Tag: wedding

  • ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ಅಸಲಿ ಕಾರಣ ತಿಳಿಸಿದ `ಕೆಜಿಎಫ್ 2′ ನಟಿ

    ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ಅಸಲಿ ಕಾರಣ ತಿಳಿಸಿದ `ಕೆಜಿಎಫ್ 2′ ನಟಿ

    ಬಾಲಿವುಡ್‌ನ (Bollywood) 90ರ ದಶಕದಲ್ಲಿ ತೆರೆಮೇಲೆ ಅಕ್ಷಯ್ ಕುಮಾರ್- ರವೀನಾ ಟಂಡನ್ (Raveena Tandon) ಜೋಡಿ ಕಮಾಲ್ ಮಾಡಿದ್ದರು. ತೆರೆಯ ಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡ ಇಬ್ಬರೂ ಪ್ರೀತಿಸುತ್ತಿದ್ದರು. ಇಬ್ಬರ ಲವ್ವಿ-ಡವ್ವಿ ಮದುವೆ ಹಂತದವೆರೆಗೂ ಬಂದು ಮುರಿದು ಬಿದ್ದಿತ್ತು. ಇದೀಗ ಈ ಬಗ್ಗೆ `ಕೆಜಿಎಫ್ 2′ (KGF 2) ನಟಿ ರವೀನಾ ಮೌನ ಮುರಿದ್ದಾರೆ.

    1994ರಲ್ಲಿ `ಮೊಹ್ರಾ’ ಎಂಬ ಸಿನಿಮಾದಲ್ಲಿ ಅಕ್ಷಯ್ ಕುಮಾರ್ (Akshay Kumar) ಮತ್ತು ರವೀನಾ ಜೋಡಿಯಾಗಿ ನಟಿಸಿದ್ದರು. ಚಿತ್ರದಲ್ಲಿ `ಟಿಪ್ ಟಿಪ್ ಬರ್ಸಾ ಪಾನಿ’ ಹಾಡು ಅಂದು ಪಡ್ಡೆಹುಡುಗರ ನಿದ್ದೆಗೆಡಿಸಿತ್ತು. ಈ ಜೋಡಿಯ ಕೆಮಿಸ್ಟ್ರಿಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದರು. ಇಬ್ಬರಿಗೂ ಒಂದೊಳ್ಳೆ ಜನಪ್ರಿಯತೆ ಕೂಡ ಈ ಸಿನಿಮಾ ತಂದುಕೊಟ್ಟಿತ್ತು. ತೆರೆಹಿಂದೆ ಸತಿ-ಪತಿಗಳಾಗಿ ಹೊಸ ಬಾಳಿಗೆ ಕಾಲಿಡಲು ಎಲ್ಲಾ ತಯಾರಿಯಾಗಿತ್ತು. ಹಲವು ಡೇಟಿಂಗ್‌ಗೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಈ ಸಂಬಂಧಕ್ಕೆ ಬ್ರೇಕ್ ಬಿದ್ದಿತ್ತು.

    ಈಗ ಅಕ್ಷಯ್ ಜೊತೆಗಿನ ನಿಶ್ಚಿತಾರ್ಥ ಬ್ರೇಕಪ್ (Breakup) ಈ ಬಗ್ಗೆ ರವೀನಾ ಮಾತನಾಡಿದ್ದಾರೆ. ಎಲ್ಲರೂ ಮುಂದೆ ಸಾಗಿದ್ದಾರೆ ಆದರೆ ಜನರು ಮಾತ್ರ ಇನ್ನೂ ಮುರಿದ ನಿಶ್ಚಿತಾರ್ಥದ (Engagement) ಬಗ್ಗೆಯೇ ಯಾಕೆ ಮಾತನಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಆ ಸಮಯದಲ್ಲಿ ಬ್ರೇಕಪ್‌ನಿಂದ ಹೊರಬರಲು ತನಗೆ ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ. ಒಮ್ಮೆ ನಾನು ಅವರ ಜೀವನದಿಂದ ಹೊರಬಂದ ಬಳಿಕ ಮತ್ತೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಅವರು ಕೂಡ ಆಗಲೇ ಬೇರೆ ಯುವತಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ಹಾಗಿದ್ದ ಮೇಲೆ ಅಸೂಯೆ ಎಲ್ಲಿಂದ ಬರುತ್ತೆ ಎಂದು ರವೀನಾ ಮಾತನಾಡಿದ್ದಾರೆ. ಇದನ್ನೂ ಓದಿ: ಹೊಸ ಕಥೆ ಇದ್ದರೆ ಜನ ಒಪ್ಪಿಕೊಳ್ತಾರೆ, `ಕಾಂತಾರ’ ಸಕ್ಸಸ್ ಬಗ್ಗೆ ಕಿಚ್ಚನ ಮಾತು

    ನಾವು `ಮೊಹ್ರಾ’ ಸಮಯದಲ್ಲಿ ಹಿಟ್ ಪೇರ್ ಆಗಿದ್ದೆವು. ಈಗಲೂ ನಾವು ಭೇಟಿಯಾಗುತ್ತೇವೆ. ಮಾತನಾಡುತ್ತೇವೆ. ನಾವು ಮುಂದೆ ಸಾಗಿದ್ದೇವೆ. ಅನೇಕರು ವಿಚ್ಛೇದನ ಪಡೆದಿದ್ದಾರೆ ಅವರೂ ಮೂವ್ ಆನ್ ಆಗಿದ್ದಾರೆ. ಅದೇನು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.

    ಇನ್ನೂ ಅಕ್ಷಯ್ ಕುಮಾರ್ (Akshay Kumar) ಅವರು ಟ್ವಿಂಕಲ್ ಖನ್ನಾ (Twinkle Khanna) ಜೊತೆ ವೈವಾಹಿಕ ಬದುಕಿನಲ್ಲಿ ಖುಷಿಯಾಗಿದ್ದಾರೆ. ಇಬ್ಬರೂ ಮಕ್ಕಳು ಕೂಡ ಇದ್ದಾರೆ. ನಟಿ ರವೀನಾ ಅವರು ಉದ್ಯಮಿ ಅನಿಲ್ ಥಡಾನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ

    ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ

    ಬಾಲಿವುಡ್‌ನ (Bollywood) ಮುದ್ದಾದ ಜೋಡಿ ಸಿದ್ಧಾಥ್ ಮಲ್ಹೋತ್ರಾ (Siddarth Malhotra)-ಕಿಯಾರಾ ಅಡ್ವಾಣಿ (Kiara Advani) ಫೆ.7ರಂದು ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟರು. ಈ ಬೆನ್ನಲ್ಲೇ ಸಿದ್ ದಂಪತಿಯ ಮದುವೆ ಪತ್ರಿಕೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಸಿದ್- ಕಿಯಾರಾ ಲವ್ (Love) ಬಗ್ಗೆ ಗಾಸಿಪ್ ಕೇಳಿ ಬರುತ್ತಲೆ ಇತ್ತು. ಆದರೆ ತುಟಿಕ್ ಪಿಟಿಕ್ ಎನ್ನದೇ ಸೈಲೆಂಟ್ ಆಗಿದ್ದರು. ಈಗ ನೇರವಾಗಿ ಮದುವೆ ಫೋಟೋ ಹಂಚಿಕೊಂಡು ಈ ಜೋಡಿ ಸಂಭ್ರಮಿಸಿದ್ದಾರೆ. ಈಗ ನಮ್ಮ ಪರ್ಮನೆಂಟ್ ಬುಕ್ಕಿಂಗ್ ಆಗಿದೆ. ನಮ್ಮ ಪ್ರೀತಿ ಹಾಗೂ ಮುಂದಿನ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ ಎಂದು ಕಿಯಾರಾ ಹಾಗೂ ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಶರಣ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ಅಮೃತಾ ಅಯ್ಯಂಗಾರ್

    ಸೆಲೆಬ್ರಿಟಿ ಜೋಡಿಗೆ ಅಭಿಮಾನಿಗಳಿಂದ ಸಿನಿಮಾರಂಗದ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಬೆನ್ನಲ್ಲೇ ಸಿದ್ ದಂಪತಿಯ ಮದುವೆ ಪತ್ರಿಕೆ ಹೇಗಿತ್ತು ಎಂಬುದು ಕೂಡ ರಿವೀಲ್ ಆಗಿದೆ.

     

    View this post on Instagram

     

    A post shared by KIARA (@kiaraaliaadvani)

    ಸಿದ್ಧಾರ್ಥ್ -ಕಿಯಾರಾ ಮದುವೆ ಪತ್ರಿಕೆ (Wedding Invitation) ಸರಳವಾಗಿ ಮೂಡಿ ಬಂದಿದೆ. ಪತ್ರಿಕೆ ಸುತ್ತ ಬ್ಲ್ಯಾಕ್ ಮತ್ತು ಕಂದು ಬಣ್ಣದಲ್ಲಿ ಡಿಸೈನ್ ಮಾಡಲಾಗಿದೆ. ಮಧ್ಯಭಾಗದಲ್ಲಿ ಜೋಡಿಯ ಮೊದಲ ಅಕ್ಷರವನ್ನು ಕೆ ಮತ್ತು ಎಸ್ ಅನ್ನು ಹೈಲೈಟ್ ಮಾಡಲಾಗಿದೆ. ಫೆ.5ರಿಂದ 7ರವರೆಗೆ ಮದುವೆ ಸಂಭ್ರಮವಾಗಿದ್ದು, ಸೂರ್ಯಗಢ ಜೈಸಲ್ಮೇರ್‌ನಲ್ಲಿ ಮದುವೆ ಎಂಬುದನ್ನ ಬರೆಯಲಾಗಿದೆ. ಸದ್ಯ ಸಿದ್-ಕಿಯಾರಾ ಮದುವೆ ಫೋಟೋ ಮತ್ತು ಪತ್ರಿಕೆ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೋಟ್ಯಧಿಪತಿಯನ್ನ ಮದುವೆ ಆಗಿದ್ದೀರಾ ಅನ್ನೋರಿಗೆ ಅದಿತಿ ಪ್ರಭುದೇವ ಖಡಕ್ ಉತ್ತರ

    ಕೋಟ್ಯಧಿಪತಿಯನ್ನ ಮದುವೆ ಆಗಿದ್ದೀರಾ ಅನ್ನೋರಿಗೆ ಅದಿತಿ ಪ್ರಭುದೇವ ಖಡಕ್ ಉತ್ತರ

    ಸ್ಯಾಂಡಲ್‌ವುಡ್ (Sandalwood) ನಟಿ ಅದಿತಿ ಪ್ರಭುದೇವ (Aditi Prabhudeva) ವೈವಾಹಿಕ ಬದುಕಿನ ಜೊತೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಮದುವೆ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಹೀಗಿರುವಾಗ ಸಿನಿಮಾ ಕಾರ್ಯಕ್ರಮವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನ ಪ್ರಶ್ನೆ ಮಾಡುವವರಿಗೆ ಖಡಕ್ ಉತ್ತರ ನೀಡಿದ್ದಾರೆ.

    ಶ್ಯಾನೆ ಟಾಪ್ ನಟಿ ಅದಿತಿ ಇತ್ತೀಚಿಗೆ ಯಶಸ್ (Yashas) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ‘Once Upon A Time In Jamaligudda’ ಸಿನಿಮಾ ಮೂಲಕ ಮೋಡಿದ್ದರು. ಇನ್ನೂ ಅದಿತಿ ನಟನೆಯ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿಯಿದೆ. ಕೋಟ್ಯಧಿಪತಿ ಯುವಕನ ಕೈಹಿಡಿದಿದ್ದೀರಾ ಅನ್ನೋರಿಗೆ ನಟಿ ತಿರುಗೇಟು ನೀಡಿದ್ದಾರೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ನನ್ನ ಯೂಟ್ಯೂಬ್‌ನಲ್ಲಿ ಕೆಲವರು ಕಾಮೆಂಟ್ ಮಾಡಿದ್ದರು ನೀವು ರೈತನ ಮದುವೆ ಆಗುತ್ತೀನಿ ಎಂದು ಕೋಟ್ಯಧಿಪತಿಯನ್ನ ಮದುವೆ ಆಗಿದ್ದೀರಾ ಅನ್ನೋರಿದ್ದಾರೆ. ಅವರಿಗೆ ನನ್ನ ಉತ್ತರ ಏನೆಂದರೆ ಇದೆಲ್ಲಾ ನಿಮಗೆ ಯಾರು ಹೇಳಿದ್ದರು ನೀವು ಬಂದು ನೋಡಿದ್ದೀರಾ. ಏನೇ ಇದ್ದರೂ ಅದು ಅವರ ಬದುಕು. ನಮ್ಮ ಅಪ್ಪ ಇಷ್ಟು ಮಾಡಿದ್ದಾರೆ ಅದನ್ನು ಹೊಡ್ಕೊಂಡು ಚೆನ್ನಾಗಿ ತಿಂದು ಬಿಡುತ್ತೀನಿ ನನ್ನ ಗಂಡ ಮಾಡಿದ್ದಾನೆ ಅದನ್ನು ಹೊಡ್ಕೊಂಡು ತಿಂದು ಬಿಡುತ್ತೀನಿ ಅನ್ನೋ ವ್ಯಕ್ತಿ ನಾನಲ್ಲ. ಇದನ್ನೂ ಓದಿ: ರಾಖಿ ಸಾವಂತ್ ಪತಿ, ಮೈಸೂರು ಹುಡುಗ ಆದಿಲ್ ಪೊಲೀಸ್ ವಶಕ್ಕೆ

    ನನಗೆ ನನ್ನ ಅಸ್ತಿತ್ವ ತುಂಬಾ ಮುಖ್ಯವಾಗುತ್ತದೆ ಯಾರ ಮೇಲೆ ಕೂಡ ಡಿಪೆಂಡ್ ಆಗಬಾರದು ಯಾರಿಗೂ ಭಾರ ಆಗಬಾರದು ಎಷ್ಟು ಆಗುತ್ತೆ ಅಷ್ಟು ದುಡಿಯಬೇಕು. ಒಳ್ಳೆಯ ಬ್ಯಾನರ್ ಸಿನಿಮಾ ಸಿಗಬೇಕು ಒಳ್ಳೆಯ ಕಥೆ ಇರಬೇಕು ನನ್ನ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇರುತ್ತದೆ ಇದೆಲ್ಲಾ ನೋಡಿಕೊಂಡು ಕಥೆ ಒಪ್ಪಿಕೊಳ್ಳುವೆ. ಕನ್ನಡ ಚಿತ್ರರಂಗಕ್ಕೆ ಸಾಯುವವರೆಗೂ ಋಣಿಯಾಗಿರುವೆ. ಅಯ್ಯೋ ಲೈಫ್ ಹಾಗೆ ಹೀಗೆ ಅನ್ನೋ ಆತಂಕ ಇಲ್ಲ ಮೈಂಡ್ ಫ್ರೀ ಆಗಿದೆ ಎಂದು ಅದಿತಿ ರಿಯಾಕ್ಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್-ಕಿಯಾರಾ ಮದುವೆ ಜೀವನದ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ

    ಸಿದ್-ಕಿಯಾರಾ ಮದುವೆ ಜೀವನದ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ

    ಬಾಲಿವುಡ್‌ನ (Bollywood) ಲವ್ ಬರ್ಡ್ಸ್ (Love Birds) ಸಿದ್ಧಾಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ (Kiara Advani) ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ. ಈ ವೇಳೆ `ಷೇರ್‌ಷಾ’ ಜೋಡಿ ಬಗ್ಗೆ ಸೆಲೆಬ್ರಿಟಿ ಜ್ಯೋತಿಷಿ ವಿನೋದ್ ಕುಮಾರ್ ಭವಿಷ್ಯ ನುಡಿದಿದ್ದಾರೆ.

    ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಸಿದ್ ಮತ್ತು ಕಿಯಾರಾ ಜೋಡಿ ಇದೀಗ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಫೆ.4ರಿಂದಲೇ ವಿವಾಹ ಪೂರ್ವ ಸಿದ್ಧತೆಗಳು ನಡೆಯುತ್ತಿದೆ. ಮಂಗಳವಾರ (ಫೆ.7) ರಂದು ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಇದೆ. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಲಿದೆ. ಹೀಗಿರುವಾಗ ಸೆಲೆಬ್ರಿಟಿ ಜ್ಯೋತಿಷಿ ವಿನೋದ್‌ ಕುಮಾರ್‌, ಸಿದ್-ಕಿಯಾರಾ ವಿವಾಹ ಜೀವನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.

    ಹೊಸ ಜೀವನ ಆರಂಭಿಸುತ್ತಿರುವುದಕ್ಕೆ ನವಜೋಡಿಗೆ ಶುಭಾಶಯಗಳು. ಜಾತಕದ ವಿಷಯವಾಗಿ ಹೇಳುವುದಾದರೆ ಸಿದ್ಧಾರ್ಥ್ ಹಾಗೂ ಕಿಯಾರಾ ಅವರ ಜೋಡಿಯ ಸಂಬಂಧ ತುಂಬ ಗಟ್ಟಿಯಾಗಿದೆ. ರಿಲೇಶನ್‌ಶಿಪ್, ಕಮಿಟ್‌ಮೆಂಟ್ಸ್, ಕುಟುಂಬ, ಎಮೋಶನ್‌ಗಳಿಗೆ ಬೆಲೆ ಕೊಡುವ ಕಿಯಾರಾ ಅಡ್ವಾಣಿಯ ಭಾವನೆಗಳನ್ನು ಸಿದ್ಧಾರ್ಥ್‌ ಅರ್ಥ ಮಾಡಿಕೊಳ್ಳಬೇಕು. ಸಿದ್ಧಾರ್ಥ್ ಅವರು ವೃತ್ತಿ ಅಥವಾ ವೈಯಕ್ತಿಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಕಿಯಾರಾ ಭಾವನೆಗಳನ್ನು ನೆನಪಿನಲ್ಲಿಡಬೇಕು. ಈ ಜೋಡಿ ಮನೆಯಲ್ಲಿ ಹಿರಿಯರ ಮಾತನ್ನು ಕೇಳಬೇಕು. ಇದನ್ನೂ ಓದಿ: ಬೆಡ್‌ರೂಮ್ ಫೋಟೋ ಹಂಚಿಕೊಂಡ ನಟಿ ರಾಗಿಣಿ ದ್ವಿವೇದಿ

    ಚಿತ್ರರಂಗವು ಈ ಜೋಡಿಯನ್ನು ಅದ್ದೂರಿಯಾಗಿ ಸ್ವಾಗತಿಸುತ್ತದೆ, ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಇವರಿಬ್ಬರ ಜೋಡಿಯ ಸಿನಿಮಾಗಳು ಹಿಟ್ ಆಗುತ್ತವೆ, ಪ್ರಶಸ್ತಿ ಪಡೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

    ಸದ್ಯ ಈ ಜೋಡಿಯ ಮದುವೆ ಅಪ್‌ಡೇಟ್‌ಗಾಗಿ ಸಂಭ್ರಮದ ಕ್ಷಣಗಳ ಫೋಟೋ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ಧಾರ್ಥ್‌ ಜೊತೆ ಕಿಯಾರಾ ಮದುವೆ, ರಾಜಸ್ಥಾನಕ್ಕೆ ಬಂದಿಳಿದ ನಟಿ

    ಸಿದ್ಧಾರ್ಥ್‌ ಜೊತೆ ಕಿಯಾರಾ ಮದುವೆ, ರಾಜಸ್ಥಾನಕ್ಕೆ ಬಂದಿಳಿದ ನಟಿ

    ಬಾಲಿವುಡ್‌ನ (Bollywood) ಕ್ಯೂಟ್ ಕಪಲ್ ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮದುವೆ (Wedding) ದಿನಗಣನೆ ಶುರುವಾಗಿದೆ. ಸದ್ದಿಲ್ಲದೇ ಸೈಲೆಂಟ್ ಆಗಿ ಈ ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಹೀಗಿರುವಾಗ ನಟಿ ಕಿಯಾರಾ ರಾಜಸ್ಥಾನಕ್ಕೆ ಬಂದಿಳಿದಿದ್ದಾರೆ. ಈ ಕುರಿತ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    `ಷೇರ್‌ಷಾ’ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಜೋಡಿ ಕಿಯಾರಾ-ಸಿದ್ಧಾರ್ಥ್ ಅವರು ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಈಗ ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದ್ದಾರೆ. ಆದರೆ ಅಧಿಕೃತವಾಗಿ ತಮ್ಮ ಮದುವೆಯ ಗುಟ್ಟನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ. ಇದನ್ನೂ ಓದಿ: ಸಿದ್ಧಾರ್ಥ್-ಕಿಯಾರಾ ಅವರದ್ದು ನಿಜವಾದ ಪ್ರೀತಿ ಎಂದು ಹಾಡಿ ಹೊಗಳಿದ ಕಂಗನಾ ರಣಾವತ್

     

    View this post on Instagram

     

    A post shared by Viral Bhayani (@viralbhayani)

    ಸದ್ಯ ಕಿಯಾರಾ ರಾಜಸ್ತಾನಕ್ಕೆ ಬಂದಿಳಿರುವ ವೀಡಿಯೋ ಸದ್ದು ಮಾಡ್ತಿದೆ. ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ತನ್ನ ಕುಟುಂಬದ ಜೊತೆ ಕಿಯಾರಾ ವಿಮಾನ ನಿಲ್ದಾಣದಿಂದ ಬರುವಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಇನ್ನೂ ಫೆ.4ರಿಂದ ಮದುವೆ ಶಾಸ್ತ್ರಗಳು ಶುರುವಾಗಲಿದೆ. ಫೆ.6ರಂದು ಸಿದ್ಧಾರ್ಥ್-ಕಿಯಾರಾ ಮದುವೆಯಾಗುತ್ತಿದ್ದಾರೆ. ರಾಜಸ್ಥಾನದ ಸೂರ್ಯಗಡನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ.

     

    View this post on Instagram

     

    A post shared by Viral Bhayani (@viralbhayani)

    ಸಿದ್-ಕಿಯಾರಾ ಮದುವೆಗೆ 100 ಜನ ಅತಿಥಿಗಳನ್ನ ಕರೆಯಲಾಗಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ `ಷೇರ್‌ಷಾ’ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ಧಾರ್ಥ್-ಕಿಯಾರಾ ಅವರದ್ದು ನಿಜವಾದ ಪ್ರೀತಿ ಎಂದು ಹಾಡಿ ಹೊಗಳಿದ ಕಂಗನಾ ರಣಾವತ್

    ಸಿದ್ಧಾರ್ಥ್-ಕಿಯಾರಾ ಅವರದ್ದು ನಿಜವಾದ ಪ್ರೀತಿ ಎಂದು ಹಾಡಿ ಹೊಗಳಿದ ಕಂಗನಾ ರಣಾವತ್

    ಬಾಲಿವುಡ್‌ನ (Bollywood) ಕ್ಯೂಟ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra)- ಕಿಯಾರಾ ಹಸೆಮಣೆ ಏರುತ್ತಿದ್ದಾರೆ. ರಾಜಸ್ತಾನದ ಸೂರ್ಯಗಡನಲ್ಲಿ ಅದ್ದೂರಿಯಾಗಿ ಮದುವೆಗೆ (Wedding) ಸಿದ್ಧತೆ ನಡೆಯುತ್ತಿದ್ದರೂ ಕೂಡ ಈ ಬಗ್ಗೆ ಸಿದ್ ಮತ್ತು ಕಿಯಾರಾ (Kiara Advani) ಜೋಡಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಿರುವಾಗ ಇವರಿಬ್ಬರದ್ದು ನಿಜವಾದ ಪ್ರೀತಿ ಎಂದು ಹೇಳುವ ಮೂಲಕ ಕಂಗನಾ ʻಷೇರ್‌ಷಾʼ ಜೋಡಿ ಹಾರೈಸಿದ್ದಾರೆ.

    ಅಥಿಯಾ ಶೆಟ್ಟಿ (Athiya Shetty) ಮತ್ತು ರಾಹುಲ್ (Rahul) ಮದುವೆಯಾಗಿ ಕೆಲವೇ ದಿನಗಳಾಗಿದೆ. ಈ ಬೆನ್ನಲ್ಲೇ ಸಿದ್ಧಾರ್ಥ್ ಮತ್ತು ಕಿಯಾರಾ ಹಸೆಮಣೆ ಏರಲು ರೆಡಿಯಾಗಿದ್ದಾರೆ. ರಾಜಸ್ತಾನದ ಸೂರ್ಯಗಡನಲ್ಲಿ (Suryagada) ಅದ್ದೂರಿಯಾಗಿ ʻಷೇರ್‌ಷಾʼ ಜೋಡಿ ಮದುವೆಯಾಗುತ್ತಿದ್ದಾರೆ. ಈ ಬಗ್ಗೆ ಯಾವುದೇ ಸುಳಿವು ನೀಡದೇ ಇಬ್ಬರು ಮೌನವಾಗಿದ್ದಾರೆ. ಆದರೆ ಕಂಗನಾ ಈ ಜೋಡಿಗೆ ಶುಭ ಹಾರೈಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ನಟ ಸಿದ್ದಾರ್ಥ್ ಹಾಗೂ ಕಿಯಾರಾ ಅವರು ಜೊತೆಯಾಗಿ ಇರುವ ಅಪರೂಪದ ವಿಡಿಯೋವನ್ನು ಕಂಗನಾ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಜೋಡಿ ಎಷ್ಟು ಚೆನ್ನಾಗಿ ಕಾಣುತ್ತಿದೆ. ಚಿತ್ರರಂಗದಲ್ಲಿ ನಾವು ನಿಜವಾದ ಪ್ರೀತಿಯನ್ನು ನೋಡುವುದು ತುಂಬ ವಿರಳ ಎಂದು ಕಂಗನಾ (Kangana Ranaut) ಅವರು ಕ್ಯಾಪ್ಷನ್ ನೀಡಿದ್ದಾರೆ. ಇಬ್ಬರದ್ದು ನಿಜವಾದ ಪ್ರೀತಿ ಎಂದು ಹೊಗಳಿದ್ದಾರೆ. ಹಾಗೆಯೇ ಕಿಯಾರಾ- ಸಿದ್‌ಗೆ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಸಿಹಿ ಸುದ್ದಿ ಕೊಡಲು ಸಜ್ಜಾದ್ರಾ ನಟ ಸಿದ್ಧಾರ್ಥ್- ಅದಿತಿ ರಾವ್‌ ಹೈದರಿ?

    ʻಷೇರ್‌ಷಾʼ ಕಪಲ್ ಮದುವೆಗೆ ಬಾಲಿವುಡ್‌ನಿಂದ ಅಂದಾಜು 100 ಜನರು ಈ ವಿವಾಹದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮುಂತಾದವರು ಭಾಗಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯಾರೂ ಕೂಡ ಮದುವೆ ಬಗ್ಗೆ ಬಾಯಿ ಬಿಡುತ್ತಿಲ್ಲ. ಹೀಗಿರುವಾಗ ಕಂಗನಾ ಅವರು ವಿಡಿಯೋ ಹಂಚಿಕೊಂಡು ಮೆಚ್ಚುಗೆ ಸೂಚಿಸಿದ್ದು ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಹಿ ಸುದ್ದಿ ಕೊಡಲು ಸಜ್ಜಾದ್ರಾ ನಟ ಸಿದ್ಧಾರ್ಥ್- ಅದಿತಿ ರಾವ್‌ ಹೈದರಿ?

    ಸಿಹಿ ಸುದ್ದಿ ಕೊಡಲು ಸಜ್ಜಾದ್ರಾ ನಟ ಸಿದ್ಧಾರ್ಥ್- ಅದಿತಿ ರಾವ್‌ ಹೈದರಿ?

    ಚಿತ್ರರಂಗದಲ್ಲಿ ಗಟ್ಟಿಮೇಳ ಸೌಂಡ್ ಜೋರಾಗಿದೆ. ಇತ್ತೀಚಿಗೆ ನಾಗಶೌರ್ಯ ಮದುವೆಯಾದ ಬೆನ್ನಲ್ಲೇ ಶರ್ವಾನಂದ್ ಎಂಗೇಜ್ ಆಗುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದರು. ಇದೀಗ ಅದೇ ಹಾದಿಯಲ್ಲಿ ನಟ ಸಿದ್ಧಾರ್ಥ್ (Siddarth) ಮತ್ತು ಅದಿತಿ ರಾವ್ (Aditi Rao) ಸೇರಿದ್ದಾರೆ. ಸದ್ಯದಲ್ಲೇ ಈ ಜೋಡಿ ತಮ್ಮ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಬ್ಯಾಚುಲರ್ ಲೈಫ್‌ಗೆ ಸೆಲೆಬ್ರಿಟಿಗಳು ಈಗ ಗುಡ್ ಬೈ ಹೇಳ್ತಿದ್ದಾರೆ. ಇತ್ತೀಚಿಗೆ ನಾಗಶೌರ್ಯ (Nagashourya) ಕನ್ನಡದ ಹುಡುಗಿ ಅನುಷಾ ಶೆಟ್ಟಿ ಅವರನ್ನು ಮದುವೆಯಾದರು. ಈ ವರ್ಷದ ಆರಂಭದಲ್ಲಿಯೇ ರಕ್ಷಿತಾ ರೆಡ್ಡಿ ಜೊತೆ ನಟ ಶರ್ವಾನಂದ್ (Sharwanand) ಎಂಗೇಜ್‌ಮೆಂಟ್ ಮಾಡಿಕೊಂಡು ಅಚ್ಚರಿ ಮೂಡಿಸಿದ್ದರು. ಶರ್ವಾನಂದ್ ನಿಶ್ಚಿತಾರ್ಥಕ್ಕೆ ಜೋಡಿಯಾಗಿ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ (Aditi Rao Hydari) ಎಂಟ್ರಿ ಕೊಟ್ಟಿದ್ದರು. ಹಾಗಾಗಿ ಈ ಸೆಲೆಬ್ರಿಟಿ ಜೋಡಿ ಬಗ್ಗೆ ಮದುವೆ (Wedding) ಬಗ್ಗೆ ಚರ್ಚೆ ನಡೆಯುತ್ತಿದೆ.

    ಸಾಕಷ್ಟು ಸಮಯದಿಂದ ಸಿದ್ಧಾರ್ಥ್ ಮತ್ತು ಅದಿತಿ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿಗೆ ಸಿನಿಮಾದಲ್ಲಿ ನಟಿಸಿದ್ದ ವೇಳೆ ಇಬ್ಬರ ನಡುವೆ ಪ್ರೇಮಾಂಕುರ ಆಗಿರುವ ಬಗ್ಗೆ ಸುದ್ದಿ ಇದೆ. ಆದರೆ ಇಬ್ಬರು ತಮ್ಮ ಸಂಬಂಧದ ಬಗ್ಗೆ ಎಲ್ಲೂ ಕೂಡ ಅಧಿಕೃತವಾಗಿ ಬಾಯ್ಬಿಟ್ಟಿಲ್ಲ.

    ಹೋದಲೆಲ್ಲಾ ಒಟ್ಟಿಗೆ ಕಾಣಿಸಿಕೊಳ್ಳುವ ಸಿದ್ಧಾರ್ಥ್ ಮತ್ತು ಅದಿತಿ ತಮ್ಮ ಏನಿಲ್ಲಾ ಅಂತಲೇ ಮೌನವಾಗಿ ಬಿಟ್ಟಿದ್ದಾರೆ. ಆದರೆ ಇತ್ತೀಚಿನ ಶರ್ವಾನಂದ್ ನಿಶ್ಚಿತಾರ್ಥಕ್ಕೆ ಇವರು ಜೊತೆಯಾಗಿ ಹೋಗಿರೋದು ಅನೇಕರ ಚರ್ಚೆಗೆ ಗ್ರಾಸವಾಗಿದೆ. ಸದ್ಯದಲ್ಲೇ ಸಿದ್ಧಾಥ್- ಅದಿತಿ ಕೂಡ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮೂರು ಮದುವೆ ಗುಟ್ಟನ್ನು ಬಿಚ್ಚಿಟ್ಟ ನಟ ಪವನ್ ಕಲ್ಯಾಣ್

    ಇನ್ನೂ ಅದಿತಿ ಅವರ ಮೊದಲ ಪತಿ ಸತ್ಯದೀಪ್ ಮಿಶ್ರಾ (sathyadeep Mishra) ಅವರು ಇತ್ತೀಚಿಗೆ ಮಸಾಬಾ ಗುಪ್ತಾ (Masaba Gupta) ಅವರನ್ನ ಮದುವೆಯಾದರು. ಹಾಗಾಗಿ ಅದಿತಿ ಮದುವೆ ಬಗ್ಗೆ ಅಪ್‌ಡೇಟ್ ಅನ್ನು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅದ್ದೂರಿಯಾಗಿ ನಡೆಯಲಿದೆ ಸಿದ್ಧಾರ್ಥ್- ಕಿಯಾರಾ ಅಡ್ವಾನಿ ಮದುವೆ

    ಅದ್ದೂರಿಯಾಗಿ ನಡೆಯಲಿದೆ ಸಿದ್ಧಾರ್ಥ್- ಕಿಯಾರಾ ಅಡ್ವಾನಿ ಮದುವೆ

    ಬಾಲಿವುಡ್‌ನ (Bollywood) ಲವ್ ಬರ್ಡ್ಸ್ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ದಾಂಪತ್ಯ ಜೀವನಕ್ಕೆ ಕಾಲಿಡಲು ಕೌಂಟ್‌ಡೌನ್ ಶುರುವಾಗಿದೆ. ಸಿದ್- ಕಿಯಾರಾ ಜೋಡಿ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ.

    ಅಥಿಯಾ ಶೆಟ್ಟಿ (Athiya Shetty) ಮತ್ತು ಕೆ.ಎಲ್ ರಾಹುಲ್ (K.l Rahul) ಹಸೆಮಣೆ ಏರಿದ ಬೆನ್ನಲ್ಲೇ ಇದೀಗ ಸಿದ್ ಮತ್ತು ಕಿಯಾರಾ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ದಿನಗಣನೆ ಶುರುವಾಗಿದೆ.

    ಸಿದ್ ಜೋಡಿಯ ಮದುವೆ ಸಂಭ್ರಮ ಫೆ.4ರಿಂದ 6ರವರೆಗೆ ಇರಲಿದೆ. ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಮದುವೆ ನಡೆಯಲಿದೆ. ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

    ಇನ್ನೂ ಕಿಯಾರಾ-ಸಿದ್ಧಾರ್ಥ್ ಮದುವೆ 100 ಜನ ಅತಿಥಿಗಳಿಗಷ್ಟೇ ಆಹ್ವಾನ ನೀಡಲಾಗಿದೆ. ಕರಣ್ ಜೋಹರ್, ಶಾಹಿದ್ ಕಪೂರ್ ದಂಪತಿ, ಮನೀಷ್ ಮಲ್ಹೋತ್ರಾ, ರಶ್ಮಿಕಾ ಮಂದಣ್ಣ (Rashmika Mandanna) ಸೇರಿದಂತೆ ಹಲವರಿಗೆ ಆಹ್ವಾನ ನೀಡಿದ್ದಾರೆ. ನೆಚ್ಚಿನ ಜೋಡಿಯ ಮದುವೆ ಸಂಭ್ರಮ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ – ರಥೋತ್ಸವದಲ್ಲಿ ಹರಕೆ ತೀರಿಸಿದ ರೈತ

    ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ – ರಥೋತ್ಸವದಲ್ಲಿ ಹರಕೆ ತೀರಿಸಿದ ರೈತ

    ವಿಜಯನಗರ: ಸಾಮಾನ್ಯವಾಗಿ ಕೃಷಿ ಕೆಲಸ ಮಾಡುವವರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರಲ್ಲ. ಈ ಹಿನ್ನೆಲೆಯಲ್ಲಿ ಯುವ ರೈತನೊಬ್ಬ, ರೈತರಿಗೆ (farmer) ಕನ್ಯೆ ಕೊಡಲಿ ಎಂದು ಬರೆದು ರಥೋತ್ಸವದಲ್ಲಿ ಹರಕೆ ತೀರಿಸಿದ್ದಾನೆ.

    ವಿಜಯನಗರ (Vijayanagara) ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ ನಿನ್ನೆ (ಬುಧವಾರ) ಸಂಜೆ ಜರುಗಿದೆ‌. ಈ ರಥೋತ್ಸವದಲ್ಲಿ, ಓರ್ವ ಯುವ ರೈತ ಬಾಳೆಹಣ್ಣಿನ ಮೇಲೆ ಬರೆದಿರುವ ಹರಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಹರಿಕೆಯಲ್ಲಿ ಏನಿದೆ?: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ ಎಂದು ಬಾಳೆಹಣ್ಣಿನ ಮೇಲೆ ಬರೆದಿದ್ದಾನೆ. ಇದನ್ನು ನಂತರ ರಥೋತ್ಸವದ ವೇಳೆ ದುರ್ಗಾದೇವಿ ರಥಕ್ಕೆ ಸಮರ್ಪಿಸಿ ತನ್ನ ಹರಕೆಯನ್ನು ಸಮರ್ಪಣೆ ಮಾಡಿದ್ದಾನೆ. ಇದನ್ನೂ ಓದಿ: ಹೂಡಿಕೆದಾರರ ಹಿತಾಸಕ್ತಿಯೇ ನನಗೆ ಮುಖ್ಯ – 20,000 ಕೋಟಿ ಮೌಲ್ಯದ FPO ಹಿಂಪಡೆದ ಬಳಿಕ ಅದಾನಿ ಮೊದಲ ಪ್ರತಿಕ್ರಿಯೆ

    ತಾಯಿ ದುರ್ಗಾಂಬಿಕೆ ಜನರ ಮನಸ್ಸು ಬದಲಾಯಿಸಿ, ರೈತರಿಗೂ ಮದುವೆಯಾಗಲು ಹೆಣ್ಣು ಸಿಗಲಿ. ಎಲ್ಲರಿಗೂ ಈ ರೀತಿಯ ಮನಸ್ಥಿತಿಯನ್ನು ಕರುಣಿಸಲಿ ಎಂದು ಹರಕೆ ತೀರಿಸಿದ್ದಾರೆ. ಈಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಗಟ್ಟಿಮೇಳ’ ನಟಿ ಪ್ರಿಯಾ ಜೊತೆ ಸಿದ್ದು ಮದುವೆ ಡೇಟ್ ಫಿಕ್ಸ್

    `ಗಟ್ಟಿಮೇಳ’ ನಟಿ ಪ್ರಿಯಾ ಜೊತೆ ಸಿದ್ದು ಮದುವೆ ಡೇಟ್ ಫಿಕ್ಸ್

    ಹಿರಿತೆರೆ ಮಾತ್ರವಲ್ಲ ಕಿರುತೆರೆಯಲ್ಲೂ ಮದುವೆ ದಿಬ್ಬಣದ ಸೌಂಡ್ ಜೋರಾಗಿದೆ. ಇತ್ತೀಚಿಗೆ `ಪಾರು’ ಸೀರಿಯಲ್ ಹೀರೋ ಶರತ್ ಪದ್ಮನಾಭ್ ಹಸೆಮಣೆ ಏರಿದ್ದರು. ಈಗ ಇದೇ ಸೀರಿಯಲ್‌ನ ಸಿದ್ದು ಮೂಲಿಮನಿ (Siddu Moolimani) ಮತ್ತು `ಗಟ್ಟಿಮೇಳ’ (Gattimela) ನಟಿ ಪ್ರಿಯಾ (Priya) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

    ಕಿರುತೆರೆಯ ಲವ್ ಬರ್ಡ್ಸ್ ಪ್ರಿಯಾ ಮತ್ತು ಸಿದ್ದು ಮದುವೆಗೆ (Wedding) ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ವಾಹಿನಿಯ ರಿಯಾಲಿಟಿ ಶೋನಲ್ಲಿ ಶುರುವಾದ ಸ್ನೇಹ, `ಧಮಾಕ’ (Dhamaka) ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಜೋಡಿಹಕ್ಕಿಗಳಾದರು. ಈ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಈಗ ಹಿರಿಯರ ಒಪ್ಪಿಗೆಯ ಮೇರೆಗೆ ಪ್ರಿಯಾ- ಸಿದ್ದು ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ: ಅಣ್ಣನ ಮದುವೆಯಲ್ಲಿ ಮಿಂಚಿದ ನಟಿ ಪೂಜಾ ಹೆಗ್ಡೆ

     

    View this post on Instagram

     

    A post shared by Priya j achar???? (@priya_j_achar)

    ಕಳೆದ ನವೆಂಬರ್‌ನಲ್ಲಿ ಪ್ರಿಯಾ ಮತ್ತು ಸಿದ್ದು ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಸರ್ಪ್ರೈಸ್ ನೀಡಿದ್ದರು. ಈಗ ಮದುವೆಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಗಟ್ಟಿಮೇಳ ನಟಿ ಪ್ರಿಯಾ ಜೊತೆ ಇದೇ ಫೆಬ್ರವರಿಯಲ್ಲಿ ಖಾಸಗಿ ರೆಸಾರ್ಟ್‌ವೊಂದರಲ್ಲಿ ಸಿದ್ದು ಮದುವೆಯಾಗುತ್ತಿದ್ದಾರೆ.

     

    View this post on Instagram

     

    A post shared by Priya j achar???? (@priya_j_achar)

    ಇನ್ನೂ ಸಿದ್ದು ಮೂಲಿಮನಿ, ರಂಗಿತರಂಗ, ವಿಕ್ರಾಂತ್ ರೋಣ, ಧಮಾಕ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಪ್ರಿಯಾ ʻಗಟ್ಟಿಮೇಳʼ ಸೀರಿಯಲ್ ಜೊತೆ ಹೊಸ ಸಿನಿಮಾ ಕೂಡ ಮಾಡ್ತಿದ್ದಾರೆ. ಸದ್ಯದಲ್ಲೇ ಈ ಕುರಿತು ಅಪ್‌ಡೇಟ್ ಹೊರಬೀಳಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k