Tag: wedding

  • ಸೆ.24ಕ್ಕೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆ ಡೇಟ್ ಫಿಕ್ಸ್

    ಸೆ.24ಕ್ಕೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆ ಡೇಟ್ ಫಿಕ್ಸ್

    ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಮದುವೆ (Wedding) ಡೇಟ್ ಫಿಕ್ಸ್ ಆಗಿದೆ. ಇದೇ ಸೆಪ್ಟೆಂಬರ್ 24ರಂದು ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ರಾಜಕಾರಣಿ ಜೊತೆ ಸ್ಟಾರ್ ನಟಿಯ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ಟ್ರೋಲ್‌ಗೆ ಡೋಂಟ್ ಕೇರ್- ಮತ್ತೆ ಬಿಕಿನಿ ಫೋಟೋ ಹಂಚಿಕೊಂಡ ಸೋನು

    ಇದೇ ಸೆ.23 ಮತ್ತು 24ರಂದು ರಾಜಸ್ಥಾನದ ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸದಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ಜರುಗಲಿದೆ. ಈ ಮದುವೆಗೆ 200ಕ್ಕೂ ಹೆಚ್ಚು ಅತಿಥಿಗಳು ಮತ್ತು 50ಕ್ಕೂ ಹೆಚ್ಚು ವಿವಿಐಪಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ.

    ಹಳದಿ ಶಾಸ್ತ್ರ ಮೆಹೆಂದಿ ಸಂಗೀತ ಕಾರ್ಯಕ್ರಮವು ಸೆ.23ರಂದು ನಡೆಯಲಿದ್ದು, ಸೆ.24ರಂದು ಅದ್ಧೂರಿಯಾಗಿ ವಿವಾಹ ನಡೆಯಲಿದೆ. ಮದುವೆಯ ಬಳಿಕ ಹರಿಯಾಣದಲ್ಲಿ ಈ ಜೋಡಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

    ಮದುವೆಗೆ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಮತ್ತು ನಿಕ್ ಜೋನಸ್ ಸೇರಿದಂತೆ ರಾಜಕೀಯ ರಂಗದ ಪ್ರಮುಖ ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರಾ ಬಳಿ ಪರಿಣಿತಿ ಜೋಡಿ ಮದುವೆ ಧಿರಿಸಿಗೆ ಆರ್ಡರ್ ನೀಡಿದ್ದಾರೆ. ಮದುವೆಯ ಕಾರ್ಯಗಳು ತೆರೆಮರೆಯಲ್ಲಿ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ.

    ಹಲವು ವರ್ಷಗಳ ಪ್ರೀತಿಗೆ ಪರಿಣಿತಿ- ರಾಘವ್ ಮೇ 13ರಂದು ಉಂಗುರದ ಮುದ್ರೆ ಒತ್ತಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಪರಿಣಿತಿ ಚೋಪ್ರಾ ಎಂಗೇಜ್ ಆಗಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮ್ಯಾರೇಜ್ ಪ್ಲ್ಯಾನ್ ಬಗ್ಗೆ ಅನುಷ್ಕಾ ಶೆಟ್ಟಿ ಸ್ಪಷ್ಟನೆ

    ಮ್ಯಾರೇಜ್ ಪ್ಲ್ಯಾನ್ ಬಗ್ಗೆ ಅನುಷ್ಕಾ ಶೆಟ್ಟಿ ಸ್ಪಷ್ಟನೆ

    ನ್ನಡತಿ ಅನುಷ್ಕಾ ಶೆಟ್ಟಿ (Anushka Shetty) ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾ ಇದೇ ಸೆ.7ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ಭಾಗಿಯಾಗಿದ್ದಾರೆ. ಈ ವೇಳೆ, ಮದುವೆ, ಟ್ರೋಲ್ ಮತ್ತು ಪ್ರಭಾಸ್ ಜೊತೆಗಿನ ಸಿನಿಮಾ ಬಗ್ಗೆ ಅನುಷ್ಕಾ ಶೆಟ್ಟಿ ಮುಕ್ತವಾಗಿ ಮಾತನಾಡಿದ್ದಾರೆ.

    ತಮ್ಮ ಮದುವೆಯ ವಿಚಾರದ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಮದುವೆ (Wedding) ಪ್ಲ್ಯಾನ್ ಏನಾದರೂ ಇದ್ಯಾ? ಎನ್ನುವ ನಿರೂಪಕಿಯ ಪ್ರಶ್ನೆಗೆ ಸ್ವೀಟ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮದುವೆಗೆ ವಿರುದ್ಧ ಅಲ್ಲ. ನಾನು ಸಂಗಾತಿಯನ್ನು ಹೊಂದಲು ಮತ್ತು ಕುಟುಂಬ ಆರಂಭಿಸಲು ಇಷ್ಟಪಡುತ್ತೇನೆ. ಅದರಲ್ಲಿ ನನಗೆ ನಂಬಿಕೆ ಇದೆ. ಆದರೆ ಅದು ಸ್ವಾಭಾವಿಕವಾಗಿ ಆಗಬೇಕು. ಬರೀ ಸಮಾಜದ ಒತ್ತಡಕ್ಕೆ ಆಗುವುದಲ್ಲ ಎಂದಿದ್ದಾರೆ. ಇದನ್ನೂ ಓದಿ:ರಾಕಿಭಾಯ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್- ಅಕ್ಟೋಬರ್‌ನಲ್ಲಿ Yash 19ಗೆ ಮುಹೂರ್ತ ಫಿಕ್ಸ್

    ಸೋಶಿಯಲ್ ಮೀಡಿಯಾದಲ್ಲಿ ನಾನು ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರಮೋಷನ್‌ಗೆ ಸಾಮಾಜಿಕ ಜಾಲತಾಣದ ಬಳಕೆ ಮಾಡುತ್ತೇನೆ. ಎಲ್ಲರಿಗೂ ಅವರದ್ದೇ ಆದ ಸಮಸ್ಯೆ ಇರುತ್ತದೆ. ಮೊದಲು ನಾವು ಮನುಷ್ಯರಾಗಬೇಕು ಎಂದಿದ್ದಾರೆ ಅನುಷ್ಕಾ ಶೆಟ್ಟಿ. ಇದನ್ನೂ ಓದಿ:ರಾಕಿಭಾಯ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್- ಅಕ್ಟೋಬರ್‌ನಲ್ಲಿ Yash 19ಗೆ ಮುಹೂರ್ತ ಫಿಕ್ಸ್

    ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿ ಪ್ರಭಾಸ್ (Prabhas) ಜೊತೆ ನಟಿಸುತ್ತೇನೆ. ಒಳ್ಳೆಯ ಕಥೆ ಬರಬೇಕು ಅಷ್ಟೇ ಎಂದು ಬಾಹುಬಲಿ ನಟಿ ಸ್ಪಷ್ಟನೆ ನೀಡಿದ್ದಾರೆ.

    ನವೀನ್ ಪೋಲಿ ಶೆಟ್ಟಿಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಮೊದಲ ಬಾರಿಗೆ ಶೆಫ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಹುಭಾಷೆಗಳಲ್ಲಿ ಸೆ.7ರಂದು ರಿಲೀಸ್ ಆಗುತ್ತಿದೆ. ಜವಾನ್ ಮುಂದೆ ಅನುಷ್ಕಾ ಸಿನಿಮಾ ಬಿಡುಗಡೆ ಆಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಚಿತಾ ರಾಮ್ ತರ ಹುಡುಗಿ ಸಿಗಬೇಕು- ಮದುವೆ ಬಗ್ಗೆ ಹನುಮಂತ ಪ್ರತಿಕ್ರಿಯೆ

    ರಚಿತಾ ರಾಮ್ ತರ ಹುಡುಗಿ ಸಿಗಬೇಕು- ಮದುವೆ ಬಗ್ಗೆ ಹನುಮಂತ ಪ್ರತಿಕ್ರಿಯೆ

    ಸಿಂಗರ್, ಡ್ಯಾನ್ಸರ್ ಈಗ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಹನುಮಂತ (Hanumantha) ಮತ್ತೆ ಹಂಗಾಮಾ ಮಾಡ್ತಿದ್ದಾರೆ. ಅಕುಲ್ ಮಾತು ಹನುಮಂತನ ಡ್ಯಾನ್ಸ್ ನೋಡಿ ಕ್ರೇಜಿ ಸ್ಟಾರ್ ನಕ್ಕರು, ರಚಿತಾ ಒನ್ಸಮೋರ್ ಅಂದ್ರು. ಇದು ಹನುಮಂತನ ಡ್ಯಾನ್ಸ್ ಜೊತೆಗೆ ರಾಕಿಭಾಯ್ ಅವತಾರದಲ್ಲಿ ನೋಡಿ ಖುಷಿ ಪಡುವ ಟೈಮ್. ರಚಿತಾ ರಾಮ್ (Rachita Ram) ತರ ಹುಡುಗಿ ಸಿಗಬೇಕು ಅಂತ ಹನುಮ ಅನೌನ್ಸ್ ಮಾಡಿದ್ದಾನೆ.

    ಸಿಂಗರ್ ಆಗಿ ವಾಹಿನಿ ವೇದಿಕೆಗೆ ಎಂಟ್ರಿ ಕೊಟ್ಟ ಹನುಮಂತ ಈಗ ಭರ್ಜರಿ ಬ್ಯಾಚುಲರ್ ಆಗಿ ಮಿಂಚ್ತಿದ್ದಾನೆ. ಹಳ್ಳಿ ಹುಡುಗನ ಮುಗ್ಧತೆಗೆ, ಹಾವೇರಿ ಸೊಗಡಿನ ಮಾತುಗಳಿಗೆ ಕನ್ನಡ ಹೃದಯಗಳು ಮನಸೋತು ಬಹಳ ವರ್ಷಗಳಾಗಿದೆ. ಹನುಮಂತ ಏನು ಮಾಡಿದ್ರು ಚಂದ ಅನ್ನೋ ವಾತಾವರಣ ಈಗ. ಸದ್ಯ ಹನುಮಂತ ವಿಕೇಂಡ್‌ನಲ್ಲಿ ಆಡಿಯನ್ಸ್‌ಗೆ ಕಿಕ್ ಕೊಡಲು ರಾಕಿಭಾಯ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾನೆ. ಕೆಜಿಎಫ್ ಹಾಡಿಗೆ ಪಾಟ್ನರ್ ಜೊತೆ ಹೆಜ್ಜೆ ಹಾಕಿದ್ದಾನೆ. ಇದನ್ನೂ ಓದಿ:ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ‘ಗಟ್ಟಿಮೇಳ’ ನಟಿ ನಿಶಾ

    ಹನುಮಂತನ ಹಾಡು ಕೇಳಿದ ಜನಕ್ಕೆ ಇವನ ಡ್ಯಾನ್ಸ್ ಕೂಡ ಬಹಳ ಇಷ್ಟ ಆಗಿತು. ಈಗ ಭರ್ಜರಿ ಬ್ಯಾಚುಲರ್ಸ್ ಮೂಲಕ ಮತ್ತಷ್ಟು ಕಮಾಲ್ ಮಾಡ್ತಿದ್ದಾನೆ. ಹನುಮಂತನ ಡ್ಯಾನ್ಸ್ ನೋಡಿದ ಬ್ಯಾಚುಲರ್ ಸದಸ್ಯರು ಸಖತ್ ಎಂಜಾಯ್ ಮಾಡಿದ್ದರು. ರಚಿತಾ ರಾಮ್ ಚಪ್ಪಾಳೆ ತಟ್ಟಿ ನಕ್ಕು ನಲಿದ್ರು. ಹನುಮಂತ ಸದ್ಯ ಡ್ಯಾನ್ಸ್‌ನಲ್ಲೂ ಸೈ ಅನಿಸಿಕೊಂಡಿದ್ದಾನೆ. ಹೈದನ ಜೊತೆ ಮಾತುಗಾರ ಮಲ್ಲ ಅಕುಲ್ (Akul) ಸೇರಿ ಶೋನ ಕಿಕ್ ಮತ್ತಷ್ಟು ಹೆಚ್ಚಿಸಿದ್ದರು. ರಾಕಿಭಾಯ್ ಲುಕ್‌ನಲ್ಲಿದ್ದ ಹನುಮಂತ ರಾಕಿಂಗ್ ಸ್ಟಾರ್ (Yash) ಡೈಲಾಗ್ ಹೇಳಿದ. ಆ ಡೈಲಾಗ್ ಸ್ಟೈಲ್ ನೋಡಿ ತುಂಬಾ ಜನ ಎಂಜಾಯ್ ಮಾಡಿದ್ದರು. ಮತ್ತಷ್ಟು ಜನ ಒಳ್ಳೆಯ ಪ್ರಯತ್ನ ಕಣೋ ಹನುಮಂತ ಮಾಡು ಮುಂದೆ ಇನ್ನೂ ಚೆನ್ನಾಗಿ ಮಾಡ್ತೀಯಾ ಅಂತಾ ಜೋಶ್ ತುಂಬಿದ್ದರು.

    ರಚಿತಾ ರಾಮ್ (Rachita Ram) ಕೇಳಿದ ಮದುವೆ (Wedding) ಸಮಾಚಾರಕ್ಕೆ ಹನುಮಂತ ಥಟ್ ಅಂತ ಉತ್ತರ ಕೊಟ್ಟ. ಹನುಮನ ಉತ್ತರ ಕೇಳಿ ಖುದ್ದು ರಚಿತಾ ರಾಮ್ ಶಾಕ್ ಆಗಿ ಒಂದು ಸೆಕೆಂಡ್ ಸೈಲೆಂಟ್ ಆದ್ರು. ನಿಮ್ಮ ತರ ಹುಡುಗಿ ಸಿಕ್ಕಿರೆ ಸಾಕು ಅಂತ ಹನುಮಂತ ಹೇಳಿದ್ದು ಬಹಳಷ್ಟು ಜನರಿಗೆ ಆಶ್ಚರ್ಯ ಮೂಡಿಸಿತ್ತು. ಈ ಉತ್ತರ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಒಟ್ನಲ್ಲಿ ವಿಕೇಂಡ್‌ನಲ್ಲಿ ಭರ್ಜರಿ ಬ್ಯಾಚುಲರ್ಸ್ ಮೂಲಕ ಒಳ್ಳೆಯ ಮನರಂಜನೆ ಕೊಟ್ಟಿದ್ದಾರೆ. ಹನುಮಂತ ಮತ್ತಷ್ಟು ವಿಭಿನ್ನ ಪ್ರಯತ್ನಗಳಿಗೆ ಸಜ್ಜಾಗ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಾಲಕ್ಷ್ಮಿ-ರವೀಂದರ್ ವಿವಾಹ ವಾರ್ಷಿಕೋತ್ಸವ:  ಪತ್ನಿಗೆ ಬರೆದ ಪತ್ರದಲ್ಲೇನಿದೆ?

    ಮಹಾಲಕ್ಷ್ಮಿ-ರವೀಂದರ್ ವಿವಾಹ ವಾರ್ಷಿಕೋತ್ಸವ: ಪತ್ನಿಗೆ ಬರೆದ ಪತ್ರದಲ್ಲೇನಿದೆ?

    ಮಿಸ್ ಮ್ಯಾಚ್ ಜೋಡಿ ಎಂದೇ ಸಖತ್ ವೈರಲ್ ಆಗಿದ್ದ ನಟಿ ಮಹಾಲಕ್ಷ್ಮಿ (Mahalakshmi) ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಸೆಪ್ಟಂಬರ್ 1ರಂದು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಸುಂದರಿ ಮಹಾಲಕ್ಷ್ಮಿಯು ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು. ರವೀಂದರ್ ದಪ್ಪ ಅನ್ನುವ ಕಾರಣಕ್ಕಾಗಿ ಈ ಜೋಡಿ ಅಪಹಾಸ್ಯಕ್ಕೆ ಗುರಿಯಾಗಿತ್ತು. ಏನೇ ಹಾಸ್ಯ ಮಾಡಿದರೂ, ಈ ಜೋಡಿ ಒಂದು ವರ್ಷಗಳ ದಾಂಪತ್ಯ ಮುಗಿಸಿ ತಣ್ಣಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದೆ.

    ಈ ಕುರಿತು ರವೀಂದರ್ ಫೋಟೋವೊಂದನ್ನು ಹಂಚಿಕೊಂಡಿದ್ದು, ಹೆಂಡತಿಯ ಗುಣಗಾನ ಮಾಡಿದ್ದಾರೆ. ‘ಮಹಾಲಕ್ಷ್ಮಿ ತನ್ನ ಬಾಳಿಗೆ ಬಂದ ನಂತರ ತಮ್ಮ ಬದುಕು ಸುಂದರವಾಗಿ ಎಂದಿದ್ದಾರೆ. ಆಕೆ ಕೊಡುವ ಪ್ರೀತಿಗೆ ನಾನು ಅರ್ಹನಲ್ಲ. ಆದರೂ, ಸುಂದರ ಜೀವನ ನಡೆಸುತ್ತಿದ್ದೇವೆ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಇದನ್ನೂ ಓದಿ:ಸಹಾಯಕನ ಮದುವೆಗೆ ರಶ್ಮಿಕಾ ಹಾಜರಿ- ನಟಿಯ ಕಾಲಿಗೆ ಬಿದ್ದ ನವಜೋಡಿ

    ಹಾಗಂತ ಪತ್ನಿಯನ್ನು ಕೇವಲ ಹೊಗಳಿಲ್ಲ. ‘ಅವಳು ದುರಂಹಕಾರಿ, ಆಕೆಯ ಪ್ರೀತಿ ಒರಟು. ಆದರೂ, ಕೋಪ ಬಂದಾಗ ಅಡುಗೆ ಮನೆಗೆ ಸೀದಾ ಹೋಗಿ ನನಗಾಗಿ ತಿಂಡಿಯನ್ನು ಮಾಡಿಕೊಂಡು ಬರುತ್ತಾಳೆ. ಒಂದೊಂದು ಸಲ ಕೆಟ್ಟದ್ದಾಗಿಯೂ ಅಡುಗೆ ಮಾಡಿದ್ದಾಳೆ. ಆಗ ಹೋಟೆಲ್ ನಮಗೆ ಅನಿವಾರ್ಯವಾಗುತ್ತದೆ’ ಎಂದು ಕಾಲೆಳೆದಿದ್ದಾರೆ.

     

    ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಈ ದಂಪತಿ ಸಿಂಪಲ್ ಆಗಿ ಆಚರಿಸಿಕೊಂಡಿದೆ. ಆದರೆ, ಪ್ರೀತಿಯನ್ನು ಮಾತ್ರ ಅಗಾಧವಾಗಿ ಹಂಚಿಕೊಂಡಿದೆ. ರವೀಂದ್ರನ್ ಪತ್ನಿಗಾಗಿ ಉದ್ದದ ಪತ್ರವನ್ನೇ ಬರೆದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಡಿತದ ಚಟದಿಂದ ಮದುವೆ ಮುರಿದೋಯ್ತು, ಮಗಳು ಕೈ ತಪ್ಪಿ ಹೋದಳು- ನಟಿ ಊರ್ವಶಿ

    ಕುಡಿತದ ಚಟದಿಂದ ಮದುವೆ ಮುರಿದೋಯ್ತು, ಮಗಳು ಕೈ ತಪ್ಪಿ ಹೋದಳು- ನಟಿ ಊರ್ವಶಿ

    ರ್ವಶಿ (Urvashi) 80ರ ದಶಕದ ಸ್ಟಾರ್ ನಟಿ. ಪಂಚಭಾಷಾ ತಾರೆ. ಎಲ್ಲಾ ಭಾಷೆ ಸ್ಟಾರ್ಸ್ ಜೊತೆ ನಟಿಸಿದ ಕ್ರೆಡಿಟ್ಟು. ಇಷ್ಟೆಲ್ಲ ಹೆಸರು ಮಾಡಿದ್ದ ಊರ್ವಶಿ ಕೇವಲ ಕುಡಿತದ ಚಟದಿಂದ ಸಂಸಾರವನ್ನೇ ಹಾಳು ಮಾಡಿಕೊಂಡರು. ಮಗಳಿಂದ ದೂರವಾದರು. ಏನಾಯಿತು ಎಂದು ಇತ್ತೀಚಿನ ಸಂದರ್ಶನದಲ್ಲಿ ನಟಿ ಊರ್ವಶಿ ಅವರೇ ಹೆಳಿದ್ದಾರೆ.

    ಡಾ.ರಾಜ್, ವಿಷ್ಣು, ಅಂಬರೀಶ್, ರವಿಚಂದ್ರನ್ ಸೇರಿದಂತೆ ಅಂದಿನ ಎಲ್ಲಾ ಸ್ಟಾರ್ಸ್ ಜೊತೆ ನಟಿಸಿದ್ದರು ಊರ್ವಶಿ. ಶ್ರಾವಣ ಬಂತು, ನಾನು ನನ್ನ ಹೆಂಡ್ತಿ ಸೂಪರ್ ಹಿಟ್ ಆಗಿದ್ದವು. ಅದೇ ಊರ್ವಶಿ ಬದುಕು ಮೂರಾಬಟ್ಟೆಯಾಗಿದ್ದು ಯಾರಿಗೂ ಗೊತ್ತಿಲ್ಲ. ಎರಡನೇ ಮದುವೆ ಮಾಡಿಕೊಂಡಿದ್ದೂ ಅರಿವಿಲ್ಲ. ಇದನ್ನು ಸ್ವತಃ ಊರ್ವಶಿ ಹೇಳಿಕೊಂಡಿದ್ದಾರೆ. ಕುಡಿತದ ಚಟದಿಂದ ಹೇಗೆ ಸಂಸಾರ ಹಾಳು ಮಾಡಿಕೊಂಡೆ ಎನ್ನುವುದನ್ನು ತಿಳಿಸಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹಿಡಿದುಕೊಂಡಿರೋ ಹುಡುಗಿ ಕೈ ಯಾರದ್ದು? ಮನದನ್ನೆ ಬಗ್ಗೆ ಸುಳಿವು ಕೊಟ್ಟ ನಟ

    ಮಲಯಾಳಂ ನಟ ಮನೋಜ್ (Actor Manoj) ಜೊತೆ ಮದುವೆಯಾಯಿತು. ಅವರ ಮನೆಯಲ್ಲಿ ಎಲ್ಲರಿಗೂ ಕುಡಿತದ ಹವ್ಯಾಸ. ನನಗೂ ಬಲವಂತ ಮಾಡಿದರು. ಮೊದಲು ನಿರಾಕರಿಸಿದೆ. ನಂತರ ಒಗ್ಗಿದೆ. ನಂತರ ಕುಡಿತಕ್ಕೆ ದಾಸಳಾದೆ. ಅದೇ ನಮ್ಮಿಬ್ಬರ ಮನಸ್ತಾಪಕ್ಕೆ ಕಾರಣವಾಯಿತು. ಡಿವೋರ್ಸ್ (Divorce) ಆಯಿತು. ಮಗಳು ತೇಜ ಲಕ್ಷ್ಮಿಯನ್ನು ನನ್ನಿಂದ ದೂರ ಮಾಡಿದರು. ಆರು ವರ್ಷದ ನಂತರ ಶಿವಪ್ರಸಾದ್ (Shivaprasad) ಜೊತೆ ಲಗ್ನವಾಯಿತು. ಇಶಾನ್ ಮಗನಿದ್ದಾನೆ. ಈಗ ಸುಖಿ ಸಂಸಾರ.

    ಇದು ನೋಡಿ ಬಣ್ಣದ ಲೋಕದ ಅಸಲಿ ಕಥನ. ಹೊರಗಡೆ ನಮಗೇನೂ ಗೊತ್ತಾಗಲ್ಲ. ಆದರೆ ಒಳಗೆ ನೋಡಿದರೆ ಇನ್ನೇನು ಅನಾಹುತ. ಅದಕ್ಕೆ ಊರ್ವಶಿ ಬದುಕು ಸಾಕ್ಷಿ. 700 ನೂರು ಸಿನಿಮಾ ಮಡಿರುವ ನಟಿ, ಸ್ಟಾರ್‌ ನಟರ ಜೊತೆ ಅಭಿನಯ. ಅನೇಕ ಪ್ರಶಸ್ತಿ. ಎಲ್ಲ ಇದ್ದೂ ಕೇವಲ ಕುಡಿತ ಮೊದಲ ಸಂಸಾರಕ್ಕೆ ಹುಳಿ ಹಿಂಡಿತು. ಈಗಲಾದರೂ ನಗುತ್ತಿದ್ದಾರಲ್ಲ ಅದೇ ನೆಮ್ಮದಿ. ಆದರೆ ಆರದ ಗಾಯ ಆಗಾಗ ಕಾಡುವುದು ಸತ್ಯ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾ, ನಾಗಚೈತನ್ಯ ಡಿವೋರ್ಸ್ ನಿಜ ಆಯ್ತು- 2ನೇ ಮದುವೆ ಬಗ್ಗೆ ಜ್ಯೋತಿಷಿ ಭವಿಷ್ಯ

    ಸಮಂತಾ, ನಾಗಚೈತನ್ಯ ಡಿವೋರ್ಸ್ ನಿಜ ಆಯ್ತು- 2ನೇ ಮದುವೆ ಬಗ್ಗೆ ಜ್ಯೋತಿಷಿ ಭವಿಷ್ಯ

    ಟಿ ಸಮಂತಾ(Samantha)- ನಾಗಚೈತನ್ಯ ಅಕ್ಕಿನೇನಿ (Nagachaitanya) ಡಿವೋರ್ಸ್ (Divorce) ಆಗುತ್ತಾರೆ ಅಂತಾ ಕೆಲ ವರ್ಷಗಳ ಹಿಂದೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು. ಅದರಂತೆಯೇ ಆಯ್ತು, ಈಗ ಇವರಿಬ್ಬರಿಗೂ ವಿವಾಹ(Wedding) ಯೋಗವಿದೆ ಎಂದು ಹೇಳಿ 2ನೇ ಮದುವೆ ಬಗ್ಗೆ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ:60ನೇ ವಸಂತಕ್ಕೆ ಕಾಲಿಟ್ಟ ಸುಮಲತಾ- ಸಂಭ್ರಮದಲ್ಲಿ ಭಾಗಿಯಾದ ಸ್ಟಾರ್ಸ್

    ಟಾಲಿವುಡ್ (Tollywood) ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು ಸೆಲೆಬ್ರಿಟಿಗಳ ವೈಯಕ್ತಿಕ ಜೀವನ, ವೃತ್ತಿ ಜೀವನದ ಬಗ್ಗೆ ಭವಿಷ್ಯ ಹೇಳುತ್ತಿರುತ್ತಾರೆ. ಈಗ ಮತ್ತೆ ಸಮಂತಾ- ನಾಗಚೈತನ್ಯ ವೈವಾಹಿಕ ಬದುಕಿನ ಬಗ್ಗೆ ಮಾತನಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ನಾಗಚೈತನ್ಯ- ಸಮಂತಾ ಡಿವೋರ್ಸ್ ಬಗ್ಗೆ ನಾನು ಮೊದಲು ಹೇಳಿದ್ದೆ. ನಾನು ಡಿವೋರ್ಸ್ (Divorce) ಬಗ್ಗೆ ಹೇಳಿದಾಗ ಅನೇಕರು ನನ್ನ ಟೀಕಿಸಿದ್ದರು. ನಾನು ಹೇಳಿದಂತೆ ಆಯ್ತು. ಇವರಿಬ್ಬರು ಮತ್ತೆ ಒಂದಾಗೋದು ಸಾಧ್ಯವೇ ಇಲ್ಲ. ಇವರಿಬ್ಬರಿಗೂ ಎರಡನೇ ವಿವಾಹದ ಯೋಗವಿದೆ. ವೃತ್ತಿ ವಿಚಾರದಲ್ಲಿ ಸಮಂತಾ ಸ್ಟ್ರಾಂಗ್ ಆಗಿದ್ದರು, ಹಾಗಾಗಿ ಹೀಗೆ ಆಯ್ತು ಎಂದು ವೇಣು ಸ್ವಾಮಿ ಭವಿಷ್ಯ ಹೇಳಿದ್ದಾರೆ.

    ಜಾತಕ ಮ್ಯಾಚ್ ಆಗದೆ ಮದುವೆಯಾದ್ರೆ ಡಿವೋರ್ಸ್ ಆಗತ್ತೆ. ಜಾತಕ ಮ್ಯಾಚ್ ಆಗದೆ ಮದುವೆ ಆದರೆ ಏನೇನೋ ಸಮಸ್ಯೆ ಆಗುತ್ತದೆ. ನಾಗಚೈತನ್ಯ- ಸಮಂತಾ ವಿಚ್ಛೇದನದ ಬಗ್ಗೆ ಮಾತನಾಡಿದ್ವಿ. ಆದರೆ ಅವರ ಸಮಸ್ಯೆ ಅವರಿಗೆ ಗೊತ್ತಿರುತ್ತದೆ. ಅಭಿಷೇಕ್ ಬಚ್ಚನ್ ನೋಡಿ ಒಂದು ಕ್ಯಾಮೆರಾ ಬಂದ್ರೆ, ಐಶ್ವರ್ಯಾ ರೈ ನೋಡಿ 10 ಕ್ಯಾಮೆರಾ ಬರುತ್ತದೆ. ಸೆಲೆಬ್ರಿಟಿಗಳ ಸ್ಟೇಟಸ್ ಕಾಪಾಡಿಕೊಳ್ಳೋದು ತುಂಬ ಕಷ್ಟ. ಇಬ್ಬರೂ ಒಂದೇ ರೀತಿ ಸ್ಟೇಟಸ್ ಮೆಂಟೇನ್ ಮಾಡಿಕೊಳ್ಳೋದು ಕಷ್ಟ. ಹೀಗಾಗಿಯೇ ತಾರಾ ಜೋಡಿಗಳು ವಿಚ್ಛೇದನ ಪಡೆಯೋದು. ಇದನ್ನೂ ಓದಿ:Salaar: ಪ್ರಭಾಸ್‌ ಸಿನಿಮಾ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್

    ನಾಗಾರ್ಜುನ ಕುಟುಂಬದಲ್ಲಿ ತುಂಬ ದೋಷಗಳಿವೆ, ಹೀಗಾಗಿ ಅವರ ಕುಟುಂಬದಲ್ಲಿ ತುಂಬ ಡಿವೋರ್ಸ್ ಆಗುತ್ತಿದೆ. ನಾಗಾರ್ಜುನ ಅವರಿಗೆ ಲಕ್ಷ್ಮೀ ಎನ್ನುವವರ ಜೊತೆ ವಿಚ್ಛೇದನ ಆದ ಬಳಿಕ ಅವರು ಅಮಲಾ ಜೊತೆ ಮದುವೆಯಾದರು. ನಾಗಾರ್ಜುನ, ಅಮಲಾ ಮಗ ಅಖಿಲ್‌ಗೆ ನಿಶ್ಚಿತಾರ್ಥ ಮುರಿದು ಹೋಗಿದೆ. ಅಖಿಲ್ ಜೀವನದಲ್ಲಿ ಅವರ ತಾಯಿ ಮಧ್ಯಸ್ತಿಕೆ ವಹಿಸಿದ್ರೆ ಮದುವೆ ಆಗೋದು ಕಷ್ಟ, ನಾಗಾರ್ಜುನ ನಿರ್ಧಾರ ತಗೊಂಡರೆ ಸರಿ ಹೋಗತ್ತೆ ಎಂದಿದ್ದಾರೆ. ಒಟ್ನಲ್ಲಿ ಜ್ಯೋತಿಷಿ ವೇಣು ಸ್ವಾಮಿ ಆಡಿರುವ ಮಾತು ಸಖತ್‌ ವೈರಲ್‌ ಆಗಿದೆ. ಅನೇಕ ಚರ್ಚೆಗಳಿಗೆ ಗ್ರಾಸವಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ಎದ್ದ ವಧು – ಮುರಿದು ಬಿತ್ತು ಮದುವೆ

    ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ಎದ್ದ ವಧು – ಮುರಿದು ಬಿತ್ತು ಮದುವೆ

    ತುಮಕೂರು: ತಾಳಿ ಕಟ್ಟುವ ವೇಳೆ ಬಂದಾಗ ವಧು (Bride) ಹಸೆಮಣೆಯಿಂದ ಎದ್ದಿದ್ದು, ಬಳಿಕ ಮದುವೆಯೇ (Wedding) ಕ್ಯಾನ್ಸಲ್ ಆಗಿರುವ ಘಟನೆ ತುಮಕೂರಿನಲ್ಲಿ (Tumkur) ನಡೆದಿದೆ.

    ಸುಮಾ (ಹೆಸರು ಬದಲಿಸಲಾಗಿದೆ) ಮದುವೆ ಬೇಡ ಎಂದು ಹಸೆಮಣೆಯಿಂದ ಮೇಲೆದ್ದ ವಧು. ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದ ಹಿನ್ನೆಲೆ ಯುವತಿ ಮದುವೆಯನ್ನು ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡಿದ್ದಾಳೆ.

    ಕಳೆದ ರಾತ್ರಿ ನಡೆದ ರಿಸೆಪ್ಶನ್‌ನಲ್ಲಿ ಯುವತಿ ನಗುತ್ತಲೇ ಫೋಟೋಗಳಿಗೆ ಪೋಸ್ ನೀಡಿದ್ದಳು. ಆದರೆ ಬೆಳಗ್ಗೆ ಮದುವೆಯ ಮುಹೂರ್ತ ಹತ್ತಿರವಾಗುತ್ತಲೇ ಮದುವೆ ಬೇಡ ಎಂದಿದ್ದಾಳೆ. ವಧು ಉಲ್ಟಾ ಹೊಡೆಯುತ್ತಲೇ ಕಲ್ಯಾಣ ಮಂಟಪದಲ್ಲಿ ಗದ್ದಲ ಏರ್ಪಟ್ಟಿದೆ. ಇದನ್ನೂ ಓದಿ: ವಿಮಾನದಲ್ಲಿ ಬಂದು ದುಬಾರಿ ಸೀರೆ ಕದ್ದು ಪರಾರಿಯಾಗ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಅರೆಸ್ಟ್

    ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಕೊಳಾಲ ಪೊಲೀಸ್ ಠಾಣೆಯಲ್ಲಿ ಮಾತುಕತೆ ಮೂಲಕ ಇತ್ಯರ್ಥಗೊಳಿಸಲಾಗಿದೆ. ಇದನ್ನೂ ಓದಿ: ಬಾಣಂತಿ, ಶಿಶುವಿಗೆ ಚಿಕಿತ್ಸೆ ನಿರ್ಲಕ್ಷ್ಯ – ಪ್ರಶ್ನೆ ಮಾಡಿದ್ದಕ್ಕೆ ರೌಡಿ ರೀತಿ ವರ್ತಿಸಿದ ಜಿಲ್ಲಾಸ್ಪತ್ರೆ ವೈದ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರ್ಷಿಕಾ-ಭುವನ್

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರ್ಷಿಕಾ-ಭುವನ್

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರ್ಷಿಕಾ ಪೂಣಚ್ಚ- ಭುವನ್ ಮದುವೆ ಫೋಟೋಗಳು

    ಹರ್ಷಿಕಾ ಪೂಣಚ್ಚ- ಭುವನ್ ಮದುವೆ ಫೋಟೋಗಳು

    ಸ್ಯಾಂಡಲ್‌ವುಡ್ ಹರ್ಷಿಕಾ-ಭುವನ್ ಮದುವೆ ಸಂಭ್ರಮ ಮನೆ ಮಾಡಿದೆ. ಇಂದು (ಆಗಸ್ಟ್) 24ರಂದು ಕೊಡಗಿನ ವಿರಾಜ್‌ಪೇಟೆಯಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿದೆ.

    12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ ಹರ್ಷಿಕಾ ಪೂಣಚ್ಚ(Harshika Poonacha)- ಭುವನ್ ಪೊನ್ನಣ್ಣ ಜೋಡಿ.

    ಗುರುಹಿರಿಯರ ಸಮ್ಮುಖದಲ್ಲಿ ಕೊಡವ ಪದ್ಧತಿಯಂತೆ ಹೊಸ ಬಾಳಿಗೆ ಹರ್ಷಿಕಾ-ಭುವನ್ (Bhuvan Ponnanna) ಜೋಡಿ ಕಾಲಿಟ್ಟಿದ್ದಾರೆ.

    ಆಗಸ್ಟ್ 23ರಂದು ಬುಧವಾರ ಕೊಡಗಿನಲ್ಲಿ ಊರ್ಕುಡುವ ಶಾಸ್ತ್ರ ನಡೆದಿದೆ. ಆಗಸ್ಟ್ 24ರಂದು ಹರ್ಷಿಕಾ ಜೋಡಿಯ ಮದುವೆ (Wedding) ಅದ್ದೂರಿಯಾಗಿ ಜರುಗಿದೆ. ಇದನ್ನೂ ಓದಿ:ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್

    ಭುವನ್ ಬಿಳಿ ಬಣ್ಣ ಉಡುಗೆಯಲ್ಲಿ ಮಿಂಚಿದ್ರೆ, ನಟಿ ಹರ್ಷಿಕಾ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಕೊಡವ ಗೆಟಪ್‌ನಲ್ಲಿ ನವಜೋಡಿ ಹೈಲೆಟ್ ಆಗಿದ್ದಾರೆ.

    ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ.

    ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.

    ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಮಾತನಾಡಿದ್ದರು.

    ಹರ್ಷಿಕಾ-ಭುವನ್ ಮದುವೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh), ಪೂಜಾ ಗಾಂಧಿ(Pooja Gandhi), ಬಿಎಸ್‌ವೈ, ಮುರುಗೇಶ್ ನಿರಾಣಿ, ದೊಡ್ಡಣ್ಣ, ಸುಧಾಕರ್, ಅನುಪ್ರಭಾಕರ್ ದಂಪತಿ, ತಬಲಾ ನಾಣಿ ಸೇರಿದಂತೆ ಹಲವರು ಭಾಗಿಯಾಗಿ ಶುಭಹಾರೈಸಿದ್ದರು.

    ಚಂದನವನದ ನವ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ನೂರು ಕಾಲ ಜೊತೆಯಾಗಿ ಸುಖವಾಗಿ ಬಾಳಲಿ ಎಂದು ವಿಶ್ ಮಾಡ್ತಿದ್ದಾರೆ.

    ‘ಪಿಯುಸಿ’ (Puc) ಸಿನಿಮಾ ಮೂಲಕ ನಟಿ ಹರ್ಷಿಕಾ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಜಾಕಿ, ತಮಸ್ಸು, ಕಾಸಿನ ಸರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕೊಂಕಣಿ, ತುಳು ಸೇರಿದಂತೆ 8 ಭಾಷೆಗಳಲ್ಲಿ ನಾಯಕಿಯಾಗಿ ಹರ್ಷಿಕಾ ಗಮನ ಸೆಳೆದಿದ್ದಾರೆ.

    ಭುವನ್ ಪೊನ್ನಣ್ಣ ಅವರು ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ, ರಾಂಧವ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ.

    ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮದುವೆಯ ಸುಂದರ ಫೋಟೋಗಳು ದೀಪಕ್ ವಿಜಯ್ (Deepak Vijay Photography) ಕ್ಯಾಮೆರಾ ಕಣ್ಣಲ್ಲಿ ಮೂಡಿ ಬಂದಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರ್ಷಿಕಾ-ಭುವನ್: ಕೊಡಗು ಶೈಲಿಯ ಮದುವೆ ಹೇಗಿರುತ್ತೆ ಗೊತ್ತಾ?

    ಹರ್ಷಿಕಾ-ಭುವನ್: ಕೊಡಗು ಶೈಲಿಯ ಮದುವೆ ಹೇಗಿರುತ್ತೆ ಗೊತ್ತಾ?

    ಸ್ಯಾಂಡಲ್‌ವುಡ್ ಬ್ಯೂಟಿ ಹರ್ಷಿಕಾ ಪೂಣಚ್ಚ(Harshika Poonacha)- ಭುವನ್ ಪೊನ್ನಣ್ಣ (Bhuvan) ಇಂದು (ಆಗಸ್ಟ್ 24) ಕೊಡವ ಸಂಪ್ರದಾಯದಂತೆ ದಾಂಪತ್ಯ(Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ವಿರಾಜ್‌ಪೇಟೆಯ ಅಮ್ಮಾತ್ತಿ ಕೊಡವ ಸಮಾಜದಲ್ಲಿ ಮದುವೆ ಅದ್ದೂರಿಯಾಗಿ ಜರುಗಿದೆ. ಆಗಸ್ಟ್ 23-24ರಂದು ಎರಡು ದಿನ ಕೊಡವ ಶೈಲಿಯಂತೆ ವಿವಾಹ ನಡೆದಿದೆ. ಅಷಕ್ಕೂ ಕೊಡವ ಶೈಲಿಯ ಮದುವೆ ಹೇಗಿರುತ್ತೆ? ಈ ಬಗ್ಗೆ ಇಲ್ಲಿದೆ ಮಾಹಿತಿ.

    ಕೊಡವ ಸಂಪ್ರದಾಯ ಮದುವೆ ಕೊಂಚ ವಿಭಿನ್ನ. ಕೊಡಗಿನ ಮದುವೆ ದಿನದ ವಧು-ವರನ ಉಡುಗೆ, ಡ್ಯಾನ್ಸ್, ಮದುವೆ ಊಟದ ಮೆನು ಎಲ್ಲವೂ ಸ್ಪೆಷಲ್ ಆಗಿರುತ್ತದೆ. ಎರಡು ದಿನ ಈ ಅದ್ದೂರಿ ಮದುವೆಯಲ್ಲಿ, ಮೊದಲ ದಿನ ಊರ್ಕುಡುವ ಶಾಸ್ತ್ರವಿರುತ್ತದೆ. ಈ ದಿನವೇ ಹರ್ಷಿಕಾಗೆ ತಾಯಿಯಿಂದ ಮಾಂಗಲ್ಯದಾರಣೆ ಆಗಿದೆ. ನಂತರ ಹುಡುಗ-ಹುಡುಗಿ ಪರಸ್ಪರ ನೋಡುವ ಹಾಗಿಲ್ಲ. ಇಬ್ಬರಿಗೂ ಹಿರಿಯರಿಂದ ಪ್ರತ್ಯೇಕವಾಗಿ ಮೆಹೆಂದಿ ಶಾಸ್ತ್ರ ಜರುಗಲಿದೆ. ಇದನ್ನೂ ಓದಿ:ಹರ್ಷಿಕಾ-ಭುವನ್ ಮದುವೆಯಲ್ಲಿ ಬಗೆ ಬಗೆಯ ಭೋಜನ

    ಎರಡನೇ ದಿನ ಬೆಳಿಗ್ಗೆ ಹರ್ಷಿಕಾಗೆ ಬಳೆ ತೊಡಿಸುವ ಶಾಸ್ತ್ರ ನಡೆಯಿತು. ಬಳಿಕ ಪೊಂಬಣ ಪೂಜೆ ಮಾಡಿಸಲಾಗುತ್ತದೆ. ಅದು ವರ ಪೂಜೆ ರೀತಿಯಲ್ಲಿರುತ್ತದೆ. ಇತ್ತ ಮದುವೆ ಹುಡುಗ ಬಾಳೆ ಕಡೆದು ಮಂಟಪಕ್ಕೆ ಬರುತ್ತಾರೆ. ಈ ಶಾಸ್ತ್ರ ಭುವನ್ ನೆರವೇರಿಸಿ ಮಂಟಪಕ್ಕೆ ಬಂದಿದ್ದಾರೆ. ಭುವನ್ ನನ್ನು ಹುಡುಗಿ ಮನೆಯವರು ಕರೆದುಕೊಂಡು ಹೋಗ್ತಾರೆ. ಹರ್ಷಿಕಾ ಅಮ್ಮ ಹುಡುಗನಿಗೆ ಹಾಲು, ಬಾಳೆಹಣ್ಣು  ತಿನ್ನಿಸಿದ್ದಾರೆ. ನಂತರ ಹುಡುಗ ಹುಡುಗಿಯನ್ನ ವೇದಿಕೆ ಮೇಲೆ ಕೂರಿಸಿ ಮಹೂರ್ತ ಶುರು ಮಾಡಿದ್ದಾರೆ. ಬಂದ ಅತಿಥಿಗಳು ಹುಡುಗ ಹುಡುಗಿಗೆ ಅಕ್ಕಿಹಾಕಿ ಆಶೀರ್ವಾದ ಮಾಡಿ ಗಿಫ್ಟ್ ಕೊಡುತ್ತಾರೆ. ಕೊನೆಯಲ್ಲಿ ಹುಡುಗ- ಹುಡುಗಿ ಕೈ ಹಿಡಿದು ಎಬ್ಬಿಸ್ತಾನೆ. ಅದರಂತೆ ಹರ್ಷಿಕಾ ಕೈ ಹಿಡಿದು ಭುವನ್ ಎಬ್ಬಿಸಿದ್ದಾರೆ.

    ಇಂದು (ಆಗಸ್ಟ್‌ 24) ಗುರುಹಿರಿಯರ ಸಮ್ಮುಖದಲ್ಲಿ ನಟಿ ಹರ್ಷಿಕಾ- ಭುವನ್ ಕೊಡವ ಪದ್ಧತಿಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ವಿರಾಟ್‌ಪೇಟೆಯಲ್ಲಿ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ ಲುಕ್‌ನಲ್ಲಿ ನವಜೋಡಿ ಮಿಂಚಿದ್ದಾರೆ. ಮದುವೆಯೂ ಮುನ್ನವೇ ಜೋಡಿಯಾಗಿ ಹರ್ಷಿಕಾ-ಭುವನ್ ಗೃಹಪ್ರವೇಶ ನೆರವೇರಿತ್ತು. ಆಗಸ್ಟ್ 23ರಂದು ಊರ್ಕುಡುವ ಶಾಸ್ತ್ರ ನಡೆದಿತ್ತು. ಇದೀಗ  ಹರ್ಷಿಕಾ ದಂಪತಿಯ ಮದುವೆಗೆ ಗೋಲ್ಡನ್ ಸ್ಟಾರ್ ಗಣೇಶ್, ದೊಡ್ಡಣ್ಣ, ತಬಲಾ ನಾಣಿ, ಮಾಜಿ ಸಿಎಂ ಬಿಎಸ್ ವೈ, ಮುರುಗೇಶ್ ನಿರಾಣಿ, ಪೂಜಾ ಗಾಂಧಿ ಸೇರಿದಂತೆ ಹಲವರು ಭಾಗಿಯಾಗಿ ಶುಭ ಹಾರೈಸಿದ್ದರು.

    ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ. ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.

    ಯಾಕೆ ವರ್ಷಗಳು ಎಲ್ಲೂ ನಮ್ಮ ಪ್ರೀತಿ ಬಗ್ಗೆ ಬಾಯ್ಬಿಟ್ಟಿರಲಿಲ್ಲ ಎಂದು ಭುವನ್ ಕ್ಲ್ಯಾರಿಟಿ ನೀಡಿದ್ದಾರೆ. ಇಷ್ಟು ದಿನ ನಮ್ಮ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೇ ಇರಲಿ ಅಂತಾ ಮದುವೆ ವಿಚಾರ ಹೇಳಿರಲಿಲ್ಲ. ವೃತ್ತಿರಂಗದಲ್ಲಿ ಸೆಟಲ್ ಆಗಬೇಕಾದ ಕಾರಣ, ಇಬ್ಬರು ಸೈಲೆಂಟ್ ಆಗಿ ಇದ್ವಿ. ನಮ್ಮ ಲವ್ ಸ್ಟೋರಿ ಬಗ್ಗೆ ಆತ್ಮೀಯರಿಗೆ ತಿಳಿದಿತ್ತು. ಆದರೆ ಇತ್ತೀಚಿಗೆ ಎಲ್ಲರಿಗೂ ಗೊತ್ತಾಯ್ತು. ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಮಾತನಾಡಿದ್ದರು.

    ನಾನು ಈಗ ಮದುವೆಯಾಗುವ ಐಡಿಯಾದಲ್ಲಿ ಇರಲಿಲ್ಲ. ಪ್ಲ್ಯಾನ್ ಲೇಟ್ ಇತ್ತು. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಈಗ ಎರಡು ತಿಂಗಳ ಹಿಂದೆ ಮದುವೆ ಬಗ್ಗೆ ಪ್ಲ್ಯಾನ್ ಮಾಡಿದ್ವಿ ಎಂದು ಇತ್ತೀಚಿಹೆ ಈ ನವಜೋಡಿ ಲವ್, ಮದುವೆ ಬಗ್ಗೆ ಬಾಯ್ಬಿಟ್ಟಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]