Tag: Women Activists

  • ಸಚಿವ ಮುನಿರತ್ನಗೆ ರಾಖಿ ಕಟ್ಟಿ ಶುಭಕೋರಿದ ಮಹಿಳಾ ಕಾರ್ಯಕರ್ತೆಯರು

    ಸಚಿವ ಮುನಿರತ್ನಗೆ ರಾಖಿ ಕಟ್ಟಿ ಶುಭಕೋರಿದ ಮಹಿಳಾ ಕಾರ್ಯಕರ್ತೆಯರು

    ಬೆಂಗಳೂರು: ತೋಟಗಾರಿಕೆ ಹಾಗೂ ಯೋಜನಾ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಮುನಿರತ್ನ ಅವರಿಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಹಿಳಾ ಕಾರ್ಯಕರ್ತರು ರಕ್ಷಾ ಬಂಧನ ಅಂಗವಾಗಿ ರಾಖಿ ಕಟ್ಟಿ, ಸಿಹಿ ತಿನಿಸಿ ಸಂಭ್ರಮಿಸಿ ಶುಭಕೋರಿದ್ದಾರೆ.

    ಮಲ್ಲೇಶ್ವರಂನ ಗೃಹ ಕಚೇರಿಯಲ್ಲಿ ರಕ್ಷಾ ಬಂಧನ ಆಚರಿಸಿ ಈ ಸಂದರ್ಭದಲ್ಲಿ ಮಾತನಾಡಿದ ಮುನಿರತ್ನ ಅವರು, ಕ್ಷೇತ್ರದ ಕಾರ್ಯಕರ್ತೆಯರು ತಮಗೆ ರಾಖಿ ಕಟ್ಟಿ ಶುಭಕೋರಿರುವುದು ಸಂತಸ ತಂದಿದೆ. ರಕ್ಷಾ ಬಂಧನವೆನ್ನುವುದು ಒಡಹುಟ್ಟಿದವರ ಬಾಂಧವ್ಯ ಅಷ್ಟೇ ಅಲ್ಲದೇ, ಭ್ರಾತೃತ್ವ ಭಾವ ಹೊಂದಿರುವ ಪ್ರತಿಯೊಬ್ಬರ ಮನಸಿನ ಭಾವವೂ ಆಗಿದೆ. ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿರುವ ಸಂದರ್ಭದಲ್ಲಿ ಈ ರಕ್ಷಾಬಂಧನವೂ ಬಂದಿದೆ. ಕ್ಷೇತ್ರದ ಕಾರ್ಯಕರ್ತರ ಸ್ನೇಹ ಆಶೀರ್ವಾದ ಹೀಗೆ ಸದಾ ಇರಲಿ ಎಂದು ನುಡಿದಿದ್ದಾರೆ. ಇದನ್ನೂ ಓದಿ:ಶಾಸಕ ಮುನಿರತ್ನರವರ ಹುಟ್ಟುಹಬ್ಬವನ್ನ ಆಚರಿಸಿದ ಅನಾಥ ಮಕ್ಕಳು

    ಇದೇ ವೇಳೆ ತೋಟಗಾರಿಕಾ ಇಲಾಖೆ ಹಾಗೂ ಯೋಜನೆ ಸಾಂಖ್ಯಿಕ ಇಲಾಖೆಯಲ್ಲಿ ಅಭಿವೃದ್ಧಿ ಹಾಗೂ ಜನಪರ ಕೆಲಸಗಳನ್ನು ಮಾಡುವ ಉದ್ದೇಶ ಹೊಂದಿದ್ದೇನೆ ಎಂದು ಮುನಿರತ್ನರವರು ತಿಳಿಸಿದ್ದಾರೆ.  ಇದನ್ನೂ ಓದಿ:ಲಾಲ್‍ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಉದ್ಯಾನವನ: ತೋಟಗಾರಿಕೆ ಸಚಿವ ಮುನಿರತ್ನ

  • ಕಾಂಗ್ರೆಸ್‍ನಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ: ಮೋಟಮ್ಮ ಎದುರು ಕಾರ್ಯಕರ್ತೆಯ ಅಳಲು

    ಕಾಂಗ್ರೆಸ್‍ನಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ: ಮೋಟಮ್ಮ ಎದುರು ಕಾರ್ಯಕರ್ತೆಯ ಅಳಲು

    ಧಾರವಾಡ: ಕಾಂಗ್ರೆಸ್‍ನಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ. ನಮ್ಮ ನಾಯಕರ ಪರವಾಗಿ ಕೆಲಸ ಮಾಡುವಾಗ ನಮ್ಮನ್ನು ಕೀಳಾಗಿ ನೋಡುತ್ತಾರೆ ಎಂದು ಕಾರ್ಯಕರ್ತೆಯೊಬ್ಬರು ಹಿರಿಯ ನಾಯಕಿ ಮೋಟಮ್ಮವರ ಎದುರು ಅಳಲು ತೋಡಿಕೊಂಡಿದ್ದಾರೆ.

    ಧಾರವಾಡದಲ್ಲಿ ನಡೆದ ‘ಚುನಾವಣೆ: ಒಳ ಹೊರಗೆ’ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ನಾಯಕಿ ಮೋಟಮ್ಮ ಭಾಗಿಯಾಗಿದ್ದರು. ಈ ವೇಳೆ ಪಕ್ಷದ ಕಾರ್ಯಕರ್ತೆ ಆಗಿರುವ ಅನಿತಾ ಗುಂಜಾಳ ಎಂಬವರು ತಮ್ಮ ನಾಯಕರ ವಿರುದ್ಧವೇ ಆರೋಪಗಳನ್ನು ಮಾಡಿದರು.

    ಪಕ್ಷದಲ್ಲಿ ಲೀಡರ್ ಶಿಪ್ ಸಿಗಲು ಗ್ಲಾಮರ್ ಆಗಿರಬೇಕೆಂತೆ. ನಾನು ಹರಿದ ಸೀರೆಯನ್ನು ಧರಿಸಿ ರಾಜಕಾರಣ ಮಾಡಬಹುದು ಎಂಬ ವಿಚಾರವನ್ನು ಹೊಂದಿರುವ ಮಹಿಳೆ. ಆದ್ರೆ ನಮ್ಮ ನಾಯಕರಿಗೆ ಚುನಾವಣಾ ಪ್ರಚಾರದಲ್ಲಿ ಮಾತ್ರ ಕಾರ್ಯಕರ್ತರು ನೆನಪು ಬರುತ್ತಾರೆ. ಬನ್ನಿ ಮೇಡಂ ನಿಮಗೆ ಸ್ಥಳೀಯ ಜನರು ಪರಿಚಯವಿದ್ದರೆ ಎಂದು ನಮ್ಮ ಪರವಾಗಿ ಪ್ರಚಾರ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ ಎಂದು ಅಸಮಾಧಾನ ಹೊರ ಹಾಕಿದರು.

    ಕೇವಲ ಪ್ರಚಾರದ ಸಮಯದಲ್ಲಿ ಮಾತ್ರ ಮಹಿಳಾ ಕಾರ್ಯಕರ್ತರು ನೆನಪಾಗುತ್ತಾರೆ. ಆದ್ರೆ ಪ್ರಚಾರದ ವೇಳೆಯಲ್ಲಿಯೂ ನಮಗೆ ಗೌರವ ನೀಡಲ್ಲ. ಗೌರವಯುತವಾದ ಕುಟುಂಬದಿಂದ ಬಂದ ನಮಗೆ ಪಕ್ಷದಲ್ಲಿ ಸ್ಥಾನಮಾನ ಸಿಗಬೇಕು. ಪಕ್ಷದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ವ್ಯವಸ್ಥೆ ಬದಲಾಗಬೇಕಾಗಿದ್ದು, ಇಂದು ನನಗೆ ನಿಮ್ಮಿಂದ ಉತ್ತರ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದರು.

    ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಕಟ್ಟಡವೊಂದರಲ್ಲಿ ಸಭೆ ನಡೆದಿತ್ತು. ಹತ್ತಾರು ಪುರಷರ ನಡುವೆ ನಾನೊಬ್ಬಳೆ ಮಹಿಳೆ. ಆದ್ರೆ ಅಲ್ಲಿ ನನಗೆ ಯಾರು ಗೌರವ ನೀಡಲಿಲ್ಲ. ಬದಲಾಗಿ ಒಬ್ಬ ನಾಯಕ ನನ್ನನ್ನು ಮುಟ್ಟಲು ಬಂದಾಗ, ಆತನನ್ನು ನಾನು ದೂರ ತಳ್ಳಿದ್ದೇನೆ. ಆ ವೇಳೆ ಘಟನೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಹೇಳಿಕೆಯನ್ನು ನೀಡಿದ್ರೆ ಇವತ್ತಿನ ನಮ್ಮ ನಾಯಕರು ಶಾಸಕರಾಗಿಯೇ ಆಯ್ಕೆ ಆಗುತ್ತಿರಲಿಲ್ಲ. ಕೊನೆಗೆ ಆ ವ್ಯಕ್ತಿ ನನ್ನ ಕಾಲುಗಳನ್ನು ಹಿಡಿದು ಕ್ಷಮೆ ಕೇಳಿಕೊಂಡ ಎಂದು ಹೇಳುತ್ತಾ ಭಾವುಕರಾದರು.

    ಮಹಿಳೆಯರನ್ನು ರಾಜಕಾರಣಕ್ಕೆ ಕರೆತರೋದಕ್ಕೆ ನಮಗೆ ಪಕ್ಷದಿಂದ ಯಾವುದೇ ಬೆಂಬಲ ಸಿಗಲ್ಲ. ಪಕ್ಷಕ್ಕಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ನಾವು ಕೆಲಸ ಮಾಡುತ್ತಿದ್ದೇವೆ. ಮಹಿಳೆಯರಿಗೆ ಸಂಬಂಧಿಸಿದ ಸ್ಥಾನಮಾನಗಳು ಪಕ್ಷದಲ್ಲಿ ಬದಲಾಗಬೇಕಿದೆ ಎಂದು ಆಗ್ರಹಿಸಿದರು.