Tag: women

  • ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ – ಐವರು ಅರೆಸ್ಟ್

    ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ – ಐವರು ಅರೆಸ್ಟ್

    ನವದೆಹಲಿ: ಪೊಲೀಸರು ವಿಶೇಷ ಸಿಬ್ಬಂದಿಯ ಜಂಟಿ ತಂಡವೊಂದನ್ನು ರಚಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆಯಿಂದ ಒಬ್ಬ ಪುರುಷ ಮತ್ತು ನಾಲ್ವರು ಮಹಿಳೆಯರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಘಟನೆಯು ನಗರದ ಈಶಾನ್ಯ ಭಾಗದ ದಿಲ್ಶಾದ್ ಕಾಲೋನಿ ಪ್ರದೇಶದ ಮನೆಯೊಂದರಲ್ಲಿ ನಡೆದಿದೆ.

    ಆರೋಪಿಯನ್ನು ಹಿಡಿಯಲು, ಪೊಲೀಸರು ತಮ್ಮ ಕಾನ್‍ಸ್ಟೆಬಲ್ ಅನ್ನು ಡಿಕಾಯ್ ಗಿರಾಕಿಯಾಗಿ ಕಳುಹಿಸಿದ್ದರು. ಆರೋಪಿಗಳ ಪೈಕಿ ದರ್ಶನ್ ಸೈನಿಯನ್ನು ಭೇಟಿಯಾಗಿ ಅವರು ಮಹಿಳೆಯರ ಬಗ್ಗೆ ತಿಳಿದುಕೊಂಡಿದ್ದಾರೆ. ಇದನ್ನೂ ಓದಿ: ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಕೇಸ್‌ – ಜಿಲ್ಲಾ ಪಂಚಾಯತ್‌ ಪತ್ರವೇ ನಕಲು

    ಈ ವೇಳೆ ಆರೋಪಿಯು ಮನೆಯ ನೆಲ ಮಹಡಿಗೆ ಕಾನ್‍ಸ್ಟೆಬಲ್ ಅನ್ನು ಕರೆದುಕೊಂಡು ಹೋಗಿ ಮಹಿಳೆಯೊಬ್ಬರಿಗೆ ಪರಿಚಯಿಸಿದನು. ಅವನು ಅದೇ ಅಡ್ಡೆಯಲ್ಲಿದ್ದ ಇನ್ನೂ ಮೂವರು ಹುಡುಗಿಯರನ್ನು ತಲಾ 1,500 ರೂ. ಪರಿಚಯಿಸಿದನು. ಈ ವೇಳೆ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಪೊಲೀಸ್ ತಂಡಕ್ಕೆ ಸೂಚಿಸಲಾಯಿತು. ಇದನ್ನೂ ಓದಿ: ಯೋಗಿ ಸರ್ಕಾರವನ್ನು ಜನರೇ ಬಲ್ಡೋಜರ್‌ನಿಂದ ಕಿತ್ತೆಸೆಯುವ ದಿನ ಬರಲಿದೆ: ಅಖಿಲೇಶ್ ಯಾದವ್

    ತಂಡವು ಆವರಣದಲ್ಲಿ ದಾಳಿ ನಡೆಸಿ ಐವರನ್ನು ಸ್ಥಳದಲ್ಲೇ ಬಂಧಿಸಿದೆ. ಈ ಕುರಿತು ಸೀಮಾ ಪುರಿ ಪೊಲೀಸ್ ಠಾಣೆಯಲ್ಲಿ ಅನೈತಿಕ ಸಂಚಾರ ಪ್ರಕರಣವನ್ನು ದಾಖಲಿಸಲಾಗಿದೆ. ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮನೆಯ ಮಾಲೀಕ ದೀಪಾ ಇನ್ನೂ ತಲೆಮರೆಸಿಕೊಂಡಿದ್ದಾಳೆ. ಪ್ರಕರಣದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

  • 10 ವರ್ಷದಿಂದ ಹೆತ್ತ ತಾಯಿಯನ್ನೇ ಕೂಡಿ ಹಾಕಿದ್ದ ಮಕ್ಕಳು – ಮಹಿಳೆ ರಕ್ಷಣೆ

    10 ವರ್ಷದಿಂದ ಹೆತ್ತ ತಾಯಿಯನ್ನೇ ಕೂಡಿ ಹಾಕಿದ್ದ ಮಕ್ಕಳು – ಮಹಿಳೆ ರಕ್ಷಣೆ

    ಚೆನ್ನೈ: ಕಳೆದ 10 ವರ್ಷಗಳಿಂದ ಹೆತ್ತ ತಾಯಿಯನ್ನೇ ಮಕ್ಕಳಿಬ್ಬರು ಕೂಡಿ ಹಾಕಿದ್ದರು. ಇದೀಗ ಸಮಾಜ ಕಲ್ಯಾಣ ಇಲಾಖೆ ಮಹಿಳೆಯನ್ನು ರಕ್ಷಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ

    POLICE JEEP

    62 ವರ್ಷದ ಮಹಿಳೆಯ ಇಬ್ಬರು ಪುತ್ರರು ಬೇರೆಡೆ ವಾಸಿಸುತ್ತಿದ್ದು, ಆಕೆಗೆ ಆಹಾರ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಆಹಾರ ಇಲ್ಲದಿದ್ದಾಗ ಆಕೆ ಕೂಗುತ್ತಿದ್ದಳು. ಈ ವೇಳೆ ನೆರೆಹೊರೆಯವರು ಬೀಗ ಹಾಕಿದ ಮನೆಗೆ ಬಿಸ್ಕೆಟ್ ಅಥವಾ ಹಣ್ಣುಗಳನ್ನು ಕಿಟಕಿ ಮೂಲಕ ಎಸೆಯುತ್ತಿದ್ದರು. ನೆರೆಹೊರೆಯವರಿಗೆ ಆಕೆಯ ಪರಿಸ್ಥಿತಿ ತಿಳಿದಿದ್ದರೂ. ಮಹಿಳೆ ಎಂದಿಗೂ ಯಾರೊಟ್ಟಿಗೂ ಕೂಡ ತನ್ನ ಇಬ್ಬರು ಪುತ್ರರ ವಿವರಗಳನ್ನು ಹಂಚಿಕೊಳ್ಳಲು ಧೈರ್ಯ ಮಾಡಿರಲಿಲ್ಲ. ಆದರೆ ಓರ್ವ ಪುತ್ರ ಪೊಲೀಸ್ ಆಗಿ ಹಾಗೂ ಮತ್ತೋರ್ವ ಪುತ್ರ ಕೇಂದ್ರ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಮಹಿಳೆಯ ಕಷ್ಟ ಪಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಕೆಯನ್ನು ರಕ್ಷಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಯಿತು.  ಇದನ್ನೂ ಓದಿ: ನಾನು ತಪ್ಪಿತಸ್ಥನಲ್ಲ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ: ಈಶ್ವರಪ್ಪ

    ಮನೆಯ ಕೀಲಿ ಕೈ ನೀಡಲು ಮಹಿಳೆಯ ಪುತ್ರರು ನಿರಾಕರಿಸಿದ್ದರಿಂದ ಪೆÇಲೀಸರ ನೆರವಿನೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಮನೆಗೆ ನುಗ್ಗಿ ವೃದ್ಧೆಯನ್ನು ರಕ್ಷಿಸಿದ್ದಾರೆ. ನಂತರ ಆಕೆಯನ್ನು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಇದೀಗ ಮಹಿಳೆಯ ಇಬ್ಬರು ಪುತ್ರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ತಪ್ಪಿತಸ್ಥನಲ್ಲ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ: ಈಶ್ವರಪ್ಪ

  • ಸಲಿಂಗಿಗಳ ಮದುವೆ ಮಾನ್ಯತೆ ಮನವಿ ತಿರಸ್ಕರಿಸಿದ ಹೈಕೋರ್ಟ್

    ಸಲಿಂಗಿಗಳ ಮದುವೆ ಮಾನ್ಯತೆ ಮನವಿ ತಿರಸ್ಕರಿಸಿದ ಹೈಕೋರ್ಟ್

    ನವದೆಹಲಿ: ತಮ್ಮ ಮದುವೆಗೆ ಮಾನ್ಯತೆ ಕೋರಿ ಸಲಿಂಗಿ ದಂಪತಿಯ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.

    ತಮ್ಮ ಮಗಳನ್ನು ಇನ್ನೊಬ್ಬ ಮಹಿಳೆ ಬಲವಂತದಿಂದ ಮತ್ತು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾಳೆ. ಮಗಳನ್ನು ತನ್ನ ಒಪ್ಪಿಸುವಂತೆ ಪೋಷಕರೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಮಹತ್ವದ ತೀರ್ಪು ಪ್ರಕಟಿಸಿದರು. ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲಿನ ದಾಳಿಯಲ್ಲಿ ಸಿಕ್ಕಿಬೀಳುವ ಗ್ರಾಹಕರನ್ನು ಬಂಧಿಸುವಂತಿಲ್ಲ: ಹೈಕೋರ್ಟ್‌

    Marrage

    ಈ ಹಿಂದೆ ಕೋರ್ಟ್ ನೀಡಿದ್ದ ನಿರ್ದೇಶನದಂತೆ ಇಬ್ಬರನ್ನು ನ್ಯಾಯಾಲಯಕ್ಕೆ ಸರ್ಕಾರಿ ವಕೀಲರು ಹಾಜರು ಪಡಿಸಿದರು. ಈ ವೇಳೆ ಇಬ್ಬರು ತಮ್ಮ ವಯಸ್ಸನ್ನು 23 ಮತ್ತು 22 ವರ್ಷ ಎಂದು ತೋರಿಸಿರುವ ವೈವಾಹಿಕ ಒಪ್ಪಿಗೆ ಪತ್ರವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ದಂಪತಿ ತಾವು ವಯಸ್ಕರು ಮತ್ತು ತುಂಬಾ ಪ್ರೀತಿಸುತ್ತಿದ್ದೇವೆ ಎಂದು ತಿಳಿಸಿದರು. 

    ತಾವು ವಯಸ್ಕರಾಗಿದ್ದು, ಪ್ರೀತಿಸುತ್ತಿದ್ದು ಪರಸ್ಪರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದೇವೆ. ಸಮಾಜದಲ್ಲಿ ಕಾನೂನು ಬದ್ಧವಾಗಿ ಜೀವನ ನಡೆಸಲು ತಮ್ಮ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ವಿನಂತಿ ಮಾಡಿದರು. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು

    Court

    ನಮ್ಮ ಮದುವೆಗೆ ಮಾನ್ಯತೆ ನೀಡಲು ನವತೇಜ್ ಸಿಂಗ್ ಜೋಹರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣವನ್ನು ಉಲ್ಲೇಖಿಸಿದ ಅವರು, ಇಬ್ಬರು ವಯಸ್ಕರಿಗೆ ಪರಸ್ಪರ ಒಪ್ಪಿಗೆಯೊಂದಿಗೆ ಒಟ್ಟಿಗೆ ಇರಲು ಸ್ವಾತಂತ್ರ‍್ಯ ನೀಡಲಾಗಿದೆ. ವಿಶ್ವದ 25ಕ್ಕೂ ಹೆಚ್ಚು ದೇಶಗಳು ಸಲಿಂಗ ವಿವಾಹವನ್ನು ಅಂಗೀಕರಿಸಿವೆ ಎಂಬುದನ್ನೂ ಪ್ರತಿಪಾದಿಸಿದರು. ಅಲ್ಲದೆ, ಹಿಂದೂ ವಿವಾಹ ಕಾಯ್ದೆಯು ಸಲಿಂಗ ವಿವಾಹವನ್ನು ನಿರ್ದಿಷ್ಟವಾಗಿ ವಿರೋಧಿಸುವುದಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು. ಇದನ್ನೂ ಓದಿ: ಇಂಧನ ಬೆಲೆ ಏರಿಕೆ ಖಂಡಿಸಿ ರಾಹುಲ್ ಗಾಂಧಿ ಪ್ರತಿಭಟನೆ

    Allahabad high court 1

    ಸರ್ಕಾರಿ ವಕೀಲರು, ಪುರುಷ ಮತ್ತು ಮಹಿಳೆ ಇಲ್ಲದಿದ್ದರೆ ಭಾರತೀಯ ಸಂಪ್ರದಾಯದಲ್ಲಿ ವಿವಾಹವನ್ನು ಒಪ್ಪಲಾಗದು. ಏಕೆಂದರೆ ಅಂತಹ ವಿವಾಹ ಭಾರತೀಯ ಕುಟುಂಬದ ಪರಿಕಲ್ಪನೆಯನ್ನು ಮೀರುತ್ತದೆ. ಭಾರತದಲ್ಲಿ ಮದುವೆ ವೇಳೆ ಹಿಂದೂ ಪುರುಷರು ಮತ್ತು ಮಹಿಳೆಯರು ಪರಸ್ಪರ ಸುಖ ದುಃಖಗಳಲ್ಲಿ ಭಾಗಿಯಾಗುವುದಾಗಿ ದೇವರು ಮತ್ತು ಅಗ್ನಿ ಸಾಕ್ಷಿಯಾಗಿ ಪ್ರಮಾಣ ಮಾಡುತ್ತಾರೆ. ಇಂತಹ ಮದುವೆಗೆ ಅವಕಾಶ ನೀಡಿದರೆ ಭಾರತದಲ್ಲಿ ಮಹಿಳೆಯರು ಮತ್ತು ಪುರುಷರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಅನೇಕ ಕಾನೂನುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ವಿಚಾರವನ್ನು ಕೋರ್ಟ್ಗೆ ತಿಳಿಸಿದರು. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ

    ಹಿಂದೂ ವಿವಾಹ ಕಾಯ್ದೆ-1955, ವಿಶೇಷ ವಿವಾಹ ಕಾಯ್ದೆ-1954 ಮತ್ತು ವಿದೇಶಿ ವಿವಾಹ ಕಾಯ್ದೆ-1969 ಸಲಿಂಗ ವಿವಾಹವನ್ನು ಅಂಗೀಕರಿಸುವುದಿಲ್ಲ. ವಾಸ್ತವವಾಗಿ, ಮುಸ್ಲಿಮರು, ಬೌದ್ಧರು, ಜೈನರು, ಸಿಖ್ಖರು ಮುಂತಾದವರಲ್ಲಿಯೂ ಸಹ ಸಲಿಂಗ ವಿವಾಹವನ್ನು ಗುರುತಿಸಲಾಗಿಲ್ಲ ಎಂದು ವಾದಿಸಿದರು. ವಾದ ಪರಿಗಣಿಸಿದ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದು, ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಲೇವಾರಿ ಮಾಡಿತು.

  • ಸರ್ಕಾರಿ ಕಸ್ಟಡಿಯಿಂದ ಮೂವರು ಬಾಂಗ್ಲಾದೇಶದ ಮಹಿಳೆಯರು ಎಸ್ಕೇಪ್

    ಸರ್ಕಾರಿ ಕಸ್ಟಡಿಯಿಂದ ಮೂವರು ಬಾಂಗ್ಲಾದೇಶದ ಮಹಿಳೆಯರು ಎಸ್ಕೇಪ್

    ಅಗರ್ತಲಾ: ತ್ರಿಪುರಾಕ್ಕೆ ಪ್ರವೇಶಿಸಿದ ಮೂವರು ಬಾಂಗ್ಲಾದೇಶದ ಮಹಿಳೆಯರನ್ನು 2020ರ ಮಾರ್ಚ್‍ನಲ್ಲಿ ಬಂಧಿಸಲಾಗಿತ್ತು. ಆದರೆ ಭಾನುವಾರ ಈ ಮೂವರು ಮಹಿಳೆಯರು ಉತ್ತರ ತ್ರಿಪುರಾದ ಯುನೊಕೋಟಿ ಜಿಲ್ಲಾಡಳಿತದ ಕಸ್ಟಡಿಯಿಂದ ನಾಪತ್ತೆಯಾಗಿದ್ದಾರೆ.

    ಬಾಂಗ್ಲಾದೇಶದ ಹಬಿಗಂಜ್ ಜಿಲ್ಲೆಯ ನಬಿಗಂಜ್ ನಿವಾಸಿಗಳಾದ ಇಸ್ತಮುರ್ ಅಲಿ ಮತ್ತು ಲಾಲ್ಮತಿ ರಾಣಿ ಸರ್ಕಾರ್, ಜನತಾ ರಾಣಿ ಸರ್ಕಾರ್ ಮತ್ತು ಖೇಲಾ ರಾಣಿ ಸರ್ಕಾರ್ ಅವರನ್ನು ಮಾರ್ಚ್ 2020ರಲ್ಲಿ ತ್ರಿಪುರಾಕ್ಕೆ ಪ್ರವೇಶಿಸಿದ್ದಕ್ಕಾಗಿ ಕೈಲಾಶಹರ್‍ನ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಶ್ರೀಕಾಕುಳಂನ ರೈಲು ಅಪಘಾತಕ್ಕೆ ಐವರು ಬಲಿ

    crime

    ಮೂವರು ಮಹಿಳೆಯರು ಯಾವುದೇ ಪಾಸ್‍ಪೋರ್ಟ್ ಇಲ್ಲದೇ ನೆರೆಯ ಅಸ್ಸಾಂಗೆ ಹೋಗಲು ಯತ್ನಿಸಿದ್ದರು. ಹಾಗಾಗಿ ಮೂವರನ್ನು ಬಂಧಿಸಲಾಗಿತ್ತು. ಏಳು ತಿಂಗಳ ಹಿಂದೆ ಅವರ ಜೈಲು ಶಿಕ್ಷೆ ಮುಗಿದ ನಂತರ, ಎಲ್ಲಾ ನಾಲ್ವರು ಬಾಂಗ್ಲಾದೇಶಿಯರನ್ನು ಯುನೋಕೋಟಿ ಜಿಲ್ಲಾಡಳಿತದ ವಶದಲ್ಲಿದ್ದರು. ಭಾನುವಾರ ಅವರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಅಷ್ಟರಲ್ಲಿ ಕಸ್ಟಡಿಯಿಂದ ಕಾಲ್ಕೆತ್ತಿದ್ದಾರೆ. ಇದೀಗ ಪರಾರಿಯಾಗಿರುವ ಮೂವರು ವಿದೇಶಿ ಮಹಿಳೆಯರಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಅಗರ್ತಲಾದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಠಾಣೆಯಲ್ಲೇ ಕರ್ತವ್ಯನಿರತ ಹೆಡ್‌ ಕಾನ್ಸ್‌ಟೇಬಲ್‌ ಸಾವು

  • ಯಶವಂತಪುರ ಕ್ಷೇತ್ರದ ಮಹಿಳೆಯರಿಂದ ಚಾಮುಂಡಿ ಬೆಟ್ಟದಲ್ಲಿ ದೇವಿ ಪಾರಾಯಣ

    ಯಶವಂತಪುರ ಕ್ಷೇತ್ರದ ಮಹಿಳೆಯರಿಂದ ಚಾಮುಂಡಿ ಬೆಟ್ಟದಲ್ಲಿ ದೇವಿ ಪಾರಾಯಣ

    ಮೈಸೂರು: ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರ ಉಪಸ್ಥಿತಿಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶ್ರೀ ಚಾಮುಂಡೇಶ್ವರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಟ್ರಸ್ಟ್‌ನ ಶ್ರೀದೇವಿ ಬಳಗದ ಮಹಿಳೆಯರು ಮೈಸೂರಿನ ಶ್ರೀಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಶ್ರೀದೇವಿ ಪಾರಾಯಣ ಮಾಡಿದರು.

    ಕಳೆದ ಮೂರು ತಿಂಗಳಿಂದ ನಮ್ಮ ತಂಡ ಸೌಂದರ್ಯ ಲಹರಿ ಸಂಗೀತಾಭ್ಯಾಸ ಮಾಡಿದೆ. ಅಂತಿಮವಾಗಿ ತಾಯಿ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪಾರಾಯಣ ಮಾಡಲು ನಮ್ಮ ಶಾಸಕರು ಹಾಗೂ ಸಹಕಾರ ಸಚಿವರು ಅವಕಾಶ ಮಾಡಿಸಿಕೊಟ್ಟರು ಎಂದು ಮಹಿಳೆಯರು ಖುಷಿಪಟ್ಟರು. ಇದನ್ನೂ ಓದಿ: ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ

    ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್, ಶ್ರೀಚಾಮುಂಡೇಶ್ವರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಟ್ರಸ್ಟ್‌ನ ಯಶಸ್ವಿನಿ ಮತ್ತು ತಂಡದವರು ಉಪಸ್ಥಿತರಿದ್ದರು.  ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ನಗದು ಬಹುಮಾನ – ಹಲಾಲ್ ವಿರುದ್ಧ ಅಭಿಯಾನ: ಎರಡಕ್ಕೂ ನಂಟೇನು?

  • 9 ಮಂದಿ ಮದುವೆಯಾದ ಮಾಡೆಲ್, ಒಬ್ಬಳಿಗೆ ಡಿವೋರ್ಸ್, ಮತ್ತಿಬ್ಬರನ್ನು ಮದುವೆಯಾಗುವ ಬಯಕೆ

    9 ಮಂದಿ ಮದುವೆಯಾದ ಮಾಡೆಲ್, ಒಬ್ಬಳಿಗೆ ಡಿವೋರ್ಸ್, ಮತ್ತಿಬ್ಬರನ್ನು ಮದುವೆಯಾಗುವ ಬಯಕೆ

    ಬ್ರೆಸಿಲಿಯಾ: ಬ್ರೆಜಿಲ್‍ನ ಮಾಡೆಲ್‍ವೊಬ್ಬ 9 ಮಂದಿ ಯುವತಿಯರನ್ನು ಮದುವೆಯಾಗಿದ್ದನು. ಇದೀಗ ಅವರ ಪತ್ನಿಯಲ್ಲಿ ಒಬ್ಬರು ಡಿವೋರ್ಸ್ ಕೊಡಲು ಮುಂದಾಗಿದ್ದಾರೆ.

    ಬ್ರೆಜಿಲ್‍ನ ಈ ಮಾಡೆಲ್ ಹೆಸರು ಆರ್ಥರ್ ಒ ಉರ್ಸೋ. 9 ಯುವತಿಯರನ್ನು ಏಕಕಾಲದಲ್ಲಿ ಮದುವೆಯಾಗಿದ್ದನು. ಹಾಗೇ, ಇನ್ನೊಬ್ಬಳನ್ನು ವಿವಾಹವಾಗುವ ಮೂಲಕ 10 ಹೆಂಡಿರ ಮುದ್ದಿನ ಗಂಡನಾಗಬೇಕು ಎಂಬ ಕನಸನ್ನೂ ಹೊಂದಿದ್ದರು. ಆದರೆ ಇವರ ಪತ್ನಿಯರಲ್ಲಿ ಒಬ್ಬರಾದ ಅಗಾಥಾ ಉರ್ಸೋರನ್ನು ಬಿಟ್ಟು ಹೊರಟಿದ್ದಾರೆ.

    ಬ್ರೆಜಿಲ್‍ನಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ಇಲ್ಲದೆ ಇದ್ದರೂ ಕೂಡ, ತಾನು ಬಹುಪತ್ನಿತ್ವವನ್ನೇ ಇಷ್ಟಪಡುತ್ತೇನೆ. ಏಕಪತ್ನಿತ್ವದ ವಿರುದ್ಧ ಪ್ರತಿಭಟಿಸುತ್ತೇನೆ. 10 ಪತ್ನಿಯರನ್ನು ಹೊಂದುವ ನನ್ನ ಕನಸನ್ನು ನನಸು ಮಾಡಿಕೊಳ್ಳದೆ ಬಿಡುವುದಿಲ್ಲ. ಆಕೆಯ ನಿರ್ಧಾರದಿಂದ ಬೇಸರಗೊಂಡಿದ್ದೇನೆ. ಈ ಬಗ್ಗೆ ನೋವಾದರೂ ಡಿವೋರ್ಸ್‍ಗೆ ಸಮ್ಮತಿ ನೀಡುವುದಾಗಿ ಉರ್ಸೋ ಹೇಳಿಕೊಂಡಿದ್ದಾರೆ.

    ನಾನು ಅವಳಿಗೊಬ್ಬಳಿಗೇ ಮಾತ್ರ ಸೇರಿದವನಾಗಿರಬೇಕು ಎಂದು ನನ್ನ ಪತ್ನಿ ಬಯಸುತ್ತಾಳೆ. ಏಕಪತ್ನಿತ್ವ ಅನುಸರಿಸಬೇಕು ಎಂಬುದು ಆಕೆ ಬಯಕೆ. ಆದರೆ ನಾನಿದಕ್ಕೆ ಒಪ್ಪುವುದಿಲ್ಲ. ನಾನು 9 ಪತ್ನಿಯರೊಂದಿಗೆ ಇರಲು ಇಷ್ಟಪಡುತ್ತೇನೆ. ಎಲ್ಲವನ್ನೂ ಹಂಚಿಕೊಳ್ಳಲೇಬೇಕು. ಆಕೆಗೆ ಡಿವೋರ್ಸ್ ಕೊಡುವ ಬಗ್ಗೆ ಬೇಸರವಿದೆ. ಹಾಗಂತ ವಿಚ್ಛೇದನ ನೀಡದೆ ಇರುವುದಿಲ್ಲ. ಆದರೆ ಹೀಗೆ ದಾಂಪತ್ಯ ಜೀವನ ನಡೆಸುವುದರಿಂದ ನಾನು ಏಕಪತ್ನಿತ್ವದ ಸುಖದಿಂದ ವಂಚಿತಳಾಗುತ್ತಿದ್ದೇನೆ ಎಂದು ಆಕೆ ಹೇಳಿದ್ದು ಕೇಳಿ ನನಗೆ ಅಚ್ಚರಿಯಾಯಿತು. ಶೀಘ್ರದಲ್ಲೇ ಇನ್ನಿಬ್ಬರು ಮದುವೆಯಾಗುತ್ತೇನೆ ಎಂದೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಂಡ್ಯದ ಮುಸ್ಕಾನ್ ಖಾನ್‍ನನ್ನು ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ

    ಒಬ್ಬಳ ನಿರ್ಧಾರಕ್ಕೆ ಉರ್ಸೋ ಉಳಿದ 8 ಪತ್ನಿಯರು ವಿರೋಧ ವ್ಯಕ್ತಪಡಿಸಿರೆ. ಆಕೆ ಕೇವಲ ಒಂದು ಪ್ರಯೋಗಕ್ಕಾಗಿ ಉರ್ಸೋನನ್ನು ವಿವಾಹವಾಗಿದ್ದಾಳೆ ಬಿಟ್ಟರೆ, ಆಕೆಗೆ ನಿಜಕ್ಕೂ ಉರ್ಸೋ ಮೇಲೆ ಪ್ರೀತಿಯಿಲ್ಲ ಎನ್ನುತ್ತಿದ್ದಾರೆ.

     

  • ತಂತ್ರಜ್ಞಾನ ಅವಕಾಶ ಬಳಸಿ ಯಶಸ್ವಿ ಮಹಿಳಾ ಉದ್ಯಮಿಗಳಾಗಿ: ಉಮಾ ರೆಡ್ಡಿ

    ತಂತ್ರಜ್ಞಾನ ಅವಕಾಶ ಬಳಸಿ ಯಶಸ್ವಿ ಮಹಿಳಾ ಉದ್ಯಮಿಗಳಾಗಿ: ಉಮಾ ರೆಡ್ಡಿ

    ಬೆಂಗಳೂರು: ತಂತ್ರಜ್ಞಾನದ ಅವಕಾಶಗಳನ್ನು ಸೂಕ್ತವಾಗಿ ಸದುಪಯೋಗಪಡಿಸಿಕೊಳ್ಳುವ ಮೂಲಕ ಯಶಸ್ವಿ ಮಹಿಳಾ ಉದ್ಯಮಿಗಳಾಗಬಹುದು ಎಂದು ಹೈಟೆಕ್ ಮ್ಯಾಗ್ನಟಿಕ್ ಸಲ್ಯೂಶನ್ಸ್ ವ್ಯವಸ್ಥಾಪಕ ನಿರ್ದೇಶಕಿ ಉಮಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

    ಕರ್ನಾಟಕ ಪತ್ರಕರ್ತೆಯರ ಸಂಘ, ಎಫ್ ಕೆಸಿಸಿಐ ಮತ್ತು ಇನ್ಫೋಸಿಸ್ ಸಹಯೋಗದಲ್ಲಿ ನಗರದಲ್ಲಿಂದು ಪತ್ರಕರ್ತೆಯರಿಗಾಗಿ ಆಯೋಜಿಸಿದ್ದ ಡಿಜಿಟಲ್ ಲಿಟರಸಿ ಕಾರ್ಯಾಗಾರದಲ್ಲಿ ತಂತ್ರಜ್ಞಾನ ಹಾಗೂ ಅವಕಾಶಗಳ ಕುರಿತು ಮಾತನಾಡಿದರು. ಇದನ್ನೂ ಓದಿ: ಪ್ರಶಾಂತ್ ಸಂಬರಗಿ ಸಾರಥ್ಯದಲ್ಲಿ ಸಿನಿಮಾವಾಗ್ತಿದೆ ‘ಆಗಸ್ಟ್ 15’ರ ಸ್ಟೋರಿ

    ಪ್ರಸ್ತುತ ಡಿಜಿಟಲ್ ಲಿಟರಸಿ ಮುಖ್ಯವಾಗಿದೆ. ಅದರಲ್ಲೂ ಕೋವಿಡ್ ಸಮಯದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾಯಿತು. ಹೆಚ್ಚು ಜನರನ್ನು ತಲುಪಲು ಸಾಧ್ಯವಾಯಿತು. ಪ್ರತಿ ದಿನ ತಂತ್ರಜ್ಞಾನ ಅಪ್ ಗ್ರೇಡ್ ಆಗುತ್ತಿರುತ್ತದೆ. ಅದನ್ನು ಹೇಗೆ ಬಳಸಿಕೊಳ್ಳಬೇಕು, ಪ್ರಯೋಜನಗಳು ಮತ್ತು ನೆಟ್ ವಕಿರ್ಂಗ್ ಕುರಿತು ಅರಿವು ಇರಲೇಬೇಕು. ಅಗತ್ಯವಿರುವ ಮತ್ತು ಸೂಕ್ತವಾದ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿ ಮಹಿಳಾ ಉದ್ಯಮಿಯಾಗಬಹುದು ಎಂದರು. ಇದನ್ನೂ ಓದಿ: 40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ

    ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ರಜಿನಿ ರಮೇಶ್ ಮಾತನಾಡಿ, ಪ್ರತಿಯೊಬ್ಬರು ತಮ್ಮನ್ನು ತಾವು ತೆರೆದುಕೊಳ್ಳಲು ಸಾಮಾಜಿಕ ಜಾಲತಾಣ ಉತ್ತಮ ವೇದಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇರುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಆದರೂ ಅವುಗಳನ್ನು ವೈಯಕ್ತಿಕ ಸುರಕ್ಷತೆ ಕಾಪಾಡಿಕೊಳ್ಳುವಂತೆ ಎಚ್ಚರಿಕೆಯಿಂದ ಬಳಸಬೇಕು. ಈ ಅರಿವು ಅತ್ಯಗತ್ಯ ಎಂದು ತಿಳಿಸಿದರು. ಪತ್ರಕರ್ತೆಯರಿಗೆ ಅಗತ್ಯವಿರುವ ಸೋಶಿಯಲ್ ಮೀಡಿಯಾ, ಬಳಕೆ, ಉಪಯೋಗ ಕುರಿತು ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿವರಿಸಿದರು.

    ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯಚಟುವಟಿಕೆ ಹಾಗೂ ಪತ್ರಕರ್ತೆಯರ ಮುಂದಿರುವ ಸವಾಲುಗಳ ಬಗ್ಗೆ ವಿವರಿಸಿದರು. ಕಾರ್ಯಾಗಾರದಲ್ಲಿ ಸಂಘದ ಕಾರ್ಯದರ್ಶಿ ಮಾಲತಿ ಭಟ್, ಹಿರಿಯ ಪತ್ರಕರ್ತೆ ಕೆ.ಹೆಚ್. ಸಾವಿತ್ರಿ, ಆಕಾಶವಾಣಿ ನಿರ್ದೇಶಕಿ ನಿರ್ಮಲಾ ಎಲಿಗಾರ್, ಪಿಐಬಿ ಅಧಿಕಾರಿ ಜಯಂತಿ ಕೆ.ವೈ ಸೇರಿದಂತೆ ಹಿರಿಯ ಹಾಗೂ ಕಿರಿಯ ಪತ್ರಕರ್ತೆಯರು ಭಾಗವಹಿಸಿದ್ದರು.

  • 5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ

    5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ

    ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವಿರಲಿ, ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿರಲಿ, ಪಕ್ಷವು ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂಬ ಮಂತ್ರದೊಂದಿಗೆ ನಡೆದುಕೊಳ್ಳುತ್ತಿದೆ. ಎಲ್ಲರೂ ಬಡವರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

    ಗ್ರಹ ಪ್ರವೇಶ ಕಾರ್ಯಕ್ರಮದ ಅಡಿಯಲ್ಲಿ ಮಧ್ಯಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗಾಗಿ ನಿರ್ಮಾಣವಾಗಿದ್ದ 5.21 ಲಕ್ಷ ಮನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಉಪಸ್ಥಿತರಿದ್ದರು. ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

    ಕೆಲವು ರಾಜಕೀಯ ಪಕ್ಷಗಳು ಬಡತನವನ್ನು ತೊಡೆದುಹಾಕಲು ಸಾಕಷ್ಟು ಘೋಷಣೆಗಳನ್ನು ಎತ್ತಿದವು. ಆದರೆ ಬಡವರ ಸಬಲೀಕರಣಕ್ಕಾಗಿ ಸಾಕಷ್ಟು ಮಾಡಲಾಗಿಲ್ಲ. ಬಡವರು ಸಬಲೀಕರಣಗೊಂಡಾಗ ಬಡತನದ ವಿರುದ್ಧ ಹೋರಾಡುವ ಧೈರ್ಯವನ್ನು ನೀಡುತ್ತದೆ ಅಂತ ನಾನು ನಂಬುತ್ತೇನೆ. ಪ್ರಾಮಾಣಿಕ ಸರ್ಕಾರದ ಪ್ರಯತ್ನಗಳು ಸಶಕ್ತ ಬಡವರ ಜೊತೆ ಸೇರಿಕೊಂಡಾಗ, ಬಡತನ ನಿರ್ಮೂಲನೆ ಆಗುತ್ತದೆ ಎಂದು ಹೇಳಿದರು.

    ಹಿಂದಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ ಸರ್ಕಾರ ನನಗಿಂತ ಹಿಂದಿನ ಸರ್ಕಾರ ತಮ್ಮ ಅಧಿಕಾರಾವಧಿಯಲ್ಲಿ ಬಡವರಿಗೆ ಕೆಲವೇ ಲಕ್ಷ ಮನೆಗಳನ್ನು ನಿರ್ಮಿಸಿದೆ. ನಮ್ಮ ಸರ್ಕಾರ ಬಡವರಿಗೆ ಸುಮಾರು 2.5 ಕೋಟಿ ಮನೆಗಳನ್ನು ನೀಡಿದೆ. ಇವುಗಳಲ್ಲಿ 2 ಕೋಟಿ ಮನೆಗಳನ್ನು ಹಳ್ಳಿಗಳಲ್ಲಿ ನಿರ್ಮಿಸಲಾಗಿದೆ. ಎರಡು ವರ್ಷಗಳು, ಕೊರೊನಾವೈರಸ್‍ನಿಂದಾಗಿ ಅಡೆತಡೆಗಳ ಹೊರತಾಗಿಯೂ, ಕೆಲಸವು ನಿಧಾನವಾಗಲಿಲ್ಲ ಎಂದರು. ಇದನ್ನೂ ಓದಿ: ಭೂಮಾಫಿಯಾಗೆ ಆರ್.ಅಶೋಕ್ ರಕ್ಷಣೆ: ಆಪ್ ಆರೋಪ

    ಅನೇಕ ಮಹಿಳೆಯರಿಗೆ ಮನೆಗಳ ಮಾಲೀಕತ್ವದ ಹಕ್ಕು ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಸುಮಾರು 2 ಕೋಟಿ ಮನೆಗಳ ಮಾಲೀಕತ್ವದ ಹಕ್ಕುಗಳನ್ನು ಮಹಿಳೆಯರೂ ಹೊಂದಿದ್ದಾರೆ. ಈ ಹಕ್ಕು ಮನೆಯಲ್ಲಿ ಇತರ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಬಲಪಡಿಸಿದೆ. ಇದು ಪ್ರಪಂಚದಾದ್ಯಂತದ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನದ ವಿಷಯವಾಗಿದೆ ಎಂದು ನುಡಿದರು.

  • ಮಹಿಳೆಯರು ಸ್ವಾವಲಂಬಿಗಳಾಗಿ ಜೀವಿಸಲು ಮುಂದಾಗಿ: ಮಂಜಮ್ಮ ಜೋಗತಿ

    ಮಹಿಳೆಯರು ಸ್ವಾವಲಂಬಿಗಳಾಗಿ ಜೀವಿಸಲು ಮುಂದಾಗಿ: ಮಂಜಮ್ಮ ಜೋಗತಿ

    ಕೊಪ್ಪಳ: ಮಹಿಳೆಯರು ಸ್ವಾವಲಂಬಿಗಳಾಗಿ ಜೀವಿಸಲು ಮುಂದಾಗಿ ಎಂದು ಪದ್ಮಶ್ರೀ ಪುರಸ್ಕøತೆ ಮಂಜಮ್ಮ ಜೋಗತಿ ಹೇಳಿದರು.

    ಗಂಗಾವತಿ ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಸಮಾಜದ ವಾಸವಿ ಮಹಿಳಾ ಮಂಡಳಿಯ ವತಿಯಿಂದ ಇಂದು ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಣ್ಣಿನಿಂದಲೇ ಶೋಷಣೆಗಳು ನಡೆಯುತ್ತಿರುವ ಪ್ರಸಂಗಗಳು ಕಂಡು ಬರುತ್ತಿವೆ. ಹೆಣ್ಣು ಒಂದಾಗಬೇಕು, ನಾವೆಲ್ಲರೂ ಒಂದು ಎನ್ನುವ ಮನೋಭಾವನೆಯನ್ನು ಬೆಳೆಸಿಕೊಂಡು ಪ್ರತಿಯೊಬ್ಬರು ಸ್ವಾವಲಂಬಿಗಳಾಗಿ ಬದುಕು ಸಾಗಿಸಬೇಕು ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ: ಡಿಕೆಶಿ

    21ನೇ ಶತಮಾನದಲ್ಲಿನ ನಗರ ಪ್ರದೇಶಗಳಲ್ಲಿನ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ತಮ್ಮ ಸಾಮಥ್ರ್ಯವನ್ನು ಸಾಬಿತು ಪಡಿಸುತ್ತಿದ್ದಾರೆ. ಆದರೆ ಗ್ರಾಮೀಣ ಭಾಗಗಳಲ್ಲಿ ಇರುವ ಮಹಿಳೆಯರು ಇನ್ನೂ ನಾಲ್ಕು ಗೋಡೆಗಳ ನಡುವೆ ಜೀವನವನ್ನು ಸಾಗಿಸುತ್ತಿದ್ದಾರೆ. ಮಹಿಳೆಯರ ಮೇಲಿನ ಶೋಷಣೆಗಳು ನಿಲ್ಲಬೇಕು. ಮಹಿಳೆಯರು ಬದಲಾವಣೆ ಆಗಬೇಕು ಎಂದಾದರೆ, ಮೊದಲು ಗ್ರಾಮೀಣ ಭಾಗಗಳಲ್ಲಿ ಇರುವ ಮಹಿಳೆಯರು ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕು ಎಂದು ತಿಳಿ ಹೇಳಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಪ್ರಸ್ತಾಪಿಸಿದ ಸ್ಪೀಕರ್ ಕಾಗೇರಿ

    ಗ್ರಾಮೀಣ ಭಾಗದ ಪ್ರತಿಯೊಬ್ಬ ಮಹಿಳೆಯು ಶಿಕ್ಷಣವನ್ನು ಪಡೆದುಕೊಳ್ಳಬೇಕು. ಗ್ರಾಮೀಣದಿಂದ ನಗರದವರೆಗೆ ಅವರನ್ನು ಗುರುತಿಸಿ, ಅವರ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕು. ಅಂದಾಗ ಮಾತ್ರ ಮಹಿಳಾ ಸಮಾಜ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು. ನಂತರ ಕಾರ್ಯಕ್ರಮದಲ್ಲಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

  • ತಾಲಿಬಾನ್ ಹೊಸ ಕಾನೂನು – ಪುರುಷರೊಂದಿಗೆ ಮಹಿಳೆಯರು ಪಾರ್ಕ್‌ಗೆ ಹೋಗುವಂತಿಲ್ಲ

    ತಾಲಿಬಾನ್ ಹೊಸ ಕಾನೂನು – ಪುರುಷರೊಂದಿಗೆ ಮಹಿಳೆಯರು ಪಾರ್ಕ್‌ಗೆ ಹೋಗುವಂತಿಲ್ಲ

    ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಇಲ್ಲಿಗೆ 9 ತಿಂಗಳುಗಳೇ ಕಳೆದಿವೆ. ತಾಲಿಬಾನ್ ಆಡಳಿತ ಪ್ರಾರಂಭವಾದಾಗಿನಿಂದ ಒಂದೆಡೆ ಜನರು ಹಸಿವಿನಿಂದ ಒದ್ದಾಡುವಂತಾಗಿದ್ದರೆ, ಮತ್ತೊಂದೆಡೆ ತಾಲಿಬಾನ್ ಆದೇಶಗಳಿಂದಾಗಿ ಅಲ್ಲಿನ ಮಹಿಳೆಯರ ಜೀವನ ಕಷ್ಟಕರವಾಗುತ್ತಲೇ ಇದೆ.

    ಇದೀಗ ತಾಲಿಬಾನ್‌ನ ಹೊಸ ಆದೇಶ ಕಾಬೂಲ್‌ನಲ್ಲಿ ಮಹಿಳೆಯರು ಪುರುಷರೊಂದಿಗೆ ಪಾರ್ಕ್ ತೆರಳಲು ನಿಷೇಧಿಸಿದೆ. ಇದರ ಪ್ರಕಾರ ಮಹಿಳೆಯರು ಪುರಷರೊಂದಿಗೆ ಒಂದೇ ದಿನ ಪಾರ್ಕ್ ತೆರಳಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ

    ತಾಲಿಬಾನ್ ಕಾಬೂಲ್‌ನಲ್ಲಿ ಮಹಿಳೆಯರಿಗೆ ವಾರದಲ್ಲಿ 3 ದಿನಗಳ ಕಾಲ ಪಾರ್ಕ್ ಪ್ರವೇಶಿಸಲು ಅವಕಾಶ ನೀಡಿದೆ. ಭಾನುವಾರ, ಸೋಮವಾರ ಹಾಗೂ ಮಂಗಳವಾರ ಮಹಿಳೆಯರಿಗೆ ಪಾರ್ಕ್‌ಗಳಲ್ಲಿ ಪ್ರವೇಶ ನೀಡಿದರೆ ವಾರದ ಉಳಿದ ದಿನಗಳು ಕೇವಲ ಪುರುಷರು ಪ್ರವೇಶಿಸಬಹುದು.

    ಒಂದು ವೇಳೆ ಮಹಿಳೆಯರು ಪುರುಷರಿಗೆ ನಿಗದಿ ಪಡಿಸಿರುವ ದಿನಗಳಲ್ಲಿ ಪಾರ್ಕ್ ಪ್ರವೇಶಿಸಿದ್ದಲ್ಲಿ ಅವರಿಗೆ ಕಠಿಣ ಕ್ರಮವನ್ನು ವಿಧಿಸಲಾಗುವುದು ಎಂದು ತಾಲಿಬಾನ್ ಸಂಸ್ಕೃತಿ ಸಚಿವಾಲಯ ಎಚ್ಚರಿಸಿದೆ. ಜೊತೆಗೆ ಮಹಿಳೆಯರು ಪಾರ್ಕ್ ಪ್ರವೇಶಿಸುವಾಗ ಕಡ್ಡಾಯವಾಗಿ ಹಿಜಬ್ ಧರಿಸಬೇಕು ಎಂದು ಆದೇಶಿಸಿದೆ. ಇದನ್ನೂ ಓದಿ: ಕಂಬಕ್ಕೆ ಸ್ಪೈಸ್‌ಜೆಟ್ ವಿಮಾನ ಡಿಕ್ಕಿ – ತಪ್ಪಿದ ಅನಾಹುತ

    ವಿಮಾನಗಳಲ್ಲಿ ಮಹಿಳೆಯರು ಮಾತ್ರವೇ ಪ್ರಯಾಣಿಸುವುದನ್ನು ನಿಷೇಧಿಸಿದೆ. ಮಹಿಳೆಯರು ವಿಮಾನದಲ್ಲಿ ಸ್ವದೇಶ ಅಥವಾ ವಿದೇಶಗಳಿಗೆ ಪ್ರಯಾಣಿಸುವಾಗ ಯಾರಾದರೂ ಕುಟುಂಬದ ಪುರುಷರನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದೆ.