Tag: workers association

  • MESಗೆ ಪಾಠ ಕಲಿಸಲು ಕಾರ್ಮಿಕ ಸಂಘಟನೆ ಪ್ಲ್ಯಾನ್- ಇಂದಿನಿಂದ್ಲೇ ಮಹಾರಾಷ್ಟ್ರ ವಸ್ತುಗಳು ಬ್ಯಾನ್

    MESಗೆ ಪಾಠ ಕಲಿಸಲು ಕಾರ್ಮಿಕ ಸಂಘಟನೆ ಪ್ಲ್ಯಾನ್- ಇಂದಿನಿಂದ್ಲೇ ಮಹಾರಾಷ್ಟ್ರ ವಸ್ತುಗಳು ಬ್ಯಾನ್

    ಬೆಂಗಳೂರು: ಎಂಇಎಸ್(MES) ಪುಂಡರ ವಿರುದ್ಧ ಕನ್ನಡಿಗರು ಸಮರ ಸಾರಲು ಮುಂದಾಗಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲೂ ಕನ್ನಡಿಗರ ಆಕ್ರೋಶ ಕಟ್ಟೆಯೊಡೆದಿದೆ. ಅತ್ತ ಪುಂಡರ ವಿರುದ್ಧ ಕನ್ನಡ ಪರ ಸಂಘಟನೆಗಳು ಎದ್ದು ನಿಂತರೆ, ಇತ್ತ ಅದೇ ಪುಂಡರ ವಿರುದ್ಧ ಎಪಿಎಂಸಿ ಕಾರ್ಮಿಕ ಸಂಘಟನೆ ವಿಭಿನ್ನವಾಗಿ ತೊಡೆ ತಟ್ಟಿ ನಿಂತಿದೆ.

    ಹೌದು. ಇಂದಿನಿಂದ ಬೆಂಗಳೂರು ಎಪಿಎಂಸಿಯಲ್ಲಿ ಮಹಾರಾಷ್ಟ್ರ ವಸ್ತುಗಳಿಗೆ ನಿರ್ಬಂಧ ಹೇರಲು ಮುಂದಾಗಿದೆ. ಇಂದಿನಿಂದ ಬೆಂಗಳೂರಿನ ಎಪಿಎಂಸಿಯಲ್ಲಿ ಮಹಾರಾಷ್ಟ್ರ ವಸ್ತುಗಳು ನೋ ಲೋಡ್, ನೋ ಅನ್ ಲೋಡ್‍ಗೆ ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

    ಮಹಾರಾಷ್ಟ್ರ ವಸ್ತುಗಳ ಆಮದು ಮತ್ತು ಸಾಗಾಟಕ್ಕೆ ಬ್ರೇಕ್ ಹಾಕುವ ಮೂಲಕ ಮಹಾರಾಷ್ಟ್ರಕ್ಕೆ ಶಾಕ್ ನೀಡಲು ಸಂಘಟನೆ ತಯಾರಿ ನಡೆಸಿದೆ. ಎಂಇಎಸ್ ಪುಂಡರು ಪುಂಡಾಟಿಕೆ ನಿಲ್ಲಿಸದಿದ್ದರೆ ಇನ್ನಷ್ಟು ತಕ್ಕ ಪ್ರತಿಫಲ ಅನುಭವಿಸುತ್ತೀರಿ ಎಂದು ಎಪಿಎಂಸಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಅರುಣ್ ಪರಮೇಶ್ ಅವರು ಪುಂಡರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

    ನಾವು ಎಂಇಎಸ್ ಪುಂಡರ ಹಾಗೇ ಕಲ್ಲು ಹೊಡೆಯುವುದಿಲ್ಲ. ನಮ್ಮ ಹೊಡೆತದ ಏಟಿನ ಶೈಲಿಯೇ ಬೇರೆ. ಇಂದಿನಿಂದ ಬೆಂಗಳೂರು ಎಪಿಎಂಸಿಯಲ್ಲಿ ಮಹಾರಾಷ್ಟ್ರ ಲಾರಿಗಳ ಲೋಡಿಂಗ್ ಅನ್ ಲೋಡಿಂಗ್ ಮಾಡುವುದಿಲ್ಲ. ಆ ಭಾಗದಿಂದ ಸಕ್ಕರೆ ಮತ್ತು ಬೆಳೆ ಆಮದು ಆಗುತ್ತಿತ್ತು. ನಮ್ಮಿಂದ ಕಾಳುಗಳ ಸಾಗಣೆ ಆಗುತ್ತಿತ್ತು. ಇಂದಿನಿಂದ ಇವೆಲ್ಲ ಬಂದ್ ಆಗಲಿದೆ. ನಾವು ಕನ್ನಡ ಸ್ವಾಭಿಮಾನಿಗಳು. ಇಷ್ಟಕ್ಕೆ ಪುಂಡರು ಎಚ್ಚೆತ್ತುಕೊಳ್ಳದ್ದಿದ್ದರೆ ಎಪಿಎಂಸಿ ಆವರಣಕ್ಕೆ ಲಾರಿಗಳಿಗೆ ಪ್ರವೇಶವನ್ನೇ ನಿರ್ಬಂಧ ಹೇರುತ್ತೇವೆ. ಕೇವಲ ಬೆಂಗಳೂರು ಮಾತ್ರ ಅಲ್ಲ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹೀಗೆ ಮಾಡುತ್ತೇವೆ ಎಂದು ವಾರ್ನ್ ಮಾಡಿದ್ದಾರೆ.

  • ಬ್ಯಾಂಡ್ ಬಾರಿಸಿ ಅಂಚೆ ಸಿಬ್ಬಂದಿಯಿಂದ ವಿನೂತನ ಪ್ರತಿಭಟನೆ

    ಬ್ಯಾಂಡ್ ಬಾರಿಸಿ ಅಂಚೆ ಸಿಬ್ಬಂದಿಯಿಂದ ವಿನೂತನ ಪ್ರತಿಭಟನೆ

    ಉಡುಪಿ: ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಇಂದು ಮತ್ತು ನಾಳೆ ಭಾರತ್ ಬಂದ್ ಗೆ ಕರೆ ನೀಡಿದ್ದು, ಈ ವೇಳೆ ಉಡುಪಿಯ ಅಂಚೆ ಸಿಬ್ಬಂದಿ ವಿಭಿನ್ನವಾಗಿ ತಮ್ಮ ಆಕ್ರೋಶ ಹೊರಹಾಕಿದರು. ಬ್ಯಾಂಡ್ ಬಾರಿಸಿ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದರು.

    ಉಡುಪಿ ನಗರದ ಪ್ರಧಾನ ಅಂಚೆ ಕಚೇರಿ ಎದುರು ಡೋಲು ಬಾರಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಯಿತು. ಅಂಚೆ ಕಾರ್ಮಿಕರು ಬ್ಯಾಂಡ್ ಬಡಿದು ಆಕ್ರೋಶ ವ್ಯಕ್ತಪಡಿಸಿದರು. ಅಂಚೆ ಕಚೇರಿ ಸಿಬ್ಬಂದಿ ಬ್ಯಾಂಡ್ ಬಾರಿಸುತ್ತಾ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು. ಸಿಬ್ಬಂದಿ ಬ್ಯಾಂಡ್ ಬಾರಿಸೋದನ್ನು ನೋಡಲು ಸಾರ್ವಜನಿಕರೂ ಸ್ಥಳದಲ್ಲಿ ಜಮಾಯಿಸಿದರು.

    ಕಾರ್ಮಿಕ ಸಂಘಟನೆಯ ಸದಸ್ಯರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಎಲ್‍ಐಸಿ ಕಚೇರಿ, ಬ್ಯಾಂಕುಗಳ ಮುಂಭಾಗ, ಬಿಎಸ್ ಎನ್ ಎಲ್ ಕಚೇರಿಗಳ ಮುಂದೆ ಕೆಲಕಾಲ ಪ್ರತಿಭಟನೆ ಮಾಡಿದರು.

    ಇದನ್ನು ಹೊರತುಪಡಿಸಿ ಉಡುಪಿಯಲ್ಲಿ ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್, ಚಿತ್ರ ಮಂದಿರ ಎಂದಿನಂತೆ ತೆರೆದಿವೆ. ಒಟ್ಟಾರೆ ಉಡುಪಿ ಮಾತ್ರವಲ್ಲದೆ ಗಂಗೊಳ್ಳಿ, ಕುಂದಾಪುರ, ಕಾರ್ಕಳ, ಕಾಪು ತಾಲೂಕಿನಲ್ಲೂ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv