Tag: yogi adithyanath

  • ಭೇಟಿ ವೇಳೆ ನನಗೆ ಯಾವುದೇ ವಿಶೇಷ ವ್ಯವಸ್ಥೆ ಬೇಡ: ಅಧಿಕಾರಿಗಳಿಗೆ ಯುಪಿ ಸಿಎಂ ಸೂಚನೆ

    ಭೇಟಿ ವೇಳೆ ನನಗೆ ಯಾವುದೇ ವಿಶೇಷ ವ್ಯವಸ್ಥೆ ಬೇಡ: ಅಧಿಕಾರಿಗಳಿಗೆ ಯುಪಿ ಸಿಎಂ ಸೂಚನೆ

    ಲಕ್ನೋ: ರಾಜ್ಯದ ಪ್ರದೇಶಗಳಿಗೆ ಭೇಟಿ ನೀಡುವ ವೇಳೆ ನನಗೆ ಯಾವುದೇ ವಿಶೇಷ ವ್ಯವಸ್ಥೆಗಳನ್ನು ಮಾಡಬೇಡಿ ಅಂತಾ ಉತ್ತರಪ್ರದೆಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದ್ದಾರೆ.

    ರಾಜ್ಯದ ಜನತೆಯನ್ನು ಗೌರವಿಸಿದ್ರೆ ಸಾಕು. ಅದೇ ಮುಖ್ಯಮಮಂತ್ರಿಗೆ ಗೌರವ ಸೂಚಿಸಿದಂತಾಗುತ್ತದೆ. ಹೀಗಾಗಿ ಪರಿಶೀಲನೆ ಅಥವಾ ರಾಜ್ಯ ಪ್ರವಾಸಕ್ಕೆ ತೆರಳುವ ವೇಳೆ ಯಾವುದೇ ವಿಶೇಷ ಆಯೋಜನೆಗಳನ್ನು ಮಾಡಬೇಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

    ಇತ್ತೀಚೆಗಷ್ಟೇ ಹುತಾತ್ಮ ಬಿಎಸ್‍ಎಫ್ ಯೋಧರೊಬ್ಬರ ಮನೆಗೆ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದರು. ಈ ವೇಳೆ ಅವರ ಮನೆಯಲ್ಲಿ ಸೋಫಾ, ಎಸಿ, ಕಾರ್ಪೆಟ್ ಗಳನ್ನು ತಂದು ಅಧಿಕಾರಿಗಳು ಹಾಕಿದ್ದರು. ಸಿಎಂ ಮನೆಯಿಂದ ತೆರಳಿದ ತಕ್ಷಣವೇ ಅವುಗಳನ್ನು ಅಲ್ಲಿಂದ ತೆರವುಗೊಳಿಸಿದ್ದರು. ಅಲ್ಲದೇ ಸಿಎಂ ಭೇಟಿ ನೀಡುವ ಹಿನ್ನೆಲೆಯಲ್ಲಿ ಕುಶಿನಗರ ಜಿಲ್ಲಾಡಳಿತ ಅಲ್ಲಿನ ಬುಡಕಟ್ಟು ಜನಾಂದ ಮಂದಿಗೆ ಸೋಪು-ಶಾಂಪು ನೀಡಿ ಸ್ನಾನ ಮಾಡಿಕೊಂಡು ಶುಚಿಯಾಗಿ ಬರುವಂತೆ ಸೂಚಿಸಲಾಗಿತ್ತು. ಈ ಎಲ್ಲಾ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸಿಎಂ ಗಮನಕ್ಕೆ ಬಂದಿದೆ. ವರದಿಗಳನ್ನು ನೋಡಿದ ಯೋಗಿ ಆದಿತ್ಯನಾಥ್ ವಿಶೇಷ ಸಿದ್ಧತೆಗಳನ್ನು ಮಾಡದಂತೆ ಆದೇಶಿಸಿದ್ದಾರೆ.

  • ಯುಪಿ ಸಿಎಂ ಯೋಗಿ ಆದಿತ್ಯನಾಥ್‍ರನ್ನು ಹೊಗಳಿದ ರಾಹುಲ್ ಗಾಂಧಿ

    ಯುಪಿ ಸಿಎಂ ಯೋಗಿ ಆದಿತ್ಯನಾಥ್‍ರನ್ನು ಹೊಗಳಿದ ರಾಹುಲ್ ಗಾಂಧಿ

    ನವದೆಹಲಿ: ಉತ್ತರಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ಧಾರಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶಂಸೆ ವ್ಯಕ್ತಪಡಿಸಿದ್ದು ಇದೊಂದು ಸರಿಯಾದ ನಿರ್ಧಾರ ಅಂತಾ ಹೇಳಿದ್ದಾರೆ.

    ಇದೇ ವೇಳೆ ರಾಜ್ಯಗಳ ನಡುವೆ ಯಾವುದೇ ತಾರತಮ್ಯ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಾಲ ಮನ್ನಾದಿಂದ ಉತ್ತರಪ್ರದೇಶದ ರೈತರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ, ಆದರೆ ಈ ಹೆಜ್ಜೆ ಸರಿಯಾದ ಮಾರ್ಗದಲ್ಲಿದೆ. ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡುವುದನ್ನ ಕಾಂಗ್ರೆಸ್ ಯಾವಾಗಲೂ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

    ಉತ್ತರಪ್ರದೇಶದಲ್ಲಿ ಕೊನೆಗೂ ಬಿಜೆಪಿ ರೈತರ ಸಾಲ ಮನ್ನಾ ಮಾಡಿರುವುದು ನನಗೆ ಸಂತಸ ತಂದಿದೆ. ದೇಶದಲ್ಲಿ ಸಂಕಷ್ಟದಲ್ಲಿರೋ ಬಡ ರೈತರೊಂದಿಗೆ ರಾಜಕೀಯ ಮಾಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸಲಹೆ ನೀಡಿದ್ರು.

    ಉತ್ತಪ್ರದೇಶದ ಚುನಾವಣೆಯ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿತ್ತು. ಅದರಂತೆ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಯೋಗಿ ಆದಿತ್ಯನಾಥ್ ರಾಜ್ಯದ ರೈತರ 36,359 ಕೋಟಿ ರೂ. ಸಾಲ ಮನ್ನಾ ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ.

    2.15 ಕೋಟಿ ರೈತರಲ್ಲಿ 1 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಇದರ ಜೊತೆಗೆ ಪಾಳು ಬಿದ್ದಿರುವ ಜಮೀನು ಹೊಂದಿರುವ 7 ಲಕ್ಷ ರೈತರ 5,630 ಕೋಟಿ ರೂಪಾಯಿ ಮನ್ನಾ ಮಾಡಿದ್ದಾರೆ.2016ರ ಮಾರ್ಚ್ 31ರವರೆಗೆ ಸಾಲ ಪಡೆದ ರೈತರಿಗೆ ಇದು ಅನ್ವಯವಾಗಲಿದೆ. 2017ರ ಮಾರ್ಚ್‍ಗೆ 31ರವರೆಗೆ ಬಾಕಿಯಿರೋ ಸಾಲವನ್ನ ಸರ್ಕಾರ ಪಾವತಿಸುತ್ತದೆ.

  • ಯೋಗಿ ಆದಿತ್ಯನಾಥ್ ಸಿಎಂ ಆದ್ಮೇಲೆ ಕಾನ್ಪುರದ ಝೂನಲ್ಲಿರೋ ಹುಲಿ, ಸಿಂಹಗಳಿಗೆ ಉಪವಾಸ

    ಯೋಗಿ ಆದಿತ್ಯನಾಥ್ ಸಿಎಂ ಆದ್ಮೇಲೆ ಕಾನ್ಪುರದ ಝೂನಲ್ಲಿರೋ ಹುಲಿ, ಸಿಂಹಗಳಿಗೆ ಉಪವಾಸ

    ಲಕ್ನೋ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆದ ಬಳಿಕ ಅಕ್ರಮ ಕಸಾಯಿಖಾನೆಗಳು ಬಂದ್ ಆಗ್ತಿದೆ. ಇದ್ರಿಂದ ಕಾನ್ಪುರದ ಮೃಗಾಲಯದಲ್ಲಿರೋ ಹುಲಿ, ಸಿಂಹ ಸೇರಿದಂತೆ ಮಾಂಸಹಾರಿ ಪ್ರಾಣಿಗಳು ಉಪವಾಸಕ್ಕೆ ಬಿದ್ದಿವೆ.

    ಕಾನ್ಪುರ ಮಹಾನಗರ ಪಾಲಿಕೆ ವ್ಯಾಪ್ತಿಯ 4 ಕಸಾಯಿಖಾನೆಗಳನ್ನ ಮುಚ್ಚಿಸಿರೋದ್ರಿಂದ ಇಲ್ಲಿನ ಮೃಗಾಲಯದಲ್ಲಿರೋ ಹುಲಿ, ಸಿಂಹ ಸೇರಿದಂತೆ 70 ಮಾಂಸಹಾರಿ ಪ್ರಾಣಿಗಳು ಕಳೆದ ಬುಧವಾರದಿಂದ ಆಹಾರವಿಲ್ಲದೆ ಕಂಗಾಲಾಗಿವೆ.

    ಇಲ್ಲಿರೋ ಗಂಡು ಮಾಂಸಹಾರಿ ಪ್ರಾಣಿಗಳಿಗೆ ದಿನಕ್ಕೆ 12 ಕೆಜಿ ಹಾಗೂ ಹೆಣ್ಣು ಮಾಂಸಹಾರಿಗಳಿಗೆ ದಿನಕ್ಕೆ 10 ಕೆಜಿ ಮಾಂಸ ಬೇಕು. ಹೀಗೆ ದಿನವೊಂದಕ್ಕೆ ಮೃಗಾಲಯಕ್ಕೆ 150 ಕೆಜಿ ಕೋಣದ ಮಾಂಸ ಬೇಕು. ಕಾಂಟ್ರಾಕ್ಟರ್‍ವೊಬ್ಬರು ಮಾಂಸ ಸರಬರಾಜು ಮಾಡುತ್ತಿದ್ದು, ಮಂಗಳವಾರದಂದು ಸರಬರಾಜು ಮಾಡಿದ್ದರು. ಆದ್ರೆ ಈಗ ಮಾಡ್ತಿಲ್ಲ ಎಂದು ಮೃಗಾಲಯದ ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಗರ್ಭಿಣಿ ಮಾಂಸಹಾರಿ ಪ್ರಾಣಿಗಳಿಗೆ ಕೋಳಿ ಮಾಂಸ ನೀಡಲಾಗುತ್ತಿದೆಯಾದರೂ ಅವು ಅದನ್ನು ತಿನ್ನುತ್ತಿಲ್ಲ. ಅನೇಕ ಪ್ರಾಣಿಗಳು ಆಹಾರವನ್ನು ಮುಟ್ಟಿಲ್ಲ  ಎಂದು ತಿಳಿಸಿದ್ದಾರೆ.

  • ಉತ್ತರಪ್ರದೇಶದ ನೂತನ ಸಿಎಂ ವಿರುದ್ಧ ಆಕ್ಷೇಪಾರ್ಹ ಫೋಟೋ: ಯುವಕನ ಬಂಧನ

    ಉತ್ತರಪ್ರದೇಶದ ನೂತನ ಸಿಎಂ ವಿರುದ್ಧ ಆಕ್ಷೇಪಾರ್ಹ ಫೋಟೋ: ಯುವಕನ ಬಂಧನ

    ವಾರಾಣಾಸಿ: ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಕ್ಷೇಪಾರ್ಹ ಫೋಟೋವೊಂದನ್ನು ತನ್ನ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಗಾಝಿಯಾಪುರ ಜಿಲ್ಲೆಯ ಪ್ರೊಫೆಸರ್ಸ್ ಕಾಲೋನಿ ನಿವಾಸಿ ಬಾದ್‍ಶಾಹ್ ಅಬ್ದುಲ್ ರಝಾಕ್(25) ಎಂದು ಗುರುತಿಸಲಾಗಿದ್ದು, ಈತ ಯೋಗಿ ಆದಿತ್ಯನಾಥ್ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಆಕ್ಷೇಪಾರ್ಹ ಫೋಟೋವೊಂದನ್ನು ತನ್ನ ಫೇಕ್ ಅಕೌಂಟಿನಲ್ಲಿ ಅಪ್‍ಲೋಡ್ ಮಾಡಿದ್ದನು. ಈತ ಅಪ್‍ಲೋಡ್ ಮಾಡಿದ್ದ ಕೆಲವೇ ನಿಮಿಷಗಳಲ್ಲಿ ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

    ಇದರ ವಿರುದ್ಧ ಆದಿತ್ಯನಾಥ್ ಸ್ಥಾಪನೆ ಮಾಡಿದ ಹಿಂದೂ ಯುವವಾಹಿನಿ ಅವರು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಜಿಲ್ಲಾಧಿಕಾರಿ ಸಂಜಯ್ ಖಾತ್ರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ರಝಾಕ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ರಝಾಕ್ ಕುಟುಂಬಸ್ಥರು, ಗೆಳೆಯರು ಹಾಗೂ ಯುವವಾಹಿನಿ ನಡುವೆ ವಾಗ್ವಾದ ನಡೆಯಿತು. ನಂತ್ರ ಪೊಲೀಸರು ರಝಾಕ್‍ನನ್ನು ಬಂಧಿಸಿದರು. ಬಳಿಕ ಆತನನ್ನು ತನಿಖೆ ನಡೆಸಿದಾಗ ರಝಾಕ್ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಇನ್ಸ್ ಪೆಕ್ಟರ್ ಸುರೇಂದ್ರ ಕುಮಾರ್ ಪಾಂಡೆ ತಿಳಿಸಿದ್ದಾರೆ.

    ಘಟನೆಯಿಂದಾಗಿ ಪೊಲೀಸರು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿದ್ದರು. ಸೋಮವಾರ ಆರೋಪಿ ರಝಾಕ್‍ನನ್ನು ಕೋರ್ಟ್‍ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

    ಉತ್ತರಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಮಾರ್ಚ್19ರಂದು ಕಾನ್ಶಿರಾಮ್ ಸ್ಮøತಿ ಭವನದ ಎದುರು ಪ್ರಮಾಣ ವಚನ ಸ್ವೀಕರಿಸಿದ್ದರು. ಈ ವೇಳೆ ರಾಜ್ಯಪಾಲ ರಾಮ್ ನಾಯ್ಕ್ ಅವರು ಯೋಗಿ ಆದಿತ್ಯನಾಥ್ ಅವರಿಗೆ ಪ್ರಮಾಣ ವಚನ ಬೋಧಿಸಿದ್ದರು.

    ಇದನ್ನೂ ಓದಿ: ಆದಿತ್ಯನಾಥ್ ಅವರನ್ನೇ ಉತ್ತರ ಪ್ರದೇಶದ ಸಿಎಂ ಆಗಿ ಆಯ್ಕೆ ಮಾಡಿದ್ದು ಯಾಕೆ?

  • ಯುಪಿ ಹೊಸ ಸಿಎಂ ನೋಡಿ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್ ನೆನಪಿಸಿಕೊಂಡ ಜನ!

    ಯುಪಿ ಹೊಸ ಸಿಎಂ ನೋಡಿ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್ ನೆನಪಿಸಿಕೊಂಡ ಜನ!

    ನವದೆಹಲಿ: ಉತ್ತರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಭಾನುವಾರದಂದು ಪ್ರಮಾಣವಚನ ಸ್ವೀಕರಿಸಿದ್ರು. ಸಿಎಂ ಆಗಿ ಆದಿತ್ಯನಾಥ್ ಅವರು ಆಯ್ಕೆಯಾಗಿದ್ದು ಬಹುತೇಕ ಮಂದಿಗೆ ಶಾಕ್ ಆದ್ರೆ ಇನ್ನೂ ಕೆಲವರಿಗೆ ಇದೊಂದು ಖುಷಿಯ ವಿಚಾರವಾಗಿತ್ತು. ಸಿಎಂ ಆಗಿ ಆಯ್ಕೆಯಾದ ಕೆಲವೇ ನಿಮಿಷಗಳಲ್ಲಿ ಆದಿತ್ಯನಾಥ್ ಅವರ ಹೆಸರು ಟ್ವಿಟ್ಟರ್‍ನಲ್ಲಿ ಟ್ರೆಂಡಿಂಗ್ ಆಗಿತ್ತು. ಅದರ ಜೊತೆಗೆ ಹಲಿವುಡ್ ಸ್ಟಾರ್ ವಿನ್ ಡೀಸೆಲ್ ಹೆಸರು ಕೂಡ ಟ್ರೆಂಡಿಂಗ್ ಆಯ್ತು. ಹಾಲಿವುಡ್‍ಗೂ ಉತ್ತರಪ್ರದೇಶಕ್ಕೂ ಏನಪ್ಪಾ ಸಂಬಂಧ ಅಂತೀರಾ? ಇಂಟರ್ನೆಟ್ ಬಳಕೆದಾರರು ಯೋಗಿ ಆದಿತ್ಯನಾಥ್ ಅವರು ನೋಡೋಕೆ ವಿನ್ ಡೀಸೆಲ್ ಥರ ಇದ್ದಾರೆ ಅಂತ ಹೇಳ್ತಿದ್ದಾರೆ.

    ವಿನ್ ಡೀಸೆಲ್ ಹಾಗೂ ಯೋಗಿ ಆದಿತ್ಯನಾಥ್ ಅವರ ಫೋಟೋವನ್ನ ಹಾಕಿ ಅನೇಕ ಮೀಮ್‍ಗಳನ್ನ ಮಾಡಲಾಗಿದೆ. ಅಲ್ಲದೆ ಉತ್ತರಪ್ರದೇಶದ ಸಿಎಂ ಆಗಿದ್ದಕ್ಕೆ ನಿಮಗೆ ಅಭಿನಂದನೆ ಅಂತ ವಿನ್ ಡೀಸೆಲ್ ಅವರ ಟ್ವಿಟ್ಟರ್ ಅಕೌಂಟಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡುವ ಮೂಲಕ ತಮಾಷೆ ಮಾಡಿದ್ದಾರೆ. ಈ ಮೀಮ್‍ಗಳು ಈಗ ಟ್ವಿಟ್ಟರ್‍ನಲ್ಲಿ ವೈರಲ್ ಆಗಿದೆ.

    https://twitter.com/hvgoenka/status/843104263425339392?ref_src=twsrc%5Etfw

    ಇದನ್ನೂ ಓದಿ: ಆದಿತ್ಯನಾಥ್‍ಗೆ ಮೋದಿ ಸಿಎಂ ಪಟ್ಟ ಕಟ್ಟಿದ್ದು ಯಾಕೆ?

    ಭಾನುವಾರದಂದು ಉತ್ತರಪ್ರದೇಶದ 21ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಯೋಗಿ ಆಧಿತ್ಯನಾಥ್ ಗೋರಖ್‍ಪುರದವರಾಗಿದ್ದು ಸತತ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ನಂತರ 44 ವರ್ಷದ ಯೋಗಿ ಆದಿತ್ಯನಾಥ್ ಎರಡನೇ ಅತ್ಯಂತ ಕಿರಿಯ ಸಿಎಂ ಎನಿಸಿಕೊಂಡಿದ್ದಾರೆ.

     

  • ಆಸ್ತಿ ಘೋಷಿಸಿಕೊಳ್ಳಲು ಉತ್ತರಪ್ರದೇಶ ಸಿಎಂ ಆದಿತ್ಯನಾಥ್‍ರಿಂದ ಸಚಿವರಿಗೆ ಖಡಕ್ ಆದೇಶ- 15 ದಿನ ಗಡುವು

    ಆಸ್ತಿ ಘೋಷಿಸಿಕೊಳ್ಳಲು ಉತ್ತರಪ್ರದೇಶ ಸಿಎಂ ಆದಿತ್ಯನಾಥ್‍ರಿಂದ ಸಚಿವರಿಗೆ ಖಡಕ್ ಆದೇಶ- 15 ದಿನ ಗಡುವು

    ಲಕ್ನೋ: ಉತ್ತರಪ್ರದೇಶ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಲೇ ಯೋಗಿ ಆದಿತ್ಯನಾಥ್, ಆಡಳಿತದ ಮೇಲೆ ಪಟ್ಟು ಸಾಧಿಸಲು ಮುಂದಾಗಿದ್ದಾರೆ. ಆಸ್ತಿ ವಿವರ ಬಹಿರಂಗಪಡಿಸುವಂತೆ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಆಸ್ತಿ ವಿವರ ಘೋಷಿಸಿಕೊಳ್ಳಲು 15 ದಿನಗಳ ಕಾಲಾವಕಾಶವನ್ನು ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸಹೋದ್ಯೋಗಿಗಳಿಗೆ ನೀಡಿದ್ದಾರೆ. ಜೊತೆಗೆ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಬೇಡಿ ಎಂದು ಸಚಿವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.

    ಭಾನುವಾರದಂದು ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ 19ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ರು. 44 ವರ್ಷದ ಆದಿತ್ಯನಾಥ್, ಅಖಿಲೇಶ್ ಯಾದವ್ ನಂತರ ಉತ್ತರಪ್ರದೇಶದ ಎರಡನೇ ಅತ್ಯಂತ ಕಿರಿಯ ಸಿಎಂ ಆಗಿದ್ದಾರೆ.