Tag: Wife

  • ಪತ್ನಿಯನ್ನ ಉಸಿರುಗಟ್ಟಿಸಿ ಕೊಲೆಗೈದ ಟೆಕ್ಕಿ ಪತಿ!

    ಪತ್ನಿಯನ್ನ ಉಸಿರುಗಟ್ಟಿಸಿ ಕೊಲೆಗೈದ ಟೆಕ್ಕಿ ಪತಿ!

    ಬೆಂಗಳೂರು: ಪತಿಯೊಬ್ಬ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಗರದ ಮಹದೇವಪುರದಲ್ಲಿ ನಡೆದಿದೆ.

    ಸನಾ ಅಕಿಲ್ ಕೊಲೆಯಾದ ಪತ್ನಿ. ಸನಾ ಅವರು 2015ರಲ್ಲಿ ಎಂಜಿನೀಯರ್ ಅಗಿರುವ ಸಾದಾಬ್ ಶಫೀ ಎಂಬಾತನೊಂದಿಗೆ ಸಂಪ್ರದಾಯಬದ್ದವಾಗಿ ವಿವಾಹವಾಗಿದ್ದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ 8 ತಿಂಗಳ ಮಗು ಸಹವಿದೆ. ಇದೇ ತಿಂಗಳು 21 ರಂದು ಸಾದಾಪ್ ಪತ್ನಿಯನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ.

    ಸಾದಾಪ್ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಸಾದಾಪ್‍ನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

    ಇದನ್ನೂ ಓದಿ: ನ್ಯೂಜೆರ್ಸಿಯಲ್ಲಿ ಆಂಧ್ರದ ಮಹಿಳಾ ಟೆಕ್ಕಿ, ಮಗ ಹತ್ಯೆ!

  • ಅಕ್ರಮ ಸಂಬಂಧಕ್ಕೆ ಬೇಸತ್ತು ಗಂಡನ ಕೊಲೆಗೆ 5 ಲಕ್ಷ ರೂ.ಗೆ ಸುಪಾರಿ ಕೊಟ್ಟ ಪತ್ನಿ

    ಅಕ್ರಮ ಸಂಬಂಧಕ್ಕೆ ಬೇಸತ್ತು ಗಂಡನ ಕೊಲೆಗೆ 5 ಲಕ್ಷ ರೂ.ಗೆ ಸುಪಾರಿ ಕೊಟ್ಟ ಪತ್ನಿ

    ಕೋಲಾರ: ಪತ್ನಿಯೊಬ್ಬಳು ತನ್ನ ಪತಿಯ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಕೋಲಾರ ಪೊಲೀಸರು ಯಶ್ವಸಿಯಾಗಿದ್ದಾರೆ.

    ಭಾಗ್ಯಮ್ಮ ಎಂಬ ಮಹಿಳೆ 2016ರ ಜನವರಿ 13ರಂದು ತನ್ನ ಪತಿ ನಾರಾಯಣ ಅವರನ್ನು ಕೊಲೆ ಮಾಡುವುದಕ್ಕಾಗಿ 5 ಲಕ್ಷ ರೂ. ಸುಪಾರಿ ನೀಡಿದ್ದಳು. ಕೊಲೆಯ ನಂತರ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಎಲ್ಲರನ್ನೂ ನಂಬಿಸಿದ್ದಳು.

    ಕೊಲೆಯಾದ ನಾರಾಯಣ ಮೂಲತಃ ಆಂಧ್ರಪ್ರದೇಶ ರಾಜ್ಯದ ನಿವಾಸಿ. 15 ವರ್ಷಗಳ ಹಿಂದೆ ನಾರಾಯಣಸ್ವಾಮಿ ಮುಳುಬಾಗಿಲು ಪಟ್ಟಣಕ್ಕೆ ಸಪ್ಲೈಯರ್ ಕೆಲಸಕ್ಕಾಗಿ ಆಗಮಿಸಿದ್ದರು. ನಂತರ ತಾವೇ ಒಂದು `ಬಾಯಿಕೊಂಡ ಗಂಗಮ್ಮ’ ಎಂಬ ಕಬಾಬ್ ಸೆಂಟರ್ ತೆರೆದು ಯಶ್ವಸಿಯಾಗಿ, ಸಾಕಷ್ಟು ಆಸ್ತಿ ಸಂಪಾದನೆ ಮಾಡಿಕೊಂಡಿದ್ದರು. ಆದರೆ ನಾರಾಯಣಸ್ವಾಮಿ ತನ್ನ ಪತ್ನಿ ಭಾಗ್ಯಮ್ಮಳ ಅಕ್ಕ ಮತ್ತು ಆಕೆಯ ಮಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ.

    ಗಂಡನ ಅಕ್ರಮ ಸಂಬಂಧದ ಬೇಸತ್ತ ಭಾಗ್ಯಮ್ಮ ತನಗೆ ಪರಿಚಯವಿದ್ದ ಬಾಲಾಜಿ ಸಿಂಗ್ ಎಂಬವರ ಮೂಲಕ ಜಮೀರ್ ಪಾಷಾ ಹಾಗು ವಾಸಿಂ ಪಾಷಾರನ್ನು ಸಂಪರ್ಕಿಸಿದ್ದಳು. ಇವರಿಬ್ಬರಿಗೂ ತನ್ನ ಪತಿಯನ್ನು ಕೊಲ್ಲಲು ಬರೋಬ್ಬರಿ 5 ಲಕ್ಷ ರೂ.ಗೆ ಸುಫಾರಿ ನೀಡಿದ್ದಳು.

