Tag: Vote Count

  • ಮತ ಎಣಿಕೆಗೆ ಹೋಗುತ್ತಿದ್ದ ಕಾರು ಪಲ್ಟಿ- ಇಬ್ಬರು ಸಾವು

    ಮತ ಎಣಿಕೆಗೆ ಹೋಗುತ್ತಿದ್ದ ಕಾರು ಪಲ್ಟಿ- ಇಬ್ಬರು ಸಾವು

    ಹಾವೇರಿ: ಅಭ್ಯರ್ಥಿಪರ ಮತಎಣಿಕೆಗೆ ಏಜೆಂಟ್ ಆಗಿ ಬರುತ್ತಿದ್ದವರ ಕಾರು, ಚಾಲಕನ ನಿಯಂತ್ರಣ ತಪ್ಪಿ ತುಂಗಾಮೇಲ್ದಂಡೆ ಕಾಲುವೆಗೆ ಉರುಳಿ ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಪ್ರಕಾಶ ಬನ್ನಿಮಟ್ಟಿ(40) ಮತ್ತು ಸಿದ್ದನಗೌಡ ಬಿಷ್ಟನಗೌಡರ(45) ಎಂದು ಗುರುತಿಸಲಾಗಿದೆ. ಇವರು ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿಗಳು.

    ಗ್ರಾಮ ಪಂಚಾಯ್ತಿ ಮತ ಎಣಿಕೆ ಹಿನ್ನೆಲೆಯಲ್ಲಿ ಹಾವೇರಿಗೆ ಇಬ್ಬರು ಬರುತ್ತಿದ್ದರು. ಅಭ್ಯರ್ಥಿಯ ಪರವಾಗಿ ಮತ ಎಣಿಕೆಯ ಏಜೆಂಟ್ ಆಗಿ ಪ್ರಕಾಶ ಹಾವೇರಿ ಬರುತ್ತಿದ್ದರು. ಕಾರು ಚಾಲಕನ ನಿಯಂತ್ರಣ ತಪ್ಪಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಉರುಳಿ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತ ದೇಹ ಹಾಗೂ ವಾಹನವನ್ನ ಮೇಲೆ ಎತ್ತುವ ಕಾರ್ಯ ಮಾಡಿದ್ದಾರೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಗುರುವಾರ ‘ಮಹಾಭಾರತ’ದ ಮಹಾ ತೀರ್ಪು

    ಗುರುವಾರ ‘ಮಹಾಭಾರತ’ದ ಮಹಾ ತೀರ್ಪು

    ಬೆಂಗಳೂರು: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಗುರುವಾರ ಅಂತ್ಯವಾಗಲಿದೆ. ಸುಮಾರು ಎರಡು ತಿಂಗಳ ಮಹಾಭಾರತ ಕುರುಕ್ಷೇತ್ರದ ಫಲಿತಾಂಶ ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದೆ.

    ಮತ ಎಣಿಕೆಗೆ ರಾಜ್ಯಗಳ ಜಿಲ್ಲಾ ಕೇಂದ್ರಗಳು ಸಜ್ಜಾಗಿವೆ. ಬೆಳಗ್ಗೆ 7 ಗಂಟೆಗೆ ಸ್ಟ್ರಾಂಗ್ ರೂಮ್‍ಗಳು ಓಪನ್ ಆಗಲಿವೆ. ಮೊದಲಿಗೆ ಅಂಚೆ ಮತ ಎಣಿಕೆ ನಡೆದು ಆಮೇಲೆ ಇವಿಎಂ ಎಣಿಕೆ ಶುರುವಾಗಲಿದೆ.

    ಮತ ಎಣಿಕೆಗೆ ಮುನ್ನ ವಿವಿಪ್ಯಾಟ್ ತಾಳೆ ಮಾಡಬೇಕೆಂಬ 22 ವಿಪಕ್ಷಗಳ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಆದರೆ, ಸುಪ್ರೀಂ ಆದೇಶದಂತೆ ಪ್ರತಿ ಕ್ಷೇತ್ರದಲ್ಲೂ ಇವಿಎಂಗಳ ಜೊತೆ 5 ವಿವಿಪ್ಯಾಟ್‍ಗಳ ತಾಳೆ ನಡೆಯಲಿದೆ. ಇವಿಎಂ ಎಣಿಕೆಯ ಬಳಿಕ ವಿವಿಪ್ಯಾಟ್ ತಾಳೆ ಮಾಡಲಾಗುತ್ತದೆ ಎಂದು ಆಯೋಗ ಹೇಳಿದೆ.

    ಯಾವುದೇ ಹಿಂಸಾಚಾರ ಆಗದಂತೆ ಎಚ್ಚರ ವಹಿಸುವಂತೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. 7 ಹಂತಗಳ ಮತದಾನದಲ್ಲಿ ಈ ಬಾರಿ ಶೇ.67ರಷ್ಟು ಮತದಾನ ನಡೆದಿದೆ.

    2014ರ ಚುನಾವಣೆಯಲ್ಲಿ ಎನ್‍ಡಿಎ 334, ಯುಪಿಎ 59, ಇತರೆ 150 ಸ್ಥಾನಗಳನ್ನು ಗೆದ್ದಿತ್ತು. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ಈ ಬಾರಿಯ ಎಕ್ಸಿಟ್ ಪೋಲ್ ಸಮೀಕ್ಷೆಗಳು ಮತ್ತೆ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿವೆ.

  • ಮಧ್ಯಪ್ರದೇಶ ಚುನಾವಣಾ ಫಲಿತಾಂಶ ತಡವಾಗುತ್ತಿರುವುದು ಯಾಕೆ?

    ಮಧ್ಯಪ್ರದೇಶ ಚುನಾವಣಾ ಫಲಿತಾಂಶ ತಡವಾಗುತ್ತಿರುವುದು ಯಾಕೆ?

    ಭೋಪಾಲ್: ಮಧ್ಯಪ್ರದೇಶ ಚುನಾವಣೆಯ ಸಂಪೂರ್ಣ ಫಲಿತಾಂಶ ಸಂಜೆಯ ವೇಳೆಗೆ ಪ್ರಕಟವಾಗುವ ಸಾಧ್ಯತೆಯಿದೆ.

    ಪ್ರತಿ ಸುತ್ತಿನ ಮತ ಎಣಿಕೆಯ ಬಳಿಕ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಅಲ್ಪ ಅಂತರ ಇರುವ ಹಿನ್ನೆಲೆಯಲ್ಲಿ ಎರಡು ಪಕ್ಷಗಳ ಏಜೆಂಟ್ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ.

    ಆಕ್ಷೇಪಣೆ ಸಲ್ಲಿಕೆಯಾಗದೇ ಇದ್ದರೆ ನಂತರದ ಸುತ್ತು ಎಣಿಕೆಯಾಗುತ್ತದೆ. ಒಂದು ವೇಳೆ ಆಕ್ಷೇಪಣೆ ಸಲ್ಲಿಕೆಯಾದರೆ ಮತ್ತೆ ಎಣಿಕೆ ಮಾಡಲಾಗುತ್ತದೆ. ಮಧ್ಯಾಹ್ನ 2 ಗಂಟೆಯ ವೇಳೆಗೆ ಕಾಂಗ್ರೆಸ್, ಬಿಜೆಪಿ ಮಧ್ಯೆ 23 ಕ್ಷೇತ್ರಗಳಲ್ಲಿ 500 ಮತಗಳ ಅಂತರವಿದ್ದರೆ, 92 ಕ್ಷೇತ್ರಗಳಲ್ಲಿ 2 ಸಾವಿರ ಮತಗಳ ಅಂತರವಿದೆ. ಹೀಗಾಗಿ ಪ್ರತಿಬಾರಿಯೂ ಆಕ್ಷೇಪಣೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮತ ಎಣಿಕೆಯ ಅಧಿಕಾರಿಗಳು ಮರು ಎಣಿಕೆ ಮಾಡುತ್ತಿದ್ದಾರೆ.

    ನಿಯಮ ಬದಲಾವಣೆ
    ಈ ಹಿಂದೆ ಎಲ್ಲ ಸುತ್ತುಗಳು ಮುಗಿದ ಮೇಲೆ ಪಕ್ಷಗಳ ಎಜೆಂಟ್‍ಗಳ ಸಹಿ ಹಾಕಿ ಫಲಿತಾಂಶ ಪ್ರಕಟವಾಗುತಿತ್ತು. ಆದರೆ ಈ ಬಾರಿ ಇವಿಎಂ ವಿಚಾರದಲ್ಲಿ ಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪ್ರತಿ ಸುತ್ತಿನ ಎಣಿಕೆಯಾದ ಬಳಿಕ ಏಜೆಂಟ್ ಗಳ ಸಹಿ ತೆಗೆದುಕೊಳ್ಳುವಂತೆ ನಿಯಮವನ್ನು ಬದಲಾಯಿಸಿತ್ತು.

    https://www.youtube.com/watch?v=G9bvY4FfCqI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜನ ಕೆಲಸಕ್ಕೆ ಮನ್ನಣೆ ನೀಡ್ತಾರೆ, ಹಣಕ್ಕಲ್ಲ: ದಿನೇಶ್ ಗುಂಡೂರಾವ್ ಗೆ ಐಶ್ವರ್ಯ ಟಾಂಗ್

    ಜನ ಕೆಲಸಕ್ಕೆ ಮನ್ನಣೆ ನೀಡ್ತಾರೆ, ಹಣಕ್ಕಲ್ಲ: ದಿನೇಶ್ ಗುಂಡೂರಾವ್ ಗೆ ಐಶ್ವರ್ಯ ಟಾಂಗ್

    ಬೆಂಗಳೂರು: ಬಿನ್ನಿಪೇಟೆ ವಾರ್ಡ್ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ನಾಗರಾಜ್ ಅವರು 1,939 ಮತಗಳ ಅಂತರದಲ್ಲಿ ಜಯಸಾಧಿಸಿದ್ದಾರೆ.

    ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾ ಅವರು 7,188 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಅವರು 5,243 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಬಿಜೆಪಿಯ ಚಾಮುಂಡೇಶ್ವರಿ ಅವರು 2,445 ಮತಗಳನ್ನು ಪಡೆದಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರ ಅಧೀನದಲ್ಲಿದ್ದ ಬಿನ್ನಿಪೇಟೆ ವಾರ್ಡ್, ಈ ಬಾರಿ ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದನ್ನು ಓದಿ: ಇಂದು ಬಿನ್ನಿಪೇಟೆ ವಾರ್ಡ್ ಉಪಚುನಾವಣೆ ಫಲಿತಾಂಶ

    ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಐಶ್ವರ್ಯ ನಾಗರಾಜ್ ಅವರು, ನಮ್ಮ ತಾಯಿ ಈ ಗೆಲುವಿನ ಮೂಲಕ ಜೀವಂತವಾಗಿದ್ದಾರೆ ಎನ್ನುತ್ತ ದಿವಂಗತ ಮಹದೇವಮ್ಮ ಅವರನ್ನು ನೆನೆದು ಭಾವುಕರಾದರು. ಈ ಗೆಲುವನ್ನು ಜೆಡಿಎಸ್ ವರಿಷ್ಠ ದೇವೇಗೌಡ, ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಕ್ಷೇತ್ರದ ಜನತೆಗೆ ಅರ್ಪಿಸುತ್ತೇನೆ. ನನ್ನ ತಂದೆ-ತಾಯಿ ಅವರ ಸೇವೆಯನ್ನು ಜನ ಗುರುತಿಸಿದ್ದಾರೆ ಎಂದು ನೆನೆಪಿಸಿಕೊಂಡರು.

    ಜನ ಕೆಲಸಕ್ಕೆ ಮನ್ನಣೆ ನೀಡುತ್ತಾರೆ, ಹಣಕ್ಕೆ ಅಲ್ಲ ಎನ್ನುವ ಸಂದೇಶವನ್ನು ಮತದಾರರು ತಿಳಿಸಿದ್ದಾರೆ. ಬಿನ್ನಿಪೇಟೆ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಇಲ್ಲದೆ ಬಿನ್ನಿಪೇಟೆ ಇಲ್ಲ ಎಂದು ದಿನೇಶ್ ಗುಂಡೂರಾವ್ ಭಾವಿಸಿದ್ದರು. ಅದರೆ ಈಗ ಬಿನ್ನಿಪೇಟೆ ಅಂದ್ರೆ ಬಿಟಿಎಸ್ ನಾಗರಾಜ್ ಅಂತಾ ಜನ ಉತ್ತರಿಸಿದ್ದಾರೆ ಎಂದು ಗುಂಡೂರಾವ್ ವಿರುದ್ಧ ಐಶ್ವರ್ಯ ವಾಗ್ದಾಳಿ ನಡೆಸಿದರು.

    https://youtu.be/NjT2yLFgZZ4