Tag: World Women’s day

  • ಚರ್ಚ್ ಸಭಾಪಾಲನಾ ಸದಸ್ಯನಿಂದ ಲೈಂಗಿಕ ದೌರ್ಜನ್ಯ- ಗರ್ಭಪಾತಕ್ಕೊಳಗಾದ ಯುವತಿ ಸಾವು

    ಚರ್ಚ್ ಸಭಾಪಾಲನಾ ಸದಸ್ಯನಿಂದ ಲೈಂಗಿಕ ದೌರ್ಜನ್ಯ- ಗರ್ಭಪಾತಕ್ಕೊಳಗಾದ ಯುವತಿ ಸಾವು

    ತುಮಕೂರು: ನಿನ್ನೆ ತಾನೇ ವಿಶ್ವ ಮಹಿಳಾ ದಿನಾಚರಣೆ ಆಚರಿಸಿದೆವು ‘ಯತ್ರ ನಾರಿಯಂತು ಪೂಜ್ಯಂತೆ ರಮಂತೆ ತತ್ರ ದೇವತಾ ಎಂದು ಹಾಡಿ ಹೊಗಳಿದೆವು. ಈ ಸಂಭ್ರಮದಲ್ಲಿರಬೇಕಾದರೆ ಜಿಲ್ಲೆಯಿಂದ ಒಂದು ಆಘಾತಕಾರಿ ಸುದ್ದಿ ಕೇಳಿಬಂದಿದೆ. ಚರ್ಚ್‍ನ ಸಭಾಪಾಲನಾ ಸದಸ್ಯನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಪಾತಕ್ಕೊಸಳಗಾದ ಯುವತಿಯೊಬ್ಬರು ಸಾವನಪ್ಪಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಶಿರಾ ಗೇಟ್‍ನ ಹೌಸಿಂಗ್ ಬೋರ್ಡ್ ನಿವಾಸಿ ಗ್ರೇಸ್ ಪ್ರೀರ್ತನಾ ಗರ್ಭಪಾತಕ್ಕೊಳಗಾಗಿ ಸಾವನಪ್ಪಿದ್ದ ಯುವತಿ. ಶಿರಾಗೇಟ್ ಬಳಿ ಇರುವ ಸಿ.ಎಸ್.ಐ ವೆಸ್ಲಿ ಚರ್ಚ್‍ನ ಸಭಾಪಾಲನಾ ಸದಸ್ಯ ರಾಜೇಂದ್ರಕುಮಾರ್ ಎಂಬಾತನಿಂದ ಯುವತಿಯು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದರು. ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅವರ ಕುಟುಂಬ ಲಾಕ್ ಡೌನ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಸಹಾಯ ಮಾಡುವ ನೆಪದಲ್ಲಿ ಅವನು, ಯುವತಿಯೊಂದಿಗೆ ಸಲಿಗೆ ಬೆಳೆಸಿದ್ದಾನೆ. ಅವರ ಜೊತೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಅವರಿಗೆ ಮಾತ್ರೆ ಕೊಟ್ಟು ಗರ್ಭಪಾತ ಮಾಡಿಸಿದ್ದಾನೆ. ಈ ವೇಳೆ ಅಧಿಕ ರಕ್ತಸ್ರಾವದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಮಾನತೆಯ ಸಂದೇಶದೊಂದಿಗೆ ವಿದ್ಯಾರ್ಥಿನಿಯರಿಂದ ಬೈಕ್ ರ‍್ಯಾಲಿ

    ನವೆಂಬರ್ 8 ರಂದು ಯುವತಿ ಗ್ರೇಸ್ ಪ್ರೀರ್ತನಾ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ವಿಚಾರ ಎಲ್ಲಿಯೂ ಬಹಿರಂಗಪಡಿಸದಂತೆ ಯುವತಿ ತಾಯಿ ಸಂತೋಷ್ ಸ್ಟೆಲ್ಲಾಗೆ ಪಾಸ್ಟರ್‌ನು ಹಣದ ಆಮಿಷದ ಜೊತೆಗೆ ಬೆದರಿಕೆಯನ್ನೂ ಒಡ್ಡಿದ್ದಾನೆ. ಆದರೆ ತಡವಾಗಿ ಮಂಗಳವಾರ ಯುವತಿ ತಾಯಿ ತುಮಕೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಎಫ್‍ಐಆರ್ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ: ಡೀಮ್ಡ್ ಅಧ್ಯಕ್ಷ

  • ವಿಶ್ವ ಮಹಿಳಾ ದಿನಾಚರಣೆ – ನೆಲಮಂಗಲದಲ್ಲಿ ಉದ್ಯೋಗ ರಥಕ್ಕೆ ಚಾಲನೆ

    ವಿಶ್ವ ಮಹಿಳಾ ದಿನಾಚರಣೆ – ನೆಲಮಂಗಲದಲ್ಲಿ ಉದ್ಯೋಗ ರಥಕ್ಕೆ ಚಾಲನೆ

    ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳೆಯರು ಹೆಚ್ಚು ನರೇಗಾ ಕಾಮಗಾರಿಗಳಲ್ಲಿ ಭಾಗವಹಿಸಲು ಉದ್ಯೋಗ ರಥದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ನೆಲಮಂಗಲ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್ ತಿಳಿಸಿದರು.

    ನಗರದ ತಾಲೂಕು ಪಂಚಾಯ್ತಿ ಆವರಣದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಉದ್ಯೋಗ ರಥದ ಪ್ರಚಾರ ವಾಹಿನಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನರೇಗಾದಲ್ಲಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಹೆಚ್ಚು ಹೆಚ್ಚು ಮಾಡುವ ಮೂಲಕ ಸಾರ್ವಜನಿಕರು ಲಾಭ ಮಾಡಿಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ 11 ವರ್ಷದ ಬಾಲಕ

     

    ಮಹಿಳೆಯರು ನರೇಗಾ ಕಾಮಗಾರಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ನರೇಗಾ ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

    ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕಿ ಗೀತಾಮಣಿ, ವ್ಯವಸ್ಥಾಪಕ ರಾಮಾನಾಯಕ್, ನರೇಗಾ ಸಿಬ್ಬಂದಿ ಹಾಗೂ ತಾಲೂಕು ಪಂಚಾಯ್ತಿಯ ವಿವಿಧ ಇಲಾಖಾ ಸಿಬ್ಬಂದಿಗಳು ಭಾಗವಹಿಸಿದ್ದರು.

  • ಮಹಿಳೆ, ಪುರುಷನಿಗಿಂತ ಕಡಿಮೆಯಿಲ್ಲ ಎಂದು ಸಾಬೀತು ಮಾಡಿದ ಮಡಿಕೇರಿ ನಾರಿಯರು

    ಮಹಿಳೆ, ಪುರುಷನಿಗಿಂತ ಕಡಿಮೆಯಿಲ್ಲ ಎಂದು ಸಾಬೀತು ಮಾಡಿದ ಮಡಿಕೇರಿ ನಾರಿಯರು

    ಮಡಿಕೇರಿ: ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಸಮಾಜದಲ್ಲಿ ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯಬೇಕು, ಮಹಿಳೆ ಕೂಡ ಪುರುಷನಿಗಿಂತ ಕಡಿಮೆಯಿಲ್ಲ ಎನ್ನುವ ಉದ್ದೇಶದಿಂದ ಈ ದಿನವನ್ನು ಅಂತರಾಷ್ಟ್ರೀಯ ಮಹಿಳೆಯರ ದಿನ ಎಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ.

    ಮಹಿಳೆಯರ ವಿಚಾರದಲ್ಲಿ ನೋಡುವಾಗ ಸದ್ಯ ಕೊಡಗು ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳ ಪಾರುಪತ್ಯ ಹೆಚ್ಚಾಗಿದೆ. ಡಿಸಿಯಾಗಿ ಅನ್ನೀಸ್ ಕೆ.ಜಾಯ್ ಇಡೀ ಜಿಲ್ಲೆಯ ಚುಕ್ಕಾಣಿಯನ್ನು ಹಿಡಿದಿದ್ರೆ, ಎಸ್‍ಪಿಯಾಗಿ ಡಾ. ಸುಮನ್ ಡಿ ಪನ್ನೇಕರ್ ಅವರು ಕಾನೂನು ಸುವ್ಯವಸ್ಥೆಯನ್ನು ಸುಗಮ ರೀತಿಯಲ್ಲಿ ಸಾಗುವಂತೆ ನೋಡಿಕೊಂಡು ಬರುತ್ತಿದ್ದಾರೆ.

    ಅಲ್ಲದೇ ಜಿ.ಪಂ ಸಿಇಓ ಆಗಿ ಲಕ್ಷ್ಮಿಪ್ರಿಯಾ ಸಮರ್ಥವಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಬಾರಿ ಜಲಪ್ರಳಯ ಉಂಟಾದ ಸಮಯದಲ್ಲೂ ಎದೆಗುಂದದೇ ಧೈರ್ಯದಿಂದ ಆಗಿನ ಡಿಸಿಯಾಗಿದ್ದ ಶ್ರೀವಿದ್ಯಾ ಕೂಡ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಲೇಬೇಕು.

    ಕೊಡಗು ಜಿಲ್ಲೆಯ ಅನೇಕ ಇಲಾಖೆಗಳಲ್ಲೂ ಕೂಡ ಉಪನಿರ್ದೇಶಕಿಯರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇರೋದು ಗಮನಾರ್ಹ. ಇದಿಷ್ಟೇ ಅಲ್ಲದೇ ಮಡಿಕೇರಿ ನಗರಸಭೆ ಅಧ್ಯಕ್ಷೆಯಾಗಿ ಕಾವೇರಿ ಸೋಮಣ್ಣ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇನ್ನೂ ಅಚ್ಚರಿ ವಿಚಾರ ಎಂದರೆ ಜಿಲ್ಲೆಯ ಮೂರು ತಾಲೂಕು ಪಂಚಾಯತ್‍ಗಳಲ್ಲೂ ಮಹಿಳಾಮಣಿಗಳೇ ದರ್ಬಾರ್ ನಡೆಸುತ್ತಿದ್ದಾರೆ.

    ಮಡಿಕೇರಿ ತಾಲೂಕು ಪಂಚಾಯತ್ ಅಧ್ಯಕ್ಷೆಯಾಗಿ ಶೋಭಾ ಮೋಹನ್, ವಿರಾಜಪೇಟೆ ತಾ.ಪಂ ಅಧ್ಯಕ್ಷೆಯಾಗಿ ಸ್ಮಿತಾ ಪ್ರಕಾಶ್, ಸೋಮವಾರಪೇಟೆ ತಾ.ಪಂ ಅಧ್ಯಕ್ಷೆಯಾಗಿ ಪುಷ್ಪಾ ರಾಜೇಶ್ ಅಧಿಕಾರವನ್ನು ಚಲಾಯಿಸುವ ಮೂಲಕ ಮಹಿಳೆಯರೂ ಕೂಡ ಪುರುಷರಿಗಿಂತ ಕಮ್ಮಿಯಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

     

  • ವಿಶ್ವ ಮಹಿಳಾ ದಿನಾಚರಣೆ- ಆರ್.ಜೆ ಆದ ದೇಶದ ಮೊದಲ ತೃತೀಯ ಲಿಂಗಿ

    ವಿಶ್ವ ಮಹಿಳಾ ದಿನಾಚರಣೆ- ಆರ್.ಜೆ ಆದ ದೇಶದ ಮೊದಲ ತೃತೀಯ ಲಿಂಗಿ

    ಬೆಂಗಳೂರು: ಇಂದು ವಿಶ್ವ ಮಹಿಳಾ ದಿನಾಚರಣೆ. ಅಕ್ಕ, ತಂಗಿ, ತಾಯಿ ಹಾಗೂ ಮಡದಿ ಹೀಗೆ ಎಲ್ಲಾ ರೋಲ್ ಗಳನ್ನು ಪ್ಲೇ ಮಾಡುವ, ಮಲ್ಟಿ ಟಾಸ್ಕರ್ ಮಹಿಳೆ. ಎಲ್ಲಾ ಕ್ಷೇತ್ರದಲ್ಲಿಯೂ ತನ್ನದೆ ಆದ ಛಾಪು ಮೂಡಿಸಿ, ಹೆಣ್ಮಕ್ಕಳೇ ಸ್ಟ್ರಾಂಗ್ ಗುರು ಎಂದು ನಮ್ಮ ನಾರಿಯರು ಪ್ರೂವ್ ಮಾಡಿದ್ದಾರೆ.

    ಸ್ತ್ರೀ ಎಂಬ ಎರಡಕ್ಷರದಲ್ಲಿ ಅದೆನೋ ಅದ್ಭುತ ಶಕ್ತಿಯಿದೆ. ನಮ್ಮೆಲ್ಲರನ್ನು ಹೆತ್ತು, ಹೊತ್ತು ಸಾಕುವ ಕರುಣಾಮಯಿ, ಮಮತಾಮಯಿ ಹೆಣ್ಣು. ನಾರಿಯರ ಬಗ್ಗೆ ಎಷ್ಟು ಬಣ್ಣಿಸಿದ್ರೂ ಪದಗಳೇ ಸಾಲದು. ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿದ್ದು, ಈ ಮೂಲಕ ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆ ಮಾಡದ ಸಾಧನೆಯಿಲ್ಲ ಎಂಬ ಹೊಸ ಗಾದೆ ಬರೆದಿದ್ದಾಳೆ.

    ಸಮಾಜದ ಕೊಂಕು ಮಾತುಗಳಿಗೆ ಎದೆಗುಂದದೆ ತೃತೀಯ ಲಿಂಗಿ ಪ್ರಿಯಾಂಕ ರೇಡಿಯೋ ಜಾಕಿಯಾಗಿದ್ದಾರೆ. ಇವರ ಧ್ವನಿಯನ್ನು ರೇಡಿಯೋ ಆಕ್ಟೀವ್ ಸಿಆರ್ 90.4ನಲ್ಲಿ ಪ್ರತಿನಿತ್ಯ ಕೇಳಬಹುದಾಗಿದೆ. ಭಾರತದ ಮೊಟ್ಟಮೊದಲ ತೃತೀಯ ಲಿಂಗ ಆರ್.ಜೆ ಎಂಬ ಖ್ಯಾತಿಗೆ ಪ್ರಿಯಾಂಕ ಪಾತ್ರಳಾಗಿದ್ದಾರೆ. ಇದರ ಜೊತೆಗೆ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ.

    ರಾಜ್ಯದ ಏಕೈಕ ಮಹಿಳಾ ಡ್ರೈವರ್ ಎಂಬ ಖ್ಯಾತಿಗೆ ಪ್ರೇಮ ನಡಪಟ್ಟಿ ಪಾತ್ರಳಾಗಿದ್ದಾರೆ. ನಗರದ ಬಿಎಂಟಿಸಿಯಲ್ಲಿ ಸುಮಾರು 10 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಪುರುಷರ ನಡುವೆ ತಮ್ಮದೆ ಆದ ಛಾಪು ಮೂಡಿಸಿ, ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ರಾಜಧಾನಿಯ ಎಲ್ಲೆಡೆಯೂ ಇವರ ಅಭಿಮಾನಿಗಳಿದ್ದಾರೆ. ಒಟ್ಟಿನಲ್ಲಿ ಇಂತಹ ಅದೆಷ್ಟೋ ಮಹಿಳೆಯರು ನಮ್ಮ ಮಧ್ಯೆ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv