Tag: wedding

  • ನಟನೆಯಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ `ಮೈನಾ’ ಬ್ಯೂಟಿ ನಿತ್ಯಾ ಮೆನನ್!

    ನಟನೆಯಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ `ಮೈನಾ’ ಬ್ಯೂಟಿ ನಿತ್ಯಾ ಮೆನನ್!

    ಸ್ಯಾಂಡಲ್‌ವುಡ್‌ನ `ಮೈನಾ’ ಬ್ಯೂಟಿ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಿತ್ಯಾ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ವದಂತಿಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಜತೆಗೆ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುವುದರ ಬಗ್ಗೆ ನಿತ್ಯಾ ಮಾತನಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

    ಕನ್ನಡ ಸಿನಿಮಾದಿಂದ ಸಿನಿ ಪಯಣ ಶುರು ಮಾಡಿ, ಸದ್ಯ ಬಹುಭಾಷಾ ನಟಿಯಾಗಿ ಮಿಂಚ್ತಿರುವ ನಿತ್ಯಾ ಮೆನನ್ ಸದ್ಯ ಬಾರಿ ಸುದ್ದಿಯಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳ ಜತೆ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ, ಕಾಣಿಸಿಕೊಳ್ತಿದ್ದಾರೆ. ಇತ್ತೀಚೆಗೆ ನಿತ್ಯಾ ದಕ್ಷಿಣ ಸ್ಟಾರ್ ನಟನನ್ನ ಮದುವೆಯಾಗಲಿದ್ದಾರೆ ಎಂಬ ವದಂತಿಗೆ ವಿಡಿಯೋ ಮೂಲಕ ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

    ನಾನು ಮದುವೆಯಾಗುತ್ತಿಲ್ಲ, ಈ ವಿಚಾರ ಸತ್ಯಕ್ಕೆ ಹತ್ತಿರವಾಗಿಲ್ಲ. ಸದ್ಯ ನನಗೆ ಮದುವೆಯಾಗುವ ಯಾವುದೇ ಆಲೋಚನೆ ಇಲ್ಲ. ಯಾರೋ ಬೇಸರ ಬಂದಿರುವವರು ಆರ್ಟಿಕಲ್ ಬರೆದಿರಬೇಕು ಎಂದು ಹೇಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ನಿತ್ಯಾ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂಬ ವದಂತಿ ಇತ್ತು. ಈ ವಿಚಾರವಾಗಿಯೂ ಮಾತನಾಡಿದ್ದಾರೆ. ಇದನ್ನೂ ಓದಿ:10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲಾ ಎಂದ ತಲೈವಾ: ಮಗಳ ಡಿವೋರ್ಸ್‌ ವಿಚಾರದಲ್ಲಿ ಕುಗ್ಗಿದ್ರಾ ರಜನಿಕಾಂತ್

     

    View this post on Instagram

     

    A post shared by Nithya Menen (@nithyamenen)

    ನಾನು ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತೇನೆ. ಪ್ರತಿ ಸಿನಿಮಾದ ನಂತರ ನಾನು ಬ್ರೇಕ್ ತೆಗೆದುಕೊಳ್ಳುತ್ತೇನೆ. ನನಗೆ ರೋಬೋಟ್ ರೀತಿ ನನಗೆ ಕೆಲಸ ಮಾಡಲು ಬರುವುದಿಲ್ಲ. ಒಂದು ವರ್ಷದಿಂದ ವಿರಾಮವಿಲ್ಲದೇ ಕೆಲಸ ಮಾಡಿದ್ದೇನೆ. ನನ್ನ ನಟನೆಯ ಐದಾರು ಸಿನಿಮಾಗಳು ತೆರೆಗೆ ಬರಲು ರೆಡಿಯಿದೆ. ಹಾಗಾಗಿ ನನಗೆ ವಿರಾಮ ಬೇಕಿದೆ ಎಂದು ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಾಯಕ ಮಿಕಾಸಿಂಗ್‌ಗೆ ಮದುವೆ ಫಿಕ್ಸ್: ಸ್ವಯಂವರದಲ್ಲಿ ಆಯ್ಕೆಯಾದ ವಧು ಇವರೇ

    ಗಾಯಕ ಮಿಕಾಸಿಂಗ್‌ಗೆ ಮದುವೆ ಫಿಕ್ಸ್: ಸ್ವಯಂವರದಲ್ಲಿ ಆಯ್ಕೆಯಾದ ವಧು ಇವರೇ

    ಬಾಲಿವುಡ್‌ನ ಗಾಯಕ ಮೀಕಾ ಸಿಂಗ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಖಾಸಗಿ ರಿಯಾಲಿಟಿ ಶೋ ಮೂಲಕ ಸ್ವಯಂವರದಲ್ಲಿ ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಸ್ವಯಂವರ’ ಕಾರ್ಯಕ್ರಮದಲ್ಲಿ ಗಾಯಕ ಮಿಕಾಸಿಂಗ್ ಭಾಗಿಯಾಗಿದ್ದರು. ಈ ರಿಯಾಲಿಟಿ ಶೋ ಮೂಲಕ ಆಕಾಂಕ್ಷಾ ಪೂರಿ ಎಂಬುವವರನ್ನು ತಮ್ಮ ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಶೋನ ಚಿತ್ರೀಕರಣಗೊಂಡಿದ್ದು, ಸೋಮವಾರ ಪ್ರಸಾರವಾಗಲಿದೆ. ಇದನ್ನೂ ಓದಿ:ಲಂಚಕೊಟ್ಟು ‘ನಂಬರ್ 1’ ನಟಿಯಾದರಂತೆ ನಟಿ ಸಮಂತಾ

    ಇನ್ನು ಆಕಾಂಕ್ಷಾ ಮತ್ತು ಮಿಕಾ ಸಿಂಗ್ ಕಳೆದ 12 ವರ್ಷಗಳಿಂದ ಸ್ನೇಹಿತರು, ಈ ಶೋ ಮೂಲಕ ಹೊಸ ಬಾಳಿಗೆ ನಿಜವಾಗಲೂ ಮುನ್ನುಡಿ ಬರೆಯುತ್ತಾರಾ ಅಥವಾ ಪ್ರಚಾರಕ್ಕಾಗಿ ಸೀಮಿತವಿಟ್ಟು, ತಮ್ಮ ವೈಯಕ್ತಿಕ ಜೀವನದತ್ತ ಗಮನ ನೀಡುತ್ತಾರೆ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ರವಿಚಂದ್ರನ್ ಪುತ್ರ ಮನೋರಂಜನ್ ಮದುವೆಗೆ ವಿಶಿಷ್ಟ ಪತ್ರಿಕೆ ಇಲ್ಲಿದೆ

    ರವಿಚಂದ್ರನ್ ಪುತ್ರ ಮನೋರಂಜನ್ ಮದುವೆಗೆ ವಿಶಿಷ್ಟ ಪತ್ರಿಕೆ ಇಲ್ಲಿದೆ

    ಸ್ಯಾಂಡಲ್‌ವುಡ್ ಕನಸುಗಾರ ರವಿಚಂದ್ರನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮದುವೆಯ ದಿಬ್ಬಣ ಹೊರಡಲು ದಿನಗಣನೆ ಶುರುವಾಗಿದೆ. ಕ್ರೇಜಿಸ್ಟಾರ್ ಹಿರಿಯ ಮಗ ಮನೋರಂಜನ್ ಮದುವೆ ಕೌಂಟ್‌ಡೌನ್ ಶುರುವಾಗಿದ್ದು, ಮದುವೆಯ ವಿಶಿಷ್ಟ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

    ಮನೋರಂಜನ್ ಕೂಡ ಸಾಕಷ್ಟು ಸಿನಿಮಾಗಳ ಮೂಲಕ ಚಂದನವನದಲ್ಲಿ ಗಮನ ಸೆಳೆದಿದ್ದಾರೆ. ಈಗ ತಮ್ಮ ವಯಕ್ತಿಕ ಬದುಕಿನ ವಿಚಾರವಾಗಿ ಸೌಂಡ್ ಮಾಡ್ತಿದ್ದಾರೆ. ಮನೋರಂಜನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸದ್ಯ ಮದುವೆಯ ಇನ್ವಿಟೇಶನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪತ್ರಿಕೆಯಲ್ಲಿ ರವಿಚಂದ್ರನ್ ಅವರ ಫೋಟೋ ಇರುವುದು ಹೈಲೆಟ್ ಆಗಿದೆ.ʻಮುಗಿಲುಪೇಟೆʼ ನಟ ಮನು, ಸಂಗೀತಾ ದೀಪಕ್ ಅವರ ಜತೆ ಹಸೆಮಣೆ ಏರುತ್ತಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ವೈಟ್ ಪೆಟಲ್ಸ್‌ನಲ್ಲಿ ವಿವಾಹ ಸಮಾರಂಭ ಜರುಗಲಿದೆ. ಆಗಸ್ಟ್ 20 ಮತ್ತು 21ರಂದು ಅದ್ದೂರಿಯಾಗಿ ಮದುವೆ ನಡೆಯಲಿದೆ. ಸ್ಯಾಂಡಲ್‌ವುಡ್ ಜತೆ ಪರಭಾಷಾ ಚಿತ್ರರಂಗದ ಸ್ಟಾರ್ಸ್‌ ದಂಡೇ ಈ ಮದುವೆಗೆ ಸಾಕ್ಷಿಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಅನುಷ್ಕಾ ಶೆಟ್ಟಿಗೆ ಕಂಕಣ ಭಾಗ್ಯ: ಮುಂದಿನ ವರ್ಷ ಮದುವೆ ಫಿಕ್ಸ್

