Tag: yashas Surya

  • ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ದರ್ಶನ್ ಭೇಟಿ

    ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ದರ್ಶನ್ ಭೇಟಿ

    ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಇದೀಗ ಶೂಟಿಂಗ್‌ಗೆ ಬ್ರೇಕ್ ಹಾಕಿ ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೆ (Koragajja) ಭೇಟಿ ನೀಡಿದ್ದಾರೆ. ಕೊರಗಜ್ಜ ದೈವ ದೇವರಿಗೆ ಡಿಬಾಸ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ದರ್ಶನ್ ಜೊತೆ ನಟ ಚಿಕ್ಕಣ್ಣ (Chikkanna), ನಟ ಯಶಸ್ ಸೂರ್ಯ (Yashas Surya) ಕೂಡ ಭಾಗಿಯಾಗಿದ್ದಾರೆ.

    ದರ್ಶನ್‌ ಭೇಟಿ ನೀಡಿದ್ದ ವೇಳೆ, ಕೊರಗಜ್ಜ ಕ್ಷೇತ್ರದ ವತಿಯಿಂದ ದರ್ಶನ್‌ಗೆ ಗೌರವ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ದರ್ಶನ್ ಮಾಧ್ಯಮಕ್ಕೆ ಪ್ರತಿಕ್ರಿಸಿ, ಮೊದಲ ಬಾರಿಗೆ ಕುತ್ತಾರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ದುಡ್ಡು ಕೊಟ್ರೆ ಮಾತ್ರ ಬರುತ್ತಾರೆ- ಬಿಟೌನ್ ಬಗ್ಗೆ ಪ್ರಿಯಾಮಣಿ ಶಾಕಿಂಗ್ ಹೇಳಿಕೆ

    ಈ ಹಿಂದೆ ಮಂಗಳೂರಿಗೆ ಸುಮಾರು ಬಾರಿ ಬಂದಿದ್ದೇನೆ. ಆದರೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿರಲಿಲ್ಲ. ಹಾಗೆ ನೋಡಿಕೊಂಡು ಹೋಗೋಣ ಅಂತ ಬಂದಿದ್ದೀನಿ. ಇಲ್ಲಿಗೆ ಇಂದು ಬಂದಿರುವುದಕ್ಕೆ ಬೇರೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ ಎಂದು ದರ್ಶನ್ ಮಾಹಿತಿ ನೀಡಿದ್ದಾರೆ.

    ಈ ವರ್ಷ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಡೆವಿಲ್’ (Devil) ಸಿನಿಮಾ ಸೇರಿದಂತೆ 9ಕ್ಕೂ ಹೆಚ್ಚು ಚಿತ್ರಗಳನ್ನು ದರ್ಶನ್ ಅನೌನ್ಸ್ ಮಾಡಿದ್ದಾರೆ. ದರ್ಶನ್ ನಟನೆಯ ಸಾಲು ಸಾಲು ಸಿನಿಮಾ ನೋಡುವ ಮೂಲಕ ಕಣ್ಣಿಗೆ ಹಬ್ಬ ಎಂದೇ ಹೇಳಬಹುದು. ಡಿಬಾಸ್ ಚಿತ್ರಕ್ಕಾಗಿ ಫ್ಯಾನ್ಸ್ ಕೂಡ ಎದುರು ನೋಡ್ತಿದ್ದಾರೆ.

  • ಯಶಸ್ಸಿಗಾಗಿ ತಮ್ಮ ಹೆಸರನ್ನೇ ಬದಲಾಯಿಸಿಕೊಂಡರಾ ಯಶಸ್ ಸೂರ್ಯ

    ಯಶಸ್ಸಿಗಾಗಿ ತಮ್ಮ ಹೆಸರನ್ನೇ ಬದಲಾಯಿಸಿಕೊಂಡರಾ ಯಶಸ್ ಸೂರ್ಯ

    ನ್ನಡ ಸಿನಿಮಾ ರಂಗದಲ್ಲಿ ಅದ್ಭುತವಾದ ಒಂದು ಯಶಸ್ಸಿಗಾಗಿ ಕಾಯುತ್ತಿರುವ ಯಶಸ್ ಸೂರ್ಯ (Yashas Surya) , ಇದೀಗ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಗರಡಿ ಸಿನಿಮಾದಿಂದ ಅವರು ಕೇವಲ ಸೂರ್ಯನಾಗಿ ಉಳಿಯಲಿದ್ದಾರೆ. ಅಷ್ಟಕ್ಕೂ ಈ ಹೆಸರನ್ನು ಬದಲಾಯಿಸಿದ್ದು ನಟ ದರ್ಶನ್ ಎನ್ನುವುದು ವಿಶೇಷ.

    ಗರಡಿ ಸಿನಿಮಾದಲ್ಲಿ ಸೂರ್ಯ, ಗರಡಿ ಸೂರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಅವರನ್ನು ಎಲ್ಲರೂ ಗರಡಿ ಸೂರಿ ಅಂತಾನೇ ಕರೆಯುತ್ತಾರಂತೆ. ಸಿನಿಮಾದಾಚೆಯೂ ತಮಗೆ ಗರಡಿ ಸೂರ್ಯ ಎಂದು ಕರೆಯಿಸಿಕೊಳ್ಳಲು ಇಷ್ಟವೆಂದು ಅವರು ಹೇಳಿಕೊಂಡಿದ್ದಾರೆ. ಇನ್ಮುಂದೆ ತಮ್ಮ ಹೆಸರಿನ ಮುಂದೆ ಯಶಸ್ ಎನ್ನುವ ಪದವು ಇರುವುದಿಲ್ಲವೆಂದು ನಟ ತಿಳಿಸಿದ್ದಾರೆ.

    ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಗರಡಿ (Garadi) ಸಿನಿಮಾದಲ್ಲಿ ಸೂರ್ಯ (Surya), ಪ್ರಮುಖವಾದ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ದರ್ಶನ್ (Darshan), ಬಿ.ಸಿ.ಪಾಟೀಲ್ ಸೇರಿದಂತೆ ಹಲವಾರು ಹೆಸರಾಂತ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಹೊಸ ಹುಡುಗರನ್ನು ಗೆಲ್ಲಿಸಿದ ಯೋಗರಾಜ್ ಭಟ್ಟರು, ಸೂರ್ಯಗೂ ಯಶಸ್ಸು ತಂದು ಕೊಡುತ್ತಾರಾ ಕಾದು ನೋಡಬೇಕು.

     

    ಯುಗ ಯುಗಗಳೇ ಸಾಗಲಿ ಸಿನಿಮಾದಿಂದ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಸೂರ್ಯ, ಆನಂತರ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟರ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. ಆದರೆ, ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ದಕ್ಕಿಲ್ಲ. ಗರಡಿ ಮೂಲಕ ಮತ್ತೊಮ್ಮೆ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಒಡೆಯ’ ದರ್ಶನ್ ತಮ್ಮನಾಗಲಿದ್ದಾರಾ ಪಂಕಜ್?

    ‘ಒಡೆಯ’ ದರ್ಶನ್ ತಮ್ಮನಾಗಲಿದ್ದಾರಾ ಪಂಕಜ್?

    ಬೆಂಗಳೂರು: ತಂದೆ ಎಸ್ ನಾರಾಯಣ್ ಗರಡಿಯಲ್ಲಿ ನಟನಾಗಿ, ನಿರ್ದೇಶಕ ವಿಭಾಗದಲ್ಲಿಯೂ ಪಳಗಿಕೊಂಡಿರುವವರು ಪಂಕಜ್ ನಾರಾಯಣ್. ಇದೀಗ ಶ್ರೀಧರ್ ನಿರ್ದೇಶನದ ಒಡೆಯ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮನಾಗಿ ನಟಿಸಲು ಪಂಕಜ್ ತಯಾರಾಗಿದ್ದಾರೆ!

    ಚಿತ್ರತಂಡದ ಅಧಿಕೃತ ಮೂಲಗಳೇ ಈ ಸುದ್ದಿಯನ್ನು ಹೊರ ಹಾಕಿವೆ. ಅದರನ್ವಯ ದರ್ಶನ್ ಅವರ ತಮ್ಮನಾಗಿ ಪಂಕಜ್ ನಟಿಸಲಿರೋದು ಪಕ್ಕಾ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ಇಬ್ಬರು ಸಹೋದರರಿರಲಿದ್ದಾರಂತೆ. ಅದರಲ್ಲೊಬ್ಬರಾಗಿ ಪಂಕಜ್ ನಟಿಸಿದರೆ, ಮತ್ತೋರ್ವ ಸಹೋದರನಾಗಿ ಯಶಸ್ ಸೂರ್ಯ ಅಭಿನಯಿಸಲಿದ್ದಾರೆ.

    ಚೆಲುವಿನ ಚಿಲಿಪಿಲಿ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಾಯಕನಾಗಿಯೂ ನಟಿಸಿದ್ದ ಪಂಕಜ್ ಒಂದು ಚಿತ್ರದಲ್ಲಿ ನಾರಾಯಣ್ ಅವರಿಗೆ ನಿರ್ದೇಶನ ವಿಭಾಗದಲ್ಲಿಯೂ ಸಾಥ್ ನೀಡಿದ್ದರು. ಇದೀಗ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಒಡೆಯ ಚಿತ್ರದಲ್ಲಿ ನಟಿಸುವ ಸುವರ್ಣಾವಕಾಶವನ್ನೇ ಗಿಟ್ಟಿಸಿಕೊಂಡಿದ್ದಾರೆ.

    ಒಡೆಯ ಚಿತ್ರ ಇದೇ ತಿಂಗಳ ಹತ್ತನೇ ತಾರೀಕಿನಿಂದ ಮೈಸೂರಿನಲ್ಲಿ ಚಿತ್ರೀಕರಣ ಆರಂಭಿಸಲಿದೆ. ಈ ಚಿತ್ರದಲ್ಲಿ ದರ್ಶನ್ ತಮ್ಮಂದಿರ ಪಾತ್ರಗಳಿಗೂ ಮಹತ್ವ ಇದೆಯಂತೆ. ಅಂಥಾ ಪಾತ್ರದಲ್ಲಿ ಮಿಂಚಲು ಪಂಕಜ್ ರೆಡಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv