Tag: World Athletics Championship

  • India VS Pakistan: ಎರಡೂ ದೇಶಗಳು ಯುರೋಪಿಯನ್ ದೇಶಗಳ ಮಟ್ಟಕ್ಕೆ ಬೆಳೆದಿರೋದು ಸಂತೋಷ ತಂದಿದೆ: ನೀರಜ್ ಚೋಪ್ರಾ

    India VS Pakistan: ಎರಡೂ ದೇಶಗಳು ಯುರೋಪಿಯನ್ ದೇಶಗಳ ಮಟ್ಟಕ್ಕೆ ಬೆಳೆದಿರೋದು ಸಂತೋಷ ತಂದಿದೆ: ನೀರಜ್ ಚೋಪ್ರಾ

    ಬುಡಾಪೆಸ್ಟ್: ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ (World Athletics Championship) ಜಾವೆಲಿನ್ ಥ್ರೋನಲ್ಲಿ (Javelin Throw) ಭಾರತದ ನೀರಜ್ ಚೋಪ್ರಾ (Neeraj Chopra) ಚಿನ್ನ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪಾಕಿಸ್ತಾನದ (Pakistan) ಅರ್ಷದ್ ನದೀಮ್ (Arshad Nadeem) 2ನೇ ಸ್ಥಾನ ಪಡೆದು ಬೆಳ್ಳಿ ಗೆದ್ದಿದ್ದಾರೆ.

    ಐತಿಹಾಸಿಕ ಸಾಧನೆಯಲ್ಲೂ ನೀರಜ್ ಚೋಪ್ರಾ ಪಾಕಿಸ್ತಾನದ ಪ್ರತಿಸ್ಪರ್ಧಿಯ ಸಾಧನೆಯನ್ನೂ ಕೊಂಡಾಡಿದ್ದಾರೆ. ಈ ಹಿಂದೆ ಜಾವೆಲಿನ್ ಎಸೆತದಲ್ಲಿ ಯುರೋಪಿಯನ್ ರಾಷ್ಟ್ರಗಳಷ್ಟೇ ಮುಂದಿದ್ದವು. ಆದರೆ ಇದೀಗ ಭಾರತ ಹಾಗೂ ಪಾಕಿಸ್ತಾನವೂ ಆ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ನೀರಜ್ ಚೋಪ್ರಾ, ನಾನು ಸ್ಪರ್ಧೆಗೂ ಮುನ್ನ ನನ್ನ ಮೊಬೈಲ್ ಅನ್ನು ಹೆಚ್ಚು ಬಳಸುವುದಿಲ್ಲ. ಆದರೆ ಇಂದು ನಾನು ನೋಡಿದೆ. ಈ ವೇಳೆ ನನ್ನ ಗಮನಸೆಳೆದ ಮೊದಲ ವಿಷಯವೆಂದರೆ ಭಾರತ ಮತ್ತು ಪಾಕಿಸ್ತಾನ. ಯುರೋಪಿಯನ್ ಅಥ್ಲೀಟ್‌ಗಳು ತುಂಬಾ ಅಪಾಯಕಾರಿ ಮತ್ತು ಯಾವುದೇ ಸಮಯದಲ್ಲಿ ದೊಡ್ಡ ಮುನ್ನಡೆ ಸಾಧಿಸಬಹುದು. ಹೀಗಾಗಿ ನಾವು ಕೊನೆಯ ಎಸೆತದವರೆಗೂ ಇತರ ಸ್ಪರ್ಧಿಗಳ ಬಗ್ಗೆ ಯೋಚಿಸುತ್ತಲೇ ಇರಬೇಕಾಗುತ್ತದೆ. ಆದರೆ ಈ ಬಾರಿ ಭಾರತ ಮತ್ತು ಪಾಕಿಸ್ತಾನದ ಹೋಲಿಕೆ ಮನೆಯಂತಹ ಅನುಭವ ನೀಡಿತು ಎಂದು ಚೋಪ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತದೆ. ಆದರೆ ನಾನು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸಾಮಾನ್ಯವಾಗಿ ಐರೋಪ್ಯ ರಾಷ್ಟ್ರಗಳು ಪ್ರಾಬಲ್ಯ ಮೆರೆದಿದ್ದ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನ ಮಾಡಿರುವ ಸಾಧನೆ ಮುಖ್ಯವಾದುದು. ಭಾರತ ಹಾಗೂ ಪಾಕಿಸ್ತಾನ ದೊಡ್ಡ ಸ್ಥಾನವನ್ನು ಗಳಿಸಿರುವುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ. ಇದನ್ನೂ ಓದಿ: World Athletics Championships- ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ

    ಅರ್ಷದ್ ತುಂಬಾ ಚೆನ್ನಾಗಿ ಸ್ಪರ್ಧಿಸಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ನಮ್ಮ ಎರಡೂ ದೇಶಗಳು ಈಗ ಹೇಗೆ ಬೆಳೆಯುತ್ತಿವೆ ಎಂದು ನಾವು ಚರ್ಚಿಸಿದ್ದೇವೆ. ಮೊದಲು ಈ ಸ್ಥಾನಕ್ಕೆ ಯುರೋಪಿಯನ್ ಕ್ರೀಡಾಪಟುಗಳಷ್ಟೇ ಬರಲು ಸಾಧ್ಯವಿತು. ಈಗ ನಾವು ಆ ಮಟ್ಟವನ್ನು ತಲುಪಿದ್ದೇವೆ ಎಂದು ನೀರಜ್ ಸಂತಸ ವ್ಯಕ್ತಪಡಿಸಿದ್ದಾರೆ.

    ಭಾರತದ ಬೀರಜ್ ಹಾಗೂ ಪಾಕಿಸ್ತಾನದ ಅರ್ಷದ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಬಲ್ಲಿ ಭಾರೀ ಪೈಪೋಟಿ ನಡೆಸಿದ್ದಾರೆ. ನೀರಜ್ ಫೈನಲ್‌ನಲ್ಲಿ ಜಾವೆಲಿನ್ ಅನ್ನು 88.17 ಮೀ. ದೂರ ಎಸೆದು ವಿಜಯಿಯಾದರೆ, ಅರ್ಷದ್ 87.82 ಮೀ. ಎಸೆದು 2ನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: World Athletics Championships: 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೀರಜ್‌ ಚೋಪ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವ ಅಥ್ಲೆಟಿಕ್ ಚ್ಯಾಂಪಿಯನ್‍ಶಿಪ್: ಹೊಸ ಇತಿಹಾಸ ಬರೆದ ಭಾರತದ ದವಿಂದರ್ ಸಿಂಗ್

    ವಿಶ್ವ ಅಥ್ಲೆಟಿಕ್ ಚ್ಯಾಂಪಿಯನ್‍ಶಿಪ್: ಹೊಸ ಇತಿಹಾಸ ಬರೆದ ಭಾರತದ ದವಿಂದರ್ ಸಿಂಗ್

    ಲಂಡನ್: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಜಾವಲಿನ್ ಥ್ರೋ ವಿಭಾಗದಲ್ಲಿ ಭಾರತೀಯ ಆಟಗಾರ ದವಿಂದರ್ ಸಿಂಗ್ ಕಾಂಗ್ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಮೊದಲ ಭಾರತೀಯ ಜಾವಲಿನ್ ಸ್ಪರ್ಧಿ ಎಂಬ ಹೆಗ್ಗಳಿಕಿಗೆ ಪಾತ್ರರಾಗಿದ್ದಾರೆ.

    ಗುರುವಾರದಂದು ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ ಕಾಂಗ್ ಅವರಿಗೆ ಭುಜದ ಗಾಯವಿತ್ತು. ಆದರೂ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಈ ಸುತ್ತಿನಲ್ಲಿ ಆಯ್ಕೆಯಾಗಲು ಕಬ್ಬಿಣದ ಈಟಿಯನ್ನ 83 ಮೀಟರ್ ದೂರ ಎಸೆಯಬೇಕಿತ್ತು. ಕಾಂಗ್ ಅವರು ಮೂರನೇ ಎಸೆತದಲ್ಲಿ 84.22 ಮೀಟರ್ ದೂರಕ್ಕೆ ಈಟಿಯನ್ನ ಎಸೆಯುವ ಮೂಲಕ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಮೊದಲ ಎಸೆತದಲ್ಲಿ ಅವರು 82.22 ಮೀ. ದೂರಕ್ಕೆ ಎಸೆದಿದ್ದರು ಹಾಗೂ ಎರಡನೇ ಪ್ರಯತ್ನದಲ್ಲಿ 82.14 ದೂರಕ್ಕೆ ಈಟಿಯನ್ನ ಎಸೆದಿದ್ದರು.

    ಪಂಜಾಬ್ ಮೂಲದವರಾದ 26 ವರ್ಷದ ದವಿಂದರ್ ಸಿಂಗ್ ಕಾಂಗ್, ಕೊನೆಯ ಎಸೆತದಲ್ಲಿ 83 ಮೀ. ದೂರಕ್ಕೆ ಈಟಿಯನ್ನು ಎಸೆಯಲು ಒತ್ತಡದಲ್ಲಿದ್ರು. ಆದ್ರೆ ಅವರು ತಮ್ಮದೇ ಶೈಲಿಯಲ್ಲಿ ಈಟಿಯನ್ನ ಎಸೆದಿದ್ದು ಅರ್ಹತೆಗೆ ಬೇಕಾಗಿದ್ದ ಮಾರ್ಕ್‍ಗಿಂತ ದೂರಕ್ಕೆ ಎಸೆದು ಭಾರತೀಯ ಕ್ಯಾಂಪ್‍ಗೆ ಸಂತಸ ತಂದ್ರು.

    ಈ ಸುತ್ತಿನಲ್ಲಿ ಗ್ರೂಪ್-ಎ ನಿಂದ ಐವರು ಹಾಗೂ ಗ್ರೂಪ್-ಬಿ ನಿಂದ ಏಳು ಮಂದಿ ಆಯ್ಕೆಯಾಗಿದ್ದು, ಎಲ್ಲರೂ ಆಗಸ್ಟ್ 12ರಂದು ನಡೆಯಲಿರುವ ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.

    ಅಂತಿಮ ಸುತ್ತಿಗೆ ಆಯ್ಕೆಯಾದವರಲ್ಲಿ 84.22 ಮೀ ದೂರದ ಎಸೆತದಿಂದ ದವಿಂದರ್ ಸಿಂಗ್ 7ನೇ ಸ್ಥಾನದಲ್ಲಿದ್ದಾರೆ. ಈವರೆಗೆ ಯಾವುದೇ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಪುರುಷರ ವಿಭಾಗದ ಜಾವ್ಲಿನ್ ಥ್ರೋನಲ್ಲಿ ಭಾರತೀಯ ಆಟಗಾರರು ಆಯ್ಕೆಯಾಗಿರಲಿಲ್ಲ.

    ಮತ್ತೊಬ್ಬ ಭಾರತೀಯ ಆಟಗಾರ ನೀರಜ್ ಚೋಪ್ರಾ ಅಂತಿಮ ಸುತ್ತಿಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ. ನೀರಜ್ ಅಂತಿಮ ಸುತ್ತಿಗೆ ಆಯ್ಕೆಯಾಗಿಲ್ಲ ಎಂದು ತಿಳಿದ ನಂತರ ನಾನು ಅಂತಿಮ ಸುತ್ತಿಗೆ ಹೋಗಲೇಬೇಕು ಎಂದುಕೊಂಡೆ. ದೇಶಕ್ಕಾಗಿ ನಾನು ಏನಾದರೂ ಮಾಡ್ಬೇಕು ಅನ್ನಿಸ್ತು. ಈವರೆಗೆ ಯಾವುದೇ ಭಾರತೀಯ ಮಾಡಿರದ ಕೆಲಸವನ್ನ ನಾನು ನನ್ನ ದೇಶಕ್ಕಾಗಿ ಮಾಡಬಯಸಿದೆ. ದೇವರ ದಯದಿಂದ ನಾನದನ್ನು ಮಾಡಿದ್ದೇನೆ ಅಂತ ಕಾಂಗ್ ಹೇಳಿದ್ದಾರೆ.