Tag: yoga

  • 2 ಕಾಲುಗಳಿಲ್ಲದಿದ್ರೂ 12 ವರ್ಷಗಳಿಂದ ಉಚಿತ ಯೋಗ ಪಾಠ ಮಾಡ್ತಿದ್ದಾರೆ ಹುಬ್ಬಳ್ಳಿಯ ಮೃತ್ಯುಂಜಯ

    2 ಕಾಲುಗಳಿಲ್ಲದಿದ್ರೂ 12 ವರ್ಷಗಳಿಂದ ಉಚಿತ ಯೋಗ ಪಾಠ ಮಾಡ್ತಿದ್ದಾರೆ ಹುಬ್ಬಳ್ಳಿಯ ಮೃತ್ಯುಂಜಯ

    ಹುಬ್ಬಳ್ಳಿ: ಕೆಲವರು ಅಂಗವಿಕಲತೆಗೆ ಒಳಗಾದ್ರೆ ಜೀವನವೇ ಮುಗಿಯಿತು ಅಂತ ತಲೆ ಮೇಲೆ ಕೈಹೊತ್ತು ಕೂರುತ್ತಾರೆ. ಆದರೆ ಅಪಘಾತದಲ್ಲಿ ಎರಡು ಕಾಲನ್ನೂ ಕಳೆದುಕೊಂಡಿರೋ ನಮ್ಮ ಪಬ್ಲಿಕ್ ಹೀರೋ ಹುಬ್ಬಳ್ಳಿಯ ಮೃತ್ಯುಂಜಯ ಅವರು ಯೋಗದಲ್ಲಿ ಮಗ್ನರಾಗಿದ್ದಾರೆ.

    ಅಂಗವೈಕಲ್ಯ ಮೆಟ್ಟಿ ನಿಂತು ಯೋಗ ಗುರುವಾಗಿರುವ 45 ವರ್ಷದ ಮೃತ್ಯುಂಜಯ ಹಿರೇಮಠ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಹುಬ್ಬಳ್ಳಿಯ ವಿದ್ಯಾನಗರ ನಿವಾಸಿಯಾಗಿರುವ ಇವರು ಬಿ.ಕಾಂ. ಮುಗಿಸಿದ ಬಳಿಕ ಯೋಗಕ್ಕೆ ಆಕರ್ಷಿತರಾಗಿ ಕಠ್ಮಂಡುವಿನಲ್ಲಿ ಯೋಗ ತರಬೇತಿ ಪಡೆದು ಬಂದಿದ್ದಾರೆ.

    ಕಳೆದ 12 ವರ್ಷಗಳಿಂದ ರಾಜ್ಯ, ಹೊರ ರಾಜ್ಯದಲ್ಲಿಯ ಸಾವಿರಾರು ಜನರಿಗೆ ಯೋಗ ತರಬೇತಿ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಬೆಂಗಳೂರಿನ ಯೋಗ ಕ್ಲಾಸ್ ಮುಗಿಸಿ ವಾಪಸ್ ಆಗುತ್ತಿದ್ದಾಗ ಅಪಘಾತವಾಗಿ ತಮ್ಮ ಎರಡು ಕಾಲು ಕಳೆದುಕೊಂಡಿದ್ದಾರೆ. ಆದರೂ ಯೋಗದ ಮೇಲಿನ ಪ್ರೀತಿ ಮಾತ್ರ ದೂರವಾಗಿಲ್ಲ.

    ಪ್ರತಿದಿನ ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಸ್ನೇಹಿತರು ಮತ್ತು ವಿದ್ಯಾರ್ಥಿಗಳಿಗೆ ಯೋಗ ಕಲಿಸುತ್ತಾರೆ. ಮತ್ತೊಂದು ವಿಶೇಷ ಅಂದ್ರೆ ಇವರು ನೀಡುವ ಯೋಗ ತರಬೇತಿಗೆ ಯಾವುದೇ ಹಣ ಪಡೆಯುವುದಿಲ್ಲ.

    https://www.youtube.com/watch?v=jxRoJimVsR0

  • ಮಗಳ ಜೊತೆ ಗೋಲ್ಡನ್ ಸ್ಟಾರ್ ಯೋಗ!

    ಮಗಳ ಜೊತೆ ಗೋಲ್ಡನ್ ಸ್ಟಾರ್ ಯೋಗ!

    ಬೆಂಗಳೂರು: ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತವಾಗಿ ಇಂದು ಸಾಮಾನ್ಯ ಜನರಿಂದ ಭಾರತದ ತಾರೆಯರು ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಈಗ ಸ್ಯಾಂಡಲ್‍ವುಡ್ ಗೋಲ್ದನ್ ಸ್ಟಾರ್ ಗಣೇಶ್ ತಮ್ಮ ಮಗಳ ಜೊತೆ ಯೋಗ ಮಾಡಿದ್ದಾರೆ.

    ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್, ತಮ್ಮ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಯೋಗಭ್ಯಾಸವನ್ನು ಮಾಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

    ನಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರಾ ಹಾಗೂ ಪುತ್ರ ವಿಹಾನ್‍ನೊಂದಿಗೆ ಯೋಗ ಮಾಡಿದ್ದು, ತನ್ನ ತಂದೆ ಜೊತೆ ಸೇರಿ ಮಗಳು ಚಾರಿತ್ರ್ಯಾ ಕೂಡ ಯೋಗ ಮಾಡಿದ್ದಾರೆ. ಚಾರಿತ್ರ್ಯಾ ಕಷ್ಟ ಇರುವ ಆಸನಗಳನ್ನೆಲ್ಲಾ ತನ್ನ ತಂದೆ ಜೊತೆ ಮಾಡಿ ತೋರಿಸಿದ್ದಾರೆ.

    ಗಣೇಶ್ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ದಿನ ಜಿಮ್‍ಗೆ ಹೋಗಿ ಯೋಗವನ್ನು ಕೂಡ ಮಾಡುತ್ತಾರೆ. ಇದರಿಂದ ಅವರಿಗೆ ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿರಲು ಸಹಾಯ ಮಾಡುತ್ತದೆ. ಗಣೇಶ್ ತಮ್ಮ ಮಗಳ ಜೊತೆ ಯೋಗ ಮಾಡುತ್ತಿರುವ ಫೋಟೋಗಳು ಸಾಕಷ್ಟು ವೈರಲ್ ಆಗಿದೆ.

  • ಯೋಗ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಶಿಕ್ಷಕ ಸಾವು!

    ಯೋಗ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಶಿಕ್ಷಕ ಸಾವು!

    ಬಾಗಲಕೋಟೆ: ಯೋಗ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದಿದೆ.

    ವಿಶ್ವನಾಥ್ ಬಿರಾದಾರ(50) ಮೃತ ದುರ್ದೈವಿ ಶಿಕ್ಷಕ. ತೇರದಾಳ ಪಟ್ಟಣದ ಜೆವಿ ಮಂಡಲ ಸಂಸ್ಥೆಯ ಗುರುಕುಲ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶ್ವನಾಥ್ ಅವರು ಭಾಗಿಯಾಗಿದ್ದರು. ಯೋಗ ಮಾಡುತ್ತಿದ್ದ ವೇಳೆಯೇ ವಿಶ್ವನಾಥ್ ಅವರಿಗೆ ಹೃದಯಾಘಾತವಾಗಿದೆ.

    ವಿಶ್ವನಾಥ್ ಎಸ್.ಜೆ. ಹೆಣ್ಣು ಮಕ್ಕಳ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿದ್ದು, ಮೊದಲಿಂದಲೂ ಯೋಗ ಅಭ್ಯಾಸ ಮಾಡುತ್ತಿದ್ದರು. ಸದ್ಯ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾನ್ಯಾರಿಗೂ ಚಾಲೆಂಜ್ ಹಾಕಲ್ಲ- ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

    ನಾನ್ಯಾರಿಗೂ ಚಾಲೆಂಜ್ ಹಾಕಲ್ಲ- ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

    ಬೆಂಗಳೂರು: ವಿಶ್ವಯೋಗ ದಿನಾಚರಣೆಯ ಅಂಗವಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು, ಪ್ರಧಾನಿ ಮೋದಿಯವರು ಫಿಟ್ ನೆಸ್ ಚಾಲೆಂಜ್ ಗೆ ಇದೇ ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮರಾ ಮುಂದೆ ಯೋಗ ಮಾಡಿದ್ದಾರೆ. ಯೋಗ ಗುರು ಕಾರ್ತಿಕ್ ಮಾರ್ಗದರ್ಶನದಲ್ಲಿ ದೇವೇಗೌಡರು ಯೋಗ ಮಾಡಿದ್ದಾರೆ.

    ಅದ್ಯಾರೋ ಚೇಂಬರ್ ಆಫ್ ಕಾಮರ್ಸ್ ನವರು ಬಂದು ಪ್ಯಾಲೇಸ್ ಗ್ರೌಂಡ್ ನಲ್ಲಿ ಯೋಗಾ ಡೇ ಮಾಡ್ತೀವಿ ಅಂದ್ರು. ನೀವು ಬರಬೇಕು ಅಂತ ಆಹ್ವಾನ ನೀಡಿದ್ರು. ನಾನು ಯಾವಾಗ ನಾನೇ ಯೋಗ ಮಾಡ್ತೀನಿ ಅಂತ ಹೇಳಿದ್ನೋ, ಅವರು ವಾಪಸ್ ಬರಲೇ ಇಲ್ಲ. ಬಹುಶಃ ಮೋದಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕ್ತೀನಿ ಅಂತ. ಆದ್ರೆ ನಾನು ಯಾರಿಗೂ ಚಾಲೆಂಜ್ ಹಾಕಲ್ಲ ಎಂದು ಯೋಗ ಮಾಡುತ್ತಲೇ ಎಚ್ ಡಿಡಿ ಹೇಳಿದ್ದಾರೆ.

    ಇಂದು ವಿಶ್ವ ಯೋಗ ದಿನಾಚರಣೆ. ಮೂರು ವರ್ಷದಿಂದ ಪ್ರಧಾನಿ ಮೋದಿ ಈ ದಿನಾಚರಣೆಯನ್ನು ಆಚರಣೆಗೆ ತಂದಿದ್ದಾರೆ. ಮೋದಿ ಈಗ ಯೋಗಕ್ಕೆ ಒಂದು ಸ್ವರೂಪ ನೀಡಿದ್ದಾರೆ. ಹಿಂದೆ ಋಷಿ-ಮುನಿಗಳು ತಮ್ಮ ಆರೋಗ್ಯವನ್ನು ಯೋಗದಿಂದ ಕಾಪಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರು 100, 200 ವರ್ಷಗಳ ಕಾಲ ಬದುಕುತ್ತಿದ್ದರು. ಈಗಲೂ ಇಂತಹ ಸಾಧಕರು ಹಿಮಾಲಯದಲ್ಲಿ ಬದುಕಿದ್ದಾರೆ. ಇದು ಸತ್ಯ ಎಂದು ಯೋಗ ಬಳಿಕ ಅವರು ಹೇಳಿದ್ರು.

    ನಾನು ಆರೋಗ್ಯ ಕಾಪಾಡಲು ನನ್ನದೇ ಆದ ಕೆಲವೊಂದು ನಿಯಮಗಳನ್ನು ಇಟ್ಟುಕೊಂಡಿದ್ದೇನೆ. ಯೋಗದ ಜೊತೆ ಆಹಾರ ಪದ್ಧತಿಯನ್ನು ಕೂಡ ಅಳವಡಿಸಿಕೊಂಡಿದ್ದೇನೆ. ಆದುದರಿಂದ ನಾನು ಇನ್ನು ಕೆಲಸ ಮಾಡುವ ಮತ್ತು ದುಡಿಮೆ ಮಾಡುವ ಆಸಕ್ತಿ ಇದೆ. ಪ್ರಧಾನಿ ಮೋದಿ ಅವರು ಯೋಗಕ್ಕೆ ಒಂದು ಸ್ವರೂಪ ಕೊಟ್ಟಿದ್ದಾರೆ. ಯೋಗ ನಮಗೆ ಹೊಸದಾಗಿ ಬಂದಿರೋದಲ್ಲ. ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಇನ್ನು ಅನೇಕರು ಯೋಗ ಮಾಡುತ್ತಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.

  • ಕ್ಲಾಸಿಗೆ ಹೋಗದೆ ಯೂಟ್ಯೂಬ್ ನಲ್ಲೇ ಯೋಗ ನೋಡಿ, ಕಲಿತು ಗಿನ್ನೆಸ್ ದಾಖಲೆ ಮಾಡಿದ್ಳು ಉಡುಪಿಯ ಪುಟಾಣಿ!

    ಕ್ಲಾಸಿಗೆ ಹೋಗದೆ ಯೂಟ್ಯೂಬ್ ನಲ್ಲೇ ಯೋಗ ನೋಡಿ, ಕಲಿತು ಗಿನ್ನೆಸ್ ದಾಖಲೆ ಮಾಡಿದ್ಳು ಉಡುಪಿಯ ಪುಟಾಣಿ!

    ಉಡುಪಿ: ಒಂದು ದಿನನೂ ಯೋಗ ಕ್ಲಾಸಿಗೆ ಹೋಗದೆ ಎಲ್ಲರೂ ಹುಬ್ಬೇರಿಸುವ ಕೆಲಸ ಮಾಡಿದ್ದಾಳೆ ಉಡುಪಿಯ ಪೋರಿ ತನುಶ್ರೀ.

    9ರ ಹರೆಯದ ಈಕೆ ಇದೀಗ ವಿಶ್ವ ಮಟ್ಟದಲ್ಲಿ ದಾಖಲೆ ಮಾಡಿದ್ದಾಳೆ. ಯೋಗದ ಮೈ ನವಿರೇಳಿಸುವ ಭಂಗಿ ಪ್ರದರ್ಶಿಸಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾಳೆ. ಗಿರಿಗಿಟ್ಲೆ ತರ ತಿರುಗೋ ಮೂಲಕ ಭಾರತ ಮಣ್ಣಿನ ವ್ಯಾಯಾಮ ಕಲೆಯಾದ ಯೋಗಾಸನ ಮೂಲಕ ಈಕೆ ಗಿನ್ನೆಸ್ ವಿಶ್ವದಾಖಲೆ ಮೆರೆದಿದ್ದಾಳೆ.

    ಉಡುಪಿ ಜಿಲ್ಲೆ ಪಿತ್ರೋಡಿಯ ಉದಯ್ ಕುಮಾರ್ ಹಾಗೂ ಸಂಧ್ಯಾ ದಂಪತಿಯ ಪುತ್ರಿ ತನುಶ್ರೀ, ಯೋಗಾಸನದ ಅತೀ ಕ್ಲಿಷ್ಟಕರವಾದ ನಿರಾಲಂಬ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ನೂತನ ದಾಖಲೆ ಬರೆದಿದ್ದಾಳೆ.

    ಪ್ಯಾಲೆಸ್ತೀನ್‍ನ ಮುಹಮ್ಮದ್ ಅಲ್ ಶೇಖ್ ಹೆಸರಲ್ಲಿದ್ದ ದಾಖಲೆಯನ್ನು ತನುಶ್ರೀ ಮುರಿದಿದ್ದಾಳೆ. ಮುಂಬೈಯಿಂದ ಆಗಮಿಸಿದ್ದ ಗಿನ್ನೆಸ್ ಅಧಿಕಾರಿ ಮುಂದೆ ತನುಶ್ರೀ ವಿಶ್ವ ದಾಖಲೆ ಯೋಗ ಮಾಡಿದ್ದಾಳೆ. ಒಂದು ದಿನವೂ ಯೋಗ ಕ್ಲಾಸಿಗೆ ಹೋಗದ ತನುಶ್ರೀ, ಕೇವಲ ಯೂಟ್ಯೂಬ್ ನೋಡಿ ಈ ವಿದ್ಯೆ ಕಲಿತಿದ್ದಾಳೆ ಅಂತ ತಂದೆ ಉದಯಕುಮಾರ್ ಹೇಳಿದ್ದಾರೆ.

    ಅಂದಹಾಗೆ ತನುಶ್ರೀ ಭರತನಾಟ್ಯ ಪಟು ಕೂಡ. ನಿರಾಲಂಬ ಪೂರ್ಣ ಚಕ್ರಾಸನ ಮಾಡಿ ಪಡೆದ ಗಿನ್ನೇಸ್ ರೆಕಾರ್ಡ್ ಅನ್ನು ಬಾಲೆ ತನುಶ್ರೀ ದೇಶಕ್ಕೆ ಸಮರ್ಪಿಸಿದ್ದಾಳೆ.

    ಒಟ್ಟಿನಲ್ಲಿ ಯೋಗಾಭ್ಯಾಸ ಅಂದ್ರೆ ಆರೋಗ್ಯ ಜೀವನಕ್ಕೆ ಇರುವ ವ್ಯಾಯಾಮ ಅಂದುಕೊಂಡೋರೆ ಜಾಸ್ತಿ. ಆದ್ರೆ ಅದ್ರಲ್ಲೂ ವಿಶ್ವದಾಖಲೆ ಮಾಡಲು ಸಾಧ್ಯ ಎಂದು ಈ ಪುಟ್ಟ ಬಾಲೆ ತೋರಿಸಿಕೊಟ್ಟಿದ್ದಾಳೆ. ಯೋಗದಿಂದ ರೋಗ ದೂರ ಎನ್ನುವ ಈ ಬಾಲೆ ಎಲ್ಲರೂ ಯೋಗ ಮಾಡಿ ಅಂತ ರಿಕ್ವೆಸ್ಟ್ ಮಾಡ್ಕೊಂಡಿದ್ದಾಳೆ.

  • ವಿಶ್ವದಾದ್ಯಂತ ಎಲ್ಲರೂ ಸೂರ್ಯನನ್ನು ಯೋಗದೊಂದಿಗೆ ಸ್ವಾಗತಿಸ್ತಿದ್ದಾರೆ- ಪ್ರಧಾನಿ ಮೋದಿ

    ವಿಶ್ವದಾದ್ಯಂತ ಎಲ್ಲರೂ ಸೂರ್ಯನನ್ನು ಯೋಗದೊಂದಿಗೆ ಸ್ವಾಗತಿಸ್ತಿದ್ದಾರೆ- ಪ್ರಧಾನಿ ಮೋದಿ

    ಡೆಹ್ರಾಡೂನ್: ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 55 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಇಂದು ಯೋಗಸಾನ ಮಾಡಿದ್ರು.

    ಈ ಮೊದಲು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ವಿಶಾಲ ಹಾಗೂ ಸುಂದರ ಮೈದಾನದಲ್ಲಿರುವ ಎಲ್ಲರಿಗೂ ಹಾಗೂ ಎಲ್ಲಾ ಯೋಗ ಪ್ರೇಮಿಗಳಿಗೂ ನಾನು ದೈವ ಭೂಮಿ ಉತ್ತರಾಖಂಡ್ ನಿಂದ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯ ತಿಳಿಸುತ್ತೇನೆ ಅಂದ್ರು.

    ತಾಯಿ ಗಂಗಾ ನೆಲೆಸಿರುವ ಈ ಭೂಮಿಯಲ್ಲಿ ಆದಿಶಂಕರಚಾರ್ಯ ಕಾಲಿಟ್ಟಿದ್ದಾರೆ. ಈ ಜಾಗ ವಿವೇಕಾನಂದ ಅವರಿಗೆ ಪ್ರೇರಣೆ ಮಾಡಿತ್ತು. ಅಂತಹ ಭೂಮಿಯಲ್ಲಿ ನಾವು ಈ ರೀತಿ ಸೇರಿರುವುದು ಯಾವುದೇ ಸೌಭಾಗ್ಯಕ್ಕೆ ಕಡಿಮೆ ಇಲ್ಲ. ಉತ್ತರಾಖಂಡ್ ಹಲವಾರು ದಶಕಗಳಿಂದ ಯೋಗದ ಮುಖ್ಯ ಕೇಂದ್ರವಾಗಿದೆ. ಇಲ್ಲಿನ ಪರ್ವತಗಳು ಸ್ವತಃ ಯೋಗ ಹಾಗೂ ಆಯುರ್ವೇದಕ್ಕೆ ಪ್ರೇರಣೆ ನೀಡುತ್ತದೆ. ಸಾಮಾನ್ಯನಾಗಿರುವ ನಾಗರಿಕ ಈ ಭೂಮಿಗೆ ಬಂದಾಗ ಅವರಿಗೆ ಒಂದು ಬೇರೆ ರೀತಿಯ ದಿವ್ಯ ಅನುಭವ ಆಗುತ್ತದೆ ಅಂತ ತಿಳಿಸಿದ್ರು.

    ಇದು ನಮ್ಮ ಎಲ್ಲ ಭಾರತೀಯರಿಗೆ ಗೌರವದ ಮಾತು. ಏಕೆಂದರೆ ಸೂರ್ಯ ಹುಟ್ಟುತ್ತಲೇ ತಮ್ಮ ಕಿರಣವನ್ನು ಎಲ್ಲೆಡೆ ಹರಡಿಸಿದ್ದಾನೆ. ವಿಶ್ವದಾದ್ಯಂತ ಎಲ್ಲರೂ ಸೂರ್ಯನನ್ನು ಯೋಗದ ಮೂಲಕ ಸ್ವಾಗತಿಸುತ್ತಿದ್ದಾರೆ. ಡೆಹ್ರಾಡೂನ್‍ನಿಂದ ಡಬ್ಲಿನ್ ವರೆಗೂ, ಶಾಂಘೈಯಿಂದ ಚಿಕಾಗೋವರೆಗೂ ಎಲ್ಲಾ ಕಡೆ ಯೋಗ ಮಾಡುತ್ತಿದ್ದಾರೆ. ಹಿಮಾಲಯದ ಸಾವಿರಾರು ಮೇಲಿರುವ ಪರ್ವತಗಳಲ್ಲಿ ಹಾಗೂ ರಾಜಸ್ಥಾನದಲ್ಲಿರುವ ಮರಳುಗಾಡಿನಲ್ಲಿ ಜನರು ಎಲ್ಲ ಪರಿಸ್ಥಿತಿಯಲ್ಲಿ ತಮ್ಮ ಜೀವನವನ್ನು ಸಮೃದ್ಧಿ ಮಾಡುತ್ತಿದ್ದಾರೆ ಅಂದ್ರು.

    ಯುಎಎನ್ ಯೋಗಕ್ಕಾಗಿ ಪ್ರಸ್ತಾವನೆ ನೀಡಿದಾಗ ಎಲ್ಲ ದೇಶದವರು ಈ ಯೋಗಕ್ಕಾಗಿ ಸಹಕಾರ ನೀಡಿದ್ದಾರೆ. ಮೊದಲ ಬಾರಿಗೆ ಕಡಿಮೆ ಸಮಯದಲ್ಲಿ ಯೋಗ ಇಷ್ಟರ ಮಟ್ಟಿಗೆ ಖ್ಯಾತಿಗೊಂಡಿದೆ. ವಿಶ್ವದ ಎಲ್ಲ ಜನರು ಹಾಗೂ ಎಲ್ಲ ದೇಶದವರು ಯೋಗವನ್ನು ತಮ್ಮದೇ ಎಂದುಕೊಳ್ಳುತ್ತಿದ್ದಾರೆ ಅಂತ ಅವರು ನುಡಿದ್ರು.

    ಯೋಗದ ಕುರಿತು ಏರುತ್ತಿರುವ ಪ್ರಚಾರದಿಂದ ಭಾರತ ಇನ್ನಷ್ಟು ಪ್ರಸಿದ್ಧಿಗೊಂಡಿದೆ. ಸ್ವಸ್ತ ಹಾಗೂ ಒಳ್ಳೆಯ ಜೀವನಕ್ಕಾಗಿ ಯೋಗ ಸಮಾಜವನ್ನು ಹೆಚ್ಚು ಸಮೃದ್ಧಿಗೊಳಿಸುತ್ತಿದೆ ಎಂದು ಹೇಳುತ್ತಾ ಮತ್ತೊಮ್ಮೆ ಎಲ್ಲರಿಗೂ 4ನೇ ವಿಶ್ವ ಯೋಗ ದಿನಾಚರಣೆಯ ಶುಭಾಶಯವನ್ನು ಮೋದಿ ತಿಳಿಸಿದ್ರು.

    ಡೆಹ್ರಾಡೂನ್‍ನಲ್ಲಿ 55 ಸಾವಿರಕ್ಕೂ ಹೆಚ್ಚು ಯೋಗಪಟುಗಳಿಂದ ಪ್ರಧಾನಿ ಮೋದಿ ಯೋಗಾಸನ ಮಾಡಿದ್ರು. ಇದೇ ವೇಳೆ ಪ್ರಧಾನಿಯ ಸಂಪುಟ ಸಚಿವರು ಕೂಡ ಯೋಗದಲ್ಲಿ ಭಾಗಿಯಾಗಿದ್ದರು. ಲಕ್ನೋದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ನಾಗ್ಪುರದಲ್ಲಿ ನಿತಿನ್ ಗಡ್ಕರಿ, ಚೆನ್ನೈನಲ್ಲಿ ಸುರೇಶ್ ಪ್ರಭು, ರುದ್ರಪ್ರಯಾಗದಲ್ಲಿ ಉಮಾ ಭಾರತಿ, ಹಜೀಪುರದಲ್ಲಿ ರಾಮ್ ವಿಲಾಸ್ ಪಾಸ್ವಾನ್, ಪಾಟ್ನಾದಲ್ಲಿ ರವಿಶಂಕರ್ ಪ್ರಸಾದ್ ಭಾಗಿಯಾಗಿದ್ದಾರೆ.

    ಇತ್ತ ಬೆಂಗಳೂರಿನಲ್ಲಿ ಅನಂತ್‍ಕುಮಾರ್, ಶಿಮ್ಲಾದಲ್ಲಿ ಜೆ.ಪಿ ನಡ್ಡಾ, ಗ್ವಾಲಿಯರ್ ನಲ್ಲಿ ನರೇಂದ್ರ ಸಿಂಗ್ ತೋಮರ್, ನೋಯ್ಡಾದಲ್ಲಿ ಪಿಯೂಸ್ ಗೋಯೆಲ್, ಮುಂಬೈನಲ್ಲಿ ಪ್ರಕಾಶ್ ಜಾವ್ಡೇಕರ್ ಯೋಗಾಸನ ಮಾಡಿದ್ದಾರೆ.

    ಬ್ರಹ್ಮ ಕುಮಾರಿ ಸಂಸ್ಥೆಯು ದೆಹಲಿ ಕೆಂಪು ಕೋಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಎಸ್‍ಎಫ್, ಸಿಆರ್ ಪಿಎಫ್, ಸಿಐಎಸ್‍ಎಫ್‍ನ ಅರೆಸೇನಾ ತುಕಡಿಯ ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 50 ಸಾವಿರ ಮಂದಿ ಯೋಗದಲ್ಲಿ ಪಾಲ್ಗೊಂಡಿದ್ದಾರೆ.

    ಕೇಂದ್ರ ಆಯುಷ್ಯ ಸಚಿವಾಲಯ ಯೋಗ ಲೋಕೇಟರ್ ಎಂಬ ಹೊಸ ಆ್ಯಪ್‍ನ್ನು ಬಿಡುಗಡೆ ಮಾಡಿದೆ. ಯೋಗವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಬಾರದು ಅಲ್ಲದೇ ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದಲ್ಲ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.

  • ಮಗನಿಗೆ ಚಾಲೆಂಜ್, ಈಗ ಅಪ್ಪನ ಕಸರತ್ತು!

    ಮಗನಿಗೆ ಚಾಲೆಂಜ್, ಈಗ ಅಪ್ಪನ ಕಸರತ್ತು!

    ಬೆಂಗಳೂರು: ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಫಿಟ್ ನೆಸ್ ಚಾಲೆಂಜ್ ಹಾಕಿದ್ದರು. ಆದರೆ ಈಗ ಮಗನಿಗೆ ಚಾಲೆಂಜ್ ಹಾಕಿದ್ದರಿಂದ ಈಗ ಅಪ್ಪ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನ ವರಿಷ್ಠ ಅಧಿಕಾರಿ ಎಚ್.ಡಿ. ದೇವೇಗೌಡರು ಕಸರತ್ತು ಮಾಡುತ್ತಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು ಅಧಿಕಾರಕ್ಕೆ ಸಹ ಬಂದಾಗಿದೆ. ಈಗ ಮತ್ತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ `ಆರೋಗ್ಯ’ದ ಅಖಾಡಕ್ಕಿಳಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ದೇವೇಗೌಡರು ಯೋಗಾಭ್ಯಾಸ ನಿಲ್ಲಿಸಿದ್ದರು. ಆದರೆ ಹೆಚ್‍ಡಿಕೆಗೆ ಮೋದಿ ಸವಾಲು ಹಾಕುತ್ತಿದ್ದಂತೆ ಮತ್ತೆ ಯೋಗಾಭ್ಯಾಸ ಶುರು ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಸವಾಲಿಗೆ ಟಾಂಗ್ ನೀಡಿ ಉತ್ತರ ಕೊಟ್ಟ ಎಚ್‍ಡಿಕೆ

    ಜೂನ್ 21ರ ಯೋಗ ದಿನದಂದು ದೇವೇಗೌಡರಿಂದ ಮೆಗಾ ಯೋಗಾ ಶೋ ನಡೆಯಲಿದೆ. ಶ್ರೀಜಯ ಸರಸ್ವತಿ ಯೋಗಾ ಕೇಂದ್ರದಿಂದ ಯೋಗ ಗುರು ಕಾರ್ತಿಕ್ ಪಟೇಲ್ ರಿಂದ ದೇವೇಗೌಡರ ಯೋಗ ಶೋ ಆಯೋಜನೆಗೊಂಡಿದೆ. ಪ್ರತಿದಿನ ಬೆಳಗ್ಗೆ 7.30 ರಿಂದ 8.30ರ ತನಕ ದೇವೇಗೌಡರು ಯೋಗಾಭ್ಯಾಸ ಮಾಡುತ್ತಿದ್ದಾರೆ.

    ಏನಿದು ಫಿಟ್ ನೆಸ್ ಚಾಲೆಂಜ್:
    ಕೇಂದ್ರ ಯುವಜನ ಮತ್ತು ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ 22ರಂದು,“ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ ನೆಸ್ ಚಾಲೆಂಜ್ ಹಾಕಿ ಟ್ವೀಟ್ ಮಾಡಿದ್ದರು.

    ವಿರಾಟ್ ಕೊಹ್ಲಿ ಸವಾಲು ಸ್ವೀಕರಿಸಿದ ನಂತರ ಅದನ್ನು ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿದ್ದರು. ನಂತರ ಕೊಹ್ಲಿಯವರ ಸವಾಲನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಫಿಟ್ನೆಸ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಸವಾಲನ್ನು ಸ್ವೀಕರಿಸಿದ ಮೋದಿಯವರು ಸಿಎಂ ಕುಮಾರಸ್ವಾಮಿ ಹಾಗೂ ಅಂತರಾಷ್ಟ್ರೀಯ ಟೆಬಲ್ ಟೆನ್ನಿಸ್ ಆಟಗಾರ್ತಿ ಮಣಿಕ ಬಾತ್ರಾ ಅವರಿಗೆ ಚಾಲೆಂಜ್ ನೀಡಿದ್ದರು.

    ಮೋದಿಯವರು ತಮ್ಮ ಫಿಟ್ನೆಸ್ ವಿಡಿಯೋ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದರು. ಮೋದಿ ವಿಡಿಯೋ ಹಾಕಿ ಅದ್ದಕ್ಕೆ, “ಇದು ನನ್ನ ಬೆಳಗ್ಗಿನ ವ್ಯಾಯಾಮಗಳು. ಯೋಗ ಹೊರತಾಗಿ ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶದಿಂದ ಪ್ರೇರಣೆಗೊಂಡು ನಾನು ಟ್ರ್ಯಾಕ್‍ಗಳ ಮೇಲೆ ನಡೆಯುತ್ತೇನೆ. ಇದರ ಜೊತೆ ನಾನು ಉಸಿರಾಟದ ವ್ಯಾಯಾಮವನ್ನು ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದರು.

    ವಿಡಿಯೋ ಅಪ್ಲೋಡ್ ಮಾಡಿದ ನಂತರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಶ್ರೀ ಹೆಚ್.ಡಿ ಕುಮಾರಸ್ವಾಮಿ ಹಾಗೂ ಭಾರತದ ಹೆಮ್ಮೆಯ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಅವರಿಗೆ ಈ ಚಾಲೆಂಜ್ ನೀಡಿದ್ದರು.

  • 1 ಗಂಟೆಗೂ ಹೆಚ್ಚು ಕಾಲ ನೀರಿನ ಮೇಲೆ ಕದಲದೆ ತೇಲಾಡುವ 4 ವರ್ಷದ ಪೋರಿ..!

    1 ಗಂಟೆಗೂ ಹೆಚ್ಚು ಕಾಲ ನೀರಿನ ಮೇಲೆ ಕದಲದೆ ತೇಲಾಡುವ 4 ವರ್ಷದ ಪೋರಿ..!

    ಚಿಕ್ಕಬಳ್ಳಾಪುರ: ನೀರಿನ ಮೇಲೆ ತೇಲಾಡೋಕೆ ಸಾಧ್ಯ ಅನ್ನೋದಾದರೂ ಅದೊಂದು ಕಠಿಣ ಅಭ್ಯಾಸ, ನಿರಂತರ ಪರಿಶ್ರಮದಿಂದಷ್ಟೇ ಅದು ಸಾಧ್ಯ. ಆದರೆ ಸತತ ಯೋಗಭ್ಯಾಸದ ಮೂಲಕ ಕೇವಲ 4 ವರ್ಷದ 8 ತಿಂಗಳ ಪುಟಾಣಿ ಪೋರಿಯೊಬ್ಬಳು ಕೇವಲ 30 ದಿನದಲ್ಲೇ, ನೀರಿನ ಮೇಲೆ ನಿರಾಯಾಸವಾಗಿ ತೇಲಾಡುವ ಮೂಲಕ ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದ್ದಾಳೆ.

    ಪುಟಾಣಿಯ ಹೆಸರು ಅದಿತಿ. ವಯಸ್ಸು ಕೇವಲ 4 ವರ್ಷದ 8 ತಿಂಗಳು. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ರಾಮು-ಅನುಷಾ ದಂಪತಿಯ ಮಗಳು. ತಂದೆ ರಾಮು ಕಂಪೆನಿಯೊಂದರಲ್ಲಿ ಎಚ್.ಆರ್. ಆಗಿದ್ದು, ತಾಯಿ ಅನುಷಾ ಬ್ಯಾಂಕ್ ಎಂಪ್ಲಾಯ್ ಆಗಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಆದರೆ ಬೇಸಿಗೆ ರಜೆಗೆ ಅಂತ ಅಜ್ಜಿ ಮನೆಗೆ ಬಂದಿದ್ದ ಈ ಅದಿತಿ ಕೇವಲ ಒಂದೇ ತಿಂಗಳಲ್ಲಿ ಈಜುವ ಕಲೆಯನ್ನ ಕರಗತ ಮಾಡಿಕೊಂಡಿದ್ದಾಳೆ.

    ಚಿಂತಾಮಣಿ ನಗರದ ಯೋಗ ಗುರು ಗೋವಿಂದ್ ಬಳಿ ಕೇವಲ ಒಂದೇ ತಿಂಗಳಲ್ಲಿ ಕಠಿಣ ಪರಿಶ್ರಮದಿಂದ ಈಜುವ ಕಲೆಯನ್ನು ಕಲಿತ್ತಿದ್ದಾಳೆ. ಜೊತೆಗೆ ಯೋಗಾಭ್ಯಾಸದ ಮೂಲಕ ಕಠಿಣವಾದ ನೀರಿನ ಮೇಲೆ ತೇಲಾಡುವ ಶವಾಸಾನ ಭಂಗಿಯನ್ನ ಕಲಿತು ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದ್ದಾಳೆ. ಸುಮಾರು 30 ಅಡಿ ಆಳದ ಬೃಹಾದಾಕರಾದ ಬಾವಿಯಲ್ಲಿ ಯಾವುದೇ ಆಳಕು ಅಂಜಿಕೆಯಿಲ್ಲದೆ, ಒಂದು ಚೂರು ಅಲುಗಾಡದೆ, ಕದಲದೆ ನೀರಿನ ಮೇಲೆ ತೇಲಾಡುತ್ತಾಳೆ. ಮತ್ತೊಂದೆಡೆ ಬಾವಿಯ ಶೆಡ್ ನ ಮೇಲಿಂದ ಡೈ ಹೊಡಿತಾಳೆ.

    ಎಲ್ಲ ಮಕ್ಕಳಿಗಿಂತ ಬಹುಬೇಗ ಈಜು ಕಲಿತ ಅದಿತಿ, ಬ್ಯಾಕ್ ಸ್ವಿಮ್ಮಿಂಗ್, ಪ್ಲೋಟಿಂಗ್, ಹೈಟ್ ಜಂಪಿಂಗ್ ಸೇರಿದಂತೆ ಈಜಿನಲ್ಲಿ ನಾನಾ ಭಂಗಿಗಳನ್ನ ಪ್ರದರ್ಶಿಸುವ ಮೂಲಕ ಗಮನ ಸೆಳೆಯುತ್ತಿದ್ದಾಳೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಯ ತೇಲಾಡುವ ಮೂಲಕ ಅದಿತಿ ಲಿಮ್ಕಾ ಸಾಧನೆ ಮಾಡಲಿದ್ದಾಳೆ ಎಂದು ಈಜು-ಯೋಗ ಗುರು ಗೋವಿಂದ್ ಹೇಳಿದ್ದಾರೆ.

  • ಪ್ರತಿದಿನ ಬೆಳಿಗ್ಗೆ ಜನರೊಂದಿಗೆ ಸೇರಿ ಯೋಗ ಮಾಡುತ್ತೆ ಈ ಶ್ವಾನ!

    ಪ್ರತಿದಿನ ಬೆಳಿಗ್ಗೆ ಜನರೊಂದಿಗೆ ಸೇರಿ ಯೋಗ ಮಾಡುತ್ತೆ ಈ ಶ್ವಾನ!

    ಬೆಳಗಾವಿ: ನಮ್ಮ ದೇಶದ ಹೆಮ್ಮೆಯ ಯೋಗವನ್ನ ಇಡಿ ವಿಶ್ವವೇ ಒಪ್ಪಿಕೊಂಡಿದೆ. ವಿಶ್ವದಾದ್ಯಂತ ಯೋಗ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ವಿಚಿತ್ರ ಎನ್ನುವಂತೆ ಶ್ವಾನವೊಂದು ದಿನನಿತ್ಯ ಯೋಗ ಮಾಡುತ್ತಿದೆ ಅಂದರೆ ನೀವು ನಂಬಲೇಬೇಕು. ಇದು ವಿಚಿತ್ರವಾದರೂ ನಿಜವಾಗಿದೆ.

    ದಿನನಿತ್ಯ ಶ್ವಾನ ಯೋಗ ಮಾಡುತ್ತಿರುವ ಘಟನೆ ನಡೆಯುತ್ತಿರುವುದು ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪೂರ ಗ್ರಾಮದಲ್ಲಿ. ಕಳೆದ 4 ವರ್ಷಗಳಿಂದ ಈ ಶ್ವಾನ ಯೋಗಾಭ್ಯಾಸ ಮಾಡುವರ ಜೊತೆ ಸೇರಿ ಓಂಕಾರ ಯೋಗವನ್ನು ತಪ್ಪದೆ ಮಾಡುತ್ತಿದೆ.

    ಗ್ರಾಮದ ಹೊರ ವಲಯದಲ್ಲಿ ದಿನನಿತ್ಯ ಯೋಗ ಮಾಡುವರ ಜೊತೆಗೆ ಬೆಳಿಗ್ಗೆ 5 ಗಂಟೆಗೆ ಹಾಜರಾಗುವ ಶ್ವಾನ ಎಲ್ಲರೊಂದಿಗೆ ಸೇರಿ ತಾನೂ ಯೋಗದಲ್ಲಿ ಮಗ್ನನಾಗಿರುವುದು ಜನಸಾಮಾನ್ಯರ ಅಚ್ಚರಿಗೆ ಕಾರಣವಾಗಿದೆ. ಯಾರಿಗೂ ತೊಂದರೆ ನೀಡದೆ ಈ ಶ್ವಾನ ಯೋಗಾಭ್ಯಾಸ ಮಾಡಿ ಯೋಗ ಮುಗಿದ ನಂತರ ಮತ್ತೆ ಬೆಳಿಗ್ಗೆ ಹಾಜರಾಗುತ್ತಿದೆ.

    ಯೋಗಾಭ್ಯಾಸ ಮಾಡದೆ ಇರುವವರು ಪ್ರಾಮಾಣಿಕತೆಗೆ ಹೆಸರಾಗಿರುವ ಶ್ವಾನ ಯೋಗಾಭ್ಯಾಸವನ್ನು ನೋಡಿಯಾದರೂ ಯೋಗ ಮಾಡಿ ತಮ್ಮ ಆರೋಗ್ಯ ಕಾಪಾಡುವಂತಾಗಲಿ ಎಂದು ಸ್ಥಳೀಯ ಬಸವರಾಜ ಮೂಡಲಗಿ ಅವರು ಹೇಳಿದ್ದಾರೆ.

  • ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ 16ರ ಮುಸ್ಲಿಂ ಬಾಲಕಿ

    ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ 16ರ ಮುಸ್ಲಿಂ ಬಾಲಕಿ

    ಬಾಗಲಕೋಟೆ: ದೈಹಿಕ ಸಮಸ್ಯೆ ನೀಗಿಸಿಕೊಳ್ಳಲು ಆರಂಭಿಸಿದ ಯೋಗವೇ ಈಗ ಹದಿನಾರರ ಹರೆಯದ ಮುಸ್ಲಿಂ ಬಾಲಕಿಯನ್ನು ಇಡೀ ಊರೇ ಪ್ರಶಂಸಿಸುವಂತೆ ಮಾಡಿದೆ. ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಯೋಗ ಸಾಧನೆಗೆ ರಾಷ್ಟ್ರ ಮಟ್ಟದ ಚಿನ್ನದ ಪದಕ ಪಡೆದು ಕೊಂಡಿದ್ದಾಳೆ.

    ಜಿಲ್ಲೆಯ ಹುನಗುಂದ ಪಟ್ಟಣದ ವಿಜಯ ಮಹಾಂತೇಶ್ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಖುಷ್ಬು ಮುರ್ತಿಸಾಬ್ ಹವಾಲ್ದಾರ್ ಯೋಗ ಸಾಧಕಿ. ಗ್ರಾಮೀಣ ಭಾಗದ ಬಾಲಕಿ ಹುಟ್ಟಿದ್ದು ಮುಸ್ಲಿಂ ಕುಟುಂಬದಲ್ಲಾದರೂ ಯೋಗದಲ್ಲಿ ಸಾಧನೆ ಮಾಡಿದ್ದಾಳೆ.

    ಬೆಳಗಾವಿ ವಿಭಾಗದಿಂದ ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಯೋಗಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಯೋಗ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ಹದಿನಾರರ ಬಾಲಕಿಯ ಸಾಧನೆಗೆ ತಂದೆ ತಾಯಿ ಹಾಗೂ ಇಡೀ ಶಾಲಾ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ಖುಷ್ಬು ರುಶ್ಚಿಕಾಸನ, ಲಿಖಿರಾಸನ, ತ್ರಿಪುರಾಸನ, ಹೀಗೆ ಸಾಕಷ್ಟು ಯೋಗ ಪ್ರಕಾರದ ಆಸನಗಳನ್ನು ಕಲಿತಿದ್ದಾಳೆ.

    ಖುಷ್ಬುಗೆ ಯೋಗ ಅಂದರೆ ತುಂಬಾ ಇಷ್ಟ. ಅಷ್ಟೇ ಅಲ್ಲದೇ ಆರೋಗ್ಯ ಸಮಸ್ಯೆ ಇದುದ್ದರಿಂದ ಯೋಗ ಮಾಡೋಕೆ ಆರಂಭಿಸಿದ್ದಳು. ಈಗ ರಾಷ್ಟ್ರ ಮಟ್ಟದ ಸಾಧನೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾಳೆ. ಖುಷ್ಬು ಯೋಗ ಸಾಧನೆಗೆ ಪ್ರೇರಕವಾಗಿದ್ದು ವಿಜಯ ಮಹಾಂತೇಶ್ ಪ್ರೌಢಶಾಲೆಯ ದೈಹಿಕ ತರಬೇತಿ ಶಿಕ್ಷಕರಾದ ಎಂಎಸ್ ಮಾವಿನಕಾಯಿ. ಇವರು ಯೋಗದಲ್ಲಿ ಎಂ.ಫಿಲ್ ಮಾಡಿರುವ ಶಿಕ್ಷಕರಾಗಿದ್ದು, ಅವರು ಖುಷ್ಬು ಯೋಗಶ್ರದ್ಧೆ ನೋಡಿ ಸೂಕ್ತ ಕಲಿಕೆ ನೀಡಿದ್ದಾರೆ. ಇದರಿಂದ ತಮ್ಮ ಶಿಷ್ಯೆ ಖುಷ್ಬು ಯೋಗದಲ್ಲಿ ಚಿನ್ನದ ಪದಕ ಪಡೆದಿದ್ದಾಳೆ ಎಂದು ಶಾಲಾ ಮುಖ್ಯ ಶಿಕ್ಷಕ ದಯಾನಂದ್ ಪಾಟೀಲ್ ಹೇಳಿದ್ದಾರೆ.


    ಖುಷ್ಬು ಚಿನ್ನದ ಪದಕ ಪಡೆದಿರುವುದು ತಮಗೆ ಖುಷಿ ತಂದಿದೆ. ಖುಷ್ಬು ಯೋಗ ಸಾಧನೆಯಿಂದ ರಾಜ್ಯ ಹಾಗೂ ಶಾಲೆಗೂ ಸಹ ಹೆಮ್ಮೆ ತರುವಂತೆ ಮಾಡಿದ್ದಾಳೆ. ಕೇವಲ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಖುಷ್ಬು ಸಾಧನೆ ಮಾಡಲಿ ಎಂದು ದೈಹಿಕ ತರಬೇತಿ ಶಿಕ್ಷಕ ಎಂ.ಎಸ್ ಮಾವಿನಕಾಯಿ ತಮ್ಮ ಆಶಯವನ್ನ ವ್ಯಕ್ತಪಡಿಸಿದ್ದಾರೆ.

    ಖುಷ್ಟು ಹವಾಲ್ದಾರ್ ಎಂಬ ಪ್ರತಿಭಾವಂತ ವಿದ್ಯಾರ್ಥಿನಿ ಯೋಗಾಭ್ಯಾಸದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ, ಜಿಲ್ಲೆ ಹಾಗೂ ರಾಜ್ಯದ ಹೆಸರನ್ನ ಬೆಳಗುವಂತೆ ಮಾಡಲಿ ಅನ್ನೋದೆ ಎಲ್ಲರ ಆಶಯವಾಗಿದೆ.

    ಚಿನ್ನದ ಪದಕ