    ಅನುಷ್ಕಾ ಶೆಟ್ಟಿಗೆ ಕಂಕಣ ಭಾಗ್ಯ: ಮುಂದಿನ ವರ್ಷ ಮದುವೆ ಫಿಕ್ಸ್

    ನ್ನಡತಿ ಅನುಷ್ಕಾ ಶೆಟ್ಟಿ ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರು. ಸಿನಿಮಾಗಳಲ್ಲಿ ಯಶಸ್ಸು ಕಂಡಿರುವ ನಟಿ ಅದ್ಯಾವ ಮದುವೆ ಆಗುತ್ತಾರೆ ಅಂತಾ ಕಾಯ್ತಿದ್ದ ಅಭಿಮಾನಿಗಳಿಗೆ ಅನುಷ್ಕಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂದಿನ ವರ್ಷ ಹಸೆಮಣೆ ಏರೋದಕ್ಕೆ ಸ್ವೀಟಿ ಸಜ್ಜಾಗಿದ್ದಾರೆ.

    ಅರುಂಧತಿ, ಮಿರ್ಚಿ, ಬಾಹುಬಲಿ, ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಅನುಷ್ಕಾ ಈಗ ವೃತ್ತಿರಂಗದಲ್ಲಿ ಅದ್ಯಾಕೋ ಸೈಲೆಂಟ್ ಆಗಿದ್ದಾರೆ. ಸಿನಿಮಾ ವಿಚಾರದಲ್ಲಿ ಸೆಲೆಕ್ಟೀವ್ ಆಗಿದ್ದಾರೆ. ಸದ್ಯ ನವೀನ್ ಪೋಲಿ ಶೆಟ್ಟಿ ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಚಿತ್ರರಂಗಕ್ಕೆ ಬಂದು 17 ವರ್ಷ ಆಗಿರುವ ಖುಷಿಯಲ್ಲಿ ಹೊಸ ಸಿನಿಮಾದ ಸೆಟ್‌ನಲ್ಲಿ ಕೇಕ್ ಮಾಡಿ, ಸಂಭ್ರಮಿಸಿದ್ದರು. ಈಗ ಹಸೆಮಣೆ ಏರುವ ವಿಚಾರವಾಗಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಸಿನಿಮಾರಂಗಕ್ಕೆ ಗುಡ್ ಬೈ: ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ

    ಅನುಷ್ಕಾಗೆ 40 ವರ್ಷ ಸಮೀಪಿಸುತ್ತಿರುವ ವೇಳೆಯಲ್ಲಿ, ಖ್ಯಾತ ಜ್ಯೋತಿಷಿ ಮದುವೆ ಬಗ್ಗೆ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯದ ಪ್ರಕಾರ ಅನುಷ್ಕಾ ಅವರು ಚಿತ್ರರಂಗದ ವ್ಯಕ್ತಿಯನ್ನು ಮದುವೆಯಾಗಿಲ್ಲ ಎಂದಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಸಂಬಂಧವೇ ಇಲ್ಲದವರನ್ನು ಅನುಷ್ಕಾ ಮದುವೆಯಾಗುವುದು ಖಂಡಿತ ಎಂದಿದ್ದಾರೆ. 2023ರ ಮೊದಲು ಅನುಷ್ಕಾ ಮದುವೆಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಅನುಷ್ಕಾ ಬೆಂಗಳೂರಿನ ಕೈಗಾರಿಕೋದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರಂತೆ. ಗುರು ಹಿರಿಯರು ನಿಗದಿಪಡಿಸಿದ ವರನನ್ನೇ ಅನುಷ್ಕಾ ಮದುವೆ ಆಗೋದು ಖಚಿತವಂತೆ.

    ಮುಂದಿನ ದಿನಗಳಲ್ಲಿ ಅನುಷ್ಕಾ ಮದುವೆ ವಿಚಾರ ನಿಜವಾಗುತ್ತಾ ಅಂತಾ ಅನುಷ್ಕಾ ಕುಟುಂಬದಿಂದ ಅಧಿಕೃತ ಮಾಹಿತಿ ನೀಡುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಹಸೆಮಣೆ ಏರೋಕೆ ಸಜ್ಜಾದ ಬಿಗ್‌ಬಾಸ್ ಸೀಸನ್ 6 ವಿನ್ನರ್ ಶಶಿಕುಮಾರ್

    ಹಸೆಮಣೆ ಏರೋಕೆ ಸಜ್ಜಾದ ಬಿಗ್‌ಬಾಸ್ ಸೀಸನ್ 6 ವಿನ್ನರ್ ಶಶಿಕುಮಾರ್

    ನ್ನಡದ ಡೊಡ್ಮನೆ ಶೋ ʻಬಿಗ್ ಬಾಸ್ ಸೀಸನ್ 6ʼ ಮೂಲಕ ಬೆಳಕಿಗೆ ಬಂದ ಪ್ರತಿಭೆ ಶಶಿಕುಮಾರ್ ಈಗ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

    ಬಿಗ್ ಬಾಸ್ ಮನೆಯ ಮಾಡರ್ನ್ ರೈತ ಎಂದೇ ಫೇಮಸ್ ಆಗಿರುವ ಶಶಿಕುಮಾರ್ ಇದೇ ಆಗಸ್ಟ್ 6 ಹಾಗೂ 7ರಂದು ಬೆಂಗಳೂರಿನಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದೊಡ್ಡ ಬಳ್ಳಾಪುರದ ವಧು ಸ್ವಾತಿ ಎಂಬುವವರ ಕೈ ಹಿಡಿಯಲಿದ್ದಾರೆ. ಕೃಷಿ ಕುಟುಂಬದ ಸ್ವಾತಿ ಇತ್ತೀಚೆಗಷ್ಟೇ ಯುಪಿಎಸ್‌ಸಿ ಪ್ರಿಲಿಮ್ಸ್ ಕೂಡ ಪಾಸ್ ಆಗಲಿದ್ದಾರೆ. ಇದನ್ನೂ ಓದಿ:‘ವಿಕಿಪೀಡಿಯ’ ಹೆಸರಿನಲ್ಲೊಂದು ಸಿನಿಮಾ: ಕಿರುತೆರೆಯಿಂದ ಬೆಳ್ಳಿತೆರೆಗೆ ಯಶವಂತ್ ಎಂಟ್ರಿ

    ಜಿಕೆವಿಕೆ ಕೃಷಿ ವಿದ್ಯಾಲಯದಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಇವರು ನೂತನ ತಂತ್ರಜ್ಞಾನ ಉಪಯೋಗಿಸುವಲ್ಲಿ ಮುಂದು. ಶಶಿಕುಮಾರ್ ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರಾಗಿದ್ದು, ಸದ್ದಿಲ್ಲದೇ ಮದುವೆಯ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ. ಶಶಿ ಈಗ `ಮೆಹಬೂಬ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿರಂಜೀವಿ ಪುತ್ರಿ ಶ್ರೀಜಾಗೆ ಮೂರಲ್ಲ, ನಾಲ್ಕು ಮದುವೆಯಂತೆ!

    ಚಿರಂಜೀವಿ ಪುತ್ರಿ ಶ್ರೀಜಾಗೆ ಮೂರಲ್ಲ, ನಾಲ್ಕು ಮದುವೆಯಂತೆ!

    ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಮಗಳು ಶ್ರೀಜಾ ಮದುವೆಯದ್ದೇ ಸುದ್ದಿ. ಕಲ್ಯಾಣ್ ದೇವ್ ಜತೆ ಶ್ರೀಜಾ ಡಿವೋರ್ಸ್ ವದಂತಿಯ ಬೆನ್ನಲ್ಲೇ ಶಾಕಿಂಗ್ ವಿಚಾರವೊಂದು ಟಿಟೌನ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಚಿರಂಜೀವಿ ಪುತ್ರಿ ಶ್ರೀಜಾ ಮೂರಲ್ಲ, ನಾಲ್ಕು ಮದುವೆ ಆಗುತ್ತಾರೆ ಅಂತಾ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಈಗಾಗಲೇ ಎರಡು ಮದುವೆ ಆಗಿದೆ. ಮೊದಲು ಸಿರೀಶ್ ಜತೆ ಮದುವೆಯಾಗಿದ್ದರು. ಕಾರಣಾಂತರಗಳಿಂದ ಈ ಮದುವೆ ಮುರಿದು ಬಿತ್ತು. ಬಳಿಕ ಮನೆಯಲ್ಲಿ ನಿಶ್ಚಿಯಿಸಿದ ವರ ಕಲ್ಯಾಣ್ ದೇವ್ ಅವರನ್ನ ಶ್ರೀಜಾ ಮದುವೆಯಾಗಿದ್ದರು. ಇದೀಗ ಈ ಸಂಬಂಧವೂ ಕೂಡ ಡಿವೋರ್ಸ್ ಆಗಿದೆ ಎಂಬ ವದಂತಿಯ ಬೆನ್ನಲ್ಲೇ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಶ್ರೀಜಾ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ:ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರಾ ‘ಮೈನಾ’ ಹುಡುಗಿ ನಿತ್ಯಾ ಮೆನನ್?

    ಕಲ್ಯಾಣ್ ದೇವ್‌ಗೆ ಡಿವೋರ್ಸ್ ನೀಡಿದ್ದಾರೆ ಎಂಬ ವದಂತಿಯಿದೆ. ಮೂರನೇ ಮದುವೆಗೆ ರೆಡಿಯಾಗಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಮೂರಲ್ಲ, ಶ್ರೀಜಾಗೆ ನಾಲ್ಕು ಮದುವೆಯಾಗುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ. ಶ್ರೀಜಾ ಜಾತಕದ ಪ್ರಕಾರ ಈಕೆಗೆ ನಾಲ್ಕು ಮದುವೆಯಾಗುತ್ತದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ್‌ಗೂ ನಾಲ್ಕು ಮದುವೆಯಾಗುತ್ತದೆ ಎಂದು ವೇಣು ಸ್ವಾಮಿ ಹೇಳಿಕೆ ನೀಡಿದ್ದರು. ಅಷ್ಟಕ್ಕೂ ಈ ಸುದ್ದಿ ನಿಜವಾಗುತ್ತ ಅಂತಾ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಯಾದ 3 ದಿನದವರೆಗೆ ಈ ದೇಶದಲ್ಲಿ ವಧು, ವರ ಟಾಯ್ಲೆಟ್‍ಗೆ ಹೋಗುವಂತಿಲ್ಲ!

    ಮದುವೆಯಾದ 3 ದಿನದವರೆಗೆ ಈ ದೇಶದಲ್ಲಿ ವಧು, ವರ ಟಾಯ್ಲೆಟ್‍ಗೆ ಹೋಗುವಂತಿಲ್ಲ!

    ಜಕಾರ್ತ: ಸಾಮಾನ್ಯವಾಗಿ ಮದುವೆ ಸಮಯದಲ್ಲಿ ಹಾಗೂ ಮದುವೆಯ ನಂತರ ವಧು, ವರನಿಗೆ ಹಿರಿಯರು ಹಲವಾರು ಶಾಸ್ತ್ರಗಳನ್ನು ಮಾಡುವುದನ್ನು ನಾವು ನೋಡಿರುತ್ತೇವೆ. ಒಂದೊಂದು ಧರ್ಮದಲ್ಲೂ ಹಲವಾರು ವಿಭಿನ್ನ ಸಂಪ್ರದಾಯ, ಆಚಾರ-ವಿಚಾರಗಳಿರುತ್ತದೆ. ಆದರೆ ಇಲ್ಲೊಂದು ದೇಶದಲ್ಲಿ ಹೊಸದಾಗಿ ಮದುವೆಯಾದ ನವ ದಂಪತಿಗಳು 3 ದಿನ ಕಳೆಯುವವರೆಗೂ ಶೌಚಾಲಯಕ್ಕೆ ಹೋಗಬಾರದೆಂದು ತಡೆಯಲಾಗುತ್ತದೆ. ಅಷ್ಟಕ್ಕೂ ಇದರ ಹಿಂದಿನ ಅಸಲಿ ಸತ್ಯ ಕೇಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಾ.

    ಹೌದು, ಇಂಡೋನೇಷ್ಯಾದ ಡಿಡಾಂಗ್ ಎಂಬ ಸಮುದಾಯದಲ್ಲಿ ಮದುವೆಯಾದ 3 ದಿನದವರೆಗೂ ವಧು, ವರ ಶೌಚಾಲಯಕ್ಕೆ ತೆರಳುವಂತಿಲ್ಲ. ವಿವಾಹ ನಂತರ ಒಂದು ವೇಳೆ ವಧು-ವರರು ಶೌಚಾಲಯಕ್ಕೆ ಹೋದರೆ, ಅವರ ಶುದ್ಧತೆಗೆ ಭಂಗವುಂಟಾಗುತ್ತದೆ ಮತ್ತು ಅವರು ಅಶುದ್ಧರಾಗುತ್ತಾರೆ ಎಂಬ ಭಾವನೆ ಇದೆ. ಹೀಗಾಗಿ ಮದುವೆಯ ಸಮಯದಲ್ಲಿ ಅಥವಾ ನಂತರ ವಧು-ವರರು ಶೌಚಾಲಯಕ್ಕೆ ಹೋಗುವಂತಿಲ್ಲ. ಇದನ್ನೂ ಓದಿ: ಚುನಾವಣೆಯಲ್ಲಿ ಸೋತ – ಎಲೆಕ್ಷನ್‌ನಲ್ಲಿ ಹಂಚಿದ್ದ ಹಣ ಹಿಂದಿರುಗಿಸುವಂತೆ ಜನರನ್ನು ಪೀಡಿಸುತ್ತಿದ್ದವನ ವಿರುದ್ಧ FIR

    ಮತ್ತೊಂದೆಡೆ ಮಲವಿಸರ್ಜನೆ ಮಾಡುವ ಸ್ಥಳದಲ್ಲಿ ಕೊಳಕು ಇರುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವವಿರುತ್ತದೆ. ಈ ವೇಳೆ ಶೌಚಾಲಯಕ್ಕೆ ಹೋದರೆ ವಧುವರರ ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ ಎಂದು 3 ದಿನಗಳವರೆಗೆ ಶೌಚಾಲಯಕ್ಕೆ ಹೋಗಲು ಅವಕಾಶ ನೀಡುವುದಿಲ್ಲ. ಅಲ್ಲದೇ ಮದುವೆ ಸಮಯದಲ್ಲಿ ವಧು-ವರರಿಗೆ ಊಟ-ನೀರನ್ನು ಕೂಡ ನೀಡುವುದು ಬಹಳ ಕಡಿಮೆ, ಕಾರಣ ಇದರಿಂದ ಅವರು ಶೌಚಾಲಯಕ್ಕೆ ಹೋಗುವ ಅವಶ್ಯಕತೆ ಬರದಂತೆ ನೋಡಿಕೊಳ್ಳಲಾಗುತ್ತದೆ.

    ಇಂಡೋನೇಷ್ಯಾದಲ್ಲಿ ಬಹಳ ಕಟ್ಟುನಿಟ್ಟಾಗಿ ಆಚರಿಸುವ ಈ ಆಚರಣೆಯನ್ನು ಯಾರಾದರೂ ಒಂದು ವೇಳೆ ಪಾಲನೆ ಮಾಡದೇ ಇದ್ದರೆ, ಇದನ್ನು ಅಪಶಕುನ ಎಂದು ಭಾವಿಸಲಾಗುತ್ತದೆ. ಇದನ್ನೂ ಓದಿ: ಪಶ್ಚಿಮ ಘಟ್ಟ ಕರಡು ಅಧಿಸೂಚನೆಗೆ ಭಾರೀ ವಿರೋಧ – ಜುಲೈ 18ಕ್ಕೆ ಮಲೆನಾಡು ಶಾಸಕರ ಸಭೆ

    Live Tv
    [brid partner=56869869 player=32851 video=960834 autoplay=true]

  • ಮದುವೆಯಲ್ಲಿ ಸ್ನೇಹಿತರಿಂದ ಥಳಿತಕ್ಕೊಳಗಾದ ವಕೀಲ- ಮನನೊಂದು ಆತ್ಮಹತ್ಯೆ

    ಮದುವೆಯಲ್ಲಿ ಸ್ನೇಹಿತರಿಂದ ಥಳಿತಕ್ಕೊಳಗಾದ ವಕೀಲ- ಮನನೊಂದು ಆತ್ಮಹತ್ಯೆ

    ಲಕ್ನೋ: ಮದುವೆಯೊಂದರಲ್ಲಿ ಸ್ನೇಹಿತರೊಂದಿಗೆ ನಡೆದ ಜಗಳದಲ್ಲಿ ಥಳಿತಕ್ಕೊಳಗಾದ ವಕೀಲನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಆಶಿಶ್ ತ್ಯಾಗಿ(27) ಆತ್ಮಹತ್ಯೆಗೆ ಶರಣಾದ ವಕೀಲ. ಗಾಜಿಯಾಬಾದ್‍ನ ಜಿಲ್ಲಾ ನ್ಯಾಯಾಲಯದಲ್ಲಿ ಅಭ್ಯಾಸ ನಡೆಸುತ್ತಿದ್ದ ಆಶಿಶ್ ತ್ಯಾಗಿ ಮನೆಯಲ್ಲಿ ಒಬ್ಬರೇ ಇದ್ದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆತನ ತಂದೆ ಮತ್ತು ಸಹೋದರಿ ಊರಿಗೆ ಹೋಗಿದ್ದರು.

    ಮದುವೆ ಸಮಾರಂಭದಲ್ಲಿ ಆಶೀಶ್ ಹಾಗೂ ಆತನ ಸ್ನೇಹಿತರ ನಡುವೆ ವಾಗ್ವಾದ ಮಿತಿಮೀರಿದ್ದು, ಆತನ ಸ್ನೇಹಿತರು ಆಶಿಶ್‍ನನ್ನು ಥಳಿಸಿ ಅವನ ಬಳಿ ಇದ್ದ ಚಿನ್ನಾಭರಣವನ್ನು ದೋಚಿದ್ದಾರೆ. ಆನಂತರ ಆತನ ಸ್ನೇಹಿತರೇ ಅವನನ್ನು ಮನೆಗೆ ಬಿಟ್ಟು ಹೋಗಿದ್ದಾರೆ. ಇದರಿಂದ ಮನನೊಂದ ಆಶಿಶ್ ಸ್ನೇಹಿತನಿಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಆಶಿಶ್ ತಂದೆ ರಾಕೇಶ್ ತ್ಯಾಗಿ ಮಾತನಾಡಿ, ಊರಿನಿಂದ ಬಂದ ನಂತರ ಹಲವು ಬಾರಿ ಬಾಗಿಲನ್ನು ಬಡಿದ್ದೆವು. ಆದರೆ ಯಾರೂ ಬಾಗಿಲನ್ನು ತೆರೆಯಲಿಲ್ಲ. ಇದರಿಂದಾಗಿ ಮನೆಯ ಕಿಡಿಕಿಯನ್ನು ಒಡೆದಾಗ ಆಶೀಶ್ ಮಲಗಿದ್ದ ಹಾಸಿಗೆ ರಕ್ತಸಿಕ್ತವಾಗಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೇ ತಲೆಗೆ ಗುಂಡು ತಗುಲಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದರು. ಇದನ್ನೂ ಓದಿ: ಮೂಲ ಕಾಂಗ್ರೆಸ್ಸಿಗರಿಗೆ ಚಾಕರಿ ಮಾಡುವ ಸುಯೋಗ ಸಿದ್ದರಾಮಯ್ಯಗೆ ಬಂದಿದೆ – ಕಾಲೆಳೆದ ಬಿಜೆಪಿ

    POLICE JEEP

    ಅಷ್ಟೇ ಅಲ್ಲದೇ ಆಶಿಶ್ ಮದುವೆಯೊಂದರಲ್ಲಿ ನಡೆದ ಗಲಾಟೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಆಶಿಶ್ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾವು ಎಲ್ಲಾ ರೀತಿಯ ತನಿಖೆಯನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರೆಷ್ಟು ದಿನ ಕೆಲಸ ಮಾಡ್ತಾರೆ, ನೀವೇ ಅಂಗಡಿಗಳಲ್ಲಿ ಪಿಸ್ತೂಲ್ ಇಟ್ಟುಕೊಳ್ಳಿ – ವಿಕ್ರಮ್ ಸೈನಿ ವಿವಾದತ್ಮಕ ಹೇಳಿಕೆ

    Live Tv
    [brid partner=56869869 player=32851 video=960834 autoplay=true]

  • ನಿತ್ಯಾನಂದನನ್ನ ಮದುವೆ ಆಗೋಕೆ ರೆಡಿ ಎಂದ ನಟಿ: ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ ಪ್ರಿಯಾ ಆನಂದ್

    ನಿತ್ಯಾನಂದನನ್ನ ಮದುವೆ ಆಗೋಕೆ ರೆಡಿ ಎಂದ ನಟಿ: ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ ಪ್ರಿಯಾ ಆನಂದ್

    ಲಯಾಳಂ ಸ್ಟಾರ್ ನಟಿ ಪುನೀತ್ ನಾಯಕಿ ಪ್ರಿಯಾ ಆನಂದ್ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಮೆರಿಕಾದಲ್ಲಿ ಬೆಳೆದ ಈ ಚೆಲುವೆ ಬಹುಭಾಷಾ ನಟಿ ಎಂದೇ ಫೇಮಸ್ ಆಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರೊಂದಿಗೆ `ಜೇಮ್ಸ್’ ಸೇರಿದಂತೆ ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಯೂ ಇವರದ್ದು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಿಯಾ ಆನಂದ್ ತಮ್ಮ ಮದುವೆಯ ಬಗ್ಗೆ ಕೆಲವು  ಮಾತುಗಳನ್ನು ಆಡಿದ್ದಾರೆ.

    ತಮ್ಮ ಮದುವೆ ಕುರಿತಂತೆ ಮಾತನಾಡಿರುವ ಪ್ರಿಯಾ, ದೇಶಬಿಟ್ಟು, ತಮ್ಮದೇ ದೇಶವೊಂದನ್ನು ನಿರ್ಮಿಸಿರುವ, ಬಿಡದಿಯ ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದೇನೆ ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಿತ್ಯಾನಂದ ಸ್ವಾಮಿಯನ್ನು ಸಾವಿರಾರು ಭಕ್ತರು ಪೂಜಿಸುತ್ತಾರೆ. ನಾನು ಅವರನ್ನು ಮದುವೆಯಾದರೆ, ನಾನು ನನ್ನ ಹೆಸರನ್ನು ಸಹ ಬದಲಾಯಿಸಬೇಕಾಗಿಲ್ಲ ಎಂದಿದ್ದಾರೆ. ಈ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಜೇಮ್ಸ್ ನಾಯಕಿ ಈ ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ ‘ಜೇಮ್ಸ್’ ಚೆಲುವೆ ಪ್ರಿಯಾ ಆನಂದ್

    ನಾನು ಈ ಹೇಳಿಕೆ ನೀಡಿ ಒಂದು ವಾರ ಕಳೆದಿದೆ. ಆದರೆ, ನಾನು ಹೇಳಿಕೆ ನೀಡಿರುವುದು ಕೇವಲ ತಮಾಷೆಗಾಗಿ ಅಷ್ಟೇ ನಿತ್ಯಾನಂದ ಬಗ್ಗೆ ಮಾಡೋ ಟ್ರೋಲ್ಸ್, ಮಿಮ್ಸ್, ವಿಡಿಯೋಗಳು ನನಗೆ ತುಂಬಾ ಇಷ್ಟ. ನಾನು ಮದುವೆ ಆಗುತ್ತೀನಿ ಎಂದಿದ್ದು ಜಸ್ಟ್ ಕಾಮಿಡಿ ಎಂದು ಪ್ರಿಯಾ ಆನಂದ್ ಸ್ಪಷ್ಟನೆ ನೀಡಿದ್ದಾರೆ. ಇದನ್ನು ದೊಡ್ಡದು ಮಾಡೋ ಅಗತ್ಯವಿಲ್ಲ ಎಂದು ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೀರಿನ ಸಮಸ್ಯೆ ಬಗೆಹರಿಯೋವರೆಗೂ ಹನಿಮೂನ್‌ಗೆ ಹೋಗಲ್ಲ – ಮಾವನಿಂದ ಟ್ಯಾಂಕರ್‌ ಪಡೆದ ವರನ ಪ್ರತಿಜ್ಞೆ!

    ನೀರಿನ ಸಮಸ್ಯೆ ಬಗೆಹರಿಯೋವರೆಗೂ ಹನಿಮೂನ್‌ಗೆ ಹೋಗಲ್ಲ – ಮಾವನಿಂದ ಟ್ಯಾಂಕರ್‌ ಪಡೆದ ವರನ ಪ್ರತಿಜ್ಞೆ!

    ಬೆಳಗಾವಿ: ಯುವಕನೊಬ್ಬ ತನ್ನ ಮದುವೆ ವೇಳೆ ಮಾವನ ಬಳಿ ಟ್ಯಾಂಕರ್ ಬೇಡಿಕೆ ಇಟ್ಟು ಪಾಲಿಕೆ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನೀರಿನ ಬವಣೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ವಿಶಾಲ್ ಎಂಬಾತ ತನ್ನ ಮದುವೆ ವೇಳೆ ಪಾಲಿಕೆ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿದ್ದಾನೆ. ಹೆಣ್ಣು ಕೊಟ್ಟ ಮಾವನಿಂದ ವಿಶಾಲ್ ಟ್ಯಾಂಕರ್ ಕೊಡಿಸಿಕೊಂಡಿದ್ದಾನೆ. ಅದರ ಮೇಲೆ ನೀರಿನ ಸಮಸ್ಯೆ ಬಗೆಹರಿಯುವವರೆಗೂ ಹನಿಮೂನ್‍ಗೆ ಹೋಗಲ್ಲ ಎಂದು ಬರೆದಿದ್ದಾನೆ. ನಂತರ ಅದೇ ಟ್ಯಾಂಕರ್ ಮೇಲೆ ಕುಳಿತು ನೂತನ ದಂಪತಿ ಕೊಲ್ಲಾಪುರದಲ್ಲಿ ಮೆರವಣಿಗೆ ಹೋಗಿದ್ದಾರೆ. ಈ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: BBMP ಯಮ ಸ್ವರೂಪಿ ಕಸದ ಲಾರಿಗೆ ಮತ್ತೊಂದು ಬಲಿ – ಅಪಘಾತದಲ್ಲಿ ಮಹಿಳೆ ಸಾವು

    ಕೊಲ್ಲಾಪುರದ ಮಂಗಳವಾರ ಪೇಟೆಯಲ್ಲಿ ಕಳೆದ 6 ತಿಂಗಳಿಂದ ನೀರಿನ ಸಮಸ್ಯೆ ಇದೆ. ಸಮರ್ಪಕ ನೀರು ಪೂರೈಕೆಗೆ ನವದಂಪತಿ ವಿಶಾಲ್ ಹಾಗೂ ಅಪರ್ಣಾ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾವನಿಗೆ ಮದುವೆ ಸಂದರ್ಭದಲ್ಲಿ ನೀರಿನ ಟ್ಯಾಂಕರ್‌ ಕೊಡಿ ಎಂದು ವಿಶಾಲ್ ಬೇಡಿಕೆ ಇಟ್ಟಿದ್ದ. ಅಳಿಯನ ಬೇಡಿಕೆಯಂತೆ ನೀರಿನ ಟ್ಯಾಂಕರ್ ಗಿಫ್ಟ್ ನೀಡಿದ್ದಾರೆ. ಟ್ಯಾಂಕರ್ ಮೇಲೆ ಕುಳಿತು ನವ ದಂಪತಿ ಅದ್ಧೂರಿ ಮೆರವಣಿಗೆ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿ ಮನೆಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು

    Live Tv
    [brid partner=56869869 player=32851 video=960834 autoplay=true]