    ಬೆಳಕಿಗೆ ಬಂದಿದ್ದು ಹೇಗೆ?: ಆರೋಪಿಗಳಾದ ಜಮೀರ್ ಪಾಷಾ ಮತ್ತು ವಾಸಿಂ ಪಾಷಾ ದರೋಡೆ ಪ್ರಕರಣದಲ್ಲಿ ಬಂಧಿಯಾಗಿದ್ದರು. ಪೊಲೀಸರ ವಿಚಾರಣೆ ವೇಳೆ ನಾರಾಯಣಸ್ವಾಮಿಯ ಕೊಲೆಯನ್ನು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾಗ್ಯಮ್ಮಳನ್ನು ಪೊಲೀಸರು ವಿಚಾರಿಸಿದಾಗ ಆಕೆಯು ಸಹ ತಪ್ಪೊಪ್ಪಿಕೊಂಡಿದ್ದಾಳೆ.

    ಇದನ್ನೂ ಓದಿ: ಶೀಲ ಶಂಕಿಸಿದ ಗಂಡನನ್ನೇ ಕೊಂದಳು ಪತ್ನಿ!

    ಗಂಡನನ್ನು ಕೊಲ್ಲಲು ಜಮೀರ್ ಪಾಷಾ ಹಾಗು ವಸೀಂ ಪಾಷಾ ಎಂಬವರಿಗೆ ಭಾಗ್ಯಮ್ಮ ಸುಪಾರಿ ನೀಡಿದ್ದಳು ಎಂಬುದು ಈಗ ಬಯಲಾಗಿದ್ದು, ನ್ಯಾಯಾಲಯದ ಆದೇಶದಂತೆ ಇಂದು ಉಪ ವಿಭಾಗಾಧಿಕಾರಿ ಮಂಜುನಾಥ ನೇತೃತ್ವದಲ್ಲಿ ಮುಳಬಾಗಿಲು ತಾಲೂಕು ಹೊಸಹಳ್ಳಿ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಆವರಣದಲ್ಲಿ ಮರು ಶವಪರೀಕ್ಷೆ ನಡೆಸಲಾಯಿತು.

    ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು!

     

  • ಮದ್ವೆಯಾಗಿ ವರ್ಷವಾದ್ರೂ ಮಂಚಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು

    ಮದ್ವೆಯಾಗಿ ವರ್ಷವಾದ್ರೂ ಮಂಚಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು

    ಬೆಂಗಳೂರು: ಮದುವೆಯಾಗಿ ವರ್ಷವಾದರೂ ಶಾರೀರಿಕ ಸಂಪರ್ಕಕ್ಕೆ ನಿರಾಕರಿಸುತ್ತಿದ್ದ ಪತಿಯ ವಿರುದ್ಧ ಪತ್ನಿ ವಿಜಯನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ತಮಿಳುನಾಡಿನ ವೇಲೂರು ಮೂಲದ ಬಾಲಾಜಿ ಎಂಬಾತನೊಂದಿಗೆ ಪೈಪ್‍ಲೈನ್ ನಿವಾಸಿಯಾಗಿರುವ ಮಹಿಳೆಯ ಜೊತೆ ಕಳೆದ ವರ್ಷ ಮದುವೆ ನಡೆದಿತ್ತು. ಪೋಷಕರು ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಚಿನ್ನಾಭರಣ ಮತ್ತು ಬೆಳ್ಳಿಯನ್ನು ನೀಡಿ ಅದ್ಧೂರಿಯಾಗಿ ಮಗಳ ಮದುವೆಯನ್ನು ನೇರವೇರಿಸಿದ್ದರು.

    ಇದನ್ನೂ ಓದಿ: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಬೆಂಗಳೂರಿನ ಟೆಕ್ಕಿ ಪತಿ ವಿರುದ್ಧ ದೂರು 

    ಮದುವೆಯಾದ ನಂತರ ಫಸ್ಟ್ ನೈಟ್ ನೋ ಅಂದಿದ್ದ ಬಾಲಾಜಿ ಮತ್ಯಾವ ರಾತ್ರಿಗೂ ಒಪ್ಪಿರಲಿಲ್ಲ. ಪ್ರತಿದಿನ ಏನಾದ್ರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಇದರಿಂದಾಗಿ ಸಂಶಯಗೊಂಡ ಮಹಿಳೆ ಪತಿರಾಯನ ಪುರುಷತ್ವದ ಬಗ್ಗೆ ಪರೀಕ್ಷೆ ಮಾಡಿಸಿದಾಗ, ತನ್ನ ಪತಿಗೆ ಪುರುಷತ್ವ ಇಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಹೆಂಡತಿಗೆ ವಯಾಗ್ರ ಮಾತ್ರೆ ತಿನ್ನಿಸಿ ಪೀಡಿಸ್ತಿದ್ನಂತೆ ಕಾಮುಕ ಪತಿ

    ಪುರುಷತ್ವ ಇಲ್ಲದ ವ್ಯಕ್ತಿಯೊಂದಿಗೆ ತನ್ನನ್ನು ಮೋಸದಿಂದ ಮದುವೆ ಮಾಡಿಸಲಾಗಿದೆ ಎಂದು ಸಂತ್ರಸ್ತೆ ಈಗ ಪತಿ ಹಾಗು ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯಲ್ಲಿ ತಮ್ಮ ಪೋಷಕರು ಖರ್ಚು ಮಾಡಿದ್ದ 15 ಲಕ್ಷ ರೂ. ಹಿಂದುರುಗಿಸಬೇಕೆಂಬ ಅಂಶವನ್ನು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು! 

    ಇದನ್ನೂ ಓದಿ: ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು 

    https://www.youtube.com/watch?v=74cON2kOniE

  • ಶೀಲ ಶಂಕಿಸಿದ ಗಂಡನನ್ನೇ ಕೊಂದಳು ಪತ್ನಿ!

    ಶೀಲ ಶಂಕಿಸಿದ ಗಂಡನನ್ನೇ ಕೊಂದಳು ಪತ್ನಿ!

    -ಮಗನನ್ನ ಹತ್ಯೆ ಮಾಡಿದ್ರೂ ಸೊಸೆ ಮೇಲೆ ಅತ್ತೆ ಪ್ರೀತಿ

    ಬೆಂಗಳೂರು: ಗಂಡನ ಕಿರುಕುಳ ತಾಳಲಾರದೇ ಹೆಂಡತಿಯೇ ಗಂಡನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಶವಂತಪುರದ ಸುಬೇದಾರ್‍ಪಾಳ್ಯದಲ್ಲಿ ನಡೆದಿದೆ.

    36 ವರ್ಷದ ಸತೀಶ್ ಮೃತ ದುರ್ದೈವಿ. ಮೂಲತಃ ತುಮಕೂರಿನವನಾದ ಸತೀಶ್ ಬೆಂಗಳೂರಲ್ಲಿ ಸೆಕ್ಯುರಿಟಿ ಸೂಪರ್‍ವೈಸರ್ ಆಗಿ ಕೆಲಸ ಮಾಡ್ತಿದ್ದ. ಕಲ್ಪನಾ ಅನ್ನೋರ ಜೊತೆ ಮದುವೆಯಾಗಿ ಎರಡು ಮಕ್ಕಳೂ ಕೂಡ ಇವೆ. ಆದ್ರೆ ಪ್ರತಿ ದಿನ ಕುಡಿದು ಬರ್ತಿದ್ದ ಸತೀಶ್ ಹೆಂಡತಿಯ ಶೀಲದ ಮೇಲೆ ಅನುಮಾನ ಪಡುತ್ತಿದ್ದ.

    ಇದರಿಂದ ಬೇಸತ್ತ ಕಲ್ಪನಾ ಬುಧವಾರ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಆದರೆ ಸತೀಶ್ ಕುಟುಂಬದವರು ಮಾತ್ರ ಕಲ್ಪನಾ ಮೇಲೆ ಯಾವುದೇ ಆರೋಪ ಮಾಡ್ತಿಲ್ಲ. ಪ್ರಕರಣ ದಾಖಲಿಸಿಕೊಂಡಿರೋ ಯಶವಂತಪುರ ಪೊಲೀಸ್ರು ಕಲ್ಪಾನರನ್ನ ವಶಕ್ಕೆ ಪಡೆದು ತನಿಖೆ ನಡೆಸ್ತಿದ್ದಾರೆ.

  • ಪತ್ನಿಯನ್ನು ಅಟ್ಟಾಡಿಸಿ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತಿರಾಯ!

    ಪತ್ನಿಯನ್ನು ಅಟ್ಟಾಡಿಸಿ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತಿರಾಯ!

    ಕೊಪ್ಪಳ: ಆಸ್ತಿ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯನ್ನು ಪತಿಯೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆಯೇ ರಕ್ತ ಹರಿದಿದೆ. ಗೃಹಿಣಿ 38 ವರ್ಷದ ಗಿರಿಜಮ್ಮ ಕೊಲೆಗೀಡಾಗಿದ್ದು, ಕೃತ್ಯ ಎಸಗಿರುವ ಆರೋಪಿ ಬಾಲಪ್ಪ ಕುಂಟ್ರು ಕೊಲೆ ಮಾಡಿ, ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

    ಜಮೀನು ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಪತಿ -ಪತ್ನಿ ನಡುವೆ ಜಗಳ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ, ಪತಿ ಬಾಲಪ್ಪ, ಪತ್ನಿ ಗಿರಿಜಮ್ಮನಿಗೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.

    ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

    https://www.youtube.com/watch?v=QzyZnkDpQW8

  • ನಾನ್ಯಾಕೆ ಪತಿ ಮೇಲೆ ಗುಂಡು ಹಾರಿಸಿದೆ: ಮತ್ತಿನಲ್ಲಿ ಶೂಟೌಟ್ ಮಾಡಿದವಳ ಮಾತುಗಳು

    ನಾನ್ಯಾಕೆ ಪತಿ ಮೇಲೆ ಗುಂಡು ಹಾರಿಸಿದೆ: ಮತ್ತಿನಲ್ಲಿ ಶೂಟೌಟ್ ಮಾಡಿದವಳ ಮಾತುಗಳು

    ಬೆಂಗಳೂರು: ನನ್ನ ಪ್ರಾಣವನ್ನು ರಕ್ಷಿಸಿಕೊಳ್ಳಲು ನಾನು ಕಾರಿನಲ್ಲೇ ಪತಿ ಸಾಯಿರಾಂ ಮೇಲೆ 3 ಸುತ್ತು ಗುಂಡು ಹಾರಿಸಿದೆ ಎಂದು ಪತ್ನಿ ಹಂಸವೇಣಿ ಸೂರ್ಯ ಸಿಟಿ ಪೊಲೀಸರಲ್ಲಿ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾಳೆ.

    ಶುಕ್ರವಾರ ಬ್ಯಾಂಕ್ ಕೆಲಸಕ್ಕೆಂದು ಪತಿ ಸಾಯಿರಾಂ ಜೊತೆ ಹೊಸೂರಿಗೆ ತೆರೆಳಿದ್ದೆ. ವಾಪಸ್ ಬರುವಾಗ ರೆಸ್ಟೋರೆಂಟ್‍ನಲ್ಲಿ ಪತಿ 6 ಪೆಗ್ ವಿಸ್ಕಿ ಕುಡಿದರೆ 2 ಬಿಯರ್ ಕುಡಿದೆ. ನನ್ನ ಗಂಡ ಯಾವಾಗಲು ಕುಡಿದು ಗಲಾಟೆ ಮಾಡುತಿದ್ದರು, ನಿನ್ನೆಯೂ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಸಾಯಿರಾಂ ಆಂಧ್ರ ಮೂಲದವರಾಗಿದ್ದರೆ, ನಾನು ಬೆಂಗಳೂರಿನವಳೇ ಎಂದು ತಿಳಿಸಿದ್ದಾಳೆ.

    ನಮ್ಮಿಬ್ಬರದ್ದು ಶ್ರೀಮಂತ ಕುಟುಂಬವಾಗಿದ್ದು, ಒಟ್ಟಿಗೆ ಕುಡಿಯುತ್ತೇವೆ. ನಾವಿಬ್ಬರು ಪ್ರೀತಿಸಿ 27 ವರ್ಷಗಳ ಹಿಂದೆ ಮದುವೆಯಾಗಿದ್ದೇವೆ. ನಿನ್ನೆ ಕುಡಿದ ಅಮಲಿನಲ್ಲಿ ನನ್ನ ಮೇಲೆ ಪತಿ ಹಲ್ಲೆ ನಡೆಸಿದರು. ನನ್ನ ಬಳಿಯಿದ್ದ ರಿವಾಲ್ವರ್ ಕಿತ್ತುಕೊಂಡು ಮುಖಕ್ಕೆ ಗುದ್ದಿದ್ದರು. ರಿವಾಲ್ವರ್ ಯಾವಾಗಲು ನನ್ನ ಬಳಿಯೇ ಇರುತಿತ್ತು. ಪ್ರಾಣ ರಕ್ಷಿಸಿಕೊಳ್ಳಲು ನಾನು 3 ಸುತ್ತು ಗುಂಡು ಹಾರಿಸಿದೆ ಎಂದು ಆರೋಪಿ ಹಂಸ ಹೇಳಿಕೆ ನೀಡಿದ್ದಾಳೆ.

    ಪತ್ನಿಯಿಂದ ಗುಂಡೇಟು ತಿಂದ ಪತಿ ಸಾಯಿರಾಂ ಬೊಮ್ಮಸಂದ್ರ ಸ್ಪರ್ಶ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ವೈದ್ಯರು 48 ಗಂಟೆಗಳ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಹಂಸ ಮತ್ತು ಸಾಯಿರಾಂ ಅತ್ತಿಬೆಲೆ ಸಮೀಪದ ಯಡವನಹಳ್ಳಿ ಗೇಟ್ ಬಳಿಯ ಮ್ಯಾಕ್ಸ್ ಹೋಟೆಲ್‍ನಲ್ಲಿ ಶುಕ್ರವಾರ ಮಧ್ಯಾಹ್ನ ಮದ್ಯಪಾನ ಮಾಡಿದ್ದಾರೆ. ಮದ್ಯಪಾನ ಮಾಡಿದ ಬಳಿಕ ಅಲ್ಲಿಯೇ ಇಬ್ಬರು ಜಗಳವಾಡಿದ್ದು ಹೋಟೆಲ್ ಸಿಬ್ಬಂದಿ ಇಬ್ಬರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ. ಕುಡಿದ ಮತ್ತಿನಲ್ಲಿ ತಮ್ಮ ಫಾರ್ಚುನರ್ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗಲೂ ಇಬ್ಬರ ಕಿತ್ತಾಟ ಮುಂದುವರಿದಿದೆ. ಈ ವೇಳೆ ಹಂಸವೇಣಿ ಬಾಯಿಗೆ ಸಾಯಿರಾಂ ಬಲವಾಗಿ ಬಾರಿಸಿದ್ದು ಬಾಯಿತುಂಬ ರಕ್ತ ಹೊರಬಂದಿದೆ. ಹೋಟೆಲ್‍ನಿಂದ ಸ್ವಲ್ಪ ದೂರ ಬರುತ್ತಿದ್ದಂತೆ ಚಂದಾಪುರ ಬಸ್‍ಸ್ಟಾಪ್ ಬಳಿ ಬಂದಾಗ ಸಾಯಿರಾಂ ಹೆಂಡತಿ ಮೇಲೆ ಕೋಪಿಸಿಕೊಂಡು ಕಾರಿನಿಂದ ಇಳಿದು ಬಿಎಂಟಿಸಿ ಬಸ್ ಹತ್ತಿದ್ದಾರೆ.

    ಗಂಡ ಬಿಎಂಟಿಸಿ ಬಸ್ ಹತ್ತಿದ್ದಕ್ಕೆ ಕೋಪಗೊಂಡ ಪತ್ನಿ ಹಂಸವೇಣಿ ಕಾರಿನಲ್ಲಿ ಫಿಲ್ಮ್ ಸ್ಟೈಲ್ ನಲ್ಲಿ ಫಾಲೋ ಮಾಡಿಕೊಂಡು ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಗೇಟ್ ಬಳಿ ಬಸ್ ಮುಂದೆ ಬಂದು ಕಾರನ್ನು ನಿಲ್ಲಿಸಿದ್ದಾಳೆ. ಬಸ್ ನಿಂದ ಗಂಡ ಇಳಿದ ಕೂಡಲೇ ಪರವಾನಿಗೆ ಪಡೆದಿದ್ದ ರಿವಾಲ್ವಾರ್ ನಿಂದ ಮೂರು ಸುತ್ತ ಗುಂಡು ಹಾರಿಸಿದ್ದಾಳೆ.

    ಈ ವೇಳೆ ಸಹಾಯಕ್ಕೆಂದು ತೆರಳಿದ ಪ್ರಯಾಣಿಕರ ಮೇಲೂ ಸಹ ಹಂಸವೇಣಿ ಗನ್ ತೋರಿಸಿ ಧಮ್ಕಿ ಹಾಕಿದ್ದರಿಂದ ಸ್ಥಳದಲ್ಲಿ ಕೆಲಕಾಲ ಅತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯ ರಿವಾಲ್ವರ್‍ನೊಂದಿಗೆ ಆಕೆಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಹಂಸವೇಣಿ ಮೊದಲು ಚಂದಾಪುರದಲ್ಲಿ ರಿವಾಲ್ವಾರ್ ತೆಗೆದಿದ್ದರಿಂದ ಪ್ರಕರಣ ಸೂರ್ಯಸಿಟಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದೆ.

    ಗುಂಡಿನ ಮತ್ತಿನಲ್ಲಿದ್ದ ಹಂಸವೇಣಿ ವಿಚಾರಣೆ ವೇಳೆಯಲ್ಲಿ ಸಹ ಪೊಲೀಸರ ಮೇಲೆ ದರ್ಪ ತೋರಿದ್ದು ಏನಾಯಿತು ತಾಯಿ ಎಂದು ಪ್ರಶ್ನಿಸಿದ್ದಕ್ಕೆ, “ನಾನೇನು ನಿಮಗೆ ತಾಯಿನಾ?”ಎಂದು ಕೇಳಿದ್ದಾಳೆ. ಮೇಡಂ ಎಂದು ಕರೆದಿದ್ದಕ್ಕೆ, “ಮೇಡಂ ಎಂದರೆ ನಾನು ನಿಮಗೆ ಪಾಠ ಕಲಿಸಿದ ಗುರುವೇ” ಎಂದು ಪ್ರಶ್ನಿಸಿದ್ದಳು.

  • ಪತ್ನಿಗಾಗಿ ಪೊಲೀಸ್ ಠಾಣೆ ಎದುರು ಕ್ರಿಮಿನಾಶಕ ಕುಡಿದ ಪತಿ!

    ಪತ್ನಿಗಾಗಿ ಪೊಲೀಸ್ ಠಾಣೆ ಎದುರು ಕ್ರಿಮಿನಾಶಕ ಕುಡಿದ ಪತಿ!

    ರಾಯಚೂರು: ನನ್ನ ಪತ್ನಿಯನ್ನ ನನ್ನ ಮನೆಗೆ ಕಳುಹಿಸಿ ಕೊಡಿ ಅಂತ ಪತಿಯೊಬ್ಬ ಪೊಲೀಸ್ ಠಾಣೆ ಎದುರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನ ಮಾನ್ವಿಯಲ್ಲಿ ನಡೆದಿದೆ.

    ಮಾನ್ವಿಯ ಗವಿಗಟ್ಟ ಗ್ರಾಮದ ಬಸವರಾಜ ಪೊಲೀಸ್ ಠಾಣೆ ಎದುರೇ ಕ್ರಿಮಿನಾಶಕ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹಿರೇಕೊಟ್ನೆಕಲ್ ಗ್ರಾಮದ ಯುವತಿಯನ್ನ ಮದುವೆಯಾಗಿದ್ದ ಬಸವರಾಜ್ ಪತ್ನಿಗೆ ಕೌಟುಂಬಿಕ ಕಲಹ ಹಿನ್ನೆಲೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಗರ್ಭಿಣಿ ಪತ್ನಿ ತವರು ಮನೆ ಸೇರಿಕೊಂಡಿದ್ದಳು.

    ಬಸವರಾಜ್ ಪತ್ನಿಯ ತವರು ಮನೆಗೆ ತೆರಳಿ ಮರಳಿ ಬರುವಂತೆ ಒತ್ತಾಯ ಮಾಡಿದ್ದ ಆದ್ರೆ ಪ್ರಯೋಜನವಾಗಿರಲಿಲ್ಲ, ಜೊತೆಗೆ ಪತ್ನಿ ಕಡೆಯವರ ಜೊತೆ ಹೊಡೆದಾಟ ಮಾಡಿಕೊಂಡಿದ್ದ. ಪತ್ನಿಯನ್ನ ಅವರ ಪೋಷಕರು ಕಳುಹಿಸಲು ಒಪ್ಪದಿದ್ದಾಗ ಬಸವರಾಜ್ ಮಾನ್ವಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾಗಿದ್ದ, ಆದ್ರೆ ಪೊಲೀಸರು ಬಸವರಾಜ್‍ಗೆ ಬುದ್ಧಿ ಹೇಳಿ ನಾಳೆ ಬಾ ಅಂತ ಕಳುಹಿಸಿದ್ದರು. ಇದರಿಂದ ಬೇಸತ್ತು ಮೊದಲೇ ಜೊತೆಗೆ ತಂದಿದ್ದ ಕ್ರಿಮಿನಾಶಕವನ್ನ ಎಲ್ಲರ ಎದುರೇ ಕುಡಿದಿದ್ದಾನೆ. ಕೂಡಲೇ ಬಸವರಾಜ್‍ನನ್ನ ಆಸ್ಪತ್ರೆಗೆ ಸೇರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  • ಹಾಸನ: ಪತಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಕೇಸಿಗೆ ಮತ್ತೊಂದು ಟ್ವಿಸ್ಟ್

    ಹಾಸನ: ಪತಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಕೇಸಿಗೆ ಮತ್ತೊಂದು ಟ್ವಿಸ್ಟ್

    ಹಾಸನ: ಪತ್ನಿಯೇ ಪತಿಗೆ ಜ್ಯೂಸ್ ನಲ್ಲಿ ನಿದ್ದೆ ಮಾತ್ರೆ ಕುಡಿಸಿ ಇಂಜೆಕ್ಷನ್ ನೀಡಿ ಹತ್ಯೆ ಮಾಡಿದ ಆರೋಪ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಆರೋಪಿಯಾಗಿರುವ ಪತ್ನಿಗೆ ಬೇರೊಬ್ಬನ ಜೊತೆ ಸ್ನೇಹ ಇರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಹಾಸನ ತಾಲೂಕು ಕಿತ್ತನಕೆರೆಯಲ್ಲಿ ಕೃಷಿ ಮಾಡುತ್ತಿದ್ದ ವಿಶ್ವನಾಥ್ ಮತ್ತು ಮೆಡಿಕಲ್ ಶಾಪ್ ನಲ್ಲಿ ಉದ್ಯೋಗದಲ್ಲಿದ್ದ ಕೌಶಿಕ ಗ್ರಾಮದ ಆಶಾ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಆದರೆ ಈ ಮದುವೆಗೆ ಮೊದಲು ಸಂತೋಷ್ ಎಂಬಾತನ ಜೊತೆ ಆಶಾ ಸ್ನೇಹ ಬೆಳೆಸಿದ್ದಳು. ಕಳೆದ ಐದಾರು ವರ್ಷಗಳ ಹಿಂದಿನಿಂದಲೂ ಆಶಾ ಮತ್ತು ಸಂತೋಷ್ ಗೆಳೆತನ ಹೊಂದಿದ್ದು, ಮದುವೆಯಾಗಿ ಮೂರು ತಿಂಗಳಾಗಿದ್ದರೂ ಆಶಾ ಅಂತರ ಕಾಯ್ದುಕೊಂಡಿದ್ದಳು.

    ಪ್ರವಾಸ ಹೋಗಿದ್ದ ವೇಳೆ ಆಶಾಳಿಗೆ ಪರಿಚಯವಾಗಿದ್ದ ಸಂತೋಷ್ ನಂತರ ಆಕೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಅಷ್ಟೇ ಅಲ್ಲದೇ ಆಶಾಳಿಗೆ ಮೊಬೈಲ್ ಕೊಡಿಸಿದ್ದ. ಈ ಎಲ್ಲ ಮಾಹಿತಿಯನ್ನು ಆಶಾಳ ಮಾವ ಬೋರಶೆಟ್ಟಿ ತಿಳಿಸಿದ್ದು, ಈ ಕೊಲೆಗೆ ಸಂತೋಷ್ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ.

    ಏನಿದು ಕೊಲೆ ಕೇಸ್?
    ವಿಶ್ವನಾಥ್ ಮತ್ತು ಆಶಾ, ಹತ್ತಿರದ ಸಂಬಂಧಿಗಳಾಗಿದ್ದರಿಂದ ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದಿದ್ದರು. ಈ ಕಾರಣಕ್ಕೆ ಫೆಬ್ರವರಿ 15 ರಂದು ಇವರಿಬ್ಬರ ಮದುವೆ ನಡೆದಿತ್ತು. ಮದುವೆಗೆ ಎರಡೂ ಮನೆಯವರ ಸಹಕಾರವಿತ್ತು. ಮದುವೆಯಾದ ಒಂದೆರಡು ತಿಂಗಳವರೆಗೂ ನವಜೋಡಿ ಸಂಬಂಧಿಕರ ಮನೆ, ಸಿನಿಮಾ ಹೀಗೆ ಎಲ್ಲಾ ಕಡೆ ಓಡಾಡಿಕೊಂಡಿದ್ದರು. ಆದ್ರೆ ಇಬ್ಬರ ನಡುವೆ ಏನಾಯಿತೋ ಏನೋ ಮದುವೆಯಾದ ಎರಡೇ ತಿಂಗಳಿಗೆ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.

    ಆದರೆ ಸಂಬಂಧ ಹಾಳಾಗಲಿದೆ ಎನ್ನುವ ಒಂದೇ ಕಾರಣಕ್ಕೆ ಈ ವಿಷಯವನ್ನು ವಿಶ್ವನಾಥ್ ಯಾರ ಬಳಿಯೂ ಹೇಳಿರಲಿಲ್ಲ. ಕಳೆದ ಏಪ್ರಿಲ್ 24 ರಂದು ಸಂಬಂಧಿಕರ ಮಗುವಿನ ನಾಮಕರಣಕ್ಕೆ ಹೋಗಬೇಕು ಎಂದು ಗಂಡನೊಂದಿಗೆ ಹಾಸನಕ್ಕೆ ಆಶಾ ಹೋಗಿದ್ದಳು. ಮಹಾರಾಜ ಪಾರ್ಕ್ ನಲ್ಲಿ ಇಬ್ಬರು ಕುಳಿತುಕೊಂಡಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ವಿಶ್ವನಾಥ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಸಂಜೆ ಮನೆಗೆ ಬಂದ ವಿಶ್ವನಾಥ್ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮಾರನೇ ದಿನ ಅನಾರೋಗ್ಯಕ್ಕೆ ತುತ್ತಾಗಿದ್ದ ವಿಶ್ವನಾಥ್ ಅವರನ್ನು ಹಾಸನ, ಅಲ್ಲಿಂದ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವಿಶ್ವನಾಥ್ ಅವರು ಮೇ 2ರ ಸಂಜೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ವಿಶ್ವನಾಥ್ ಹೇಳಿದ್ದೇನು?
    ಮದುವೆಯಾದ ಬಳಿಕ ಹುಟ್ಟುವ ಮಗುವಿನ ಬಗ್ಗೆ ನಮ್ಮಲ್ಲಿ ಚರ್ಚೆ ನಡೆದಿತ್ತು. ಮಹಾರಾಜ ಪಾರ್ಕ್ ನಲ್ಲಿ ನಾವು ಕುಳಿತ್ತಿದ್ದಾಗ ಆಶಾ ಭವಿಷ್ಯದಲ್ಲಿ ಹುಟ್ಟುವ ಮಗು ಬೆಳ್ಳಗಿರಬೇಕು ಎಂದು ಹೇಳಿ ಮಾತ್ರೆ ಮತ್ತು ಜ್ಯೂಸ್ ನೀಡಿದ್ದಳು. ಆಕೆಯ ಮಾತನ್ನು ನಂಬಿ ನಾನು ಜ್ಯೂಸ್‍ನೊಂದಿಗೆ 4-5 ಮಾತ್ರೆ ನುಂಗಿದ್ದೇನೆ. ಬಳಿಕ ಆಕೆ ಇಂಜೆಕ್ಷನ್ ನೀಡಿದ್ದಾಳೆ. ಬಳಿಕ ನನಗೆ ಏನಾಯ್ತು ಗೊತ್ತಿಲ್ಲ ಎಂದು ಎಂದು ವಿಶ್ವನಾಥ್ ಸಂಬಂಧಿಕರಿಗೆ ಆಸ್ಪತ್ರೆಯಲ್ಲಿ ತಿಳಿಸಿದ್ದರು.

    ಸಂಬಂಧಿಕರು ಹೇಳೋದು ಏನು?
    ಗಂಡ ತನ್ನ ಬಣ್ಣಗೆ ಮ್ಯಾಚ್ ಆಗಲ್ಲ. ನನಗಿಂತ ಎತ್ತರ ಆಗಿದ್ದಾನೆ ಎಂದು ಆಶಾ ನಿಂದಿಸುತ್ತಿದ್ದಳು. ಆಶಾ ಮೊದಲೇ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದುರಿಂದ ಆಕೆ ದುರುದ್ದೇಶದಿಂದಲೇ ಹೀಗೆ ಮಾಡಿದ್ದಾಳೆ. ಅಲ್ಲದೇ ಆಕೆಗೆ ಬೇರೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ತಿಳಿದು ಮುಂದೆ ಗಂಡ ಎಲ್ಲಿ ಅಡ್ಡಿ ಬರುತ್ತಾನೋ ಎಂಬ ಕಾರಣದಿಂದ ವಿಷದ ಜ್ಯೂಸ್ ನೀಡಿದ್ದಾಳೆ. ಪತಿ ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ ಎಂದು ವಿಶ್ವನಾಥ್ ಅವರ ತಂದೆ ಬೋರ ಶೆಟ್ಟಿ ಆರೋಪಿಸಿದ್ದಾರೆ.

    ತನಿಖೆ ಎಲ್ಲಿಯವರೆಗೆ ಬಂದಿದೆ?
    ವಿಶ್ವನಾಥ್ ಮನೆಯವರು ನೀಡಿದ ದೂರು ಆಧರಿಸಿ ಆಶಾಳನ್ನು ವಶಕ್ಕೆ ಪಡೆದಿರುವ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆ ವರದಿ ಬಂದ ನಂತರ ವಿಶ್ವನಾಥ್ ಸಾವಿನ ರಹಸ್ಯ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ಅತ್ತೆಯ ಎದುರೇ ಪತ್ನಿಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪತಿರಾಯ!

    ಅತ್ತೆಯ ಎದುರೇ ಪತ್ನಿಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪತಿರಾಯ!

    ಬೆಂಗಳೂರು: ಅತ್ತೆಯ ಎದುರೇ ಪತ್ನಿಗೆ ನಾಲ್ಕೈದು ಬಾರಿ ಚೂರಿಯಿಂದ ಇರಿದು ಬರ್ಬರವಾಗಿ ಪತಿರಾಯನೊಬ್ಬ ಕೊಲೆಗೈದ ಹೃದಯವಿದ್ರಾವಕ ಘಟನೆಯೊಂದು ಇಂದು ಮಧ್ಯಾಹ್ನ ನಡೆದಿದೆ.

    ಬೆಂಗಳೂರಿನ ಬೇಂದ್ರೆ ನಗರದಲ್ಲಿ ಈ ಘಟನೆ ನಡೆದಿದ್ದು, 30 ವರ್ಷ ಹೇಮ ಕೊಲೆಯಾದ ದುರ್ದೈವಿ ಮಹಿಳೆ.

    40 ವರ್ಷದ ನಾಗರಾಜ ಕೊಲೆಗೈದ ಪತಿರಾಯನಾಗಿದ್ದು, ಈತ ಮೂಲತಃ ತಮಿಳುನಾಡು ಮೂಲದವನು ಎನ್ನಲಾಗುತ್ತಿದೆ. ಎರಡು ತಿಂಗಳ ಹಿಂದೆಯಷ್ಟೇ ಕುಟುಂಬ ಬೇಂದ್ರೆಗೆ ಬಂದು ನೆಲೆಸಿತ್ತು. ಪತ್ನಿಯ ಶೀಲಶಂಕಿಸಿ ಈ ಹತ್ಯೆ ನಡೆದಿದೆ ಅಂತಾ ಹೇಳಲಾಗುತ್ತಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಲೆಯ ಬಳಿಕ ನಾಗರಾಜ್ ಮನೆಯ ಬಾಗಿಲು ಹಾಕಿ ಪರಾರಿಯಾಗಿದ್ದಾನೆ. ಆದ್ರೆ ಪೊಲೀಸರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ ಅಂತಾ ಶಂಕೆ ವ್ಯಕ್ತಪಡಿಸಿದ್ದಾರೆ.

    ಅತ್ತೆಯ ಎದುರೇ ನಾಗರಾಜ ಪತ್ನಿ ಹೇಮಾರಿಗೆ ನಾಲ್ಕೈದು ಬಾರಿ ಚೂರಿಯಿಂದ ಇರಿದಿದ್ದರಿಂದ ಘಟನೆಯನ್ನು ಕಣ್ಣಾರೆ ನೋಡಿದ ಹೇಮಾ ತಾಯಿ ಇನ್ನೂ ಶಾಕ್ ನಿಂದ ಹೊರಬಂದಿಲ್ಲ.

    ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    https://www.youtube.com/watch?v=3Z21G8t8WEg

  • ಪರಪುರಷರನ್ನ ನೋಡಬಾರದೆಂದು ಪತಿಯಿಂದ ಹಲ್ಲೆ – ಕಣ್ಣನ್ನೇ ಕಳೆದುಕೊಂಡ ಪತ್ನಿ

    ಪರಪುರಷರನ್ನ ನೋಡಬಾರದೆಂದು ಪತಿಯಿಂದ ಹಲ್ಲೆ – ಕಣ್ಣನ್ನೇ ಕಳೆದುಕೊಂಡ ಪತ್ನಿ

    ಬೆಂಗಳೂರು: ಪರ ಪುರುಷರನ್ನ ನೋಡಬಾರದೆಂದು ಪತಿಯೊಬ್ಬ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದು ಆಕೆ ಈಗ ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಕೊತ್ತನೂರಿನ ನಾಗೇನಹಳ್ಳಿಯ ನಿವಾಸಿಯಾದ ಒಡಿಶಾ ಮೂಲದ ಮುನ್ನಾ ತನ್ನ ಹೆಂಡತಿ ರಾಧಾ ಮೇಲೆ ಅನುಮಾನಗೊಂಡು ಆಕೆಯ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆ ವೇಳೆ ಪತ್ನಿ ಕಣ್ಣಿಗೆ ಪೆಟ್ಟು ಬಿದ್ದಿದ್ದು, ಈಗ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ರಾಧಾ ಅವರನ್ನ ಸದ್ಯಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

    ಮುನ್ನಾ-ರಾಧಾ ದಂಪತಿ 15 ದಿನಗಳ ಹಿಂದಷ್ಟೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಶೋಭಾ ಡೆವಲಪರ್ಸ್ ಕಂಪೆನಿಯಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ಘಟನೆ ಬಗ್ಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಇದನ್ನೂ ಓದಿ: ಪರಪುರುಷರು ನೋಡದೇ ಇರಲು ಸುಂದರಿ ಪತ್ನಿಯ ತಲೆಯನ್ನೇ ಬೋಳಿಸಿದ ಪತಿರಾಯ!