Tag: white tiger

  • ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಗಳ ಆಗಮನ

    ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಗಳ ಆಗಮನ

    – ಅಳಿವಿನಂಚಲ್ಲಿರುವ ಬಿಳಿ ಹುಲಿ, ಕಾಡು ಬೆಕ್ಕು, ಮೊಸಳೆ ಆಮದು

    ಆನೇಕಲ್: ಪ್ರಾಣಿ ವಿನಿಯಯ ಯೋಜನೆಯಡಿ (Animal Exchange) ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (Bannerghatta Biological Park) ನೂತನ ಅಥಿತಿಗಳ ಆಗಮನವಾಗಿದೆ.

    ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆಯಂತೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನ, ಸಂಜಯ್ ಗಾಂಧಿ ಜೈವಿಕ ಉದ್ಯಾನವನ, ಪಾಟ್ನಾ ಹಾಗೂ ಬಿಹಾರದ ನಡುವೆ ಪ್ರಾಣಿ ವಿನಿಮಯ ಯಶಸ್ವಿಯಾಗಿದೆ. ವಿನಿಮಯದ ಭಾಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಒಂದು ಗಂಡು ಜೀಬ್ರಾ ಮತ್ತು ಎರಡು ಗಂಡು ಥಮಿನ್ ಜಿಂಕೆಗಳನ್ನು ಪಾಟ್ನಾ ಮೃಗಾಲಯಕ್ಕೆ ಕಳುಹಿಸಲಾಗಿದೆ. ಇದರ ಪ್ರತಿಯಾಗಿ ಅಳಿವಿನಂಚಿನಲ್ಲಿರುವ ಘಾರಿಯಲ್ ಮೊಸಳೆ, ಬಿಳಿ ಹುಲಿ ಮತ್ತು ಕಾಡು ಬೆಕ್ಕನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಗಿದ್ದು, ನೂತನ ಪ್ರಾಣಿಗಳ ಆಗಮನದಿಂದ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ತಂದೆಯಿಂದಲೇ ಮಗನ ಭೀಕರ ಕೊಲೆ

    ಬೆಂಗಳೂರಿನ ಹವಾಮಾನಕ್ಕೆ ಹೊಂದಿಕೊಳ್ಳಲು ಈ ಹೊಸ ಪ್ರಾಣಿಗಳನ್ನು ಕೆಲವು ದಿನಗಳವರೆಗೆ ಕ್ವಾರಂಟೈನ್ ಪ್ರದೇಶದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಮತ್ತು ನಿರಂತರ ವೀಕ್ಷಣೆಯಲ್ಲಿರಲು ಪ್ರತ್ಯೇಕ ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಲಾಗಿದೆ. ಈ ಪ್ರಾಣಿ ವಿನಿಮಯವು ಮೃಗಾಲಯಗಳಲ್ಲಿನ ಪ್ರಾಣಿಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಹೆಚ್ಚಿಸಲು ಸಹಕಾರಿಯಾಗಿದ್ದು, ಪ್ರಾಣಿ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೂ ಪ್ರಾಣಿಗಳನ್ನು ಹತ್ತಿರದಿಂದ ವೀಕ್ಷಿಸಿ, ಹೊಸ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಗಲಿದೆ. ಇದನ್ನೂ ಓದಿ: ಬೆಂಗಳೂರು| ಬೈಕ್‌ನಲ್ಲಿ ಬಂದು ಪೆಪ್ಪರ್ ಸ್ಪ್ರೇ ಹಾಕಿ ಯುವಕರ ಮೇಲೆ ಹಲ್ಲೆ

    ಪ್ರಾಣಿ ವಿನಿಮಯ ಕಾರ್ಯಕ್ರಮಗಳು ಹೆಚ್ಚಾಗಿ ಆದಾಗ ಸಂರಕ್ಷಣೆ, ಶಿಕ್ಷಣ ಮತ್ತು ವಿಭಿನ್ನ ಪ್ರಾಣಿಗಳ ಜೀವನ ಶೈಲಿ ಸೇರಿದಂತೆ ಜನರಲ್ಲಿ ದೇಶದಾದ್ಯಂತ ಇರುವ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು ಭಾರತೀಯ ಪ್ರಾಣಿ ಸಂಗ್ರಹಾಲಯ ಈ ಮಹತ್ತರದ ಪ್ರಾಣಿ ವಿನಿಮಯ ಯೋಜನೆಯನ್ನು ಮಾಡಿದೆ. ಇದನ್ನೂ ಓದಿ: ಮಳೆ ಬೆನ್ನಲ್ಲೇ ತರಕಾರಿ ಬೆಲೆ ಏರಿಕೆ – ಗ್ರಾಹಕರು ಹೈರಾಣು, ಯಾವ ತರಕಾರಿಗೆ ಎಷ್ಟು ಬೆಲೆ?

  • ಉತ್ತರ ಕರ್ನಾಟಕಕ್ಕೆ ಬಂದ ವಿಶೇಷ ಅತಿಥಿ

    ಉತ್ತರ ಕರ್ನಾಟಕಕ್ಕೆ ಬಂದ ವಿಶೇಷ ಅತಿಥಿ

    ಬಳ್ಳಾರಿ: ಸಾಮಾನ್ಯವಾಗಿ ಕಾಡು ಪ್ರಾಣಿಗಳನ್ನು ನೋಡಬೇಕೆಂದರೆ, ಅದರಲ್ಲೂ ಹುಲಿ, ಬಿಳಿ ಹುಲಿ ಕಾಣಲು ಮೈಸೂರು ಮೃಗಾಲಯಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ ಮೈಸೂರು ಮೃಗಾಲಯದಿಂದ ಕಳೆದ ವಾರ 7 ವರ್ಷದ ಅರ್ಜುನ ಎಂಬ ಹೆಸರಿನ ಬಿಳಿ ಹುಲಿ ಜೊತೆಗೆ 7 ತೋಳಗಳು ಬಳ್ಳಾರಿಯ ಹೊಸಪೇಟೆ ಬಳಿಯ ಹಂಪಿ ಬಳಿಯ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನಕ್ಕೆ ಆಗಮಿಸಿವೆ.

    ಸದ್ಯ ಝೂನಲ್ಲಿ ಪಟ್ಟೆ ಹುಲಿ, ಜಿರಾಫೆ, ಕಾಡು ಕೋಣ, ಆನೆ, ಸಿಂಹ ಸೇರಿ ನಾನಾ ವನ್ಯ ಜೀವಿಗಳಿವೆ. ಈ ಸಾಲಿಗೆ ಬಿಳಿ ಹುಲಿಯೂ ಸೆರ್ಪಡೆಯಾಗಿರುವುದು ಪ್ರಾಣಿ ಪ್ರಿಯರ ಸಂತಸ ಹೆಚ್ಚಿಸಿದೆ. ಬಳ್ಳಾರಿಯ ಬಿಸಿಲಿನ ವಾತಾವರಣ ಇದುವ ಕಾರಣ ಹಾಲಿ ಇರುವ ಹುಲಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಇದಕ್ಕೆ ಸಮಯ ಹಿಡಿಯಲಿದ್ದು, ಕೆಲ ದಿನಗಳವರೆಗೆ ಹುಲಿ ಚಲನವಲನದ ಮೇಲೆ ನಿಗಾ ವಹಿಸಬೇಕು. ವಾತಾವರಣ ಬದಲಾಗುವುದರಿಂದ ನಿತ್ಯ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ.

    ಹುಲಿ ಆಗಮಿಸಿ 10 ದಿನ ಕಳೆದಿದ್ದು, ನಿಧಾನವಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ ಎಂದು ಮೃಗಾಲಯ ಅಧಿಕಾರಿಗಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ 9 ಪ್ರಾಣಿ ಮೃಗಾಲಯಗಳಿದ್ದು, ಈ ಪೈಕಿ ಮೈಸೂರು ಮೃಗಾಲಯದಲ್ಲಿ ಮಾತ್ರ ಬಿಳಿ ಹುಲಿಯಿದೆ. ಅಲ್ಲಿಯೇ ಕ್ರಾಸ್ ಬ್ರೀಡ್ ಮಾಡಿದ 7ವರ್ಷದ ಗಂಡು ಬಿಳಿ ಹುಲಿಯನ್ನು ಕಮಲಾಪೂರದ ಅಟಲ್ ಬಿಹಾರಿ ವಾಜಪೇಯಿ ಜಿಯಾಲಾಜಿಕಲ್ ಉದ್ಯಾನವನಕ್ಕೆ ಕರೆ ತರಲಾಗಿದೆ. ಹಂಪಿಗೆ ಬರುವ ಪ್ರವಾಸಿಗರು ವಾಜಪೇಯಿ ಜಿಯಾಲಾಜಿಕಲ್ ಪಾರ್ಕಿಗೆ ಭೇಟಿ ಕೊಡುತ್ತಾರೆ. ಕಾರಣ ಹಂಪಿ ಮತ್ತಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯಲಿದೆ.

  • ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬಿಳಿ ಹುಲಿಗಳ ಕಾಳಗ  -ವಿಡಿಯೋ ನೋಡಿ

    ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬಿಳಿ ಹುಲಿಗಳ ಕಾಳಗ -ವಿಡಿಯೋ ನೋಡಿ

    ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವನ್ಯ ಪ್ರಾಣಿಗಳನ್ನು ನೋಡಲೆಂದು ಉದ್ಯಾನವನಕ್ಕೆ ಭೇಟಿಕೊಟ್ಟಿದ್ದ ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಹುಲಿಗಳ ಕಾದಾಟವನ್ನು ಸೆರೆ ಹಿಡಿದ್ದಾರೆ.

    ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನಿತ್ಯ ಸಾವಿರಾರು ಜನ ಭೇಟಿ ನೀಡಿ ಅಲ್ಲಿನ ಪ್ರಾಣಿಗಳನ್ನು ಕಣ್ತುಂಬಿಕೊಳುತ್ತಾರೆ. ಅದೇ ರೀತಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಬಿಳಿ ಹುಲಿಗಳು ಕಾದಾಟದ ರೋಚಕ ಕ್ಷಣಗಳು ನೋಡಿವಂತಹ ಅವಕಾಶ ಸಿಕ್ಕಿದೆ.

    ಬಿಳಿ ಹುಲಿಗಳ ಕೇಜ್ ಬಳಿ ತೆರಳಿದ್ದ ಪ್ರವಾಸಿಗರಿಗೆ ಎರಡು ಹುಲಿಗಳ ಬಿಗ್ ಫೈಟ್ ನೋಡೋ ಭಾಗ್ಯ ಸಿಕ್ಕಿದ್ದು, ಈ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಹುಲಿಗಳ ಕಾದಾಟ ಮುಂದುವರೆದಿದ್ದು, ನೋಡುಗರಿಗೆ ಭಯ ಹುಟ್ಟಿಸುವಂತೆ ಕಾದಾಟ ನಡೆಸಿವೆ.

    ಕಳೆದ ವರ್ಷವು ಉದ್ಯಾನವಲ್ಲಿದ್ದ ಬೆಂಗಾಲ್ ಟೈಗರ್ ಹಾಗೂ ಬಿಳಿ ಹುಲಿಯ ನಡುವೆ ಇಂತಹದ್ದೇ ಕಾದಾಟ ನಡೆದಿತ್ತು. ಆದರೆ ಅಂದು ಕಾದಾಟದಲ್ಲಿ ಒಂದು ಹುಲಿ ಸಾವನ್ನಪ್ಪಿತ್ತು. ಘಟನೆಯ ಸಂಬಂಧ ಉದ್ಯಾನವನದ ಅಧಿಕಾರಿಗಳ ನಿರ್ಲಕ್ಷದ ಆರೋಪ ಕೇಳಿ ಬಂದಿತ್ತು. ಆದರೆ ಈ ಬಾರಿ ಇಂತಹ ಯಾವುದೇ ಘಟನೆ ನಡೆದಿಲ್ಲ.

    https://www.youtube.com/watch?v=epjgrOijZ8c

  • ಬನ್ನೇರುಘಟ್ಟದಲ್ಲಿ ಬೆಂಗಾಲ್ ಟೈಗರ್ ದಾಳಿಯಲ್ಲಿ ಗಾಯಗೊಂಡಿದ್ದ ಹುಲಿ ಸಾವು

    ಬನ್ನೇರುಘಟ್ಟದಲ್ಲಿ ಬೆಂಗಾಲ್ ಟೈಗರ್ ದಾಳಿಯಲ್ಲಿ ಗಾಯಗೊಂಡಿದ್ದ ಹುಲಿ ಸಾವು

    ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಗಾಲ್ ಹುಲಿಗಳ ಜೊತೆಗಿನ ಕಾದಾಟದಲ್ಲಿ ಗಂಭೀರ ಗಾಯಗೊಂಡಿದ್ದ ಬಿಳಿ ಹುಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

    ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿಯಲ್ಲಿ ಮೂರು ಬೆಂಗಾಲ್ ಹುಲಿಗಳು ಬಿಳಿ ಹುಲಿ ಮೇಲೆ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಿಳಿ ಹುಲಿ ಮೂರು ದಿನಗಳ ಬಳಿಕ ಮೃತಪಟ್ಟಿದೆ ಎಂದು ಪಾರ್ಕ್ ನ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

    ಆಗಿದ್ದು ಏನು?
    ಉದ್ಯಾನವನದ ಬೆಂಗಾಲ್ ಹುಲಿಗಳಿದ್ದ ಕೇಜ್‍ಗೆ ಹೋಗಲು ಬಿಳಿ ಹುಲಿಗೆ ಸಾಧ್ಯವಿಲ್ಲ. ಆದರೆ ಬಿಳಿ ಹುಲಿಯೊಂದು ದಾರಿ ತಪ್ಪಿ ಹೋಗಿತ್ತು ಈ ವೇಳೆಯಲ್ಲಿ ಮೂರು ಬೆಂಗಾಲ್ ಹುಲಿಗಳು ಬಿಳಿ ಹುಲಿಯ ಮೇಲೆ ದಾಳಿ ನಡೆಸಿತ್ತು. ಬಿಳಿ ಹುಲಿಯ ಬೆನ್ನಿಗೆ ಬಲವಾದ ಪೆಟ್ಟುಗಳಾಗಿದ್ದರಿಂದ ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತಿತ್ತು.

    ಅಧಿಕಾರಿಗಳ ನಿರ್ಲಕ್ಷ್ಯ: ಹತ್ತು ದಿನಗಳ ಹಿಂದೆ ಚಿರತೆಯೊಂದು ಸಾವನ್ನಪ್ಪಿತ್ತು. ಅಷ್ಟೇ ಅಲ್ಲದೇ ಒಂದು ತಿಂಗಳ ಹಿಂದೆ ಝೀಬ್ರಾ ಕೂಡ ಮೃತಪಟ್ಟಿತ್ತು ಆದರೆ ಈಗ ಬಿಳಿ ಹುಲಿ ಕೂಡ ಮೃತಪಟ್ಟಿದೆ. ಪಾರ್ಕ್ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಪ್ರಾಣಿಗಳು ಮೃತಪಡುತ್ತಿದ್ದು, ಹಿರಿಯ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೇ ಸುಮ್ಮನಿದ್ದಾರೆ ಎಂದು ಪ್ರಾಣಿ ಪ್ರಿಯರಿಂದ ಟೀಕೆ ವ್ಯಕ್ತವಾಗಿದೆ.

  • ವಿಡಿಯೋ: ಬನ್ನೇರುಘಟ್ಟದಲ್ಲಿ ಬಿಳಿ ಹುಲಿಯ ಮೇಲೆ 3 ಬೆಂಗಾಲ್ ಟೈಗರ್ ದಾಳಿ

    ವಿಡಿಯೋ: ಬನ್ನೇರುಘಟ್ಟದಲ್ಲಿ ಬಿಳಿ ಹುಲಿಯ ಮೇಲೆ 3 ಬೆಂಗಾಲ್ ಟೈಗರ್ ದಾಳಿ

    ಬೆಂಗಳೂರು: ಆನೇಕಲ್ ನಲ್ಲಿರೋ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅಧಿಕಾರಿಗಳ ಬೇಜಾವಾಬ್ದಾರಿಗೆ ಮತ್ತೊಂದು ಪ್ರಾಣಿ ಅಪಾಯದಲ್ಲಿದೆ.

    ಹೌದು. ಉದ್ಯಾನವನದ ಬೆಂಗಾಲ್ ಟೈಗರ್ಸ್ ಇದ್ದ ಕೇಜ್ ಗೆ ಬಿಳಿ ಹುಲಿಯೊಂದು ದಾರಿ ತಪ್ಪಿ ಬಂದಿದೆ. ಈ ವೇಳೆ ಮೂರು ಬೆಂಗಾಲ್ ಟೈಗರ್ಸ್ ಗಳು ಬಿಳಿ ಹುಲಿಯ ಮೇಲೆ ದಾಳಿ ನಡೆಸಿವೆ. ಪರಿಣಾಮ ಬಿಳಿ ಹುಲಿಗೆ ತೀವ್ರ ಗಾಯಗಳಾಗಿದೆ.

    ಬಿಳಿ ಹುಲಿಯ ಬೆನ್ನಿಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಸದ್ಯ ಹುಲಿ ಮಲಗಿದಲ್ಲಿಯೇ ಇದ್ದು, ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಕೇಜ್ ನಿಂದ ಕೇಜ್ ಗೆ ಸುಲಭವಾಗಿ ಹೋಗಲು ಸಾಧ್ಯವಿರುವುದಿಲ್ಲ. ಆದ್ರೂ ಬಿಳಿ ಹುಲಿ ಹೋದಾಗ ಅಧಿಕಾರಿಗಳು ಕ್ರಮವಹಿಸದೆ ನಿರ್ಲಕ್ಷ್ಯ ತೋರಿದ್ದರಿಂದ ಈ ಘಟನೆ ನಡೆದಿದೆ.

    2 ತಿಂಗಳ ಹಿಂದಷ್ಟೇ ಗುಂಡಿಯೊಂದನ್ನು ತೋಡಿ ಅದರಲ್ಲಿ ಝೀಬ್ರಾವೊಂದು ಬಿದ್ದು ಮೃತಪಟ್ಟಿತ್ತು. ಈ ಘಟನೆ ಮಾಸುವ ಮುನ್ನವೇ ಅದೇ ಡಿಎಫ್‍ಓನಿಂದ ಮತ್ತೊಂದು ಎಡವಟ್ಟು ಎದುರಾಗಿದೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಇದನ್ನೂ ಓದಿ: ಬನ್ನೇರುಘಟ್ಟದಲ್ಲಿ ಇಸ್ರೇಲ್ ನಿಂದ ತಂದಿದ್ದ ಗರ್ಭಿಣಿ ಜೀಬ್ರಾ ಸಾವು

    https://www.youtube.com/watch?v=8sATYADYfzc&feature=youtu.be

    ಇದನ್ನೂ ಓದಿ: ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ 3 ಹೊಸ ಅತಿಥಿಗಳ ಆಗಮನ

    ಇದನ್ನೂ ಓದಿ: ಬನ್ನೇರುಘಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆನೆ ದಾಳಿಗೆ ವ್ಯಕ್ತಿ ಬಲಿ!