Tag: wedding

  • ಮದ್ವೆ ಮನೆಯಲ್ಲಿ 18 ತಿಂಗಳ ಕಂದಮ್ಮನ ಮೇಲೆ ಸಂಬಂಧಿಕನಿಂದಲೇ ರೇಪ್!

    ಮದ್ವೆ ಮನೆಯಲ್ಲಿ 18 ತಿಂಗಳ ಕಂದಮ್ಮನ ಮೇಲೆ ಸಂಬಂಧಿಕನಿಂದಲೇ ರೇಪ್!

    ಆಗ್ರಾ: 18 ತಿಂಗಳ ಪುಟ್ಟ ಕಂದಮ್ಮನ ಮೇಲೆ ಸಂಬಂಧಿಕನೇ ಮದುವೆ ಸಮಾರಂಭದಲ್ಲಿ ಅತ್ಯಾಚಾರ ಮಾಡಿದ್ದಾನೆ. ಮಗುವನ್ನು ಯಾರಿಗೂ ತಿಳಿಯದಂತೆ ಪೊದೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಪೋಹಿಯಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೆಲ ದಿನಗಳ ಹಿಂದೆ ಪೋಹಿಯಾ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ತಾಯಿಯೊಂದಿಗೆ ಮದುವೆಗೆ ಬಂದಿದ್ದ ಮಗುವನ್ನು ಸಂಬಂಧಿಕನೊಬ್ಬ ಮದುವೆ ಸಮಾರಂಭ ನಡೆಯುತ್ತಿದ್ದ ಸ್ಥಳದಿಂದ ಯಾರಿಗೂ ತಿಳಿಯದಂತೆ ಎತ್ತುಕೊಂಡು ಹೋಗಿ, ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ತುಸು ದೂರದಲ್ಲಿದ್ದ ಪೊದೆಯೊಂದರಲ್ಲಿ ರಕ್ತಸಿಕ್ತವಾಗಿದ್ದ ಮಗುವನ್ನು ಎಸೆದು ಹೋಗಿದ್ದಾನೆ.

    ಮದುವೆ ನಡೆಯುತ್ತಿದ್ದ ಸ್ಥಳದಲ್ಲಿ ಮಗು ಕಾಣದಿದ್ದಾಗ, ತಾಯಿ ಹಾಗೂ ಕೆಲವರು ಮಗುವನ್ನು ಸುತ್ತಮುತ್ತ ಹುಡುಕಿದ್ದಾರೆ. ಆಗ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಸುಮಾರು 400 ಮೀ. ದೂರದಲ್ಲಿದ್ದ ಪೊದೆಯೊಂದರ ನಡುವೆ ಮಗು ಜ್ಞಾನ ತಪ್ಪಿ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಈ ವೇಳೆ ನಡೆದಿರುವ ವಿಷಯದ ಬಗ್ಗೆ ತಾಯಿ ಬಹಿರಂಗಪಡಿಸಲು ಮುಂದಾದಾಗ ಆಕೆಯ ಸಂಬಂಧಿಕರು ಯಾರಿಗೂ ತಿಳಿಸಿದಂತೆ ಹೇಳಿ ತಾಯಿ ಮಗುವನ್ನು ಸ್ಥಳದಿಂದ ಕಳುಹಿಸಿದ್ದಾರೆ.

    ಬಳಿಕ ಈ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 376 ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ಬಲೆ ಬಿಸಿದ್ದಾರೆ. ಅಲ್ಲದೆ ಮಗುವಿನ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಪ್ರಿ-ವೆಡ್ಡಿಂಗ್ ಶೂಟ್‍ನಲ್ಲಿ ಕಿಸ್ ಮಾಡೋವಾಗ ಮಗುಚಿದ ದೋಣಿ – ವಿಡಿಯೋ ನೋಡಿ

    ಪ್ರಿ-ವೆಡ್ಡಿಂಗ್ ಶೂಟ್‍ನಲ್ಲಿ ಕಿಸ್ ಮಾಡೋವಾಗ ಮಗುಚಿದ ದೋಣಿ – ವಿಡಿಯೋ ನೋಡಿ

    ತಿರುವನಂತನಪುರಂ: ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುನ್ನ ಜೋಡಿಗಳು ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ ಆಗಿದೆ. ಅದೇ ರೀತಿ ಕೇರಳದ ಜೋಡಿ ಫೋಟೋಶೂಟ್ ಮಾಡಿಸುವಾಗ ದೋಣಿ ಮಗುಚಿದ್ದು, ಜೋಡಿ ನದಿಗೆ ಬಿದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ತಿಜಿನ್ ಥಂಕಚೆನ್ ಮತ್ತು ಶಿಲ್ಪ ನವ ಜೋಡಿಯ ವಿಡಿಯೋ ವೈರಲ್ ಆಗುತ್ತಿದೆ. ಕೇರಳದ ತಿರವಲ್ಲಾ ನಿವಾಸಿ ತಿಜಿನ್ ಥಂಕಚೆನ್ ಮತ್ತು ಚಂಗನಾಚೆರ್ರಿಯ ಶಿಲ್ಪಾ ಇವರಿಬ್ಬರ ಮದುವೆ ಮುಂದಿನ ತಿಂಗಳು ಮೇ 6 ರಂದು ನಡೆಯಲಿದೆ. ಇದನ್ನೂ ಓದಿ: ವೆಡ್ಡಿಂಗ್ ಫೋಟೋಶೂಟ್ ವೇಳೆ ಬೋಟ್ ಪಲ್ಟಿ – ವೀಡಿಯೋ ವೈರಲಾಯ್ತು!

    ಫೋಟೋಶೂಟ್:
    ತಿಜಿನ್ ಮತ್ತು ಶಿಲ್ಪಾ ಅವರು ಮದುವೆಗೂ ಮುನ್ನ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಲೆಂದು ಪಟ್ಟಣಂತಿಟ್ಟ ಜಿಲ್ಲೆಯ ಕಡಮ್ಮನಿಟ್ಟಾದಲ್ಲಿ ಪಂಬಾ ನದಿಯ ದಂಡೆಯ ಬಳಿಗೆ ಹೋಗಿದ್ದರು. ಅಲ್ಲಿ ನದಿಯ ಮಧ್ಯೆದಲ್ಲಿ ಒಂದು ದೋಣಿಯಲ್ಲಿ ಇಬ್ಬರು ಪಕ್ಕಪಕ್ಕದಲ್ಲಿ ಕುಳಿತಿದ್ದರು. ಆ ದೋಣಿ ಸುತ್ತಲೂ ಮೂವರು ನಿಂತಿದ್ದರು. ತಿಜಿನ್ ಒಂದು ಬಾಳೆ ಎಲೆಯನ್ನು ತನಗೆ ಮತ್ತು ಹುಡುಗಿ ಶಿಲ್ಪಾಗೆ ಸೇರಿದಂತೆ ತಲೆ ಮೇಲೆ ಹಿಡಿದಿದ್ದರು.

    ಆಗ ಫೋಟೋಗ್ರಾಫರ್ ಪೋಸ್ ಕೊಡುವಂತೆ ಹೇಳಿದ್ದಾರೆ. ತಿಜಿನ್ ಬಾಳೆ ಎಲೆ ಹಿಡಿದು ಇಬ್ಬರು ಒಬ್ಬೊಬ್ಬರನ್ನು ನೋಡುತ್ತಿರುತ್ತಾರೆ. ದೋಣಿ ಬಳಿ ನಿಂತಿದ್ದ ಮೂವರು ಮಳೆ ಬಂದಂತೆ ನದಿಯಿಂದ ನೀರನ್ನು ಎರಚಿದ್ದಾರೆ. ಆದರೆ ಇದೇ ವೇಳೆ ತಿಜಿನ್ ಮುತ್ತು ಕೊಡಲು ಶಿಲ್ಪಾ ಕಡೆಗೆ ಹೋಗಿದ್ದಾರೆ. ಆಗ ಬೋಟ್ ಸಮತೋಲನ ಕಳೆದುಕೊಂಡು ನದಿಗೆ ಇಬ್ಬರು ಬಿದ್ದಿದ್ದಾರೆ.

    ನದಿಗೆ ಬಿದ್ದ ದಂಪತಿ ಇದನ್ನು ತಮಾಷೆಯಾಗಿ ತೆಗೆದುಕೊಂಡು ನಕ್ಕಿದ್ದಾರೆ. ಈ ಘಟನೆಯಿಂದ ಯಾವುದೇ ಅಪಾಯವಾಗಿಲ್ಲ ಎಂದು ಫೋಟೋಗ್ರಾಫರ್ ತಿಳಿಸಿದ್ದಾರೆ. ದಂಪತಿಯ ವಿಡಿಯೋವನ್ನು ‘Weddplanner Wedding Studio’ ಎಂಬ ಫೇಸ್‍ಬುಕ್‍ ಪೇಜ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಇದುವರೆಗೂ 2.41ಲಕ್ಷ ವೀವ್ಸ್ ಆಗಿದೆ.

    https://www.facebook.com/WeddplannerWeddingStudio/videos/1596808883782488/

  • ಮದ್ವೆ ಮನೆಯಲ್ಲಿ ಮಾಜಿ ಪ್ರಿಯಕರನ ಕಾಲು ಹಿಡಿದು ಗೋಳಾಡಿ ಯುವತಿಯಿಂದ ಹೈಡ್ರಾಮಾ – ವಿಡಿಯೋ

    ಮದ್ವೆ ಮನೆಯಲ್ಲಿ ಮಾಜಿ ಪ್ರಿಯಕರನ ಕಾಲು ಹಿಡಿದು ಗೋಳಾಡಿ ಯುವತಿಯಿಂದ ಹೈಡ್ರಾಮಾ – ವಿಡಿಯೋ

    ಬೀಜಿಂಗ್: ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆಗೆ ವಧುವಿನ ರೀತಿ ಬಂದು, ಆತನ ಕಾಲು ಹಿಡಿದು ಗೋಳಾಡಿ ಹೈಡ್ರಾಮಾ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಚೀನಾದ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆಗೆ ಬಂದು ಹೈಡ್ರಾಮಾ ಮಾಡಿದ್ದಾಳೆ. ಮದುವೆಯ ಶುಭಕಾರ್ಯ ನಡೆಯುತ್ತಿದ್ದ ವೇಳೆ ವಧು-ವರರು ನಿಂತಿದ್ದ ವೇದಿಕೆಯಲ್ಲೇ ರಂಪಾಟ ಮಾಡಿದ್ದಾಳೆ. ತನ್ನ ಮಾಜಿ ಪ್ರಿಯಕರ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಿಕೊಳ್ಳುವುದನ್ನು ಸಹಿಸಲಾಗದೇ ಯುವತಿ ಈ ರೀತಿ ಮಾಡಿದ್ದಾಳೆ. ತಾನೂ ಕೂಡ ಮದುಮಗಳ ರೀತಿ ರೆಡಿಯಾಗಿ ಬಂದಿದ್ದ ಯುವತಿ, ಮದುವೆ ಸಮಾರಂಭದಲ್ಲಿ ಎಲ್ಲರ ಮುಂದೆಯೇ ಪ್ರಿಯಕರನ ಕಾಲು ಹಿಡಿದು ತಪ್ಪಾಯ್ತು ಕ್ಷಮಿಸು, ನನ್ನನ್ನೇ ಮದುವೆಯಾಗು ಎಂದು ಗೋಳಾಡಿದ್ದಾಳೆ.

    ಈ ವೇಳೆ ವಧು ಕೋಪಗೊಂಡು ವೇದಿಕೆಯಿಂದ ಹೋಗಿದ್ದಕ್ಕೆ, ಯುವಕನು ಕೂಡ ಆಕೆಯ ಹಿಂದೆಯೇ ಸಮಾಧಾನ ಪಡಿಸಲು ಹೋಗಿದ್ದಾನೆ. ತನ್ನ ಮಾಜಿ ಪ್ರೇಯಸಿಯ ಗೋಳಾಟಕ್ಕೆ ಕ್ಯಾರೆ ಅನ್ನದೆ ಯುವಕ ಹೋಗಿದ್ದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

    ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಲೈಕ್ ಕೊಟ್ಟಿದ್ದಾರೆ.

    https://www.youtube.com/watch?v=YeofeaxiN1c#action=share

  • ಸೊಸೆಗೆ ನೀತಾ ಅಂಬಾನಿ ಗಿಫ್ಟ್ ಮಾಡಿದ್ರು ಬರೋಬ್ಬರಿ 300 ಕೋಟಿಯ ವಜ್ರದ ಹಾರ!

    ಸೊಸೆಗೆ ನೀತಾ ಅಂಬಾನಿ ಗಿಫ್ಟ್ ಮಾಡಿದ್ರು ಬರೋಬ್ಬರಿ 300 ಕೋಟಿಯ ವಜ್ರದ ಹಾರ!

    ಮುಂಬೈ: ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರ ಆಕಾಶ್ ಅಂಬಾನಿ ತಮ್ಮ ಬಾಲ್ಯ ಸ್ನೇಹಿತೆ, ವಜ್ರ ವ್ಯಾಪಾರಿಯಾಗಿರುವ ರುಸ್ಸೆಲ್ ಮೆಹ್ತಾ ಅವರ ಪುತ್ರಿ ಶ್ಲೋಕಾ ಮೆಹ್ತಾರನ್ನು ಮಾರ್ಚ್ 9ರಂದು ವಿವಾಹವಾಗಿದ್ದಾರೆ. ಆದ್ದರಿಂದ ತಮ್ಮ ಪ್ರೀತಿಯ ಸೊಸೆಗೆ ನೀತಾ ಅಂಬಾನಿ ಬರೋಬ್ಬರಿ 300 ಕೋಟಿ ರೂ. ಬೆಲೆಬಾಳುವ ವಜ್ರದ ಹಾರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಹೌದು, ಸದ್ಯ ನೀತಾ ಅಂಬಾನಿ ತಮ್ಮ ಸೊಸೆ ಶ್ಲೋಕಾ ಅವರಿಗೆ ನೀಡಿರುವ ಈ ದುಬಾರಿ ಗಿಫ್ಟ್ ವಿಷಯ ಕೇಳಿದವರು ಒಂದು ಕ್ಷಣ ಅಚ್ಚರಿಪಡುತ್ತಾರೆ. ಮಗ ಆಕಾಶ್ ಕೈ ಹಿಡಿದು ಬಂದಿರುವ ಶ್ಲೋಕಾಗೆ ನೀತಾ ಅವರು ಸಖತ್ ದುಬಾರಿ ವಜ್ರದ ಹಾರ ಕೊಟ್ಟು ಸಪ್ರ್ರೈಸ್ ನೀಡಿದ್ದಾರೆ.

    ಅತ್ತೆಯ ಒಡವೆಗಳನ್ನು ಸೊಸೆಗೆ ನೀಡುವುದು ಅಂಬಾನಿ ಕುಟುಂಬದ ಸಂಪ್ರದಾಯವಾಗಿದೆ. ಆದರಿಂದ ನೀತಾ ಅಂಬಾನಿಯ ಅತ್ತೆ ತಮಗೆ ನೀಡಿದ್ದ ಒಡವೆಗಳನ್ನು ತಮ್ಮ ಸೊಸೆ ಶ್ಲೋಕಾರಿಗೆ ನೀಡಲು ನಿರ್ಧರಿಸಿದ್ದರು. ಆದರೆ ಆಕಾಶ್ ಹಾಗೂ ಶ್ಲೋಕಾ ಅವರ ಮದುವೆಯ ಬಳಿಕ ಸಂಪ್ರದಾಯದ ಪ್ರಕಾರ ಪರಂಪರೆಯಿಂದ ಬಂದ ಚಿನ್ನದ ಹಾರನ್ನು ಸೊಸೆಗೆ ನೀಡುವ ಬದಲಿಗೆ ದುಬಾರಿ ವಜ್ರದ ಹಾರವನ್ನು ನೀಡಿದ್ದಾರೆ.

    ಅಷ್ಟೇ ಅಲ್ಲದೆ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರು ತಮ್ಮ ಪ್ರೀತಿಯ ಅಣ್ಣ ಅತ್ತಿಗೆಗೆ ಮದುವೆ ಉಡುಗೊರೆಯಾಗಿ ಒಂದು ಐಶಾರಾಮಿ ಬಂಗಲೆಯನ್ನು ನೀಡಿದ್ದಾರೆ.

    ಅಕಾಶ್ ಶ್ಲೋಕಾ ಐಶಾರಾಮಿ ವಿವಾಹದಲ್ಲಿ ಬಾಲಿವುಡ್‍ನ ಸ್ಟಾರ್ ನಟ-ನಟಿಯರಿಂದ ಹಿಡಿದು ಹೆಸರಾಂತ ರಾಜಕಾರಿಗಳು, ಉದ್ಯಮಿಗಳು, ಅಂತರಾಷ್ಟ್ರಿಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಗಣ್ಯರು ಭಾಗಿಯಾಗಿದ್ದರು. ಈ ಮೂಲಕ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಅವರ ಮದುವೆ ಸಮಾರಂಭ ದುಬಾರಿ ಉಡುಗೊರೆ ಹಾಗೂ ಹೆಸರಾಂತ ಗಣ್ಯರಿಂದ ಇನ್ನಷ್ಟು ಅದ್ದೂರಿಯಾಗಿ ನೆರವೇರಿತ್ತು.

  • ನಿರ್ದೇಶಕ ಪವನ್ ಒಡೆಯರ್ ಮದುವೆಯಲ್ಲಿ ಪುನೀತ್ ರಾಜ್ ಕುಮಾರ್ ಮನವಿ

    ನಿರ್ದೇಶಕ ಪವನ್ ಒಡೆಯರ್ ಮದುವೆಯಲ್ಲಿ ಪುನೀತ್ ರಾಜ್ ಕುಮಾರ್ ಮನವಿ

    ಬಾಗಲಕೋಟೆ: ನಗರದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಮದುವೆ ಸಮಾರಂಭದಲ್ಲಿ ನಟ ಪುನೀತ್ ರಾಜ್‍ಕುಮಾರ್ ಭಾಗವಹಿಸಿ ನವ ದಂಪತಿಗೆ ಶುಭಕೋರಿದ್ದಾರೆ.

    ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ನಿರ್ದೇಶಕ ಪವನ್ ಒಡೆಯರ್ ಬಾಗಲಕೋಟೆ ಮೂಲದ ನಟಿ ಅಪೇಕ್ಷಾ ಪುರೋಹಿತ ಕೈ ಹಿಡಿದರು. ಎರಡೂ ಕುಟುಂಬಸ್ಥರ ಆಪ್ತ ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಿತು.

    ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಪುನೀತ್ ರಾಜ್‍ಕುಮಾರ್, ಪವನ್ ಅವರ ಮದುವೆ ಮೂಲಕ ಬಾಗಲಕೋಟೆಗೆ ಬರುವ ಅವಕಾಶ ಲಭಿಸಿದೆ. ಇಬ್ಬರ ಜೀವನ ಸುಖಮಯವಾಗಿರಲಿ ಎಂದು ಹರಿಸಿದರು.

    ಇದೇ ವೇಳೆ ಕೊಡಗಿನಲ್ಲಿ ಸಂಭವಿಸಿರುವ ಪ್ರವಾಹದ ಪರಿಸ್ಥಿತಿ ಬಗ್ಗೆ ಮಾತನಾಡಿ, ಕೊಡಗಿನ ಜನತೆಗೆ ನನ್ನ ಕೈಲಾದಷ್ಟು ನಾನು ಸಹಾಯ ಮಾಡಿದ್ದೇನೆ. ಎಲ್ಲರೂ ಅವರ ಶಕ್ತಿಯಾನುಸಾರ ಸಹಾಯ ಮಾಡಬೇಕು. ಸಂತ್ರಸ್ತ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

    ಅಂದಹಾಗೇ ಕಳೆದ ಡಿಸೆಂಬರ್ ತಿಂಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ರವರ ನಿಶ್ಚಿತಾರ್ಥ ಸಮಾರಂಭ ಬಾಗಲಕೋಟೆಯ ಹರಿಪ್ರಿಯಾ ಹೋಟೆಲ್‍ನಲ್ಲಿ ನೆರವೇರಿತ್ತು. ಇಬ್ಬರ ಕುಟುಂಬದ ಆಪ್ತರ ಮಧ್ಯೆ ಸರಳವಾಗಿ ನಿಶ್ಚಿತಾರ್ಥ ನಡೆದಿದ್ದು, ಪರಸ್ಪರ ಇಬ್ಬರು ಉಂಗುರವನ್ನು ಬದಲಾಯಿಸಿಕೊಂಡಿದ್ದರು.

    ನಿರ್ದೇಶಕ ಪವನ್ ಒಡೆಯರ್ `ರಣವಿಕ್ರಮ’, `ನಟರಾಜ ಸರ್ವಿಸ್’, `ಗೂಗ್ಲಿ’ ಹಾಗೂ `ಗೋವಿಂದಾಯ ನಮಃ’ ಸಿನಿಮಾಗಳನ್ನು ಮಾಡಿದ್ದಾರೆ. ಪವನ್ ಒಡೆಯರ್ ಸದ್ಯ ಪುನೀತ್ ರಾಜ್ ಕುಮಾರ್ ಅವರ `ನಟ ಸಾರ್ವಭೌಮ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುತ್ತಿಗೆಗೆ ಹಾರ ಹಾಕಲು ಹೋಗಿ ವಧುವಿನ ಸೊಂಟಕ್ಕೆ ಹಾಕ್ದ – ವಿಡಿಯೋ ನೋಡಿ

    ಕುತ್ತಿಗೆಗೆ ಹಾರ ಹಾಕಲು ಹೋಗಿ ವಧುವಿನ ಸೊಂಟಕ್ಕೆ ಹಾಕ್ದ – ವಿಡಿಯೋ ನೋಡಿ

    ನವದೆಹಲಿ: ವಧುವಿಗೆ ಹಾರ ಹಾಕುವ ಸಂದರ್ಭದಲ್ಲಿ ವರನೊಬ್ಬ ಆಕೆಯ ಕುತ್ತಿಗೆಗೆ ಹಾರ ಹಾಕುವ ಬದಲು ಆಕೆಯ ಸೊಂಟಕ್ಕೆ ಹಾರ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ವಧು- ವರರಿಬ್ಬರು ವೇದಿಕೆ ಮೇಲೆ ನಿಂತಿದ್ದು, ವೇದಿಕೆ ಕೆಳಗೆ ನಿಂತಿದ್ದವರು ಅವರಿಗೆ ಹಾರ ಕೊಟ್ಟಿದ್ದಾರೆ. ಬಳಿಕ ಒಬ್ಬರಿಗೊಬ್ಬರು ಹಾರ ಬದಲಾಯಿಸುವಂತೆ ಹೇಳಿದ್ದಾರೆ. ಮೊದಲು ವಧು ನಾಚಿಕೆಯಿಂದ ನಿಧಾನವಾಗಿ ಒಂದು ಹೆಜ್ಜೆ ಮುಂದೆ ಹೋಗಿ ಹಾರ ಹಾಕಿದ್ದಾಳೆ.

    ನಂತರ ವರ ಹಾರವನ್ನು ಹಿಡಿದುಕೊಂಡಿದ್ದಾನೆ. ಈ ವೇಳೆ ಅಲ್ಲಿದ್ದರು ಏನೋ ಸೂಚನೆ ನೀಡಿ ಹಾರ ಹಾಕುವಂತೆ ಹೇಳಿದ್ದಾರೆ. ಸೂಚನೆ ಸಿಕ್ಕಿದ ಕೂಡಲೇ ವರ ವಧುವಿನ ಕುತ್ತಿಗೆಗೆ ಹಾರವನ್ನು ಎಸೆದಿದ್ದಾನೆ. ಎಸೆದ ಹಾರ ಸೊಂಟಕ್ಕೆ ಹೋಗಿ ಬಿದ್ದಿದೆ. ಹಾರ ಬಿದ್ದ ಕೂಡಲೇ ಅಲ್ಲಿದ್ದವರು ನಕ್ಕಿದ್ದಾರೆ. ಎಡವಟ್ಟಾದ ವಿಚಾರ ತಿಳಿದು ವರ ಸೊಂಟದಲ್ಲಿದ್ದ ಹಾರವನ್ನು ಎತ್ತಿ ನಂತರ ವಧುವಿನ ಕುತ್ತಿಗೆಗೆ ಹಾಕಿದ್ದಾನೆ.

    ಈ ವಿಡಿಯೋವನ್ನು ““5-Minute Awesomeness”” ಫೇಸ್ ಬುಕ್ ಪೇಜ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಫುಲ್ ವೈರಲ್ ಆಗಿದೆ. ಇಲ್ಲಿಯವರೆಗೆ ಈ ವಿಡಿಯೋವನ್ನು ಸುಮಾರು 1 ಲಕ್ಷಕ್ಕಿಂತ ಅಧಿಕ ವೀಕ್ಷಣೆಯಾಗಿದೆ.

    https://www.facebook.com/5MinuteAwesomeness/videos/536531943411296/

  • ವಧು ಎಸೆದ ಹೂಗುಚ್ಛಕ್ಕೆ ಮದ್ವೆಗೆ ಬಂದಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲು-ವಿಡಿಯೋ ನೋಡಿ

    ವಧು ಎಸೆದ ಹೂಗುಚ್ಛಕ್ಕೆ ಮದ್ವೆಗೆ ಬಂದಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲು-ವಿಡಿಯೋ ನೋಡಿ

    ಬೀಜಿಂಗ್: ಕ್ರಿಶ್ಚಿಯನ್ ಮದುವೆ ಸಂಪ್ರದಾಯದಲ್ಲಿ ವಧು ಮೇಲೆ ಹೂಗುಚ್ಛ ಎಸೆಯುವುದು ಒಂದು ಸಂಪ್ರದಾಯ. ಆದ್ರೆ ಚೀನಾದಲ್ಲಿ ನಡೆದ ಮದುವೆಯಲ್ಲಿ ವಧು ಮೇಲೆಸೆದ ಹೂ ಗುಚ್ಛ ಮೇಲ್ಚಾವಣಿಗೆ ತಾಗಿದೆ. ಮೇಲ್ಚಾವಣಿಗೆ ಅಲಂಕಾರಿಕವಾಗಿ ಜೋಡಿಸಲಾಗಿದ್ದ ಟೈಲ್ಸ್ ಗಳು ಕುಸಿದು ಬಿದ್ದಿದೆ.

    ವಧು ಹೂಗುಚ್ಛ ಎಸೆದ ಮೇಲ್ಚಾವಣಿ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ರೆ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

    ಸಾಂದರ್ಭಿಕ ಚಿತ್ರ

    ಟೈಲ್ಸ್ ಗಳು ಕುಸಿದು ಬೀಳುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ನಿಂತಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಟೈಲ್ಸ್ ಗಳು ಬಿದ್ದಿದರಿಂದ ಕೆಲವು ಅತಿಥಿಗಳು ಗಾಯಗೊಂಡಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಯಾಗಿದೆ.

    ಕ್ರಿಶ್ಚಿಯನ್ ಮದುವೆ ಸಂಪ್ರದಾಯದಲ್ಲಿ, ವಧು ಕೈಯಲ್ಲಿ ಸುಂದರವಾದ ಹೂವಿನ ಗುಚ್ಛವೊಂದು ಇರುತ್ತದೆ. ವಧು ತನ್ನ ಮದುವೆ ಬಳಿಕ ಕೈಯಲ್ಲಿರುವ ಹೂಗುಚ್ಛವನ್ನು ಮೇಲೆಸೆಯುತ್ತಾರೆ. ಮೇಲೆಸೆದ ಹೂಗುಚ್ಛವನ್ನು ಹಿಡಿದವರ ಮದುವೆ ಅದೇ ವರ್ಷದಲ್ಲಿ ಆಗುತ್ತೆ ಎಂಬ ನಂಬಿಕೆ ಇದೆ.

    https://www.facebook.com/shanghaiist/videos/10156905046776030/

  • ವಿಡಿಯೋ: ಮೆರವಣಿಗೆ ವೇಳೆ ಜನರ ಮೇಲೆ ಹರಿದ ವರನ ಕಾರ್- 25 ಮಂದಿಗೆ ಗಾಯ

    ವಿಡಿಯೋ: ಮೆರವಣಿಗೆ ವೇಳೆ ಜನರ ಮೇಲೆ ಹರಿದ ವರನ ಕಾರ್- 25 ಮಂದಿಗೆ ಗಾಯ

    ರಾಯ್‍ಪುರ್: ಮದುವೆ ಸಮಾರಂಭದ ವೇಳೆ ಅವಘಡವೊಂದು ನಡೆದು ಅತಿಥಿಗಳು ಆಸ್ಪತ್ರೆಗೆ ದಾಖಲಾದ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.

    ಸೋಮವಾರ ರಾತ್ರಿ ಇಲ್ಲಿನ ಜಾಂಜ್‍ಗಿರ್ ಚಂಪಾ ಜಿಲ್ಲೆಯಲ್ಲಿ ಮದುವೆಯ ಮೆರವಣಿಗೆ ವೇಳೆ ಸಂಬಂಧಿಕರು ಹಾಗೂ ಸ್ನೇಹಿತರು ರಸ್ತೆ ಮೇಲೆ ಡ್ಯಾನ್ಸ್ ಮಾಡುತ್ತಾ ಸಾಗುತ್ತಿದ್ದರು. ಈ ವೇಳೆ ವರ ಕುಳಿತಿದ್ದ ಎಸ್‍ಯುವಿ ಕಾರ್ ಇದ್ದಕ್ಕಿದ್ದಂತೆ ಜನರ ಮೇಲೆ ಹರಿದಿದೆ. ಪರಿಣಾಮ 25 ಮಂದಿಗೆ ಗಾಯಗಳಾಗಿದ್ದು, 9 ಜನರ ಸ್ಥಿತಿ ಗಂಭೀರವಾಗಿದೆ. ಘಟನೆಯ ವಿಡಿಯೋ ಲಭ್ಯವಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

    ಮೆರವಣಿಗೆ ಜೊತೆ ನಿಧಾನವಾಗಿ ಸಾಗುತ್ತಿದ್ದ ಸ್ಕಾರ್ಪಿಯೋ ಕಾರಿನಲ್ಲಿ ವರ ಕುಳಿತಿದ್ದ. ಹೆಂಗಸರು, ಪುರುಷರು ಹಾಗೂ ಮಕ್ಕಳು ಅಲ್ಲಲ್ಲಿ ನಿಂತು ಡ್ಯಾನ್ಸ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕಾರಿನ ಚಾಲಕ ಬ್ರೇಕ್ ಬದಲು ಆಕ್ಸಿಲರೇಟರ್ ತುಳಿದಿದ್ದು, ಹಲವಾರು ಜನರ ಮೇಲೆ ಕಾರ್ ಹರಿಸಿದ್ದಾನೆ. ನಂತರ ರಿವರ್ಸ್ ತೆಗೆಯಲು ಯತ್ನಿಸಿದ್ದು, ಆಗ ಇನ್ನೂ ಹಲವರಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಚಾಲಕ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ. ಚಾಲಕ ಮದ್ಯಪಾನ ಮಾಡಿದ್ದನಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ವರನ ಜೊತೆ ಕೆಲವು ಮಕ್ಕಳು ಕೂಡ ಕಾರಿನಲ್ಲಿ ಕುಳಿತಿದ್ದರು ಎಂದು ವರದಿಯಾಗಿದೆ.

  • 2ನೇ ಮದ್ವೆಯಲ್ಲಿ ಮೊದಲ ಮದ್ವೆಯ ಡ್ರೆಸ್ ಧರಿಸಿ ಸಿಕ್ಕಿ ಬಿದ್ದ ವರ!

    2ನೇ ಮದ್ವೆಯಲ್ಲಿ ಮೊದಲ ಮದ್ವೆಯ ಡ್ರೆಸ್ ಧರಿಸಿ ಸಿಕ್ಕಿ ಬಿದ್ದ ವರ!

    ಮುಂಬೈ: ವರನೊಬ್ಬ ಮೊದಲ ಮದುವೆಯಲ್ಲಿ ಧರಿಸಿದ್ದ ಬಟ್ಟೆಯನ್ನೇ, ತನ್ನ ಎರಡನೇ ಮದುವೆಯಲ್ಲಿಯೂ ಧರಿಸುವ ಮೂಲಕ ಸಿಕ್ಕಿಬಿದ್ದಿರುವ ಘಟನೆ ನಗರದ ಮಲ್ವಾನಿಯಲ್ಲಿ ಶುಕ್ರವಾರ ನಡೆದಿದೆ.

    26 ವರ್ಷದ ಸೊಹೈಲ್ ಸೈಯದ್ ಎಂಬಾತನೇ ತನ್ನ ಎರಡನೇ ಮದುವೆಯಲ್ಲಿ ಸಿಕ್ಕಿ ಬಿದ್ದಿರುವ ವರ. ಸೊಹೈಲ್ ಆರು ತಿಂಗಳ ಹಿಂದೆಯೇ ತಾನು ಪ್ರೀತಿಸಿದ್ದ ಯುವತಿಯೊಂದಿಗೆ ಮದುವೆ ಆಗಿದ್ದನು. ಸೊಹೈಲ್ ಪ್ರೀತಿಸಿರುವ ಹುಡುಗಿಯನ್ನು ಆತನ ಪೋಷಕರು ಒಪ್ಪಿರದ ಕಾರಣ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮದುವೆ ಆಗಿದ್ದನು.

    ಇತ್ತ ಸೊಹೈಲ್ ಪೋಷಕರು ತಮ್ಮ ಏರಿಯಾದಲ್ಲಿ ವಾಸವಾಗಿರುವ ಯುವತಿಯೊಂದಿಗೆ ಶುಕ್ರವಾರ ಮದುವೆ ನಿಶ್ಚಯ ಮಾಡಿದ್ರು. ಪೋಷಕರು ನೋಡಿರುವ ಹುಡುಗಿಯನ್ನು ಮದುವೆಯಾಗಲು ಸೊಹೈಲ್ ಒಪ್ಪಿಕೊಂಡಿದ್ದರಿಂದ ಎರಡು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಶುಕ್ರವಾರ ರಾತ್ರಿ ಮದುವೆ ನಡೆದಿದೆ. ಬಿದಾಯಿ (ವಧುವನ್ನು ಗಂಡನ ಮನೆಗೆ ಕಳುಹಿಸುವ ಸಮಯ) ವೇಳೆ ವಧುವಿನ ತಂದೆಯ ಮೊಬೈಲ್‍ಗೆ ಫೋಟೋವೊಂದನ್ನು ಕಳುಹಿಸಿದ್ದಾರೆ.

    ಒಂದೇ ಡ್ರೆಸ್: ಮೊಬೈಲಿಗೆ ಬಂದ ಫೋಟೋವನ್ನು ಡೌನ್‍ಲೋಡ್ ಮಾಡಿ ನೋಡಿದ್ರೆ ಅಳಿಯ ಬೇರೆ ಯುವತಿಯೊಂದಿಗೆ ಮದುವೆ ಆಗಿರುವ ಫೋಟೋ. ಅಳಿಯ ಸೊಹೈಲ್ ಧರಿಸಿರುವ ಡ್ರೆಸ್ ಮತ್ತು ಫೋಟೋದಲ್ಲಿ ಹಾಕಿರುವ ಶೇರ್ವಾನಿ ಎರಡೂ ಒಂದೇ ಆಗಿದ್ದರಿಂದ ವಧುವಿನ ತಂದೆಗೆ ಸಂಶಯ ಹುಟ್ಟಿಕೊಂಡಿದೆ.

    ಮದುವೆ ಮನೆಯಿಂದ ಪೊಲೀಸ್ ಠಾಣೆಗೆ: ಇತ್ತ ಅಳಿಯ ಸೊಹೈಲ್ ಮೊದಲ ಮದುವೆ ವಿಚಾರ ತಿಳಿದ ವಧುವಿನ ಪೋಷಕರು ಮಲ್ವಾನಿ ಠಾಣೆಗೆ ತೆರಳಿದ್ದಾರೆ. ಪೊಲೀಸರು ಮಾತ್ರ ಇದೊಂದು ಗಂಭೀರವಲ್ಲದ ಪ್ರಕರಣ ಅಂತಾ ಹೇಳಿ ಎಫ್‍ಐಆರ್ ದಾಖಲಿಸಿಕೊಳ್ಳಲಿಲ್ಲ. ಠಾಣೆಯಲ್ಲಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಸುನಿತಾ ಕದಮ್ ಎಫ್‍ಐಆರ್ ದಾಖಲಿಸದೇ ಎನ್‍ಸಿಆರತ್ ಅಂತಾ ಹಾಕಿದ್ದರು ಅಂತಾ ವಧುವಿನ ಕುಟುಂಬಸ್ಥರಾದ ಶಮಿಮ್ ಭಾಯ್ ಆರೋಪಿಸಿದ್ದಾರೆ.

    ಮಂಟಪದಿಂದ ಕಾಲ್ಕಿತ್ತ ಸೊಹೈಲ್ ಪೋಷಕರು: ವಧುವಿನ ಪೋಷಕರಿಂದ ಆಕ್ರೋಶ ವ್ಯಕ್ತವಾದ ಕೂಡಲೇ ಪೊಲೀಸರು ಶನಿವಾರ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಆದ್ರೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದಂತೆ ವರ ಮತ್ತು ಆತನ ಪೋಷಕರು ನಾಪತ್ತೆಯಾಗಿದ್ದಾರೆ.

    ಶನಿವಾರ ಸೊಹೈಲ್ ಕಿರಿಯ ಸಹೋದರನ ಆರತಕ್ಷತೆಯ ಕಾರ್ಯಕ್ರಮಕ್ಕೆ ತೆರಳಿ ಆತನ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಸೊಹೈಲ್ ವಿರುದ್ಧ ಐಪಿಸಿ ಸೆಕ್ಷನ್ 420, 406, 495 ಅಡಿ ದೂರು ದಾಖಲಿಸಿಕೊಂಡಿದೆ. ಕಾಣೆಯಾಗಿರುವ ಸೊಹೈಲ್ ಪತ್ತೆಗಾಗಿ ವಿಶೇಷ ಜಾಲ ಬೀಸಲಾಗಿದೆ ಎಂದು ಮಲ್ವಾನಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

  • ಪ್ರಕೃತಿ ಮಡಿಲಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕ ಹುಡುಗಿಯ ಕೈ ಹಿಡಿದ ಕನ್ನಡಿಗ

    ಪ್ರಕೃತಿ ಮಡಿಲಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕ ಹುಡುಗಿಯ ಕೈ ಹಿಡಿದ ಕನ್ನಡಿಗ

    ತುಮಕೂರು: ಭಾರತೀಯ ಸಂಸ್ಕೃತಿಗೆ ಮಾರುಹೋದ ಅಮೆರಿಕ ಯುವತಿಯೊಬ್ಬರು ಕನ್ನಡದ ಹುಡುಗನ ಜೊತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ಗಮನ ಸೆಳೆದಿದ್ದಾರೆ.

    ಜಿಲ್ಲೆಯ ತೋವಿನಕೆರೆ ಸಮೀಪದ ಉಪ್ಪಾರಪಾಳ್ಯದ ತೋಟದಲ್ಲಿ, ಪ್ರಕೃತಿ ಮಡಿಲಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕದ ನ್ಯೂಜೆರ್ಸಿಯಲ್ಲಿ ವಿಜ್ಞಾನಿಯಾಗಿರುವ ಟಾರಾ ಹಾಗೂ ಬೆಂಗಳೂರಿನ ಡಾ. ಅಜಯ್ ಸಪ್ತಪದಿ ತುಳಿದಿದ್ದಾರೆ.

    ಡಾ. ಅಜಯ್ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವಾಗ ಟಾರಾ ಪರಿಚಯವಾಗುತ್ತಾರೆ. ನಂತರ ಇಬ್ಬರ ಮಧ್ಯೆ ಪ್ರೀತಿ ಆರಂಭವಾಗುತ್ತದೆ. ಬಳಿಕ ಟಾರಾ ಭಾರತೀಯ ಸಂಪ್ರದಾಯದಂತೆ ಮದುವೆಯಾಗುವ ಬಯಕೆಯನ್ನು ಅಜಯ್ ಮುಂದೆ ವ್ಯಕ್ತಪಡಿಸಿದ್ದಾರೆ. ಟಾರಾ ಆಸೆಯಂತೆ ಅಜಯ್ ತನ್ನ ತಂದೆಯ ಸ್ನೇಹಿತರಾದ ಶ್ರೀಕಂಠ ಪ್ರಸಾದ್ ಅವರ ತೋಟದಲ್ಲಿ ಸಕಲ ತಯಾರಿ ನಡೆಸಿ ಪ್ರಕೃತಿ ಮಡಿಲಲ್ಲಿ ಸತಿಪತಿಗಳಾಗಿದ್ದಾರೆ.

    ವಧು ಟಾರಾ ಸೀರೆ ಉಟ್ಟು, ಹೂವಿನ ಹಾರ ಹಾಕಿಕೊಂಡು ಥೇಟ್ ಭಾರತೀಯ ನಾರಿಯಂತೆ ಕಂಗೊಳಿಸಿದ್ದಾರೆ. ಬಳಿಕ ಗೋ ಪೂಜೆ ನೆರವೇರಿಸಿ ಆರತಿ ಬೆಳಗಿದ್ದಾರೆ. ಎತ್ತಿನ ಗಾಡಿಯ ದಿಬ್ಬಣ, ಒನಕೆ ಕುಟ್ಟುವ ಶಾಸ್ತ್ರ, ಧಾನ್ಯ ಬೀಸುವ ಶಾಸ್ತ್ರ ಹೀಗೆ ಎಲ್ಲಾ ಸಂಪ್ರದಾಯವನ್ನೂ ಚಾಚೂ ತಪ್ಪದೆ ಮಾಡಿ ಸಪ್ತಪದಿ ತುಳಿದಿದ್ದಾರೆ.

    https://www.youtube.com/watch?v=BI0ZgGuhABI