Tag: whatsapp group

  • ಡಿ.ಕೆ.ಸುರೇಶ್ ಅಭಿಮಾನಿಗಳ ವಾಟ್ಸಪ್ ಗ್ರೂಪ್‍ನಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋಗಳ ಲಿಂಕ್

    ಡಿ.ಕೆ.ಸುರೇಶ್ ಅಭಿಮಾನಿಗಳ ವಾಟ್ಸಪ್ ಗ್ರೂಪ್‍ನಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋಗಳ ಲಿಂಕ್

    ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಬೆಂಬಲಿಗರ ‘ಡಿಕೆಎಸ್ ಬ್ರಿಗೇಡ್ ಗ್ರೂಪ್’ನಲ್ಲಿ ಅಶ್ಲೀಲ ವಿಡಿಯೋಗಳ ಲಿಂಕ್ ಹಾಗೂ ಫೋಟೋಗಳು ಶೇರ್ ಆಗಿವೆ.

    ರಾಮನಗರ ಜಿಲ್ಲೆಯ ನಾಲ್ಕು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರನ್ನು ಒಳಗೊಂಡಿರುವ ಈ ಡಿಕೆಎಸ್ ಬ್ರಿಗೇಡ್ ಗ್ರೂಪ್‍ನಲ್ಲಿ ಅನೇಕ ಅಶ್ಲೀಲ ವಿಡಿಯೋಗಳ ಲಿಂಕ್‍ಗಳನ್ನು ಶೇರ್ ಮಾಡಲಾಗಿದೆ. ಗ್ರೂಪ್‍ನಲ್ಲಿ ಮಹಿಳೆಯರು ಕೂಡ ಇದ್ದಾರೆ. ತಡರಾತ್ರಿ 1 ಗಂಟೆ ಸುಮಾರಿಗೆ ಈ ವಿಡಿಯೋಗಳು ಬರುತ್ತಿವೆ ಅಂತ ಸಾಕಷ್ಟು ಬಾರಿ ಗ್ರೂಪ್ ಅಡ್ಮಿನ್ ವಿರುದ್ಧ ಇತರೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೂ ಕೂಡ ವಾಟ್ಸಪ್ ಗ್ರೂಪ್‍ನಲ್ಲಿ ಈ ಅಶ್ಲೀಲ ವಿಡಿಯೋಗಳ ಲಿಂಕ್ ಹಾಗೂ ಅಶ್ಲೀಲ ವಿಡಿಯೋಗಳು ಹರಿದಾಡುತ್ತಲೇ ಇವೆ.

    ಡಿಕೆಎಸ್ ಬ್ರಿಗೇಡ್ ಗ್ರೂಪ್ ಅಷ್ಟೇ ಅಲ್ಲದೆ ಡಿಕೆಎಸ್ ಅಭಿಮಾನಿಗಳ ಬಳಗ ‘ಟೀಮ್ ಡಿಕೆಎಸ್’, ‘ಡಿಕೆಶಿ ಬಳಗ’ ಸೇರಿದಂತೆ ನಾಲ್ಕಕ್ಕೂ ಹೆಚ್ಚು ವಾಟ್ಸಪ್ ಗ್ರೂಪ್ ಗಳಲ್ಲಿ ಇಂತಹ ಅಶ್ಲೀಲ ವಿಡಿಯೋಗಳ ಲಿಂಕ್ ಶೇರ್ ಮಾಡಲಾಗುತ್ತಿದೆ. ಇದರಿಂದಾಗಿ ಅನೇಕರು ಗ್ರೂಪ್‍ನಿಂದ ಹೊರ ನಡೆದಿದ್ದಾರೆ.

    ಡಿಕೆಎಸ್ ಬ್ರಿಗೇಡ್ ವಾಟ್ಸಪ್ ಗ್ರೂಪ್‍ನ ಅಡ್ಮಿನ್ ಸ್ವಾಮಿ ಎಂಬವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ‘ಯಾವುದೋ ಅನೌನ್ ನಂಬರ್ ರಾತ್ರಿ ವೇಳೆ ಗ್ರೂಪ್‍ಗೆ ಸೇರುತ್ತಿದೆ. ಆ ನಂಬರ್ ಸಂಖ್ಯೆಗಳು ವಿಚಿತ್ರವಾಗಿದ್ದು, ಅದರಿಂದಲೇ ಅಶ್ಲೀಲ ವಿಡಿಯೋ ಲಿಂಕ್ ಹಾಗೂ ಫೋಟೋಗಳು ಗ್ರೂಪ್‍ಗೆ ಬರುತ್ತಿದೆ. ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ತೇಜೋವಧೆಗೆ ಹೀಗೆ ಮಾಡುತ್ತಿದ್ದಾರೆ. ಈ ಕುರಿತು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.

    ಗ್ರೂಪ್ ನಲ್ಲಿ ಸೇರಿಕೊಂಡಿರುವ ವಿಚಿತ್ರ ನಂಬರ್ ನಲ್ಲಿ ಮೊದಲ ಮೂರು ಸಂಖ್ಯೆಗಳು ಮಾತ್ರ ಕಾಣಿಸುತ್ತವೆ. ಉಳಿದ ನಂಬರ್ ಗಳು ಡಾಟ್ ಡಾಟ್ ಇರುತ್ತಿದ್ದವು. ಪಕ್ಷ ಸಂಘಟನೆ ಉದ್ದೇಶದಿಂದ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಲಾಗಿತ್ತು. ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ಲಿಂಕ್‍ಗಳು ಹಾಗೂ ಫೋಟೋಗಳು ಶೇರ್ ಆಗಿದ್ದರಿಂದ ಅನೇಕರು ಗ್ರೂಪ್ ನಿಂದ ಹೊರ ಹೋಗಿದ್ದಾರೆ ಎಂದು ಸ್ವಾಮಿ ದೂರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವರ್ಜಿನಿಟಿ ಟೆಸ್ಟ್ ವಿರುದ್ಧ ಅಭಿಯಾನಕ್ಕೆ ವಾಟ್ಸಪ್ ಗ್ರೂಪ್ ಆರಂಭಿಸಿದ ಯುವಕರು

    ವರ್ಜಿನಿಟಿ ಟೆಸ್ಟ್ ವಿರುದ್ಧ ಅಭಿಯಾನಕ್ಕೆ ವಾಟ್ಸಪ್ ಗ್ರೂಪ್ ಆರಂಭಿಸಿದ ಯುವಕರು

    ಪುಣೆ: ಮದುವೆಯ ರಾತ್ರಿ ವಧುವಿನ ಕನ್ಯತ್ವ ಪರೀಕ್ಷೆ ಮಾಡುವ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ “ಸ್ಟಾಪ್ ದಿ ವಿ ರಿಚುವಲ್” ಎಂಬ ಹೆಸರಿನಲ್ಲಿ ಪುಣೆಯ ಕೆಲವು ಯುವಕ-ಯುವತಿಯರು ವಾಟ್ಸಪ್ ಗುಂಪೊಂದನ್ನ ರಚಿಸಿ ಅಭಿಯಾನ ಆರಂಭಿಸಿದ್ದಾರೆ.

    ಈ ಪದ್ಧತಿ ಸಂವಿಧಾನಕ್ಕೆ ವಿರುದ್ಧ ಹಾಗೂ ಕಾನೂನಿಗೆ ವಿರುದ್ಧ ಎಂದು ಪೊಲೀಸ್ ಅಧಿಕಾರಿಗಳ ಬಳಿ ದೂರು ದಾಖಲಿಸಿದ್ದಾರೆ. ಕಂಜರ್‍ಭಾತ್ ಸಮುದಾಯದಲ್ಲಿ ಈ ಪದ್ಧತಿ ಅಸ್ತಿತ್ವದಲ್ಲಿದೆ. ದಂಪತಿಯ ಮದುವೆಯ ರಾತ್ರಿ ಗ್ರಮ ಪಂಚಾಯ್ತಿ ಬಿಳಿ ಬಣ್ಣದ ಬೆಡ್‍ಶೀಟ್ ಹಾಸುತ್ತದೆ. ಒಂದು ವೇಳೆ ಬೆಡ್‍ಶೀಟ್ ಮೇಲೆ ಕೆಂಪು ಕಲೆ ಆಗಿದ್ದರೆ ಮಹಿಳೆ ಈ ಪರೀಕ್ಷೆಯಲ್ಲಿ ಪಾಸ್ ಆಗುತ್ತಾಳೆ. ಇಲ್ಲವಾದ್ರೆ ಆಕೆ ಮದುವೆಗೆ ಮುನ್ನ ದೈಹಿಕ ಸಂಪರ್ಕ ಹೊಂದಿದ್ದಳು ಎಂದು ಆರೋಪಿಸಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಮಹಿಳೆಯ ಒಪ್ಪಿಗೆ ಇಲ್ಲದೆಯೂ ಇಂತಹ ಪರೀಕ್ಷೆಯನ್ನು ಮಾಡಲಾಗುತ್ತದೆ.

    ನಾವು ತ್ರಿವಳಿ ತಲಾಖ್ ಹಾಗೂ ಫೇಸ್‍ಬುಕ್‍ನಲ್ಲಿ ಖಾಸಗಿತನದ ಹಕ್ಕಿನ ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದ್ದೆವು. ನಮ್ಮ (ಕಂಜರ್‍ಭಾತ್) ಸಮುದಾಯದ ಕೆಲವು ಸಮಾನ ಮನಸ್ಕರು ಇದಕ್ಕೆ ಗುಣಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಈ ಶೋಷಣೆಯ ವಿರುದ್ಧ ಪ್ರತಿಭಟಿಸಲು ಮುಂದೆ ಬಂದಿದ್ದೇವೆ. ಇದು ಸಂವಿಧಾನದ ಆರ್ಟಿಕಲ್ 14 ಹಾಗೂ 21ಕ್ಕೆ ವಿರುದ್ಧ ಎಂದು ಈ ಗುಂಪಿನ ಸ್ಥಾಪಕ ವಿವೇಕ್ ತಮೈಚೇಕರ್ ಹೇಳಿದ್ದಾರೆ.

    ಇದು ನಮ್ಮ ಸಂಪ್ರದಾಯವಾದ್ದರಿಂದ ಈ ಆಚರಣೆಯನ್ನ ಮಾಡಬೇಕು. ಇಲ್ಲವಾದ್ರೆ ಹೆಣ್ಣುಮಕ್ಕಳು ಹಾಳಾಗ್ತಾರೆ ಎಂದು ಇಲ್ಲಿನ ಜನ ನಂಬಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ನಾವು ಅಭಿಯಾನ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

  • ತನ್ನದಲ್ಲದ ತಪ್ಪಿಗೆ ಉಗಾಂಡದಲ್ಲಿ ಕನ್ನಡಿಗ ಜೈಲುಪಾಲು

    ತನ್ನದಲ್ಲದ ತಪ್ಪಿಗೆ ಉಗಾಂಡದಲ್ಲಿ ಕನ್ನಡಿಗ ಜೈಲುಪಾಲು

    -ಮಂಗ್ಳೂರಿನ ವಾಟ್ಸಪ್ ಗ್ರೂಪ್ ಸದಸ್ಯರ ಸಹಾಯದಿಂದ ಹೆಂಡತಿ, ಮಕ್ಕಳು ಭಾರತಕ್ಕೆ ವಾಪಸ್

    ಮಂಗಳೂರು: ಕರಾವಳಿಯ ಯುವಕನೊಬ್ಬ ದೂರದ ಉಗಾಂಡ ದೇಶಕ್ಕೆ ದುಡಿಯಲು ಹೋಗಿದ್ರು. ಆದ್ರೆ ತನ್ನದಲ್ಲದ ತಪ್ಪಿಗೆ ಆ ದೇಶದಲ್ಲೀಗ ಜೈಲು ಶಿಕ್ಷೆ ಅನುಭವಿಸ್ತಿದ್ದಾರೆ. ಹೀಗಾಗಿ ಆತನ ಕುಟುಂಬ ದಿಕ್ಕಿಲ್ಲದೇ ಕಂಗಾಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮಾಲಾಡಿ ಗ್ರಾಮದ ರಶೀದ್ ಶಾಫಿ ಉಗಾಂಡದ ಗುಜರಾತಿ ಕಂಪೆನಿಯೊಂದರಲ್ಲಿ ಕೆಲಸ ಮಾಡ್ತಿದ್ರು. ಸೋಮಾಲಿಯಾ ದೇಶದ ಪ್ರಜೆಯೊಂದಿಗೆ ಮದುವೆಯಾಗಿರೋ ರಶೀದ್, ಮೂವರು ಮಕ್ಕಳ ಜೊತೆ ಸುಂದರ ಸಂಸಾರ ನಡೆಸ್ತಿದ್ರು. ಹೀಗಿರುವಾಗ ಕಳೆದ 10 ತಿಂಗಳ ಹಿಂದೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ರಶೀದ್ ಕೈಯ್ಯಲ್ಲಿದ್ದ ಕಂಪೆನಿಯ 12 ಲಕ್ಷ ರೂಪಾಯಿ ಹಣವನ್ನ ದರೋಡೆಕೋರರು ದೊಚಿದ್ದರು. ಆದ್ರೆ ಕಂಪೆನಿ ಮಾತ್ರ ರಶೀದ್ ಹಣವನ್ನ ದುರ್ಬಳಕೆ ಮಾಡಿದ್ದಾರೆಂದು ಆರೋಪ ಮಾಡಿ ಜೈಲಿಗೆ ಕಳುಹಿಸಿದೆ. ತಮ್ಮ ಮಗನನ್ನ ಬಿಡುಗಡೆ ಮಾಡಲು ಸಹಾಯ ಮಾಡಿ ಅಂತ ರಶೀದ್ ತಂದೆ ಕೇಂದ್ರ ಸರ್ಕಾರಕ್ಕೆ ಅಂಗಲಾಚುತ್ತಿದ್ದಾರೆ.

    ಕಳೆದ 10 ತಿಂಗಳಿನಿಂದ ರಶೀದ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಯಜಮಾನನಿಲ್ಲದ ಮನೆಯಲ್ಲಿ ರಶೀದ್ ಅವರ ಪತ್ನಿ ಹಾಗೂ ಮಕ್ಕಳು ಸಂಕಷ್ಟದಲ್ಲಿದ್ದಾರೆ. ಇದನ್ನ ಅರಿತ ಮಂಗಳೂರಿನ ಎಂ.ಫ್ರೆಂಡ್ಸ್ ವಾಟ್ಸಪ್ ಗ್ರೂಪ್‍ನ ಗೆಳೆಯರು ರಶೀದ್ ಪತ್ನಿ ಹಾಗೂ ಮಕ್ಕಳನ್ನ ಭಾರತಕ್ಕೆ ಕರೆತಂದಿದ್ದಾರೆ. ನಿರಪರಾಧಿಯಾದ ರಶೀದ್ ಬಿಡುಗಡೆಗೂ ಹಣ ಹೊಂದಿಸಲು ಎಂ.ಫ್ರೆಂಡ್ಸ್ ಸದಸ್ಯರು ಪ್ರಯತ್ನ ಮಾಡ್ತಿದ್ದು, ದಾನಿಗಳ ಮೂಲಕ ಹಣ ಸಂಗ್ರಹಿಸಲು ಮುಂದಾಗಿದ್ದಾರೆ.

    ಒಟ್ನಲ್ಲಿ ಅನಿವಾಸಿ ಭಾರತೀಯ ತನ್ನದಲ್ಲದ ತಪ್ಪಿಗೆ ಉಗಾಂಡದಲ್ಲಿ ಶಿಕ್ಷೆ ಅನುಭವಿಸ್ತಿದ್ದಾರೆ.