Tag: Wanderers

  • ಅಲೆಮಾರಿಗಳು ನೆಲೆ ಕಂಡುಕೊಳ್ಳಲು ಹೋದ್ರೆ ಗುಡಿಸಲುಗಳಿಗೆ ಬೆಂಕಿ ಇಟ್ರು!

    ಅಲೆಮಾರಿಗಳು ನೆಲೆ ಕಂಡುಕೊಳ್ಳಲು ಹೋದ್ರೆ ಗುಡಿಸಲುಗಳಿಗೆ ಬೆಂಕಿ ಇಟ್ರು!

    -ಸೂರಿಲ್ಲದೆ ಬೀದಿಗೆ ಬಂದ್ವು ಐದು ಕುಟುಂಬಗಳು

    ತುಮಕೂರು: ನೆಲೆ ಕಂಡುಕೊಂಡಿದ್ದ ಅಲೆಮಾರಿ ಜನಾಂಗದ ಗುಡಿಸಿಲಿಗೆ ಕೆಲ ದುಷ್ಕರ್ಮಿಗಳು ಬೆಂಕಿಯಿಟ್ಟ ಅಮಾನವೀಯತೆ ಮೆರೆದ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಐ.ಕೆ.ಕಾಲೊನಿ ಬಳಿ ನಡೆದಿದೆ.

    ಅರಸಮ್ಮ, ಶಶಿಕಲಾ, ಗಂಗಮ್ಮ, ಆಂಜಿನಮ್ಮ ಹಾಗೂ ಮಂಜಮ್ಮ ಎಂಬವರಿಗೆ ಸೇರಿದ ಗುಡಿಸಲು ಬೆಂಕಿಗಾಹುತಿಯಾಗಿವೆ. ಈ ಕುಟುಂಬಗಳು ಪಿಡಬ್ಲ್ಯೂಡಿಗೆ ಸೇರಿದ ಜಾಗದಲ್ಲಿ ಕಳೆದ 20 ವರ್ಷದಿಂದ ವಾಸವಾಗಿವೆ. ಈಗ ಸೂರಿಲ್ಲದೆ ಐದೂ ಕುಟುಂಬಗಳು ಬೀದಿಗೆ ಬಿದ್ದಿದ್ದು, ಮಕ್ಕಳ ಶಾಲಾ ಪುಸ್ತಕಗಳು, ಬಟ್ಟೆ, ಧವಸ ದಾನ್ಯ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿವೆ.

    ನಾವು ಕೂಲಿ ಕೆಲಸಕ್ಕೆ ಹೋದಾಗ ಶುಕ್ರವಾರ ಮಧ್ಯಾಹ್ನ, ಸಂಜೆ ಹಾಗೂ ಇಂದು ಬೆಳಗ್ಗೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಇಲ್ಲಿಂದ ನಮ್ಮನ್ನು ತೆರವುಗೊಳಿಸಲು ಹೀಗೆ ಮಾಡುತ್ತಿದ್ದಾರೆ. ಗ್ರಾಮಸ್ಥರೂ ನಮಗೆ ಇರಲು ಅವಕಾಶ ನೀಡುತ್ತಿಲ್ಲ. ಮುಂದೆ ನಾವು ಎಲ್ಲಿ ನೆಲೆ ಕಂಡುಕೊಳ್ಳವುದು ಅಂತಾ ಗೊತ್ತಾಗುತ್ತಿಲ್ಲ ಎಂದು ಸಂತ್ರಸ್ತ ರಾಮಕೃಷ್ಣ ಅಳಲು ತೋಡಿಕೊಂಡಿದ್ದಾರೆ.

    ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದಾರೆ. ಅಷ್ಟೇ ಅಲ್ಲದೆ ನಾನು ತುಂಬು ಗರ್ಭಿಣಿ, ಸೂರಿಲ್ಲದೆ ಬೀದಿಗೆ ಬಂದಿದ್ದೇವೆ. ಎಲ್ಲಿಗೆ ಹೋಗಬೇಕು?, ಏನು ಮಾಡಬೇಕು? ಅಂತಾ ಅರ್ಥವಾಗುತ್ತಿಲ್ಲ. ನಮ್ಮ ಆಧಾರ್ ಕಾರ್ಡ್, ಪಡಿತರ ಚೀತಿ, ಹಾಸಿಗೆ, ಧವಸ ಧಾನ್ಯಗಳು ಸುಟ್ಟು ಹೋಗಿವೆ ಎಂದು ಮಹಿಳೆ ಅಸಹಾಯಕತೆ ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 33 ರನ್‍ಗೆ 7 ವಿಕೆಟ್ ಬಿತ್ತು, ನಾಲ್ವರು ‘ಶೂನ್ಯ’ಕ್ಕೆ ಔಟ್ – ಟೀಂ ಇಂಡಿಯಾಗೆ ಹರಿಣಗಳ ವಿರುದ್ಧ ಗೆಲುವು

    33 ರನ್‍ಗೆ 7 ವಿಕೆಟ್ ಬಿತ್ತು, ನಾಲ್ವರು ‘ಶೂನ್ಯ’ಕ್ಕೆ ಔಟ್ – ಟೀಂ ಇಂಡಿಯಾಗೆ ಹರಿಣಗಳ ವಿರುದ್ಧ ಗೆಲುವು

    ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದು ಟೀಂ ಇಂಡಿಯಾ ವೈಟ್ ವಾಷ್‍ನಿಂದ ತಪ್ಪಿಸಿಕೊಂಡಿದೆ. ಗೆಲ್ಲಲು 241 ರನ್‍ಗಳನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ 177 ರನ್‍ಗೆ ಆಲೌಟಾಯಿತು. ಈ ಮೂಲಕ 63 ರನ್‍ಗಳಿಂದ ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸಿತು. 144 ರನ್‍ಗೆ 4ನೇ ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ 177 ರನ್‍ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತು.

    ಆರಂಭಿಕ ಆಟಗಾರ ಎಲ್ಗರ್ ಭಾರತದ ದಾಳಿಗೆ ಪ್ರತಿರೋಧ ತೋರಿ 86 ರನ್ ಗಳಿಸಿದರೂ ಭಾರತದ ವೇಗಿಗಳ ಮುಂದೆ ಇತರೆ ಎಲ್ಲಾ ಆಟಗಾರರು ರನ್ ಗಳಿಸಲು ತಿಣುಕಾಡಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾದ ಆಟಗಾರರು ಎರಡಂಕಿ ರನ್ ತಲುಪುವಲ್ಲೂ ವಿಫಲರಾದರು. ಅಲ್ಲದೆ ನಾಲ್ವರು ಆಟಗಾರು ಶೂನ್ಯಕ್ಕೆ ಔಟಾದರು.

    ಟೀಂ ಇಂಡಿಯಾ ಪರವಾಗಿ ವೇಗದ ಬೌಲರ್ ಮೊಹಮ್ಮದ್ ಶಮಿ 5 ವಿಕೆಟ್ ಗಳಿಸಿದರೆ, ಬೂಮ್ರಾ 2, ಇಶಾಂತ್ ಶರ್ಮಾ 2, ಪಾಂಡ್ಯಾ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಗಳಿಸಿದರು. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‍ನಲ್ಲಿ 187 ಹಾಗೂ ಎರಡನೇ ಇನ್ನಿಂಗ್ಸ್‍ನಲ್ಲಿ 247 ರನ್ ಗಳಿಸಿದರೆ ದಕ್ಷಿಣ ಆಫ್ರಿಕಾ 194 ಹಾಗೂ 177 ರನ್ ಗಳಿಸಿತು. ಈ ಮೂಲಕ ಭಾರತ 63 ರನ್ ಗಳ ಗೆಲುವು ಸಾಧಿಸಿತು. ಭಾರತದ ಪರವಾಗಿ ಬೂಮ್ರಾ ಮೊದಲ ಇನ್ನಿಂಗ್ಸ್‍ನಲ್ಲಿ 5 ವಿಕೆಟ್ ಗಳಿಸಿದ್ದರು.

    ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಆರಂಭಿಕ ಆಟಗಾರ ಎಲ್ಗರ್ ಅಜೇಯ 86 ರನ್, ಹಶೀಂ ಆಮ್ಲ 52, ಎಬಿಡಿ ವಿಲಿಯರ್ಸ್ 6, ಫಿಲಾಂಡರ್ 10, ಮಕ್ರ್ರಮ್ 4 ರನ್ ಗಳಿಸಿದರು. ಡಿ’ಕಾಕ್, ಫೆಲುಕ್ವಾಯೋ, ರಬಾಡ ಹಾಗೂ ಮಾರ್ಕೆಲ್ ಸೊನ್ನೆ ಸುತ್ತಿದರು.