Tag: Waterfalls

  • ಗಗನಚುಂಬಿ ಕಟ್ಟಡದಲ್ಲಿ ಜಲಪಾತ – ವಿಡಿಯೋ ನೋಡಿ

    ಗಗನಚುಂಬಿ ಕಟ್ಟಡದಲ್ಲಿ ಜಲಪಾತ – ವಿಡಿಯೋ ನೋಡಿ

    ಮುಂಬೈ: ಭಾರೀ ಮಳೆಯಿಂದಾಗಿ ನಗರದ ಗಗನಚುಂಬಿ ಕಟ್ಟಡದಿಂದ ಜಲಪಾತದಂತೆ ನೀರು ಹರಿದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ದಕ್ಷಿಣ ಮುಂಬೈನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈಲ್ ಆಗುತ್ತಿದ್ದಂತೆಯೇ ಜನ ಕಟ್ಟಡದಿಂದ ನೀರು ಬೀಳುತ್ತಿರುವುದನ್ನು ನೋಡಲು ಮುಗಿಬಿದ್ದಿದ್ದಾರೆ.

    40 ಸೆಕೆಂಡ್ ಇರುವ ಈ ವಿಡಿಯೋವನ್ನು ಮೊದಲು ಸುದರ್ಶನ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಕಫ್ ಪರೇಡ್ ಪ್ರದೇಶದಲ್ಲಿರುವ 40 ಅಂತಸ್ತಿನ ಕಟ್ಟಡದಲ್ಲಿ ಈ ಕೃತಕ ಜಲಪಾತ ನಿರ್ಮಾಣವಾಗಿದೆ. ಜನ ಈ ದೃಶ್ಯವನ್ನು ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

    ಇದು ಭಾರೀ ಮಳೆಯಿಂದಾಗಿ ಜಲಪಾತದಂತೆ ನೀರು ಹರಿಯುತ್ತಿಲ್ಲ. ಬದಲಾಗಿ ನೀರಿನ ಟ್ಯಾಂಕಿನಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ ಟ್ಯಾಂಕ್ ನಿಂದ ನೀರು ಜಲಪಾತದಂತೆ ಸೋರಿಕೆಯಾಗುತ್ತಿದೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ತಿಳಿಸಿದ್ದಾರೆ.

    ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದ್ದಂತೆಯೇ ಹಲವಾರು ಕಾಮೆಂಟ್ ಗಳು ಬಂದಿವೆ. ಈ ಕಟ್ಟಡದ ಮಾಲೀಕ ನೀರು ನೋಡಲು ಬರುವವರಿಗೆ ಹಣ ಪಡೆದುಕೊಳ್ಳುವುದು ಒಳ್ಳೆಯದು ಎಂದು ಕೆಲವರು ಸಲಹೆ ಕೂಡ ಕೊಟ್ಟಿದ್ದಾರೆ.

    ನಗರದಲ್ಲಿ ಇಂದು ಭಾರೀ ಮಳೆಯಾಗುತ್ತಿದೆ. ಗಂಟೆಗಟ್ಟಲೆ ಮಳೆ ಸುರಿದಿದ್ದರಿಂದ ಹಲವು ಪ್ರದೇಶಗಳು ಜಲಾವೃತವಾಗಿವೆ. ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.

    https://twitter.com/IGiveGyaan/status/1169178339786948608?ref_src=twsrc%5Etfw%7Ctwcamp%5Etweetembed%7Ctwterm%5E1169178339786948608&ref_url=https%3A%2F%2Fwww.ndtv.com%2Fmumbai-news%2Fon-camera-mumbai-skyscraper-turns-into-waterfall-amid-heavy-rain-in-cuffe-parade-2095780

  • ಸ್ನೇಹಿತನನ್ನು ರಕ್ಷಿಸಲು ಹೋಗಿ ಕರ್ನಾಟಕದ ಯುವಕ ಅಮೆರಿಕದಲ್ಲಿ ಸಾವು

    ಸ್ನೇಹಿತನನ್ನು ರಕ್ಷಿಸಲು ಹೋಗಿ ಕರ್ನಾಟಕದ ಯುವಕ ಅಮೆರಿಕದಲ್ಲಿ ಸಾವು

    ವಾಷಿಂಗ್ಟನ್: ಸ್ನೇಹತನನ್ನು ರಕ್ಷಿಸಲು ಹೋಗಿ ಜಲಪಾತದಲ್ಲಿ ಧುಮುಕಿ ರಾಯಚೂರು ಮೂಲದ ಯುವಕ ಮೃತಪಟ್ಟ ಘಟನೆ ಬುಧವಾರ ಅಮೆರಿಕದ ಟರ್ನರ್ ಫಾಲ್ಸ್ ನಲ್ಲಿ ನಡೆದಿದೆ.

