Tag: wedding

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕನ್ನಡದ `ಗಿಲ್ಲಿ’ ಚಿತ್ರದ ನಟಿ ರಾಕುಲ್

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕನ್ನಡದ `ಗಿಲ್ಲಿ’ ಚಿತ್ರದ ನಟಿ ರಾಕುಲ್

    ಟಿ ಕಿಯಾರಾ-ಸಿದ್ (Kiara-Siddarth) ಮದುವೆಯ ಬೆನ್ನಲ್ಲೇ ಬಾಲಿವುಡ್‌ನ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಕನ್ನಡದ `ಗಿಲ್ಲಿ’ (Gilli Film) ಸಿನಿಮಾದ ನಟಿ‌ ರಾಕುಲ್‌ ಸಿಂಗ್‌ ಪ್ರೀತ್ ಬಹುಕಾಲದ ಗೆಳೆಯನ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ.

    ಚಿತ್ರರಂಗದಲ್ಲಿ ಗಟ್ಟಿವೇಳದ ಸೌಂಡ್ ಜೋರಾಗಿದೆ. ಅಥಿಯಾ ಶೆಟ್ಟಿ (Athiya Shetty) ಜೋಡಿ ನಂತರ ಸಿದ್-ಕಿಯಾರಾ ಮದುವೆಯಾಗುವ ಮೂಲಕ ಸಿಹಿ ಸುದ್ದಿ ನೀಡಿದ್ದರು. ಈಗ ಅದೇ ಹಾದಿಯಲ್ಲಿ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ಇದ್ದಾರೆ.

    ಬಾಲಿವುಡ್‌ನ (Bollywood) ಯುವ ನಿರ್ಮಾಪಕ ಜಾಕಿ ಭಗ್ನಾನಿ(Jackky Bhagnani)- ರಾಕುಲ್ ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಇತ್ತೀಚಿಗೆ ಗೆಳೆಯ ಜಾಕಿ ಬರ್ತಡೇ ಕೂಡ ರಾಕುಲ್ ಅದ್ದೂರಿಯಾಗಿ ಮುಂಬೈ ರೆಸಾರ್ಟ್‌ವೊಂದರಲ್ಲಿ ಆಚರಿಸಿದ್ದರು. ಇದನ್ನೂ ಓದಿ: ಬೆಡ್‌ರೂಮ್‌ನಿಂದಲೇ ವ್ಯಾಲೆಂಟೈನ್ ಸೀಕ್ರೆಟ್ ರಿವೀಲ್ ಮಾಡಿದ ರಶ್ಮಿಕಾ ಮಂದಣ್ಣ

    ಈಗ ಸಿದ್-ಕಿಯಾರಾ ಮದುವೆಯ ಬೆನ್ನಲ್ಲೇ ಜಾಕಿ ಭಗ್ನಾನಿ-ರಾಕುಲ್ ಮದುವೆಯ (Wedding) ಸುದ್ದಿ ಮುಂಚೂಣಿಯಲ್ಲಿದೆ. ಮದುವೆಗೆ ತೆರೆಮರೆಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾಗರ ಜಾತ್ರೆ ಸುತ್ತಾಡಿದ `ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ

    ಸಾಗರ ಜಾತ್ರೆ ಸುತ್ತಾಡಿದ `ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ

    ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಸ್ಪರ್ಧಿ ದಿವ್ಯಾ ಉರುಡುಗ (Divya Uruduga) ಮತ್ತೆ ಸುದ್ದಿಯಲ್ಲಿದ್ದಾರೆ. ಮಲೆನಾಡಿನ ಸುಂದರಿ ದಿವ್ಯಾ, ಸಾಗರದ ಜಾತ್ರೆಯಲ್ಲಿ (Sagara Jatre) ಭಾಗಿಯಾಗಿ ಸುತ್ತಾಡಿದ್ದಾರೆ. ಈ ಕುರಿತ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by DU✨ (@divya_uruduga)

    ದೊಡ್ಮನೆಯಲ್ಲಿ ಮಿಂಚಿದ ದಿವ್ಯಾ ಉರುಡುಗ ಅವರು ಮೂಲತಃ ಮಲೆನಾಡು ತೀರ್ಥಹಳ್ಳಿಯವರಾಗಿದ್ದು, ತಮ್ಮ ಊರಿನ ಬಗ್ಗೆ ವಿಶೇಷ ಪ್ರೀತಿಯನ್ನ ಇಟ್ಟುಕೊಂಡಿದ್ದಾರೆ. ಇದೀಗ ಸಾಗರದ ಜಾತ್ರೆಯಲ್ಲಿ ಮಾಸ್ಕ್ ಧರಿಸಿ, ದೇವರ ದರ್ಶನ ಮಾಡಿದ್ದಾರೆ. ಬಳಿಕ ತಾಯಿಯ ಜೊತೆ ಜಾತ್ರೆಯಲ್ಲಿ ಸುತ್ತಿದ್ದಾರೆ. ಕುಟುಂಬದ ಜೊತೆ ಮಸ್ತ್ ಆಗಿ ಸಮಯ ಕಳೆದಿದ್ದಾರೆ. ಸಾಗರ ಜಾತ್ರೆಯ ವೀಡಿಯೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by DU✨ (@divya_uruduga)

    ನಟಿಗೆ ಈ ವೀಡಿಯೋ ಈಗ ಬಗೆ ಬಗೆಯ ಕಾಮೆಂಟ್ ಹರಿದು ಬರುತ್ತಿದೆ. ನೆಟ್ಟಿಗನೊಬ್ಬ, ಛೇ ಜಾತ್ರೆಯಲ್ಲಿ ನಿಮ್ಮನ್ನ ಗುರುತಿಸಲು ಆಗಲಿಲ್ಲ ಎಂದು ಬೇಸರ ಮಾಡಿಕೊಂಡರೆ, ಮತ್ತೊಬ್ಬರು, ಅರವಿಂದ್ ಕೆಪಿ ಎಲ್ಲಿ? ಅವರಿಗೂ ಜಾತ್ರೆ ತೋರಿಸಬಹುದಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಮಂಗಳೂರಿನಲ್ಲಿ ರಜನಿ ಜೊತೆ ಶಿವರಾಜ್ ಕುಮಾರ್: ಫೋಟೋ ಲೀಕ್

    ಇನ್ನೂ ದಿವ್ಯಾ ಮತ್ತು ಅರವಿಂದ್ ಕೆಪಿ (Aravindkp) ಅಭಿನಯದ `ಅರ್ದಂ ಬರ್ಧ ಪ್ರೇಮ ಕಥೆ’ ರಿಲೀಸ್‌ಗೆ ರೆಡಿಯಿದೆ. ಸದ್ಯದಲ್ಲೇ ತೆರೆಗೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಿಯಾರಾ- ಸಿದ್ಧಾರ್ಥ್‌ನ ನೋಡಿದ್ರೆ ಹೊಟ್ಟೆ ಉರಿಯುತ್ತದೆ: ರಾಖಿ ಸಾವಂತ್

    ಕಿಯಾರಾ- ಸಿದ್ಧಾರ್ಥ್‌ನ ನೋಡಿದ್ರೆ ಹೊಟ್ಟೆ ಉರಿಯುತ್ತದೆ: ರಾಖಿ ಸಾವಂತ್

    ಬಾಲಿವುಡ್‌ನ (Bollywood) ಪ್ರೇಮ ಪಕ್ಷಿಗಳಾಗಿರುವ ಸಿದ್ (Siddarth Malhotra) ಮತ್ತು ಕಿಯಾರಾ (Kiara Advani) ಇತ್ತೀಚಿಗೆ ಹಸೆಮಣೆ ಏರಿದ್ದರು. ಖುಷಿ ಖುಷಿಯಾಗಿ `ಶೇರ್‌ಷಾ’ ಜೋಡಿ ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ ಈ ಜೋಡಿಯ ಕುರಿತು ರಾಖಿ ಸಾವಂತ್ (Rakhi Sawant) ಹೇಳಿಕೆಯೊಂದನ್ನ ನೀಡಿದ್ದಾರೆ. ಪ್ರೇಮಿಗಳನ್ನ ನೋಡಿದ್ದರೆ ಅಳು ಬರುತ್ತದೆ ಎಂದು ನಟಿ ಭಾವುಕರಾಗಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಸಿದ್-ಕಿಯಾರಾ ಮದುವೆಯಾಗಿದ್ದಾರೆ. ಇದೇ ಭಾನುವಾರ (ಫೆ.12)ರಂದು ಬಾಲಿವುಡ್ ಸೆಲೆಬ್ರಿಟಿಗಳಿಗೆ ಅದ್ದೂರಿ ಆರತಕ್ಷತೆ ನೀಡಿದ್ದಾರೆ. `ಶೇರ್ ಷಾ’ ಜೋಡಿಯ ರಿಸ್ಪೆಷನ್‌ನಲ್ಲಿ ಇಡೀ ಬಾಲಿವುಡ್ ದಂಡೇ ಭಾಗಿಯಾಗಿ ಸಂಭ್ರಮಿಸಿದ್ದರು. ಚಿತ್ರರಂಗದ ಮಂದಿ ಎಲ್ಲರೂ ಕಿಯಾರಾ-ಸಿದ್ ಅವರ ಲವ್ ಸ್ಟೋರಿ, ಮದುವೆ, ಹೊಂದಾಣಿಕೆ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ರಜನಿ ಜೊತೆ ಶಿವರಾಜ್ ಕುಮಾರ್: ಫೋಟೋ ಲೀಕ್

    `ಶೇರ್‌ಷಾ’ ಜೋಡಿಯ ಬಗ್ಗೆ ರಾಖಿ ಸಾವಂತ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಸಿದ್-ಕಿಯಾರಾ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ. ಎಲ್ಲಾ ಕಡೆ ಅವರ ಮದುವೆಯ ಬಗ್ಗೆಯೇ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ನನ್ನ ಮದುವೆಯ ಬಗ್ಗೆ ಕೆಟ್ಟ ಸುದ್ದಿ ಬರುತ್ತಿದೆ. ಪ್ರೀತಿಸಿ ಮದುವೆಯಾದವರನ್ನು ನೋಡಿದರೆ ನನಗೆ ಹೊಟ್ಟೆ ಉರಿಯುತ್ತದೆ. ಅವರನ್ನ ನೋಡಿದರೆ ಅಳು ಬರುತ್ತದೆ. ನನ್ನ ಜೊತೆ ಈಗ ಯಾರು ಇಲ್ಲಾ, ನನ್ನನ್ನೂ ಪ್ರೀತಿಸುವವರು ಕೂಡ ಯಾರು ಇಲ್ಲಾ ಎಂದು ನಟಿ ಭಾವುಕರಾಗಿದ್ದಾರೆ.

    ಇನ್ನೂ ರಾಖಿ ಕೂಡ ಇತ್ತೀಚಿಗೆ ಮೈಸೂರು ಮೂಲದ ಆದಿಲ್ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ರಾಖಿ ನೀಡಿರುವ ದೂರಿನ ಮೇರೆಗೆ ಕಂಬಿ ಹಿಂದೆ ಆದಿಲ್ ದಿನ ಕಳೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಗಟ್ಟಿಮೇಳ’ ನಟಿ ಪ್ರಿಯಾ- ಸಿದ್ದು ಮೂಲಿಮನಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಗಟ್ಟಿಮೇಳ’ ನಟಿ ಪ್ರಿಯಾ- ಸಿದ್ದು ಮೂಲಿಮನಿ

    ಕಿರುತೆರೆಯ ಮತ್ತೊಂದು ಜೋಡಿ ಇದೀಗ ಹಸೆಮಣೆ ಏರಿದ್ದಾರೆ. `ಗಟ್ಟಿಮೇಳ’ (Gattimela) ನಟಿ ಪ್ರಿಯಾ ಆಚಾರ್ (Priya Achar) ಮತ್ತು `ಪಾರು’ (Paaru) ನಟ ಸಿದ್ದು ಮೂಲಿಮನಿ (Siddu Moolimani) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. `ಪಾರು’ ಹೀರೋ ಶರತ್ ಪದ್ಮನಾಭ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ಕಿರುತೆರೆಯ ಮತ್ತೊಂದು ಹಸೆಮಣೆ ಏರುವ ಮೂಲಕ ಜೋಡಿ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ: ಆನಂದ್ ಮಹಿಂದ್ರಾ ಜೊತೆ `ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ರಾಮ್ ಚರಣ್

    ಹಲವು ವರ್ಷಗಳ ಪ್ರೀತಿಗೆ ಇದೀಗ ಸಿದ್ದು-ಪ್ರಿಯಾ ಮದುವೆಯೆಂಬ (Wedding) ಮುದ್ರೆ ಒತ್ತಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಭಾನುವಾರ (ಫೆ.12)ರಂದು ಪಾರು ನಟ ಸಿದ್ದು- ʻಗಟ್ಟಿಮೇಳʼ ಖ್ಯಾತಿಯ ನಟಿ ಪ್ರಿಯಾ ಆಚಾರ್ ಹಸೆಮಣೆ ಏರಿದ್ದಾರೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ. ಈ ಮದುವೆ ಸಂಭ್ರಮಕ್ಕೆ `ಗಟ್ಟಿಮೇಳ’ ಮತ್ತು `ಪಾರು’ ಸೀರಿಯಲ್ ತಂಡ ಸಾಕ್ಷಿಯಾಗಿದೆ.

     

    View this post on Instagram

     

    A post shared by Priya j achar???? (@priya_j_achar)

    ಫೆ.12ರಂದು ಮದುವೆಯಾಗಿರುವ ಈ ಜೋಡಿ, ಇದೀಗ ಫೆ.14ರಂದು ದಾವಣಗೆರೆಯಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಸ್ಟ್ ಫ್ರೆಂಡ್ ಪತಿಯನ್ನೇ ಪಟಾಯಿಸಿದಳು ಎಂದವರಿಗೆ ನಟಿ ಹನ್ಸಿಕಾ ಸ್ಪಷ್ಟನೆ

    ಬೆಸ್ಟ್ ಫ್ರೆಂಡ್ ಪತಿಯನ್ನೇ ಪಟಾಯಿಸಿದಳು ಎಂದವರಿಗೆ ನಟಿ ಹನ್ಸಿಕಾ ಸ್ಪಷ್ಟನೆ

    ನ್ನಡದ `ಬಿಂದಾಸ್’ (Bindas Film) ಸಿನಿಮಾಗೆ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar)  ನಾಯಕಿಯಾಗುವ ಮೂಲಕ ಪರಿಚಿತರಾದ ಹನ್ಸಿಕಾ ಮೋಟ್ವಾನಿ (Hansika Motwani) ಇತ್ತೀಚಿಗಷ್ಟೆ ಉದ್ಯಮಿ ಸೋಹೈಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಸ್ನೇಹಿತೆಯ ಪತಿಯನ್ನೇ ಪಟಾಯಿಸಿ ಮದುವೆಯಾದಳು ಎಂಬ ನೆಟ್ಟಿಗರ ಮಾತಿಗೆ ಹನ್ಸಿಕಾ ಮೋಟ್ವಾನಿ ಸ್ಪಷ್ಟನೆ ನೀಡಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗಿರುವ `ಲವ್ ಶಾದಿ ಡ್ರಾಮಾ’ದಲ್ಲಿ (Love Shadi Drama) ನಟಿ ಮನಬಿಚ್ಚಿ ಮಾತನಾಡಿದ್ದಾರೆ.

    ದಕ್ಷಿಣ ಭಾರತದ ಪಗತಿಭಾನ್ವಿತ ನಟಿ ಹನ್ಸಿಕಾ ಮೋಟ್ವಾನಿ ಅವರು ಕಳೆದ ವರ್ಷದ ಅಂತ್ಯದಲ್ಲಿ ಡಿ.4ರಂದು ಸೋಹೈಲ್ (Sohael Katuriya) ಜೊತೆಗೆ ಹೊಸ ಬಾಳಿಗೆಬ ಕಾಲಿಟ್ಟರು. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಮದುವೆಯೆಂಬ ಮುದ್ರೆ ಒತ್ತುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟರು. ಇನ್ನೂ ಸೆಲೆಬ್ರಿಟಿಗಳ ವೈಯಕ್ತಿಕ ವಿಚಾರಗಳನ್ನ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಇರುತ್ತದೆ. ಹೀಗಿರುವಾಗ ತಮ್ಮ ಸಂಭ್ರಮವನ್ನ ಫ್ಯಾನ್ಸ್ ಮುಂಡಿಡಲು ನಟಿ ಭಿನ್ನ ಪ್ರಯತ್ನ ಮಾಡಿದ್ದಾರೆ.

    ಒಟಿಟಿ ಮೂಲಕ ಹನ್ಸಿಕಾ-ಸೋಹೈಲ್ ಜೋಡಿಗಳ ಲವ್ ಲೈಫ್ ಬಗ್ಗೆ ಒಂದಷ್ಟು ರಹಸ್ಯಗಳನ್ನು ಜನರ ಮುಂದೆ ತೆರೆದಿಟ್ಟು, ಮದುವೆಯ ಝಲಕ್ ತೋರಿಸಲಾಗುತ್ತಿದೆ. ಈಗ ಖಾಸಗಿ ಒಟಿಟಿಯಲ್ಲಿ ಹನ್ಸಿಕಾ- ಸೋಹೈಲ್ ಮದುವೆ ವಿಡಿಯೋ ಪ್ರಸಾರ ಆಗುತ್ತಿದೆ. ಇದರ ಮೊದಲ ಎಪಿಸೋಡ್‌ನಲ್ಲಿ ಒಂದಷ್ಟು ವಿಚಾರಗಳನ್ನು ಹನ್ಸಿಕಾ ಹೇಳಿಕೊಂಡಿದ್ದಾರೆ. ಉದ್ಯಮಿ ಸೋಹೈಲ್ ಈ ಮೊದಲೇ ಒಂದು ಮದುವೆ ಆಗಿದ್ದರು. ಅವರ ಮಾಜಿ ಪತ್ನಿಯ ಹೆಸರು ರಿಂಕಿ. ರಿಂಕಿ ಮತ್ತು ಹನ್ಸಿಕಾ ಫ್ರೆಂಡ್ಸ್ ಆಗಿದ್ದರು. ಸೋಹೈಲ್ ಹಾಗೂ ರಿಂಕಿ ಮದುವೆಯಲ್ಲಿ ಹನ್ಸಿಕಾ ಕೂಡ ಭಾಗಿ ಆಗಿದ್ದರು. ಸೋಹೈಲ್ ಜತೆ ಹನ್ಸಿಕಾ ಮದುವೆ ಘೋಷಣೆ ಮಾಡಿಕೊಳ್ಳುತ್ತಿದ್ದಂತೆಯೇ ಒಂದಷ್ಟು ಮಂದಿ `ಆಪ್ತ ಸ್ನೇಹಿತೆಯ ಗಂಡನನ್ನೇ ಕದ್ದಳು’ ಎಂದು ಹನ್ಸಿಕಾ ಅವರನ್ನು ಟೀಕೆ ಮಾಡಿದರು. ಲವ್ ಶಾದಿ ಡ್ರಾಮಾದಲ್ಲಿ ಹನ್ಸಿಕಾ ಈ ಬಗ್ಗೆ ಅಸಲಿ ಮಾತನ್ನ ಬಿಚ್ಚಿಟ್ಟಿದ್ದಾರೆ.

     

    View this post on Instagram

     

    A post shared by Hansika Motwani (@ihansika)

    ಆ ಸಮಯದಲ್ಲಿ ಈ ವ್ಯಕ್ತಿಯ ಪರಿಚಯ ನನಗಿತ್ತು ಎಂದ ಮಾತ್ರಕ್ಕೆ ತಪ್ಪು ನನ್ನದೇ ಎಂದು ಹೇಳಲು ಸಾಧ್ಯವಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ. ನಾನು ಪಬ್ಲಿಕ್ ಫಿಗರ್ ಆಗಿರುವುದರಿಂದ ಜನರಿಗೆ ನನ್ನ ಕಡೆ ಬೆರಳು ಮಾಡಿ, ನನ್ನನ್ನು ವಿಲನ್ ಮಾಡೋದು ಸುಲಭ. ಸೆಲೆಬ್ರಿಟಿ ಆಗಿರುವುದರಿಂದ ನಾನು ತೆರುತ್ತಿರುವ ಬೆಲೆ ಇದು ಎಂದು ಹನ್ಸಿಕಾ ಹೇಳಿದ್ದಾರೆ. ಇದನ್ನೂ ಓದಿ: ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸಾರಾ; ವಿಶೇಷ ಬೇಡಿಕೆಯಿಟ್ಟ ಫ್ಯಾನ್ಸ್

    ನಾನು ಈ ಮೊದಲು ಮದುವೆ ಆಗಿದ್ದೆ. ಅದು ಮುರಿದು ಬಿತ್ತು. ಈ ವಿಚಾರ ಪ್ರಪಂಚಕ್ಕೆ ಗೊತ್ತಾಯಿತು. ಆದರೆ, ತಪ್ಪಾದ ರೀತಿಯಲ್ಲಿ ಈ ಮಾಹಿತಿಯನ್ನು ಹೇಳಲಾಯಿತು. ಹನ್ಸಿಕಾ ಅವರಿಂದ ನನ್ನ ಹಾಗೂ ರಿಂಕಿ ಸಂಬಂಧ ಹಾಳಾಯಿತು ಎಂದು ಹೇಳಲಾಯಿತು. ಇದು ಸುಳ್ಳು ಹಾಗೂ ಆಧಾರ ರಹಿತವಾದುದ್ದು. ನಾವಿಬ್ಬರೂ ಸ್ನೇಹಿತರು. ಹನ್ಸಿಕಾ (Hansika Motwani) ನನ್ನ ಮದುವೆಗೆ ಹಾಜರಾದ ಫೋಟೋ ನೋಡಿದ್ದರಿಂದ ಈ ಊಹಾಪೋಹ ಪ್ರಾರಂಭವಾಯಿತು ಎಂದು ಸೋಹೈಲ್ ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆಯಾದ ಸಂಭ್ರಮದಲ್ಲಿ ಪತ್ನಿ ಕಿಯಾರಾಗೆ ಮುತ್ತಿಟ್ಟ ಸಿದ್ಧಾರ್ಥ್

    ಮದುವೆಯಾದ ಸಂಭ್ರಮದಲ್ಲಿ ಪತ್ನಿ ಕಿಯಾರಾಗೆ ಮುತ್ತಿಟ್ಟ ಸಿದ್ಧಾರ್ಥ್

    ಬಾಲಿವುಡ್‌ನ (Bollywood) `ಷೇರ್‌ಷಾ’ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಸಾಕಷ್ಟು ಗಾಸಿಪ್‌ ನಡುವೆ ಸಿದ್-ಕಿಯಾರಾ ಸತಿ-ಪತಿಗಳಾಗಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಸದ್ಯ ತಮ್ಮ ಮದುವೆ (Wedding) ವೀಡಿಯೋ ಮೂಲಕ ಈ ಜೋಡಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದಾರೆ. ಕಿಯಾರಾ ಅಡ್ವಾಣಿ (Kiara Advani) ತುಟಿಗೆ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಮುತ್ತಿಟ್ಟಿರುವ (Kiss) ವೀಡಿಯೋ ಸಖತ್ ಸದ್ದು ಮಾಡ್ತಿದೆ.

    ಹಲವು ವರ್ಷಗಳ ಪ್ರೀತಿಗೆ ಮದುವೆಯ ಮೂಲಕ ಅಭಿಮಾನಿಗಳಿಗೆ ಕಿಯಾರಾ ಮತ್ತು ಸಿದ್ ಗುಡ್ ನ್ಯೂಸ್ ಕೊಟ್ಟರು. ಫೆ.7ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾದರು. ಸಿದ್-ಕಿಯಾರಾ ಮದುವೆಯ ಮುದ್ದಾದ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದರು. ಈಗ ಮದುವೆಯ ರೊಮ್ಯಾಂಟಿಕ್ ವೀಡಿಯೋ ಶೇರ್ ಮಾಡುವ ಮೂಲಕ ಹವಾ ಕ್ರಿಯೆಟ್ ಮಾಡಿದ್ದಾರೆ.‌ ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

     

    View this post on Instagram

     

    A post shared by KIARA (@kiaraaliaadvani)

    ವಧು ಕಿಯಾರಾ ಡ್ಯಾನ್ಸ್ ಮಾಡುತ್ತ ಮದುವೆ ಮಂಟಪದತ್ತ ಬರುತ್ತಾರೆ. ಮದುವೆಗೆ ಸಮಯವಾಯಿತು ಎಂದು ಸಿದ್ಧಾರ್ಥ್ ಸನ್ನೆ ಮಾಡುತ್ತಾರೆ. ಬಳಿಕ ಖುಷಿ ಖುಷಿಯಾಗಿ ಹಾರ ಬದಲಾಯಿಸುತ್ತ ಮದುವೆಯಾಗಿದ್ದಾರೆ. ಇಬ್ಬರ ಮೇಲೆ ಹೂವಿನ ಮಳೆ ಸುರಿಯುತ್ತದೆ. ಪತ್ನಿ ಕಿಯಾರಾಗೆ ತುಟಿಗೆ ಮುತ್ತಿಟ್ಟು ರೊಮ್ಯಾಂಟಿಕ್ ಆಗಿ ಸ್ವಾಗತಿಸಿದ್ದಾರೆ. ಈ ಚೆಂದದ ವೀಡಿಯೋ `ಷೇರ್‌ಷಾ’ ಸಿನಿಮಾದ ʻರಾಂಜಾʼ ಹಾಡನ್ನೇ ವೀಡಿಯೋಗೆ ಬಳಕೆ ಮಾಡಲಾಗಿದೆ. ಈ ವೀಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

     

    View this post on Instagram

     

    A post shared by KIARA (@kiaraaliaadvani)

    ಮದುವೆಗೆ ಆಪ್ತರು ಮತ್ತು ಕುಟುಂಬಸ್ಥರು ಸಮ್ಮುಖದಲ್ಲಿ ನೆರವೇರಿದ ಕಾರಣ ಸದ್ಯದಲ್ಲೇ ಸಿನಿಮಾರಂಗ ಸ್ನೇಹಿತರಿಗಾಗಿ ಮುಂಬೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ಪ್ಲ್ಯಾನ್ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟಿ ಶಿವಲೀಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ `ದೃಶ್ಯಂ 2′ ನಿರ್ದೇಶಕ

    ನಟಿ ಶಿವಲೀಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ `ದೃಶ್ಯಂ 2′ ನಿರ್ದೇಶಕ

    ಬಾಲಿವುಡ್‌ನ (Bollywood) ಲವ್ ಬರ್ಡ್ಸ್ ಕಿಯಾರಾ-ಸಿದ್ಧಾರ್ಥ್ ಹಸೆಮಣೆ ಏರಿದ ಬೆನ್ನಲ್ಲೇ ಮತ್ತೊಂದು ಸ್ಟಾರ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ನಟಿ ಶಿವಲೀಕಾ ಒಬೆರಾಯ್ (Shivaleeka Oberai) ಜೊತೆ `ದೃಶ್ಯಂ 2′ ನಿರ್ದೇಶಕ ಅಭಿಷೇಕ್ ಪಾಠಕ್ (Abhishek Pathak) ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.

     

    View this post on Instagram

     

    A post shared by ABHISHEK PATHAK (@abhishekpathakk)

    ಹಿಂದಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ಶಿವಲೀಕಾ ಮತ್ತು ನಿರ್ದೇಶಕ ಅಭಿಷೇಕ್ ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಇದೀಗ ಮದುವೆಯೆಂಬ ಮುದ್ರೆ ಒತ್ತಿದ್ದಾರೆ.

     

    View this post on Instagram

     

    A post shared by Shivaleeka Oberoi (@shivaleekaoberoi)

    ಗೋವಾದಲ್ಲಿ (Goa) ಖಾಸಗಿ ರೆಸಾರ್ಟ್‌ವೊಂದರಲ್ಲಿ (ಫೆ.9)ರಂದು ಗುರುಹಿರಿಯರ ಸಮ್ಮುಖದಲ್ಲಿ ಅಭಿಷೇಕ್ ಪಾಠಕ್- ನಟಿ ಶಿವಲೀಕಾ ಮದುವೆಯಾಗಿದ್ದಾರೆ. ಬಿಳಿ ಬಣ್ಣದ ಶೆರ್ವಾನಿಯಲ್ಲಿ ಅಭಿಷೇಕ್ ಮಿಂಚಿದ್ದರೆ, ಕೆಂಪು ಬಣ್ಣದ ಲೆಹೆಂಗಾದಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮದುವೆಗೆ ನವಜೋಡಿಗಳ ಡ್ರೆಸ್ ಡಿಸೈನ್ ಮನೀಷ್ ಮಲ್ಹೋತ್ರಾ (Manish Malhotra) ಅವರ ಡಿಸೈನ್‌ನಲ್ಲಿ ಮೂಡಿಬಂದಿದೆ. ಮದುವೆ ಫೋಟೋ ಹಂಚಿಕೊಂಡಿರುವ ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಬಾಲಕನ ಆಸೆ ಈಡೇರಿಸಿದ ನಟ ರಾಮ್ ಚರಣ್

    ಇನ್ನೂ ನಿರ್ದೇಶಕ ಅಭಿಷೇಕ್ ಪಾಠಕ್ ಅವರು `ಬೂಂದ್’, `ಉಜ್ದಾ ಚಮನ್’, `ದೃಶ್ಯಂ 2′ ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಊಟದ ಪ್ಲೇಟ್ ನೀಡಲು ಲೇಟ್ ಮಾಡಿದ್ದಕ್ಕೆ ಅಡುಗೆ ಸಿಬ್ಬಂದಿಯನ್ನೇ ಹೊಡೆದು ಕೊಂದ್ರು

    ಊಟದ ಪ್ಲೇಟ್ ನೀಡಲು ಲೇಟ್ ಮಾಡಿದ್ದಕ್ಕೆ ಅಡುಗೆ ಸಿಬ್ಬಂದಿಯನ್ನೇ ಹೊಡೆದು ಕೊಂದ್ರು

    ನವದೆಹಲಿ: ಮದುವೆಯೊಂದರಲ್ಲಿ (Wedding) ಊಟದ ತಟ್ಟೆಗಳನ್ನು (Food Plate) ನೀಡುವುದರ ಕುರಿತು ನಡೆದ ವಾಗ್ವಾದದಲ್ಲಿ ಮ್ಯೂಸಿಕ್ ಬ್ಯಾಂಡ್‌ನ (Music Band) ಸದಸ್ಯರು ಅಡುಗೆ ಸಿಬ್ಬಂದಿಯನ್ನು ಹೊಡೆದು ಹತ್ಯೆಗೈದ ಘಟನೆ ದೆಹಲಿಯಲ್ಲಿ (New Delhi) ನಡೆದಿದೆ.

    ಅಡುಗೆ ಸಿಬ್ಬಂದಿ ಸಂದೀಪ್‌ ಮೃತ ವ್ಯಕ್ತಿ. ದೆಹಲಿಯ ಪ್ರಶಾಂತ್ ವಿಹಾರ್‌ನಲ್ಲಿ ಈ ಘಟನೆ ನಡೆದಿದೆ. ಡಿಜೆ ಸೇರಿದಂತೆ ಮ್ಯೂಸಿಕ್ ಬ್ಯಾಂಡ್‍ನ ಸದಸ್ಯರು ಸಂದೀಪ್ ಸಿಂಗ್ ಬಳಿ ಊಟಕ್ಕೆ ಪ್ಲೇಟ್‍ಗಳನ್ನು ಕೇಳಿದ್ದರು.

    ಈ ವೇಳೆ ಸಂದೀಪ್ ಸಿಂಗ್, ಸ್ವಚ್ಛಗೊಳಿಸಲಾಗುತ್ತಿದೆ. ಹಾಗಾಗಿ ಸ್ವಲ್ಪ ಸಮಯದ ನಂತರ ಪ್ಲೇಟ್‍ಗಳನ್ನು ನೀಡುತ್ತೇವೆ ಎಂದು ಆ ವಾದಕರಿಗೆ ತಿಳಿಸಿದ್ದಾನೆ.

    ಪ್ಲೇಟ್ ನೀಡುವುದು ತಡವಾಗಿದ್ದರಿಂದ ಕೋಪಗೊಂಡ ಬ್ಯಾಂಡ್ ಸದಸ್ಯರು ಸಂದೀಪ್‍ನನ್ನು ಪ್ಲಾಸ್ಟಿಕ್ ಕ್ರೇಟ್‍ನಿಂದ ಥಳಿಸಿದ್ದಾರೆ. ಕೂಡಲೇ ಅಲ್ಲಿದ್ದವರು ಸಂದೀಪನನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್‌

    ವಾಗ್ವಾದದಲ್ಲಿ ನಾಲ್ವರು ಭಾಗಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇತರ ಇಬ್ಬರು ಆರೋಪಿಗಳಿಗಾಗಿ ಹುಡುಕಾಡುತ್ತಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಯುಕೆಜಿ ಮಗುವನ್ನು ಫೇಲ್ ಮಾಡಿದ ಶಿಕ್ಷಣ ಸಂಸ್ಥೆಗೆ ನೋಟಿಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್-ಕಿಯಾರಾ ಮದುವೆಯಲ್ಲಿ ಮಿಂಚಿದ ಜೂಹಿ ಚಾವ್ಲಾ‌, ಪೃಥ್ವಿರಾಜ್ ಸುಕುಮಾರನ್

    ಸಿದ್-ಕಿಯಾರಾ ಮದುವೆಯಲ್ಲಿ ಮಿಂಚಿದ ಜೂಹಿ ಚಾವ್ಲಾ‌, ಪೃಥ್ವಿರಾಜ್ ಸುಕುಮಾರನ್

    ಬಾಲಿವುಡ್‌ನ (Bollywood) ಮುದ್ದಾದ ಜೋಡಿ ಸಿದ್ಧಾರ್ಥ್ (Siddarth Malhotra) ಮತ್ತು ಕಿಯಾರಾ (Kiara Advani) ದಾಂಪತ್ಯ (Wedding) ಬದುಕಿಗೆ ಕಾಲಿಟ್ಟಿದ್ದಾರೆ. ಈ ಸಂಭ್ರಮಕ್ಕೆ ಸಾಕಷ್ಟು ಸೆಲೆಬ್ರಿಟಿ (Stars) ಸ್ನೇಹಿತರು ಸಾಕ್ಷಿಯಾಗಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಬಿಟೌನ್‌ನ `ಷೇರ್‌ಷಾ’ ಜೋಡಿ ಇದೇ ಫೆ.7ಕ್ಕೆ ರಾಜಸ್ಥಾನದಲ್ಲಿ (Rajastan) ಹಸೆಮಣೆ ಏರಿದ್ದರು. ಇದೀಗ ಖುಷಿ ಖುಷಿಯಾಗಿ ಸಿದ್ಧಾರ್ಥ್ ದೆಹಲಿ ಮನೆಗೆ ಅದ್ದೂರಿಯಾಗಿ ಸೊಸೆಯಾಗಿ ಕಾಲಿಟ್ಟಿದ್ದು ಆಯ್ತು. ಈಗ ಸಿದ್-ಕಿಯಾರಾ ಅದ್ದೂರಿ ಮದುವೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು ಈ ಕುರಿತ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ

    ಸಿದ್- ಕಿಯಾರಾ ಮದುವೆ ಸಂಭ್ರಮದಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ, ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ದಂಪತಿ (Prithviraj Sukumaran)  ಬಾಲಿವುಡ್ ನಟಿ ಜೂಹಿ ಚಾವ್ಲಾ, ನಿರ್ಮಾಪಕ ಕರಣ್ ಜೋಹರ್ ಭಾಗಿಯಾಗಿದ್ದರು. ಅಂದ್ಹಾಗೆ ಸಿದ್ಧಾರ್ಥ್ ಮೊದಲ ಸಿನಿಮಾಗೆ ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು.

     

    View this post on Instagram

     

    A post shared by Sidharth Malhotra (@sidmalhotra)

    ಸದ್ಯ ನವಜೋಡಿ ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆಗೆ ಅಭಿಮಾನಿಗಳಿಂದ, ಸಿನಿಮಾರಂಗದ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ನಂತರ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡ ಸಿದ್-ಕಿಯಾರಾ

    ಮದುವೆ ನಂತರ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡ ಸಿದ್-ಕಿಯಾರಾ

    ಬಾಲಿವುಡ್‌ನ (Bollywood) ನವ ಜೋಡಿ ಸಿದ್ (Siddarth Malhotra) ಮತ್ತು ಕಿಯಾರಾ (Kiara Advani) ಫೆ.7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಈಗ ಮೊದಲ ಬಾರಿಗೆ ʻಷೇರ್‌ಷಾʼ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಹಲವು ವರ್ಷಗಳ ಪ್ರೀತಿಗೆ ಸಿದ್-ಕಿಯಾರಾ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ತಮ್ಮ ಪ್ರೀತಿ, ಮದುವೆ ಬಗ್ಗೆ ಅದೆಷ್ಟೇ ಸುದ್ದಿಯಾಗಿದ್ದರೂ ಸೈಲೆಂಟ್ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿರುವ ನವ ಜೋಡಿ ಈಗ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ

     

    View this post on Instagram

     

    A post shared by Viral Bhayani (@viralbhayani)

    ರಾಜಸ್ಥಾನದಲ್ಲಿ (Rajastan) ಅದ್ದೂರಿ ಮದುವೆ ಬಳಿಕ ವರನ ಸ್ವಗೃಹ ಅಂದರೆ ಸಿದ್ಧಾರ್ಥ್ ಮನೆಯತ್ತ ಈ ಜೋಡಿ ಸತಿ-ಪತಿಗಳಾಗಿ ಕಾಲಿಟ್ಟಿದ್ದಾರೆ. ದೆಹಲಿಯತ್ತ ಪ್ರಯಾಣ ಮಾಡುವ ಮುನ್ನ ಜೈಸಲ್ಮೇರ್‌ನ ವಿಮಾನ ನಿಲ್ದಾಣದಲ್ಲಿ ಸಿದ್-ಕಿಯಾರಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಜೋಡಿಗೆ ಪಾಪರಾಜಿಗಳು ಶುಭಹಾರೈಸಿದ್ದಾರೆ. ಧನ್ಯವಾದಗಳನ್ನ ತಿಳಿಸಿ ದೆಹಲಿಗೆ ಹಾರಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸಿದ್ ಜೋಡಿಯ ಮದುವೆಯ ಬಗ್ಗೆಯೇ ಸುದ್ದಿಯಾಗುತ್ತಿದೆ. ಹೊಸ ಜೋಡಿಗೆ ಫ್ಯಾನ್ಸ್, ಸಿನಿಮಾ ಸ್ನೇಹಿತರು ವಿಶ್ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k