Tag: World Cup 2019

  • ಇಂದು ಇಂಡೋ, ಅಫ್ಘಾನ್ ಸಮರ – ಸುಲಭ ಜಯದ ನಿರೀಕ್ಷೆಯಲ್ಲಿ ವಿರಾಟ್ ಬಳಗ

    ಇಂದು ಇಂಡೋ, ಅಫ್ಘಾನ್ ಸಮರ – ಸುಲಭ ಜಯದ ನಿರೀಕ್ಷೆಯಲ್ಲಿ ವಿರಾಟ್ ಬಳಗ

    ಸೌತಾಂಪ್ಟನ್: ಹರಿಣಗಳ ಬೇಟೆಯಾಡಿ, ಕಾಂಗರೂಗಳ ಹುಟ್ಟಡಗಿಸಿ, ಪಾಕ್ ತಂಡವನ್ನ ಬಡಿದಟ್ಟಿದ ಟೀಂ ಇಂಡಿಯಾ ವಿಶ್ವಕಪ್‍ನಲ್ಲಿ ವಿರಾಜಮಾನವಾಗಿದೆ. ಗೆಲುವಿನ ಮೇಲೆ ಗೆಲುವು ಸಾಧಿಸುತ್ತಾ ವಿಶ್ವಕಪ್‍ನಲ್ಲಿ ವಿಜಯಿಶಾಲಿಯಾಗಿ ಮುನ್ನುಗ್ಗುತ್ತಿರುವ ಕೊಹ್ಲಿ ಸೈನ್ಯಕ್ಕೆ ಕ್ರಿಕೆಟ್ ಶಿಶು ಅಪ್ಘಾನಿಸ್ತಾನ್ ಪಡೆ ಇಂದು ಸವಾಲೊಡ್ಡಲಿದೆ.

    ಸೌತಾಂಪ್ಟನ್‍ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪಂದ್ಯ ನಡೆಯಲಿದೆ. ವಿಶ್ವಕಪ್‍ನಲ್ಲಿ ಅಫ್ಘಾನಿಸ್ತಾನ ಈವರೆಗೆ 5 ಪಂದ್ಯಗಳನ್ನಾಡಿದ್ದು, ಒಂದೇ ಒಂದು ಪಂದ್ಯವನ್ನ ಗೆದ್ದಿಲ್ಲ. ಸದ್ಯ ಅಪ್ಘಾನ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಈ ಹಿಂದೆ ಆಡಿದ ತಂಡವೇ ಕಣಕ್ಕಿಳಿಯಲಿದೆ.

    ಆದರೆ ಭಾರತದ ತಂಡದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ಶಿಖರ್ ಧವನ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಭುವನೇಶ್ವರ್ ಸಹ ಗಾಯಗೊಂಡು ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಭುವಿ ಸ್ಥಾನವನ್ನು ಮೊಹಮದ್ ಶಮಿ ತುಂಬಲಿದ್ದಾರೆ. ಅಭ್ಯಾಸದ ವೇಳೆ ಗಾಯಗೊಂಡಿದ್ದ ಆಲ್‍ರೌಂಡರ್ ವಿಜಯ್ ಶಂಕರ್ ಫಿಟ್ ಆಗಿದ್ದು, ಇಂದು ಕಣಕ್ಕಿಳಿಯಲಿದ್ದಾರೆ.

    ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಿದ್ದು ಗೆಲುವಿನ ವಿಶ್ವಾಸದಲ್ಲಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಅಫ್ಘಾನ್ ಪಡೆ, ಬ್ಯಾಟಿಂಗ್ ಬೌಲಿಂಗ್‍ನಲ್ಲಿ ವೈಫಲ್ಯ ಅನುಭವಿಸುತ್ತಿದ್ದು, ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದೆ. ಸದ್ಯ ಪಂದ್ಯಕ್ಕೆ ಮಳೆಯ ಭೀತಿಯಲ್ಲ. ಪಿಚ್ ಬ್ಯಾಟಿಂಗ್‍ಗೆ ಹೆಚ್ಚು ಸಹಕಾರಿಯಾಗಲಿದ್ದು, ರನ್ ಹೊಳೆಯೇ ಹರಿಯಲಿದೆ.

    ಒಟ್ಟಿನಲ್ಲಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಗೆದ್ದು 3ನೇ ಸ್ಥಾನಕ್ಕೆ ಜಿಗಿಯಲು ತಂತ್ರ ರೂಪಿಸಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು- ಟೀಂ ಇಂಡಿಯಾ ಬೌಲರ್ ಗಳ ಅಬ್ಬರಕ್ಕೆ ಪಾಕ್ ತತ್ತರ

    ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು- ಟೀಂ ಇಂಡಿಯಾ ಬೌಲರ್ ಗಳ ಅಬ್ಬರಕ್ಕೆ ಪಾಕ್ ತತ್ತರ

    -ಮೊದಲ ಎಸೆತದಲ್ಲಿ ವಿಕೆಟ್ ಪಡೆದ ವಿಜಯ್ ಶಂಕರ್

    ಮ್ಯಾಂಚೆಸ್ಟರ್: ಸಾಂಪ್ರದಾಯಿಕ ಬದ್ಧವೈರಿಗಳಂದೇ ಗುರುತಿಸಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ ಇಂದು ಮುಖಾಮುಖಿಯಾಗಿದ್ದವು. ಭಾರತ ನೀಡಿದ 337 ರನ್ ಗಳ ಗುರಿ ಬೆನ್ನತ್ತಿದ್ದ ಪಾಕ್, 40 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ ಕೇವಲ 212 ರನ್ ಕಲೆ ಹಾಕಿತು. ಭಾರತ ಸತತ ಏಳನೇ ಬಾರಿ ವಿಶ್ವಕಪ್ ಪಂದ್ಯದಲ್ಲಿ ಎದುರಾಳಿ ಪಾಕ್ ನ್ನು ಸೋಲಿಸುವ ಮೂಲಕ ಅಭೂತಪೂರ್ವ ಗೆಲುವನ್ನು ತನ್ನದಾಗಿಸಿಕೊಂಡಿತು. 89 ರನ್ ಗಳಿಂದ ಭಾರತ ಬದ್ಧವೈರಿಯನ್ನು ಸದೆಬಡೆಯುವ ಮೂಲಕ ಭಾರತೀಯರ ಹೃದಯವನ್ನು ಕದ್ದಿತು.

    ಮಳೆ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ 40 ಓವರ್ ಗಳಲ್ಲಿ 302 ರನ್ ಗಳ ಗುರಿಯನ್ನು ನೀಡಲಾಗಿತ್ತು. ಡಕ್ವರ್ಸ್ ಲೂಯಿಸ್ ನಿಯಮದನ್ವಯ ಭಾರತ 89 ರನ್ ಗಳ ಗೆಲುವನ್ನು ತನ್ನದಾಗಿಸಿಕೊಂಡಿತು.

    ಟೀಂ ಇಂಡಿಯಾ ನೀಡಿದ 337 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭದಲ್ಲಿಯೇ ದೊಡ್ಡ ಆಘಾತವನ್ನು ನೀಡಿತು. ಆರಂಭಿಕರಾಗಿ ಇಮಾಮ್ ಉಲ್ ಹಕ್ ಮತ್ತು ಫಖಾರ್ ಖಾನ್ ಕಣಕ್ಕಿಳಿದರು. ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ತಮ್ಮ ಬೌಲಿಂಗ್ ಮೂಲಕ ಪಾಕ್ ಆಟಗಾರರನ್ನು ಕಟ್ಟಿ ಹಾಕಿದರು. ಈ ನಡುವೆ ಐದನೇ ಓವರಿನ ನಾಲ್ಕನೇ ಎಸೆತದಲ್ಲಿ ಗಾಯಕ್ಕೊಳಗಾದ ಭುವನೇಶ್ವರ್ ಮೈದಾನದಿಂದ ಹೊರ ನಡೆದರು. ಓವರ್ ಪೂರ್ಣಗೊಳಿಸಲು ಬಂದ ವಿಜಯ್ ಶಂಕರ್ ಮೊದಲ ಎಸೆತದಲ್ಲೇ ಇಮಾಮ್-ಉಲ್-ಹಕ್ ವಿಕೆಟ್ ಪಡೆದರು.

    ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಬಾಬರ್ ಅಜಮ್ ರಕ್ಷಣಾತ್ಮಕ ಆಟದ ಮೊರೆ ಹೋದರು. ಫಖರ್ ಖಾನ್ ಮತ್ತು ಬಾಬರ್ ಜೊತೆಯಾಟ ತಂಡದ ಮೊತ್ತವನ್ನ ಚೇತರಿಕೆಯತ್ತ ತೆಗೆದುಕೊಂಡು ಹೋಗುವಲ್ಲಿ ಸಹಕಾರಿಯಾಯ್ತು. ನಾಲ್ಕನೇ ಓವರ್ ನಲ್ಲಿ ಫಖರ್ ಗೆ ಜೊತೆಯಾದ ಬಾಬರ್ ಅಜಮ್ 23ನೇ ಓವರ್ ವರೆಗೂ ಟೀಂ ಇಂಡಿಯಾ ಬೌಲರ್ ಗಳನ್ನು ದಣಿಸಿದರು. 23ನೇ ಓವರ್ ಕೊನೆಯ ಎಸೆತದಲ್ಲಿ ಕುಲ್ದೀಪ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬಾಬರ್ ಮತ್ತು ಫಖರ್ ಜೊತೆಯಾಗಿ 117 ರನ್ ಕಲೆ ಹಾಕಿದರು. 48 ರನ್ ಗಳಿಸಿದ್ದ ಬಾಬರ್ ಅಜಮ್ ಅರ್ಧ ಶತಕ ವಂಚಿತರಾಗಿ ಮೈದಾನದಿಂದ ಹೆಜ್ಜೆ ಹಾಕಿದರು.

    ಇತ್ತ 25/2 ನೇ ಎಸೆತದಲ್ಲಿ 62 ರನ್ ಗಳಿಸಿದ ಫಖರ್ ಕ್ಯಾಚ್ ನೀಡಿ ಔಟ್ ಆದರು. ಮೊಹಮ್ಮದ್ ಹಫೀಜ್ (9), ಶೋಯೆಬ್ ಮಲ್ಲಿಕ್ (0) ಇಬ್ಬರು ಆಟಗಾರರು ಹಾರ್ದಿಕ್ ಪಾಂಡ್ಯ ಬೌಲಿಂಗ್ ದಾಳಿಗೆ ತುತ್ತಾದರು. 30ನೇ ಓವರ್ ಮೊದಲೇ ಐದು ವಿಕೆಟ್ ಗಳನ್ನು ಕಳೆದುಕೊಂಡ ಬಳಿಕ ಪಾಕ್ ನಾಯಕ ಸರ್ಫರಾಜ್ ಮತ್ತು ಇಮಾದ್ ವಾಸಿಮ್ ವೇಗದ ಆಟಕ್ಕೆ ಮುಂದಾಗದೇ ರನ್ ಹೆಚ್ಚಿಸುವತ್ತ ಮುಂದಾದರು. ಆದರೆ ಸರ್ಫರಾಜ್ 30 ಎಸೆತದಲ್ಲಿ 12 ರನ್ ಗಳಿಸಿದ್ದ ವೇಳೆ ವಿಜಯ್ ಶಂಕರ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

    ಇಮಾದ್ ವಾಸಿಮ್ ರಿಗೆ ಜೊತೆಯಾಗಿ ಶಾಬದ್ ಖಾನ್ ಜೊತೆಯಾದರು. ಗೆಲುವಿನ ಸನಿಹದಲ್ಲಿದ್ದ ಭಾರತಕ್ಕೆ ಸಂತೋಷಕ್ಕೆ ವರುಣ ದೇವ ಬ್ರೇಕ್ ನೀಡಿದ್ದರಿಂದ ಪಾಕಿಸ್ತಾನ 166 ರನ್ ಗಳಿಸಿದ್ದಾಗ ಪಂದ್ಯವನ್ನು ನಿಲ್ಲಿಸಲಾಯ್ತು.

    ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 140, ಕೆ.ಎಲ್.ರಾಹುಲ್ 57, ಕೊಹ್ಲಿ, 77, ಪಾಂಡ್ಯ 26, ಧೋನಿ 1, ವಿಜಯ್ ಶಂಕರ್ 15 (ಔಟಾಗದೆ) ಕೇದಾರ್ ಜಾಧವ್ 9 (ಔಟಾಗದೆ) ರನ್ ಕೆಲ ಹಾಕಿದರು. ಪಾಕಿಸ್ತಾನ ಬೌಲಿಂಗ್ ನಲ್ಲಿ ಮೊಹಮ್ಮದ ಅಮಿರ್ 10 ಓವರ್ ಗಳಲ್ಲಿ 47 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಹಸನ್ ಅಲಿ ಮತ್ತು ವಹಬ್ ತಲಾ ಒಂದು ವಿಕೆಟ್ ಪಡೆದರು. 35ನೇ ಓವರ್ ನಲ್ಲಿ ಮಳೆರಾಯನ ಕೆಲ ಸಮಯ ಅಡ್ಡಿಯನ್ನುಂಟು ಮಾಡಿದ

    ಭುವನೇಶ್ವರ್ ಗೆ ಸ್ನಾಯು ಸೆಳೆತ: ಟೀಂ ಇಂಡಿಯಾದ ಬಲಗೈ ವೇಗಿ ಪಾಕ್ ಬ್ಯಾಟಿಂಗ್ ಆರಂಭಿಸಿದಾಗ ತಮ್ಮ ಮೂರನೇ ಓವರ್ ನ ನಾಲ್ಕನೇ ಎಸೆತದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗದರು. ತಜ್ಞ ವೈದ್ಯರ ಸಂಪರ್ಕಿಸಿದ ಬಳಿಕ ಪಂದ್ಯದಿಂದ ಹೊರ ಉಳಿದರು. ಈಗಾಗಲೇ ಶಿಖರ್ ಧವನ್ ಗಾಯಗೊಂಡು ಪಂದ್ಯಗಳಿಗೆ ಅಲಭ್ಯರಾಗಿದ್ದು, ಇದೀಗ ಭುವನೇಶ್ವರ್ ಗಾಯಗೊಂಡಿದ್ದು, ತಂಡಕ್ಕೆ ಮತ್ತೊಂದು ಆಘಾತವಾಗಿದೆ.

    ರೋ’ಹಿಟ್’: ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಅಜೇಯ 122 ರನ್ ಹಾಗೂ ಆಸ್ಟ್ರೇಲಿಯಾ ವಿರುದ್ಧ 57 ರನ್ ಗಳಿಸಿದ್ದ ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧವೂ ಭರ್ಜರಿ ಬ್ಯಾಟಿಂಗ್ ನಡೆಸಿದರು. 34 ಎಸೆತಗಳಲ್ಲೇ 50 ರನ್ ಪೂರೈಸಿದ ರೋಹಿತ್ 85 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ವೃತ್ತಿಯ 24ನೇ ಶತಕ, 2019ರ ಟೂನಿಯಲ್ಲಿ 2ನೇ ಶತಕ ಸಿಡಿಸಿದರು. ಸಚಿನ್ (6), ಗಂಗೂಲಿ (5) ಮತ್ತು ಶಿಖರ್ ಧವನ್ (3) ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರರಾಗಿದ್ದಾರೆ.

    ಟಾಸ್ ವಿಶೇಷ: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಡೋ, ಪಾಕ್ ಕದನದಲ್ಲಿ ಇದುವರೆಗೂ ಇತ್ತಂಡಗಳು 6 ಬಾರಿ ಮುಖಾಮುಖಿಯಾಗಿತ್ತು. 6 ಪಂದ್ಯಗಳಲ್ಲಿ ಭಾರತ ಗೆಲುವು ಪಡೆದಿದ್ದರೆ, ಈ ಪಂದ್ಯಗಳಲ್ಲಿ ಟಾಸ್ ಗೆದ್ದ ನಾಯಕರು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಮೊದಲ ಬಾರಿಗೆ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.

    ಕೊಹ್ಲಿ ವಿಶ್ವ ದಾಖಲೆ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದು, ಪಂದ್ಯದಲ್ಲಿ 57 ರನ್ ಗಳಿಸಿದ ಸಂದರ್ಭದಲ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 11 ಸಾವಿರ ರನ್ ಗಳಿಸಿದ ದಾಖಲೆ ಬರೆದರು. ಕೊಹ್ಲಿ 222 ಇನ್ನಿಂಗ್ಸ್ ಗಳಲ್ಲೇ ಈ ಸಾಧನೆ ಮಾಡಿದ್ದು, ಈ ಹಿಂದೆ ಸಚಿನ್ 276 ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್‍ನಲ್ಲಿ ಕೊಹ್ಲಿ 11 ಸಾವಿರ ರನ್ ಪೂರ್ಣಗೊಳಿಸಿದ 9ನೇ ಆಟಗಾರ ಎಂಬ ಹೆಗ್ಗಳಿಕೆಯನ್ನ ಪಡೆದಿದ್ದು, ಭಾರತ ಪರ ಈ ಸಾಧನೆ ಮಾಡಿ 3ನೇ ಆಟಗಾರ ಎನಿಸಿಕೊಂಡಿದ್ದಾರೆ.

    ಟೀಂ ಇಂಡಿಯಾ ಪರ ಇದುವರೆಗೂ ಸಚಿನ್, ಗಂಗೂಲಿ 11 ಸಾವಿರ ರನ್ ಪೂರೈಸಿದ್ದಾರೆ. ಸಚಿನ್ ಏಕದಿನ ಕ್ರಿಕೆಟಿನಲ್ಲಿ 18,426 ರನ್ ಸಿಡಿಸಿದ್ದರೆ, ಗಂಗೂಲಿ 11,363 ರನ್ ಗಳಿಸಿದ್ದರೆ. ಉಳಿದಂತೆ ರಿಕಿ ಪಾಟಿಂಗ್ 286 ಇನ್ನಿಂಗ್ಸ್, ಸೌರವ್ ಗಂಗೂಲಿ 288 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.

    ಧೋನಿ ವಿಶೇಷ ಸಾಧನೆ: ಇದುವರೆಗೂ ಧೋನಿ 341 ಏಕದಿನ ಪಂದ್ಯಗಳನ್ನು ಆಡಿದ್ದು, ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ 340 ಪಂದ್ಯಗಳನ್ನು ಆಡಿದ್ದರು. ಆ ಮೂಲಕ ರಾಹುಲ್ ದ್ರಾವಿಡ್ ದಾಖಲೆಯನ್ನು ಧೋನಿ ಹಿಂದಿಕ್ಕಿದ್ದಾರೆ. ಉಳಿದಂತೆ ಪಟ್ಟಿಯಲ್ಲಿ 461 ಏಕದಿನ ಪಂದ್ಯಗಳನ್ನು ಆಡಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನ ಪಡೆದಿದ್ದಾರೆ. ಉಳಿದಂತೆ ಧೋನಿ ಏಷ್ಯಾ ತಂಡದ ಪರ 3 ಪಂದ್ಯಗಳನ್ನಾಡಿದ್ದಾರೆ.

    13 ವರ್ಷಗಳಿಂದ ಟೀಂ ಇಂಡಿಯಾ ತಂಡದ ಭಾಗವಾಗಿರುವ ಧೋನಿ 2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ್ದರು. ಆ ಬಳಿಕ ತಮ್ಮ ನಾಯಕತ್ವದಲ್ಲಿ ಐಸಿಸಿ ನಡೆಸುವ ಟಿ20, ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿಗಳಲ್ಲಿ ಗೆಲುವು ಪಡೆದು ತಂಡವನ್ನು ಮುನ್ನಡೆಸಿದ್ದರು.

  • ಗೆಲುವಿನ ಸನಿಹದತ್ತ ಟೀಂ ಇಂಡಿಯಾ-ಸಂಭ್ರಮಕ್ಕೆ ವರುಣದೇವ ಅಡ್ಡಿ

    ಗೆಲುವಿನ ಸನಿಹದತ್ತ ಟೀಂ ಇಂಡಿಯಾ-ಸಂಭ್ರಮಕ್ಕೆ ವರುಣದೇವ ಅಡ್ಡಿ

    ಮ್ಯಾಂಚೆಸ್ಟರ್: ಟೀಂ ಇಂಡಿಯಾ ನೀಡಿದ 337 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಪಾಕಿಸ್ತಾನಕ್ಕೆ ಆರಂಭದಲ್ಲಿ ಇಮಾಮ್-ಉಲ್-ಹಕ್ ವಿಕೆಟ್ ಪಡೆಯುವ ಭಾರತೀಯ ಬೌಲರ್ ಗಳು ಆಘಾತ ನೀಡಿದರು. ಸದ್ಯ ಪಾಕಿಸ್ತಾನ 6 ವಿಕೆಟ್ ನಷ್ಟಕ್ಕೆ 166 ರನ್ ಕಲೆ ಹಾಕಿದೆ.

    ಟೀಂ ಇಂಡಿಯಾ ನೀಡಿದ 337 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭದಲ್ಲಿಯೇ ದೊಡ್ಡ ಆಘಾತವನ್ನು ನೀಡಿತು. ಆರಂಭಿಕರಾಗಿ ಇಮಾಮ್ ಉಲ್ ಹಕ್ ಮತ್ತು ಫಖಾರ್ ಖಾನ್ ಕಣಕ್ಕಿಳಿದರು. ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ತಮ್ಮ ಬೌಲಿಂಗ್ ಮೂಲಕ ಪಾಕ್ ಆಟಗಾರರನ್ನು ಕಟ್ಟಿ ಹಾಕಿದರು. ಈ ನಡುವೆ ಐದನೇ ಓವರಿನ ನಾಲ್ಕನೇ ಎಸೆತದಲ್ಲಿ ಗಾಯಕ್ಕೊಳಗಾದ ಭುವನೇಶ್ವರ್ ಮೈದಾನದಿಂದ ಹೊರ ನಡೆದರು. ಓವರ್ ಪೂರ್ಣಗೊಳಿಸಲು ಬಂದ ವಿಜಯ್ ಶಂಕರ್ ಮೊದಲ ಎಸೆತದಲ್ಲೇ ಇಮಾಮ್-ಉಲ್-ಹಕ್ ವಿಕೆಟ್ ಪಡೆದರು.

    35 ಓವರ್ ಗಳು ಅಂತ್ಯವಾಗಿದ್ದು, 15 ಓವರ್ ಬಾಕಿ ಉಳಿದಿದೆ. ಪಾಕಿಸ್ತಾನಕ್ಕೆ ಗೆಲುವು ಸಾಧಿಸಲು ಇನ್ನು 90 ಎಸೆತಗಳಲ್ಲಿ 171 ರನ್ ಕಲೆ ಹಾಕಬೇಕಿದೆ.

    ಭುವನೇಶ್ವರ್ ಗೆ ಸ್ನಾಯು ಸೆಳೆತ: ಟೀಂ ಇಂಡಿಯಾದ ಬಲಗೈ ವೇಗಿ ಪಾಕ್ ಬ್ಯಾಟಿಂಗ್ ಆರಂಭಿಸಿದಾಗ ತಮ್ಮ ಮೂರನೇ ಓವರ್ ನ ನಾಲ್ಕನೇ ಎಸೆತದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗದರು. ತಜ್ಞ ವೈದ್ಯರ ಸಂಪರ್ಕಿಸಿದ ಬಳಿಕ ಪಂದ್ಯದಿಂದ ಹೊರ ಉಳಿದರು. ಈಗಾಗಲೇ ಶಿಖರ್ ಧವನ್ ಗಾಯಗೊಂಡು ಪಂದ್ಯಗಳಿಗೆ ಅಲಭ್ಯರಾಗಿದ್ದು, ಇದೀಗ ಭುವನೇಶ್ವರ್ ಗಾಯಗೊಂಡಿದ್ದು, ತಂಡಕ್ಕೆ ಮತ್ತೊಂದು ಆಘಾತವಾಗಿದೆ.

    ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 140, ಕೆ.ಎಲ್.ರಾಹುಲ್ 57, ಕೊಹ್ಲಿ, 77, ಪಾಂಡ್ಯ 26, ಧೋನಿ 1, ವಿಜಯ್ ಶಂಕರ್ 15 (ಔಟಾಗದೆ) ಕೇದಾರ್ ಜಾಧವ್ 9 (ಔಟಾಗದೆ) ರನ್ ಕೆಲ ಹಾಕಿದರು. ಪಾಕಿಸ್ತಾನ ಬೌಲಿಂಗ್ ನಲ್ಲಿ ಮೊಹಮ್ಮದ ಅಮಿರ್ 10 ಓವರ್ ಗಳಲ್ಲಿ 47 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಹಸನ್ ಅಲಿ ಮತ್ತು ವಹಬ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

  • ಅಂಪೈರ್ ನಿರ್ಣಯಕ್ಕೂ ಮುನ್ನ ಕ್ರೀಸ್ ತೊರೆದು ತಪ್ಪು ಮಾಡಿದ್ರಾ ಕೊಹ್ಲಿ?

    ಅಂಪೈರ್ ನಿರ್ಣಯಕ್ಕೂ ಮುನ್ನ ಕ್ರೀಸ್ ತೊರೆದು ತಪ್ಪು ಮಾಡಿದ್ರಾ ಕೊಹ್ಲಿ?

    ಮ್ಯಾಂಚೆಸ್ಟರ್: ಅಂಪೈರ್ ನಿರ್ಣಯಕ್ಕೂ ಮುನ್ನ ಕ್ರೀಸ್ ತೊರೆದು ನಾಯಕ ವಿರಾಟ್ ಕೊಹ್ಲಿ ತಪ್ಪು ಮಾಡಿದ್ರಾ ಎಂಬ ಪ್ರಶ್ನೆಯೊಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.

    ಐಸಿಸಿ 2019ರ ಏಕದಿನ ವಿಶ್ವಕಪ್ ನಲ್ಲಿ ಇಂದು ಮ್ಯಾಂಚೆಸ್ಟರ್ ಅಂಗಳದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಪಾಕಿಸ್ತಾನ ಟಾಸ್ ಗೆದ್ದು, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅರ್ಧ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಬಿರುಸಿನ ಆಟ ಆರಂಭಿಸುತ್ತಿದಂತೆ ಮಳೆರಾಯ ಪಂದ್ಯಕ್ಕೆ ಕೆಲ ಸಮಯ ವಿರಾಮ ನೀಡಿದ. ಕೆಲ ಸಮಯದ ಬಳಿಕ ಪಂದ್ಯ ಆರಂಭಗೊಂಡಿತು.

    47.4 ಓವರ್ ನಲ್ಲಿ ವಿರಾಟ್ ಕೊಹ್ಲಿ ಔಟ್ ಆಗದಿದ್ದರೂ ಕ್ರೀಸ್ ತೊರೆಯುವ ಮೂಲಕ ಅಭಿಮಾನಿಗಳ ಅಚ್ಚರಿಗೆ ಕಾರಣರಾದರು. 47.4 ಓವರ್ ನಲ್ಲಿ ಮೊಹಮ್ಮದ್ ಅಮೀರ್ ಬೌನ್ಸರ್ ಎಸೆತವನ್ನು ಕೊಹ್ಲಿ ಹೊಡೆಯಲು ಪ್ರಯತ್ನಿಸಿದರು. ಬೌಲ್ ಬ್ಯಾಟ್ ಗೆ ತಾಗದೇ ನೇರ ಕೀಪರ್ ಸರ್ಫರಾಜ್ ಕೈ ಸೇರಿತು. ಅಂಪೈರ್ ನಿರ್ಣಯಕ್ಕೂ ಮುನ್ನವೇ ಕೊಹ್ಲಿ ಕ್ರೀಸ್ ತೊರೆದರು. ಪಂದ್ಯದಲ್ಲಿ ಕ್ರೀಡಾ ಸ್ಪೂರ್ತಿ ಮೆರೆಯಲು ಹೋಗಿ ಕೊಹ್ಲಿ ತಪ್ಪು ಮಾಡಿದರು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    https://twitter.com/RoshanKrRai/status/1140256643420057600

    ಚೆಂಡು ಬ್ಯಾಟ್ ಗೆ ತಾಗದಿದ್ದರೂ ಸೌಂಡ್ ಹೇಗೆ ಬಂತು ಎಂದು ಡ್ರೆಸಿಂಗ್ ರೂಮ್‍ನಲ್ಲಿ ಪರಿಶೀಲಿಸತೊಡಗಿದರು. ಒಂದು ವೇಳೆ ಅಂಪೈರ್ ಔಟ್ ನೀಡಿದ್ದರೂ, ಕೊಹ್ಲಿ ಡಿಆರ್ ಎಸ್ ಗೆ ಮನವಿ ಸಲ್ಲಿಸಬಹುದಿತ್ತು. ಕೊನೆಗೆ 65 ಎಸೆತಗಳಲ್ಲಿ 77 ರನ್ ಗಳಿಸಿದರು. ಪಂದ್ಯದಲ್ಲಿ 57 ರನ್ ಗಳಿಸಿದ ಸಂದರ್ಭದಲ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 11 ಸಾವಿರ ರನ್ ಗಳಿಸಿದ ದಾಖಲೆಯನ್ನು ಕೊಹ್ಲಿ ಬರೆದರು.

    ರೋಹಿತ್ ಶರ್ಮಾ ಶತಕ, ಕೆ.ಎಲ್.ರಾಹುಲ್ ಮತ್ತು ಕೊಹ್ಲಿ ಅರ್ಧ ಶತಕದ ನೆರವಿನೊಂದಿಗೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 336 ರನ್ ಕಲೆ ಹಾಕಿತು. 337 ರನ್ ಗಳ ಗುರಿ ಬೆನ್ನತ್ತಿರುವ ಪಾಕ್, ಇಮಾಮ್ ಉಲ್ ಹಕ್ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತಕ್ಕೆ ಒಳಗಾಗಿದೆ.

  • ಪಾಕ್‍ಗೆ 337 ರನ್‍ಗಳ ಗುರಿ- ವಿಶ್ವ ದಾಖಲೆ ಬರೆದ ಕೊಹ್ಲಿ

    ಪಾಕ್‍ಗೆ 337 ರನ್‍ಗಳ ಗುರಿ- ವಿಶ್ವ ದಾಖಲೆ ಬರೆದ ಕೊಹ್ಲಿ

    ಮ್ಯಾಂಚೆಸ್ಟರ್: ವರುಣನಿಂದ 46.4 ಓವರ್ ನಲ್ಲಿ ನಿಂತಿದ್ದ ಪಂದ್ಯ ಮತ್ತೆ ಪುನಾರಂಭಗೊಂಡಿತು. ಬ್ರೇಕ್ ಪಡೆದ ನಾಯಕ ವಿರಾಟ್ ಬಿರುಸಿನ ಆಟಕ್ಕೆ ಮುಂದಾದರು, ಆದರೆ 77 ರನ್ ಗಳಿಸಿದ ಕೊಹ್ಲಿ 47.4 ಓವರ್ ನಲ್ಲಿ ಸರ್ಫರಾಜ್ ಗೆ ಕ್ಯಾಚ್ ನೀಡುವ ಮೂಲಕ ಔಟ್ ಆದರು. ವಿಜಯ್ ಶಂಕರ್ ಜೊತೆ ಸೇರಿಕೊಂಡ ಕೇದಾರ ಜಾಧವ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಅಂತಿಮವಾಗಿ ಟೀಂ ಇಂಡಿಯಾ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿ ಪಾಕಿಸ್ತಾನಕ್ಕೆ 337 ರನ್ ಗಳ ಗುರಿ ನೀಡಿತು.

    ಕೊಹ್ಲಿ ವಿಶ್ವ ದಾಖಲೆ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದು, ಪಂದ್ಯದಲ್ಲಿ 57 ರನ್ ಗಳಿಸಿದ ಸಂದರ್ಭದಲ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 11 ಸಾವಿರ ರನ್ ಗಳಿಸಿದ ದಾಖಲೆ ಬರೆದರು.

    ಕೊಹ್ಲಿ 222 ಇನ್ನಿಂಗ್ಸ್ ಗಳಲ್ಲೇ ಈ ಸಾಧನೆ ಮಾಡಿದ್ದು, ಈ ಹಿಂದೆ ಸಚಿನ್ 276 ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್‍ನಲ್ಲಿ ಕೊಹ್ಲಿ 11 ಸಾವಿರ ರನ್ ಪೂರ್ಣಗೊಳಿಸಿದ 9ನೇ ಆಟಗಾರ ಎಂಬ ಹೆಗ್ಗಳಿಕೆಯನ್ನ ಪಡೆದಿದ್ದು, ಭಾರತ ಪರ ಈ ಸಾಧನೆ ಮಾಡಿ 3ನೇ ಆಟಗಾರ ಎನಿಸಿಕೊಂಡಿದ್ದಾರೆ.

    ಟೀಂ ಇಂಡಿಯಾ ಪರ ಇದುವರೆಗೂ ಸಚಿನ್, ಗಂಗೂಲಿ 11 ಸಾವಿರ ರನ್ ಪೂರೈಸಿದ್ದಾರೆ. ಸಚಿನ್ ಏಕದಿನ ಕ್ರಿಕೆಟಿನಲ್ಲಿ 18,426 ರನ್ ಸಿಡಿಸಿದ್ದರೆ, ಗಂಗೂಲಿ 11,363 ರನ್ ಗಳಿಸಿದ್ದರೆ. ಉಳಿದಂತೆ ರಿಕಿ ಪಾಟಿಂಗ್ 286 ಇನ್ನಿಂಗ್ಸ್, ಸೌರವ್ ಗಂಗೂಲಿ 288 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.

    ಕೊಹ್ಲಿ ಈಗಾಗಲೇ ವೇಗವಾಗಿ 10 ಸಾವಿರ ರನ್ ಸಿಡಿಸಿದ ಸಾಧನೆ ಮಾಡಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೇ ಈ ಸಾಧನೆ ಮಾಡುವ ಅವಕಾಶದಿಂದ ವಂಚಿತರಾಗಿದ್ದರು. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ 51ನೇ ಅರ್ಧ ಶತಕ ಸಿಡಿಸಿದ ಕೊಹ್ಲಿ, ಈ ಟೂರ್ನಿಯಲ್ಲಿ ಸಿಡಿಸಿದ 2ನೇ ಅರ್ಧ ಶತಕ ಇದಾಗಿದೆ.

    ರೋ’ಹಿಟ್’: ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಅಜೇಯ 122 ರನ್ ಹಾಗೂ ಆಸ್ಟ್ರೇಲಿಯಾ ವಿರುದ್ಧ 57 ರನ್ ಗಳಿಸಿದ್ದ ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧವೂ ಭರ್ಜರಿ ಬ್ಯಾಟಿಂಗ್ ನಡೆಸಿದರು. 34 ಎಸೆತಗಳಲ್ಲೇ 50 ರನ್ ಪೂರೈಸಿದ ರೋಹಿತ್ 85 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ವೃತ್ತಿಯ 24ನೇ ಶತಕ, 2019ರ ಟೂನಿಯಲ್ಲಿ 2ನೇ ಶತಕ ಸಿಡಿಸಿದರು. ಸಚಿನ್ (6), ಗಂಗೂಲಿ (5) ಮತ್ತು ಶಿಖರ್ ಧವನ್ (3) ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರರಾಗಿದ್ದಾರೆ.

  • ಭಾರತ 6 – ಪಾಕಿಸ್ತಾನ ಝೀರೋ, 1996ರಲ್ಲಿ ಬೆಂಗಳೂರಲ್ಲೂ ಸೋತಿತ್ತು ಪಾಕಿಸ್ತಾನ!

    ಭಾರತ 6 – ಪಾಕಿಸ್ತಾನ ಝೀರೋ, 1996ರಲ್ಲಿ ಬೆಂಗಳೂರಲ್ಲೂ ಸೋತಿತ್ತು ಪಾಕಿಸ್ತಾನ!

    ಮ್ಯಾಂಚೆಸ್ಟರ್: ಈ ಬಾರಿಯ ವಿಶ್ವಕಪ್‍ನ ಹೈವೋಲ್ಟೇಜ್ ಪಂದ್ಯ ಭಾನುವಾರ ನಡೆಯಲಿದ್ದು, ಭಾರತ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಈ ಬಾರಿಯ ವಿಶ್ವಕಪ್ ಪಂದ್ಯಗಳಿಗೆ ಮಳೆರಾಯನೇ ವಿಲನ್ ಆಗುತ್ತಿದ್ದು, ಭಾನುವಾರವೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶ್ವಕಪ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ಇದುವರೆಗೆ 6 ಪಂದ್ಯಗಳಲ್ಲಿ ಸೆಣಸಾಡಿದ್ದು, ಆರು ಬಾರಿಯೂ ಭಾರತವೇ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಭಾನುವಾರ 7ನೇ ಪಂದ್ಯ ನಡೆಯಲಿದ್ದು ವಿಜಯಲಕ್ಷ್ಮಿ ಯಾರ ಪರವಾಗಿದ್ದಾಳೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಪಾಕಿಸ್ತಾನ ತಂಡ ಟೀಂ ಇಂಡಿಯಾ ವಿರುದ್ಧ 39 ರನ್‍ಗಳಿಂದ ಸೋಲನುಭವಿಸಿತ್ತು. ವಿಶ್ವಕಪ್‍ನಲ್ಲಿ ಇತ್ತಂಡಗಳೂ 4 ವರ್ಷ ಹಿಂದೆ 2015ರಲ್ಲಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಭಾರತ 76 ರನ್‍ಗಳಿಂದ ಗೆಲುವು ಸಾಧಿಸಿತ್ತು.

    ವಿಶ್ವಕಪ್ 1992: 1992ರಲ್ಲಿ ಭಾರತ-ಪಾಕ್ ಮೊದಲ ಬಾರಿಗೆ ವಿಶ್ವಕಪ್‍ನಲ್ಲಿ ಪರಸ್ಪರ ಸೆಣಸಾಡಿತ್ತು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 43 ರನ್‍ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 54 ರನ್ ಗಳಿಸಿದ್ದರು. ಜೊತೆಗೆ 10 ಓವರ್ ನಲ್ಲಿ 37 ರನ್ ನೀಡಿ 1 ವಿಕೆಟ್ ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗಳಿಸಿದ್ದರು.

    ವಿಶ್ವಕಪ್ 1999 – ಬೆಂಗಳೂರಲ್ಲಿ ಸಿಧು, ವೆಂಕಟೇಶ್ ಪ್ರಸಾದ್, ಕುಂಬ್ಳೆ ಹೀರೋ: 1996ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‍ನ ಕಾರ್ಟರ್ ಫೈನಲ್ ಅಹರ್ನಿಶಿ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 39 ರನ್‍ಗಳಿಂದ ಪರಾಭವಗೊಳಿಸಿತ್ತು. ಈ ಪಂದ್ಯದಲ್ಲಿ 93 ರನ್ ಗಳಿಸಿದ ನವಜೋತ್ ಸಿಂಗ್ ಸಿಧು ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. ಸಚಿನ್ 31, ಸಂಜಯ್ ಮಾಂಜ್ರೇಕರ್ 20, ಮೊಹಮ್ಮದ್ ಅಜರುದ್ದೀನ್ 20, ವಿನೋದ್ ಕಾಂಬ್ಳಿ 24, ಅಜಯ್ ಜಡೇಜ 45, ಅನಿಲ್ ಕುಂಬ್ಳೆ 10, ಜಾವಗಲ್ ಶ್ರೀನಾಥ್ 12, ನಯನ್ ಮೊಂಗಿಯ 3 ರನ್ ಗಳಿಸಿ ನಿಗದಿತ 50 ಓವರ್ ಮುಗಿದಾಗ ಭಾರತ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತ್ತು.

    ಪಾಕಿಸ್ತಾನದ ಪರವಾಗಿ ವಖಾರ್ ಯೂನಿಸ್ ಹಾಗೂ ಮುಷ್ತಾಖ್ ಅಹ್ಮದ್ ತಲಾ 2 ವಿಕೆಟ್ ಗಳಿಸಿದರೆ. ಅತಾ-ಉರ್-ರೆಹ್ಮಾನ್, ಆಖಿಬ್ ಜಾವೇದ್, ಅಮೀಲ್ ಸೊಹೇಲ್ ತಲಾ 1 ವಿಕೆಟ್ ಗಳಿಸಿದರು. ವಖಾರ್ ಯೂನಿಸ್ ಹಾಗೂ ಆಖಿಬ್ ಜಾವೇದ್ 10 ಓವರ್‍ಗಳಲ್ಲಿ ತಲಾ 67 ರನ್ ನೀಡಿ ದುಬಾರಿ ಬೌಲರ್ ಎನಿಸಿದರು.

    288 ರನ್ ಸವಾಲನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಅಮೀರ್ ಸೊಹೇಲ್ ಹಾಗೂ ಸಯೀದ್ ಅನ್ವರ್ ಉತ್ತಮ ಆರಂಭವನ್ನೇ ನೀಡಿದರು. ಮೊದಲ ವಿಕೆಟ್ ಜೊತೆಯಾಟಕ್ಕೆ ಇಬ್ಬರೂ ಸೇರಿ 84 ರನ್ ಪೇರಿಸಿದ್ದರು. 15ನೇ ಓವರ್ ನಲ್ಲಿ ಅಮೀರ್ ಸೊಹೇಲ್ ಭಾರತೀಯ ವೇಗಿ ವೆಂಕಟೇಶ್ ಪ್ರಸಾದ್ ಅವರ ಎಸೆತವನ್ನು ಬೌಂಡರಿಗಟ್ಟಿ, ಬಾಲ್ ಹೋದ ದಿಕ್ಕನ್ನು ತೋರಿಸಿ ಕೆಣಕಿದರು. ಆದರೆ ಇದರ ನಂತರದ ಎಸೆತದಲ್ಲೇ ವೆಂಕಟೇಶ್ ಪ್ರಸಾದ್ ಅಮೀರ್ ಸೊಹೇಲ್ ಅವರನ್ನು ಬೌಲ್ಡ್ ಮಾಡಿ ಸೇಡು ತೀರಿಸಿಕೊಂಡರು. ಈ ವಿಕೆಟ್ ಬೀಳುತ್ತಿದ್ದಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ಭಾರತದ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿತ್ತು. ವೆಂಕಟೇಶ್ ಪ್ರಸಾದ್ ಹಾಗೂ ಅನಿಲ್ ಕುಂಬ್ಳೆ ಈ ಪಂದ್ಯದಲ್ಲಿ ತಲಾ 3 ವಿಕೆಟ್ ಪಡೆದರೆ, ಜಾವಗಲ್ ಶ್ರೀನಾಥ್ ಹಾಗೂ ವೆಂಕಟಪತಿ ರಾಜು ತಲಾ 1 ವಿಕೆಟ್ ಗಳಿಸಿದರು.

    ಪಾಕ್ ಪರವಾಗಿ ಅಮೀರ್ ಸೊಹೇಲ್ 55, ಸಯೀದ್ ಅನ್ವರ್ 48, ಇಜಾಜ್ ಅಹ್ಮದ್ 12, ಇಂಜಮಾಮ್ ಉಲ್ ಹಖ್ 12, ಸಲೀಮ್ ಮಲಿಕ್ 38, ಜಾವೇದ್ ಮಿಯಾಂದಾದ್ 38, ರಶೀದ್ ಲತೀಫ್ 26, ವಖಾರ್ ಯೂನಿಸ್ 4, ಅತಾ-ಉರ್-ರೆಹ್ಮಾನ್ 0, ಆಖಿಬ್ ಜಾವೇದ್ 6, ಮುಷ್ತಾಖ್ ಅಹ್ಮದ್ 0 ರನ್ ಗಳಿಸಿದರು. ನಿಧಾನಗತಿಯ ಬೌಲಿಂಗ್ ಹಿನ್ನೆಲೆಯಲ್ಲಿ ಪಾಕ್ ತಂಡಕ್ಕೆ ಬ್ಯಾಟಿಂಗ್‍ಗೆ 1 ಓವರ್ ಇಳಿಕೆ ಮಾಡಿ 49 ಓವರ್ ನಿಗದಿಗೊಳಿಸಲಾಗಿತ್ತು. ನಿಗದಿತ 49 ಓವರ್ ಮುಗಿದಾಗ ಪಾಕ್ ತಂಡ 9 ವಿಕೆಟ್ ನಷ್ಟಕ್ಕೆ 248 ರನ್ ಮಾತ್ರ ಗಳಿಸಿತ್ತು. ಈ ಮೂಲಕ ಭಾರತ ಪಂದ್ಯವನ್ನು 39 ರನ್‍ಗಳಿಂದ ಜಯಿಸಿತು.

    ಈ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಡೇ ನೈಟ್ ಪಂದ್ಯವಾಗಿತ್ತು. ಅಂದು ನಡೆದ ಪಂದ್ಯವನ್ನು ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 55 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸಿದ್ದರು. ಅಲ್ಲದೆ ಇದೇ ಪಂದ್ಯದಲ್ಲಿ ವಖಾರ್ ಯೂನಿಸ್ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 200ನೇ ವಿಕೆಟ್ ಗಳಿಸಿದ ದಾಖಲೆ ಮಾಡಿದ್ದರು.

    https://www.youtube.com/watch?v=lA2Ojyb0gqg&feature=youtu.be

    1999ರ ವಿಶ್ವಕಪ್: ಮ್ಯಾಂಚೆಸ್ಟರ್ ನಲ್ಲಿ 1999ರಲ್ಲಿ ನಡೆದ ಪಂದ್ಯದಲ್ಲಿ ಪಾಕ್ 47 ರನ್‍ಗಳಿಂದ ಸೋತಿತ್ತು. ಭಾರತದ 227 ರನ್ ಟಾರ್ಗೆಟ್ ಬೆಂಬತ್ತಿದ ಪಾಕಿಸ್ತಾನ 180 ರನ್‍ಗಳಿಗೆ ಆಲೌಟಾಯಿತು. ಈ ಪಂದ್ಯದಲ್ಲಿ ವೇಗದ ಬೌಲರ್ ಕನ್ನಡಿಗ ವೆಂಕಟೇಶ್ ಪ್ರಸಾದ್ 9.3 ಓವರ್‍ ಗಳಲ್ಲಿ 27 ರನ್ ನೀಡಿ 5 ವಿಕೆಟ್ ಗಳಿಸಿದರು. ಅಲ್ಲದೆ ಅವರು 2 ಮೇಡನ್ ಓವರ್ ಎಸೆದಿದ್ದರು. ಈ ಪಂದ್ಯದಲ್ಲಿ ವೆಂಕಟೇಶ್ ಪ್ರಸಾದ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗಳಿಸಿದರು.

    ವಿಶ್ವಕಪ್ 2003: ಸೆಂಚುರಿಯನ್‍ನಲ್ಲಿ 2003ರಲ್ಲಿ ನಡೆದ ಪಂದ್ಯದಲ್ಲಿ ಇನ್ನೂ 26 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‍ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಪಾಕಿಸ್ತಾನ ನೀಡಿದ 273 ರನ್ ಟಾರ್ಗೆಟ್‍ಗೆ ಉತ್ತರವಾಗಿ ಟೀಂ ಇಂಡಿಯಾ 45.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತ್ತು. 75 ಎಸೆತಗಳಲ್ಲಿ 98 ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು.

    ವಿಶ್ವಕಪ್ 2011: ಚಂಡೀಗಢದಲ್ಲಿ 2011ರಲ್ಲಿ ನಡೆದ ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಭಾರತ-ಪಾಕಿಸ್ತಾನ ಮತ್ತೆ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಪಾಕಿಸ್ತಾನ 29 ರನ್‍ಗಳ ಸೋಲನುಭವಿಸಿತು. ಈ ಪಂದ್ಯದಲ್ಲಿ 85 ರನ್ ಗಳಿಸಿದ್ದ ಸಚಿನ್ ಮ್ಯಾನ್ ಆಫ್ ದಿ ಮ್ಯಾಚ್ ಗೌರವ ಪಡೆದರು.

    ವಿಶ್ವಕಪ್ 2015: ಆಸ್ಟ್ರೇಲಿಯಾದ ಆಡಿಲೇಡ್‍ನಲ್ಲಿ 2015ರಲ್ಲಿ ಭಾರತ ನೀಡಿದ 300 ರನ್ ಟಾರ್ಗೆಟ್ ಗೆ ಉತ್ತರವಾಗಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ 224 ರನ್‍ಗಳಿಗೆ ಆಲೌಟಾಗಿ ಭಾರತಕ್ಕೆ 76 ರನ್‍ಗಳ ಗೆಲುವು ನೀಡಿತು. ಈ ಪಂದ್ಯದಲ್ಲಿ 107 ರನ್ ಗಳಿಸಿ ಶತಕ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದಿದ್ದರು.

  • ಕೊಹ್ಲಿ ನೋಡಿ ಬ್ಯಾಟಿಂಗ್ ಮಾಡೋದನ್ನ ಕಲಿಯುತ್ತಿದ್ದೇನೆ: ಬಾಬರ್ ಅಜಮ್

    ಕೊಹ್ಲಿ ನೋಡಿ ಬ್ಯಾಟಿಂಗ್ ಮಾಡೋದನ್ನ ಕಲಿಯುತ್ತಿದ್ದೇನೆ: ಬಾಬರ್ ಅಜಮ್

    ನವದೆಹಲಿ: ನಾನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ನೋಡಿ ಬ್ಯಾಟಿಂಗ್ ಮಾಡುವುದನ್ನು ಕಲಿಯುತ್ತಿದ್ದೇನೆ ಎಂದು ಪಾಕಿಸ್ತಾನದ ಯುವ ಆರಂಭಿಕ ಆಟಗಾರ ಬಾಬರ್ ಅಜಮ್ ಹೇಳಿದ್ದಾರೆ.

    ವಿಶ್ವಕಪ್‍ನಲ್ಲಿ ಪಾಕಿಸ್ತಾನ ಗೆದ್ದ ಏಕೈಕ ಪಂದ್ಯದಲ್ಲಿ 24 ವರ್ಷದ ಬಾಬರ್ ಅಜಮ್ ಅವರು ಸ್ಫೋಟಕ 63 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ಆಟಗಾರ ಭಾರತ ಮತ್ತು ಪಾಕ್ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಾಗ ಈ ರೀತಿ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.

    ಬಾಬರ್ ಅಜಮ್ ಅವರು ವಿಶ್ವಕಪ್‍ನಲ್ಲಿ ಪಾಕಿಸ್ತಾನ ತಂಡದ ಪ್ರಮುಖ ಆಟಗಾರ. ಅದಕ್ಕಾಗಿಯೇ ಇವರನ್ನು ಕೊಹ್ಲಿಗೆ ಹೋಲಿಸಲಾಗುತ್ತಿದೆ. ಈಗ ಅವರೇ “ಕೊಹ್ಲಿ ಅವರು ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುತ್ತಾರೆ. ನಾನು ಅವರು ಬ್ಯಾಟಿಂಗ್ ಮಾಡುವುದನ್ನು ನೋಡುತ್ತೇನೆ ಮತ್ತು ನಾನು ಅವರು ರೀತಿ ಬ್ಯಾಟ್ ಮಾಡಲು ಕಲಿಯುತ್ತಿದ್ದೇನೆ” ಎಂದು ಹೇಳಿದ್ದಾರೆ.

    ಕೊಹ್ಲಿ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ ಬಹುತೇಕ ಪಂದ್ಯಗಳಲ್ಲಿ ಭಾರತ ಗೆದ್ದಿದೆ. ನಾನು ಕೂಡ ಇದೇ ರೀತಿ ಆಡಲು ಪ್ರಯತ್ನಿಸುತ್ತಿದ್ದೇನೆ. ಎರಡು ವರ್ಷಗಳ ಹಿಂದೆ ನಾವು ಭಾರತದ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಪೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ನಾವು ಆ ಗೆಲುವಿನ ಸ್ಫೂರ್ತಿ ಪಡೆದು ಮುಂದಿನ ವಿಶ್ವಕಪ್ ಪಂದ್ಯದಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

    ಪಾಕಿಸ್ತಾನ ಮತ್ತು ಭಾರತ ನಡುವಿನ ವಿಶ್ವಕಪ್ ಪಂದ್ಯ ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆಯಲಿದೆ.

  • ಭಾರೀ ಮೊತ್ತಕ್ಕೆ ರಿಸೇಲ್ ಆಗ್ತಿದೆ ಇಂಡೋ-ಪಾಕ್ ಪಂದ್ಯದ ಟಿಕೆಟ್‍ಗಳು

    ಭಾರೀ ಮೊತ್ತಕ್ಕೆ ರಿಸೇಲ್ ಆಗ್ತಿದೆ ಇಂಡೋ-ಪಾಕ್ ಪಂದ್ಯದ ಟಿಕೆಟ್‍ಗಳು

    ಲಂಡನ್: 2019ರ ವಿಶ್ವಕಪ್ ಟೂರ್ನಿಯ ಭಾರೀ ನಿರೀಕ್ಷೆ ಇರುವ ಟೀಂ ಇಂಡಿಯಾ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯ ಜೂನ್ 16ರ ಭಾನುವಾರ ನಡೆಯುತ್ತಿದ್ದು, ಈಗಾಗಲೇ ಪಂದ್ಯದ ಟಿಕೆಟ್‍ಗಳು ಕೆಲವೇ ಗಂಟೆಗಳಲ್ಲಿ ಸೇಲ್ ಆಗಿದೆ.

    ಎರಡು ದೇಶಗಳು ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿಗಳನ್ನು ಆಡದಿರುವುದರಿಂದ ವಿಶ್ವಕಪ್ ಟೂರ್ನಿಯ ಪಂದ್ಯವನ್ನು ಅಭಿಮಾನಿಗಳು ಕುತೂರದಿಂದ ಎದುರು ನೋಡುತ್ತಿದ್ದಾರೆ. ಅಲ್ಲದೇ ಪಂದ್ಯವನ್ನು ಶತಯಗತಾಯ ನೋಡಬೇಕು ಎಂದು ನಿರ್ಧರಿಸಿರುವ ಹಲವರು ಎಷ್ಟೇ ಹಣ ಆದ್ರು ಟಿಕೆಟ್ ಪಡೆಯಲು ಸಿದ್ಧರಾಗಿದ್ದಾರೆ. ವಿಶೇಷ ಎಂದರೆ ಇದುವರೆಗೂ ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್‍ನಲ್ಲಿ 6 ಬಾರಿ ಭಾರತದೊಂದಿಗೆ ಮುಖಾಮುಖಿಯಾಗಿದ್ದು, ಆರು ಬಾರಿಯೂ ಸೋಲುಂಡಿದೆ.

    ಇಂಡೋ-ಪಾಕ್ ಕ್ರಿಕೆಟ್ ಪಂದ್ಯ ನಡೆಯುವ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ 20 ಸಾವಿರ ಮಂದಿಗೆ ಆಸನ ವ್ಯವಸ್ಥೆ ಇದ್ದು, ಈಗಾಗಲೇ ಟಿಕೆಟ್ ಮಾರಾಟ ಮುಕ್ತಾಯವಾಗಿದೆ. ಆದರೆ ಸದ್ಯ ಕೆಲ ಟಿಕೆಟ್‍ಗಳ ಮರು ಮಾರಾಟ ನಡೆಯುತ್ತಿದ್ದು, Viagogo ಎಂಬ ವೆಬ್ ಸೈಟ್ ಅಭಿಮಾನಿಗಳಿಂದ ಟಿಕೆಟ್ ಖರೀದಿ ಮಾಡುತ್ತಿದ್ದು, 60 ಸಾವಿರದ ರೂ. ವರೆಗೂ ಟಿಕೆಟ್ ಖರೀದಿ ಮಾಡುತ್ತಿದೆ. ಸದ್ಯ ಖರೀದಿ ಮಾಡಿರುವ ಟಿಕೆಟ್ ಬೆಲೆ 62,610 ರೂ.ಗಳನ್ನು ನೀಡಿದೆ. ಪ್ಲಾಟಿನಂ ವರ್ಗದ ಟಿಕೆಟ್‍ಗಳ ಬೆಲೆ 60 ಸಾವಿರವರೆಗೂ ಇದ್ರೆ, ಬ್ರೋನ್ಜ್ ವರ್ಗದ ಟಿಕೆಟ್ ಗಳು 20 ಸಾವಿರ ರೂ. ದಿಂದ ಆರಂಭವಾಗುತ್ತಿದೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಂತೆ ಪಾಕ್ ವಿರುದ್ಧದ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ.

  • ಕ್ರಿಕೆಟ್ ನಿವೃತ್ತಿ ವಿಚಾರವನ್ನು ಪ್ರಕಟಿಸಿದ ಯುವರಾಜ್

    ಕ್ರಿಕೆಟ್ ನಿವೃತ್ತಿ ವಿಚಾರವನ್ನು ಪ್ರಕಟಿಸಿದ ಯುವರಾಜ್

    ನವದೆಹಲಿ: 2019ರ ವಿಶ್ವಕಪ್ ಟೂರ್ನಿಯ ಬಳಿಕ ತಮ್ಮ ನಿವೃತ್ತಿ ಬಗ್ಗೆ ಯೋಚಿಸುವುದಾಗಿ ಟೀಂ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.

    ಮುಂದಿನ ಐಪಿಎಲ್ ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿಯಲಿರುವ ಅವರು, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ 2019 ರ ವಿಶ್ವಕಪ್ ವೇಳೆವರೆಗೂ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದು ಬಳಿಕ ನಿವೃತ್ತಿಯ ಬಗ್ಗೆ ಚಿಂತನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ಕ್ರಿಕೆಟ್ ವೃತ್ತಿ ಜೀವನದ ಆರಂಭ 6, 7 ವರ್ಷಗಳ ಕಾಲ ಉತ್ತಮವಾಗಿ ಆಡಿದ್ದೇನೆ. ನಂತರ ಅವಧಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾದವು. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಿತು. ಆದರೆ ಕ್ಯಾನ್ಸರ್ ನಿಂದ ಗುಣಮುಖನಾದೆ. ಬಳಿಕ ತಂಡದಲ್ಲಿ ನನಗೆ ನಿರಂತರವಾಗಿ ಅವಕಾಶ ಸಿಗಲಿಲ್ಲ. ಕೆಲವು ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು ಎಂದರು.

    ಯುವರಾಜ್ ಸಿಂಗ್ 2017 ಜೂನ್ ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. 2011ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ತಂಡದಲ್ಲಿ ನಿರಂತರವಾಗಿ ಆಡಿದ್ದ ಯುವಿ ಆನಂತರ ಕ್ಯಾನ್ಸರ್ ನಿಂದ ಬಳಲಿದ್ದರು. ಆದರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದು ಬಂದ ಅವರು ಬಳಿಕ ಫಾರ್ಮ್ ಸಮಸ್ಯೆಯಿಂದ ಬಳಲಿದ್ದರು.

    ಇದೇ ವೇಳೆ ಆಫ್ರಿಕಾ ವಿರುದ್ಧದ ಸಿಮೀತ ಓವರ್ ಗಳ ಸರಣಿಯಲ್ಲಿ ಟೀಂ ಇಂಡಿಯಾ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದರು. ಅಲ್ಲದೇ ಮುಂಬರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವು ಪಡೆಯಲು ಕೊಹ್ಲಿ ಗಮನ ಹರಿಸಬೇಕಿದೆ. ತಂಡದ ಪ್ರತಿಯೊಬ್ಬ ಆಟಗಾರರು ಸ್ಥಿರ ಪ್ರದರ್ಶನ ನೀಡಬೇಕಿದೆ ಎಂದರು.