ ಕುರಿತು ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆ, ಜಮ್ಮು ಕಾಶ್ಮೀರ ಸರ್ಕಾರ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

    ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಯುವತಿಯರು ಭಾರತ ಸೇನಾಧಿಕಾರಿಗಳ ಪುತ್ರಿಯಾರಾಗಿದ್ದು, ಅವರ ಪೈಕಿ ಒಬ್ಬರು ನಿವೃತ್ತರಾಗಿದ್ದರೆ ಮತ್ತೊಬ್ಬರು ಸೇವೆಯಲ್ಲಿದ್ದಾರೆ. ಭದ್ರತಾ ಪಡೆಯ ಯೋಧರ ಮೇಲೆ ನಡೆಯುತ್ತಿರುವ ದಾಳಿಗಳು ತಮಗೆ ಅಘಾತ ತಂದಿದೆ ಎಂದು ಯುವತಿಯರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    ಇಬ್ಬರೂ ಈ ಹಿಂದೆ 2018ರ ಫೆಬ್ರವರಿಯಲ್ಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ರಾಜ್ಯದಲ್ಲಿರುವ ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾಯಿಸಿತ್ತು.

    https://www.youtube.com/watch?v=HBx6e6LMK9k

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಡಹಗಲೇ ಮನೆ ಮೇಲೆ ಬೆತ್ತಲಾಗಿ ಸೆಕ್ಸ್ ಮಾಡಿದ ಜೋಡಿ

    ಹಾಡಹಗಲೇ ಮನೆ ಮೇಲೆ ಬೆತ್ತಲಾಗಿ ಸೆಕ್ಸ್ ಮಾಡಿದ ಜೋಡಿ

    ಬ್ಯೂನಸ್ ಐರಿಸ್: ನಗರದ ಮಧ್ಯೆ ಮನೆಯ ಮೇಲೆ ಹಾಡಹಗಲೇ ಜೋಡಿಯೊಂದು ಸೆಕ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್‍ನ ನಗರದ ಹಳೆಯ ಕಟ್ಟಡಗಳ ಮೇಲೆ ಜೋಡಿ ಸೆಕ್ಸ್ ಮಾಡಿದೆ. ಈ ದೃಶ್ಯವನ್ನು ದೂರದ ಕಟ್ಟಡದಿಂದ ವ್ಯಕ್ತಿಯೊಬ್ಬರು ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಕಟ್ಟಡದ ಮೇಲೆ ಯುವಕ ಹಾಗೂ ಯುವತಿ ಸೆಕ್ಸ್ ಮಾಡುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಅವರನ್ನು ಹುಡುಕಾಟ ನಡೆಸುತ್ತಾರೆ. ಆದರೆ ಈ ಜೋಡಿ ಅವರು ಇದ್ದ ಜಾಗದಿಂದ ಒಂದು ಮಹಡಿ ಎತ್ತರದಲ್ಲಿ ಇದ್ದಿದ್ದರಿಂದ ಬಜಾವ್ ಆಗಿದ್ದಾರೆ. ಅವರು ಬಂದಿದ್ದನ್ನು ತಿಳಿದ ಸೆಕ್ಸ್ ನಿರತ ಜೋಡಿ ತಕ್ಷಣವೇ, ಬಟ್ಟೆಯನ್ನು ಹಾಕಿಕೊಂಡು ಕೆಳಗೆ ನಡೆದಿದೆ. ಈ ವೇಳೆ ಸೆಕ್ಸ್ ದೃಶ್ಯವನ್ನು ಯಾರಾದರೂ ಸೆರೆ ಹಿಡಿಯುತ್ತಿದ್ದಾರಾ ಅಂತ ಯುವಕ ಅತ್ತ ಇತ್ತ ನೋಡಿದ್ದಾನೆ. ಆಗ ಆತನಿಗೆ ಕ್ಯಾಮೆರಾ ಕಂಡಿದ್ದು, ತಕ್ಷಣವೇ ಕ್ಯಾಮೆರಾದತ್ತ ಎರಡೂ ಕೈಬೀಸಿ, ಧನ್ಯವಾದ ಹೇಳಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆಕ್ಸ್ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟು ಜೈಲು ಸೇರಿದ ಪೊಲೀಸ್!

    ಸೆಕ್ಸ್ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟು ಜೈಲು ಸೇರಿದ ಪೊಲೀಸ್!

    ಬರ್ಲಿನ್: ಸೆಕ್ಸ್ ಮಾಡುವ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜರ್ಮನಿ ಪೊಲೀಸ್ ಅಧಿಕಾರಿಯೊರ್ವ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ.

    ಈ ಕುರಿತು ಪೊಲೀಸ್ ಅಧಿಕಾರಿಯ ಗೆಳತಿ ದೂರು ನೀಡಿದ್ದು, ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ 8 ತಿಂಗಳು ಜೈಲು ಶಿಕ್ಷೆ ಹಾಗೂ 3 ಸಾವಿರ ಯುರೋ(ಅಂದಾಜು 2.39 ಲಕ್ಷ ರೂ.) ದಂಡವನ್ನು ವಿಧಿಸಿದೆ. ಅಲ್ಲದೇ 96 ಯುರೋಗಳನ್ನು(ಅಂದಾಜು 7500 ರೂ.)ಮಹಿಳೆಯ ಆರೋಗ್ಯ ಪರೀಕ್ಷೆಗೆ ಪಾವತಿ ಮಾಡುವಂತೆ ಸೂಚನೆ ನೀಡಿದೆ.

    ಜರ್ಮನಿಯಲ್ಲಿ ಇಂತಹ ಪ್ರಕರಣ ಇದೇ ಮೊದಲ ಬಾರಿಗೆ ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇಂತಹದ್ದೇ 2 ಪ್ರಕರಣಗಳು ಈ ಹಿಂದೆ ಸ್ವಿಜರ್ಲೆಂಡ್ ಹಾಗೂ ಕೆನಡಾದಲ್ಲಿ ವರದಿಯಾಗಿತ್ತು. ಇವುಗಳನ್ನು ರೇಪ್ ಹಾಗೂ ಲೈಂಗಿಕ ಕಿರುಕುಳ ಆರೋಪದ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಯುವತಿ ಕಾಂಡೋಮ್ ಬಳಕೆ ಮಾಡಿ ಲೈಂಗಿಕ ಕ್ರಿಯೆ ನಡೆಸಲು ಅನುಮತಿ ನೀಡಿದ್ದಳು. ಈ ವೇಳೆ ಯುವತಿಗೆ ತಿಳಿಯದಂತೆ ಆತ ಕಾಂಡೋಮ್ ಬಿಚ್ಚಿಟ್ಟು ಲೈಂಗಿಕ ಕ್ರಿಯೆಗೆ ಮುಂದಾಗಿದ್ದ. ಇದನ್ನು ತಿಳಿದ ಯುವತಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಳು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೇಪ್ ಕೇಸ್ ಹಿಂಪಡೆಯಲು ಬಂದಿದ್ದ ಯುವತಿಯ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಅತ್ಯಾಚಾರ!

    ರೇಪ್ ಕೇಸ್ ಹಿಂಪಡೆಯಲು ಬಂದಿದ್ದ ಯುವತಿಯ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಅತ್ಯಾಚಾರ!

    ಮುಂಬೈ: ರೇಪ್ ಕೇಸ್ ಹಿಂಪಡೆಯಲು ಬಂದಿದ್ದ ಯುವತಿಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

    ರೋಹನ್ ಗೊಂಜಾರಿ ಅತ್ಯಾಚಾರ ಎಸಗಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ 506 (ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಆರಂಭವಾಗಿದ್ದು, ಆರೋಪಿ ರೋಹನ್ ಗೊಂಜಾರಿನನ್ನು ಬಂಧಿಸಿಲ್ಲ ಎಂದು ವರದಿಯಾಗಿದೆ.

    ಏನಿದು ಪ್ರಕರಣ?:
    ತನ್ನ ಸ್ನೇಹಿತ ಅತ್ಯಾಚಾರ ಎಸಗಿದ್ದಾನೆ ಅಂತಾ 23 ವರ್ಷದ ಯುವತಿ ಮುಂಬೈನ ಮಾಕುರ್ದ್ ಠಾಣೆಗೆ ದೂರು ನೀಡಿದ್ದಳು. ಈ ಕುರಿತು ತನಿಖೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಅಷ್ಟೇ ಅಲ್ಲದೇ ಪ್ರಕರಣವನ್ನು ಭಿವಾಂಡಿಯ ಶಾಂತಿನಗರ್ ಠಾಣೆಗೆ ವರ್ಗಾಯಿಸಿದ್ದರು.

    ಆರೋಪಿಯ ಜೊತೆಗೆ ಸ್ನೇಹಿತನಾಗಿದ್ದರಿಂದ ಸಂಧಾನ ಮಾಡಿಕೊಂಡು, ಅತ್ಯಾಚಾರ ಪ್ರಕರಣ ಹಿಂಪಡೆಯಲು ನಿರ್ಧರಿಸಿದ್ದಳು. ಈ ನಿಟ್ಟಿಯಲ್ಲಿ ಶಾಂತಿನಗರ ಠಾಣೆಗೆ ತೆರಳಿ ದೂರನ್ನು ಹಿಂಪಡೆಯುವ ಕುರಿತು ಎಸ್‍ಐ ರೋಹನ್ ಗೊಂಜಾರಿಗೆ ತಿಳಿಸಿದ್ದಾಳೆ. ಇದಕ್ಕೆ ಒಪ್ಪಿಕೊಂಡ ರೋಹನ್, ಆರೋಪಿ ಸ್ನೇಹಿತನನ್ನು ಬಿಡುಗಡೆ ಮಾಡುತ್ತೇನೆ. ನೀನು ಆಗಸ್ಟ್ 16ರಂದು ರಂಜೋಲಿ ಬೈಪಾಸ್ ಬಳಿ ನನ್ನನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದನಂತೆ.

    ರೋಹನ್ ತಿಳಿಸಿದಂತೆ ಯುವತಿ ರಂಜೋಲಿ ಬೈಪಾಸ್ ಬಳಿಗೆ ಹೋಗಿದ್ದಾಳೆ. ಈ ವೇಳೆ ಅಲ್ಲಿಗೆ ಬಂದ ರೋಹನ್ ಆಕೆಯನ್ನು ಕಲ್ಯಾಣ್ ಟೌನ್‍ನ ಅತಿಥಿ ಗೃಹವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ಕುರಿತು ಎಲ್ಲಿಯೂ ಹೇಳದಂತೆ ಎಚ್ಚರಿಕೆ ನೀಡಿದ್ದಾನೆ. ಆದರೆ ಈ ಕುರಿತು ಯುವತಿ ಕೊಂಗೊನ್ ಠಾಣೆಯಲ್ಲಿ ನವೆಂಬರ್ 21ರಂದು ದೂರು ದಾಖಲಿಸಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಯುವಕನೋರ್ವನ ಬರ್ಬರ ಕೊಲೆ- ರುಂಡ ಕತ್ತರಿಸಿ, ಮುಂಡ ಮಾತ್ರ ಬಿಟ್ಟು ಹೋದರು!

    ಯುವಕನೋರ್ವನ ಬರ್ಬರ ಕೊಲೆ- ರುಂಡ ಕತ್ತರಿಸಿ, ಮುಂಡ ಮಾತ್ರ ಬಿಟ್ಟು ಹೋದರು!

    ಕಲಬುರಗಿ: ಮಾರಕಾಸ್ತ್ರಗಳಿಂದ ರುಂಡ ಕತ್ತರಿಸಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಅಲಗೋಡ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಕಲಬುರಗಿಯ ಭವಾನಿ ನಗರ ನಿವಾಸಿ ಸಿದ್ದೋಜಿ (22) ಮೃತ ಯುವಕ. ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಸಿದ್ದೋಜಿ ಮನೆಯಿಂದ ಹೊರಬಂದಿದ್ದರು. ಅವರ ಹಿಂದೆಯೇ ಬಂದ ಮೂರರಿಂದ ನಾಲ್ಕು ಜನರ ತಂಡವು ಅವರನ್ನು ಅಪಹರಿಸಿದ್ದರು. ಇದನ್ನು ನೋಡಿದ ಸ್ಥಳೀಯರು ಸಿದ್ದೋಜಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

    ಗಾಬರಿಗೆ ಒಳಗಾಗಿದ್ದ ಅವರು ತಕ್ಷಣವೇ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿದ್ದೋಜಿ ಪತ್ತೆಗಾಗಿ ತನಿಖೆ ನಡೆಸಿದ್ದರು. ಇಂದು ಮಧ್ಯಾಹ್ನ ಕಲಬುರಗಿ ನಗರದಿಂದ 15 ಕಿ.ಮೀ. ದೂರದ ಅಲಗೋಡ್ ಗ್ರಾಮದ ಗೋಮಾಳದಲ್ಲಿ ಮೃತದೇಹವೊಂದು ಬಿದ್ದಿದ್ದು, ಅದಕ್ಕೆ ರುಂಡವೇ ಇರಲಿಲ್ಲವೆಂದು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸಿದ್ದೋಜಿ ಕುಟುಂಬಸ್ಥರು ಕೊಲೆಯಾದ ವ್ಯಕ್ತಿ ಸಿದ್ದೋಜಿ ಅವರೇ ಎನ್ನುವುದನ್ನು ಖಚಿತವಾಗಿದೆ.

    ಕೇವಲ ಮುಂಡಭಾಗವಿದ್ದು, ರುಂಡದ ಪತ್ತೆಯಾಗಿಲ್ಲ. ಇತ್ತ ಸಂಜೆ ಮೃತರ ಕುಟುಂಬದವರ ಶಂಕೆ ಆಧಾರ ಮೇಲೆ ಇಬ್ಬರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಈ ಕುರಿತು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವತಿ ಚೆನ್ನಾಗಿದ್ದಾಳೆಂದು ಫೋಟೋ ಕ್ಲಿಕ್ಕಿಸಿದ ಸೆಕ್ಯುರಿಟಿ ಗಾರ್ಡ್ ಬಂಧನ

    ಯುವತಿ ಚೆನ್ನಾಗಿದ್ದಾಳೆಂದು ಫೋಟೋ ಕ್ಲಿಕ್ಕಿಸಿದ ಸೆಕ್ಯುರಿಟಿ ಗಾರ್ಡ್ ಬಂಧನ

    ಬೆಂಗಳೂರು: ಯುವತಿ ಚೆನ್ನಾಗಿದ್ದಾಳೆ ಎಂದು ಫೋಟೋ ಕ್ಲಿಕ್ಕಿಸಿದ ಸೆಕ್ಯುರಿಟಿ ಗಾರ್ಡ್ ನನ್ನು ಬಾಗಲಕುಂಟೆ ಪೊಲೀಸರು ಬಂಧಿಸಿದ್ದಾರೆ.

    ಒಡಿಶಾ ಮೂಲದ ರಾಮಚಂದ್ರ ಬಂಧಿತ ಆರೋಪಿಯಾಗಿದ್ದು, ಈತ ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ಹಲಸೂರಿನಿಂದ ಯುವತಿ ಬಂದಿದ್ದರು. ಆಕೆ ತನ್ನ ಸ್ನೇಹಿತೆಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದರು. ಈ ವೇಳೆ ಆರೋಪಿ ಮೊಬೈಲ್‍ನಲ್ಲಿ ಯುವತಿಯ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾನೆ.

    ಮೊಬೈಲ್ ನ ಫ್ಲ್ಯಾಶ್ ಆನ್ ಆಗಿದ್ದರಿಂದ ಫೋಟೋ ತೆಗೆದಿದ್ದು ಯುವತಿಯ ಗಮನಕ್ಕೆ ಬಂದಿದೆ. ಕೂಡಲೇ ಯುವತಿ ಆರೋಪಿ ಸೆಕ್ಯುರಿಟಿ ಗಾರ್ಡ್ ಬಳಿ ತೆರಳಿ, ಮೊಬೈಲ್ ಕೊಡು ಎಂದು ಕೇಳಿದ್ದಾರೆ. ಆಗ ಆರೋಪಿ ರಾಮಚಂದ್ರ ಗಾಬರಿಯಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಸಾರ್ವಜನಿಕರು ಹಿಡಿದು ಆತನಿಗೆ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ವಶಪಡಿಕೊಂಡಿದ್ದಾರೆ. ಬಳಿಕ ವಿಚಾರಣೆ ವೇಳೆ “ಯುವತಿ ಚೆನ್ನಾಗಿದ್ದಾಳೆ” ಅಂತ ಫೋಟೋ ತೆಗೆದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

    ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪಘಾತದಿಂದ ಕೋಮಾ ಸೇರಿದ್ದ ಯುವತಿಯ ಅಂಗಾಂಗ ದಾನ ಮಾಡಿದ ಪೋಷಕರು

    ಅಪಘಾತದಿಂದ ಕೋಮಾ ಸೇರಿದ್ದ ಯುವತಿಯ ಅಂಗಾಂಗ ದಾನ ಮಾಡಿದ ಪೋಷಕರು

    ಮೈಸೂರು: ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಯುವತಿಯ ಅಂಗಾಂಗಗಳನ್ನು ದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ .

    ಹಾಸನ ಮೂಲದ ನಮನ (21) ಕೋಮಾದಲ್ಲಿರುವ ಯುವತಿ. ಅಪಘಾತದಿಂದ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದ ನಮನ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಮನ ಬದುಕಿ ಉಳಿಯುವುದು ಕಷ್ಟ ಎಂದು ಗೊತ್ತಾಗುತ್ತಿದ್ದಂತೆ ದುಃಖದಲ್ಲಿದ್ದರೂ, ಪೋಷಕರು ಮಗಳ ಅಂಗಾಂಗಳನ್ನು ದಾನ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

    ಜೀರೋ ಟ್ರಾಫಿಕ್ ವ್ಯವಸ್ಥೆ:
    ಸದ್ಯ ನಮನ ಅವರ ಕಿಡ್ನಿ ಹಾಗೂ ಶ್ವಾಸಕೋಶವನ್ನು ಜೀರೋ ಟ್ರಾಫಿಕ್‍ನಲ್ಲಿಯೇ ಮೈಸೂರಿಂದ ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಸಾಗಿಸಲಾಯಿತು. ಇದಕ್ಕೆ ಮೈಸೂರು ನಗರ ಸಂಚಾರ ಪೊಲೀಸರ ಸಹಕಾರ ನೀಡಿದರು.

  • ಅರ್ಜೆಂಟೀನಾ ಸೋತಿದ್ದಕ್ಕೆ ಕೇರಳದ ಮೆಸ್ಸಿ ಅಭಿಮಾನಿ ಆತ್ಮಹತ್ಯೆ!

    ಅರ್ಜೆಂಟೀನಾ ಸೋತಿದ್ದಕ್ಕೆ ಕೇರಳದ ಮೆಸ್ಸಿ ಅಭಿಮಾನಿ ಆತ್ಮಹತ್ಯೆ!

    ತಿರುವನಂತಪುರಂ: ತನ್ನ ಮೆಚ್ಚಿನ ಆಟಗಾರನ ತಂಡ ಸೋತಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

    ಕೇರಳದ ಕೊಟ್ಟಾಯಂನ ದಿನು ಜೋಸೆಫ್ (30) ಆತ್ಮಹತ್ಯೆ ಮಾಡಿಕೊಂಡ ಯುವಕ. ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ದಿನು ಜೋಸೆಫ್‍ನ ಮೆಚ್ಚಿನ ಆಟಗಾರ. ಅಲ್ಲದೇ ದಿನು ಅರ್ಜೆಂಟೀನಾ ತಂಡವನ್ನು ಅಷ್ಟೇ ಬೆಂಬಲಿಸುತ್ತಿದ್ದ.

    2018ರ ಫಿಫಾ ಕಪ್ ಪಂದ್ಯ ಪ್ರಾರಂಭವಾಗಿದ್ದು, ಫುಟ್ ಬಾಲ್ ಪ್ರಿಯರಿಗೆ ದಿನವೂ ಹಬ್ಬ. ಆದರೆ ಜೂನ್ 22ರಂದು ಅರ್ಜೆಂಟೀನಾ ಕ್ರೊವೇಷ್ಯಾ ಎದುರು 3-0 ಗೋಲುಗಳ ಅಂತರಲ್ಲಿ ಸೋತಿತ್ತು. ಇದರಿಂದಾಗಿ ಅರ್ಜೆಂಟೀನಾ ಫಿಫಾ ಕಪ್ 2018ರ ಪಂದ್ಯದಿಂದ ಹೊರ ಬಿಳ್ಳುವ ಸಾಧ್ಯತೆ ಇದೆ ಎನ್ನುವುದನ್ನು ಅರಿತ ದಿನು ಜೋಸೆಫ್ ಆಘಾತಕ್ಕೆ ಒಳಗಾಗಿದ್ದ. ಅಂದು ರಾತ್ರಿ ಮನೆ ಬಿಟ್ಟ ದಿನು ಮತ್ತೆ ಮನೆಯ ಕಡೆಗೆ ಬಂದಿರಲಿಲ್ಲ. ಇದರಿಂದಾಗಿ ದಿನು ಪತ್ತೆಗಾಗಿ ಪೊಲೀಸರು ಹಾಗೂ ಮನೆಯ ಸದಸ್ಯರು ಹುಡುಕಾಟ ಪ್ರಾರಂಭಿಸಿದ್ದರು. ಆದರೆ ಭಾನುವಾರ ದಿನು ಮೃತ ದೇಹ ಸೇತುವೆ ಬಳಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

  • ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಬಿತ್ತು ಧರ್ಮದೇಟು

    ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಬಿತ್ತು ಧರ್ಮದೇಟು

    ದಾವಣಗೆರೆ: ವಾಟ್ಸಾಪ್ ಹಾಗೂ ಫೇಸ್ ಬುಕ್ ಗಳಲ್ಲಿ ಯುವತಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಧರ್ಮದೇಟು ಬಿದ್ದಿರುವ ಘಟನೆ ದಾವಣಗೆರೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ನವ್ಯಜ್ಞಾನ ಜ್ಯೋತಿ ಸಂಸ್ಥೆಯ ಯುವತಿಗೆ ಹಲವು ದಿನಗಳಿಂದ ಯುವಕನೊಬ್ಬ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದನು. ಜಗಳೂರು ತಾಲೂಕಿನ ಕಲ್ಲೇದೇವರಪುರ ಗ್ರಾಮದ ಯುವಕ ಪ್ರತಿನಿತ್ಯ ಫೇಸ್‍ಬುಕ್, ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸುತ್ತಿದ್ದ ಎಂದು ಗುರುತಿಸಲಾಗಿದೆ. ಯುವಕ ಪಟ್ಟಣದ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

    ಯುವತಿಯರಿಗೆ ಬೇರೆಯವರ ಜೊತೆ ಅನೈತಿಕ ಸಂಬಂಧ ಕಲ್ಪಿಸಿ ಸಂದೇಶ ರವಾನಿಸುತ್ತಿದ್ದನು. ಇದರಿಂದ ಮನನೊಂದು ಯುವತಿಯರು ಆ ಯುವಕನನ್ನು ಬುದ್ಧಿವಂತಿಕೆಯಿಂದ ಜಗಳೂರಿಗೆ ಕರೆಸಿ ಸರಿಯಾಗಿ ಕಜ್ಜಾಯ ಕೊಟ್ಟಿದ್ದಾರೆ. ಯುವಕನಿಗೆ ಥಳಿಸುತ್ತಿರುವ ಯುವತಿಯರ ವಿಡಿಯೋ ಇದೀಗ ವೈರಲ್ ಆಗಿದೆ.

    ಸದ್ಯ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.