Tag: wedding

  • ನವದಂಪತಿಗೆ ಉಡುಗೊರೆ ತಂದ ಆಪತ್ತು

    ನವದಂಪತಿಗೆ ಉಡುಗೊರೆ ತಂದ ಆಪತ್ತು

    ಗಾಂಧಿನಗರ: ಭಗ್ನ ಪ್ರೇಮಿಯೊಬ್ಬ ತಾನು ಪ್ರೇಮಿಸಿದ್ದ ಹುಡುಗಿಯು ಮೋಸ ಮಾಡಿದ್ದರಿಂದ ಆ ಸೇಡನ್ನು ಅವಳ ತಂಗಿಯ ಮದುವೆಯಲ್ಲಿ ಸೋಟಕದ ವಸ್ತುವನ್ನು ನೀಡಿ ದ್ವೇಷ ತೀರಿಸಿಕೊಂಡಿದ್ದಾನೆ. ಇದರಿಂದಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣ ಗುಜರಾತ್‍ನಲ್ಲಿ ನಡೆದಿದೆ.

    ದಕ್ಷಿಣ ಗುಜರಾತ್‍ನ ನವಸಾರಿ ಜಿಲ್ಲೆಯ ಮಿಂಧಬರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲತೇಶ್ ಮತ್ತು ಅವರ ಸೋದರಳಿಯ ಜಿಯಾನ್ ಗಂಭೀರವಾಗಿ ಗಾಯಗೊಂಡವರು. ಹಾಗೂ ಕೊಯಂಬಾ ನಿವಾಸಿ ರಾಜು ಪಟೇಲ್ ಆರೋಪಿ. ಈತ ವಧುವಿನ ಅಕ್ಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಆದರೆ ಈತ ಕೆಲ ದಿನಗಳ ಹಿಂದೆ ಸಂಬಂಧ ಮುರಿದುಕೊಂಡಿದ್ದ. ಈ ದ್ವೇಷದ ಹಿನ್ನೆಲೆಯಲ್ಲಿ ತಾನು ಪ್ರೀತಿಸಿದ್ದ ತಂಗಿಯ ಮದುವೆಗೆ ಬಂದಿದ್ದ. ನವವಿವಾಹಿತರಿಗೆ ಉಡುಗೋರೆ ನೀಡಿ ಹೋಗಿದ್ದಾನೆ.

    MARRIAGE

    ಲತೇಶ್ ಮತ್ತು ಅವರ ಸೋದರಳಿಯ ಜಿಯಾನ್ ಅವರು ತಮ್ಮ ನಿವಾಸದಲ್ಲಿ ಇತರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಡುಗೊರೆಗಳನ್ನು ನೋಡುತ್ತಿದ್ದರು. ಆ ಉಡುಗೋರೆಗಳಲ್ಲಿ ಇದ್ದಿದ್ದ ರೀಚಾರ್ಜ್ ಮಾಡಬಹುದಾದ ಆಟಿಕೆ ಕಂಡುಬಂದಿದೆ. ಅದು ಸ್ಫೋಟಕ ವಸ್ತು ಎಂದು ತಿಳಿಯದೇ, ಆ ಉಡುಗೊರೆಯಲ್ಲಿ ಆಟಿಕೆ ಕಂಡು, ಲತೇಶ್ ಮತ್ತು ಜಿಯಾನ್ ಆಟಿಕೆಗೆ ರೀಚಾರ್ಜ್ ಮಾಡಲು ಪ್ರಯತ್ನಿಸಿದರು. ಆದರೆ ಆ ಆಟಿಕೆಯ ಸ್ಫೋಟ ಸಂಭವಿಸಿದೆ. ಇದರ ಪರಿಣಾಮವಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಲತೇಶ್ ಅವರ ಕೈಗಳು, ತಲೆ ಮತ್ತು ಕಣ್ಣುಗಳ ಮೇಲೆ ತೀವ್ರ ಗಾಯಗಳಾಗಿದ್ದು, ಜಿಯಾನ್ ಅವರ ತಲೆ ಮತ್ತು ಕಣ್ಣುಗಳಿಗೆ ಗಾಯಗಳಾಗಿವೆ. ಇಬ್ಬರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಭ್ರಷ್ಟ ಬಿಜೆಪಿ ನಾಯಕರ ಆಸ್ತಿ ಹರಾಜು ಹಾಕಿ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಿ: ಮೋಹನ್ ದಾಸರಿ

    ಈ ಸಂಬಂಧ ಸಂತ್ರಸ್ತರ ಕುಟುಂಬದ ಸದಸ್ಯರು ವನ್ಸ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಡುಗೋರೆ ನೀಡಿದ್ದ ಕೊಯಂಬಾ ನಿವಾಸಿ ರಾಜು ಪಟೇಲ್ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಗುರುವಾರ ಮಹತ್ವದ ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಸಭೆ – ಸಿಎಂ ದೆಹಲಿಗೆ

  • ಕುಡಿದು ಡ್ಯಾನ್ಸ್ ಮಾಡುತ್ತಾ ಮೈಮರೆತ ವರ – ಬೇರೆಯವರನ್ನ ಮದುವೆಯಾದ ವಧು

    ಕುಡಿದು ಡ್ಯಾನ್ಸ್ ಮಾಡುತ್ತಾ ಮೈಮರೆತ ವರ – ಬೇರೆಯವರನ್ನ ಮದುವೆಯಾದ ವಧು

    ಜೈಪುರ: ಮದುವೆ ಸಮಯದಲ್ಲಿ ತಮಾಷೆ, ವಿಚಿತ್ರ ಮತ್ತು ವಿಲಕ್ಷಣ ಘಟನೆಗಳು ನಡೆಯುತ್ತ ಇರುತ್ತೆ. ಅದೇ ರೀತಿ ಇಲ್ಲೊಂದು ಮದುವೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವರನೊಬ್ಬ ಚೆನ್ನಾಗಿ ಕುಡಿದು, ಡ್ಯಾನ್ಸ್ ಮಾಡುತ್ತ ಮೈಮರೆತಿದ್ದಾನೆ. ಈ ಹಿನ್ನೆಲೆ ವಧು ಬೇರೆಯವರನ್ನು ಮದುವೆಯಾಗಿದ್ದಾಳೆ.

    ನಡೆದಿದ್ದೇನು?
    ರಾಜಸ್ತಾನದ ಚೂರಿನಲ್ಲಿ ಭಾನುವಾರದಂದು ವರ ಸುನೀಲ್ ಮತ್ತು ಆತನ ಸಂಬಂಧಿಕರು ವಧುವಿನ ಗ್ರಾಮಕ್ಕೆ ಆಗಮಿಸುವಾಗ ಈ ಘಟನೆ ನಡೆದಿದೆ. ಮದುವೆಯ ಮುಹೂರ್ತ ಸೋಮವಾರ ನಸುಕಿನ ಜಾವ 1.15 ಪ್ರಾರಂಭವಾಗಬೇಕಿತ್ತು. ಈ ಹಿನ್ನೆಲೆ ವರನ ಕಡೆಯವರು ಭಾನುವಾರ ರಾತ್ರಿ 9 ಗಂಟೆಗೆ ಬಾರಾತ್(ಮೆರವಣಿಗೆ) ಪ್ರಾರಂಭಿಸಿದ್ದಾರೆ. ಆದರೆ ಸುನೀಲ್ ತನ್ನ ಸ್ನೇಹಿತರೊಂದಿಗೆ ಚೆನ್ನಾಗಿ ಕುಡಿದು ಡಿಜೆ ಸಾಂಗ್‍ಗೆ ನೃತ್ಯ ಮಾಡುತ್ತಲೇ ಇದ್ದನು. ಇದನ್ನೂ ಓದಿ: ದೇವೇಗೌಡರ ಜನ್ಮದಿನಕ್ಕೆ ಶುಭಕೋರಿದ ಮೋದಿ 

    ಇದರಿಂದ ಗಂಟೆಗಟ್ಟಲೆ ಮೆರವಣಿಗೆ ವಿಳಂಬವಾಯಿತು. ವಧುವಿನ ಕಡೆಯವರು, ವರನ ಬರುವಿಕೆಗಾಗಿ ಕಾಯುತ್ತಿದ್ದರು. ಹಲವು ಗಂಟೆಗಳಾದರೂ ವರನು ಬಾರದೆ ಇರುವುದನ್ನು ನೋಡಿ ವಧುವಿನ ಕಡೆಯವರು ಗಾಬರಿಗೊಂಡರು. ಈ ಹಿನ್ನೆಲೆ ವಧುವಿಗೆ ಬೇರೆ ವರನನ್ನು ನೋಡಿ ಮದುವೆ ಮಾಡಿಸಿದ್ದಾರೆ. ವರ ಮತ್ತು ಅವರ ಸಂಬಂಧಿಕರು ಕೊನೆಗೂ ಸ್ಥಳಕ್ಕೆ ಬಂದಾಗ, ವಧು ಈಗಾಗಲೇ ಮತ್ತೊಬ್ಬರನ್ನ ಮದುವೆಯಾಗಿರುವುದನ್ನು ನೋಡಿ ಆಘಾತಕ್ಕೊಳಗಾದರು.

    ಅವಮಾನಕ್ಕೊಳಗಾದ ವರನ ಕಡೆಯವರು ವಧುವಿನ ಕಡೆಯವರ ವಿರುದ್ಧ ರಾಜ್‍ಗಢ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದಾರೆ. ಅದಕ್ಕೆ ವಧುವಿನ ಕಡೆಯವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಧುವಿನ ಕುಟುಂಬಸ್ಥರು, ವರ ಮತ್ತು ಅವನ ಕುಟುಂಬವು ಮದುವೆಯ ಆಚರಣೆಗಳ ಬಗ್ಗೆ ತುಂಬಾ ಅಸಡ್ಡೆ ಹೊಂದಿದ್ದಾರೆ. ಮುಂದೆ ಭವಿಷ್ಯದಲ್ಲಿಯೂ ಈ ನಡವಳಿಕೆಯು ಮುಂದುವರಿಯುತ್ತೆ ಎಂದು ನಮಗೆ ಭಯವಾಗಿ ಈ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬೇಸಿಗೆಯ ಮಳೆಗೆ ಮುಳುಗಿದ ಬೆಂಗಳೂರು – ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? 

    ಎರಡು ಕುಟುಂಬಗಳನ್ನು ವಿಚಾರಣೆ ಮಾಡಿದ ಬಳಿಕ ಪೊಲೀಸರು ಸಮಾಲೋಚನೆ ಮಾಡಿ, ಮದುವೆಯನ್ನು ಕಾನೂನುಬದ್ಧವಾಗಿಸಲು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಇದನ್ನು ಎರಡು ಕುಟುಂಬ ಒಪ್ಪಿಕೊಂಡಿದೆ.

  • ಮದುವೆ ಸಮಾರಂಭದಲ್ಲಿ ರಂಪಾಟ- ಸಂಬಂಧಿಯನ್ನು ಬಿಡಿಸಿದರೆ ಮಾತ್ರ ಮದುವೆ ಎಂದ ವರ!

    ಮದುವೆ ಸಮಾರಂಭದಲ್ಲಿ ರಂಪಾಟ- ಸಂಬಂಧಿಯನ್ನು ಬಿಡಿಸಿದರೆ ಮಾತ್ರ ಮದುವೆ ಎಂದ ವರ!

    ಲಕ್ನೋ: ಸಹೋದರ ಸಂಬಂಧಿಯನ್ನು ಬಿಡುಗಡೆಗೊಳಿಸುವವರೆಗೆ ಮದುವೆ ಆಗಲ್ಲ ಎಂದು ವರನೊಬ್ಬ ಪಟ್ಟು ಹಿಡಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ನಡೆದಿದೆ.

    ನನ್ಹೆ ಸಿಂಗ್ ವರ. ಉತ್ತರ ಪ್ರದೇಶದ ಅಮ್ರೋಹದಲ್ಲಿ ಮದುವೆಯ ಮುಂಚೆ ನಡೆಯುವ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯುತ್ತಿತ್ತು. ವಧು ಹಾಗೂ ಅವಳ ಕಡೆಯವರು ಸಂಭ್ರಮದಿಂದ ಪಾಲ್ಗೊಂಡಿದ್ದರು. ವಧುವಿನ ಮನೆಯ ಸಮಾರಂಭಕ್ಕೆ ಬಂದ ವರ ನನ್ಹೆ ಸಿಂಗ್ ಇದ್ದಕ್ಕಿದ್ದಂತೆ ಮದುವೆ ಆಗಬೇಕು ಎಂದರೆ ಜೈಲಿನಲ್ಲಿರುವ ಸಹೋದರ ಸಂಬಂಧಿಯನ್ನು ಬಿಡಿಸಬೇಕು ಎಂದು ವಧುವಿನ ಕಡೆಯವರೊಂದಿಗೆ ಜಗಳವಾಡಿದನು.

    ಘಟನೆ ಏನು?
    ದಿದೌಲಿ ಪೊಲೀಸ್ ಠಾಣೆಯಲ್ಲಿ ವಧುವಿನ ತಂದೆ ಅಂಕಿತ್ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಂಕಿತ್‌ನನ್ನು ಬಂಧಿಸಿದ್ದರು. ಅಂಕಿತ್ ಬಂಧನದ ಹಿನ್ನೆಲೆಯಲ್ಲಿ ವರ ನನ್ಹೆ ಸಿಂಗ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ. ಈ ಸಮಯದಲ್ಲಿ ವಧುವಿನ ತಂದೆ ದೂರು ದಾಖಲಿಸಿದ ವಿಷಯ ನನ್ಹೆ ಸಿಂಗ್‌ಗೆ ತಿಳಿದಿದೆ. ಇದರಿಂದಾಗಿ ಕೂಪಿತಗೊಂಡ ನನ್ಹೆ ಸಿಂಗ್ ಮದುವೆ ಸಮಾರಂಭಕ್ಕೆ ಬಂದು ರಂಪಾಟ ನಡೆಸಿದನು. ಇದನ್ನೂ ಓದಿ: ತೆಂಗಿನಕಾಯಿ ಪ್ರಸಾದಕ್ಕಾಗಿ ನೂಕು ನುಗ್ಗಲು – 17 ಮಂದಿಗೆ ಗಾಯ

    ಆದರೆ ಕುತೂಹಲ ಅಂಶವೆಂದರೆ ದಂಪತಿ ಈಗಾಗಲೇ ಮದುವೆ ಆಗಿದ್ದರು. ಆದರೆ ಸಾಮೂಹಿಕ ವಿವಾಹದ ಪ್ರಯೋಜನವನ್ನು ಪಡೆದುಕೊಳ್ಳಲು ಪುನಃ ಮದುವೆ ಆಗುತ್ತಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಇದನ್ನೂ ಓದಿ: ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ

  • ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್‌ – ಏನಿದೆ ವಿಶೇಷ?

    ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್‌ – ಏನಿದೆ ವಿಶೇಷ?

    ಕಾಲ ಬದಲಾದಂತೆ ಫ್ಯಾಷನ್ ಸಹ ಬದಲಾಗುತ್ತಲೇ ಇದೆ. ಕಾಲಕ್ಕೆ ಸರಿ ಹೊಂದುವ ಉಡುಪುಗಳನ್ನು ಖರೀದಿಸಿ ಧರಿಸುವ ಹುಡುಗರ ಜಾಯಮಾನವೂ ಬದಲಾಗಿದೆ. ಆಧುನಿಕತೆಗೆ ತೆರೆದುಕೊಂಡು ಯುವಕರು ಫ್ಯಾಷನ್ ವಸ್ತುಗಳನ್ನು ಧರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

    ಧರಿಸಿದ ಬಟ್ಟೆ, ತೊಡುವ ಆಭರಣ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಂದ ಹಾಗೆ ಇದು ತೋರಿಕೆಯ ಕಾಲ. ತೋಚಿದ್ದಕ್ಕೆ ರೂಪ ಕೊಡೋ ಕಾಲ. ಕಣ್ಣಿಗೆ ಕಂಡದ್ದು, ಹೊಸತು ಅನ್ನಿಸಿದ್ದನ್ನು ಕೊಂಡು ಧರಿಸುವ ಕಾಲ. ಹುಡುಗಿಯರನ್ನ ತಮ್ಮತ್ತ ಹೇಗೆ ಸೆಳೆಯಬೇಕು? ಎಂಬುದು ಈಗಿನ ಯುವಕರಿಗೆ ಗೊತ್ತು.

    ಸೌಂದರ್ಯ ಹೇಗೇ ಇರಲಿ, ಆದರೂ ಬಾಹ್ಯ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ತಂದುಕೊಳ್ಳಲು ಸೌಂದರ್ಯ ಸಾಧನಗಳನ್ನು ಬಳಸಲೇಬೇಕು. ಅಂತದರಲ್ಲಿ ಹುಡುಗರೇನೂ ಕಡಿಮೆ ಇಲ್ಲ ಬಿಡಿ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಶಾಪಿಂಗ್ ಮಾಲ್‌ಗಳಲ್ಲಿ ಯುವಕರ ಕಲರವವೇ ಹೆಚ್ಚಿದೆ. ಅದರಲ್ಲೂ ಸಿಕ್ಸ್‌ಪ್ಯಾಕ್‌ ಹುಡುಗರು ಫಿಟ್ ಆಗಿ ಕೂರುವ ಟೀಶರ್ಟ್‌ಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಅದರ ಮೇಲೆ ಸೂಟ್‌ಕೋಡ್ ಫ್ರೆಶ್ ಲುಕ್ ನೀಡುತ್ತದೆ.

    ವೆಡ್ಡಿಂಗ್ ದಿನಗಳಲ್ಲಂತು ತರಹೇವಾರಿಯ ಸೂಟ್ಸ್ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಮದುವೆಯ ಸಮಾರಂಭಗಳು ಅಥವಾ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಫ್ರೆಶ್ ಹಾಗೂ ಕಲರ್‌ಫುಲ್ ಲುಕ್ ನೀಡುತ್ತವೆ. ಅವುಗಳ ವಿವಿಧ ಶೈಲಿಗಳನ್ನಿಲ್ಲಿ ನೋಡಬಹದು. ಇದನ್ನೂ ಓದಿ: ಫ್ಯಾಷನ್‍ನಲ್ಲೂ ರಾಷ್ಟ್ರಪ್ರೇಮ ಅಭಿವ್ಯಕ್ತ

    Suits 05

    ಇಟಾಲಿಯನ್ ಸ್ಟೈಲ್‌: ಎರಡು ಪಾಕೆಟ್‌ಗಳಿರೋ ಈ ಸೂಟ್ ಸಾಂಪ್ರದಾಯಿಕ ಲುಕ್ ನೀಡುತ್ತದೆ. ತೆಳ್ಳಗಿದ್ದು ಎತ್ತರವಾಗಿರುವವರಿಗೆ ಇಟಾಲಿಯನ್ ಸೂಟ್ ಒಳ್ಳೆಯ ಲುಕ್ ನೀಡುತ್ತದೆ. ಆದರೆ ಕುಳ್ಳಗಿರುವವರಿಗೆ ಈ ಸೂಟ್ ವಿಚಿತ್ರವಾಗಿ ಕಾಣಿಸುತ್ತದೆ. ಇದನ್ನೂ ಓದಿ: ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ

    ಬ್ರಿಟಿಷ್ ಶೈಲಿಯ ಸೂಟ್: ಯುವಕರಿಗೆ ಎಲೆಗೆಂಟ್ ಲುಕ್ ನೀಡುವುದರ ಜೊತೆಗೆ ಫ್ಯಾಷನೇಬಲ್ ಆಗಿ ಕಾಣಿಸುತ್ತಾರೆ. ಸಾಮಾನ್ಯ ಕಾರ್ಯಕ್ರಮಗಳಿಗೆ ಸಂದರ್ಶನದ ವೇಳೆ ಮತ್ತು ಕಚೇರಿಗೆ ಧರಿಸಬಹುದು. ಇದು ಜಾಕೆಟ್ 3 ಬಟನ್, ಮಧ್ಯಮ ಗಾತ್ರದ ಲಾಪೆಲ್ಸ್ ಮತ್ತು 3 ಹೊರ ಪಾಕೆಟ್‌ಗಳನ್ನು ಹೊಂದಿರುತ್ತದೆ.

    Suits 04

    ಅಮೇರಿಕನ್ ಮಾದರಿಯ ಸೂಟ್: ಈ ಸೂಟ್ ಬಹುಮುಖ ಹೊಂದಿರುತ್ತದೆ. ಅಂದರೆ ಯಾವುದೇ ಸೆಟ್ಟಿಂಗ್‌ಗೂ ಹೊಂದಿಕೊಳ್ಳುತ್ತದೆ. ಯಾವುದೇ ಸಂದರ್ಭಗಳಿಗೆ ಬೇಕಾದರೂ ಪುರುಷರು ಇದನ್ನು ಧರಿಸಬಹುದು.

    ಬ್ರೋಕೇಡ್ ಸೂಟ್: ಸ್ವಲ್ಪ ಗ್ಲಾಮರ್ ಆಗಿ ಕಾಣುವ ಈ ಸೂಟ್ ಭಾರತೀಯ ಕರಕುಶಲ ಶೈಲಿಯನ್ನೇ ಹೋಲುತ್ತದೆ. ಟೀ ಶರ್ಟ್ ಮೇಲೆ ಧರಿಸಿದರೂ ಹೊಂದಿಕೊಳ್ಳುತ್ತದೆ.

    Suits 02

    ವೆಲ್ವೆಟ್ ಸೂಟ್: ವಿಶಾಲ ಭುಜ ವುಳ್ಳವರಿಗೆ ಈ ಸೂಟ್ಸ್ ಪರ್ಫೆಕ್ಟ್, ಪುರುಷರಿಗೆ ಸಾಂಪ್ರದಾಯಿಕ ಸೂಟ್‌ಗಳ ಸ್ಫರ್ಶವನ್ನೇ ಇದು ನೀಡುತ್ತದೆ. ಜ್ಯುವೆಲ್ಸ್ನೊಂದಿಗೆ ಧರಿಸಿದರೆ, ಐಶಾರಾಮಿ ಲುಕ್ ನೀಡುತ್ತದೆ. ಜೊತೆಗೆ ಶೈನ್ ಹೆಚ್ಚಿಸುತ್ತದೆ. ಬಿಸಿಲಿನಲ್ಲಿ ಧರಿಸುವುದು ಸೂಕ್ತವಲ್ಲ.

    ಕ್ಲಾಸಿಕ್ ಬಂದ್ ಗಲಾವ್: ಸಿಕ್ ಬಂಧ್‌ಗಲಾವು ಫಾರ್ಮಲ್ ವೇರ್ ಮತ್ತು ಭಾರತೀಯ ಶೈಲಿಯ ಧಿರಿಸುಗಳಿಗೆ ಹೊಂದಿಕೆಯಾಗುತ್ತದೆ. ಇದು ಹುಡುಗಿಯರನ್ನು ಸೆಳೆಯಲು ಹೆಚ್ಚು ಆಕರ್ಷಣೆ ನೀಡುತ್ತದೆ. ಸಿಟ್‌ಡೌನ್ ಡಿನ್ನರ್ ಪಾರ್ಟಿಗಳಲ್ಲಿ ಹೆಚ್ಚಿನ ಜನರು ಇದನ್ನು ಬಳಸುತ್ತಾರೆ.

  • ಕೆ.ಎಲ್ ರಾಹುಲ್ ಜೊತೆ ಮಗಳ ಮದುವೆಗೆ ಸುನೀಲ್ ಶೆಟ್ಟಿ ಗ್ರೀನ್ ಸಿಗ್ನಲ್

    ಕೆ.ಎಲ್ ರಾಹುಲ್ ಜೊತೆ ಮಗಳ ಮದುವೆಗೆ ಸುನೀಲ್ ಶೆಟ್ಟಿ ಗ್ರೀನ್ ಸಿಗ್ನಲ್

    ಮುಂಬೈ: ಮಗಳು ಅಥಿಯಾ ಶೆಟ್ಟಿ ಮತ್ತು ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮ್ಯಾನ್ ಕೆಎಲ್ ರಾಹುಲ್ ಮದುವೆಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರ ಪ್ರೇಮ ಸಂಬಂಧದ ಗಾಸಿಪ್‍ಗಳು ಬಹಳ ದಿನಗಳಿದ ನಡೆಯುತ್ತಲೇ ಇವೆ. ಅವರ ಲವ್ವಿ-ಡವ್ವಿ ಪೋಸ್ಟ್‌ಗಳು ಸದಾ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತವೆ. ವರದಿಗಳ ಪ್ರಕಾರ, ಪ್ರೇಮಿಗಳು ಈ ವರ್ಷದ ಅಂತ್ಯದೊಳಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಭವಿದ್ದು, ಈ ಕುರಿತು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಸುನೀಲ್ ಶೆಟ್ಟಿ, ನನ್ನ ಆಶೀರ್ವಾದ ಯಾವಾಗಲೂ ಅವರೊಂದಿಗೆ ಇರುತ್ತದೆ ಎಂದು ಶುಭಹಾರೈಸಿದ್ದಾರೆ. ಕಾಲ ಬದಲಾಗಿದೆ ಅವರವರ ಇಚ್ಛೆಗೆ ಅನುಗುಣವಾಗಿ ಏನು ಮಾಡಬೇಕೆಂದು ಅವರೇ ನಿರ್ಧರಿಸುತ್ತಾರೆ. ನನ್ನ ಮಗಳು ಮತ್ತು ಮಗ ಇಬ್ಬರೂ ಜವಾಬ್ದಾರಿಯುತರಾಗಿದ್ದಾರೆ. ಅವರ ಭವಿಷ್ಯದ ನಿರ್ಧಾರ ಅವರೇ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನನ್ನ ಆಶೀರ್ವಾದ ಅವರಿಗೆ ಯಾವಾಗಲೂ ಇರುತ್ತದೆ ಎಂದಿದ್ದಾರೆ. ಇದನ್ನೂ ಓದಿ: `ಟಗರು’ ನಟಿ ಮಾನ್ವಿತಾ ಸ್ನಾತಕೋತ್ತರ ಪದವೀಧರೆ

    ಆಥಿಯಾ ಯುಕೆಯಲ್ಲಿ ರಾಹುಲ್ ಒಟ್ಟಿಗೆ ಸಮಯ ಕಳೆಯುತ್ತಿದ್ದಾಗಿನಿಂದ ಇವರಿಬ್ಬರ ಪ್ರೇಮ ಸಂಬಂಧದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಗಳು ಪ್ರಾರಂಭವಾದವು. ನಂತರ ರಾಹುಲ್ ತನ್ನ ಪ್ರೇಯಸಿಯ ಸಹೋದರ ಅಹಾನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ತಡಪ್‍ನ ಪ್ರೀಮಿಯರ್ ನೈಟ್‍ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ವರದಿಗಳ ಪ್ರಕಾರ ಈ ವರ್ಷದ ಅಂತ್ಯದೊಳಗೆ ದಕ್ಷಿಣ ಭಾರತದ ಸಂಪ್ರದಾಯದಂತೆ ಈ ಕ್ಯೂಟ್ ಜೋಡಿ ಸಪ್ತಪದಿ ತುಳಿಯಲಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ಮಾರ್ಚ್ 15 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಅಥಿಯಾ ತನ್ನ ಪ್ರಿಯಕರ್‌ನನ್ನು ಕರೆದೊಯ್ಯಲು ಬಂದಾಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಐಪಿಎಲ್ 2022ರಲ್ಲಿ ಬಾಲಿವುಡ್ ಮತ್ತು ಕ್ರಿಕೆಟ್ ಅಭಿಮಾನಿಗಳು ಇಬ್ಬರನ್ನು ಒಟ್ಟಿಗೆ ನೋಡಲು ಬಹಳ ಉತ್ಸುಕರಾಗಿದ್ದರು.

  • ತಿರುಪತಿಯಲ್ಲಿ ನಯನತಾರಾ- ವಿಘ್ನೇಶ್ ಶಿವನ್ ಮದುವೆ : ಅದ್ದೂರಿ ಪಾರ್ಟಿ ಚೆನ್ನೈನಲ್ಲಿ

    ತಿರುಪತಿಯಲ್ಲಿ ನಯನತಾರಾ- ವಿಘ್ನೇಶ್ ಶಿವನ್ ಮದುವೆ : ಅದ್ದೂರಿ ಪಾರ್ಟಿ ಚೆನ್ನೈನಲ್ಲಿ

    ಸೌತ್ ಸಿನಿರಂಗದಲ್ಲಿ ಗಲ್ಲಿ ಗಲ್ಲಿಯಲ್ಲೂ ಸೌಂಡ್ ಮಾಡ್ತಿರೋ ಸುದ್ದಿ ಅಂದ್ರೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ವಿಚಾರ. ಸದ್ಯ ಈ ಜೋಡಿ ಹಸೆಮಣೆ ಎರಲು ಸಜ್ಜಾಗಿದ್ದಾರೆ. ಜತೆಗೆ ಚಿತ್ರರಂಗದ ಸ್ನೇಹಿತರಿಗೆ ಚೆನ್ನೈನಲ್ಲಿ ಅದ್ದೂರಿ ಪಾರ್ಟಿ ಕೊಡೋದಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ದಿನಗಣನೆ ಶುರುವಾಗಿದೆ. ಕಳೆದ ಆರು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ಈ ಜೋಡಿ ಮದುವೆ ಎಂಬ ಅಫಿಷಿಯಲ್ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಆರು ವರ್ಷಗಳಿಂದ ಪ್ರೀತಿಸಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಈಗ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆ ಆಗ್ತಿದ್ದಾರೆ. ಈ ಹಿಂದೆ ಡೆಸ್ಟಿನೇಷನ್‌ ವೆಡ್ಡಿಂಗ್‌ ಕುರಿತು ಯೋಚಿಸಿದ್ದ ಈ ಜೋಡಿ, ಈಗ ಸರಳವಾಗಿ ಮದುವೆ ಆಗಲು ನಿರ್ಧರಿಸಿದ್ದಾರೆ.

    ಜೂನ್ 9ರಂದು ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ. ಬಳಿಕ ಚಿತ್ರರಂಗದ ಸ್ನೇಹಿತರಿಗೆಂದೇ ಆರತಕ್ಷತೆ ಮಾಡಲಾಗುತ್ತಿದೆ. ಈ ಪಾರ್ಟಿಯಲ್ಲಿ ಸಮಂತಾ, ವಿಜಯ್‌ ಸೇತುಪತಿ, ರಜನೀಕಾಂತ್‌, ಅಜಿತ್‌, ದಳಪತಿ ವಿಜಯ್‌ ಹೀಗೆ ಸೌತ್‌ ಸಿನಿರಂದ ಸಿನಿ ತಾರೆಯರ ದಂಡೇ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌ ಚನ್ನೈನ ಅದ್ದೂರಿ ಪಾರ್ಟಿಯಲ್ಲಿ ಸಾಕ್ಷಿಯಾಗಲಿದ್ದಾರೆ. ಅದಕ್ಕಾಗಿಯೇ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.ಇದನ್ನೂ ಓದಿ: ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುರಿತು ಸಿನಿಮಾ: ಸಂದೀಪ್ ತಂದೆಯ ಪಾತ್ರದಲ್ಲಿ ಪ್ರಕಾಶ್ ರೈ

    `ಕಾತುವಾಕುಲ ಎರಡು ಕಾದಲ್’ ಚಿತ್ರದ ರಿಲೀಸ್ ವೇಳೆ ಈ ಜೋಡಿ ತಿರುಪತಿಗೆ ಭೇಟಿ ನೀಡಿತ್ತು. ಇದೀಗ ತಮ್ಮ ವೈವಾಹಿಕ ಜೀವನ ಕೂಡ ಇಲ್ಲಿಂದಲೇ ಆರಂಭಿಸಲು ನಯನತಾರಾ ಮತ್ತು ವಿಘ್ನೇಶ್ ಶಿವನ್ ನಿರ್ಧರಿಸಿದೆ.

  • ವರ ಧೋತಿ-ಕುರ್ತಾ ಬದಲು ಶೇರ್ವಾನಿ ಧರಿಸಿದ್ದಕ್ಕೆ ಮದುವೆ ಮನೆಯಾಯ್ತು ರಣರಂಗ

    ವರ ಧೋತಿ-ಕುರ್ತಾ ಬದಲು ಶೇರ್ವಾನಿ ಧರಿಸಿದ್ದಕ್ಕೆ ಮದುವೆ ಮನೆಯಾಯ್ತು ರಣರಂಗ

    ಭೋಪಾಲ್: ವರನೊಬ್ಬ ‘ಧೋತಿ ಕುರ್ತಾ’ ಬದಲು ‘ಶೇರ್ವಾನಿ’ ಧರಿಸಿ ಮದುವೆ ಮನೆಗೆ ಒಂದಿದ್ದಕ್ಕೆ ಗಲಾಟೆ ಸೃಷ್ಟಿಯಾಗಿದೆ.

    ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಮದುವೆ ಮನೆಯಲ್ಲಿ ವರ ‘ಧೋತಿ ಕುರ್ತಾ’ ಬಂದಲು ‘ಶೇರ್ವಾನಿ’ ಹಾಕಿದ್ದಕ್ಕೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ‘ಧೋತಿ ಕುರ್ತಾ’ ಧರಿಸದ ಕಾರಣ ವರ ಮತ್ತು ವಧುವಿನ ಕುಟುಂಬದವರ ನಡುವೆ ವಾಗ್ವಾದ ನಡೆದಿದ್ದು, ಎರಡು ಕಡೆಯವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.  ಇದನ್ನೂ ಓದಿ: ಅಂಗವಿಕಲ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ ವಿಮಾನ ನಿಲ್ದಾಣ ಸಿಬ್ಬಂದಿ – ವೀಡಿಯೋ ವೈರಲ್‌

    ನಡೆದಿದ್ದೇನು?
    ವಧುವಿನ ಕುಟುಂಬವು ವರನು ತಮ್ಮ ಬುಡಕಟ್ಟು ಸಂಪ್ರದಾಯದಂತೆ ಮದುವೆ ವೇಳೆ ‘ಧೋತಿ-ಕುರ್ತಾ’ ಧರಿಸಬೇಕು. ‘ಶೆರ್ವಾನಿ’ ಅಲ್ಲ ಎಂದು ಹೇಳಿದರು. ಆದರೆ ಧಾರ್ ನಗರದ ನಿವಾಸಿಯಾದ ವರ ಸುಂದರ್‌ಲಾಲ್ ಅವರು ಶೆರ್ವಾನಿ ಧರಿಸಿದ್ದ. ಈ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬದವರು ವಾಗ್ವಾದ ಮಾಡಲು ಪ್ರಾರಂಭ ಮಾಡಿದ್ದಾರೆ. ಇದು ಅತಿರೇಕಕ್ಕೆ ಹೋಗಿ ಕಲ್ಲು ತೂರಾಟ ನಡೆದಿದೆ. ಈ ಹಿನ್ನೆಲೆ ಹಲವರಿಗೆ ಗಾಯವಾಗಿದ್ದು, ಆಸ್ಪತ್ರೆ ಸೇರಿದ್ದಾರೆ ಎಂದು ಧಮನೋಡ್ ಪೊಲೀಸ್ ಠಾಣೆ ಪ್ರಭಾರಿ ಸುಶೀಲ್ ಯದುವಂಶಿ ತಿಳಿಸಿದ್ದಾರೆ.

    ಠಾಣೆ ಮುಂದೆ ಪ್ರತಿಭಟನೆ
    ಘಟನೆಯ ನಂತರ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಮನೋದ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ವಧುವಿನ ಸಂಬಂಧಿಕರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಠಾಣೆಯಲ್ಲಿ ಕೆಲವು ಮಹಿಳೆಯರು ಆರೋಪಿಸಿದ್ದಾರೆ.

    ಅಲ್ಲದೇ ಎರಡೂ ಕಡೆಯವರು ಪೊಲೀಸರಿಗೆ ದೂರುಗಳನ್ನು ಸಲ್ಲಿಸಿದರು. ಅದರ ಆಧಾರದ ಮೇಲೆ ಕೆಲವು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 294(ಅಶ್ಲೀಲ ಕೃತ್ಯ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 506(ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ವರ ಸುಂದರ್‌ಲಾಲ್ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದು, ವಧುವಿನ ಕುಟುಂಬದೊಂದಿಗೆ ನಮಗೆ ಯಾವುದೇ ತೊಂದರೆಯಿಲ್ಲ. ಆದರೆ ಆಕೆಯ ಕೆಲವು ಸಂಬಂಧಿಕರು ನಮ್ಮ ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿವಾದವು ಉಡುಪಿನ ಬಗ್ಗೆ ಪ್ರಾರಂಭವಾಯಿತು. ಆದರೆ ಕೊನೆಗೆ ಅದು ತೀವ್ರವಾಯಿತು. ನಮ್ಮ ಮೇಲೆ ಹಲ್ಲೆ ಮತ್ತು ಕಲ್ಲು ತೂರಾಟದಲ್ಲಿ ತೊಡಗಿರುವರ ವಿರುದ್ಧ ಮಾತ್ರ ಕ್ರಮಕೈಗೊಳ್ಳಲು ನಾನು ಬಯಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದ ಮೂವರು ಅರೆಸ್ಟ್ 

    ಆದರೂ ಸಹ ಶನಿವಾರ, ವಧು ಮತ್ತು ವರನ ಕುಟುಂಬಗಳು ಧಾರ್ ನಗರಕ್ಕೆ ತಲುಪಿ ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

  • ಕಿರುತೆರೆ ಖ್ಯಾತ ನಟಿ ದೀಪಾ ಜತೆ ಮೇ.18ಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಾಗರ್ ಪುರಾಣಿಕ್ ಮದುವೆ

    ಕಿರುತೆರೆ ಖ್ಯಾತ ನಟಿ ದೀಪಾ ಜತೆ ಮೇ.18ಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಾಗರ್ ಪುರಾಣಿಕ್ ಮದುವೆ

    ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ, ಖ್ಯಾತ ನಟ ಸುನೀಲ್ ಪುರಾಣಿಕ್ ಪುತ್ರ, ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಾಗರ್ ಪುರಾಣಿಕ್ ಮದುವೆ ಇದೇ ಮೇ 18 ರಂದು ಧಾರವಾಡದಲ್ಲಿ ನಡೆಯಲಿದೆ. ಕಿರುತೆರೆ ಖ್ಯಾತ ನಟಿ ದೀಪಾ ಜಗದೀಶ್ ಜತೆ ಸಾಗರ್ ಅಂದು ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಕಿರುತೆರೆ ಮತ್ತು ಹಿರಿತೆರೆಯ ಸಿಲೆಬ್ರಿಟಿಗಳಿಗೆ ಪುರಾಣಿಕ್ ಕುಟುಂಬ ಆಹ್ವಾನ ಪತ್ರಿಕೆಯನ್ನು ನೀಡಲಾಗುತ್ತಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

    ಸಿನಿಮಾ ಮತ್ತು ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ದೀಪಾ ಜಗದೀಶ್ ಮತ್ತು ಸಾಗರ್ ಪುರಾಣಿಕ ಭೇಟಿಯಾಗಿದ್ದು ‘ಮಹಾಸತಿ’ ಧಾರಾವಾಹಿಯಲ್ಲಿ. ಸ್ನೇಹಿ ಪ್ರೀತಿಗೆ ತಿರುಗಿ ಆನಂತರ ಎರಡೂ ಕುಟುಂಬಗಳು ಒಪ್ಪಿಕೊಂಡು ಅದ್ಧೂರಿಯಾಗಿ ಮದುವೆ ಮಾಡುತ್ತಿವೆ. ಈಗಾಗಲೇ ಈ ಜೋಡಿಯು ಪ್ರಿವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಅವುಗಳು ವೈರಲ್ ಕೂಡ ಆಗಿವೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ಬ್ರಹ್ಮಾಸ್ತ್ರ, ಮಹಾಸತಿ ಮತ್ತು ತೆಲುಗಿನ ಪ್ರೇಮ ಸಾಗರ್ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ದೀಪಾ ಜಗದೀಶ್, ಕ್ರಿಟಿಕಲ್ ಕೀರ್ತನೆಗಳು ಮತ್ತು ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಚಿತ್ರಗಳಲ್ಲೂ ನಟಿಸಿದ್ದಾರೆ. ಬಾಲ್ಯದಿಂದಲೇ ನಟನೆಯ ಬಗೆಗಿನ ಒಲವಿನಿಂದಾಗಿ ಅವರು ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ : ಹಾಲಿವುಡ್‌ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್

    ಕಿರುತೆರೆ ಮತ್ತು ಸಿನಿಮಾ ರಂಗದಲ್ಲಿ ಕಲಾವಿದರಾಗಿ ಮೊದಲು ಗುರುತಿಸಿಕೊಂಡ ಸಾಗರ್ ಪುರಾಣೀಕ್ ಆನಂತರ ನಿರ್ದೇಶನದತ್ತ ಮುಖ ಮಾಡಿದರು. ಅವರು ಕಿರುಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದರೆ, ಇತ್ತೀಚೆಗಷ್ಟೇ ನಿರ್ದೇಶನ ಮಾಡಿರುವ ಡೊಳ್ಳು ಚಿತ್ರಕ್ಕೆ ಹಲವಾರು ಅಂತಾರಾಷ್ಟ್ರೀಯ ಪುರಸ್ಕಾರಗಳು ಬಂದಿವೆ. ಇದನ್ನೂ ಓದಿ : ನಟ ಧನಂಜಯ್ ಗೆ ‘ಅಗ್ನಿ’ ಪರೀಕ್ಷೆ: ಕಾನೂನು ಹೋರಾಟ ಮಾಡ್ತೀನಿ ಅಂತಾರೆ ಜಯರಾಜ್ ಪುತ್ರ

    ಮೇ 18 ರಂದು ಈ ಜೋಡಿ ಸಪ್ತಪದಿ ತುಳಿಯುತ್ತಿದ್ದರೆ, ಮೇ 28ಕ್ಕೆ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಿನಿಮಾ ರಂಗದ ಗಣ್ಯರು, ಕಿರುತೆರೆ ಲೋಕದ ತಾರೆಯರು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಇವರ ವಿವಾಹ ಮುಹೂತ್ಸವದಲ್ಲಿ ಭಾಗಿಯಾಗಲಿದ್ದಾರೆ.

  • ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ

    ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ

    ಪೇಟಾ-ಪರಂಪರೆಯ ಕಿರೀಟ, ಇದನ್ನು ಯಾರು ತಾನೇ ಅರಿಯರು ಹೇಳಿ? ಸಣ್ಣ-ಸಣ್ಣ ಕುಶಲ ಕಲೆಗಾರಿಕೆ, ರತ್ನ-ಖಚಿತದಂತೆ ಹೊಳೆಯುವ ಅಂಚಿನ ಅರಳುಗಳು, ರೇಷ್ಮೆ ಬಟ್ಟೆಯಿಂದ ತಯಾರಿಸಲಾದ ಮದುವೆಯ ಪೇಟಗಳು ಅಬ್ಬಬ್ಬಾ ಹೇಳಿದಷ್ಟೂ ವಿಶೇಷ.

    Rajasthani Turban

    ಇದು ಕೆಲವರಿಗೆ ಪರಂಪರೆಯ ಶ್ರೀಮಂತಿಕೆಯಾದರೆ, ಇನ್ನೂ ಕೆಲವರಿಗೆ ಸಂಸ್ಕೃತಿಯ ಒಂದು ಭಾಗ. ವಧು ಬಂಗಾರದ ಆಭರಣಗಳಿಂದ ತನ್ನನ್ನು ಅಲಂಕರಿಸಿಕೊಳ್ಳುವಂತೆ, ವರನೂ ವಿವಿಧ ಶೈಲಿಯ ಪೇಟಗಳನ್ನು ಧರಿಸಿ ಅಲಂಕಾರ ಮಾಡಿಕೊಳ್ಳುತ್ತಾರೆ. ಆಧುನಿಕತೆಯಲ್ಲಿ ಟ್ರೆಂಡ್ ಬದಲಾದಂತೆ ಪೇಟ ಧರಿಸುವುದೇ ಒಂದು ಹೆಗ್ಗಳಿಕೆಯಾಗಿದೆ. ಮಾರುಕಟ್ಟೆಗಳಲ್ಲಿ, ವಿವಿಧ ಮೊಹಲ್ಲಾಗಳಲ್ಲಿಯೂ ತರಹೇವಾರಿ ಪೇಟಗಳು ಲಗ್ಗೆಯಿಟ್ಟಿದ್ದು, ಯುವಕರು, ಪುರುಷರು ತಮ್ಮಿಷ್ಟದ ಪೇಟಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಳಿಗೆದಾರರೂ ವಿಭಿನ್ನ ವಿನ್ಯಾಸಗಳನ್ನು ಪರಿಚಯಿಸುತ್ತಿದ್ದಾರೆ. ಅವುಗಳ ವಿವಿಧ ಶೈಲಿಗಳನ್ನಿಲ್ಲಿ ನೋಡಬಹುದು. ಇದನ್ನೂ ಓದಿ: ಫ್ಯಾಷನ್‍ನಲ್ಲೂ ರಾಷ್ಟ್ರಪ್ರೇಮ ಅಭಿವ್ಯಕ್ತ

    arwari Turban 01

    1. ರಾಜಸ್ಥಾನಿ ಪೇಟ
    ವಿವಾಹ ಸಮಾರಂಭಗಳಲ್ಲಿ ಬಳಸುವ ಈ ರಾಜಸ್ಥಾನಿ ಪೇಟವು ಇಂದಿಗೂ ಟ್ರೆಂಡ್ ಆಗಿ ಉಳಿದಿದೆ. ವರ ಮಾತ್ರವಲ್ಲದೇ ಇತರ ಪುರುಷರೂ ಧರಿಸುವುದರಿಂದ ಇಂದಿಗೂ ಬೇಡಿಕೆ ಹೆಚ್ಚಾಗಿಯೇ ಇದೆ. ಇಲ್ಲಿನ ಪ್ರತಿಯೊಂದು ಪ್ರದೇಶದಲ್ಲೂ ವಿಭಿನ್ನ ರೀತಿಯ ಪೇಟಗಳನ್ನು ಜನರು ಧರಿಸುತ್ತಾರೆ. ಪ್ರತಿ ಪೇಟಗಳೂ ಆ ಪ್ರದೇಶದ ಸಾಂಸ್ಕೃತಿಕ ಗುರುತನ್ನು ಪ್ರತಿನಿಧಿಸುತ್ತವೆ. ಉಡುಪಿಗೆ ತಕ್ಕ ಶೈಲಿಯನ್ನು ಆಯ್ಕೆ ಮಾಡಿಕೊಂಡರೆ ಒಳಿತು.

    Mewari turban

    2. ಮಾರ್ವಾಡಿ ಪೇಟ
    ರಾಜಸ್ಥಾನ ಮೂಲದ ಮಾರ್ವಾರ್ ಪ್ರದೇಶದಿಂದ ಬಂದಿರುವ ಈ ಪೇಟ ಯುವ ಸಮೂಹದ ಟ್ರೆಂಡ್ ಆಗಿದೆ. ಸಹಜವಾಗಿದ್ದರೂ ವರ್ಣರಂಜಿತವಾಗಿ ಕಾಣುವ ಈ ಪೇಟವನ್ನು ಸಾರ್ಪೇಚ್ ಎಂಬ ಆಭರಣದ ಅಲಂಕಾರಿಕ ಸ್ಪರ್ಶವನ್ನು ಹೊಂದಿರುತ್ತದೆ. ಬಂಧೇಜ್ ಬಟ್ಟೆಯಿಂದ ತಯಾರಿಸುವ ಈ ಪೇಟವನ್ನು ಹೂವಿನ ಮುದ್ರಣ ಶೈಲಿಯಿಂದಲೂ ಸಿಂಗರಿಸಬಹುದು. ನಿಮ್ಮ ಮದುವೆಯ ಸಜ್ಜು ಸರಳವಾಗಿದ್ದರೆ, ಸಾಧಾರಣ ಶೈಲಿಯ ಪೇಟ ಧರಿಸಿದರೂ ಸಾಕು. ಇದನ್ನೂ ಓದಿ: ಸೂಪರ್ ಹಾಟ್ ದೀಪಿಕಾ ಪಡುಕೋಣೆ ತೊಟ್ಟ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    3. ಮೇವಾರಿ ಪೇಟ
    ಮೇವಾರಿ ಮದುವೆ ಪೇಟವು ಹೆಚ್ಚು ವಿಸ್ತಾರವಾಗಿ ಇರುವುದಿಲ್ಲ. ನೀವು(ವರ) ವಧುವಿಗಿಂತಲೂ ಎತ್ತರವಾಗಿದ್ದಲ್ಲಿ ಈ ವಿಧಾನದ ಪೇಟದ ಆಯ್ಕೆಯು ಉತ್ತಮವಾಗಿರಲಿದೆ. ಸಾಮಾನ್ಯ ತಿರುವುಗಳೊಂದಿಗೆ ತೆಳು ಪದರಗಳನ್ನು ಇದು ಹೊಂದಿರಲಿದೆ. ನಿಮ್ಮ ಉಡುಪಿನ ಆಯ್ಕೆಗೆ ತಕ್ಕಂತೆ ಈ ಪೇಟವನ್ನು ಸಜ್ಜುಗೊಳಿಸಲಾಗುತ್ತದೆ. ಇದರಲ್ಲಿರುವ ವರ್ಣರಂಜಿತ ಸಣ್ಣಸಣ್ಣ ಅರಳು ತಲೆ ಮೇಲ್ಭಾಗವನ್ನು ರತ್ನಕಚಿತ ಕಿರೀಟದಂತೆ ಆಕರ್ಷಿಸಲು ಸಹಕರಿಸುತ್ತದೆ.

    Royal Turban 2

    4. ರಾಯಲ್ ಪೇಟ
    ರಾಜಮನೆತನದಿಂದ ಪ್ರೇರಿತವಾದ ಈ ರಾಯಲ್ ವೆಡ್ಡಿಂಗ್ ಟರ್ಬನ್‌ಗಳು ಸಾಮಾನ್ಯವಾಗಿ ಉದ್ದವಾದ ಬಾಲಗಳನ್ನು ಹೊಂದಿರುತ್ತವೆ. ಬಂಧಗಾಲಾ ಮತ್ತು ಜೋಧಪುರಿ ಪ್ಯಾಂಟ್‌ಗಳ ಲುಕ್‌ಗೆ ಸೂಟ್‌ ಆಗುತ್ತದೆ. ವಜ್ರದ ಅರಳಿನ ಆಭರಣವು ಇದಕ್ಕೆ ಮತ್ತಷ್ಟು ಹೊಳಪು ನೀಡುತ್ತದೆ. ತೀರಾ ಅದ್ಧೂರಿಯಾಗಿ ನಡೆಯುವ ವಿವಾಹ ಮಹೋತ್ಸವಗಳಲ್ಲಿ ಹೆಚ್ಚಿನ ಜನರು ಇದನ್ನು ಧರಿಸುತ್ತಾರೆ.

    Marathi Turban 2

    5. ಮರಾಠಿ ಪೇಟ
    ಮರಾಠಿ ಪೇಟ ನಂಬಲಾಗದಷ್ಟು ಗರಿಗರಿಯಾಗಿದೆ. ಈ ಪೇಟವನ್ನು ಎಷ್ಟು ಅಚ್ಚುಕಟ್ಟಾಗಿ ಹೊಂದಿಸಲಾಗಿದೆ ಎಂದರೆ ಅದು ಬಟ್ಟೆಯೇ ಅಥವಾ ಅಚ್ಚು ಮಾಡಿದ ಶಿಲ್ಪವೇ ಎನ್ನುವಷ್ಟು ಅಚ್ಚರಿ ಮೂಡಿಸುತ್ತದೆ.

    MYRURU TURBAN

    6. ಮೈಸೂರು ಪೇಟ
    ಇದು ಹಿಂದೆ ಮೈಸೂರು ಮಹಾಸಂಸ್ಥಾನದ ರಾಜರು ಧರಿಸುತ್ತಿದ್ದ ಸಾಂಪ್ರದಾಯಿಕ ಉಡುಪು. ಮೈಸೂರು ಪೇಟ ಪರಂಪರೆ ಮತ್ತು ಸಾಂಸ್ಕೃತಿಕ ಪೂರ್ವವರ್ತಿಗಳ ಸಂಕೇತವಾಗಿ ಇಂದಿಗೂ ಉಳಿಸಿಕೊಳ್ಳಲಾಗಿದೆ. ಮಹಾರಾಜರ ಭವ್ಯ ಪೋಷಾಕಿನಲ್ಲಿ ಅತಿ ಹೆಚ್ಚು ಘನತೆಯನ್ನು ಪಡೆದಿರುವುದು ಝರಿ ಪೇಟ. ಸಣ್ಣ ಹಾಗೂ ಕುಶಲ ಕಲೆಗಾರಿಕೆ, ಬಣ್ಣ ಬಣ್ಣದ ಅಂಚಿನ ರೇಷ್ಮೆಯ ಬಟ್ಟೆಯಿಂದ ತಯಾರಿಸಲಾದ ಮುಂಡಾಸನ್ನು ಮೈಸೂರು ಪೇಟ ಎಂದು ಕರೆಯಲಾಗುತ್ತದೆ. ಅರಮನೆಯ ರಾಜ ಪರಿವಾರ, ದಿವಾನರು ಹಿರಿಯ ಅಧಿಕಾರಿಗಳು ಈ ಪೇಟವನ್ನು ಧರಿಸುತ್ತಿದ್ದರು. ಇಂದಿಗೂ ಮೈಸೂರಿನ ಒಡೆಯರ್ ವಂಶಸ್ಥರು ಇದನ್ನು ಬಳಸುತ್ತಾರೆ. ಮದುವೆ ಸಮಾರಂಭಗಳಿಗೆ ಮಾತ್ರವಲ್ಲದೆ ಅಭಿನಂದನಾ ಕಾರ್ಯಕ್ರಮಗಳು, ಗಣ್ಯರಿಗೆ ಸ್ವಾಗತ ಕೋರುವ ಸಮಾರಂಭದಲ್ಲಿ ಇದನ್ನು ಬಳಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ದಲೈಲಾಮ, ರಾಹುಲ್‌ಗಾಂಧಿ, ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಹಲವು ಕಾರ್ಯಕ್ರಮಗಳಲ್ಲಿ ಈ ಪೇಟವನ್ನು ಧರಿಸಿದ್ದಾರೆ.

  • ಬೇರೆಯವರೊಂದಿಗೆ ಮದುವೆ ಆಗಿದ್ದಕ್ಕೆ ವಧುವನ್ನೇ ಕೊಂದ ಪ್ರೇಮಿ

    ಬೇರೆಯವರೊಂದಿಗೆ ಮದುವೆ ಆಗಿದ್ದಕ್ಕೆ ವಧುವನ್ನೇ ಕೊಂದ ಪ್ರೇಮಿ

    ಲಕ್ನೋ: ಮದುವೆ ಸಮಾರಂಭದಲ್ಲೇ ಪ್ರೇಮಿಯೊಬ್ಬ ವಧುವನ್ನು ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

    ಮಥುರಾದ ಮುಬಾರಿಕ್‍ಪುರ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಈ ನಡೆದಿದೆ. ಕಾಜಲ್ ಮೃತ ಮಹಿಳೆ. ಹಾಗೂ ಅನಿಶ್ ಆರೋಪಿ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದ ಕಾಜಲ್‍ಳನ್ನು ಅನಿಶ್ ಗುಂಡಿಕ್ಕಿ ಕೊಂದಿದ್ದಾನೆ.

    ಕಾಜಲ್ ಹಾಗೂ ಅನಿಶ್ ಇಬ್ಬರು ಇಷ್ಟಪಡುತ್ತಿದ್ದರು. ಜೊತೆಗೆ ಸಂಬಂಧವನ್ನು ಹೊಂದಿದ್ದರು. ಆದರೆ ಕಾಜಲ್ ಅನಿಶ್‍ನನ್ನು ಬಿಟ್ಟು ಬೇರೆಯೊಬ್ಬನೊಂದಿಗೆ ಮದುವೆಗಿದ್ದರಿಂದ ಆತ ಸಿಟ್ಟಿಗೆದ್ದನು. ನಂತರ ವಿವಾಹ ಸಮಾರಂಭ ನಡೆಯುವ ಸ್ಥಳಕ್ಕೆ ಬಂದು ಅನಿಶ್ ಆಕೆಯನ್ನು ಗುಂಡು ಹಾರಿಸಿದ್ದಾನೆ. ಕಾಜಲ್‍ನ ಎಡಗಣ್ಣಿನ ಬಳಿ ಗುಂಡು ತಾಗಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗುಂಡಿನ ಸದ್ದು ಕೇಳಿದ ಕೂಡಲೇ ಸಮಾರಂಭದಲ್ಲಿ ನೆರದಿದ್ದ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದಾರೆ.

    ಈ ಬಗ್ಗೆ ಕಾಜಲ್ ತಂದೆ ಖುಬಿ ರಾಮ್ ಪ್ರಜಾಪತಿ ಮಾತನಾಡಿ, ವಿವಾಹದ ನಂತರ ರಿಫ್ರೆಶ್ ಆಗಲು ಕೋಣೆಗೆ ಹೋಗಿದ್ದಳು. ಆ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಕೋಣೆಗೆ ಬಂದು ಕಾಜಲ್‍ಗೆ ಗುಂಡಿಕ್ಕಿ ಕೊಂದಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವರ ಅನಕ್ಷರಸ್ಥನೆಂದು ಮಂಟಪದಲ್ಲೇ ಮದುವೆ ನಿಲ್ಲಿಸಿದ ವಧು!

    ಈ ಘಟನೆಗೆ ಸಂಬಂಧಿಸಿ ಖುಬಿ ರಾಮ್ ಪ್ರಜಾಪತಿ ಮಾತನಾಡಿ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಥುರಾದಲ್ಲಿ ಎಸ್‍ಪಿ (ಗ್ರಾಮೀಣ) ಶ್ರೀಶ್ ಚಂದ್ರ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದೇವೆ. ಈ ಕುರಿತು ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತೇವೆ ಎಂದರು. ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿರುವ ಬ್ರಿಟಿಷ್ ಪದ್ಧತಿ ಕೊನೆಯಾಗಬೇಕು: ನಿವೃತ್ತ ಪೊಲೀಸ್ ಸಂದೀಪ್