    ಅಜಯ್ ಕುಮಾರ್ (24) ಮೃತಪಟ್ಟ ಯುವಕ. ಅಜಯ್ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಶ್ರೀಪುರಂಜಂಕ್ಷನ್ ನಿವಾಸಿ. ಕಳೆದ ಎಂಟು ತಿಂಗಳ ಹಿಂದೆ ಅಜಯ್ ಅಮೇರಿಕದ ಹೂಸ್ಟನ್ ನಲ್ಲಿ ಎಂ.ಎಸ್ ಎಂಜಿನಿಯರಿಂಗ್ ಮಾಡಲು ತೆರಳಿದ್ದನು.

    ಬುಧವಾರ ಅಜಯ್ ತನ್ನ ಸ್ನೇಹಿತರ ಜೊತೆ ಟರ್ನರ್ ಫಾಲ್ಸ್‌ಗೆ ತೆರಳಿದ್ದನು. ಜಲಪಾತಕ್ಕೆ ತೆರಳಿದಾಗ ಸ್ನೇಹಿತ ಜಾರಿ ಬಿದ್ದಿದ್ದು, ಆತನನ್ನು ರಕ್ಷಿಸಲು ಅಜಯ್ ಜಲಪಾತಕ್ಕೆ ಧುಮುಕಿದ್ದನು. ಈ ವೇಳೆ ಇಬ್ಬರೂ ಜಲಪಾತದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಇಂದು ಅಜಯ್ ಮೃತದೇಹ ರಾಯಚೂರಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸ್ನೇಹಿತರ ಮುಂದೆ ಜಲಸಮಾಧಿಯಾದ ಬೆಂಗಳೂರಿನ ಯುವಕ

    ಸ್ನೇಹಿತರ ಮುಂದೆ ಜಲಸಮಾಧಿಯಾದ ಬೆಂಗಳೂರಿನ ಯುವಕ

    ಚಾಮರಾಜನಗರ: ಸ್ನೇಹಿತರ ದಿನದೊಂದು ಗೆಳಯರ ಜೊತೆಗೆ ಮಲೆಮಾದಪ್ಪನ ದರ್ಶನಕ್ಕೆ ಬಂದಿದ್ದ ಯುವಕನೊರ್ವ ನೀರಿನಲ್ಲಿ ಮುಳುಗಿ ಜಲ ಸಮಾಧಿಯಾದ ಘಟನೆ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿನ ಅಂತರಗಂಗೆಯಲ್ಲಿ ಸ್ನಾನ ಮಾಡಲು ಹೋದಾಗ ಬೆಂಗಳೂರಿನ ನಿವಾಸಿಯಾದ ಪ್ರಭು (28) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಬೆಂಗಳೂರಿನಿಂದ 9 ಜನ ಸ್ನೇಹಿತರು ಪ್ರವಾಸಕ್ಕೆಂದು ಆಗಮಿಸಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪ್ರವಾಸಕ್ಕೆ ಹೋಗಿದ್ದವರ ಪೈಕಿ ಪ್ರಭುವಿಗೆ ಮಾತ್ರ ಈಜು ಬರುತಿತ್ತು ಎಂದು ತಿಳಿದುಬಂದಿದೆ. ಅಲ್ಲಿದ್ದ ಬೇರೆ ಯಾವ ಗೆಳೆಯರಿಗೂ ಈಜು ಬಾರದ ಹಿನ್ನೆಲೆಯಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲಾಗದೇ ಕೂಗಾಡಿ ಕೊನೆಗೆ ಪೋಲಿಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಯುವಕನ ಶೋಧಕಾರ್ಯವನ್ನು ಮಲೆಮಹದೇಶ್ವರ ಬೆಟ್ಟದ ಪೊಲೀಸರು ಮುಂದುವರಿಸಿದ್ದಾರೆ.

  • ಸಿರಿಮನೆ ಜಲಪಾತದಲ್ಲಿ ಅಸಭ್ಯ ವರ್ತನೆ – ಯುವಕರಿಗೆ ಗೂಸಾ, ಯುವತಿಯರಿಗೆ ಕ್ಲಾಸ್

    ಸಿರಿಮನೆ ಜಲಪಾತದಲ್ಲಿ ಅಸಭ್ಯ ವರ್ತನೆ – ಯುವಕರಿಗೆ ಗೂಸಾ, ಯುವತಿಯರಿಗೆ ಕ್ಲಾಸ್

    ಚಿಕ್ಕಮಗಳೂರು: ಫಾಲ್ಸ್ ಬಳಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಮಂಗಳೂರು ಮೂಲದ ಯುವಕರಿಗೆ ಗೂಸ ಕೊಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತದ ಬಳಿ ನಡೆದಿದೆ.

    ಪ್ರವಾಸಕ್ಕೆ ಎಂದು ಮಂಗಳೂರಿನಿಂದ ಯುವಕ ಹಾಗೂ ಯುವತಿಯರು ಸಿರಿಮನೆ ಫಾಲ್ಸ್ ಗೆ ಬಂದಿದ್ದರು. ಈ ವೇಳೆ ಜಲಪಾತದಲ್ಲಿ ಸ್ನಾನ ಮಾಡುವಾಗ ಯುವಕ- ಯುವತಿಯರು ಅಸಭ್ಯವಾಗಿ ವರ್ತಿಸಿದ್ದಾರೆ. ಇವರು ಅಸಭ್ಯವಾಗಿ ವರ್ತಿಸುತ್ತಿರುವುದು ನೋಡಿ ಸ್ಥಳೀಯರು ಮುಜುಗರಗೊಂಡಿದ್ದಾರೆ.

    ಇವರ ವರ್ತನೆ ಮಿತಿ ಮೀರುತ್ತಿದ್ದಂತೆ ಸ್ಥಳೀಯ ಯುವಕರು ಮಂಗಳೂರು ಮೂಲದ ಪ್ರವಾಸಿಗರಿಗೆ ಗೂಸಾ ನೀಡಿದ್ದಾರೆ. ಯುವಕರ ಜೊತೆ ಪ್ರವಾಸಕ್ಕೆ ಬಂದಿದ್ದ ಯುವತಿಯರಿಗೂ ಸ್ಥಳೀಯರು ಎಲ್ಲರೂ ಸೇರಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಈ ಘಟನೆಯಾದ ಬಳಿಕ ಸ್ಥಳೀಯರು ಯುವಕ- ಯುವತಿಯರನ್ನು ಬೇರೆ ಬೇರೆಯಾಗಿ ಕಳುಹಿಸಿದ್ದಾರೆ.

  • ಕಾಫಿನಾಡಿನಲ್ಲಿದೆ ಸುಂದರ ಪ್ರವಾಸಿ ತಾಣ ಸೀತಾವನ- ವಿಶೇಷತೆ ಏನು..?

    ಕಾಫಿನಾಡಿನಲ್ಲಿದೆ ಸುಂದರ ಪ್ರವಾಸಿ ತಾಣ ಸೀತಾವನ- ವಿಶೇಷತೆ ಏನು..?

    ಚಿಕ್ಕಮಗಳೂರು: ಕಾಫಿನಾಡನಲ್ಲಿ ವಿಶಿಷ್ಟ ಜಾಗವೊಂದಿದೆ. ಅಲ್ಲಿ ಎಂದಿಗೂ ನೀರು ಹರಿಯುವುದು ನಿಂತಿಲ್ಲ. ಹಾಗೆಯೇ ಎಂತಹ ಮಳೆಗಾಲ ಬಂದ್ರೂ ಇಲ್ಲಿ ನೀರು ಜಾಸ್ತಿಯಾಗಲ್ಲ. ಅದೆಂತದ್ದೇ ಬರ ಬಂದ್ರೂ ನೀರು ಹರಿಯುವುದು ಕಡಿಮೆಯಾಗಲ್ಲ.

    ಹೌದು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಬಳಿ ಈ ವಿಶಿಷ್ಟ ಜಾಗದ ಹೆಸರೇ ಸೀತಾವನ. ನೋಡೋಕೆ ದೊಡ್ಡ ಜಲಪಾತದಂತಿಲ್ಲದಿದ್ದರು ಈ ವನ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಯಾಕಂದ್ರೆ, ಈ ಜಾಗದಲ್ಲಿ ನೀವು ಕಲ್ಲು, ನಾಣ್ಯ ಅಥವ ಮರದ ಕೋಲು ಏನನ್ನೇ ಹಾಕಿದರೂ ನಾಲ್ಕೈದು ದಿನದಲ್ಲಿ ಅದರ ಮೇಲೆ ಸುಣ್ಣದ ಅಂಶದಂತೆ ಬೆಳೆಯುತ್ತದೆ. ಹೀಗೆ ಬೆಳೆಯೋದಕ್ಕೂ ಶತಮಾನಗಳ ಆಯಸ್ಸಿದೆ. ರಾಮಾಯಣದ ಕಾಲದಲ್ಲಿ ಸೀತೆ ವನವಾಸದಲ್ಲಿದ್ದಾಗ ಈ ಜಾಗದಲ್ಲಿ ಸ್ನಾನ ಮಾಡಿದ್ದಳು. ಆಗ ಎಲೆ-ಅಡಿಕೆ ಹಾಕಿಕೊಂಡ ಸೀತೆ ಇಲ್ಲಿ ಸುಣ್ಣವನ್ನ ಹಾಕಿದ್ದಳು. ಅಂದಿನಿಂದ ಈ ಜಾಗದಲ್ಲಿ ಏನೇ ವಸ್ತುಬಿದ್ರೂ ಅದರ ಮೇಲೆ ಸುಣ್ಣದ ಅಂಶ ಬೆಳೆಯುತ್ತೆ ಅನ್ನೋದು ಸ್ಥಳೀಯರ ನಂಬಿಕೆ. ಸುತ್ತಲೂ ಕಾಫಿತೋಟದ ಮಧ್ಯದಲ್ಲಿ ಹಂತ ಹಂತವಾಗಿ ಧುಮ್ಮಿಕ್ಕುವ ನೀರು ಘಳಿಗೆಗೊಂದು ಹೊಸ-ಹೊಸ ಸಂಗೀತ ಸೃಷ್ಠಿಸುತ್ತೆ. ಈ ಜಾಗ ಅಷ್ಟಾಗಿ ಪರಿಚಿತವಲ್ಲದಿರೋದರಿಂದ ಸ್ಥಳೀಯ ಪ್ರವಾಸಿ ಪ್ರಿಯರಷ್ಟೆ ಆಗಾಗ ಭೇಟಿ ನೀಡಿ ಎಂಜಾಯ್ ಮಾಡ್ತಾರೆ.

    ಜಯಪುರದಿಂದ ಕೊಪ್ಪ ಹೋಗುವ ಮಾರ್ಗದಲ್ಲಿ ಅಲಗೇಶ್ವರ ಎಸ್ಟೇಟ್ ಮಾರ್ಗದಲ್ಲಿ ಏಳೆಂಟು ಕಿ.ಮೀ. ಸಾಗಿದ್ರೆ ಸೀತಾವನ ಸಿಗುತ್ತದೆ. ಐದನೇ ಶತಮಾನದಲ್ಲಿ ಸೀತೆ ಸ್ನಾನ ಮಾಡಿದಾಗ ಈ ಜಾಗ ಹೇಗಿತ್ತೋ ಇಂದಿಗೂ ಹಾಗೇ ಇದೆ. ನೀರು ಹರಿಯುವ ಜಾಗದ ಸುತ್ತಲೂ ಸುಣ್ಣದಂತೆ ಭಾಸವಾಗುವ ಪಾಚಿ ಬೆಳೆದಿದ್ದು, ತೇವಾಂಶ ಎಷ್ಟೇ ಹೆಚ್ಚಿದ್ರು ಮಣ್ಣು ಜರುಗದಂತೆ ಕಲ್ಲಿನಂತಾಗಿದೆ. ಸುಣ್ಣದ ಅಂಶದಿಂದ ಗಟ್ಟಿಯಾಗಿರುವುದರಿಂದ ಸದಾ ನೀರು ಹರಿಯುತ್ತಿದ್ದರು ಇದರ ಗಾತ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಲ್ಲಿ ನೀರು ನಿಂತಿರೋದನ್ನಾಗಲಿ ಅಥವ ಕಡಿಮೆಯಾಗಿರೋದನ್ನಾಗಲಿ ಇಲ್ಲಿವರೆಗೂ ಯಾರೂ ನೋಡಿಲ್ಲ. ವರ್ಷಪೂರ್ತಿ ನೀರು ಇಷ್ಟೇ ಪ್ರಮಾಣದಲ್ಲಿ ಹರಿಯುತ್ತದೆ. ಕಡಿಮೆಯೂ ಆಗಲ್ಲ, ಹೆಚ್ಚು ಆಗಲ್ಲ. ಆದ್ರೆ, ಈ ಜಾಗ ಅಷ್ಟಾಗಿ ಜನಮಾನಸಕ್ಕೆ ಬಂದಿಲ್ಲ. ಸ್ಥಳೀಯರಿಗಷ್ಟೆ ಗೊತ್ತು. ಅಲ್ಲದೆ ತೋಟದ ಮಾಲೀಕರು ಕೂಡ ಯಾವುದೇ ನಿರ್ಬಂಧ ಹೇರದಿರುವುದರಿಂದ ಇಲ್ಲಿ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ.

    ಇಲ್ಲಿ ಸೀತೆ ಸ್ನಾನ ಮಾಡಿದಳೋ ಇಲ್ಲವೋ ಗೊತ್ತಿಲ್ಲ. ಸುಣ್ಣ ಹಾಕಿದ್ದಳೋ ಇಲ್ಲವೋ ಅದೂ ಗೊತ್ತಿಲ್ಲ. ಅದನ್ನ ಕಣ್ಣಾರೆ ಕಂಡೋರು ಇಲ್ಲ. ಆದ್ರೆ ಅದೊಂದು ನೂರಾರು ವರ್ಷಗಳಿಂದ ಜನರ ನಂಬಿಕೆಯಷ್ಟೆ. ಆದ್ರೆ, ಇಲ್ಲಿ ಶತಮಾನಗಳಿಂದ ನೀರು ನಿರಂತರವಾಗಿ ಹರಿಯುತ್ತಿರೋದಂತು ಸತ್ಯ. ಸೀತೆಯ ಹೆಸರನ್ನಿಟ್ಟಿಕೊಂಡಿರೋ ಈ ಜಾಗವಂತು ಅದ್ಭುತ. ನೋಡೋಕೆ ತುಸು ಚಿಕ್ಕದಿದ್ದರೂ ಈ ಜಾಗದ ಅನುಭವವೇ ಬೇರೆ. ಹೀಗಾಗಿ ನೆಕ್ಸ್ಟ್ ಟೈಂ ಕಾಫಿನಾಡಿಗೆ ಬಂದಾಗ ಈ ತಾಣವನ್ನ ಮಿಸ್ ಮಾಡ್ಕೋಬೇಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಚ್ಚಹಸಿರಿನ ಮಧ್ಯೆ ಹಾಲ್ನೊರೆ ಸೂಸುತ್ತಾ ಜುಳು-ಜುಳು ಹರೀತಿದೆ ಇರ್ಪು ಫಾಲ್ಸ್

    ಹಚ್ಚಹಸಿರಿನ ಮಧ್ಯೆ ಹಾಲ್ನೊರೆ ಸೂಸುತ್ತಾ ಜುಳು-ಜುಳು ಹರೀತಿದೆ ಇರ್ಪು ಫಾಲ್ಸ್

    -ಇಯರ್ ಎಂಡ್‍ಗೆ ಕೊಡಗಿನಲ್ಲಿ ಪ್ರವಾಸಿಗರ ದಂಡು

    ಮಡಿಕೇರಿ: ವರ್ಷಾಂತ್ಯ, ಹೊಸ ವರ್ಷ, ರಜೆಗಳ ಮೇಲೆ ರಜೆ ಇರುವುದರಿಂದ ಪ್ರವಾಸಿಗರ ಸ್ವರ್ಗ ಕೊಡಗಿನತ್ತ ಟೂರಿಸ್ಟ್ ದಂಡೇ ಹರಿದು ಬರುತ್ತಿದೆ. ಮೂರು ನಾಲ್ಕು ತಿಂಗಳ ಕಾಲ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಪ್ರವಾಸಿಗರು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಇದೀಗ ಹಿಂದಿನ ದಿನಗಳು ಮತ್ತೆ ಬರುವ ಹಾಗೆ ಜನರು ಕೊಡಗು ಜಿಲ್ಲೆಗೆ ಆಗಮಿಸುತ್ತಿದ್ದಾರೆ.

    ಕೊಡಗು ಜಿಲ್ಲೆಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಅದರಲ್ಲೂ ಜಿಲ್ಲೆಯ ಹಚ್ಚ ಹರಿಸಿನ ನಡುವೆ ಹಾಲ್ನೊರೆ ಸೂಸುತ್ತಾ ಜುಳು ಜುಳು ಹರಿಯುವ ಜಲಧಾರೆಯ ಸೌಂದರ್ಯಕ್ಕೆ ಸರಿಸಾಟಿಯಿಲ್ಲ. ಅಂತಹ ಜಲಧಾರೆಯ ಕೆಳಗೆ ನಿಂತು ಎಂಜಾಯ್ ಮಾಡುವುದು ಎಲ್ಲರ ಆಸೆ ಆಗಿರುತ್ತಾರೆ. ವರ್ಷಾಂತ್ಯ ಅಂತ ಸ್ಪೆಷಲ್ ಲೊಕೇಶನ್‍ನಲ್ಲಿ ಇಲ್ಲಿಗೆ ಭೇಟಿ ಕೊಟ್ಟರೆ ಅದರ ಮಜಾವೇ ಬೇರೆ ಇರುತ್ತದೆ. ಸದ್ಯ ಇಯರ್ ಎಂಡ್ ಸೀಜನ್, ಕೊಡಗಿನ ಸೌಂದರ್ಯ ಲೋಕಕ್ಕೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುದ್ದಾರೆ. ಅದರಲ್ಲೂ ಇರ್ಪು ಫಾಲ್ಸ್ ನಲ್ಲಂತೂ ಪ್ರವಾಸಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    ಮಡಿಕೇರಿಯಿಂದ 60 ಕಿ.ಮೀ ದೂರದಲ್ಲಿರೋ ಬ್ರಹ್ಮಗಿರಿತಪ್ಪಲಿನ ನಡುವಿನಿಂದ ಧುಮ್ಮಿಕ್ಕುವ ಇರ್ಪು ಫಾಲ್ಸ್ ಸೌಂದರ್ಯವನ್ನು ಎಷ್ಟು ಹೇಳಿದರೂ ಮುಗಿಯಲ್ಲ. ಮಳೆಗಾಲದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು ಫಾಲ್ಸ್ ನೋಡಲು ಎಷ್ಟು ಚೆಂದವು ಈ ರುದ್ರ ರಮಣೀಯ ತಾಣ ಇರ್ಪು ಫಾಲ್ಸ್ ಅಷ್ಟೇ ಅಪಾಯವಾಗಿದೆ. ಆದರೆ ಈಗ ಮಳೆಯ ಆರ್ಭಟ ಇಲ್ಲ. ಫಾಲ್ಸ್ ನೀರು ಕೊಂಚ ಕಡಿಮೆ ಆಗಿದೆ. ಪರಿಣಾಮ ಫಾಲ್ಸ್ ನ ತಳಭಾಗಕ್ಕೆ ಹೋಗಿ ಫಾಲ್ಸ್ ನೀರಿಗೆ ಮೈಯೊಡ್ಡಿ ಎಂಜಾಯ್ ಮಾಡಬಹುದು. ಅದಕ್ಕೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ.

    ಇರ್ಪು ಫಾಲ್ಸ್ ಸದ್ಯ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ. ದಿನ ನಿತ್ಯ ಸಹಸ್ರ ಸಂಖ್ಯೆಯ ಪ್ರವಾಸಿಗರು ಬಂದು ಹಚ್ಚ ಹಸಿರ ನಿಸರ್ಗದ ಮಡಿಲಲ್ಲಿ ಇರ್ಪುವಿನ ಸಿಂಚನಕ್ಕೆ ಮೈಯೊಡ್ಡಿ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಪ್ರವಾಸಿಗರು ಕೊಡಗಿನ ಫಾಲ್ಸ್ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    https://www.youtube.com/watch?v=XtVggfQfhZw&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲುಷಿತಗೊಂಡಿದೆ ಮಾಣಿಕ್ಯಧಾರ ನೀರು- ಪವಿತ್ರ ನೀರಿನಲ್ಲಿ ಸೇರುತ್ತಿದೆ ಪ್ರವಾಸಿಗರ ಮಲ, ಮೂತ್ರ

    ಕಲುಷಿತಗೊಂಡಿದೆ ಮಾಣಿಕ್ಯಧಾರ ನೀರು- ಪವಿತ್ರ ನೀರಿನಲ್ಲಿ ಸೇರುತ್ತಿದೆ ಪ್ರವಾಸಿಗರ ಮಲ, ಮೂತ್ರ

    ಚಿಕ್ಕಮಗಳೂರು: ಪ್ರವಾಸಿಗರ ಸ್ವರ್ಗವೆನಿಸಿಕೊಂಡಿರುವ ಚಿಕ್ಕಮಗಳೂರಲ್ಲಿ ಹತ್ತಾರು ಪ್ರವಾಸಿ ತಾಣಗಳಿದ್ದು, ಅದರಲ್ಲೂ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರ ಜಲಪಾತ ಪ್ರವಾಸಿಗರ ಫೆವರೇಟ್ ಸ್ಪಾಟ್ ಆಗಿದೆ. ನಿತ್ಯವೂ ಆಗಮಿಸುವ ನೂರಾರು ಪ್ರವಾಸಿಗರು ಇಲ್ಲಿನ ಜಲಧಾರೆಯಲ್ಲಿ ಮಿಂದೆದ್ದು, ಈ ನೀರನ್ನು ಕುಡಿದು ಪಾವನರಾಗುತ್ತೀವಿ ಎಂದುಕೊಂಡಿದ್ದಾರೆ. ಆದರೆ ಈ ನೀರು ಕುಡಿಯೋಕಲ್ಲ, ಸ್ನಾನಕ್ಕೂ ಯೋಗ್ಯವಲ್ಲದಷ್ಟು ಮಲೀನವಾಗಿದೆ.

    ಕಾಫಿನಾಡು ಚಿಕ್ಕಮಗಳೂರಿನ ಬಾಬಬುಡನ್‍ಗಿರಿಯ ಸೊಬಗನ್ನು ನೋಡುವುದಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇಲ್ಲಿ ಇರುವ ಚಿಕ್ಕ ತೊರೆಯೇ ಮಾಣಿಕ್ಯಧಾರ. ಈ ನೀರನ್ನು ಕುಡಿದು ಅದರಲ್ಲಿ ಸ್ನಾನ ಮಾಡಿದರೆ, ಜೀವನ ಪಾವನವಾಗುತ್ತೆ ಎಂದು ಅದರಲ್ಲಿ ಸ್ನಾನ ಮಾಡುತ್ತಾರೆ. ಆದರೆ ಆ ನೀರು ಈಗ ಪವಿತ್ರವಾಗಿಲ್ಲ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಈ ಜಲಪಾತದ ನೀರನ್ನು ಸಂಶೋಧನೆಗೆ ಒಳಪಡಿಸಿದಾಗ, ನೀರಿನಲ್ಲಿ ಮನುಷ್ಯರ ಮಲ, ಮೂತ್ರದಂಶದ ಎಫ್-ಕೊಲಿಫಾರಂ ಪತ್ತೆಯಾಗಿದ್ದು, ಕುಡಿಯಲು ಯೋಗ್ಯವಲ್ಲ ಅಂತಾ ಹೇಳಿದೆ.

    ಈ ಮಾಣಿಕ್ಯಧಾರಕ್ಕೆ ಬರುವ ಪ್ರವಾಸಿಗರು, ಜಲಪಾತ ಹುಟ್ಟೋ ಜಾಗದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು, ಹಾಗಾಗಿ ನೀರಿನಲ್ಲಿ ಎಫ್-ಕೊಲಿಫಾರಂ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಶ್ಯಾಂಪು, ಸೋಪು ಇತ್ಯಾದಿ ರಾಸಾಯನಿಕಗಳನ್ನು ಬಳಸಿ ಸ್ನಾನ ಮಾಡೋದರ ಜೊತೆಗೆ ಬಟ್ಟೆಯನ್ನು ಬಿಸಾಡಿ ಹೋಗುವುದರಿಂದ, ನೀರು ಕಲುಷಿತಗೊಳ್ಳೋದರ ಜೊತೆ ಪರಿಸರವೂ ಹಾಳಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಸ್ಥಳೀಯರು ಹೇಳಿದ್ದಾರೆ.

    ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಮಾಣಿಕ್ಯಧಾರ ಇದೀಗ ಮಾಲಿನ್ಯ ಭರಿತವಾಗಿರೋದು ಜನರಲ್ಲಿ ಆತಂಕ ಮೂಡಿಸಿದೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಮಾಣಿಕ್ಯಧಾರದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಜೊತೆಗೆ ಪಾವಿತ್ರ್ಯತೆಯನ್ನು ಉಳಿಸಲು ಕ್ರಮಕೈಗೊಳ್ಳಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದಾವಣಗೆರೆಯಲ್ಲಿ ಭಾರೀ ಮಳೆ- ಆಸ್ಪತ್ರೆಗೆ ನುಗ್ಗಿದ ನೀರನ್ನ ರೋಗಿಗಳ ಸಂಬಂಧಿಕರೇ ಹೊರಹಾಕಿದ್ರು

    ದಾವಣಗೆರೆಯಲ್ಲಿ ಭಾರೀ ಮಳೆ- ಆಸ್ಪತ್ರೆಗೆ ನುಗ್ಗಿದ ನೀರನ್ನ ರೋಗಿಗಳ ಸಂಬಂಧಿಕರೇ ಹೊರಹಾಕಿದ್ರು

    ದಾವಣಗೆರೆ: ಕಳೆದ ರಾತ್ರಿ ಮತ್ತೆ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲಾಸ್ಪತ್ರೆಯ ರೋಗಿಗಳ ಸಂಬಂಧಿಕರು ಆಸ್ಪತ್ರೆಗೆ ನುಗ್ಗಿದ ನೀರನ್ನು ಹೊರಹಾಕಿದ ಘಟನೆ ದಾವಣಗೆರೆಯಲ್ಲಿ ಕಂಡುಬಂದಿದೆ.

    ನಗರದ ಜಿಲ್ಲಾ ಆಸ್ಪತ್ರೆಗೆ ನೀರು ನುಗ್ಗಿದ ಪರಿಣಾಮ ರೋಗಿಗಳು ಪರದಾಡುವಂತಾಗಿತ್ತು. ಅಷ್ಟೇ ಅಲ್ಲದೆ ಆಸ್ಪತ್ರೆಗೆ ನುಗ್ಗಿದ ನೀರನ್ನು ರೋಗಿಗಳ ಸಂಬಂಧಿಕರೇ ಹೊರಹಾಕಿದರು. ಆಸ್ಪತ್ರೆಯಲ್ಲಿ ಇಷ್ಟೊಂದು ಅವಾಂತರ ಸಂಭವಿಸಿದರೂ ಸಿಬ್ಬಂದಿ ಹಾಗೂ ಅಧಿಕಾರಿಗಳು ಮಾತ್ರ ಮನೆಯಲ್ಲಿದ್ದರು. ವಿಧಿಯಿಲ್ಲದೆ ನೀರನ್ನು ಹೊರಹಾಕುತ್ತಾ ಅಧಿಕಾರಿಗಳಿಗೆ ರೋಗಿಗಳ ಸಂಬಂಧಿಕರು ಹಿಡಿ ಶಾಪ ಹಾಕಿದರು.

    ಇನ್ನು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವೂ ಸಂಪೂರ್ಣ ಜಲಾವೃತಗೊಂಡು ಕೆರೆಯಂತೆ ಕಾಣುತಿತ್ತು. ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಅವಾಂತರ ಸೃಷ್ಟಿಯಾಗಿ ರಾತ್ರಿಯೆಲ್ಲಾ ಜನರು ಜಾಗರಣೆ ಮಾಡಿದ್ರು.

    ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದ ಕಾರಣ ರಸ್ತೆ ಕಾಣದೇ ಕಾರೊಂದು ಚರಂಡಿಯಲ್ಲಿ ಸಿಲುಕಿಕೊಂಡ ದೃಶ್ಯ ಕಂಡುಬಂತು.