Tag: xerox

  • ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್

    ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್

    – 6 ಕೋಟಿ ಮೌಲ್ಯದ ನಕಲಿ ನೋಟುಗಳು ವಶಕ್ಕೆ

    ಬೆಂಗಳೂರು: ನಿಷೇಧಗೊಂಡಿರುವ ನೋಟುಗಳ ಬದಲಾವಣೆ ಮಾಡುತ್ತೇವೆಂದು ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 6 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಮೊದಲಿಗೆ 35 ಲಕ್ಷ ಅಸಲಿ ನೋಟುಗಳನ್ನು ತಂದು ಬ್ಲಾಕ್ ಅಂಡ್ ವೈಟ್ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 1 ಸಾವಿರ 500 ಮುಖಬೆಲೆಯ 70 ಲಕ್ಷ ಅಸಲಿ ನೋಟುಗಳ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಮತ್ತಷ್ಟು ಹಣ ಕಾಸರಗೋಡಿನಲ್ಲಿದೆ ಎಂದು ಬಹಿರಂಗಪಡಿಸಿದ್ದಾರೆ. ಹೀಗಾಗಿ ಕಾಸರಗೋಡಿಗೆ ಹೊರಟ ಪೊಲೀಸರಿಗೆ 6 ಕೋಟಿ ಜೆರಾಕ್ಸ್ ನೋಟುಗಳು ಪತ್ತೆಯಾಗಿದೆ. ಜೊತೆಗೆ 16 ಮೂಟೆ ಪೇಪರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮಾರ್ಚ್ ಅಂತ್ಯದ ವೇಳೆಗೆ ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಸಿದ್ಧತೆ

    ಈ ಪ್ರಕರಣ ಕುರಿತಂತೆ ಮಂಜುನಾಥ್, ದಯಾನಂದ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿ ಗೋವಿಂದಪುರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರಲ್ಲಿ ಮತ್ತೋರ್ವ ಆರೋಪಿ ವೆಂಕಟೇಶ್ ಬಿಬಿಎಂಪಿಯಲ್ಲಿ ಸಬ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: BJP, RSS ವಿರುದ್ಧ ಹೋರಾಡಲು ಪಕ್ಷದಲ್ಲಿ ಏಕತೆ ಇರಬೇಕು: ಸೋನಿಯಾ ಗಾಂಧಿ

  • ಅ.28 ರಂದು ಧಾರವಾಡ ಜಿಲ್ಲಾದ್ಯಂತ  ಸ್ಕ್ಯಾನಿಂಗ್‌, ಝೆರಾಕ್ಸ್‌ ಸೆಂಟರ್‌ ಬಂದ್‌

    ಅ.28 ರಂದು ಧಾರವಾಡ ಜಿಲ್ಲಾದ್ಯಂತ ಸ್ಕ್ಯಾನಿಂಗ್‌, ಝೆರಾಕ್ಸ್‌ ಸೆಂಟರ್‌ ಬಂದ್‌

    ಧಾರವಾಡ: ಅ. 27ರ ಸಂಜೆ 5 ಗಂಟೆಯಿಂದ ಅ. 28ರ ಸಂಜೆ 5 ಗಂಟೆಯವರೆಗೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಸ್ಕ್ಯಾನಿಂಗ್, ಝೆರಾಕ್ಸ್ ಹಾಗೂ ಕಂಪ್ಯೂಟರ್ ಕೇಂದ್ರಗಳು ಬಂದ್‌ ಆಗಲಿವೆ.

    ಅ.28 ರಂದು ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥಿತ ಚುನಾವಣೆ ನಡೆಸುವ ಉದ್ದೇಶದಿಂದ ಅ. 27ರ ಸಂಜೆ 5 ಗಂಟೆಯಿಂದ ಅ. 28ರ ಸಂಜೆ 5 ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲಾ ಸ್ಕ್ಯಾನಿಂಗ್, ಝೆರಾಕ್ಸ್ ಹಾಗೂ ಕಂಪ್ಯೂಟರ್ ಸೆಂಟರ್‌ಗಳು ಚುನಾವಣಾ ಅವಧಿಯಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಆದೇಶ ಹೊರಡಿಸಿದ್ದಾರೆ.

    ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಅನ್ವಯ ಈ ಆದೇಶ ಹೊರಡಿಸಲಾಗಿದೆ. ಆದೇಶ ಉಲ್ಲಂಘಿಸುವ ಇಂತಹ ಕೇಂದ್ರಗಳ ಮಾಲೀಕರು ಯಾವುದೇ ಪರಿಹಾರಕ್ಕೆ ಅರ್ಹರಾಗಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

    ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಸಿದ್ದಲಿಂಗಪ್ಪ ವಿ.ಸಂಕನೂರ, ಕಾಂಗ್ರೆಸ್‌ನಿಂದ ಆರ್. ಎಂ.ಕುಬೇರಪ್ಪ, ಜೆಡಿಎಸ್‌ನಿಂದ ಶಿವಶಂಕರ ಚನ್ನಪ್ಪ ಕಲ್ಲೂರ ಕಣದಲ್ಲಿದ್ದಾರೆ.

  • ಜೆರಾಕ್ಸ್ ನೋಟುಗಳ ಚಲಾವಣೆ: ಮೈಸೂರಿನಲ್ಲಿ ಮಹಿಳೆ ಅರೆಸ್ಟ್

    ಜೆರಾಕ್ಸ್ ನೋಟುಗಳ ಚಲಾವಣೆ: ಮೈಸೂರಿನಲ್ಲಿ ಮಹಿಳೆ ಅರೆಸ್ಟ್

    ಸಾಂರ್ದಭಿಕ ಚಿತ್ರ

    ಮೈಸೂರು: ಜೆರಾಕ್ಸ್ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮಹಿಳೆಯನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿ 8,800 ರೂ. ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

    ಮೈಸೂರಿನ ಜ್ಯೋತಿ ನಗರದ ನಿವಾಸಿಯಾ ಗೌರಮ್ಮ(40) ಬಂಧಿತ ಆರೋಪಿ. ವಿದ್ಯಾರಣ್ಯಪುರಂ ನಲ್ಲಿ ಬೀದಿಬದಿ ವ್ಯಾಪಾರಸ್ಥರ ಬಳಿ ನೋಟು ಚಲಾವಣೆ ಮಾಡುವ ವೇಳೆ ಗೌರಮ್ಮ ಸಿಕ್ಕಿಬಿದ್ದಿದ್ದಾಳೆ. ಆದರೆ ತಿಲಕ್ ನಗರದಲ್ಲಿ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದ ಖಲೀಲ್ ನಾಪತ್ತೆಯಾಗಿದ್ದಾನೆ.

    ಬಂಧಿತಳಿದ್ದ 500 ಮುಖಬೆಲೆಯ 10 ನೋಟುಗಳು, 200 ಮುಖಬೆಲೆಯ 18 ನೋಟುಗಳು ಹಾಗೂ 100 ಮುಖಬೆಲೆಯ 2 ನೋಟುಗಳು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕಂಪ್ಯೂಟರ್, ಪ್ರಿಂಟರ್ ಹಾಗೂ ಜೆರಾಕ್ಸ್ ಯಂತ್ರವನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದು ಪೇಜ್ ಜೆರಾಕ್ಸ್ ಗೂ ಎಸ್‍ಪಿ ಅನುಮತಿ ಬೇಕಂತೆ- ಸಿಐಡಿ ಅಧಿಕಾರಿಗಳಲ್ಲಿ ಅಸಮಾಧಾನ!

    ಒಂದು ಪೇಜ್ ಜೆರಾಕ್ಸ್ ಗೂ ಎಸ್‍ಪಿ ಅನುಮತಿ ಬೇಕಂತೆ- ಸಿಐಡಿ ಅಧಿಕಾರಿಗಳಲ್ಲಿ ಅಸಮಾಧಾನ!

    ಬೆಂಗಳೂರು: ಸಿಐಡಿ ಎಸ್‍ಪಿ ಕುಮಾರಸ್ವಾಮಿಯ ಸಣ್ಣತನದ ರೂಲ್ಸ್ ನಿಂದ ಅಧಿಕಾರಿಗಳಲ್ಲಿ ಅಸಮಾಧಾನವೊಂದು ಭುಗಿಲೆದ್ದಿದೆ.

    ಜೆರಾಕ್ಸ್ ಮಿಷಿನ್ ಆನ್ ಮಾಡೋಕೆ ಎಸ್‍ಪಿ ಅನುಮತಿ ಬೇಕು. ಒಂದೇ ಒಂದು ಶೀಟ್ ಜೆರಾಕ್ಸ್ ಮಾಡಿಸಬೇಕು ಅಂದ್ರೂ ಎಸ್ ಪಿ ಆರ್ಡರ್ ಬೇಕಂತೆ. ಸಿಐಡಿಯ ಅಡ್ಮಿನ್ ಎಸ್ ಪಿ ಕುಮಾರಸ್ವಾಮಿ ಸಹಿ ಇಲ್ಲದೇ ಜೆರಾಕ್ಸ್ ಮಾಡಿಸುವಂತಿಲ್ಲ.

    ಜೆರಾಕ್ಸ್ ಯಂತ್ರಗಳ ನಿರ್ವಹಣೆಗೆಂದೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದ್ರೆ ಎಸ್ ಪಿ ಕುಮಾರಸ್ವಾಮಿ ಸಹಿ ಮಾಡಿಸಿಕೊಂಡು ಬಂದ್ರೆ ಮಾತ್ರ ಇವರು ಜೆರಾಕ್ಸ್ ಮಾಡಿಕೊಡೋದು. ಒಂದು ವೇಳೆ ಅಡ್ಮಿನ್ ಎಸ್ ಪಿ ರಜೆ ಇದ್ದರೆ, ಅಡ್ಮಿನ್ ಡಿವೈಎಸ್ ಪಿ ಮತ್ತು ಇನ್ಸ್ ಪೆಕ್ಟರ್ ಸಹಿ ಪಡೆದು ಜೆರಾಕ್ಸ್ ಮಾಡಿಸಿಕೊಳ್ಳಬೇಕು.

    ಪ್ರತಿದಿನ ಸಾಕಷ್ಟು ಕೇಸ್ ಗಳು ಮತ್ತು ಆರ್ಡರ್ ಗಳು ಸಿಐಡಿಗೆ ಬರುತ್ತೆ. ಆದ್ರೆ ಒಂದು ಪೇಜ್ ಜೆರಾಕ್ಸ್ ಮಾಡಿಸೋಕು ಎಸ್ ಪಿ ಕುಮಾರಸ್ವಾಮಿ ಮುಂದೆ ಅಧಿಕಾರಿಗಳು ಹೋಗಬೇಕು. ಎಲ್ಲಾ ಕೇಸ್ ಗಳಲ್ಲಿ ಪೇಪರ್ ವರ್ಕ್ ಸಾಕಷ್ಟು ಇರೋದ್ರಿಂದ ಜೆರಾಕ್ಸ್ ಗಾಗಿ ಎಸ್ ಪಿ ಮುಂದೆ ನಿಲ್ಲೋದು ಇದೀಗ ಅಧಿಕಾರಿಗಳಲ್ಲಿ ಅಸಮಾಧಾನ ಉಂಟುಮಾಡಿದೆ.

    ಜೆರಾಕ್ಸ್ ಮಾಡಿಸಿ ಅಧಿಕಾರಿಗಳೇನು ಮನೆಗೆ ತೆಗೆದುಕೊಂಡು ಹೋಗಲ್ಲ. ಎಸ್ ಪಿ ಕುಮಾರಸ್ವಾಮಿಯರ ಈ ರೂಲ್ಸ್ ನಿಂದ ಸಾಕಷ್ಟು ಅಧಿಕಾಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲಸ ಮಾಡೋದು ಬಿಟ್ಟು ಕೇವಲ ಜೆರಾಕ್ಸ್ ಗಾಗಿ ಎಸ್ ಪಿ ಚೇಂಬರ್ ಬಾಗಿಲು ಕಾಯಬೇಕಾ ಅನ್ನೋ ಆಕ್ರೋಶವನ್ನು ಅಧಿಕಾರಿಗಳು ಹೊರಹಾಕಿದ್ದಾರೆ.

  • ಟೊಮೆಟೋ ಮಾರಿದ್ದಕ್ಕೆ ರೈತನಿಗೆ ಸಿಕ್ತು 500ರೂ. ನಕಲಿ ನೋಟು!

    ಟೊಮೆಟೋ ಮಾರಿದ್ದಕ್ಕೆ ರೈತನಿಗೆ ಸಿಕ್ತು 500ರೂ. ನಕಲಿ ನೋಟು!

    ರಾಮನಗರ: ರೈತನೋರ್ವ ತಾನು ಬೆಳೆದ ಟೊಮೆಟೋವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ವೇಳೆ ಬಂದ ಹಣದಲ್ಲಿ ನಕಲಿ ಜೆರಾಕ್ಸ್ ನೋಟೊಂದು ಪತ್ತೆಯಾಗಿರುವ ಘಟನೆ ರಾಮನಗರದಲ್ಲಿ ನಡೆದಿದೆ.

    ರಾಮನಗರದ ಕೃಷಿ ಮಾರುಕಟ್ಟೆಗೆ ಚನ್ನಪಟ್ಟಣದ ರೈತ ಸುಜೀವನ್‍ಕುಮಾರ್ ಎಂಬುವವರು ಸುಮಾರು 30 ಕ್ರೇಟ್ ಟೊಮೆಟೋವನ್ನ ತಂದಿದ್ರು. ತಾವು ತಂದಿದ್ದ ಎಲ್ಲ ಟೊಮೆಟೋವನ್ನು ಮಾರಾಟ ಮಾಡಿದ ವೇಳೆ ವರ್ತಕ ಹಣವನ್ನ ನೀಡಿದ್ದಾನೆ. ವರ್ತಕನಿಂದ ಹಣ ಪಡೆದ ಬಳಿಕ ಹಣ ಎಣಿಸಿಕೊಳ್ಳುವ ವೇಳೆ ಜೆರಾಕ್ಸ್ ನೋಟು ಪತ್ತೆಯಾಗಿದೆ.

    500 ರೂಪಾಯಿಯ ಜೆರಾಕ್ಸ್ ನೋಟು ಪತ್ತೆಯಾದ ಬಳಿಕ ಹಣ ನೀಡಿದ ವರ್ತಕನ ಹುಡುಕಾಟ ಸಹ ನಡೆಸಿದ್ದಾರೆ. ನಂತರ ರೈತ ಸುಜೀವನ್ ಕುಮಾರ್ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ತಮಗೆ 500 ರೂಪಾಯಿಯ ಜೆರಾಕ್ಸ್ ನೋಟು ಬಂದ ಬಗೆಯನ್ನು ವಿವರಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

    ಬೆಳಗ್ಗೆ ಮಾರುಕಟ್ಟೆಯಲ್ಲಿ ಹಣ ನೀಡಿದ ವರ್ತಕ ಯಾರೆಂದು ಪತ್ತೆ ಹಚ್ಚುವಂತೆ ರೈತ ಆಗ್ರಹಿಸಿದ್ದಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಖೋಟಾನೋಟುಗಳ ಹಾವಳಿ ಹೆಚ್ಚಾಗುತ್ತಿದೆ ಕೂಡಲೇ ಪೊಲೀಸ್ರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ.