Tag: World Championships

  • ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?

    ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?

    ಮುಂಬೈ: ಕಾಮನ್‌ವೆಲ್ತ್ ಗೇಮ್ಸ್-2022ರಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಈ ವರ್ಷದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯಲಿದ್ದಾರೆ.

    ಪಿ.ವಿ ಸಿಂಧು ಅವರು ಸದ್ಯ ಕಾಲಿನ ಪಾದದ ಫ್ರ್ಯಾಕ್ಚರ್‌ ಸಮಸ್ಯೆಯಿಂದಾಗಿ ಬಳಲುತ್ತಿದ್ದು, ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಸ್ಪೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವುದು ವಿಶೇಷ: ಮೋದಿ

    ಕಾಮನ್‌ಲ್ತ್‌ನಲ್ಲಿ ಚಿನ್ನದ ಪದಕ ಗೆದ್ದ ಪಿ.ವಿ.ಸಿಂದು ಕಾಲು ನೋವಿನ ಹೊರತಾಗಿಯೂ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಫೈನಲ್ಸ್ ಪಂದ್ಯವನ್ನು ಆಡಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ಸಿಂಧು, `ದುರಾದೃಷ್ಟವಶಾತ್ ನಾನು ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಹೊರಗುಳಿಯಬೇಕಿದೆ. ಸದ್ಯ ನಾನು ಗಾಯದ ಸಮಸ್ಯೆಯಿಂದ ನೋವು ಅನುಭವಿಸುತ್ತಿದ್ದೇನೆ. ಕಾಮನ್‌ವೆಲ್ತ್ ಕ್ವಾಲಿಫೈಯರ್‌ನಲ್ಲಿಯೇ ಗಾಯದ ಭಯವಿತ್ತು. ಆದರೆ ನನ್ನ ತರಬೇತುದಾರರು ಹಾಗೂ ದೈಹಿಕ ತರಬೇತುದಾರರ ಸಹಾಯದಿಂದ ಪಂದ್ಯವನ್ನಾಡಿದೆ ಎಂದು ಸಿಂಧು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಫೋಟಕ ಆಟವಾಡಿದ ಟೆಸ್ಟ್ ಸ್ಪೆಷಲಿಷ್ಟ್‌ – ಒಂದೇ ಓವರ್‌ನಲ್ಲಿ 22 ರನ್ ಚಚ್ಚಿದ ಪೂಜಾರ

    ಬರ್ಮಿಂಗ್‌ಹ್ಯಾಮ್‌ನಿಂದ ಹೈದರಾಬಾದ್‌ಗೆ ಹಿಂದಿರುಗಿದ ನಂತರ ತಕ್ಷಣ ನಾನು ಎಂಆರ್‌ಐ ಸ್ಕ್ಯಾನ್‌ಗೆ ಧಾವಿಸಿದೆ. ವೈದ್ಯರು ನನ್ನ ಎಡಪಾದದಲ್ಲಿ ಗಂಭೀರ ಸಮಸ್ಯೆಯಾಗಿರುವುದನ್ನು ಗುರುತಿಸಿ ಕೆಲ ವಾರಗಳ ವರೆಗೆ ವಿಶ್ರಾಂತಿ ಪಡೆಯುವಂತೆ ಶಿಫಾರಸು ಮಾಡಿದ್ದಾರೆ. ಕೆಲವೇ ವಾರಗಳಲ್ಲಿ ನಾನು ತರಬೇತಿಗೆ ಹಿಂದಿರುಗಬೇಕು. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ

    2020ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ 2016ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ, 2019ರ ಟೂರ್ನಿಯಲ್ಲಿ ಚಿನ್ನದ ಪದಕ ನಂತರ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಕೊನೆಯದಾಗಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗುಂಪು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಹಾಗೂ ಸಿಂಗಲ್ಸ್ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯುದ್ಧಭೂಮಿಯಲ್ಲೂ ನಿಲ್ಲದ ಪ್ರೇಮ – ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟಿನ್ ಪ್ರೇಯಸಿ ಮತ್ತೆ ಗರ್ಭಿಣಿ

    ಯುದ್ಧಭೂಮಿಯಲ್ಲೂ ನಿಲ್ಲದ ಪ್ರೇಮ – ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟಿನ್ ಪ್ರೇಯಸಿ ಮತ್ತೆ ಗರ್ಭಿಣಿ

    ಮಾಸ್ಕೋ: ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಅದು ಯಾರಿಗೆ ಯಾವಾಗ ಬೇಕಾದರೂ ಆಗಬಹುದು. ಹಾಗೆಯೇ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ 69 ವರ್ಷದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸತತ ಉಕ್ರೇನ್ ನಡುವಿನ ಯುದ್ಧದ ಬ್ಯೂಸಿಯಲ್ಲೂ ಪ್ರೇಮಕ್ಕೂ ಸೈ ಎಂದಿದ್ದಾರೆ.

    putin daughters

    ತನ್ನ ಪ್ರೇಯಸಿ ಜಿಮ್‌ಪಟು ಅಲಿನಾ ಕಬೀವಾ ಜೊತೆ ಪ್ರತ್ಯಕ್ಷರಾದ ಪುಟಿನ್ ಆಕೆ ಗರ್ಭಿಣಿಯಾಗಿರುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಜಿಮ್ ಪಟು 3ನೇ ಮಗುವಿನ ತಾಯಿಯಾಗುತ್ತಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ದೊರೆಗೆ ಈ ಸುದ್ದಿ ಖುಷಿ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ಗೆ ಕೊರೊನಾ ಪಾಸಿಟಿವ್‌

    ಈ ದಂಪತಿ ಈಗಾಗಲೇ 2 ಮಕ್ಕಳನ್ನು ಹೊಂದಿದ್ದಾರೆ. ಮುಂದಿನ ಅಕ್ಟೋಬರ್ ತಿಂಗಳಿಗೆ ಪುಟಿನ್‌ಗೆ 70 ವರ್ಷ ಪೂರ್ಣಗೊಳ್ಳಲಿದೆ. ಕ್ಯಾನ್ಸರ್ ಚಿಕಿತ್ಸೆಯಿಂದ ಬಳಲುತ್ತಿರುವ ಪುಟಿನ್‌ಗೆ ಕೆಲ ದಿನಗಳಲ್ಲೇ ಶಸ್ತ್ರಚಿಕಿತ್ಸೆ ನಡೆಯಲಿದೆ. ಈ ನಡುವೆ ಅವರು 3ನೇ ಮಗುವಿಗೆ ತಂದೆಯಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

    putin

    ಯಾರಿದು ಅಲಿನಾ ಕಬೀವಾ? ಅಲಿನಾ ಯಶಸ್ವಿ ಜಿಮ್ ಪಟು. ಈಕೆ 2 ಬಾರಿ ಒಲಿಂಪಿಕ್ಸ್ ಪದಕ, 14 ವಿಶ್ವಚಾಂಪಿಯನ್ ಹಾಗೂ 21 ಬಾರಿ ಯುರೋಪಿಯನ್ ಚಾಂಪಿಯನ್ ಶಿಪ್ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪುಟಿನ್ ಹಾಗೂ ಅಲಿನಾ ಮೊದಲಿನಿಂದಲೂ ಪ್ರೀತಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಪುಟಿನ್ ಎಲ್ಲಿಯೂ ಬಹಿರಂಗಪಡಿಸಿಲ್ಲ. ಇದೀಗ 3ನೇ ಮಗುವಿಗೆ ತಂದೆಯಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ವಿಷಯ ಬಹಿರಂಗಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ: ಶ್ರೀಲಂಕಾ ರಕ್ಷಣಾ ಸಚಿವಾಲಯ ಆದೇಶ

    putin Alina Kabaeva (1)

    1983 ರಲ್ಲಿ ಲ್ಯುಡ್ಮಿಲಾ ಅಲೆಕ್ಸಾಂಡ್ರೊವ್ನಾ ಒಚೆರೆಟ್ನಾಯಾ ಅವರನ್ನು ವಿವಾಹವಾಗಿದ್ದ ಪುಟಿನ್ 30 ವರ್ಷಗಳ ಕಾಲ ಒಟ್ಟಿಗೆ ಸಂಸಾರ ಮಾಡಿ ನಂತರ ಇಬ್ಬರೂ 2014 ರಲ್ಲಿ ವಿಚ್ಛೇದನ ಪಡೆದರು. ಪುಟಿನ್ ಮತ್ತು ಲ್ಯುಡ್ಮಿಲಾ ಅವರಿಗೆ ಮರಿಯಾ ಪುಟಿನ್ ಮತ್ತು ಕಟೆರಿನಾ ಟಿಖೋನೋವಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಪುಟಿನ್‌ನಿಂದ ವಿಚ್ಛೇದನ ಪಡೆದ ಲ್ಯುಡ್ಮಿಲಾ ತನಗಿಂತ 21 ವರ್ಷದ ಕಿರಿಯ ಉದ್ಯಮಿಯನ್ನು ವಿವಾಹವಾಗಿದ್ದರು.

  • ಕಂಚಿನ ಪದಕಕ್ಕೆ ಮುತ್ತಿಟ್ಟ ಮೇರಿ ಕೋಮ್

    ಕಂಚಿನ ಪದಕಕ್ಕೆ ಮುತ್ತಿಟ್ಟ ಮೇರಿ ಕೋಮ್

    ರಷ್ಯಾ: ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ಮೇರಿ ಕೋಮ್ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟರು. ಸೆಮಿಫೈನಲ್ ನಲ್ಲಿ ಯುರೋಪಿಯನ್ ಚಾಂಪಿಯನ್ ಟಿರ್ಕಿಯ ಬುಸೆನಾಜ್ ಕೈಕಿರೊಗ್ಲೂ ವಿರುದ್ಧ 4-1 ಅಂತರದಿಂದ ಮೇರಿ ಕೋಮ್ ಶರಣಾಗುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯ್ತು.

    36 ವರ್ಷದ ಮೇರಿ ಕೋಮ್ ಇಂದು ನಡೆದ ಪಂದ್ಯದಲ್ಲಿ ಆರಂಭದಿಂದ ತಾಳ್ಮೆಯ ಪ್ರದರ್ಶನ ತೋರಿದರು. ಮೊದಲ ಸುತ್ತಿನಲ್ಲಿ ಮೇರಿ ಕೋಮ್ ಅಂಕವನ್ನು ತಮ್ಮದಾಗಿಸಿಕೊಂಡರು. ಮುಂದಿನ ಮೂರು ಸುತ್ತುಗಳಲ್ಲಿ ಕೈಕಿರೊಗ್ಲೂ ಮುನ್ನಡೆ ಕಾಯ್ದುಕೊಂಡು ಫೈನಲ್ ಗೆ ಲಗ್ಗೆ ಇಟ್ಟರು. ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಕಂಚು ಸೇರಿದಂತೆ (ಚಿನ್ನ-6, ಬೆಳ್ಳಿ-1, ಕಂಚು-1) ಒಟ್ಟು ಎಂಟು ಪದಕಗಳನ್ನು ಪಡೆದುಕೊಂಡಿದ್ದಾರೆ.

    ಇತ್ತ ಭಾರತದಿಂದ ಲೊವಲಿನಾ ಬೊರಗೊಹೆನ (69 ಕೆ.ಜಿ.), ಜಮುನಾ ಬೋರೋ (54 ಕೆಜಿ) ಮತ್ತು ಮಂಜು ರಾಣಿ (48 ಕೆಜಿ) ಇಂದು ಸೆಮಿಫೈನಲ್ ನಲ್ಲಿ ಆಡಲಿದ್ದಾರೆ. ಮೇರಿಕೋಮ್ ಮೊದಲ ಬಾರಿಗೆ 2001ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2002, 2005, 2006, 2008, 2010 ಮತ್ತು 2018ರಲ್ಲಿ ಚಿನ್ನದ ಪದಕದ ಒಡತಿಯಾಗಿದ್ದಾರೆ.

  • ಬೆಳ್ಳಿ ಗೆದ್ದು ವಿಶ್ವ ಚಾಂಪಿಯನ್ ಶಿಪ್‍ನಿಂದ ಹೊರ ಬಿದ್ದ ದೀಪಕ್ ಪುನಿಯಾ

    ಬೆಳ್ಳಿ ಗೆದ್ದು ವಿಶ್ವ ಚಾಂಪಿಯನ್ ಶಿಪ್‍ನಿಂದ ಹೊರ ಬಿದ್ದ ದೀಪಕ್ ಪುನಿಯಾ

    ನವದೆಹಲಿ: ಭಾರತದ ಯುವ ಕುಸ್ತಿ ಪಟು ದೀಪಕ್ ಪುನಿಯಾ ಅವರು ಬೆಳ್ಳಿ ಗೆಲ್ಲುವ ಮೂಲಕ ಕಾಲು ನೋವಿನ ಸಮಸ್ಯೆಯಿಂದ ವಿಶ್ವ ಚಾಂಪಿಯನ್ ಕುಸ್ತಿ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ.

    ಸೆಮಿಫೈನಲ್ ಪಂದ್ಯದ ವೇಳೆ ಎಡಗಾಲು ಪಾದಕ್ಕೆ ಗಾಯವಾದ ಕಾರಣ ಅವರು, 86 ಕೆ.ಜಿ ವಿಭಾಗದಲ್ಲಿ ಇರಾನಿನ ಶ್ರೇಷ್ಠ ಕುಸ್ತಿ ಪಟು ಹಜ್ಸನ್ ಯಾಜ್ದಾನಿ ಅವರ ವಿರುದ್ಧ ಆಡಬೇಕಾದ ವಿಶ್ವ ಚಾಂಪಿಯನ್ ಶಿಪ್‍ನ ಫೈನಲ್ ಆಟವಾನ್ನು ಆಡುವುದಿಲ್ಲ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ದೀಪಕ್ ಪುನಿಯಾ ಅವರು, ಸೆಮಿಫೈನಲ್ ಪಂದ್ಯದ ವೇಳೆ ನನ್ನ ಎಡಗಾಲಿಗೆ ಗಾಯವಾಗಿದೆ. ಎಡಗಾಲು ಭಾರವನ್ನು ತಡೆಯುತ್ತಿಲ್ಲ. ಈ ಸ್ಥಿತಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವುದು ತುಂಬಾ ಕಷ್ಟ. ಈ ಪಂದ್ಯ ಶ್ರೇಷ್ಠ ಆಟಗಾರ ಯಾಜ್ದಾನಿ ವಿರುದ್ಧ ಆಟವಾಡಲು ಒಳ್ಳೆಯ ಅವಕಾಶವಿತ್ತು. ಆದರೆ ನನಗೆ ಆಡಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

    ಶನಿವಾರ ಸ್ವಿಜರ್ಲ್ಯಾಂಡ್ ನ ಸ್ಟೀಫನ್ ರೀಚ್‍ಮುತ್ ಅವರ ವಿರುದ್ಧ ಸೆಮಿಫೈನಲ್ ಪಂದ್ಯದ ವೇಳೆ ದೀಪಕ್ ಅವರ ಎಡಗಾಲಿಗೆ ಪೆಟ್ಟಾಗಿತ್ತು. ಇದಕ್ಕೂ ಮುನ್ನ ದೀಪಕ್ ಪುನಿಯಾ ಅವರು ಕೊಲಂಬಿಯಾದ ಕಾರ್ಲೋಸ್ ಮೆಂಡೆಜ್ ಮತ್ತು ಖಜಕಿಸ್ತಾನದ ಅಡಿಲೆಡ್ ದಾವ್ಲುಂಬಾಯೆವ್ ವಿರುದ್ಧ ಗೆದ್ದು ಫೈನಲ್ ಪ್ರವೇಶ ಮಾಡಿದ್ದರು. ಆದರೆ ಫೈನಲ್ ಸಮಯದಲ್ಲಿ ಗಾಯವಾದ ಕಾರಣ ಅವರಿಗೆ ಫೈನಲ್ ಆಡಲು ಆಗಾದೆ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.

    ಕಳೆದ ವರ್ಷ ಜೂನಿಯರ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದ ದೀಪಕ್ ಪುನಿಯಾ ಈ ಬಾರಿಯೂ ಚಿನ್ನದ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದರು. ಆದರೆ ಗಾಯದ ಸಮಸ್ಯೆಯಿಂದ ಚಿನ್ನದ ಪದಕ ಕೈತಪ್ಪಿದೆ. 2010 ರಲ್ಲಿ ಮಾಸ್ಕೋದಲ್ಲಿ ನಡೆದ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ 66 ಕೆ.ಜಿ ವಿಭಾಗದಲ್ಲಿ ಭಾರತದ ಸುಶೀಲ್ ಕುಮಾರ್ ಅವರು ಚಿನ್ನ ಗೆದ್ದಿದ್ದರು.

    ಈ ಬಾರಿಯ ಕುಸ್ತಿ ವಿಶ್ವ ಚಾಂಪಿಯನ್‍ಶಿಪ್ ಭಾರತದ ರಾಹುಲ್ ಅವೇರ್ ಅವರು 61 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಇಂದು ಹೋರಾಡಲಿದ್ದಾರೆ.

  • ಸೋಲು, ಸೋಲು, ಸೋಲು – ಕುಗ್ಗದೇ ಸ್ವರ್ಣಕ್ಕೆ ಮುತ್ತಿಟ್ಟ ಸಿಂಧು ಕಥೆ

    ಸೋಲು, ಸೋಲು, ಸೋಲು – ಕುಗ್ಗದೇ ಸ್ವರ್ಣಕ್ಕೆ ಮುತ್ತಿಟ್ಟ ಸಿಂಧು ಕಥೆ

    ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ನಲ್ಲಿ ಭಾರತದ ತಾರೆ ಪಿ.ವಿ.ಸಿಂಧು ಮೊದಲ ಬಾರಿಗೆ ಸ್ವರ್ಣಕ್ಕೆ ಮುತ್ತಿಟ್ಟಿದ್ದಾರೆ. ಸತತ ಸೋಲುಗಳ್ನು ಅನುಭವಿಸಿದ್ದರೂ, ಕುಗ್ಗದ ಸಿಂಧು ಸ್ವರ್ಣಕ್ಕೆ ಕೊರಳೊಡ್ಡುವ ಮೂಲಕ ಭಾರತದ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಾಡುವಂತೆ ಮಾಡಿದರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಆಟಗಾರ್ತಿಯಾದರು.

    ಚಿನ್ನದ ಪದಕಕ್ಕೆ ಸಮೀಪ ಹೋಗಿ ಹಲವು ಸೋಲುಗಳನ್ನು ಕಂಡಿದ್ದ ಸಿಂಧು ಎಲ್ಲ ನೋವನ್ನು ನುಂಗಿ, ತಮ್ಮ ವಿರುದ್ಧ ಕೇಳಿ ಬಂದ ಹಲವು ಪ್ರಶ್ನೆಗಳಿಗೆ ರಾಕೆಟ್ ಮೂಲಕವೇ ಉತ್ತರಿಸಿದ್ದಾರೆ. ಸಿಂಧು ಅವರ ಕ್ರೀಡಾಜೀವನದ ವೃತ್ತಿ ಯಾವುದೇ ಸ್ಫೂರ್ತಿದಾಯಕ ಕಥೆಗಿಂತ ಭಿನ್ನವಾಗಿಲ್ಲ. ಜೀವನದಲ್ಲಿ ಒಂದಾದ ನಂತರ ಸೋಲು, ವಿಫಲತೆಯನ್ನು ಕಾಣುತ್ತಿರುವ ಅದೆಷ್ಟೋ ಜನರಿಗೆ ಸಿಂಧು ಮಾದರಿಯಾಗಿ ನಿಂತಿದ್ದಾರೆ. ಕ್ರೀಡಾ ಜೀವನದ ಆರಂಭದಲ್ಲಿ ಒಂದೆರೆಡು ಭಾರೀ ಸೋಲುಗಳನ್ನು ಅನುಭವಿಸಿದ್ರೆ ಬಹುತೇಕರು ತಮ್ಮ ಮಾರ್ಗವನ್ನು ಬದಲಿಸಿಕೊಳ್ಳುವುದುಂಟು. ನಿರಂತರ ಸೋಲುಗಳಿಂದ ವ್ಯಕ್ತಿಯ ಆತ್ಮಸ್ಥೈರ್ಯ ಕುಗ್ಗುತ್ತದೆ. ಸೋಲೇ ಗೆಲುವಿನ ನಾಂದಿ ಎಂಬಂತೆ ಪಿ.ವಿ.ಸಿಂಧು ಹೊಸ ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

    ವಿಶ್ವಮಟ್ಟದಲ್ಲಿ ಭಾರತದ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದ ಸಿಂಧು ಹೆಸರು ದೇಶದ ಕ್ರೀಡಾಲೋಕದಲ್ಲಿ ಚಿರಪರಿಚಿತ, ಇತಿಹಾಸದಲ್ಲಿ ದಾಖಲಾಗಿದೆ. ಭಾನುವಾರ ನಡೆದ 37 ನಿಮಿಷದ ಪಂದ್ಯದಲ್ಲಿ ಎದುರಾಳಿ ಜಪಾನಿನ ಒಕುಹರಾ ಅವರಿಗೆ ಅವಕಾಶವನ್ನ ಸಿಂಧು ನೀಡಲಿಲ್ಲ. 21-7, 21-7 ಸೆಟ್ ನಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡ ಪಿ.ವಿ.ಸಿಂಧು ವಿಶ್ವ ಚಾಂಪಿಯನ್ ತಮ್ಮದಾಗಿಸಿಕೊಂಡರು.

    2013ಕ್ಕೆ ಪಾದಾರ್ಪಣೆ:
    ಇಂದಿಗೆ ಆರು ವರ್ಷಗಳ ಹಿಂದೆ 2013ರಲ್ಲಿ ಪಿ.ವಿ.ಸಿಂಧು ವಿಶ್ವ ಚಾಂಪಿಯನ್‍ಶಿಪ್ ನಲ್ಲಿ ವರ್ಲ್ಡ್ ಬ್ಯಾಡ್ಮಿಂಟನ್ ತಮ್ಮ ಪರಿಚಯ ಮಾಡಿಕೊಂಡಿದ್ದರು. ಸೀನಿಯರ್ ಲೆವಲ್ ನಲ್ಲಿ ಪಿ.ವಿ.ಸಿಂಧು ಮೊದಲ ಬಾರಿಯ ಟೂರ್ನಿಯಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.

    ತದನಂತರ 2016ರ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶದ ಮನೆಮಾತಾದ್ರು. ಅಂದೇ ಸಿಂಧು ಭಾರತ ಶೀಘ್ರದಲ್ಲಿಯೇ ಚಿನ್ನದ ಪದಕವನ್ನು ತನ್ನದಾಗಿಸಿಕೊಳ್ಳಲಿದೆ ಎಂಬ ಸಂದೇಶವನ್ನು ಕ್ರೀಡಾಭಿಮಾನಿಗಳಿಗೆ ರವಾನಿಸಿದ್ದರು. 2012 ಓಲಿಂಪಿಕ್ ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದರು. 2016ರ ರಿಯೋ ಒಲಿಂಪಿಕ್ ನ ಫೈನಲ್ ತಲುಪಿದ್ದ ಸಿಂಧು ತಮ್ಮ ಬಿರುಸಿನ ಆಟದ ಮೂಲಕ ಕ್ರೀಡಾಲೋಕದಲ್ಲಿ ಅಚ್ಚರಿಗೆ ಕಾರಣರಾಗಿದ್ದರು.

    ಚಿನ್ನ ತಂದ ಸಿಂಧು:
    ಈ ಗೆಲುವಿನ ಮುನ್ನ ದೊಡ್ಡ ಪಂದ್ಯಾವಳಿಗಳ ಅಂತಿಮ ಸುತ್ತಿನಲ್ಲಿ ಸಿಂಧು ಹಲವು ಸೋಲುಗಳನ್ನು ಕಂಡಿದ್ದಾರೆ. ಭಾನುವಾರ ಜಪಾನಿನ ಅನುಭವಿ ಆಟಗಾರ್ತಿ ಒಕುಹರಾ ಅವರನ್ನ ಮಣಿಸಿ ಇತಿಹಾಸ ಬರೆದಿದ್ದಾರೆ.

    ಒಲಿಂಪಿಕ್, ವರ್ಲ್ಡ್ ಚಾಂಪಿಯನ್‍ಶಿಪ್, ಏಷಿಯನ್ ಗೇಮ್ಸ್ ಮತ್ತು ಕಾಮನ್‍ವೆಲ್ತ್ ಗಳಲ್ಲಿ ಬ್ಯಾಡ್ಮಿಂಟನ್ ಆಟವನ್ನು ಭಾರತದಿಂದ ಸಿಂಧು ಪ್ರತಿನಿಧಿಸುತ್ತಿದ್ದರು. ಪ್ರತಿಬಾರಿಯೂ ಅಂತಿಮ ಸುತ್ತಿನಲ್ಲಿ ಹಿನ್ನಡೆ ಅನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ಸಂತೋಷ ಸೀಮಿತವಾಗುತ್ತಿತ್ತು. ರಿಯೋ ಒಲಿಂಪಿಕ್ ಬಳಿಕ ಇದೂವರೆಗೂ 16 ಟೂರ್ನಾಮೆಂಟ್ ಗಳಲ್ಲಿ ಸಿಂಧು ಫೈನಲ್ ತಲುಪಿದ್ದು, ಐದು ಬಾರಿ ಮಾತ್ರ ಗೆಲುವು ಕಂಡಿದ್ದಾರೆ. ಹಾಗಾಗಿ ಫೈನಲ್ ನಲ್ಲಿ ಸಿಂಧು ಮತ್ತೆ ಎಡವಲಿದ್ದಾರೆ ಎಂದು ಹಲವು ವಿಮರ್ಶಕರು ಲೆಕ್ಕ ಹಾಕಿದ್ದರು. ಎಲ್ಲರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ಸಿಂಧು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

    5ನೇ ಬಾರಿಗೆ ಸಿಕ್ತು ವಿಜಯ:
    ಪಿ.ವಿ.ಸಿಂಧು ಮೊದಲ ಬಾರಿಗೆ ವಿಶ್ವ ಚಾಂಪಿಯನ್‍ಶಿಪ್ ನಲ್ಲಿ ಸ್ವರ್ಣ ಪದಕದ ಒಡತಿಯಾಗಿದ್ದಾರೆ. ಈ ಪಂದ್ಯ ಸೇರಿದಂತೆ ಒಟ್ಟು 5 ಬಾರಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ನಲ್ಲಿ ಸ್ಪರ್ಧೆ ಮಾಡಿದ್ದಾರೆ. 2013 ಮತ್ತು 2014ರಲ್ಲಿ ಕಂಚು, 2017 ಮತ್ತು 2018ರಲ್ಲಿ ಬೆಳ್ಳಿ, 2019ರಲ್ಲಿ ಸ್ವರ್ಣ ಪದಕ ಪಡೆದಿದ್ದಾರೆ. ಗೆಲುವಿನ ಬಳಿಕ ಮಾತನಾಡಿದ್ದ ಪಿ.ವಿ.ಸಿಂಧು, ವಿಶ್ವ ಚಾಂಪಿಯನ್‍ಶಿಪ್ ನ ಐದು ಪದಕಗಳು ನನ್ನ ಬಳಿ ಇವೆ ಎಂದು ಖುಷಿ ಹಂಚಿಕೊಂಡಿದ್ದರು.

    2017ರಲ್ಲಿ ಒಕುಹರಾ ವಿರುದ್ಧ ಸೋಲು:
    2017ರ ವಿಶ್ವ ಚಾಂಪಿಯನ್‍ಶಿಪ್ ನಲ್ಲಿ ಇದೇ ಓಕುಹರಾ ಫೈನಲ್ ನಲ್ಲಿ ಸಿಂಧು ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. 2017ರಲ್ಲಿ ಕೊನೆಯ ಹಂತದವರೆಗೂ ಸ್ಪರ್ಧೆ ನೀಡಿದ್ದ ಸಿಂಧು ರೋಚಕ ಸೋಲು ಕಂಡಿದ್ದರು. ಒಕುಹರಾ 21-19, 20-22, 22-20ರಲ್ಲಿ ಸೆಣಸಾಟದಲ್ಲಿ ವಿಜೇತರಾಗಿದ್ದರು. ಈ ಬಾರಿ ಸಿಂಧು ಎದುರಾಳಿ ಗೆಲುವಿನ ಸಮೀಪ ಪ್ರವೇಶಿಸುವ ಸಣ್ಣ ಅವಕಾಶವನ್ನು ನೀಡಲಿಲ್ಲ.

    ಸ್ವರ್ಣ ಅಮ್ಮನಿಗೆ ಅರ್ಪಣೆ:
    ಕಳೆದ ವರ್ಷ ಸೋತಾಗ ನನ್ನ ಮೇಲೆ ನನಗೆ ಅಗಾಧವಾದ ಕೋಪ ಬಂದಿತ್ತು. ನನ್ನ ಎಲ್ಲ ಭಾವನೆಗಳೊಂದಿಗೆ ಈ ಪಂದ್ಯ ಸೋತಿದ್ದು ಯಾಕೆ ಎಂಬುದನ್ನು ಪ್ರಶ್ನಿಸಿಕೊಂಡಿದ್ದೆ. ಇಂದು ನನ್ನ ಆಟವನ್ನು ಯಾವುದೇ ಭಯವಿಲ್ಲದೇ ಚೆನ್ನಾಗಿ ಆಡಬೇಕೆಂದು ಬಂದೆ. ನನ್ನ ಯೋಚನೆ ಇಂದು ವರ್ಕೌಟ್ ಆಯ್ತು. ಇಂದು ನನ್ನ ತಾಯಿಯ ಹುಟ್ಟು ಹಬ್ಬವಾಗಿದ್ದರಿಂದ ಚಿನ್ನದ ಪದಕವನ್ನ ಅಮ್ಮನಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

    ಪ್ರತಿಯೊಬ್ಬರು ನಾನು ಗೆಲ್ಲಬೇಕೆಂದು ಆಶಿಸಿ ಪ್ರಾರ್ಥಿಸುತ್ತಾರೆ. ರಿಯೋ ಒಲಿಂಪಿಕ್ ಬಳಿಕ ನನ್ನ ಮೇಲಿನ ಭರವಸೆ ದೇಶದ ಜನತೆಗೆ ಹೆಚ್ಚಾಯ್ತು. ಪ್ರತಿ ಪಂದ್ಯಗಳಿಗೆ ಹೋದಾಗ ನಾನು ಚಿನ್ನದ ಪದಕವನ್ನ ಗೆಲ್ಲಬೇಕೆಂದು ಇಚ್ಛಿಸುತ್ತಿದ್ದರು. ರಿಯೋ ಒಲಿಂಪಿಕ್ ಬಳಿಕ ನನಗಾಗಿ ಪ್ರಾರ್ಥನೆ ಮಾಡುತ್ತಿರುವ ಅಭಿಮಾನಿಗಳ ಬಗ್ಗೆ ಚಿಂತಿಸತೊಡಗಿದೆ. ಯಾವುದೇ ಸ್ವಾರ್ಥವಿಲ್ಲದೇ ನನ್ನನ್ನು ಗೆಲುವನ್ನು ನಿರೀಕ್ಷಿಸುತ್ತಿರುವರಿಗಾಗಿ ಆಡಬೇಕೆಂಬ ಛಲ ನನ್ನಲ್ಲಿ ಬಂತು. ನನಗಾಗಿ ಮತ್ತು ನನ್ನವರಿಗಾಗಿ ಪ್ರತಿ ಪಂದ್ಯಗಳಲ್ಲಿ ಶೇ.100ರಷ್ಟು ಪರಿಶ್ರಮ ಹಾಕಿ ಆಡಲಾರಂಭಿಸಲಿದೆ. ಸಹಜವಾಗಿ ಅದು ನನ್ನನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿತು ಎಂದು ತಿಳಿಸಿದರು.

    ಟೋಕಿಯೋ ಒಲಿಂಪಿಕ್: 2020ರಲ್ಲಿ ನಡೆಯುವ ಟೋಕಿಯೋ ಒಲಿಂಪಿಕ್ ಬಗ್ಗೆ ನಾನು ಸಿದ್ಧಗೊಳ್ಳುತ್ತಿದ್ದೇನೆ. ಅರ್ಹತಾ ಸುತ್ತಿನಲ್ಲಿ ಗೆಲುವು ಕಂಡು ಪ್ರವೇಶ ಪಡೆಯುತ್ತೇನೆ ಎಂಬ ನಂಬಿಕೆ ಇದೆ. ಸದ್ಯ ಯಾವುದರ ಬಗ್ಗೆ ಚಿಂತೆ ಮಾಡದೇ ಗೆಲುವನ್ನು ಸಂಭ್ರಮಿಸುತ್ತೇನೆ. ಬ್ಯಾಡ್ಮಿಂಟನ್ ನನ್ನ ಉತ್ಸಾಹವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಟೈಟಲ್ ನನ್ನದಾಗಿಸಿಕೊಳ್ಳಲು ಅಭ್ಯಾಸ ನಡೆಸುತ್ತೇನೆ ಎಂದು ಸಿಂಧು ಹೇಳಿದರು.