Tag: yashwanthpura

  • ಆಪರೇಷನ್ ಹಸ್ತ ಬೆನ್ನಲ್ಲೇ ಯಶವಂತಪುರ ಕ್ಷೇತ್ರಕ್ಕೆ ಬಂಪರ್

    ಆಪರೇಷನ್ ಹಸ್ತ ಬೆನ್ನಲ್ಲೇ ಯಶವಂತಪುರ ಕ್ಷೇತ್ರಕ್ಕೆ ಬಂಪರ್

    ಬೆಂಗಳೂರು: ಆಪರೇಷನ್ ಹಸ್ತ (Operation Hasta) ಬೆನ್ನಲ್ಲೇ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರ ಬಂಪರ್ ಆಫರ್ ಕೊಟ್ಟಿದೆ. ಎಸ್.ಟಿ.ಸೋಮಶೇಖರ್ (S.T.Somshekar) ಶಾಸಕರಾಗಿರುವ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ 7.63 ಕೋಟಿ ರೂ. ಅನುದಾನ ನೀಡಲಾಗಿದೆ.

    ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆಂಬ ಚರ್ಚೆ ಬೆನ್ನಲ್ಲೇ, ಬಿಬಿಎಂಪಿಯಿಂದ ಅನುದಾನ ಮಂಜೂರಿನ ಆದೇಶ ಬಂದಿದೆ. ಈ ಕ್ಷೇತ್ರಕ್ಕೆ ಕುಡಿಯುವ ನೀರಿಗೆ 7.63 ಕೋಟಿ ರೂ. ಅನುದಾನ ಕಲ್ಪಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬಿಲ್ ಗೇಟ್ಸ್ ಫಿದಾ – ಡಿಜಿಟಲೀಕರಣಕ್ಕೆ ಮನಸೋತ ಪೋಸ್ಟ್ ವೈರಲ್

    ಕಾಂಗ್ರೆಸ್ ಪಕ್ಷಕ್ಕೆ ಬರುವುದಕ್ಕೆ ಬಿಬಿಎಂಪಿ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಭರ್ಜರಿ ಗಿಫ್ಟ್ ನೀಡಿದರೇ ಎಂಬ ಚರ್ಚೆ ಶುರುವಾಗಿದೆ. ಹೇರೋಹಳ್ಳಿ ಹಾಗೂ ಕೆಂಗೇರಿ ಭಾಗಕ್ಕೆ ಕುಡಿಯುವ ನೀರಿಗಾಗಿ ಅನುದಾನ ನೀಡಲಾಗಿದೆ. 1.63 ಕೋಟಿ ರೂ. ನೀರು ಪೂರೈಸುವ ಟ್ಯಾಂಕರ್‌ಗಳಿಗೆ ಮೀಸಲಿಡಲಾಗಿದೆ. ಹೊಸದಾಗಿ ಬೋರ್ವೆಲ್ ಕೊರೆಸಲು 4 ಕೋಟಿ ರೂ. ಹಾಗೂ ನಿರ್ವಹಣೆ ಮಾಡಲು 2 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.

    ಆಪರೇಷನ್ ಹಸ್ತದ ಮೊದಲ ವಿಕೆಟ್‌ಗೆ ಅನುದಾನದ ನೆರವು ಸಿಕ್ಕಿದೆ. 7.63 ಕೋಟಿ ರೂ. ಅನುದಾನ ನೀಡಿ ಎಸ್.ಟಿ. ಸೋಮಶೇಖರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಡಿ.ಕೆ. ಶಿವಕುಮಾರ್ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ‘ಶಕ್ತಿ’ ವಿರೋಧಿಸಿ ಕರ್ನಾಟಕ ಬಂದ್ – ಖಾಸಗಿ ಸಾರಿಗೆ ಒಕ್ಕೂಟದ ಜೊತೆಗಿನ ಸಭೆ ವಿಫಲ

    ಆಪರೇಷನ್ ಹಸ್ತ ಎನ್ನುತ್ತಿದ್ದಂತೆ ಮೊದಲ ಹೆಸರು ಕೇಳಿ ಬಂದಿದ್ದೇ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರದ್ದು. ನಿನ್ನೆಯಷ್ಟೆ ಸೋಮಶೇಖರ್ ಬೆಂಬಲಿತ ಮಾಜಿ ಕಾರ್ಪೊರೇಟರ್‌ಗಳು ಕಾಂಗ್ರೆಸ್ ಸೇರಿದ್ದಾರೆ. ಈಗ ಯಶವಂತಪುರ ಕ್ಷೇತ್ರಕ್ಕೆ 7.63 ಕೋಟಿ ಹಣ ಬಿಡುಗಡೆಯಾಗಿದೆ. ಅಧಿಕೃತವಾಗಿ ‘ಕೈ’ ಹಿಡಿಯುವ ಎಸ್.ಟಿ. ಸೋಮಶೇಖರ್ ನಡೆಗೆ ಶೀಘ್ರವಾಗಿ ಮುಹೂರ್ತ ನಿಗದಿಯಾಗುತ್ತಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಡಿಮೆ ವೆಚ್ಚದಲ್ಲಿ ಐಎಎಸ್ ಎಕ್ಸಾಮ್ ಕೋಚಿಂಗ್!

    ಕಡಿಮೆ ವೆಚ್ಚದಲ್ಲಿ ಐಎಎಸ್ ಎಕ್ಸಾಮ್ ಕೋಚಿಂಗ್!

    – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಸಂಗಾತಿ ಮೈಲ್ ಸ್ಟೋನ್ ಅಕಾಡಮಿ
    – ಬಡವರ ಮಕ್ಕಳಿಗೂ ಕೈಗೆಟುಕುತ್ತೆ ಐಎಎಸ್ ಕನಸು

    ಬೆಂಗಳೂರು: ಐಎಎಸ್, ಕೆಎಎಸ್ ಪರೀಕ್ಷೆಗಳು ಮಧ್ಯಮವರ್ಗದ ವಿದ್ಯಾರ್ಥಿಗಳ ಕೈಗೆಟುಕದ ಕನಸು ಎಂಬಂಥಾ ವಾತಾವರಣವಿದೆ. ಇದಕ್ಕೆ ಕೋಚಿಂಗ್ ಕೂಡಾ ದುಬಾರಿ. ಅದನ್ನು ಭರಿಸಲಾಗುವುದಿಲ್ಲ ಎಂಬ ಸಂಕಟದಿಂದಲೇ ಮಕ್ಕಳ ಕನಸನ್ನು ಚಿವುಟಿದ ಸಂಕಟದಲ್ಲಿರೋ ಪೋಷಕರು, ಈ ಕಾರಣದಿಂದಲೇ ತಮ್ಮೊಳಗಿನ ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ಬೇರ್ಯಾವುದೋ ವೃತ್ತಿಯಲ್ಲಿ ಕಳೆದು ಹೋದವರು ಸಹಸ್ರ ಸಂಖ್ಯೆಯಲ್ಲಿ ಸಿಗಬಹುದು. ಈ ಕಾರಣದಿಂದಲೇ ಐಎಎಸ್ ಗೆ ಕರ್ನಾಟಕದ ಕೊಡುಗೆ ಶೇ.4 ರಷ್ಟಿದೆ. ಆದರೆ ಐಎಎಸ್ ಸೇರಿದಂತೆ ಸಖಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ತರಬೇತಿ ಕೊಡೋ ಕೋಚಿಂಗ್ ಸೆಂಟರ್ ಒಂದು ಬೆಂಗಳೂರಿನಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ.

    ಬಹುಶಃ ಇಡೀ ದೇಶದಲ್ಲಿ ಯಾವ ಮೂಲೆಯನ್ನ ಜಾಲಾಡಿದರೂ ಇದರಷ್ಟು ಕಡಿಮೆ ಮೊತ್ತಕ್ಕೆ ಇಷ್ಟೊಂದು ಗುಣಮಟ್ಟದ ತರಬೇತಿ ಕೊಡೋ ಮತ್ತೊಂದು ಸಂಸ್ಥೆ ಸಿಗಲು ಸಾಧ್ಯವಿಲ್ಲ. ಹೀಗೆ ಯಾವ ವ್ಯಾವಹಾರಿಕ ಅಬ್ಬರವೂ ಇಲ್ಲದೇ ಕರ್ನಾಟಕವನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಮಟ್ಟಕ್ಕೇರಿಸಬೇಕೆಂಬ ಧ್ಯೇಯವನ್ನೇ ಧ್ಯಾನವಾಗಿಸಿಕೊಂಡಿರುವ ಸಂಸ್ಥೆ ಮೈಲ್ ಸ್ಟೋನ್ ಅಕಾಡಮಿ. ಈ ಸಂಸ್ಥೆ ಬೆಂಗಳೂರಿನ ಯಶವಂತಪುರದಲ್ಲಿ ತನ್ನ ಪಾಡಿಗೆ ತಾನು ಕಾರ್ಯ ನಿರ್ವಹಿಸುತ್ತಿದೆ.

    ಜೀವಿತಾ ಎನ್ ಅವರು ಈಗ್ಗೆ ಏಳು ವರ್ಷದ ಹಿಂದೆ ಅಪ್ಪಟ ಶಿಕ್ಷಣದ ಪಾವಿತ್ರ್ಯದ ಭೂಮಿಕೆಯಲ್ಲಿ ಹುಟ್ಟು ಹಾಕಿರುವ ಸಂಸ್ಥೆ ಮೈಲ್ ಸ್ಟೋನ್ ಅಕಾಡಮಿ. ಇಲ್ಲಿ ಐಎಎಸ್, ಕೆಎಎಸ್ ಸೇರಿದಂತೆ ಎಲ್ಲಾ ವಿಧದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಗುಣಮಟ್ಟದ ಕೋಚಿಂಗ್ ನೀಡಲಾಗುತ್ತಿದೆ. ಇದುವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಟ್ಟದ ಐಎಎಸ್, ಕೆಎಎಸ್ ಸೇರಿದಂತೆ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 280ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕೋಚಿಂಗ್ ಪಡೆದು ಭವಿಷ್ಯ ರೂಪಿಸಿಕೊಂಡಿದ್ದಾರೆ.

    ಇಲ್ಲಿ ಕೋಚಿಂಗ್‍ಗಾಗಿ ನಿಗದಿ ಪಡಿಸಿರುವ ಮೊತ್ತವನ್ನು ನೋಡಿದರೆ ಎಂಥವರೂ ಇದು ಸಾಧ್ಯಾನಾ, ಇದು ನಿಜವಾ ಅಂತ ಬೆರಗಾಗುವಂತಿದೆ. ಯಾಕಂದ್ರೆ ಹೊರ ಜಗತ್ತಲ್ಲಿ ಐಎಎಸ್ ಮತ್ತು ಕೆಎಎಸ್ ನಂಥಾ ಪರೀಕ್ಷೆಗಳ ಕೋಚಿಂಗ್ ಗಾಗಿ ವಾರ್ಷಿಕ ಒಂದರಿಂದ ನಾಲ್ಕು ಲಕ್ಷದಷ್ಟು ಶುಲ್ಕ ಚಾಲ್ತಿಯಲ್ಲಿದೆ. ಆದ್ದರಿಂದ ಬಡವರ ಮಕ್ಕಳು ಇಂಥಾ ಪರೀಕ್ಷೆಯಲ್ಲಿ ಪಾಸ್ ಆಗೋ ಟ್ಯಾಲೆಂಟ್ ಇದ್ದರೂ ದೂರವೇ ಉಳಿದು ಬಿಡುವ ದುರಂತ ಸ್ಥಿತಿ ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲಿದೆ. ಆದರೆ ಮೈಲ್ ಸ್ಟೋನ್ ಅಕ್ಯಾಡೆಮಿ ಇದಕ್ಕಾಗಿ ನಿಗಧಿ ಪಡಿಸಿರೋ ವಾರ್ಷಿಕ ಮೊತ್ತ ಕೇವಲ 12,800 ರೂಪಾಯಿ ಮಾತ್ರ. ವಿದ್ಯಾರ್ಥಿಗಳಿಗೆ ಬೇಕಾಗುವ ಪೂರಕ ಸಾಮಾಗ್ರಿಗಳಿಗೆ ಮಾತ್ರವೇ ಇಲ್ಲಿ ಮೊತ್ತ ನಿಗದಿಯಾಗಿದೆ ಅಂದರೆ ಅಚ್ಚರಿಯಾಗುತ್ತೆ. ಆದರೆ ಇದು ಏಳು ವರ್ಷಗಳಿಂದ ತಪಸ್ಸಿನಂತೆ ನಡೆಯುತ್ತಲೇ ಇರುವುದು ವಾಸ್ತವ.

    ಇಷ್ಟು ಕಡಿಮೆ ಮೊತ್ತಕ್ಕೆ ಇಲ್ಲಿ ವರ್ಷ ಪೂರ್ತಿ ಗುಣಮಟ್ಟದ ಕೋಚಿಂಗ್ ಸಿಗುತ್ತದೆ. ಇಲ್ಲಿ ಕೋಚಿಂಗ್ ಕೊಡುವವರೂ ಕೂಡಾ ಶಿಕ್ಷಣವನ್ನು ದೇವತಾ ಸ್ಥಾನದಲ್ಲಿಟ್ಟು ಪೂಜಿಸುವವರೇ. ಇಲ್ಲಿ ಕಾಸು ಮಾಡೋ ಧಾವಂತವಿಲ್ಲ. ಮಾರುಕಟ್ಟೆಯ ಗಿಮಿಕ್ಕುಗಳಂತೂ ಇಲ್ಲವೇ ಇಲ್ಲ. ಈ ಸಂಸ್ಥೆ ಜೀವಿತಾ ಅವರ ಸಾರಥ್ಯದಲ್ಲಿ ಯಾವ ಆದರ್ಶಗಳನ್ನಿಟ್ಟುಕೊಂಡು ಜೀವ ಪಡೆದಿತ್ತು ಅದನ್ನು ಇಲ್ಲಿನ ಬೋಧಕರೆಲ್ಲರೂ ಶಿರಸಾವಹಿಸಿ ಪಾಲಿಸುತ್ತಿದ್ದಾರೆ. ಒಂದು ವೇಳೆ ವರ್ಷ ಮುಗಿದ ಮೇಲೂ ವಿದ್ಯಾರ್ಥಿಗಳು ರಿವಿಜನ್ ಬಯಸಿದರೆ ಯಾವ ತಕರಾರೂ ಇಲ್ಲದೇ ಮತ್ತೊಂದು ವರ್ಷವಿಡೀ ಕೋಚಿಂಗ್ ನೀಡಲೂ ಈ ಸಂಸ್ಥೆ ಸದಾ ತಯಾರಾಗಿದೆ. ಇದಕ್ಕಾಗಿ ಹೆಚ್ಚಿನ ಯಾವ ಶುಲ್ಕವನ್ನೂ ಪಡೆಯುವುದಿಲ್ಲ.

    ವ್ಯಾಪಾರಿ ದೃಷ್ಟಿಯೇ ಮಹತ್ವ ಪಡೆದಿರುವ ಈ ಕಾಲಮಾನದಲ್ಲಿ ಮೈಲ್ ಸ್ಟೋನ್ ಆದರ್ಶಗಳನ್ನು ಕಂಡರೆ ಯಾರಿಗಾದರೂ ಅಚ್ಚರಿ ಕಾಡುವುದು ಸಹಜವೇ. ಆದರೆ ಸೇವಾ ಮನೋಭಾವ, ಅಂದುಕೊಂಡ ಗುರಿಯತ್ತ ಸಮರ್ಪಣಾ ಭಾವ ಮಾತ್ರವೇ ಇರುವಲ್ಲಿ ಮೈಲ್ ಸ್ಟೋನ್ ನಂಥಾ ಮಿರಾಕಲ್ ಗಳು ಖಂಡಿತಾ ಸಂಭವಿಸುತ್ತವೆ. ಈ ಸಂಸ್ಥೆ ಹುಟ್ಟು ಪಡೆದಿರೋದೇ ಅಂಥಾ ಆದರ್ಶಗಳ ನೆಲೆಗಟ್ಟಿನಲ್ಲಿ. ಆದ್ದರಿಂದಲೇ ಐಎಎಸ್‍ನಂತಹ ದುಬಾರಿ ಕೋಚಿಂಗ್ ಅನ್ನು ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಕೊಟ್ಟು ಇಲ್ಲಿನ ಬೋಧಕರು ಸದಾ ಜೊತೆಯಲ್ಲಿಯೇ ಇರುತ್ತಾರೆ. ತಮ್ಮದೇ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದಾರೆ ಎನ್ನುವ ಆತ್ಮೀಯ ಭಾವದಿಂದಲೇ ಸದಾ ದಾರಿದೀಪವಾಗಿ ಮುಂದುವರಿಸುತ್ತಿದ್ದಾರೆ.

    ಆರಂಭ ಕಾಲದಲ್ಲಿ ಮೈಲ್ ಸ್ಟೋನ್ ಅಕಾಡಮಿ ಇಷ್ಟೊಂದು ಕಡಿಮೆ ಮೊತ್ತಕ್ಕೆ ಕೋಚಿಂಗ್ ಕೊಡಲು ಮುಂದೆ ಬಂದಾಗ ಅನುಮಾನದಿಂದ ನೋಡಿದವರೇ ಹೆಚ್ಚು. ಇದು ಸಾಧ್ಯಾನ ಎಂಬ ಪ್ರಶ್ನೆಯೇ ಎಲ್ಲರದ್ದಾಗಿತ್ತು. ಆದರೆ ಒಂದಷ್ಟು ವಿದ್ಯಾರ್ಥಿಗಳು ಬಂದು ಸಮರ್ಥವಾಗಿ ಪರೀಕ್ಷೆ ಎದುರಿಸಿದರು. ಹಾಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಬಾಯಿಂದ ಬಾಯಿಗೆ ಹರಡಿದ ಒಳ್ಳೆ ಮಾತುಗಳಿಂದಲೇ ಇಂದು ಈ ಸಂಸ್ಥೆಯ ಆವರಣ ವಿದ್ಯಾರ್ಥಿಗಳಿಂದ ತುಂಬಿದೆ. ಕೇವಲ ನಾಲ್ಕು ಪರ್ಸೆಂಟ್ ಇರೋ ಕರ್ನಾಟಕದ ಐಎಎಸ್ ಮಾಪಕವನ್ನು ಹೆಚ್ಚುಗೊಳಿಸಬೇಕು, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಆರ್ಥಿಕವಾಗಿ ಹಿಂದುಳಿದವರ ಮಕ್ಕಳೂ ಜಯಶೀಲರಾಗಬೇಕೆಂಬುದು ಈ ಸಂಸ್ಥೆಯ ಉದ್ದೇಶ.

    ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳತ್ತಲೇ ಜೀವಿತಾ ಅವರು ಹೆಚ್ಚು ಪೋಕಸ್ ಮಾಡುತ್ತಿದ್ದಾರೆ. ಆದ್ದರಿಂದಲೇ ಮಂಡ್ಯ, ನಂಜನಗೂಡು ಮುಂತಾದ ಪ್ರದೇಶಗಳ ಹಳ್ಳಿಗಳಿಂದ ಬಂದ ವಿದ್ಯಾರ್ಥಿಗಳೂ ಇಲ್ಲಿ ಕೋಚಿಂಗ್ ಪಡೆಯುತ್ತಿದ್ದಾರೆ. ಶಿಕ್ಷಣವೂ ವ್ಯಾಪಾರೀಕರಣದ ತೆಕ್ಕೆಗೆ ಸಿಕ್ಕಿರೋ ಈ ಸಂದರ್ಭದಲ್ಲಿ ಇಂಥಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರೋದೇ ಒಂದು ಅಚ್ಚರಿ.

    ಪೋಷಕರೇ, ಇನ್ನು ಮುಂದೆ ಐಎಎಸ್, ಕೆಎಎಸ್ ಸೇರಿದಂತೆ ನಿಮ್ಮ ಮಕ್ಕಳಿಗೆ ಯಾವ ಕನಸಿದ್ದರೂ ಅದನ್ನು ನೀವು ನನಸು ಮಾಡಿಕೊಳ್ಳಬಹುದು. ಕೆಳಕಂಡ ವಿಳಾಸದಲ್ಲಿ ಮೈಲ್ ಸ್ಟೋನ್ ಕೋಚಿಂಗ್ ಸೆಂಟರ್ ಇದೆ. ನೀವೇ ಖುದ್ದಾಗಿ ಭೇಟಿ ನೀಡಿದರೆ ಇದರ ಸಂಸ್ಥಾಪಕಿ ಜೀವಿತಾ ಅವರೇ ಮಾತಿಗೆ ಸಿಗುತ್ತಾರೆ. ಕಣ್ಣೆದುರೇ ಗುಣಮಟ್ಟದ ಕೋಚಿಂಗ್ ಅನ್ನೂ ಕಣ್ತುಂಬಿಕೊಳ್ಳಬಹುದು. ಬಡ ಮಕ್ಕಳನ್ನೂ ಕಡಿಮೆ ವೆಚ್ಚದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುತ್ತಿರೋ ಮೈಲ್ ಸ್ಟೋನ್ ಅಕಾಡೆಮಿಯ ಕೆಲಸ ನಿಜಕ್ಕೂ ಮೆಚ್ಚಿಕೊಳ್ಳುವಂಥಾದ್ದು.

    ವಿಳಾಸ: ಮೈಲ್ ಸ್ಟೋನ್ ಐಎಎಸ್
    #787, ಮೊದಲ ಮಹಡಿ, 8ನೇ ಕ್ರಾಸ್
    ತ್ರೀವೇಣಿ ರಸ್ತೆ, ಯಶವಂತಪುರ, ಬೆಂಗಳೂರು 560022

    ಸಂಪರ್ಕಿಸಬೇಕಾದ ನಂಬರ್ : 91484 – 51309

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಯರನ್ನು ನಂಬಿದ್ದಕ್ಕೆ ವರ ಸಿಕ್ಕಿದೆ: ಜಗ್ಗೇಶ್

    ರಾಯರನ್ನು ನಂಬಿದ್ದಕ್ಕೆ ವರ ಸಿಕ್ಕಿದೆ: ಜಗ್ಗೇಶ್

    ಬೆಂಗಳೂರು: ನಾನು ಇದುವರೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನಗೆ ಯಾವ ಆಸೆಗಳೂ ಇಲ್ಲ. ಇದು ನನಗೆ ಬಯಸದೇ ಬಂದ ಭಾಗ್ಯ. ರಾಯರನ್ನು ನಂಬಿದ್ದಕ್ಕೆ ವರ ಸಿಕ್ಕಿದೆ ಎಂದು ನಟ, ಬಿಜೆಪಿ ನಾಯಕ ಜಗ್ಗೇಶ್ ಹೇಳಿದ್ದಾರೆ.

    ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ನಾಳೆ ನಂಬಿದವನು ಮೇಧಾವಿ. ಇಂದು ನಂಬಿದವನು ಮನುಷ್ಯ. ನಾನು ಮೊದಲು ಹೀರೋ ಆಗಿ ಫಿಲಂ ಮಾಡಿದಾಗ ನಕ್ಕಿದ್ದರು. ಆದರೆ ನನ್ನ ಸಿನಿಮಾ ಸಿಲ್ವರ್ ಜ್ಯುಬಿಲಿ ಕಂಡಿವೆ. ನಾಳೆ 12 ಘಂಟೆಗೆ ನಾಮಪತ್ರ ಸಲ್ಲಿಸಲಿದ್ದೇನೆ. ಮೋದಿ, ಅಮಿತ್ ಶಾ, ಯಡಿಯೂರಪ್ಪ, ಸದಾನಂದ ಗೌಡರ ಕನಸು ನನಸು ಮಾಡುತ್ತೇನೆ ಎಂದು ಹೇಳಿದರು.

    ಜನರಿಗೆ ಗೊತ್ತಿರುವ ವ್ಯಕ್ತಿಯಾಗಿರುವ ನಟ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ವಿಧಾನ ಪರಿಷತ್ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ.

    ಶೋಭಾ ಕರಂದ್ಲಾಜೆಯವರಿಗೆ ಯಶವಂತಪುರ ಕ್ಷೇತ್ರದ ಟಿಕೆಟ್ ಸಿಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಬಿಜೆಪಿ ಹೈಕಮಾಂಡ್ ಸಂಸದರ ಪೈಕಿ ಬಿಎಸ್ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರಿಗೆ ಮಾತ್ರ ಸ್ಪರ್ಧಿಸಲು ಅನುಮತಿ ನೀಡಿತ್ತು. ಹೀಗಾಗಿ ಬಿಜೆಪಿ ಯಶವಂತಪುರಕ್ಕೆ ಸೂಕ್ತ ಅಭ್ಯರ್ಥಿಯನ್ನು ಹುಡುಕುತಿತ್ತು. ಮೂರು ಪಟ್ಟಿ ಬಿಡುಗಡೆಯಾದಗಲೂ ಯಶವಂತಪುರದ ಅಭ್ಯರ್ಥಿಯನ್ನು ಬಿಜೆಪಿ ಪ್ರಕಟಿಸಿರಲಿಲ್ಲ. ಆದರೆ ಇಂದು ಪ್ರಕಟವಾದ ನಾಲ್ಕನೇಯ ಪಟ್ಟಿಯಲ್ಲಿ ಜಗ್ಗೇಶ್ ಅವರಿಗೆ ಟಿಕೆಟ್ ನೀಡಿ ಕಣಕ್ಕೆ ಇಳಿಸಿದೆ.

  • ನಟ ಹುಚ್ಚ ವೆಂಕಟ್ ತಲೆಗೆ ಹೆಲ್ಮೆಟ್ ನಿಂದ ಹಲ್ಲೆಗೈದ ಯುವಕ!

    ನಟ ಹುಚ್ಚ ವೆಂಕಟ್ ತಲೆಗೆ ಹೆಲ್ಮೆಟ್ ನಿಂದ ಹಲ್ಲೆಗೈದ ಯುವಕ!

    ಬೆಂಗಳೂರು: ಸ್ಯಾಂಡಲ್ ವುಡ್ ನಟ ಹುಚ್ಚ ವೆಂಕಟ್ ಮೇಲೆ ಯುವಕನೊಬ್ಬ ನಡುರಸ್ತೆಯಲ್ಲೇ ಹಲ್ಲೆ ಮಾಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ  ರಾತ್ರಿ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಏನಿದು ಘಟನೆ?: ರಾತ್ರಿ ಊಟ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ನಟ ವೆಂಕಟ್ ರನ್ನು ರೇಗಿಸಿದ್ದಾನೆ. ಈ ವೇಳೆ ವೆಂಕಟ್ ಆತನಿಗೆ ಸೈಲೆಂಟಾಗಿ ಬುದ್ಧಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕ ತನ್ನ ಕೈಯಲಿದ್ದ ಹೆಲ್ಮೆಟ್ ನಿಂದ ವೆಂಕಟ್ ತಲೆಗೆ ಹಲ್ಲೆ ಮಾಡಿದ್ದಾನೆ. ಹೆಲ್ಮೆಟ್ ನಿಂದ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಕುರಿತು ಹುಚ್ಚ ವೆಂಕಟ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಯಾವುದೋ ಒಂದು ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಗಲಾಟೆ ಶುರುವಾಯ್ತು. ಅವರು ಡ್ರಿಂಕ್ಸ್ ಮಾಡಿದ್ರು. ಆ ಬಳಿಕ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದೇವೆ ಅಂತ ಹೇಳಿದ್ರು.

    ಗಲಾಟೆಗಳು ನನಗೆ ಮಾಮೂಲಿಯಾಗಿದೆ. ಕುಡಿದಿದ್ರಿಂದ ಆತ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಯುವಕ ಸಾರಿ ಕೇಳಿದ್ದಾನೆ. ಈ ವಿಚಾರವನ್ನು ದೊಡ್ಡದು ಮಾಡಬೇಡಿ. ಗಲಾಟೆ, ಹಲ್ಲೆಗಳು ನಮಗೆ ದೊಡ್ಡ ವಿಚಾರವಲ್ಲ. ಒಂದು ಸಮಾಜ ಅಂತ ಹೋದಾಗ ಇದೆಲ್ಲ ಮಾಮೂಲಿ, ಹಲ್ಲೆಗಳು ನಡೆಯುತ್ತವೆ. ಅದನ್ನು ಎದುರಿಸಬೇಕು ಅಂತ ಅಂದ್ರು.

    ಪೊಲೀಸ್ ರಕ್ಷಣೆ ತಗೊಂಡಿಲ್ಲ. ಸೆಕ್ಯುರಿಟಿ ಗಾರ್ಡ್ ಗಳಿಲ್ಲ. ಹೀಗೆ ಯಾರಿಲ್ಲದೇ ಒಬ್ಬನೇ ಒಡಾಡುತ್ತಿದ್ದೀನಿ. ಹೀಗಾಗಿ ಒಂದೊಂದು ಬಾರಿ ಹೀಗಾಗುತ್ತೆ. ಯುವಕ ನನ್ನ ಮೇಲೆ ಹಲ್ಲೆ ಮಾಡಿದ್ದಕ್ಕೆ ನಾನು ಹೊಡೆದಿದ್ದೀನಿ. ಹೀಗಾಗಿ ಈ ವಿಚಾರ ಇಲ್ಲೇ ಬಿಟ್ಬಿಡಿ ಅಂತ ಹುಚ್ಚಾ ವೆಂಕಟ್ ಮನವಿ ಮಾಡಿಕೊಂಡಿದ್ದಾರೆ.

  • ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ- ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ

    ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ- ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ

    ಬೆಂಗಳೂರು: ವರದಕ್ಷಿಣೆಗಾಗಿ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಶವಂತಪುರದ ತ್ರಿವೇಣಿ ನಗರದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಹೆಬ್ಬಾಳದ ನಿವಾಸಿಗಳಾದ ಸುನಂದ ಮತ್ತು ಶಂಕರ್ ದಂಪತಿಯ ಮಗಳು ಚಂದ್ರಿಕಾ ಎಂಬಾಕೆಯನ್ನು ರಾಜೇಶ್ ಎಂಬಾತನ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆ ಆದಾಗಿನಿಂದಲೂ ರಾಜೇಶ್ ವರದಕ್ಷಿಣೆ ತರುವಂತೆ ಪತ್ನಿಗೆ ನಿತ್ಯವೂ ಕಿರುಕುಳ ಹಾಗೂ ಚಿತ್ರ ಹಿಂಸೆ ನೀಡುತ್ತಿದ್ದನು.

    ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಅಂತಾ ಚಂದ್ರಿಕಾ ಪೋಷಕರು ಆರೋಪಿಸುತ್ತಿದ್ದಾರೆ.

    ಸದ್ಯ ಚಂದ್ರಕಾರ ಮೃತದೇಹ ಖಾಸಗಿ ಆಸ್ಪತ್ರೆಯೊಂದರಲ್ಲಿ ಇರಿಸಲಾಗಿದೆ. ಮೃತ ಚಂದ್ರಿಕಾಗೆ ಒಂದು ವರ್ಷದ ಗಂಡು ಮಗು ಇದೆ. ಗಂಡು ಮಗುವನ್ನು ಲೆಕ್ಕಿಸದೇ ಗಂಡ, ಅತ್ತೆ, ಮಾವ ಸೇರಿ ಕೊಲೆ ಮಾಡಿದ್ದಾರೆಂದು ಪೋಷಕರ ಆರೋಪಿಸುತ್ತಿದ್ದಾರೆ. ಅಲ್ಲದೇ 25 ಲಕ್ಷ ವರದಕ್ಷಿಣೆ ತರುವಂತೆ ಪತಿ ರಾಜೇಶ್ ಕಿರುಕುಳ ನೀಡ್ತಾ ಇದ್ದ ಅಂತ ಪೋಷಕರು ದೂರಿದ್ದಾರೆ.

  • ವಿಶ್ವ ಯೋಗ ದಿನಾಚರಣೆ: ಶಾಸಕರ ಭವನದಲ್ಲಿ ಬೆರಳೆಣಿಕೆಯಷ್ಟೇ ಶಾಸಕರು ಭಾಗಿ!

    ವಿಶ್ವ ಯೋಗ ದಿನಾಚರಣೆ: ಶಾಸಕರ ಭವನದಲ್ಲಿ ಬೆರಳೆಣಿಕೆಯಷ್ಟೇ ಶಾಸಕರು ಭಾಗಿ!

    ಬೆಂಗಳೂರು: ಇಂದು ವಿಶ್ವದಾದ್ಯಂತ ಮೂರನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ದೇಶದೆಲ್ಲೆಡೆ ಯೋಗ ದಿನವನ್ನು ಆಚರಿಸುತ್ತಿದ್ದು, ಬೆಂಗಳೂರಿನ ಯಶವಂತಪುರ, ಕಂಠೀರವ ಸ್ಟುಡಿಯೋ ಹಾಗೂ ಶಾಸಕರ ಭವನ ಸೇರಿದಂತೆ ಹಲವೆಡೆ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

    ವಿಶ್ವ ಯೋಗದಿನಾಚರಣೆ ಹಿನ್ನೆಲೆಯಲ್ಲಿ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇವಲ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಭಾಗಿಯಾಗಿದ್ದಾರೆ.

    ಸ್ಪೀಕರ್ ಕೋಳಿವಾಡ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಈಶ್ವರಪ್ಪ, ಬಸವರಾಜ ಹೊರಟ್ಟಿ, ಸಿ.ಟಿ.ರವಿ, ಮಾಜಿ ಆರೋಗ್ಯ ಸಚಿವ ಮಾಲಕರೆಡ್ಡಿ, ಪರಿಷತ್ ಸದಸ್ಯೆಯರಾದ ವೀಣಾ ಅಚ್ಚಯ್ಯ, ಜಯಮ್ಮ ಸೇರಿದಂತೆ 18 ಮಂದಿ ಶಾಸಕರು ಪಾಲ್ಗೊಂಡಿದ್ದರು. ಸ್ಪೀಕರ್ ಕೋಳಿವಾಡ ಅವರು ನೆಲದ ಮೇಲೆ ಕುಳಿತು ಯೋಗಾಸಾನಮಾಡಲು ಸಾಧ್ಯವಿಲ್ಲ ಎಂದು ಕುರ್ಚಿ ಮೇಲೆ ಕುಳಿತು ಯೋಗಾಸಾನ ಮಾಡಿದ್ದಾರೆ. ಯೋಗ ಮಾಡಲು ಶಾಸಕರು ನಿರಾಸಕ್ತಿ ತೋರಿಸಿದ್ದು, ಹೀಗಾಗಿ ಯೋಗಾ ತರಬೇತುದಾರರು ಶಾಸಕರಿಗಾಗಿ ಕಾದು ಕಾದು ಸುಸ್ತಾಗಿದ್ದಾರೆ ಎನ್ನಲಾಗಿದೆ. 299 ವಿಧಾನಮಂಡಲ ಸದಸ್ಯರಲ್ಲಿ 20 ಮಂದಿ ಮಾತ್ರ ಭಾಗಿಯಾಗಿರುವುದು ವಿಶೇಷ.

    ಯಶವಂತಪುರದ ವರ್ಲ್ಡ್ ಟ್ರೇಡ್ ಸೆಂಟರ್‍ನಲ್ಲಿ ಕೂಡ ಅಕ್ಷರ ಪವರ್ ಯೋಗದಿಂದ ಆಯೋಜಿಸಿದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಇನ್ನು ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂದೆ ನಡೆದ ಯೋಗ ದಿನಾಚರಣೆಯಲ್ಲಿ ಬಿಎಸ್ ಯಡಿಯೂರಪ್ಪ, ಶಾಸಕ ಅಶ್ವತ್ ನಾರಾಯಣ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.

    ಕಂಠೀರವ ಸ್ಟುಡಿಯೋದಲ್ಲಿ ಕೂಡ ಆರೋಗ್ಯ ಇಲಾಖೆಯಿಂದ ಮೂರನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದಾರೆ. ಹಲವಾರು ಯೋಗಪಟುಗಳು ಕೂಡ ಪಾಲ್ಗೊಳ್ಳುವ ಮೂಲಕ ಈ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

     

  • ಶೀಲ ಶಂಕಿಸಿದ ಗಂಡನನ್ನೇ ಕೊಂದಳು ಪತ್ನಿ!

    ಶೀಲ ಶಂಕಿಸಿದ ಗಂಡನನ್ನೇ ಕೊಂದಳು ಪತ್ನಿ!

    -ಮಗನನ್ನ ಹತ್ಯೆ ಮಾಡಿದ್ರೂ ಸೊಸೆ ಮೇಲೆ ಅತ್ತೆ ಪ್ರೀತಿ

    ಬೆಂಗಳೂರು: ಗಂಡನ ಕಿರುಕುಳ ತಾಳಲಾರದೇ ಹೆಂಡತಿಯೇ ಗಂಡನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಶವಂತಪುರದ ಸುಬೇದಾರ್‍ಪಾಳ್ಯದಲ್ಲಿ ನಡೆದಿದೆ.

    36 ವರ್ಷದ ಸತೀಶ್ ಮೃತ ದುರ್ದೈವಿ. ಮೂಲತಃ ತುಮಕೂರಿನವನಾದ ಸತೀಶ್ ಬೆಂಗಳೂರಲ್ಲಿ ಸೆಕ್ಯುರಿಟಿ ಸೂಪರ್‍ವೈಸರ್ ಆಗಿ ಕೆಲಸ ಮಾಡ್ತಿದ್ದ. ಕಲ್ಪನಾ ಅನ್ನೋರ ಜೊತೆ ಮದುವೆಯಾಗಿ ಎರಡು ಮಕ್ಕಳೂ ಕೂಡ ಇವೆ. ಆದ್ರೆ ಪ್ರತಿ ದಿನ ಕುಡಿದು ಬರ್ತಿದ್ದ ಸತೀಶ್ ಹೆಂಡತಿಯ ಶೀಲದ ಮೇಲೆ ಅನುಮಾನ ಪಡುತ್ತಿದ್ದ.

    ಇದರಿಂದ ಬೇಸತ್ತ ಕಲ್ಪನಾ ಬುಧವಾರ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಆದರೆ ಸತೀಶ್ ಕುಟುಂಬದವರು ಮಾತ್ರ ಕಲ್ಪನಾ ಮೇಲೆ ಯಾವುದೇ ಆರೋಪ ಮಾಡ್ತಿಲ್ಲ. ಪ್ರಕರಣ ದಾಖಲಿಸಿಕೊಂಡಿರೋ ಯಶವಂತಪುರ ಪೊಲೀಸ್ರು ಕಲ್ಪಾನರನ್ನ ವಶಕ್ಕೆ ಪಡೆದು ತನಿಖೆ ನಡೆಸ್ತಿದ್ದಾರೆ.

  • ಸಡನ್ ಬ್ರೇಕ್ ಹಾಕಿದ್ದರಿಂದ ಲಾರಿಗೆ ಕಾರು ಡಿಕ್ಕಿ: ಪ್ರಶ್ನಿಸಲು ಹೋದ ಕಾರು ಚಾಲಕ ಲಾರಿಯಡಿ ಸಿಲುಕಿ ಸಾವು

    ಸಡನ್ ಬ್ರೇಕ್ ಹಾಕಿದ್ದರಿಂದ ಲಾರಿಗೆ ಕಾರು ಡಿಕ್ಕಿ: ಪ್ರಶ್ನಿಸಲು ಹೋದ ಕಾರು ಚಾಲಕ ಲಾರಿಯಡಿ ಸಿಲುಕಿ ಸಾವು

    ಬೆಂಗಳೂರು: ನಗರದ ಯಶವಂತಪುರದಲ್ಲಿ ಶನಿವಾರ ರಾತ್ರೀ ಭೀಕರ ಅಪಘಾತವೊಮದು ಸಂಭವಿಸಿದ್ದು. ಘಟನೆಯಲ್ಲಿ ಉಬರ್ ಕ್ಯಾಬ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅನಿಲ್ ಕುಮಾರ್ ಮೃತ ದುರ್ದೈವಿ ಉಬರ್ ಕ್ಯಾಬ್ ಚಾಲಕ.

    ನಡೆದಿದ್ದೇನು?: ನಿನ್ನೆ ರಾತ್ರಿ ಬಿಇಎಲ್ ಫ್ಲೈ ಓವರ್ ಬಳಿ ವೇಗವಾಗಿ ಹೋಗುತ್ತಿದ್ದ ಲಾರಿ ಸಡನ್ ಆಗಿ ಬ್ರೇಕ್ ಹಾಕಿದೆ. ಪರಿಣಾಮ ಹಿಂದುಗಡೆಯಿಂದ ಬರುತ್ತಿದ್ದ ಉಬರ್ ಕ್ಯಾಬ್ ಲಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕ್ಯಾಬ್ ಚಾಲಕ ಸಿಟ್ಟಿನಿಂದ ಕೆಳಗಿಳಿದು ಲಾರಿ ಚಾಲಕನನ್ನು ಪ್ರಶ್ನೆ ಮಾಡಲು ಹೋಗಿದ್ದಾರೆ. ಆದ್ರೆ ನಿಲ್ಲದೇ ನಿಧಾನವಾಗಿ ಹೋಗುತ್ತಿದ್ದ ಲಾರಿ ಚಕ್ರಕ್ಕೆ ಸಿಲುಕಿ ಕಾರು ಚಾಲಕ ಅನಿಲ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ವಿಷಯ ತಿಳಿದ ಯಶವಂತಪುರ ಸಂಚಾರಿ ಠಾಣೆ ಪೊಲೀಸ್ರಿಗೆ ಶಾಕ್ ಆಗಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು ಒಂದು ಕಡೆ ತಾನೇ ಹಿಂದಿನಿಂದ ಆಕ್ಸಿಡೆಂಟ್ ಮಾಡಿದ ಕಾರು ರಸ್ತೆ ಬದಿ ನಿಂತಿದ್ರೆ, ಡ್ರೈವರ್ ಮುಂದೆಯಿದ್ದ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವುದನ್ನು ಕಂಡು ಶಾಕ್ ಆಗಿತ್ತು. ಬಳಿಕ ಅಲ್ಲಿನ ಸಿಸಿಟಿವಿ ಮತ್ತು ಬೇರೆ ಪ್ರಯಾಣಿಕರ ಬಳಿ ವಿಚಾರಣೆ ಮಾಡಿದಾಗ ಪ್ರಕರಣದ ಸತ್ಯಾಂಶ ಗೊತ್ತಾಗಿದೆ.

    ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ್ನು ವಶಕ್ಕೆ ಪಡೆದಿದ್ದಾರೆ.

  • ರೆಸಾರ್ಟ್‍ಗಳಲ್ಲಿ ಸಂದರ್ಶನ, ಕೆಲಸ ಕೊಡ್ತೀನಿ ಅಂತಾ ಮಂಚಕ್ಕೆ ಕರೆದ ಕಾಮುಕ ಅರೆಸ್ಟ್!

    ರೆಸಾರ್ಟ್‍ಗಳಲ್ಲಿ ಸಂದರ್ಶನ, ಕೆಲಸ ಕೊಡ್ತೀನಿ ಅಂತಾ ಮಂಚಕ್ಕೆ ಕರೆದ ಕಾಮುಕ ಅರೆಸ್ಟ್!

    ಬೆಂಗಳೂರು: ಕೆಲಸ ಕೊಡಿಸೋ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನೊಬ್ಬನನ್ನು ಯಶವಂತಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾರವಾರದ ಅನಂತನಾಥ್ ಹೆಬ್ಬಾರ್ ಅಲಿಯಾಸ್ ದಿನೇಶ್ ಗೌಡ ಬಂಧಿತ ಕಾಮುಕ.

    ನಡೆದಿದ್ದೇನು?: ಕಾಮುಕ ದಿನೇಶ್ ಆನ್ ಲೈನ್ ನಲ್ಲಿ ವಾರ್ಷಿಕ 10 ಲಕ್ಷ ಪ್ಯಾಕೇಜ್ ಉದ್ಯೋಗದ ಆಫರ್ ನೀಡುತ್ತಿದ್ದನು. ಬಳಿಕ ಮಹಿಳೆಯರಂತೆ ಧ್ವನಿ ಬದಲಾಯಿಸಿ ಫೋನಿನಲ್ಲಿ ಮಾತನಾಡುತ್ತಿದ್ದನು. ಇತ್ತ ಮದುವೆಯ ನಂತ್ರ ಉದ್ಯೋಗ ಹರಸಿ ಬೆಂಗಳೂರಿಗೆ ಬಂದಿದ್ದ ಉತ್ತರ ಪ್ರದೇಶ ಮೂಲದ ದಂಪತಿ ಆನ್ ಲೈನ್ ಮೂಲಕ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ ಕಾಮುಕ ಸಂದರ್ಶನಕ್ಕೆ ಬರುವಂತೆ ಮಹಿಳೆಗೆ ಕರೆ ಮಾಡಿದ್ದನು. ಅಲ್ಲದೇ ಖಾಸಗಿ ಹೋಟೆಲ್‍ನಲ್ಲಿ ಸಂದರ್ಶನ ಇದೆ ಒಬ್ಬರೇ ಬರಬೇಕು ಅಂತಾ ಕೂಡ ಹೇಳಿದ್ದನು.

    ರಾಮನಗರ ಬಳಿಯಿರುವ ಪ್ರತಿಷ್ಠಿತ ರೆಸಾರ್ಟ್ ನಲ್ಲಿ ಸಂದರ್ಶನಕ್ಕಾಗಿ ಮಹಿಳೆ ಬಂದಾಗ, ಸಂದರ್ಶನ ಯಾವ ರೀತಿ ಇರುತ್ತದೆ ಎಂದು ವಿವರಿಸುತ್ತೇನೆ ಎಂದು ಕೊಠಡಿಗೆ ಕರೆದಿದ್ದ. ಅಲ್ಲದೇ ಕೊಠಡಿಯಲ್ಲಿ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದನು. ಇದಕ್ಕೆ ಮಹಿಳೆ ಪ್ರತಿರೋಧ ತೋರಿದಾಗ ಅಸಾಮಿ ಮತ್ತು ಬರುವ ಮಾತ್ರೆ ಹಾಕಿ ಜ್ಯೂಸ್ ಕೊಟ್ಟ. ಕೂಡಲೇ ಕಾಮುಕನ ಚಲನವಲನ ಅರಿತ ಮಹಿಳೆ ಗಂಡನಿಗೆ ಫೋನ್ ಮಾಡಿದ್ದಳು. ತಕ್ಷಣವೇ ಮಹಿಳೆಯ ಗಂಡ ಹಾಗೂ ಸಿಬ್ಬಂದಿಗಳು ಹೋಟೆಲ್‍ಗೆ ದಾಳಿ ಮಾಡಿದ್ದಾರೆ. ದಾಳಿ ನಡೆಸುತ್ತಿದ್ದಂತೆ ಕಾಮುಕ ದಿನೇಶ್ ಪರಾರಿಯಾಗಿದ್ದನು.

    ಇದನ್ನೂ ಓದಿ: ಕೆಲಸಕ್ಕೆ ಅರ್ಜಿ ಹಾಕುವ ಮುನ್ನ ಈ ಸುದ್ದಿ ಓದಿ

    ಈ ಬಗ್ಗೆ ದಂಪತಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿ ದಿನೇಶ್ ನನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಇದೇ ರೀತಿ ಇಬ್ಬರು ಯುವತಿಯರ ಮೇಲೆ ದೌರ್ಜನ್ಯ ಎಸಗಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.