Tag: yoga

  • ದಿನಾ ಬೆಳಗ್ಗೆದ್ದು ಮನೆ ಮಂದಿಯೆಲ್ಲ ಯೋಗ- ಆಸಕ್ತಿ ಇರುವವರಿಗೆ ಮನೆಯಲ್ಲೇ ಉಚಿತ ಪಾಠ

    ದಿನಾ ಬೆಳಗ್ಗೆದ್ದು ಮನೆ ಮಂದಿಯೆಲ್ಲ ಯೋಗ- ಆಸಕ್ತಿ ಇರುವವರಿಗೆ ಮನೆಯಲ್ಲೇ ಉಚಿತ ಪಾಠ

    ವಿಜಯಪುರ: ಸಾಮಾನ್ಯವಾಗಿ ಯೋಗವನ್ನು ಇಚ್ಛೆ ಉಳ್ಳವರು ಮಾಡುತ್ತಾರೆ. ಮನೆಗೆ ಒಬ್ಬರು, ಇಬ್ಬರು ಯೋಗ ಮಾಡೋದು ಸರ್ವೇ ಸಾಮಾನ್ಯ. ಆದರೆ ವಿಜಯಪುರದಲ್ಲಿರುವ ಕುಟುಂಬವೊಂದರ ಎಲ್ಲ ಸದಸ್ಯರು ಪ್ರತಿನಿತ್ಯ ಯೋಗ ಮಾಡುತ್ತಾರೆ. ಜೊತೆಗೆ ಯಾರಾದರೂ ಯೋಗ ಮಾಡುತ್ತೇವೆ ಅಂದರೆ ಅವರಿಗೂ ಉಚಿತವಾಗಿ ಹೇಳಿಕೊಡುತ್ತಾರೆ.

    ವಿಜಯಪುರದ ನಗರ ನಿವಾಸಿ ದತ್ತಾತ್ರೇಯ ಹಿಪ್ಪರಗಿ ಮತ್ತು ಅವರ ಮಂಜುಳಾ ಮತ್ತು ಮಕ್ಕಳಾದ ಶ್ರೀಗಿರಿ ಹಾಗೂ ರಾಘವೇಂದ್ರ ಎಂಬ ನಾಲ್ಕು ಜನರ ಈ ಕುಟುಂಬ ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಂಡಿದೆ. ಇದರ ಜೊತೆ ದತ್ತಾತ್ರೇಯ ಅವರು ಓರ್ವ ಫೋಟೋಗ್ರಾಫರ್ ಕೂಡ ಆಗಿದ್ದು ವಿಜಯಪುರ ನಗರದಲ್ಲೇ ಒಂದು ಸ್ಟುಡಿಯೋ ತೆರೆದು ಜೀವನ ನಡೆಸುತ್ತಿದ್ದಾರೆ. ಇದರ ಜೊತೆಗೆ ಆಸಕ್ತಿ ಇರುವವರಿಗೆ ಯೋಗವನ್ನೂ ಹೇಳಿಕೊಡುತ್ತಿದ್ದಾರೆ.

    ದತ್ತಾತ್ರೆಯ ಅವರ ಬಲ ಭುಜಕ್ಕೆ ಪೆಟ್ಟಾಗಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗಲಿಲ್ಲ. ಇದರ ಜೊತೆಗೆ ದತ್ತಾತ್ರೇಯ ಅವರಿಗೆ ವೈದ್ಯರು ಸಕ್ಕರೆ ಕಾಯಿಲೆ ಬರುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ ಎಂದು ಹೇಳಿದ್ದರಂತೆ. ಆ ಸಮಯದಲ್ಲಿ ಯೋಗಿ ರಾಮದೇವ್ ಬಾಬಾರ ಯೋಗ ನೋಡಿ ಆಕರ್ಷಿತರಾಗಿ ಯೋಗ ಮಾಡಲು 10 ವರ್ಷದ ಹಿಂದೆ ಪ್ರಾರಂಭ ಮಾಡಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಸಕ್ಕರೆ ಕಾಯಿಲೆ ಆಗಲಿ, ಅಂಗಾಂಗಳ ನೋವಾಗಲಿ ಸುಳಿದಿಲ್ಲ ಎಂದು ಅವರು ಹೇಳುತ್ತಾರೆ.

    ಈ ಕಾರಣದಿಂದಲೇ ಅವರು ತಮ್ಮ ಮಕ್ಕಳಿಗೆ 6 ವರ್ಷದ ಮಕ್ಕಳಿಂದಲೇ ಯೋಗ ಅಭ್ಯಾಸ ಹೇಳಿಕೊಟ್ಟು ಪ್ರತಿನಿತ್ಯ ಇಡೀ ಕುಟುಂಬವೇ ಬೆಳಗ್ಗೆ ಎದ್ದು ಯೋಗ ಮಾಡುತ್ತದೆ. ಇದರಿಂದ ನಮ್ಮ ಕುಟುಂಬ ಆರೋಗ್ಯಕರ ಕುಟುಂಬ ಆಗಿದೆ ಎಂದು ದತ್ತಾತ್ರೇಯ ಅವರ ಪತ್ನಿ ಮಂಜುಳಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರ ಮಕ್ಕಳು ಶ್ರೀಗಿರಿ ಮತ್ತು ರಾಘವೇಂದ್ರ ಕೂಡ ತಂದೆ-ತಾಯಿಯನ್ನು ಮೀರಿಸುವ ಮಟ್ಟಿಗೆ ಚಕ್ರಾಸನ, ಪ್ರಾಣಾಯಾಮ, ವೃಚ್ಚಿಕಾಸನ, ಕೌಂಡಿನ್ಯಾಸನ ಸೇರಿದಂತೆ ಕಷ್ಟಕರ ಯೋಗದ ಆಸನಗಳನ್ನು ಮಾಡುತ್ತಾರೆ.

    ಯೋಗದಿಂದ ದತ್ತಾತ್ರೇಯ ಅವರ ಇಬ್ಬರು ಮಕ್ಕಳು ಜಿಲ್ಲೆ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಮ್ಮ ಕುಟುಂಬದಂತೆ ಎಲ್ಲರು ಆರೋಗ್ಯಕರವಾಗಿರಬೇಕು ಅನ್ನೋದೇ ಇವರ ಮೂಲ ಉದ್ದೇಶ ಎಂದು ಅವರು ಹೇಳುತ್ತಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಆರೋಗ್ಯ ರಕ್ಷಣೆಗಾಗಿ ಯೋಗ- ಜಿಲ್ಲಾದ್ಯಂತ 37 ಉಚಿತ ಕೇಂದ್ರ ತೆರೆದಿದ್ದಾರೆ ಪೋಸ್ಟ್ ಮಾಸ್ಟರ್

    ಆರೋಗ್ಯ ರಕ್ಷಣೆಗಾಗಿ ಯೋಗ- ಜಿಲ್ಲಾದ್ಯಂತ 37 ಉಚಿತ ಕೇಂದ್ರ ತೆರೆದಿದ್ದಾರೆ ಪೋಸ್ಟ್ ಮಾಸ್ಟರ್

    – ಇತ್ತ ಗದಗ್ ನಲ್ಲಿ ನಿವೃತ್ತ ಶಿಕ್ಷಕಿ ಈಗ ಯೋಗ ಗುರು

    ಚಿತ್ರದುರ್ಗ/ಗದಗ: ಇಂದು ವಿಶ್ವದ್ಯಾಂತ 5ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಹಾಗೆಯೇ ಕರ್ನಾಟಕದಲ್ಲೂ ಯೋಗ ದಿನದ ಅಂಗವಾಗಿ ಯೋಗಾಸನ ಮಾಡುವ ಮೂಲಕ ಆಚರಿಸಲಾಗುತ್ತಿದೆ. ಜಿಲ್ಲೆಯ ನಿವೃತ್ತ ಪೋಸ್ಟ್ ಮಾಸ್ಟರ್ ಮಲ್ಲಿಕಾರ್ಜುನ್ ಅವರ ವಯಸ್ಸು 70. ಆದರೂ ಚಿರಯುವಕನಂತೆ ಸದಾ ಉತ್ಸಾಹದಿಂದಿರೋ ಇವರ ತೇಜಸ್ಸಿನ ಗುಟ್ಟೆ ಯೋಗ.

    ಒಂದು ಹೊತ್ತಿನ ಊಟ ಬಿಟ್ಟರೂ ಇವರು ಯೋಗ ಮಾತ್ರ ಬಿಡಲ್ಲ. ಕಳೆದ 12 ವರ್ಷಗಳ ಹಿಂದೆ ಸಿದ್ದ ಸಮಾದಿ ಯೋಗಾದಿಂದ ಆರೋಗ್ಯ ರಕ್ಷಣೆಗಾಗಿ ಯೋಗಾಭ್ಯಾಸದಲ್ಲಿ ತೊಡಗಿದ ಇವರು ಚಿತ್ರದುರ್ಗ ಜಿಲ್ಲಾ ಪತಾಂಜಲಿ ಯೋಗಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

    ಜಿಲ್ಲೆಯಾದ್ಯಂತ ಪತಂಜಲಿ ಸಹಯೋಗದೊಂದಿಗೆ 37 ಉಚಿತ ಯೋಗ ಕೇಂದ್ರಗಳನ್ನು ತೆರೆದಿರೋ ಇವರು 40 ಜನ ನುರಿತ ಯೋಗ ಶಿಕ್ಷಕರನ್ನು ನೇಮಿಸಿದ್ದಾರೆ. ಪ್ರತಿ ತಿಂಗಳು ತಮ್ಮ ಜೇಬಿನಿಂದ 5000 ಹಣವನ್ನು ಖರ್ಚು ಮಾಡಿಕೊಂಡು ಯೋಗ ಕುರಿತು ಮಾರ್ಕೆಟಿಂಗ್ ಮಾಡುವ ಮೂಲಕ ಯೋಗಾವನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಯೋಗ ಶಿಕ್ಷಕ ಶಿವಲಿಂಗಪ್ಪ ಹೇಳಿದರು.

    ಇತ್ತ ಗದಗದಲ್ಲಿ ನಿವೃತ್ತಿಯಾದ್ರೂ ಶಿಕ್ಷಕಿ ಪದ್ಮಾವತಿ ಬಿ.ಹುಂಬಿ ಕಳೆದ 35 ವರ್ಷಗಳಿಂದ ಯೋಗಾಭ್ಯಾಸದ ವಿದ್ಯೆಯನ್ನು ಜನರಿಗೆ, ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ. ಅಷ್ಟೇ ಅಲ್ಲ ಯೋಗದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಅಷ್ಟೇ ಅಲ್ಲ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಕಳೆದ 35 ವರ್ಷಗಳಿಂದ ಪ್ರೌಢಶಾಲೆಯ ಸಹ ಶಿಕ್ಷಕಿಯಾಗಿ ಕೆಲಸ ಮಾಡಿ ಈಗ ನಿವೃತ್ತಿಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೂ ಇವರು ಹಿಂದೆ ಬೀಳದೆ 2001ರಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ, ಮ್ಯಾತ್ಸ್ ಎಕ್ಷಲೆಂಟ್ ಟೀಚರ್ ಅವಾರ್ಡ್ ಸೇರಿದಂತೆ ಹಲವು ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಬಳಿಕ ಯೋಗ ಗುರುವಾಗಿ ಗುರುತಿಸಿಕೊಂಡಿದ್ದಾರೆ.

    ಒಟ್ಟಿನಲ್ಲಿ ಅಂತರಾಷ್ಟ್ರೀಯ ಯೋಗಾ ದಿನಾಚರಣೆ ಈ ಸಂದರ್ಭದಲ್ಲಿ ಇಂತಹ ಯೋಗಪಟುಗಳನ್ನು ಸಮಾಜ ಗುರ್ತಿಸಿ ಗೌರವಿಸಬೇಕಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನೀರಿನಲ್ಲಿ ತೇಲುತ್ತಾ 20ಕ್ಕೂ ಹೆಚ್ಚು ಆಸನಗಳನ್ನು ಮಾಡ್ತಾರೆ ಆನೇಕಲ್ ಸಹೋದರಿಯರು

    ನೀರಿನಲ್ಲಿ ತೇಲುತ್ತಾ 20ಕ್ಕೂ ಹೆಚ್ಚು ಆಸನಗಳನ್ನು ಮಾಡ್ತಾರೆ ಆನೇಕಲ್ ಸಹೋದರಿಯರು

    ಬೆಂಗಳೂರು: ಇಂದು ಐದನೇ ವಿಶ್ವ ಯೋಗ ದಿನ. ಆರೋಗ್ಯಕರ ಜೀವನಕ್ಕಾಗಿ ಯೋಗ ಮಾಡೋದು ಒಳ್ಳೆಯದು ಇಂತಹ ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಸಾಧು- ಸಂತರು ಕೊಡುಗೆ ಕೊಟ್ಟಿದ್ದು ಋಷಿಮುನಿಗಳು ನೀರಿನಲ್ಲಿ ತೇಲುತ್ತಾ ಯೋಗ ಪ್ರದರ್ಶಿಸುತ್ತಿದ್ದರು. ಇದೀಗ ಅದೇ ರೀತಿ ನೀರಿನಲ್ಲಿ ಓರ್ವ ಸಾಮಾನ್ಯ ರೈತನ ಹೆಣ್ಣು ಮಕ್ಕಳು ವಿಶ್ವ ಆರೋಗ್ಯ ದಿನದ ಹಿನ್ನೆಲೆಯಲ್ಲಿ ಯೋಗ ಪ್ರದರ್ಶನ ನೀಡಿದ್ದಾರೆ.

    ಹೌದು. ನಿತ್ಯಾಶ್ರೀ ಹಾಗೂ ತನುಶ್ರೀ ಎಂಬ ಸಹೋದರಿಯರು ನೀರಿನ ಮೇಲೆ ತೇಲುತ್ತಾ ಕೈಯಲ್ಲಿ ನಾನಾ ರೀತಿಯ ಯೋಗಾಸನಗಳನ್ನು ಪ್ರದರ್ಶನ ಮಾಡಿದ್ದಾರೆ. ಬೆಂಗಳೂರಿನ ಕೂಗಳತೆ ದೂರಲ್ಲಿರೋ ಆನೇಕಲ್ ಪಟ್ಟಣದ ಈ ಸಹೋದರಿಯರಿಬ್ಬರು 2 ವರ್ಷ ವಯಸ್ಸಿನಿಂದಲೇ ತಂದೆ ಸುಬ್ಬಣ್ಣರಿಂದ ಯೋಗ ಕಲಿಯುತ್ತಿದ್ದಾರೆ. ಎಲ್ಲರೂ ನೆಲದ ಮೇಲೆ ವಿವಿಧ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿದರೆ ಈ ಸಹೋದರಿಯರು, ನೀರಿನಲ್ಲಿ ತೇಲುತ್ತಾ ಸುಮಾರು ಇಪ್ಪತ್ತಕ್ಕೂ ಹೆಚ್ಚು ಆಸನಗಳನ್ನು ಮಾಡೋದು ಇವರ ವೈಶಿಷ್ಟ್ಯ.

    ನೀರಿನಲ್ಲಿ ಮಾಡೋ ಈ ಯೋಗಕ್ಕೆ ಕೃಷಿಕ ತಂದೆ ಸುಬ್ರಹ್ಮಣ್ಯರೇ ಗುರು. ಅದೂ ಅಲ್ಲದೇ ತಾನು ಕೂಡ ಯಾವುದೇ ಗುರುಗಳ ಬಳಿ ಯೋಗ ಕಲಿತಿಲ್ಲ. ಋಷಿಮುನಿಗಳು ನೀರಿನ ಮೇಲೆ ತೇಲುತ್ತಲೇ ಯೋಗದ ಭಂಗಿಗಳನ್ನು ಪ್ರದರ್ಶಿಸುತ್ತಿದ್ದರು ಎನ್ನುವುದನ್ನು ತಿಳಿದು ಪುಸ್ತಕಗಳನ್ನು ಓದಿ, ಅಭ್ಯಾಸ ಮಾಡಿ ತಮ್ಮ ಮಕ್ಕಳಿಗೂ ಹೇಳಿಕೊಟ್ಟಿರುವುದಾಗಿ ಯೋಗಪಟು ಸುಬ್ರಹ್ಮಣ್ಯ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಯೋಗ ವಿಶ್ವದಲ್ಲೇ ಪ್ರಸಿದ್ಧಿಯಾಗಿದ್ದು ಇದೀಗ 5ನೇ ವರ್ಷವನ್ನು ಆಚರಿಸುತ್ತಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಯೋಗಾಸನದಿಂದ ಚಿನ್ನದ ಪ್ರಶಸ್ತಿ ಗಳಿಸಿದ ಮುಸ್ಲಿಂ ಬಾಲಕಿ

    ಯೋಗಾಸನದಿಂದ ಚಿನ್ನದ ಪ್ರಶಸ್ತಿ ಗಳಿಸಿದ ಮುಸ್ಲಿಂ ಬಾಲಕಿ

    – ದೈಹಿಕ ಸಮಸ್ಯೆ ನೀಗಿಸಲು ಆರಂಭ

    ಬಾಗಲಕೋಟೆ: ಗ್ರಾಮೀಣ ಭಾಗದ ಆ ಬಾಲಕಿ ಹುಟ್ಟಿದ್ದು ಮುಸ್ಲಿಂ ಕುಟುಂಬದಲ್ಲಾದ್ರೂ, ಆಕೆಯ ಯೋಗ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪ್ರಶಸ್ತಿ ಲಭಿಸಿದೆ. ಹದಿನಾರರ ಬಾಲಕಿಯ ಸಾಧನೆಗೆ ತಂದೆ-ತಾಯಿ ಅಲ್ಲದೆ ಇಡೀ ಶಾಲಾ ಸಿಬ್ಬಂದಿಯೇ ಅಭಿನಂದನೆ ಸಲ್ಲಿಸಿ, ಖುಷಿ ಪಟ್ಟಿದೆ. ದೈಹಿಕ ಸಮಸ್ಯೆ ನೀಗಿಸಿಕೊಳ್ಳಲು ಆರಂಭಿಸಿದ ಯೋಗವೇ ಬಾಲಕಿಯನ್ನು ಕೊಂಡಾಡುವಂತೆ ಮಾಡಿದೆ.

    ಯೋಗಾಸನ ಮನಸ್ಸು ಮತ್ತು ದೇಹವನ್ನ ಪ್ರಫುಲ್ಲಗೊಳಿಸುತ್ತದೆ. ಯೋಗಾಸನ ಅಂದರೆ ಮುಸ್ಲಿಂ ಸಮುದಾಯ ಸ್ವಲ್ಪ ದೂರ. ಹಿಂದೊಮ್ಮೆ ಯೋಗಾಸನ ವಿಚಾರದಲ್ಲಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಮ್ಮ ಸಮುದಾಯದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಯೋಗ ಸಾಧಕಿಯ ಹೆಸರು ಖುಷ್ಬು ಮುರ್ತಿಸಾಬ್ ಹವಾಲ್ದಾರ್. ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ರೂ ಯೋಗ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

    ಹದಿನಾರರ ಈ ಬಾಲಕಿ ಯೋಗಾಭ್ಯಾಸ ಮಾಡಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. ರುಶ್ಚಿಕಾಸನ, ಲಿಖಿರಾಸನ, ತ್ರಿಪುರಾಸನ, ಹೀಗೆ ಸಾಕಷ್ಟು ಯೋಗ ಪ್ರಕಾರದ ಆಸನಗಳಲ್ಲಿ ದೇಹ ದಂಡಿಸೋ ಈಕೆ ಬಾಗಲಕೋಟೆ ಜಿಲ್ಲೆಯ ಹುನಗುಂದದವಳು. ಖುಷ್ಬು ಹಲವು ವರ್ಷಗಳಿಂದ ಬೆಳಗಾವಿ ವಿಭಾಗದಿಂದ ಒಬ್ಬಳೇ ಕರ್ನಾಕಟದ ಪರ ದೇಶವನ್ನ ಪ್ರತಿನಿಧಿಸಿ, ರಾಷ್ಟ್ರಮಟ್ಟದ ಯೋಗಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಇದರಿಂದ ಪೋಷಕರು ಹಾಗೂ ರಾಜ್ಯದ ಕೀರ್ತಿ ಕೂಡ ಹೆಚ್ಚಿಸಿದ್ದಾಳೆ.

    ಖುಷ್ಬು ಹವಾಲ್ದಾರ್, ಯೋಗ ಸಾಧನೆ ಮಾಡೋದರ ಹಿಂದೆ ಇಂಟ್ರೆಸ್ಟಿಂಗ್ ಸಂಗತಿ ಇದೆ. ಖುಷ್ಬುಗೆ ಯೋಗ ಅಂದರೆ ತುಂಬಾ ಇಷ್ಟ ಇತ್ತಂತೆ. ಅಲ್ಲದೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಯೋಗ ಮಾಡೋಕೆ ಆರಂಭಿಸಿ, ಸದ್ಯ ರಾಷ್ಟ್ರ ಮಟ್ಟದ ಸಾಧನೆ ಮಾಡೋ ಮಟ್ಟಕ್ಕೆ ಬೆಳೆದಿದ್ದಾಳೆ. ಈಕೆಯ ಈ ಸಾಧನೆಗೆ ವಿಜಯ ಮಹಾಂತೇಶ್ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಎಂ ಎಸ್ ಮಾವಿಕಾಯಿ ಪ್ರೇರಣೆಯಾಗಿದ್ದಾರೆ.

    ಒಟ್ಟಾರೆ ಖುಷ್ಟು ಹವಾಲ್ದಾರ್ ಎಂಬ ಪ್ರತಿಭಾವಂತ ವಿಧ್ಯಾರ್ಥಿನಿ ಯೋಗಭ್ಯಾಸದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ, ಜಿಲ್ಲೆ ಹಾಗೂ ರಾಜ್ಯದ ಹೆಸರನ್ನ ಇನ್ನಷ್ಟು ಬೆಳಗುವಂತೆ ಮಾಡಲಿ ಅನೋದು ಎಲ್ಲರ ಆಶಯವಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮೈಕೊರೆಯುವ ಚಳಿಯಲ್ಲಿ ಐಟಿಬಿಪಿ ಸಿಬ್ಬಂದಿಯ ಯೋಗ- ವಿಡಿಯೋ ವೈರಲ್

    ಮೈಕೊರೆಯುವ ಚಳಿಯಲ್ಲಿ ಐಟಿಬಿಪಿ ಸಿಬ್ಬಂದಿಯ ಯೋಗ- ವಿಡಿಯೋ ವೈರಲ್

    ಲದಾಖ್: ವಿಶ್ವ ಯೋಗ ದಿನಕ್ಕೆ ಇನ್ನೇನೂ ಕೆಲವು ದಿನಗಳು ಮಾತ್ರ ಬಾಕಿ ಇದ್ದು, ದೇಶದೆಲ್ಲೆಡೆ ಈ ಸುದಿನಕ್ಕಾಗಿ ತಯಾರಿ ನಡೆಯುತ್ತಿದೆ. ಈ ಮಧ್ಯೆ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿ ಲದಾಖ್‍ನಲ್ಲಿ ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಸುದ್ದಿಯಾಗಿದ್ದಾರೆ.

    ಸುಮಾರು 18,000 ಅಡಿ ಎತ್ತರದ ಲದಾಖ್‍ನಲ್ಲಿ ಹಿಮವೀರರು ಎಂದು ಕರೆಸಿಕೊಳ್ಳುವ ಐಟಿಬಿಪಿ ಯೋಧರು ಯೋಗ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜೂನ್ 21ರಂದು ನಡೆಯುವ 5ನೇ ವಿಶ್ವ ಯೋಗ ದಿನದ ಪ್ರಯುಕ್ತ ಹಿಮದ ರಾಶಿ ನಡುವೆ ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇದನ್ನೂ ಓದಿ:ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ಐಟಿಬಿಪಿ ಸಿಬ್ಬಂದಿ ಯೋಗ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಹಿಂದೆ ಇದೇ ಯೋಧರು ಹಿಮದಲ್ಲಿ ಉಣ್ಣೆಯ ವಸ್ತ್ರಗಳನ್ನು ತೆಗೆದು ಯೋಗ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

    ಈ ಬಗ್ಗೆ ಕೇಂದ್ರ ಮಂತ್ರಿ ಶ್ರೀಪಾದ್ ಎಸ್ಸೋ ನಾಯಕ್ ಅವರು ಮಾತನಾಡಿ, ಈ ಬಾರಿಯ ಯೋಗ ದಿನ ‘ಹೃದಯಕ್ಕಾಗಿ ಯೋಗ’ ಎಂಬ ಧ್ಯೇಯವನ್ನು ಇಟ್ಟುಕೊಂಡು ಆಚರಿಸಲಾಗುತ್ತಿದೆ. ಯೋಗ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಜನರ ಜೀವನದಲ್ಲಿ ಯೋಗ ಪ್ರಮುಖ ಅಂಶವಾಗಿದೆ. ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದು ನಮ್ಮ ರಾಷ್ಟ್ರದ ಹೆಮ್ಮೆ ಎಂದು ಹೇಳಿದರು.

    ಯೋಗ ಹಾಗೂ ಯೋಗದ ಪ್ರಾಮುಖ್ಯತೆ ಬಗ್ಗೆ ಐಟಿಬಿಪಿ ಅಧಿಕಾರಿಗಳು ಸಿಬ್ಬಂದಿಗಳಿಗೆ ತಿಳಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಸಿಬ್ಬಂದಿ ಯೋಗಾಭ್ಯಾಸ ಮಾಡುವ ಕೆಲವು ಫೋಟೋಗಳು, ವಿಡಿಯೋಗಳನ್ನು ಕೂಡ ಐಟಿಬಿಪಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

  • ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ಭುವನೇಶ್ವರ: ಜೂನ್ 21ರಂದು ನಡೆಯುವ 5ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾರತೀಯ ಭದ್ರತಾ ಪಡೆಯ ಯೋಧರು ಒಡಿಶಾದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಹೌದು. ಸದಾ ದೇಶದ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಭದ್ರತಾ ಪಡೆಯು ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗಾಭ್ಯಾಸ ಮಾಡುತ್ತಿದೆ. ಸಾಮಾನ್ಯ ಪ್ರದೇಶದಲ್ಲಿ ಯೋಧರು ಯೋಗಾಭ್ಯಾಸ ಮಾಡಿದರೆ ಅಷ್ಟೇನು ಸುದ್ದಿಯಾಗುತ್ತಿರಲಿಲ್ಲ. ಆದರೆ ನಮ್ಮ ಕೆಚ್ಚೆದೆಯ ಯೋಧರು ನಕ್ಸಲ್ ಪೀಡಿತ ಪ್ರದೇಶದಲ್ಲಿ ಅಂತರಾಷ್ಟ್ರೀಯ ಯೋಗ ದಿನಕ್ಕೆ ಯೋಗಾಭ್ಯಾಸ ಮಾಡಿ ತಯಾರಿ ನಡೆಸುತ್ತಿರುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

    5 ಸಾವಿರ ವರ್ಷದ ಇತಿಹಾಸವಿರುವ ಯೋಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ನೀಡಲು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಯೋಗ ದಿನವನ್ನು ಜೂನ್ 21ರಂದು ಆಚರಿಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯಂತೆ ಜೂನ್ 21 2014ರಿಂದ ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಯಶಸ್ವಿಯಾಗಿ ಎಲ್ಲಡೆ ಆಚರಿಸಲಾಗಿದೆ.

    ಕಳೆದ ಬಾರಿ 4ನೇ ವಿಶ್ವ ಯೋಗ ದಿನದ ಕಾರ್ಯಕ್ರಮವನ್ನು ಡೆಹ್ರಾಡೂನ್‍ನಲ್ಲಿ ಆಚರಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಮೋದಿ ಅವರು ಕೂಡ ಪಾಲ್ಗೊಂಡಿದ್ದರು. ಹಾಗೆಯೇ ಈ ಬಾರಿ ಜಾರ್ಖಂಡ್‍ನ ರಾಂಚಿಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

  • ಪ್ಯಾಂಟ್-ಶರ್ಟ್‌ನಲ್ಲಿ ಗಮನ ಸೆಳೆದ ಜಿಟಿಡಿ

    ಪ್ಯಾಂಟ್-ಶರ್ಟ್‌ನಲ್ಲಿ ಗಮನ ಸೆಳೆದ ಜಿಟಿಡಿ

    ಮೈಸೂರು: ಜೂನ್ 21 ರಂದು ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ಮೈಸೂರಿನ ರೇಸ್ ಕೋರ್ಸ್ ನಲ್ಲಿ ಇಂದು ಮೆಗಾ ರಿಹರ್ಸಲ್ ನಡೆದಿದೆ.

    ಸುಮಾರು 5000ಕ್ಕೂ ಹೆಚ್ಚು ಯೋಗಪಟುಗಳಿಂದ ಸಾಮೂಹಿಕ ಯೋಗಾಭ್ಯಾಸ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್, ಶಾಸಕ ಎಸ್.ಎ.ರಾಮದಾಸ್, ಮೇಯರ್ ಪುಷ್ಪಾಲತಾ ಜಗನ್ನಾಥ್, ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

    ಇದೇ ವೇಳೆ ಜಿ.ಟಿ. ದೇವೇಗೌಡರು ಹೆಚ್ಚು ಗಮನ ಸೆಳೆದರು. ಕಾರಣ ಪ್ಯಾಂಟ್, ಶರ್ಟ್ ನಲ್ಲಿ ಜಿ.ಟಿ ದೇವೇಗೌಡರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಜಿ.ಟಿ. ದೇವೇಗೌಡರು ಬಿಳಿ ಪಂಚೆ, ಬಿಳಿ ಶರ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇಂದು ಅಪರೂಪಕ್ಕೆ ಸಚಿವರು ಕಂದು ಬಣ್ಣದ ಪ್ಯಾಂಟ್, ತಿಳಿ ಬೂದು ಬಣ್ಣದ ಶರ್ಟ್ ತೊಟ್ಟು ಯೋಗ ತಾಲೀಮಿಗೆ ಬಂದಿದ್ದಾರೆ. ಅವರ ಉಡುಪು ಎಲ್ಲರ ಗಮನಸೆಳೆಯಿತು.

    ರೇಸ್ ಕೋರ್ಸ್ ನಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ ಸಾಮೂಹಿಕವಾಗಿ ಯೋಗಪಟುಗಳು ಯೋಗ್ಯಾಭ್ಯಾಸ ಮಾಡಿದ್ದಾರೆ. ಸಚಿವ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಯೋಗ ಪಟುಗಳು ಜೊತೆ ಸೇರಿ ತಾವೂ ಯೋಗಾಭ್ಯಾಸ ಮಾಡಿದ್ದಾರೆ.

  • ಕಬ್ಬನ್ ಪಾರ್ಕಿನಲ್ಲಿ ಉಚಿತ ಯೋಗ ಅಭ್ಯಾಸಕ್ಕೆ ಮುಸ್ಲಿಮರ ವಿರೋಧ

    ಕಬ್ಬನ್ ಪಾರ್ಕಿನಲ್ಲಿ ಉಚಿತ ಯೋಗ ಅಭ್ಯಾಸಕ್ಕೆ ಮುಸ್ಲಿಮರ ವಿರೋಧ

    ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕಿನಲ್ಲಿ ಹೊಸ ವಿವಾದ ತಲೆಯೆತ್ತಿದೆ. ಪಾರ್ಕಿನಲ್ಲಿ ಯೋಗ ಮಾಡುವುದು ಬೇಡ ಎಂದು ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಯೋಗ ಮಾಡಲು ಅನುಮತಿ ನೀಡಿದರೆ ನಮಾಜ್‍ಗೂ ಅವಕಾಶ ಕೊಡಿ ಎಂದು ಬೇಡಿಕೆ ಕೇಳಿಬಂದಿದೆ.

    ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದಿಂದ ಹುಲ್ಲು ಹಾಸಿನ ಮೇಲೆ ಪ್ರೀತಿ ಅವರು ಉಚಿತವಾಗಿ ಯೋಗ ತರಗತಿ ನೀಡುತ್ತಿದ್ದಾರೆ. ಈ ಖಾಸಗಿ ಯೋಗ ತರಗತಿಗೆ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹುಲ್ಲು ಹಾಸಿನ ಮೇಲೆ ಕ್ಲಾಸ್ ನಡೆಯುತ್ತದೆ. ಫ್ಲೆಕ್ಸ್ ಗಳನ್ನು ಪ್ರದರ್ಶನ ಮಾಡುತ್ತಾರೆ ಎಂದು ದೂರಿದ್ದಾರೆ. ಯೋಗ ನಡೆಸಲು ಅನುಮತಿ ನೀಡಿದರೆ ನಮಾಜ್ ಮಾಡಲು ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡಿದ್ದಾರೆ.

    ಯೋಗ ಮಾಡಲು ಅವಕಾಶ ಕೊಟ್ಟರೆ ಮುಸ್ಲಿಂ ಬಾಂಧವರು ನಮಾಜ್ ಮಾಡಲು ಅವಕಾಶ ಕೇಳುತ್ತಿದ್ದಾರೆ. ಹೀಗಾಗಿ ಉಚಿತ ಯೋಗ ಕ್ಲಾಸ್ ಬೇಡ ಎಂಬ ವಿರೋಧ ಎದುರಾಗಿದೆ ಕಬ್ಬನ್ ಪಾರ್ಕ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ತಿಳಿಸಿದ್ದಾರೆ.

    ಈ ಬಗ್ಗೆ ಯೋಗ ತರಬೇತಿದಾರಾದ ಪ್ರೀತಿಯವರನ್ನು ಕೇಳಿದರೆ ಉಚಿತವಾಗಿ ಕ್ಲಾಸ್ ಮಾಡುತ್ತಿದ್ದೇನೆ. ಈ ಕ್ಲಾಸ್‍ಗೆ ವಿರೋಧ ಯಾಕೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಪ್ರತಿ ದಿನ ಬೆಳಿಗ್ಗೆ 6 ರಿಂದ 8 ಗಂಟೆಯವರೆಗೂ ನಡೆಯುವ ಈ ಕ್ಲಾಸ್‍ನಲ್ಲಿ ವಯೋವೃದ್ಧರು, ಯೋಗ ಆಸಕ್ತರು ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ.

  • ವಯಸ್ಸು 10, ವಿಶ್ವದಾಖಲೆಗಳು ನಾಲ್ಕು – ಇದು ಉಡುಪಿಯ ತನುಶ್ರೀ ಪಿತ್ರೋಡಿಯ ಸಾಧನೆ

    ವಯಸ್ಸು 10, ವಿಶ್ವದಾಖಲೆಗಳು ನಾಲ್ಕು – ಇದು ಉಡುಪಿಯ ತನುಶ್ರೀ ಪಿತ್ರೋಡಿಯ ಸಾಧನೆ

    – ಒಂದೇ ದಿನ ಎರಡು ದಾಖಲೆ

    ಉಡುಪಿ: ಈಗಾಗಲೇ ಎರಡು ವಿಶ್ವದಾಖಲೆ ಮಾಡಿರುವ 10ರ ಪೋರಿ, ಒಂದೇ ದಿನ ಮತ್ತೆರಡು ದಾಖಲೆ ಮಾಡಿದ್ದಾಳೆ. ದೇಹದೊಳಗೆ ಮೂಳೆ ಇದ್ಯೋ ಇಲ್ಲವೋ ಅಂತ ಡೌಟ್ ಬರುವಂತೆ ಉಡುಪಿಯ ತನುಶ್ರೀ ಸಾವಿರಾರು ಜನರನ್ನು ಚಕಿತಗೊಳ್ಳುವಂತೆ ಮಾಡಿದ್ದಾಳೆ.

    ಉಡುಪಿಯ ತನುಶ್ರೀ ಪಿತ್ರೋಡಿಗೆ ಈ 10 ವರ್ಷ. ಆದರೆ ಜೀವಮಾನದಲ್ಲಿ ಹೆಚ್ಚಿನವರಿಂದ ಅಸಾಧ್ಯವಾದುದನ್ನು ಬಾಲ್ಯದಲ್ಲೇ ಸಾಧಿಸಿದ್ದಾಳೆ. ಭರತನಾಟ್ಯ- ಯಕ್ಷಗಾನ ಕಲೆಯಲ್ಲಿ ಪರಿಣತಿ ಪಡೆದಿರುವ ಈಕೆ ಯೂಟ್ಯೂಬ್‍ನಲ್ಲಿ ನೋಡಿ ಯೋಗ ಕಲಿತು ವಿಶ್ವದಾಖಲೆ ಮೇಲೆ ವಿಶ್ವದಾಖಲೆ ಮಾಡಿದ್ದಾಳೆ. ತನುಶ್ರೀ ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ಹಿಂದೆ ನಿರಾಲಂಭ ಪೂರ್ಣ ಚಕ್ರಾಸನದಲ್ಲಿ ಎರಡು ದಾಖಲೆ ಮಾಡಿದ್ದಳು. 1 ನಿಮಿಷದಲ್ಲಿ 42 ಬಾರಿ ಆಸನ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಳು. ಇದೀಗ ಒಂದು ನಿಮಿಷದಲ್ಲಿ 60ಕ್ಕೂ ಹೆಚ್ಚು ಬಾರಿ ಧನುರಾಸನ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾಳೆ.

    ಸಂಸ್ಥೆಯ ಏಷ್ಯಾ ಹೆಡ್ ಮನೀಷ್ ಉಡುಪಿಗೆ ಬಂದು ಸಾಧಕಿ ತನುಶ್ರೀಗೆ ಸರ್ಟಿಫಿಕೇಟ್ ಕೊಟ್ಟು ಬೆನ್ನು ತಟ್ಟಿದ್ದಾರೆ. ಈ ಹಿಂದೆಯೂ ಬಾಲಕಿಯ ಸಾಧನೆ ನೋಡಿದ್ದೇವೆ. ಜೀವನದಲ್ಲಿ ಮತ್ತಷ್ಟು ದಾಖಲೆಗಳು ಮಾಡುವ ಮತ್ತು ಬೆಳೆದು ದೊಡ್ಡ ಹೆಸರು ಮಾಡುವ ಎಲ್ಲಾ ಲಕ್ಷಣ ಇದೆ ಅಂತ ಹೇಳಿದರು.

    ಸಾಧಕಿ ತನುಶ್ರೀ ಮಾತನಾಡಿ, ಮೈದಾನದಲ್ಲಿ ನಾನು ಪ್ರ್ಯಾಕ್ಟೀಸ್ ಮಾಡಿಯೇ ಇರಲಿಲ್ಲ. ಕ್ಯಾಮೆರಾಗಳು, ಜನರು ಎಲ್ಲ ಸೇರಿದಾಗ ಬಹಳ ಮುಜುಗರ ಆಯ್ತು. ನರ್ವಸ್ ಆಗದಂತೆ ತಂದೆ ತಾಯಿ ಹುರಿದುಂಬಿಸಿದರು. ಕಾನ್ಸನ್ಟ್ರೇಶನ್ ಮಾಡಿ ಸಾಧಿಸಿಯೇ ಬಿಟ್ಟೆ ಅಂತ ಹೇಳಿದ್ದಾಳೆ.

    ಮನೆಯೊಳಗೆ ಚಾವಡಿಯಲ್ಲಿ- ಟೆರೇಸ್ ಮೇಲೆ ಅಭ್ಯಾಸ ಮಾಡುತ್ತಿದ್ದ ತನ್ನ ಶಾಲೆಯ ಮೈದಾನದಲ್ಲಿ ಪ್ರಥಮ ಪ್ರಯೋಗದಲ್ಲೇ ದಾಖಲೆ ಮಾಡಿದ್ದಾಳೆ. ತಂದೆ ಉದಯಕುಮಾರ್- ತಾಯಿ ಸಂಧ್ಯಾ ಈ ಸಾಧನೆಯ ಹಿಂದಿರುವ ಬೆನ್ನೆಲುಬು.

    ತನುಶ್ರೀ ತಂದೆ ಉದಯಕುಮಾರ್, ತಾಯಿ ಸಂಧ್ಯಾ ಮಾತನಾಡಿ, ನಾವು ಅವಳಿಗೆ ಎಲ್ಲಾ ವಿಷಯದಲ್ಲಿ ಸಪೋರ್ಟ್ ಮಾಡುತ್ತೇವೆ. ಯೋಗ ಕ್ಲಾಸಿಗೆ ಅವಳು ಹೋಗದೇ ಯುಟ್ಯೂಬ್ ನೋಡಿಯೇ ಈ ನಾಲ್ಕು ದಾಖಲೆ ಮಾಡಿದ್ದಾಳೆ. ಯಕ್ಷಗಾನ -ಭರತನಾಟ್ಯದಲ್ಲೂ ಸಾಧನೆ ಮಾಡುವ ಹಂಬಲ ಅವಳಲ್ಲಿದೆ. ಕಲಿಕೆಯಲ್ಲೂ ಮುಂದಿರುವುದರಿಂದ ಪಠ್ಯೇತರ ಚಟುವಟಿಕೆಗೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

    ಸಾಧಕಿಗೆ ಸ್ಥಳದಲ್ಲೇ ಪ್ರಾವಿಜನ್ ಸರ್ಟಿಫಿಕೇಟ್ ಕೊಡಲಾಗಿದೆ. ಯೋಗ ದಿನಾಚರಣೆಯ ಪಬ್ಲಿಕ್ ಹೀರೋ ಆಗಿದ್ದ ತನುಶ್ರೀ ಒಂದು ನಿಮಿಷದ ರೆಕಾರ್ಡ್ ಜೊತೆ ತನುಶ್ರೀ ಮೋಸ್ಟ್ ನಂಬರ್ ಆಫ್ ಧನುರಾಸನ ಎಂಬ ದಾಖಲೆಯನ್ನೂ ಮಾಡಿದ್ದಾಳೆ. ಒಂದು ನಿಮಿಷ 1.46 ಸೆಕೆಂಡುಗಳ ಕಾಲ ಧನುರಾಸನ ಮಾಡಿ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾಳೆ. ಮತ್ತಷ್ಟು ದಾಖಲೆ ಮಾಡುವ ತಯಾರಿಯನ್ನು ತನುಶ್ರೀ ಮಾಡಿಕೊಳ್ಳುತ್ತಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆಚ್ಚು ತೂಕವಿರುವ ಯುವತಿ ಮಾಡೋ ಸ್ಟಂಟ್ ನಿಮಗೆ ಸಾಧ್ಯವೇ! – ವಿಡಿಯೋ ನೋಡಿ

    ಹೆಚ್ಚು ತೂಕವಿರುವ ಯುವತಿ ಮಾಡೋ ಸ್ಟಂಟ್ ನಿಮಗೆ ಸಾಧ್ಯವೇ! – ವಿಡಿಯೋ ನೋಡಿ

    – ಯೋಗಾಸನದ ಮೂಲಕವೇ ಫಾಲೋವರ್ಸ್ ಹೆಚ್ಚಿಸಿಕೊಂಡ್ಲು ದೆಹಲಿ ಬೆಡಗಿ

    ನವದೆಹಲಿ: ಯೋಗಾಸನ ಹಾಗೂ ವಿವಿಧ ರೀತಿಯ ಸ್ಟಂಟ್ ಗಳ ಪೋಸ್ಟ್ ಮೂಲಕವೇ ಯುವತಿಯೊಬ್ಬರು ಫೇಸ್‍ಬುಕ್ ಹಾಗೂ ಇನ್ ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.

    ನವದೆಹಲಿ ನಿವಾಸಿ ಮೋನಿಕಾ ಸಾಹು ಯೋಗಾಸನ ಹಾಗೂ ಸ್ಟಂಟ್‍ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹೆಚ್ಚು ತೂಕ ಹೊಂದಿರುವ ಮೋನಿಕಾ ಯೋಗಾಸನದ ಮೂಲಕ, ನಾನು ಆಕ್ಟೀವ್ ಆಗಿದ್ದೇನೆ ಎಂದು ತೋರಿಸಿಕೊಟ್ಟಿದ್ದಾರೆ. ಇನ್ ಸ್ಟಾಗ್ರಾಮ್ ಖಾತೆ ಮೂಲಕ ವಿಡಿಯೋ ಹಂಚಿಕೊಂಡಿರುವ ಮೋನಿಕಾ ಅವರನ್ನು ನವೆಂಬರ್ 16ರವರೆಗೆ ಒಟ್ಟು 33.3 ಸಾವಿರ ಜನರು ಫಾಲೋ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಫೇಸ್ ಬುಕ್‍ನಲ್ಲಿ 1.3 ಸಾವಿರಕ್ಕೂ ಅಧಿಕ ಜನ ಫಾಲೋವರ್ಸ್ ಇದ್ದಾರೆ.

    ಭಾರವಾದ ದೇಹವಿದ್ದರೂ ಮೋನಿಕಾ ಸಾಹಸ ರೀತಿಯ ಯೋಗಾಸನ ಮಾಡುತ್ತಾರೆ. ಈ ಮೂಲಕ ಹಂತ ಹಂತವಾಗಿ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಂಡು, ಸೌಂದರ್ಯ ಹೆಚ್ಚಿಸಿಕೊಂಡಿದ್ದಾರೆ. ಸತತ ಪ್ರಯತ್ನದಿಂದ ಮೋನಿಕಾ ಯೋಗಾಸದಲ್ಲಿ ಪಳಗಿದ್ದು, ಈಗ ಅನೇಕ ನೆಟ್ಟಿಗರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ.

    ಸಾಮಾನ್ಯರು ಮಾಡಲು ಸಾಧ್ಯವಾಗದ ಯೋಗಾಸನ, ಸ್ಟಂಟ್‍ಗಳನ್ನು ಮೋನಿಕಾ ಮಾಡುತ್ತಾರೆ. ಜೊತೆಗೆ ತನ್ನ ಆತ್ಮೀಯರಿಗೂ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ. ಕಾಲು ಅಗಲಿಸಿ ನೆಲಕ್ಕೆ ನೇರವಾಗಿ ಕೂರುವುದಕ್ಕೆ ಸಾಮಾನ್ಯರು ಭಾರೀ ಕಷ್ಟಪಡಬೇಕಾಗುತ್ತದೆ. ಆದರೆ ಮೋನಿಕಾ ಯಾವುದೇ ಕಷ್ಟಪಡದೇ ಈ ಆಸನವನ್ನು ಮಾಡುತ್ತ, ಹೆಜ್ಜೆ ಹಾಕುತ್ತಾರೆ.

    ಆರೋಗ್ಯಯುತ ಜೀವನಕ್ಕೆ ಪ್ರೇರಣೆ ನೀಡುವುದು ನನ್ನ ಉದ್ದೇಶ. ಹೆಚ್ಚು ತೂಕವಿದ್ದರೂ, ಯೋಗಾಸನದ ಮೂಲಕ ಚಟುವಟಿಕೆಯಿಂದ ಇರಬಹುದು ಎನ್ನುವುದಕ್ಕೆ ನಾನೇ ಉದಾಹರಣೆ. ನನ್ನ ಸ್ನೇಹಿತರಿಗೂ ಇದನ್ನು ಕಲಿಸಿಕೊಡುತ್ತಿರುವೆ ಎಂದು ಇನ್ ಸ್ಟಾಗ್ರಾಮ್ ಪೋಸ್ಟ್‍ನಲ್ಲಿ ಮೋನಿಕಾ ಹೇಳಿಕೊಂಡಿದ್ದಾರೆ.

    ಮೋನಿಕಾ ಅವರು, ತಾವು ಮಾಡುವ ಆಸನ ಹಾಗೂ ಸ್ಟಂಟ್‍ಗಳ ಮಾಹಿತಿ ನೀಡಿ, ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಈ ಮೂಲಕ ಅನೇಕ ಮಂದಿ ಅವರನ್ನು ಅನುಕರಣೆ ಮಾಡಿ, ತಾವು ಮಾಡಲು ಯತ್ನಿಸುತ್ತಾರೆ. ಈ ಮೂಲಕ ಮೋನಿಕಾ ತಮ್ಮ ಅಭಿಮಾನಿಗಳ ಗೆದ್ದಿದ್ದಾರೆ.

    ಓದುತ್ತಲೇ ಹೇಗೆ ಆಸನ ಮಾಡಬಹುದು. ಗೃಹಿಣಿಯರು, ಮಹಿಳೆಯರು ಮೇಕಪ್ ಮಾಡುಕೊಳ್ಳುತ್ತಲೇ ಯೋಗ ಮಾಡಬಹುದು. ಮೊಬೈಲ್ ಹಾಗೂ ಲ್ಯಾಪ್‍ಟಾಪ್ ಬಳಕೆ, ವಸ್ತುಗಳನ್ನು ಜೋಡಿಸುವುದು ಹೀಗೆ ವಿವಿಧ ಕೆಲಸಗಳಲ್ಲಿ ತಾವು ಹೇಗೆಲ್ಲ ಯೋಗಾಸನ ಮಾಡುತ್ತಾರೆ ಎನ್ನುವುದನ್ನು ಮೋನಿಕಾ ವಿಡಿಯೋ ಮೂಲಕ ತೋರಿಸಿಕೊಟ್ಟಿದ್ದಾರೆ.

    https://www.instagram.com/p/BpQvO8Hl3xE/

    https://www.instagram.com/p/BpD-iIBlD_8/

    https://www.instagram.com/p/BmX3-kFgzHM/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews