Tag: Yamuna

  • ದೆಹಲಿ ಪ್ರವಾಹಕ್ಕೆ ಬಿಜೆಪಿಯೇ ಕಾರಣ – AAP ಆರೋಪ

    ದೆಹಲಿ ಪ್ರವಾಹಕ್ಕೆ ಬಿಜೆಪಿಯೇ ಕಾರಣ – AAP ಆರೋಪ

    ಚಂಡೀಗಡ: ಪ್ರವಾಹ ಪೀಡಿತ ದೆಹಲಿಗೆ (Delhi) ಉದ್ದೇಶಪೂರ್ವಕವಾಗಿ ಹತ್ನಿಕುಂಡ್ ಬ್ಯಾರೇಜ್ ಮೂಲಕ ನೀರನ್ನು ತಿರುಗಿಸಲು ಹರಿಯಾಣ ಸರ್ಕಾರವನ್ನು ಬಿಜೆಪಿ (BJP) ಬಳಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ (Aam Aadmi Party) ಆರೋಪಿಸಿದೆ.

    1 ಲಕ್ಷ ಕ್ಯೂಸೆಕ್‍ಗಿಂತ ಹೆಚ್ಚಿನ ಹರಿವನ್ನು ಬೇರೆ ಕಡೆಗಳಿಗೆ ಬಿಡುವಂತಿಲ್ಲ. ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮಾರ್ಗಸೂಚಿಗಳ ಪ್ರಕಾರ 1 ಲಕ್ಷ ಕ್ಯೂಸೆಕ್‍ಗಿಂತ ಹೆಚ್ಚಿನ ನೀರನ್ನು ಪಶ್ಚಿಮ ಯಮುನಾ ಮತ್ತು ಪೂರ್ವ ಯಮುನಾ (Yamuna) ಕಾಲುವೆಗೆ ಬಿಡುವಂತಿಲ್ಲ ಎಂದು ದೆಹಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಟ್ವಿಟರ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಎರಡು ದಿನಗಳ ಫ್ರಾನ್ಸ್ ಪ್ರವಾಸ ಮುಗಿಸಿ UAEಯತ್ತ ಹೊರಟ ಮೋದಿ

    ಪಶ್ಚಿಮ ಯಮುನಾ ಕಾಲುವೆ ಮತ್ತು ಪೂರ್ವ ಯಮುನಾ ಕಾಲುವೆಗೆ ನೀರು ಬಿಡದೆ ಹತ್ನಿಕುಂಡ್ ಬ್ಯಾರೇಜ್‍ನಿಂದ ಯಮುನಾ ನದಿಗೆ ನೀರು ಬಿಡಲಾಗುತ್ತಿದೆ. ಇದು ದೆಹಲಿಯಲ್ಲಿ ಪ್ರವಾಹಕ್ಕೆ ಕಾರಣವಾಗಿದೆ ಎಂದು ಎಎಪಿ ಪಕ್ಷದ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ. ಅಲ್ಲದೇ ಹತ್ನಿಕುಂಡ್‍ನಲ್ಲಿ ಹರಿಯುತ್ತಿರುವ ನೀರಿನ ವೀಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ.

    ಹತ್ನಿಕುಂಡ್ ಬ್ಯಾರೇಜ್‍ನಲ್ಲಿ 1 ಲಕ್ಷ ಕ್ಯೂಸೆಕ್‍ಗಿಂತ ಹೆಚ್ಚಿನ ನೀರಿನ ಹರಿವು ಇದ್ದರೆ ಪಶ್ಚಿಮ ಯಮುನಾ ಮತ್ತು ಪೂರ್ವ ಯಮುನಾ ಕಾಲುವೆಗೆ ನೀರು ಹರಿಯುತ್ತದೆ. ದೆಹಲಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಡಲು ಅನಗತ್ಯ ಆರೋಪ ಮಾಡುತ್ತಿದೆ ಎಂದು ಹರಿಯಾಣದ ನೀರಾವರಿ ಸಲಹೆಗಾರ ದೇವೇಂದ್ರ ಸಿಂಗ್ ಹೇಳಿದ್ದಾರೆ.

    ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ದೆಹಲಿ ಈ ಮಳೆಯಿಂದ ಸಮಸ್ಯೆ ಅನುಭವಿಸುತ್ತಿವೆ. ಕಳೆದ ಮೂರು ದಿನಗಳಿಂದ ಮಳೆ ಆಗದಿದ್ದರೂ ಯಮುನೆಯ ನೀರಿನ ಮಟ್ಟ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದೆ. ತಗ್ಗು ಪ್ರದೇಶದಲ್ಲಿರುವ ನಗರದ ಕೆಲವು ಭಾಗಗಳಿಗೆ ನೀರು ನುಗ್ಗಿರುವುದು ಏಕೆ ಎಂದು ಎಎಪಿ ಮುಖಂಡ ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ.

    ಹತ್ನಿಕುಂಡ್ ಬ್ಯಾರೇಜ್‍ನಲ್ಲಿ, ನೀರಿನ ಹರಿವು ಮೂರು ವಿಭಿನ್ನ ಮಾರ್ಗಗಳಿವೆ. ಒಂದು ಮಾರ್ಗ ನೀರನ್ನು ದೆಹಲಿಗೆ ತರುತ್ತದೆ. ಇನ್ನೊಂದು ಅದನ್ನು ಉತ್ತರ ಪ್ರದೇಶಕ್ಕೆ ಕೊಂಡೊಯ್ಯುತ್ತದೆ. ಇಂತಹ ಪ್ರವಾಹದಲ್ಲಿ ಮೂರು ಕಾಲುವೆಗಳು ನೀರಿನ ಒತ್ತಡವನ್ನು ಸಮಾನವಾಗಿ ಹಂಚಿಕೆ ಮಾಡಿದ್ದರೆ ಇದು ಸೂಕ್ತವಾಗಿತ್ತು. ಆದರೆ ಬಿಜೆಪಿಯು ಯಮುನಾ ನದಿಯನ್ನು ರೂಪಿಸುವ ಮತ್ತು ದೆಹಲಿಯನ್ನು ಪ್ರವೇಶಿಸುವ ಹೊಳೆಗೆ ಎಲ್ಲಾ ನೀರನ್ನು ಕಳುಹಿಸಲು ಸಂಚು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಗ್ರಾಹಕರಿಗೆ ಶಾಕ್ ಮೇಲೆ ಶಾಕ್ – ಆಷಾಢ ಮುಗಿಯುತ್ತಿದ್ದಂತೆ ಹೋಟೆಲ್ ದರ ಏರಿಕೆ ಬರೆ ಫಿಕ್ಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿ ಪ್ರವಾಹ – ಸುಪ್ರೀಂ ಕೋರ್ಟ್‍ವರೆಗೂ ಉಕ್ಕಿ ಹರಿದ ಯಮುನೆ

    ನವದೆಹಲಿ: ಉತ್ತರ ಭಾರತದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ (Rain) ದೆಹಲಿಯ (Delhi) ಹಲವಾರು ಪ್ರದೇಶಗಳು ಜಲಾವೃತವಾಗಿವೆ. ನಗರದ ಮಧ್ಯ ಭಾಗದಲ್ಲಿರುವ ಸುಪ್ರಿಂ ಕೋರ್ಟ್ (Supreme Court) ವರೆಗೂ ಪ್ರವಾಹದ ನೀರು ತಲುಪಿದೆ.

    ಪ್ರವಾಹದಿಂದ ಉಂಟಾಗಿರುವ ಹಾನಿಯ ಆದ್ಯತೆಯ ಮೇಲೆ ಸಮಸ್ಯೆ ಬಗೆಹರಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸರ್ಕಾರ ಸೂಚಿಸಿದೆ. ಕೆಲವು ನಿಯಮಗಳ ಉಲ್ಲಂಘನೆಯೇ ಈ ಪ್ರವಾಹಕ್ಕೆ ಕಾರಣವಾಗಿದೆ. ಇದನ್ನು ಸರಿಪಡಿಸಲು ಎಂಜಿನಿಯರ್‍ಗಳು ರಾತ್ರಿಯಿಡೀ ಕೆಲಸ ಮಾಡುತ್ತಿದ್ದಾರೆ. ಸೇನೆಯ ಸಹಾಯ ಪಡೆಯಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಇದನ್ನೂ ಓದಿ: KRS ಒಳಹರಿವಿನ ಪ್ರಮಾಣ ಕುಸಿತ

    ಮಳೆ ಕಡಿಮೆಯಾಗುತ್ತಿದ್ದು, ಯಮುನಾ (Yamuna) ನದಿಯ ನೀರಿನ ಮಟ್ಟ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು ನಿಧಾನವಾಗಿ ಇಳಿಮುಖವಾಗುತ್ತಿದೆ. ಶುಕ್ರವಾರ (ಇಂದು) ಬೆಳಿಗ್ಗೆ 6 ಗಂಟೆಯ ವೇಳೆಗೆ ಯಮುನಾ ನದಿಯ ನೀರಿನ ಮಟ್ಟವು 208.46 ಮೀಟರ್‍ಗಳಷ್ಟಿದೆ. ಗುರುವಾರ ರಾತ್ರಿಯ ವೇಳೆಗೆ 208.66 ಮೀಟರ್ ಸಮೀಪ ಇತ್ತು. ಇಂದು ನೀರಿನ ಮಟ್ಟ ಕುಸಿಯಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ 208.30 ಮೀಟರ್ ತಲುಪಬಹುದು ಎಂದು ಕೇಂದ್ರ ಜಲ ಆಯೋಗ ಮುನ್ಸೂಚನೆ ನೀಡಿದೆ. ಐಟಿಓ ಮತ್ತು ರಾಜ್‍ಘಾಟ್‍ನಲ್ಲಿರುವ ಪ್ರದೇಶಗಳು ಇನ್ನೂ ಮುಳುಗಡೆಯಾಗಿದೆ. ದೆಹಲಿ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯ ಬಳಿ ಇನ್ನೂ ಪ್ರವಾಹದ ಭೀಕರತಯೆ ಎದ್ದು ಕಾಣುತ್ತಿದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಕಡಿತವಾಗಲಿದೆ ಎಂದು ದೆಹಲಿ ಅಧಿಕಾರಿಗಳು ಹೇಳಿದ್ದಾರೆ.

    ಈ ವಿಚಾರವಾಗಿ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಮುಂದಿನ 24 ಗಂಟೆಗಳಲ್ಲಿ ಯಮುನಾದಲ್ಲಿ ನೀರಿನ ಮಟ್ಟ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

    ಪ್ರವಾಹ ಪರಿಸ್ಥಿತಿಯಿಂದಾಗಿ ಶಾಲೆ ಕಾಲೇಜುಗಳನ್ನು ಹಾಗೂ ತೀರ ಅಗತ್ಯವಿಲ್ಲದ ಸರ್ಕಾರಿ ಕಚೇರಿಗಳನ್ನು ಭಾನುವಾರದವರೆಗೆ ಮುಚ್ಚುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ನೀಡಿದೆ. ಸಿಂಘು ಸೇರಿದಂತೆ ನಾಲ್ಕು ಗಡಿಗಳಿಂದ ನಗರಕ್ಕೆ ಭಾರಿ ಸರಕು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

    ಪಂಜಾಬ್, ಹರಿಯಾಣ ರಾಜ್ಯಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ. ಹರಿಯಾಣದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವಿನ ಸಂಖ್ಯೆ 16 ಕ್ಕೆ ಏರಿದೆ. ಪಂಜಾಬ್‍ನಿಂದ 11 ಸಾವುಗಳು ವರದಿಯಾಗಿದೆ. ಕಳೆದ ಮೂರು ದಿನಗಳಿಂದ ಹವಾಮಾನ ಸುಧಾರಿಸಿದ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳು ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಒಟ್ಟಾರೆಯಾಗಿ, ಪಂಜಾಬ್‍ನಲ್ಲಿ 14 ಮತ್ತು ಹರಿಯಾಣದಲ್ಲಿ 7 ಜಿಲ್ಲೆಗಳು ಪ್ರವಾಹದಿಂದ ಭಾರೀ ಹಾನಿಗೊಳಗಾಗಿವೆ. ಇದನ್ನೂ ಓದಿ: RTPS ಮೂರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ್ ಲಾಕ್‍ಡೌನ್ – ನಿರ್ಮಲಳಾದ ಯಮುನಾ

    ಭಾರತ್ ಲಾಕ್‍ಡೌನ್ – ನಿರ್ಮಲಳಾದ ಯಮುನಾ

    ನವದೆಹಲಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ದೆಹಲಿ ಮತ್ತು ಎನ್‍ಸಿಆರ್ ಪ್ರದೇಶ ಸಂಪೂರ್ಣ ಸ್ತಬ್ಧವಾಗಿದ್ದು, ಈಗ ಪ್ರಕೃತಿಯಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ವಾಹನಗಳ ದಟ್ಟಣೆ ಇಳಿಮುಖವಾದ ಬಳಿಕ ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ಇಳಿಕೆಯಾಗಿ ಶುದ್ಧ ಗಾಳಿಯಾಗಿ ಬದಲಾಗಿತ್ತು.

    ಈಗ ದೆಹಲಿಯ ಹೊರ ವಲಯದಲ್ಲಿರುವ ಕಾರ್ಖಾನೆಗಳು, ಕೈಗಾರಿಕೆಗಳು ಬಂದ್ ಆಗಿರುವ ಕಾರಣ ಯಮುನಾ ನದಿಯೂ ಶುದ್ಧವಾಗುತ್ತಿದೆ. ನದಿಯ ಮಾಲಿನ್ಯ ಪ್ರಮಾಣ ನಿಯಂತ್ರಣವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

    ಕೈಗಾರಿಕೆಗಳಿಂದ ನದಿಗೆ ಬಿಡಲಾಗುತ್ತಿದ್ದ ತಾಜ್ಯದ ಪ್ರಮಾಣ ಇಳಿಕೆಯಾದ ಕಾರಣ ನದಿಯಲ್ಲಿನ ನೀರು ಶುದ್ಧವಾಗಿದೆ. ನೀರಿನಲ್ಲಿನಲ್ಲಿದ್ದ ವಿಷಕಾರಿ ಅಂಶಗಳ ಪ್ರಮಾಣ ಕಡಿಮೆಯಾಗಿದೆ ಎಂದು ಜಲ ಮಂಡಳಿ ಉಪಾಧ್ಯಕ್ಷ ರಾಘವ್ ಚಾಧ್ ತಿಳಿಸಿದ್ದಾರೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್‍ಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಆದ್ದರಿಂದ ದೆಹಲಿ ಸಂಪೂರ್ಣ ಬಂದ್ ಆಗಿದ್ದು, ನದಿ ನೀರು ಮತ್ತು ಗಾಳಿಯ ಗುಣಮಟ್ಟದಲ್ಲಿ ಮಾಲಿನ್ಯ ಇಳಿಕೆಯಾಗಿದೆ. ಆದರೆ ಈ ಬೆಳವಣಿಗೆ ತಾತ್ಕಾಲಿಕ, ಯಾಕೆಂದರೆ ಲಾಕ್‍ಡೌನ್ ತೆರವುಗೊಳಿಸದ ಬಳಿಕ ಮತ್ತೆ ಹಳೆ ಪರಿಸ್ಥಿತಿ ಮುಂದುವರಿಯಲಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

    ಆಮ್ ಅದ್ಮಿ ಯಮುನಾ ನದಿ ಸ್ವಚ್ಛಗೊಳಿಸುವ ಭರವಸೆ ನೀಡಿದ್ದರು. ಈಗ ಅದನ್ನು ಮುಂದುವರಿಸಲು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

  • 100 ರೂ.ಗಾಗಿ ಯಮುನಾ ನದಿಗೆ ಹಾರಿ ಪ್ರಾಣಬಿಟ್ಟರು!

    100 ರೂ.ಗಾಗಿ ಯಮುನಾ ನದಿಗೆ ಹಾರಿ ಪ್ರಾಣಬಿಟ್ಟರು!

    ಚಂಡೀಗಢ್: ಸ್ನೇಹಿತನೊಂದಿಗೆ ಕೇವಲ 100 ರೂ. ಬೆಟ್ ಕಟ್ಟಿ, ಯಮುನಾ ನದಿಗೆ ಹಾರಿ ಯುವಕರಿಬ್ಬರು ಮೃತಪಟ್ಟ ಘಟನೆ ಹರಿಯಾಣದ ಬಲ್ಲಭಗಢ್ (ವಲ್ಲಭಗಢ್) ನಡೆದಿದೆ.

    ಕೃಷ್ಣ ಹಾಗೂ ರಾಹುಲ್ ಮೃತಪಟ್ಟ ಯುವಕರು. ಗುರುವಾರ ಸಂಜೆ ಇಬ್ಬರು ಸ್ನೇಹಿತ ಕಟ್ಟಿದ್ದ ಬೆಟ್‍ನಿಂದಾಗಿ, ರಭಸವಾಗಿ ಹರಿಯುತ್ತಿದ್ದ ಯಮುನಾ ನದಿಗೆ ಹಾರಿದ್ದರು. ನದಿಯ ರಭಸಕ್ಕೆ ಮೇಲೆ ಏಳಲು ಆಗದೆ ಮುಳುಗಿ, ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರು.

    ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ, ಎನ್‌ಡಿಆರ್‌ಎಫ್‌ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಎನ್‍ಡಿಆರ್‍ಎಫ್ ತಂಡ ಯುವಕರ ಮೃತ ದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಗುರುವಾರ ರಾತ್ರಿ ಕಾರ್ಯಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.

    ಶುಕ್ರವಾರ ರಾಹುಲ್ ಮೃತದೇಹವು ಪಲ್ವಲ್ ಎಂಬಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews