Tag: yoga

  • ಒಂಟಿ ಕಾಲಲ್ಲಿ 60ಮೀಟರ್ ಓಡಿ ವಿಶ್ವ ದಾಖಲೆ  ಸೇರಿದ 10ರ ಪೋರ!

    ಒಂಟಿ ಕಾಲಲ್ಲಿ 60ಮೀಟರ್ ಓಡಿ ವಿಶ್ವ ದಾಖಲೆ ಸೇರಿದ 10ರ ಪೋರ!

    ಚಿಕ್ಕಬಳ್ಳಾಪುರ: ಮನಸ್ಸಿದ್ದರೆ ಮಾರ್ಗ. ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ, ಅಂತೆಯೇ ಇಲ್ಲೊಬ್ಬ ಬಾಲಕ ಮನಸ್ಸು ಮಾಡಿ ಕಠಿಣ ದುರ್ವಾಸ್ ಆಸನ ಕಲಿತು ಒಂದು ಕಾಲನ್ನು ಬೆನ್ನಿಗೆ ತಾಗಿಸಿಕೊಂಡು ಮತ್ತೊಂದು ಕಾಲಲ್ಲಿ ಕೇವಲ ಒಂದು ನಿಮಿಷದಲ್ಲಿ 60 ಮೀಟರ್ ದೂರ ಓಡುವುದರ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸೇರಿದ್ದಾನೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಎನ್.ಆರ್ ಎಕ್ಸಟೇನ್ಷನ್ ನಿವಾಸಿ ಸಂದೀಪ್ ಕೃಷ್ಣಮೂರ್ತಿ ಹಾಗೂ ಅರುಣಾ ದಂಪತಿಯ ಮಗ ಶ್ರೀ ಶೈಲ್ ಈ ಸಾಧನೆ ಮಾಡಿದ ಬಾಲಕ. 10 ವರ್ಷದ ಬಾಲಕ ಶ್ರೀ ಶೈಲ್ ಕಠಿಣ ದುರ್ವಾಸ್ ಆಸನ ಯೋಗ ಕಲಿತು ಪ್ರದರ್ಶನ ಮಾಡುತ್ತಾನೆ. ನಗರದ ಜೈನ್ ಪಬ್ಲಿಕ್ ಶಾಲೆಯಲ್ಲಿ 5 ನೆ ತರಗತಿ ಓದುತ್ತಿದ್ದು, ಮತ್ತೊಂದು ಖಾಸಗಿ ಶಾಲೆಯ ಯೋಗ ಶಿಕ್ಷಕ ಗೋವಿಂದ ಬಳಿ ಯೋಗಾಭ್ಯಾಸ ಮಾಡುತ್ತಿದ್ದಾನೆ.

    ಯೋಗಾಸನದಲ್ಲಿರುವ ಕಠಿಣ ಆಸನಗಳನ್ನು ಕಲಿತಿರುವ ಶ್ರೀ ಶೈಲ್, ಕೇವಲ ಒಂದು ನಿಮಿಷದಲ್ಲಿ ಒಂದು ಕಾಲನ್ನು ಬೆನ್ನಿಗೆ ತಾಗಿಸಿಕೊಂಡು, ಇನ್ನೊಂದು ಕಾಲಲ್ಲಿ 60 ಮೀಟರ್ ದೂರ ರನ್ನಿಂಗ್ ಮಾಡುವುದರ ಮೂಲಕ ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಪಾತ್ರನಾಗಿದ್ದಾನೆ.

    6ನೇ ವಯಸ್ಸಿನಲ್ಲೇ ಶ್ರೀ ಶೈಲ್ ಯೋಗದ ಕಡೆ ಆಕರ್ಷಿತನಾಗಿ ಯೋಗ ಶಿಕ್ಷಕ ಗೋವಿಂದ ಬಳಿ ಯೋಗಾಭ್ಯಾಸ ಮಾಡುತ್ತಿದ್ದಾನೆ. ಯೋಗದ ಕಠಿಣ ಆಸನಗಳನ್ನು ಕರಗತ ಮಾಡಿಕೊಂಡಿರುವ ಈತ ತನ್ನ ದೇಹವನ್ನು ಚಕ್ರದಂತೆ ತಿರುಗಿಸುತ್ತಾನೆ. ಯೋಗ ಪಟುಗಳಲ್ಲೇ ಅತ್ಯಂತ ಚುರುಕಾಗಿರುವ ಬಾಲಕ ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ದುರ್ವಾಸ್ ಆಸನ ಪ್ರದರ್ಶನ ಮಾಡುವ ಬಯಕೆ ಹೊಂದಿದ್ದಾನೆ.

    ಮನಸ್ಸು ಮಾಡಿದರೆ ಏನ್ ಬೇಕಾದರು ಮಾಡಬಹುದು ಎನ್ನುವುದಕ್ಕೆ ಈ ಪೋರನೆ ಸಾಕ್ಷಿ. ಸದ್ಯ ಒಂದು ನಿಮಿಷದಲ್ಲಿ ಕಠಿಣ ದುರ್ವಾಸ್ ಆಸನದಲ್ಲಿ 60 ಮೀಟರ್ ರನ್ನಿಂಗ್ ಮಾಡುತ್ತಿದ್ದು, ಮುಂದೆ ಮೂನ್ನೂರು ಮೀಟರ್ ಓಡುವ ಮೂಲಕ ಗಿನ್ನಿಸ್ ದಾಖಲೆಗೆ ಸೇರಬೇಕು ಎನ್ನುವ ಮಹದಾಸೆ ವ್ಯಕ್ತಪಡಿಸಿದ್ದಾನೆ.

  • ಕೆಲಸದ ಒತ್ತಡದಿಂದ ಬ್ರೇಕ್ ತಗೊಂಡು ಟ್ರಕ್ಕಿಂಗ್ ಹೋದ ಪೊಲೀಸ್ ಅಧಿಕಾರಿಗಳು

    ಕೆಲಸದ ಒತ್ತಡದಿಂದ ಬ್ರೇಕ್ ತಗೊಂಡು ಟ್ರಕ್ಕಿಂಗ್ ಹೋದ ಪೊಲೀಸ್ ಅಧಿಕಾರಿಗಳು

    ಮಂಡ್ಯ: ದಿನನಿತ್ಯ ಕಾನೂನು ಸುವ್ಯವಸ್ಥೆ ಕಾಪಾಡಲು ಕೆಲಸದ ಒತ್ತಡದಲ್ಲಿರುತ್ತಿದ್ದ ಪೊಲೀಸ್ ಅಧಿಕಾರಿಗಳು ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕರಿಘಟ್ಟ ಬೆಟ್ಟದಲ್ಲಿ ಟ್ರಕ್ಕಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ.

    ಬೆಳ್ಳಂಬೆಳಗ್ಗೆ ಮಂಡ್ಯ ಜಿಲ್ಲಾ ಎಸ್‍ಪಿ ರಾಧಿಕಾ ಅವರ ನೇತೃತ್ವದಲ್ಲಿ ಕರಿಘಟ್ಟದ ಬಳಿ ಆಗಮಿಸಿದ ಅಡಿಷನಲ್ ಎಸ್ಪಿ, ಡಿವೈಎಸ್‍ಪಿ, ಸರ್ಕಲ್ ಇನ್ಸ್‍ಪೆಕ್ಟರ್, ಎಸ್‍ಐ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರು ಖುಷಿಯಿಂದ ಬೆಟ್ಟ ಹತ್ತಲಾರಂಭಿಸಿದ್ದರು. ಬೆಟ್ಟದ ಮೇಲಿರುವ ಗಿಡಮರಗಳ ನಡುವೆ ಕಡಿದಾದ ಪ್ರದೇಶದಲ್ಲಿ ಸಾಗುತ್ತ ಬೆಟ್ಟದ ತುದಿ ತಲುಪಿದರು.

    ನಂತರ ಬೆಟ್ಟದ ತುದಿಯಲ್ಲಿ ಕಲ್ಲು ಬಂಡೆ ಮೇಲೆ ಕುಳಿತು ಜೈಕಾರ ಕೂಗಿ ಖುಷಿ ಪಟ್ರು. ಅಲ್ಲಿಂದ ನೇರವಾಗಿ ಬೆಟ್ಟದ ಮೇಲಿರುವ ಶ್ರೀನಿವಾಸ ದೇವಸ್ಥಾನದ ಮುಂಭಾಗಕ್ಕೆ ತೆರಳಿ ಯೋಗ ಮಾಡಿದರು. ಕೆಲಸದ ಒತ್ತಡದಲ್ಲೇ ದಿನ ಕಳೆಯುವ ಪೊಲೀಸರಿಗೆ ಅಪರೂಪಕ್ಕೆ ಟ್ರಕ್ಕಿಂಗ್, ಯೋಗದ ವ್ಯವಸ್ಥೆ ಮಾಡಿದ್ರೆ ಅವರ ಮಾನಸಿಕ, ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ದೇಹ ಕೂಡ ಸದೃಢವಾಗಿರುತ್ತೆ. ಈ ರೀತಿಯ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ಪೊಲೀಸರಿಗೂ ಮುಂದಿನ ದಿನಗಳಲ್ಲಿ ಆಯೋಜನೆ ಮಾಡೋದಾಗಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಧಿಕಾ ತಿಳಿಸಿದ್ರು.

     

     

  • ಗುರುವಿಲ್ಲದೆ ಯೋಗ ಕಲಿತ ಆಧುನಿಕ ಏಕಲವ್ಯ- ಅನಕ್ಷರಸ್ಥ ಯುವಕನ ಯೋಗಾಭ್ಯಾಸಕ್ಕಾಗಿ ಬೇಕಿದೆ ಸಹಾಯ

    ಗುರುವಿಲ್ಲದೆ ಯೋಗ ಕಲಿತ ಆಧುನಿಕ ಏಕಲವ್ಯ- ಅನಕ್ಷರಸ್ಥ ಯುವಕನ ಯೋಗಾಭ್ಯಾಸಕ್ಕಾಗಿ ಬೇಕಿದೆ ಸಹಾಯ

    ಬೆಳಗಾವಿ: ಗುರುವಿಲ್ಲದೆ ಯೋಗ ಕಲಿತ ಆಧುನಿಕ ಏಕಲವ್ಯ ಇವರು. ಗುರು ರಾಮದೇವ ಬಾಬಾ ಅವರ ಯೋಗಾಸನವನ್ನು ಟಿವಿಯಲ್ಲಿ ನೋಡಿ ಕಲಿತಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗುರಗೊಳದ ಅನಕ್ಷರಸ್ಥ ಯುವಕ ಬುಡನ್ ಇತರರಿಗೆ ಯೋಗಾಭ್ಯಾಸ ಹೇಳಿಕೊಡಲು ಸಹಾಯ ಹಸ್ತ ಚಾಚಿದ್ದಾರೆ.

    ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇವರಿಗೆ ಯೋಗಾಸನ ಮಾಡುವದೆಂದರೆ ಎಲ್ಲಿಲ್ಲದ ಖುಷಿ. ನಿರಂತರ ಯೋಗ ಅಭ್ಯಾಸ ಮಾಡುವುದು, ಮುರ್ನಾಲ್ಕು ದಿನಗಳ ಕಾಲ ಅನ್ನ ನೀರು ಸೇವಿಸದೆ ಇರುವುದು ಬುಡನ್ ಹವ್ಯಾಸ. ದಿನಕ್ಕೆರಡು ಬಾರಿ ಯೋಗಾಸನ ಮಾಡುವ ಕಾರಣ ಅತ್ಯಂತ ಕ್ಲಿಷ್ಟಕರ ಆಸನಗಳೂ ಬುಡನ್ ಗೆ ಒಲಿದಿವೆ.

    ಅನಕ್ಷರಸ್ಥರಾದ ಇವರು ಉತ್ತಮ ಆರೋಗ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಯೋಗಾಭ್ಯಾಸವನ್ನು ಜನರಿಗೆ ಹೇಳಿಕೊಡಬೇಕು ಎಂಬ ಇಚ್ಛೆಯಿದೆ. ಆದರೆ ನಾನು ಅನಕ್ಷರಸ್ಥ ಎಂಬ ಆತಂಕ ಮನದಲ್ಲಿ ಭೀತಿ ಹುಟ್ಟಿಸಿದೆ. ಅದಕ್ಕಾಗಿ ಇರಲು ಒಂದು ಸೂರು, ಜೊತೆಗೆ ವ್ಯಕ್ತಿತ್ವ ವಿಕಾಸನದ ತರಬೇತಿ ಬೇಕಾಗಿದೆ ಎಂದು ಬುಡನ್ ಹೇಳುತ್ತಾರೆ.

    ಕಲಿಯುವ, ಕಲಿಸುವ ಹುಮ್ಮಸ್ಸು, ಶ್ರಮ ಜೊತೆಗೆ ಕಠಿಣ ಪರಿಶ್ರಮಪಟ್ಟು ಜೀವನದಲ್ಲಿ ಮುಂದೆ ಬರಬೇಕು ಎಂಬುದು ಇವರ ಜೀವನದ ಗುರಿ. ಆದರೆ ಕಿತ್ತು ತಿನ್ನುವ ಬಡತನ ಗುರಿ ತಲುಪಲು ಬೀಡುತ್ತಿಲ್ಲ. ಸೂಕ್ತ ಮಾರ್ಗದರ್ಶಕರು ಸಿಕ್ಕಲ್ಲಿ ಯೋಗದಲ್ಲಿಯೇ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬುವ ತವಕ ಬುಡನ್ ಹೊಂದಿದ್ದಾರೆ.

     

  • ವಿಶ್ವ ದಾಖಲೆಯ ಯೋಗ-ಏಕಕಾಲಕ್ಕೆ, ಏಕ ಸ್ಥಳದಲ್ಲಿ 60 ಸಾವಿರ ಜನರಿಂದ ಯೋಗ ಪ್ರದರ್ಶನ

    ವಿಶ್ವ ದಾಖಲೆಯ ಯೋಗ-ಏಕಕಾಲಕ್ಕೆ, ಏಕ ಸ್ಥಳದಲ್ಲಿ 60 ಸಾವಿರ ಜನರಿಂದ ಯೋಗ ಪ್ರದರ್ಶನ

    ಮೈಸೂರು: ಇಂದು ನಗರದ ರೇಸ್‍ಕೋರ್ಸ್ ಆವರಣದಲ್ಲಿ ಏಕ ಕಾಲಕ್ಕೆ ಏಕ ಕಾಲದಲ್ಲಿ 60 ಸಾವಿರ ಜನರು ಯೋಗ ಮಾಡುವ ಮೂಲಕ ಸಾಂಸ್ಕøತಿಕ ನಗರಿ ವಿಶ್ವ ದಾಖಲೆ ಬರೆದಿದೆ.

    60 ಸಾವಿರ ಮಂದಿಯಿಂದ ಆನ್‍ಲೈನ್ ಮೂಲಕ ನೊಂದಣಿ ಮಾಡಿಕೊಂಡು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗಾಭ್ಯಾಸ ನಡೆಸಿದರು. ಇಂದು ನಡೆದ ಯೋಗ ದಿನವನ್ನು ಎರಡು ಬೃಹತ್ ಕ್ರೇನ್ ಕ್ಯಾಮಾರ, ಎರಡು ಡ್ರೋಣ್ ಕ್ಯಾಮಾರಗಳನ್ನ ಬಳಸಿ ಕಾರ್ಯಕ್ರಮದ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಇಡೀ ಯೋಗ ಪ್ರದರ್ಶನದ ಸಂಪೂರ್ಣ ವಿಡಿಯೋ ಹಾಗೂ ಟಿಕೆಟ್ ಮಾಹಿತಿಯನ್ನ ಗಿನ್ನಿಸ್ ವರ್ಡ್ ರೇಕಾಡ್ ಸಂಸ್ಥೆಗೆ ರವಾನಿಸಲಾಗುತ್ತದೆ.

    2014ರಲ್ಲಿ ತಮಿಳನಾಡಿನ ಪೆರಂಬೂರಿನ ವಿದ್ಯಾಶಾಲಾದ 3800 ವಿದ್ಯಾರ್ಥಿಗಳು ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನ ಮುರಿಯಲು ಮೈಸೂರು ನಗರದ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಅರಮನೆ ಆವರಣದಲ್ಲಿ ಶನಿವಾರ ಪೂರ್ವ ತಯಾರಿ ನಡೆಸಲಾಗಿತ್ತು. ಅರಮನೆಯ ಆವರಣದಲ್ಲಿ 6001 ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು. ನುರಿತ ಯೋಗಪಟುಗಳಿಂದ ಯೋಗಕ್ಕೆ ಪೂರ್ವಾಭ್ಯಾಸ ತರಬೇತಿ ನೀಡಲಾಗಿದೆ.

     

  • ಋಷಿ ಮುನಿಗಳ ತಪಸ್ಸಿನ ಫಲ ಯೋಗ: ಮೋದಿ

    ಋಷಿ ಮುನಿಗಳ ತಪಸ್ಸಿನ ಫಲ ಯೋಗ: ಮೋದಿ

    ಲಖನೌ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಲಖನೌನಲ್ಲಿ 3ನೇ ಅಂತರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿದರು.

    ಇಂದು ವಿಶ್ವದ 180 ದೇಶಗಳಲ್ಲಿ ಯೋಗ ಫೆಸ್ಟ್ ಮಾಡಲಾಗುತ್ತಿದೆ. ಋಷಿ ಮುನಿಗಳ ತಪಸ್ಸಿನ ಫಲವೇ ಯೋಗವಾಗಿದೆ. ಯೋಗ ಇಂದಿನ ಆಧುನಿಕ ಜೀವನ ಶೈಲಿಗೆ ಮದ್ದು. ಅದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದ್ರಿಂದ ನಿಷ್ಕ್ರೀಯಗೊಂಡಿರುವ ನಮ್ಮ ದೇಹದ ಅಂಗಗಳು ಚೈತನ್ಯ ಪಡೆದುಕೊಳ್ಳುತ್ತಿವೆ ಎಂದು ಮೋದಿ ತಿಳಿಸಿದರು.

    ಯೋಗ ನಾವೆಲ್ಲರೂ ಬದುಕಿನ ಮಾರ್ಗವಾಗಿದೆ. ಪ್ರತಿದಿನ ನಾವು ಊಟ ಮಾಡುವ ಅಡುಗೆಯಲ್ಲಿ ಉಪ್ಪು ಎಷ್ಟೋ ಮುಖ್ಯವೋ, ಜೀವನದಲ್ಲಿ ಯೋಗವೂ ಸಹ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ದಿನಕ್ಕೆ ಒಂದು ಗಂಟೆಯಾದ್ರೂ ಯೋಗ ಮಾಡಲು ಜನರು ರೂಢಿಸಿಕೊಳ್ಳಬೇಕು ಎಂದು ಮೋದಿ ಆಶಯ ವ್ಯಕ್ತಪಡಿಸಿದರು.

    ಸಾವಿರಾರು ಜನರ ಜೊತೆ ಮೋದಿ ಯೋಗ ಮಾಡುತ್ತಿದ್ದು, ಈ ನಡುವೆ ಲಖನೌನಲ್ಲಿ ಮಳೆಯ ಮಧ್ಯೆಯೇ ಯೋಗ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ರಾಜಕೀಯ ಗಣ್ಯರು, ಯೋಗ ಗುರುಗಳು ಸಾಥ್ ನೀಡಿದ್ದಾರೆ.

     

  • ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಮೈಸೂರಿನಲ್ಲಿ ಸಿದ್ಧತೆ

    ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಮೈಸೂರಿನಲ್ಲಿ ಸಿದ್ಧತೆ

    ಮೈಸೂರು: 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಲಾಂಗೆಸ್ಟ್ ಯೋಗ ಚೈನ್ ಲಿಂಕ್ ಗಿನ್ನಿಸ್ ದಾಖಲೆಗೆ ಮುಂದಾಗಿರೋ ಮೈಸೂರಿನ ಯೋಗಪಟುಗಳು ಅರಮನೆ ಆವರಣದಲ್ಲಿ ಶನಿವಾರ ಪೂರ್ವ ತಯಾರಿ ನಡೆಸಿದರು. ಅರಮನೆಯ ಆವರಣದಲ್ಲಿ 6001 ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು. ನುರಿತ ಯೋಗಪಟುಗಳಿಂದ ಚೈನ್ ಲಿಂಕ್ ಯೋಗಕ್ಕೆ ಪೂರ್ವಾಭ್ಯಾಸ ತರಬೇತಿ ನೀಡಲಾಯಿತು.

    2014ರಲ್ಲಿ ತಮಿಳನಾಡಿನ ಪೆರಂಬೂರಿನ ವಿದ್ಯಾಶಾಲಾದ 3800 ವಿದ್ಯಾರ್ಥಿಗಳು ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನ ಮುರಿಯಲು ಮೈಸೂರು ನಗರದ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ.

    ವೀರಭದ್ರಾಸನ ಪ್ರಕಾರ 1 ಹಾಗೂ 2, ತ್ರಿಕೋನಾಸನ, ಪ್ರಸರಿತಪಡೋತ್ತಸನಗಳ ಪ್ರದರ್ಶನ ಮಾಡಲಾಯಿತು. 3 ನಿಮಿಷಗಳಲ್ಲಿ ಯೋಗ ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆಗೆ ಪೂರ್ವಾಭ್ಯಾಸ ನಡೆಸಲಾಯಿತು. ಇದರಿಂದ ಇವತ್ತು ಅರಮನೆ ಆವರಣದ ತುಂಬೆಲ್ಲ ಮಕ್ಕಳ ಯೋಗಾಭ್ಯಾಸದ ಕಲರವ ತುಂಬಿತ್ತು.

     

    https://youtu.be/Savr_5ExB4w

  • ಮಾಲಕಿಯ ಜೊತೆ ಡ್ಯಾನ್ಸ್, ಯೋಗಾಸನ ಮಾಡುತ್ತೆ ಈ ನಾಯಿ: ವಿಡಿಯೋ

    ಮಾಲಕಿಯ ಜೊತೆ ಡ್ಯಾನ್ಸ್, ಯೋಗಾಸನ ಮಾಡುತ್ತೆ ಈ ನಾಯಿ: ವಿಡಿಯೋ

    ವಾಷಿಂಗ್ಟನ್: ಸಾಮಾನ್ಯವಾಗಿ ನಾಯಿಗಳು ಪೇಪರ್ ತಂದು ಕೊಡುವುದು, ಕೆಲವೊಂದು ಬಾರಿ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದನ್ನು ನೋಡಿರ್ತೀರ. ಆದ್ರೆ ನಾಯಿಗಳು ಡ್ಯಾನ್ಸ್ ಮಾಡೋದನ್ನು ಕೇವಲ ಸರ್ಕಸ್‍ನಲ್ಲಿ ಮಾತ್ರ ನೋಡಬಹುದು. ಆದ್ರೆ ಇಲ್ಲೊಂದು ಸಾಕುನಾಯಿ ಮಾಲಕಿಯಂತೆಯೇ ಡ್ಯಾನ್ಸ್ ಮಾಡಿ ಗಮನ ಸೆಳೆದಿದೆ.

    ವಾಷಿಂಗ್ಟನ್‍ನ ಬೆಲ್ಲಿಂಗ್‍ಹ್ಯಾಮ್ ನಿವಾಸಿಯಾದ 16 ವರ್ಷದ ಯುವತಿ ಮೇರಿ, ತನ್ನ ಆಸ್ಟ್ರೇಲಿಯನ್ ಶೆಫರ್ಡ್ ತಳಿಯ 2 ವರ್ಷದ ಮುದ್ದು ನಾಯಿಮರಿ ಜೊತೆ ಐರಿಶ್ ಡ್ಯಾನ್ಸ್ ಸ್ಟೆಪ್ ಕಲಿಯುತ್ತಿರುವ ವಿಡಿಯೋವನ್ನ ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಗೆಳೆಯರೊಬ್ಬರು ಈ ನಾಯಿಗಾಗಿಯೇ ಕೊರಿಯಾಗ್ರಫಿ ಮಾಡಿದ ಸ್ಟೆಪ್ ಕಲಿಯುತ್ತಿದ್ದೇವೆ ಅಂತ ಮೇರಿ ತನ್ನ ಪೋಸ್ಟ್‍ನಲ್ಲಿ ಹೇಳಿದ್ದಾರೆ.

    ಸೀಕ್ರೆಟ್ ಎಂಬ ಹೆಸರಿನ ಈ ನಾಯಿ ಮಾಲಕಿಯೊಂದಿಗೆ ಯೋಗಾಭ್ಯಾಸ ಕೂಡ ಮಾಡಿರುವ ವೀಡಿಯೋಗಳನ್ನ ಮೇರಿ ಹಂಚಿಕೊಂಡಿದ್ದು ಈಗಾಗಲೇ ಈ ನಾಯಿಗೆ ಇನ್ಸ್ಟಾಗ್ರಾಮ್‍ನಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಸುಮಾರು 65 ಸಾವಿರಕ್ಕೂ ಹೆಚ್ಚು ಮಂದಿ ಮೇರಿಯ ಅಕೌಂಟನ್ನ ಫಾಲೋ ಮಾಡ್ತಿದ್ದಾರೆ.

    ಮೇರಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ನಾಯಿ ಹೇಗೆ ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನಿಟ್ಟು ಡ್ಯಾನ್ಸ್ ಕಲಿಯುತ್ತಿದೆ ಎಂಬುವುದನ್ನು ಗಮನಿಸಬಹುದು. ಈ ವೀಡಿಯೋವನ್ನು ಇದುವರೆಗೆ 17 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

    ವಿಡಿಯೋಗೆ ಸಾಕಷ್ಟು ಜನ ಕಮೆಂಟ್‍ಗಳನ್ನು ಮಾಡಿದ್ದಾರೆ. ಅದರಲ್ಲಿ ಕೆಲವರು ಓ ಮೈ ಗಾಡ್ ನಾಯಿ ಎಷ್ಟೊಂದು ಚೆನ್ನಾಗಿ ಡ್ಯಾನ್ಸ್ ಮಾಡುತ್ತೆ ಅಂದ್ರೆ ಇನ್ನೂ ಕೆಲವರು ಇದು ನಿಜಕ್ಕೂ ಅದ್ಭುತವಾಗಿದೆ ಅಂತಾ ಹೇಳಿದ್ದಾರೆ.

    https://www.youtube.com/watch?v=ILmfmHevjBk

     

  • ಗದಗ್‍ನಲ್ಲಿ 3ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ

    ಗದಗ್‍ನಲ್ಲಿ 3ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ

    ಗದಗ: ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗಾಗಿ ಆಗ್ರಹಿಸಿ ಗದಗನಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ 3 ನೇ ದಿನವಾದ ಇಂದು ಮುಂದುವರೆದಿದೆ. ಇಂದು ನಡೆಯುವ ಹೋರಾಟವನ್ನ ಬಸವ ಯೋಗ ಸಮೀತಿಯ ಯೋಗ ಶಿಬಿರ ಮೂಲಕ ಆರಂಭವಾಗಿದೆ. ಇಂದು ಬೆಳಗಿನಜಾವ ಅಸ್ವಸ್ಥಗೊಂಡ ಒಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಇಂದು ಬೆಳಗ್ಗಿನ ಜಾವ ನಡೆದ ಉಪವಾಸ ಸತ್ಯಾಗ್ರಹದ ವೇಳೆ ಜನಸಂಗ್ರಾಮದ ಮುಖಂಡರಾದ ಪ್ರಭುಗೌಡ ಮತ್ತು ಪ್ರತಿಮಾ ನಾಯಕ್ ಎಂಬವರ ಶುಗರ್ ಲೆವಲ್ ಕಡಿಮೆ ಆಗಿ ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಮಾ ನಾಯಕ್ ಮಾತ್ರ ಕೇವಲ ನೀರು ಕುಡಿಯುವ ಮೂಲಕ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಪ್ರತಿಭಟನ ನಿರರತ ಸ್ಥಳದಲ್ಲಿ ಅಂಬುಲೆನ್ಸ್, ವೈದ್ಯರು ಹಾಗೂ ಪೊಲೀಸ್ ಸಿಬ್ಬಂದಿಗಳು ಠಿಕಾಣಿ ಹೂಡಿದ್ದಾರೆ.

    ವೈದ್ಯರು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹೀರೆಮಠರನ್ನು ಚೆಕಪ್ ಮಾಡಲು ಹೋದಾಗ ನನ್ನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿ ಚೆಕಪ್ ಬೇಡ ಎಂದು ಹೇಳಿದ್ದಾರೆ. ತೋಂಟದ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಇಂದು ಅನೇಕ ಸ್ವಾಮಿಜುಗಳು, ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪನವರು, ಪರಿಸರ ಪ್ರೇಮಿಗಳು ಹಾಗೂ ಗದಗ ಜಿಲ್ಲಾ ವಕೀಲರ ಸಂಘದಿಂದ ಇಂದು ತಮ್ಮ ಕಾರ್ಯಕಲಾಪಗಳನ್ನ ಬಹಿಷ್ಕರಿಸಿ ಹೋರಾಟಕ್ಕೆ ಸಾಥ್ ನೀಡ್ತಿದ್ದಾರೆ.

    ಕಪ್ಪತ್ತಗುಡ್ಡ ಉಳಿಯುವಿಕೆಗೆ ಬೃಹತ್ ಪ್ರಮಾಣದಲ್ಲಿ ಇಷ್ಟೆಲ್ಲಾ ಹೋರಾಟ ನಡೆಯುತ್ತಿದ್ರೂ ಇತ್ತ ಮುಖ್ಯಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ಈ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸ.