Tag: women’s staff

  • ಆಸ್ಪತ್ರೆಯಲ್ಲೇ ಮಂಗಳೂರಿನ ವೈದ್ಯಾಧಿಕಾರಿಯ ರಂಗಿನಾಟ – ಮಹಿಳಾ ಸಿಬ್ಬಂದಿ ಜೊತೆ ಚೆಲ್ಲಾಟ

    ಆಸ್ಪತ್ರೆಯಲ್ಲೇ ಮಂಗಳೂರಿನ ವೈದ್ಯಾಧಿಕಾರಿಯ ರಂಗಿನಾಟ – ಮಹಿಳಾ ಸಿಬ್ಬಂದಿ ಜೊತೆ ಚೆಲ್ಲಾಟ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬನ ಕಾಮಪುರಾಣ ಬಯಲಾಗಿದೆ.

    ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ್ಬಂದಿ ಜೊತೆಗೆ ಚೆಲ್ಲಾಟ ಆಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಇದನ್ನೂ ಓದಿ: ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟ್ರಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    ಆಸ್ಪತ್ರೆಯ 9 ಮಂದಿ ಮಹಿಳಾ ಸಿಬ್ಬಂದಿ ಜೊತೆಗೆ ರತ್ನಾಕರ್ ಅಸಭ್ಯವಾಗಿ ವರ್ತಿಸಿದ್ದಾನೆ. ತನ್ನ ತೊಡೆಯ ಓರ್ವ ಮಹಿಳೆಯನ್ನು ಕೂರಿಸಿದ್ದಾನೆ. ಮಹಿಳಾ ಸಿಬ್ಬಂದಿ ಮೂಲಕ ರತ್ನಾಕರ್ ಪಾದ ಸೇವೆ ಮಾಡಿದ್ದಾನೆ. ಇಬ್ಬಿಬ್ಬರು ಮಹಿಳಾ ಸಿಬ್ಬಂದಿಯನ್ನು ಕೂರಿಸಿಕೊಂಡು ರತ್ನಾಕರ್ ಆಸ್ಪತ್ರೆಯಲ್ಲಿಯೇ ರಂಗಿನಾಟ ಆಡಿದ್ದಾನೆ. ಇದನ್ನೂ ಓದಿ: ಆಫ್ರಿಕಾದಲ್ಲಿ ರೂಪಾಂತರ ಕೋವಿಡ್ ತಳಿ ಪತ್ತೆ – ಕಟ್ಟೆಚ್ಚರಕ್ಕೆ ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ

    ಸರ್ಕಾರಿ ವೈದ್ಯನಾಗಿರುವ ರತ್ನಾಕರ್ ಆಯುಷ್ಮಾನ್ ನೋಡೆಲ್ ಆಫೀಸರ್ ಕೂಡ ಆಗಿದ್ದಾನೆ. ಒಂದು ವೇಳೆ ರತ್ನಾಕರ್ ಜೊತೆಗೆ ಸಹಕರಿಸದ ಸಿಬ್ಬಂದಿಯನ್ನು ಕೆಲಸದಿಂದ ತೆಗೆಸುವ ಅಥವಾ ಟ್ರಾನ್ಸ್‍ಫರ್ ಮಾಡಿಸುವ ಹೀಗೆ ಹಲವಾರು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಕೇಳಿ ಬಂದಿದೆ. ಈ ಭಯಕ್ಕೆ ಮಹಿಳಾ ಸಿಬ್ಬಂದಿ ಆತ ಹೇಳಿದಂತೆ ಕೇಳುತ್ತಿದ್ದರು.

    ರತ್ನಾಕರ್ ಮಹಿಳಾ ಸಿಬ್ಬಂದಿ ಜೊತೆ ಆಗಾಗ ಟ್ರಿಪ್ ಹೋಗುತ್ತಿದ್ದ. ಈ ಸಂದರ್ಭದಲ್ಲೂ ಆತ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ರತ್ನಾಕರ ಕಿರುಕುಳದಿಂದ ನೊಂದ ಮಹಿಳೆಯರು ಆರೋಪಿ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

  • ಟಿಕೆಟ್ ಕಲೆಕ್ಟರ್ ನಿಂದ ಸ್ಟೇಶನ್ ಮಾಸ್ಟರ್ ವರೆಗೆ ಈ ರೈಲ್ವೆ ನಿಲ್ದಾಣದ ತುಂಬೆಲ್ಲಾ ಮಹಿಳಾ ಸಿಬ್ಬಂದಿ- ಇದು ದೇಶದ 2ನೇ ಮಹಿಳಾ ರೈಲ್ವೆ ನಿಲ್ದಾಣ

    ಟಿಕೆಟ್ ಕಲೆಕ್ಟರ್ ನಿಂದ ಸ್ಟೇಶನ್ ಮಾಸ್ಟರ್ ವರೆಗೆ ಈ ರೈಲ್ವೆ ನಿಲ್ದಾಣದ ತುಂಬೆಲ್ಲಾ ಮಹಿಳಾ ಸಿಬ್ಬಂದಿ- ಇದು ದೇಶದ 2ನೇ ಮಹಿಳಾ ರೈಲ್ವೆ ನಿಲ್ದಾಣ

    ಜೈಪುರ: ಟಿಕೆಟ್ ಕಲೆಕ್ಟರ್ ನಿಂದ ನಿಲ್ದಾಣದ ಸೂಪರಿಂಟೆಂಡೆಂಟ್, ಟಿಕೆಟ್ ಕೌಂಟರ್, ಸ್ಟೇಶನ್ ಮಾಸ್ಟರ್ ಮತ್ತು ಪಾಯಿಂಟ್ಸ್ ಮ್ಯಾನ್ ವರೆಗೆ ಈ ರೈಲ್ವೆ ನಿಲ್ದಾಣದಲ್ಲಿ ಕೇವಲ ಮಹಿಳೆಯರೇ ಕೆಲಸ ಮಾಡುತ್ತಾರೆ.

    ರಾಜಸ್ಥಾನದ ಜೈಪುರ್‍ನ ಗಾಂಧಿನಗರದ ರೈಲ್ವೆ ನಿಲ್ದಾಣದಲ್ಲಿ 40 ಮಹಿಳೆಯರು ಕಾರ್ಯನಿರ್ವಹಿಸ್ತಾರೆ. ರೈಲ್ವೆ ನಿಲ್ದಾಣದ ಎಲ್ಲ ಕೆಲಸಗಳನ್ನು ಮಹಿಳಾ ಸಿಬ್ಬಂದಿಯೇ ಮಾಡ್ತಾರೆ. ರೈಲ್ವೆ ಹಳಿಗಳ ನಿರ್ವಹಣೆ, ರೈಲುಗಳಿಗೆ ಸಿಗ್ನಲ್ ಸೇರಿದಂತಹ ಕೆಲಸಗಳನ್ನು ಮಹಿಳೆಯರೇ ಮಾಡ್ತಾರೆ. ನಿಲ್ದಾಣದಲ್ಲಿ ಇತರೆ ಟಿಕೆಟ್ ನೀಡುವಿಕೆ ಮತ್ತು ಟಿಕೆಟ್ ಸಂಗ್ರಹಣೆಗೆ ಕೂಡ ಮಹಿಳೆಯರೇ ನೇಮಕವಾಗಿದ್ದಾರೆ. ರೈಲ್ವೆ ನಿಲ್ದಾಣದ ಪ್ಲಾಟ್‍ಫಾರಂ ಭದ್ರತೆಗಾಗಿ ಮಹಿಳಾ ಪೇದೆಯರನ್ನ ನೇಮಕ ಮಾಡಲಾಗಿದೆ ಎಂದು ಜೈಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಸೌಮ್ಯ ಮಾಥುರ್ ಹೇಳಿದ್ದಾರೆ. ಮುಂಬೈನ ಮಾತುಂಗಾ ರೈಲ್ವೆ ನಿಲ್ದಾಣದ ನಂತರ ಗಾಂಧಿನಗರ ನಿಲ್ದಾಣ ದೇಶದ ಎರಡನೇ ಸಂಪೂರ್ಣ ಮಹಿಳಾ ಸಿಬ್ಬಂದಿಯುಳ್ಳ ರೈಲ್ವೆ ಸ್ಟೇಶನ್ ಆಗಿದೆ.

    ಜೈಪುರ ಮತ್ತು ದೆಹಲಿ ನಗರಗಳ ಮಧ್ಯೆ ಬರುವ ಈ ರೈಲ್ವೆ ನಿಲ್ದಾಣ ಪ್ರತಿನಿತ್ಯ ಜನಸಂದಣಿಯಿಂದ ಕೂಡಿರುತ್ತದೆ. ಗಾಂಧಿನಗರ ನಿಲ್ದಾಣದಲ್ಲಿ ದಿನಕ್ಕೆ 25 ರೈಲುಗಳು ನಿಲುಗಡೆ ಆಗುತ್ತವೆ. ಪ್ರವಾಸಿ ರೈಲ್ವೆ ‘ಮಹರಾಜ್ ಎಕ್ಸ್ ಪ್ರೆಸ್’ ಇಲ್ಲಿಯೇ ಕೊನೆಗುಳ್ಳುತ್ತದೆ. ಹೈ ಸ್ಪೀಡ್ (ರಾಜಧಾನಿ ಮತ್ತು ಶತಾಬ್ದಿ) ಮತ್ತು ಗೂಡ್ಸ್ ರೈಲುಗಳು ಸೇರಿದಂತೆ ದಿನಕ್ಕೆ 50 ರೈಲುಗಳು ಗಾಂಧಿನಗರ ನಿಲ್ದಾಣದ ಮೂಲಕ ಹೋಗುತ್ತವೆ. ಅಂದಾಜು 7 ಸಾವಿರ ಪ್ರಯಾಣಿಕರು ಈ ನಿಲ್ದಾಣದ ಮೂಲಕವೇ ಪ್ರಯಾಣಿಸುತ್ತಾರೆ.

    ಜನಸಂದಣಿಯಿಂದ ತುಂಬಿ ತುಳುಕುವ ರೈಲ್ವೆ ನಿಲ್ದಾಣವಾದ್ರೂ ಎಲ್ಲ ಮಹಿಳಾ ಸಿಬ್ಬಂದಿ ಕ್ಷಮತೆಯಿಂದ ಕಾರ್ಯನಿರ್ವಹಿಸ್ತಾರೆ. 8 ಗಂಟೆಯ ಶಿಫ್ಟ್ ನಂತೆ ಎಲ್ಲ ಮಹಿಳಾ ನೌಕರರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಮಹಿಳಾ ಸಿಬ್ಬಂದಿಯ ರಕ್ಷಣೆಗಾಗಿ 11 ಆರ್‍ಪಿಎಫ್ ಮಹಿಳಾ ಪೊಲೀಸ್ ಪೇದೆಗಳನ್ನು ನೇಮಿಸಲಾಗಿದೆ.

    ರೈಲು ಸಂಚಾರವೇ ನನ್ನ ಜಾಬ್: ಯಾವ ರೈಲನ್ನು ಯಾವ ಟ್ರ್ಯಾಕ್ ಗೆ ತರಬೇಕು, ಯಾವಗ ಸಿಗ್ನಲ್ ಹಾಕಬೇಕು ಎಂಬುವುದು ನನ್ನ ಕೆಲಸ. ನಮ್ಮ ನಿಲ್ದಾಣದಿಂದ ಹಾದು ಹೋಗುವ ಎಲ್ಲ ರೈಲುಗಳಿಗೆ ಬಾವುಟ ತೋರಿಸುವುದರ ಜೊತೆ ಪ್ರಯಾಣಿಕರಿಗೆ ಸುರಕ್ಷತೆ ಹಾಗೂ ಉತ್ತಮ ಸೇವೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಅಂತಾ ಸ್ಟೇಶನ್ ಮಾಸ್ಟರ್ ಆಂಜೆಲ್ ಸ್ಟೆಲ್ಲಾ ಹೇಳ್ತಾರೆ.

    ನಿಲ್ದಾಣದಲ್ಲಿ ಕೆಲವರು ತೊಂದರೆಕೊಟ್ಟರೆ ಏನು ಮಾಡ್ತೀರಾ ಎಂಬ ಪ್ರಶ್ನೆಗೆ, ತಲೆ ಅಲ್ಲಾಡಿಸುತ್ತಾ, ಅದೇನು ಭಯ ಪಡುವಂತಹ ವಿಷಯವೇನಲ್ಲ. ಮಹಿಳೆಯರು ಯಾರಿಗಿಂತಲೂ ಕಡಿಮೆ ಇಲ್ಲ ಎಂದು ಸ್ಟೆಲ್ಲಾ ಉತ್ತರಿಸಿದರು.

  • ತಲೆಗೆ ಗನ್ ಇಟ್ಟು ಬ್ಯಾಗಿಗೆ ಹಣ ತುಂಬುವಂತೆ ಬೆದರಿಸಿದ್ರೂ ದರೋಡೆ ತಪ್ಪಿಸಿ ಸಾಹಸ ಮೆರೆದ ಮಹಿಳಾ ಸಿಬ್ಬಂದಿ

    ತಲೆಗೆ ಗನ್ ಇಟ್ಟು ಬ್ಯಾಗಿಗೆ ಹಣ ತುಂಬುವಂತೆ ಬೆದರಿಸಿದ್ರೂ ದರೋಡೆ ತಪ್ಪಿಸಿ ಸಾಹಸ ಮೆರೆದ ಮಹಿಳಾ ಸಿಬ್ಬಂದಿ

    ಕಾನ್ಪುರ: ತಲೆಗೆ ಗನ್ ಇಟ್ಟು ಬ್ಯಾಗಿಗೆ ಹಣ ತುಂಬುವಂತೆ ಬೆದರಿಸಿದ್ದರೂ ಮಹಿಳಾ ಸಿಬ್ಬಂದಿಯೊಬ್ಬರು ಹೆದರದೆ ಬ್ಯಾಂಕ್ ದರೋಡೆಯನ್ನು ತಪ್ಪಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ಬ್ಯಾಂಕಿನ ಸಹಾಯಕ ಮ್ಯಾನೇಜರ್ ರೀನಾ ಚೌಧರಿ ಅವರು ಈ ಸಾಹಸ ಮಾಡಿದ್ದಾರೆ. ದರೋಡೆಕೋರನೊಬ್ಬ ಅವರ ತಲೆಗೆ ಗನ್ ಇಟ್ಟಿದ್ದರೂ, ಅವನನ್ನು ಪಕ್ಕಕ್ಕೆ ತಳ್ಳಿ ದರೋಡೆಯ ಸಂಚನ್ನು ತಪ್ಪಿಸಿದ್ದಾರೆ.

    ನಡೆದಿದ್ದೇನು?
    ರೀನಾ ಚೌಧರಿ ಬರೋಡಾ ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕ್ ಬರ್ರ ಬ್ರಾಂಚ್‍ನಲ್ಲಿ ಸಹಾಯಕ ಮ್ಯಾನೇಜರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ ಸುಮಾರು 12:50 ವೇಳೆಗೆ ಒಬ್ಬ ಮುಖಕ್ಕೆ ಮುಸುಕು ಧರಿಸಿಕೊಂಡು ಗುಂಡು ಹಾರಿಸಿ ನಂತರ ರೀನಾ ಚೌಧರಿ ಕ್ಯಾಬಿನಿಗೆ ಗನ್ ಹಿಡಿದು ನುಗ್ಗಿದ್ದ. ನಂತರ ಚೌಧರಿ ತಲೆಗೆ ಗನ್ ಇಟ್ಟು, ಎಲ್ಲಾ ಹಣವನ್ನೂ ನಾನು ತಂದಿದ್ದ ಬ್ಯಾಗ್‍ಗೆ ತುಂಬುವಂತೆ ಬೆದರಿಸಿದ್ದಾನೆ. ಆಗ ಚೌಧರಿ ಹೇಗಾದರೂ ಮಾಡಿ ದರೋಡೆ ತಪ್ಪಿಸಬೇಕು ಹಾಗೂ ಒಳಗೆ ಮತ್ತು ಹೊರಗಿರುವ ಜನರನ್ನು ಎಚ್ಚರಿಸಬೇಕೆಂದು ಉಪಾಯದಿಂದ ದರೋಡೆಕೋರನನ್ನು ಪಕ್ಕಕ್ಕೆ ತಳ್ಳಿ ತಮ್ಮ ಟೇಬಲ್ ಬಳಿಯಿದ್ದ ಸೈರನ್ ಬಟನ್ ಒತ್ತಿದ್ದಾರೆ.

    ಸೈರನ್ ಶಬ್ದ ಕೇಳಿದ ತಕ್ಷಣ ಬ್ಯಾಂಕ್ ಒಳಗಡೆ ಇದ್ದ ಇತರ ಸಿಬ್ಬಂದಿ ಹಾಗೂ ಹೊರಗಡೆಯಿದ್ದ ಸ್ಥಳೀಯರು ಎಚ್ಚೆತ್ತುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮುಂಚಿತವಾಗಿ ದರೋಡೆಕೋರ ಮತ್ತೊಬ್ಬನನ್ನು ಬ್ಯಾಂಕ್ ಹೊರಗಡೆ ಬೈಕಿನಲ್ಲಿ ಕಾಯುವಂತೆ ತಿಳಿಸಿ ಬಂದಿದ್ದನು. ಸೈರನ್ ಆದ ತಕ್ಷಣ ತಪ್ಪಿಸಿಕೊಳ್ಳಲು ಅವನ ಬಳಿಗೆ ಓಡಿ ಹೋಗಿದ್ದಾನೆ ಎಂದು ಸೀನಿಯರ್ ಸೂಪರಿಟೆಂಡೆಂಟ್ ಪೊಲೀಸ್ ಅಖಿಲೇಶ್ ಮೇನಾ ತಿಳಿಸಿದರು.

    ಬ್ಯಾಂಕ್ ಸಿಬ್ಬಂದಿ ಸುತ್ತಮುತ್ತಲಿನ ಸ್ಥಳೀಯರಿಗೆ ಎಚ್ಚರಿಗೆ ನೀಡಿದ್ದಾರೆ. ಆದ್ದರಿಂದ ಸ್ಥಳಿಯರು ಇಬ್ಬರು ದರೋಡೆ ಕೋರರನ್ನು ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಖದೀಮರನ್ನು ವಿಜಯ್ ಪಾಂಡ್ಯಾ (23) ಹಾಗೂ ಜ್ಞಾನೇಂದ್ರ ಶ್ರೀವಾಸ್ತವ್ ಎಂದು ಗುರುತಿಸಲಾಗಿದ್ದು, ಇಬ್ಬರು ನೌಬಸ್ತಾ ನಿವಾಸಿಗಳು ಎಂದು ತಿಳಿದು ಬಂದಿದೆ.

  • ಪ್ರಾಂಶುಪಾಲ ಅತ್ಯಾಚಾರಕ್ಕೆ ಯತ್ನ- ಸಹಾಯಕ್ಕಾಗಿ ವಾರ್ಡನ್ ಬಳಿ ಹೋದ್ರೆ ನಮಗಿಬ್ಬರಿಗೂ ಸಹಕರಿಸು ಅಂದ

    ಪ್ರಾಂಶುಪಾಲ ಅತ್ಯಾಚಾರಕ್ಕೆ ಯತ್ನ- ಸಹಾಯಕ್ಕಾಗಿ ವಾರ್ಡನ್ ಬಳಿ ಹೋದ್ರೆ ನಮಗಿಬ್ಬರಿಗೂ ಸಹಕರಿಸು ಅಂದ

    ಕಲಬುರಗಿ: ಶಾಲೆಯಲ್ಲಿ ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಮಹಿಳೆಗೆ ಪ್ರಾಂಶುಪಾಲನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಅಫಜಲಪುರ್ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ.

    ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸೈಫನ್ ವಿರುದ್ಧ ಈ ಅತ್ಯಾಚಾರ ಆರೋಪ ಕೇಳಿಬಂದಿದೆ. ತಮ್ಮದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ತನ್ನೊಂದಿಗೆ ಸಹಕರಿಸುವಂತೆ ಕಿರುಕುಳ ಕೊಟ್ಟಿದ್ದಲ್ಲದೇ ಆಕೆಯನ್ನ ಕೆಲಸದಿಂದ ತೆಗೆದುಹಾಕಿದ್ದಾನೆ.

    ಕಳೆದ 3 ತಿಂಗಳ ಹಿಂದೆ ಶಾಲೆ ಬಿಟ್ಟ ಮೇಲೆ ಕೊಠಡಿಯಲ್ಲಿ ಯಾರು ಇರಲಿಲ್ಲ. ಈ ವೇಳೆ ಮಹಿಳಾ ಸಿಬ್ಬಂದಿ ಮೇಲೆ ಸೈಫನ್ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಮಹಿಳೆ ಆತನಿಂದ ಹೇಗೋ ತಪ್ಪಿಸಿಕೊಂಡು ಬಂದು ವಾರ್ಡನ್ ಜಗನ್ನಾಥ ಬಳಿ ಹೇಳಿದ್ದಾರೆ. ಈ ವೇಳೆ ವಾರ್ಡನ್ ಕೂಡಾ ನೀನು ಇನ್ನು ಟೆಂಪರರಿಯಾಗಿ ಇದ್ದೀಯಾ ಹೀಗಾಗಿ ನಮ್ಮಿಬ್ಬರೊಂದಿಗೂ  ಸಹಕರಿಸು ನಿನಗೆ ಕೆಲಸ ಪರ್ಮನೆಂಟ್ ಮಾಡ್ತೀವಿ ಎಂದು ಹೇಳಿದ್ದಾನೆ. ಇದಕ್ಕೆ ಮಹಿಳೆ ಒಪ್ಪದಿದ್ದಾಗ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದಾನೆ.

    ಮಹಿಳೆ ಪ್ರಾಂಶುಪಾಲನ ಕಿರುಕುಳದಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು. ಆದರೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

    ಇನ್ನು ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ ನಿಮ್ಮ ಬಲಿ ಬಲವಾದ ಸಾಕ್ಷಿ ಇಲ್ಲ ಎಂದು ನಿರಾಕರಿಸಿದ್ದಾರೆ. ಆದರೆ ನೊಂದ ಮಹಿಳೆ ಇದೀಗ ನ್ಯಾಯ ಬೇಕು ಎಂದು ಆಗ್ರಹಿಸುತ್ತಿದ್ದಾರೆ.