ಮಾಸ್ಕೋ: ಉಕ್ರೇನ್ ಡ್ರೋನ್ ದಾಳಿಯೊಂದಕ್ಕೆ (Ukraine Drone Attack) ರಷ್ಯಾದ ಉನ್ನತ ಕಮಾಂಡರ್ರೊಬ್ಬರು ಗಾಯಗೊಂಡಿದ್ದಾರೆ. ಆದರೆ ಈ ದಾಳಿಯ ಕೇಂದ್ರ ಬಿಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಆಗಿತ್ತು ಎಂದು ವಾಯು ರಕ್ಷಣಾ ವಿಭಾಗದ ಕಮಾಂಡರ್ ಯೂರಿ ಡ್ಯಾಶ್ಕಿನ್ ಆರೋಪ ಮಾಡಿದ್ದಾರೆ. ಈ ಘಟನೆ ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಹೊಸ ತಿರುವು ನೀಡಿದೆ.
ಭಾನುವಾರ ರಾತ್ರಿ ರಷ್ಯಾದ ಗಡಿಯ ಸಮೀಪದಲ್ಲಿ ನಡೆದ ಈ ದಾಳಿಯಲ್ಲಿ ಉಕ್ರೇನ್ ಡ್ರೋನ್ಗಳು ರಷ್ಯಾದ ಸೇನಾ ಹೆಲಿಕಾಪ್ಟರ್ವೊಂದನ್ನು ಗುರಿಯಾಗಿಸಿವೆ. ಈ ಹೆಲಿಕಾಪ್ಟರ್ನಲ್ಲಿ ಪುಟಿನ್ ಆಪ್ತ ಕಮಾಂಡರ್ ಇದ್ದರು ಎಂದು ತಿಳಿದುಬಂದಿದೆ. ದಾಳಿಯಿಂದ ಕಮಾಂಡರ್ ಗಾಯಗೊಂಡಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ರಷ್ಯಾದ ಅಧಿಕಾರಿಗಳು ದೃಢಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಮೇಲೆ ಸುಳ್ಳು ಆರೋಪ – ಅದಕ್ಕೆ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್: ಹೆಚ್.ಕೆ ಪಾಟೀಲ್
ಈ ದಾಳಿಯನ್ನು ಉಕ್ರೇನ್ ಸೇನೆಯ ವಿಶೇಷ ಡ್ರೋನ್ ತಂಡವು ಯೋಜಿಸಿತ್ತು. ಇದು ರಷ್ಯಾದ ಸೇನಾ ಚಟುವಟಿಕೆಗಳಿಗೆ ತಕ್ಕ ಪ್ರತಿಕ್ರಿಯೆ ಎಂದು ಉಕ್ರೇನ್ನ ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ. ರಷ್ಯಾದ ಕ್ರೆಮ್ಲಿನ್ ಈ ದಾಳಿಯನ್ನು ಖಂಡಿಸಿದ್ದು, ಉಕ್ರೇನ್ನ ಈ ಕೃತ್ಯಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಈ ಘಟನೆಯಿಂದ ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಇದನ್ನೂ ಓದಿ: ಒಂದು ವಾರದಲ್ಲಿ ದೇಶದಲ್ಲಿ 752 ಮಂದಿಗೆ ಕೊರೊನಾ ಸೋಂಕು – ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ
ಭಾನುವಾರ ಉಕ್ರೇನ್ ವಿರುದ್ಧ ರಷ್ಯಾ ಮಾರಣಾಂತಿಕ ಡ್ರೋನ್ ದಾಳಿ ನಡೆಸಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆರಳಿ ಕೆಂಡವಾಗಿದ್ದಾರೆ. ಯುದ್ಧ ಪೀಡಿತ ಉಭಯ ರಾಷ್ಟ್ರಗಳು ದೊಡ್ಡ ಪ್ರಮಾಣದ ಕೈದಿಗಳ ವಿನಿಮಯ ಪೂರ್ಣಗೊಳಿಸಿದರೂ ರಷ್ಯಾ ಮತ್ತೆ ಡ್ರೋನ್ ದಾಳಿ ನಡೆಸಿ ಹಲವರ ಸಾವಿಗೆ ಕಾರಣವಾಗಿರುವುದಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ‘ಕ್ರೇಜಿ’ (ಹುಚ್ಚ) ಎಂದು ಟ್ರಂಪ್ ಕರೆದಿದ್ದಾರೆ. ಭಾನುವಾರ ರಾತ್ರಿ ಉಕ್ರೇನ್ ವಿರುದ್ಧ ರಷ್ಯಾ ಬೃಹತ್ ಡ್ರೋನ್ ದಾಳಿ ನಡೆಸಿದ್ದರಿಂದ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸದ್ಯದಲ್ಲೇ ರಾಜನಾಥ್ ಭೇಟಿ, ಡಿಫೆನ್ಸ್ ಕಾರಿಡಾರ್ಗೆ ಪಟ್ಟು: ಎಂಬಿಪಿ
ವ್ಲಾಡಿಮಿರ್ ಪುಟಿನ್ ಅವರೊಂದಿಗೆ ತಾಳ್ಮೆ ಕಳೆದುಕೊಳ್ಳುತ್ತಿರುವುದಾಗಿ ಟ್ರಂಪ್ ಸ್ಪಷ್ಟಪಡಿಸಿದ್ದು, ರಷ್ಯಾದ ನಾಯಕನ ವಿರುದ್ಧ ತೀಕ್ಷ್ಣವಾಗಿ ಟೀಕೆಗಳನ್ನು ಮಾಡಿದ್ದಾರೆ. ಪುಟಿನ್ ಜೊತೆಗೆ ಯಾವಾಗಲೂ ಉತ್ತಮ ಸಂಬಂಧ ಹೊಂದಿದ್ದೇನೆ. ಆದರೆ ಅವರಿಗೆ ಏನೋ ಆಗಿದೆ. ಅವರು ಸಂಪೂರ್ಣವಾಗಿ ಹುಚ್ಚರಾಗಿದ್ದಾರೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸ್ವಚ್ಛವಾಹಿನಿ ಚಾಲಕಿಯರ ವೇತನ, ಸೌಲಭ್ಯಗಳ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿ: ಪ್ರಿಯಾಂಕ್ ಖರ್ಗೆ
ಮಾಸ್ಕೋ: ಉಕ್ರೇನ್ ಜೊತೆಗಿನ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ರಷ್ಯಾ (Russia) ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಮೂಲಕ ಮಾತುಕತೆ ನಡೆಸಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದರು. ಈ ವಿಚಾರವಾಗಿ ಇಬ್ಬರ ನಡುವೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಯಿತು. ಇದೇ ವೇಳೆ ಇಬ್ಬರೂ ಸಹ ಯುದ್ಧ ಸೂಕ್ಷ್ಮತೆಗಳ ಕುರಿತು ಚರ್ಚಿಸಿದರು. ಮಾಸ್ಕೋ ಮತ್ತು ಕೈವ್ ನಡುವಿನ ಸಂಘರ್ಷವನ್ನು ಪರಿಹರಿಸುವ ಮಾರ್ಗಗಳು ಹಾಗೂ ಕದನ ವಿರಾಮ ಸಂಭವಿಸದಿದ್ದರೆ ಮುಂದೇನು ಮಾಡಬೇಕು ಎಂಬ ಬಗ್ಗೆಯೂ ಚರ್ಚಿಸಿದ್ರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪುಟಿನ್, ಟ್ರಂಪ್ ಅವರ ಜೊತೆಗಿನ ಇಂದಿನ ಮಾತುಕತೆ ತುಂಬಾ ಉಪಯುಕ್ತವಾಗಿತ್ತು. ಮಾಸ್ಕೋ ಮತ್ತು ಕೈವ್ ನಡುವಿನ ನೇರ ಸಂವಾದವನ್ನು ಪುನರಾರಂಭಿಸಲು ಸಹಾಯ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಉಕ್ರೇನ್ನೊಂದಿಗೆ ಭವಿಷ್ಯದ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಲು ರಷ್ಯಾ ಸಿದ್ಧವಾಗಿದೆ. ರಷ್ಯಾ ಮತ್ತು ಉಕ್ರೇನ್ ಎರಡೂ ಕಡೆಯವರು ಸ್ವೀಕಾರಾರ್ಹವಾದ ಹೊಂದಾಣಿಕೆ ಕಂಡುಕೊಳ್ಳಬೇಕು. ನಿರೀಕ್ಷಿತ ಒಪ್ಪಂದಗಳನ್ನ ತಲುಪಿದ್ರೆ ಉಕ್ರೇನ್ನೊಂದಿಗೆ ಕದನ ವಿರಾಮ ಸಾಧ್ಯ. ಉಕ್ರೇನ್ ನಮ್ಮ ಷರತ್ತುಗಳಿಗೆ ಒಪ್ಪಿದ್ರೆ ಕದನ ವಿರಾಮ ಸಾಧ್ಯವಾಗಲಿದೆ ಎಂದು ಎಂದು ತಿಳಿಸಿದ್ದಾರೆ.
ಇನ್ನೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ನಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮಾಸ್ಕೋ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಮಾಸ್ಕೋ/ಕೈವ್: ಉಕ್ರೇನ್ ವಿರುದ್ಧ 2 ವರ್ಷಗಳಿಂದ ನಡೆಯುತ್ತಿರುವ ಯುದ್ಧಕ್ಕೆ (Russia Ukraine War) ರಷ್ಯಾ ಅಧ್ಯಕ್ಷ ಪುಟಿನ್ 3 ದಿನ ಕದನ ವಿರಾಮ ಘೋಷಿಸಿದ್ದಾರೆ.
80ನೇ ಸೇನಾ ವಿಜಯೋತ್ಸವ ಹಿನ್ನೆಲೆಯಲ್ಲಿ ಮೇ 8ರಿಂದ 10ರ ವರೆಗೆ 3 ದಿನ ಕದನ ವಿರಾಮ ಪ್ರಕಟಿಸಿದ್ದಾರೆ. ಇನ್ನು, ಉಕ್ರೇನ್ ವಶ ಪಡಿಸಿಕೊಂಡಿದ್ದ ಪಶ್ಚಿಮ ರಷ್ಯಾದ ಕುರ್ಸ್ಕ್ ಪ್ರಾಂತ್ಯವನ್ನು ಮರುವಶ ಮಾಡಿಕೊಂಡಿದ್ದಾಗಿ ರಷ್ಯಾ ಹೇಳಿದೆ.
ಈ ಮಧ್ಯೆ, ಈ ವಿಚಾರವಾಗಿ ರಷ್ಯಾಗೆ ಸೇನಾ ಬೆಂಬಲ ನೀಡಿದ್ದಾಗಿ ಉತ್ತರ ಕೊರಿಯಾ ಅಧಿಕೃತವಾಗಿ ಹೇಳಿದೆ.
ತಹಾವ್ವುರ್ ರಾಣಾ 12 ದಿನಗಳ ಕಾಲ ಎನ್ಐಎ ಕಸ್ಟಡಿಗೆ:
ಇನ್ನೂ 26/11 ಮುಂಬೈ ದಾಳಿಯ ಸೂತ್ರಧಾರ ತಹಾವ್ವೂರ್ ರಾಣಾನನ್ನು ಎನ್ಐಎ 12 ದಿನ ಕಸ್ಟಡಿಗೆ ಪಡೆದಿದೆ. ಎನ್ಐಎ ಜಡ್ಜ್ ಮುಂದೆ ಹಾಜರು ಪಡಿಸಿದ್ದ ಅಧಿಕಾರಿಗಳು 18 ದಿನ ವಶಕ್ಕೆ ಕೇಳಿದ್ದರು. ಎನ್ಐಎ ಪರವಾಗಿ ದಯಾನ್ ಕೃಷ್ಣನ್, ಪಬ್ಲಿಕ್ ಪ್ರಾಸಿಕ್ಯೂಟರ್ ನರೇಂದ್ರ ಮನ್ ವಾದಿಸಿದರು.
ಘಟನೆ ಸಂಭವಿಸಿದ 17 ವರ್ಷಗಳು ಆಗಿದೆ. ಹಾಗಾಗಿ, ಆರೋಪಿಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಮಹಜರು ಮಾಡಬೇಕಿದೆ ಅಂತ ವಾದಿಸಿದರು. ರಾಣಾ ಪರ ವಕೀಲ ಪಿಯುಶ್ ಸಚ್ದೇವ್ ವಕಾಲತು ವಹಿಸಿದ್ದಾರೆ.
ಮಾಸ್ಕೋ: ರಷ್ಯಾ-ಉಕ್ರೇನ್ (Russia-Ukraine Conflict) ಸಂಘರ್ಷದಲ್ಲಿ ಕದನ ವಿರಾಮದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಕ್ಕೆ ಟ್ರಂಪ್ ಮತ್ತು ಮೋದಿ ಅವರಿಗೆ ಧನ್ಯವಾದ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕೃತಜ್ಞತೆ ಸಲ್ಲಿಸಿದ್ದಾರೆ.
ಉಕ್ರೇನ್ನಲ್ಲಿ 30 ದಿನಗಳ ಕದನ ವಿರಾಮಕ್ಕಾಗಿ ವಾಷಿಂಗ್ಟನ್ನ ಯೋಜನೆಯ ಕುರಿತು ಪುಟಿನ್ ತಮ್ಮ ಮೊದಲ ಹೇಳಿಕೆಯನ್ನು ನೀಡಿದ್ದಾರೆ. ಉಕ್ರೇನ್ ಸಂಘರ್ಷದ ಬಗ್ಗೆ ಗಮನ ಹರಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಇತರೆ ರಾಷ್ಟ್ರಗಳ ಮುಖ್ಯಸ್ಥರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ; ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾ ಒಪ್ಪಿಗೆ
ಮೊದಲನೆಯದಾಗಿ, ಉಕ್ರೇನ್ ಸಂಘರ್ಷ ಇತ್ಯರ್ಥಕ್ಕೆ ಇಷ್ಟೊಂದು ಗಮನ ನೀಡಿದ್ದಕ್ಕಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ತಮ್ಮದೇ ದೇಶಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೆಲಗಳಿವೆ. ಈ ನಡುವೆಯೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರು, ಭಾರತದ ಪ್ರಧಾನಿ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಗಣರಾಜ್ಯದ ಅಧ್ಯಕ್ಷರು ನಮ್ಮ ವಿಷಯಕ್ಕೆ ಸಾಕಷ್ಟು ಸಮಯ ನೀಡಿದ್ದಾರೆ. ಅವರಿಗೆ ನಾನು ಆಭಾರಿ. ಏಕೆಂದರೆ, ಇದೆಲ್ಲವೂ ಯುದ್ಧವನ್ನು ನಿಲ್ಲಿಸುವ ಮತ್ತು ಮಾನವ ಸಾವು-ನೋವುಗಳನ್ನು ತಡೆಗಟ್ಟುವ ಉದಾತ್ತ ಯೋಜನೆಯಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಕಳೆದ ತಿಂಗಳು ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗಿನ ಸಭೆಯಲ್ಲಿ ಪ್ರಧಾನಿ ಮೋದಿ, ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ವಿಚಾರದಲ್ಲಿ ಭಾರತ ತಟಸ್ಥವಾಗಿಲ್ಲ ಎಂದು ಒತ್ತಿ ಹೇಳಿದ್ದರು. ಭಾರತ ತಟಸ್ಥವಾಗಿಲ್ಲ. ಭಾರತ ಶಾಂತಿಯ ಪರವಾಗಿ ನಿಂತಿದೆ. ಇದು ಯುದ್ಧದ ಯುಗವಲ್ಲ ಎಂದು ನಾನು ಈಗಾಗಲೇ ಅಧ್ಯಕ್ಷ ಪುಟಿನ್ ಅವರಿಗೆ ಹೇಳಿದ್ದೇನೆ. ಈ ವಿಚಾರದಲ್ಲಿ ಟ್ರಂಪ್ ನಿಲುವಿಗೆ ನನ್ನ ಬೆಂಬಲ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ರಷ್ಯಾ ಜೊತೆ ಅಮೆರಿಕ ಮಾತುಕತೆಗೆ ಸಿದ್ಧರೆ – ಈಗಾಗಲೇ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವ ಉಕ್ರೇನ್
ಈ ಮಧ್ಯೆ, ಯಾವುದೇ ಷರತ್ತುಗಳಿಲ್ಲದೆ ಕದನ ವಿರಾಮ ಪ್ರಸ್ತಾವನೆಗೆ ರಷ್ಯಾ ಒಪ್ಪಿಗೆ ನೀಡಬೇಕೆಂದು ಅಮೆರಿಕ ಒತ್ತಾಯಿಸಿತ್ತು. ಆದಾಗ್ಯೂ, ಕೆಲವು ಷರತ್ತುಗಳೊಂದಿಗೆ ಕದನ ವಿರಾಮಕ್ಕೆ ಪುಟಿನ್ ಒಪ್ಪಿಗೆ ಸೂಚಿಸಿದ್ದಾರೆ.
ಮಾಸ್ಕೋ: ಉಕ್ರೇನ್ (Russia-Ukraine War) ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾವು ಅಮೆರಿಕದ (America) ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದೆ.
ಷರತ್ತುಬದ್ಧ ಒಪ್ಪಿಗೆ ಸೂಚಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin), ಒಪ್ಪಿಗೆ ಜೊತೆಗೆ ಹಲವು ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ.
ಕದನ ವಿರಾಮವು ಶಾಶ್ವತ ಶಾಂತಿಗೆ ಕಾರಣವಾಗಬೇಕು. ಸಂಘರ್ಷದ ಮೂಲ ಕಾರಣಗಳನ್ನು ಪರಿಹರಿಸಬೇಕು. ಯುದ್ಧ ವಿರಾಮ ಉಕ್ರೇನ್ ಮತ್ತೆ ಸಶಸ್ತ್ರೀಕರಣಗೊಳ್ಳಲು ಅವಕಾಶ ನೀಡಬಹುದು. ತನ್ನ ಸೇನೆಯನ್ನು ಮತ್ತೆ ಸಜ್ಜುಗೊಳಿಸಲು ಸಹಕಾರಿಯಾಗಬಹುದು ಎಂದು ಪುಟಿನ್ ಬೇಡಿಕೆ ಮುಂದಿಟ್ಟಿದ್ದಾರೆ.
ರಷ್ಯಾದ 2,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಉಕ್ರೇನ್ ಸೇನೆ ಸಾಕಷ್ಟು ನಷ್ಟ ಮಾಡಿದೆ. ಬಂಧಿತ ಸೈನಿಕರನ್ನು ಹಾಗೇ ಹೋಗಲು ಬಿಡಬೇಕೇ? ಉಕ್ರೇನ್ ಅವರಿಗೆ ಶರಣಾಗಲು ಸೂಚಿಸುತ್ತದೆಯೇ? ಅಮೆರಿಕದ ಅಧಿಕಾರಿಗಳು ಅಥವಾ ಟ್ರಂಪ್ ಜೊತೆಗೆ ಮಾತುಕತೆಗೆ ಸಿದ್ಧ. ಸಂಘರ್ಷವನ್ನು ಶಾಂತಿಯುತವಾಗಿ ಕೊನೆಗೊಳಿಸಲು ನಾವು ಸಿದ್ಧ ಎಂದು ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸುತ್ತಲೇ ರಷ್ಯಾ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.
ವಾಷಿಂಗ್ಟನ್: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗಿಂತ (Vladimir Putin) ಅಕ್ರಮ ವಲಸೆಯೇ ಬಹುದೊಡ್ಡ ಸಮಸ್ಯೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅವರು, ನಾವು ಪುಟಿನ್ ಬಗ್ಗೆ ಚಿಂತೆ ಮಾಡುವುದನ್ನು ಕಡಿಮೆ ಮಾಡಬೇಕು. ಅಕ್ರಮ ವಲಸಿಗರಿಂದ (Illegal Immigrants) ಆಗುವ ಅತ್ಯಾಚಾರ, ಮಾದಕವಸ್ತುಗಳ ದೊರೆಗಳು, ಕೊಲೆಗುಡುಕರ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಿದೆ. ಈ ವಿಚಾರದ ಬಗ್ಗೆ ಚಿಂತೆ ಮಾಡಿದರೆ ಯುರೋಪಿನಂತೆ (Europe) ನಮ್ಮ ದೇಶ ಹಾಳಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
( @realDonaldTrump – Truth Social Post )
( Donald J. Trump – Mar 02, 2025, 9:19 PM ET )
We should spend less time worrying about Putin, and more time worrying about migrant rape gangs, drug lords, murderers, and people from mental institutions entering our Country – So that we… pic.twitter.com/98TQsk58uJ
— Donald J. Trump 🇺🇸 TRUTH POSTS (@TruthTrumpPosts) March 3, 2025
ನನ್ನ ಅಧಿಕಾರ ಅವಧಿ ಸ್ವೀಕರಿಸಿದ ಮೊದಲ ತಿಂಗಳಾದ ಫೆಬ್ರವರಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ದೇಶದ ಒಳಗೆ ಅಕ್ರಮ ವಲಸಿಗರು ನುಗ್ಗಲು ಪ್ರಯತ್ನಿಸಿದ್ದಾರೆ. ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಗಡಿ ಗಸ್ತು ಪಡೆ ಕೇವಲ 8,326 ಅಕ್ರಮ ವಲಸಿಗರ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅವರೆಲ್ಲರನ್ನೂ ನಮ್ಮ ರಾಷ್ಟ್ರದಿಂದ ಹೊರಹಾಕಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ:ಅಕ್ರಮವಾಗಿ ಇಸ್ರೇಲ್ ಪ್ರವೇಶಿಸಲು ಯತ್ನಿಸಿದ್ದ ಕೇರಳದ ವ್ಯಕ್ತಿ ಗುಂಡಿಗೆ ಬಲಿ
ಅಧಿಕಾರ ಸ್ವೀಕರಿಸಿದ ಮೊದಲ ತಿಂಗಳಿನಲ್ಲೇ ಅಕ್ರಮ ವಲಸಿಗರ ಸಂಖ್ಯೆಯನ್ನು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಟ್ರಂಪ್ ಹೇಳಿದರು.
ಜೋ ಬೈಡನ್ ಅವಧಿಯಲ್ಲಿ ಒಂದು ತಿಂಗಳಿನಲ್ಲಿ 3 ಲಕ್ಷ ಮಂದಿ ಅಕ್ರಮವಾಗಿ ದೇಶವನ್ನು ಪ್ರವೇಶಿಸುತ್ತಿದ್ದರು. ಈಗ ಎಲ್ಲಾ ಅಕ್ರಮ ವಲಸಿಗರಿಗೆ ಗಡಿಯನ್ನು ಮುಚ್ಚಲಾಗಿದೆ. ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಲು ಯಾರಾದರೂ ಪ್ರಯತ್ನಿಸಿದರೆ ಕ್ರಿಮಿನಲ್ ದಂಡದ ಜೊತೆ ತಕ್ಷಣದ ಗಡೀಪಾರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಾಷಿಂಗ್ಟನ್: ಉಕ್ರೇನ್ (Ukraine) ವಿರುದ್ಧ ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸದೇ ಇದ್ದರೆ ರಷ್ಯಾದ (Russia) ಮೇಲೆ ಹೆಚ್ಚಿನ ನಿರ್ಬಂಧ ಮತ್ತು ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬೆದರಿಕೆ ಹಾಕಿದ್ದಾರೆ
ಅಧ್ಯಕ್ಷ ಪದವಿ ಸ್ವೀಕರಿಸಿದ ಮೂರನೇ ದಿನವೇ ತಮ್ಮ ಸಾಮಾಜಿಕ ಜಾಲತಾಣ ಮಾಧ್ಯಮ ಟ್ರುಥ್ನಲ್ಲಿ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಹೆಸರನ್ನು ಉಲ್ಲೇಖಿಸಿಯೇ ಪೋಸ್ಟ್ ಮಾಡಿದ್ದಾರೆ.
ನಾವು ಒಪ್ಪಂದ ಮಾಡಿಕೊಳ್ಳದಿದ್ದರೆ ಶೀಘ್ರವೇ ಅಮೆರಿಕ ಮತ್ತು ಇತರ ದೇಶಗಳಿಗೆ ಮಾರಾಟ ಮಾಡುವ ರಷ್ಯಾದ ಯಾವುದೇ ವಸ್ತುವಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ ಎಂದು ಬರೆದಿದ್ದಾರೆ.
ನಾನು ರಷ್ಯಾವನ್ನು ನೋಯಿಸಲು ಬಯಸುವುದಿಲ್ಲ. ನಾನು ರಷ್ಯಾದ ಜನರನ್ನು ಪ್ರೀತಿಸುತ್ತೇನೆ ಮತ್ತು ಅಧ್ಯಕ್ಷ ಪುಟಿನ್ ಅವರೊಂದಿಗೆ ಯಾವಾಗಲೂ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಎರಡನೇ ಮಹಾಯುದ್ಧವನ್ನು ಗೆಲ್ಲಲು ರಷ್ಯಾ ನಮಗೆ ಸಹಾಯ ಮಾಡಿತ್ತು. ಈ ಯುದ್ಧದಲ್ಲಿ ಸುಮಾರು 6 ಕೋಟಿ ಜನರು ಪ್ರಾಣಕಳೆದುಕೊಂಡರು ಎಂಬುದನ್ನು ಮರೆಯಬಾರದು ಎಂದರು.
ನಾನು ಚುನಾವಣೆಯಲ್ಲಿ ಗೆದ್ದರೆ ರಷ್ಯಾ ಉಕ್ರೇನ್ ಯುದ್ಧವನ್ನು ಕೊನೆಗೊಳಿಸುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಪದೇ ಪದೇ ಹೇಳುತ್ತಿದ್ದರು.
ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ವಿದಾಯ ಹೇಳುವ ಹೊತ್ತಿನಲ್ಲೇ ಜೋ ಬೈಡೆನ್ (Joe Biden) ರಷ್ಯಾದ ಮೇಲೆ ಗಧಾಪ್ರಹಾರ ಮಾಡಿದ್ದಾರೆ. ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾವನ್ನು ಆರ್ಥಿಕವಾಗಿ ಮತ್ತಷ್ಟು ಕುಗ್ಗಿಸಲು ಹೊಸ ನಿರ್ಬಂಧಗಳನ್ನು ವಿಧಿಸಿದ್ದಾರೆ. ಜಗತ್ತಿನಲ್ಲೇ ಅತಿ ದೊಡ್ಡ ತೈಲ ರಫ್ತುದಾರ ರಾಷ್ಟçಗಳಲ್ಲಿ ರಷ್ಯಾವು ಒಂದು. ಈ ರಾಷ್ಟ್ರವನ್ನು ತೈಲ ವ್ಯಾಪಾರದಲ್ಲೇ ಕಟ್ಟಿಹಾಕಲು ಬೈಡೆನ್ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅಮೆರಿಕ ಹಾಕಿರುವ ನಿರ್ಬಂಧ ಸಹಜವಾಗಿ ರಷ್ಯಾದ ಗೆಳೆಯರಂತೆಯೇ ಇರುವ ಚೀನಾ ಮತ್ತು ಭಾರತದ ಮೇಲೂ ಪರಿಣಾಮ ಬೀರಿದೆ. ವಿಶ್ವದ ದೊಡ್ಡಣ್ಣನ ವರ್ತನೆಗೆ ಈ ಎರಡೂ ರಾಷ್ಟçಗಳು ಅಸಮಾಧಾನಗೊಂಡಿವೆ. ಪ್ರಮುಖ ಸಂಪನ್ಮೂಲವಾಗಿರುವ ತೈಲ ಆಮದಿಗೆ ಭಾರತ, ಚೀನಾ ಮುಂದೇನು ಮಾಡುತ್ತವೆ ಎಂಬುದು ಸದ್ಯದ ಕುತೂಹಲ.
ರಷ್ಯಾದ (Russia) ಮೇಲೆ ಅಮೆರಿಕ ವಿಧಿಸಿರುವ ಹೊಸ ನಿರ್ಬಂಧಗಳೇನು? ಜೋ ಬೈಡೆನ್ ನಿರ್ಬಂಧ ಹೇರಿದ್ಯಾಕೆ? ಇದರಿಂದ ಚೀನಾ, ಭಾರತದ ಮೇಲಾಗುವ ಪರಿಣಾಮಗಳೇನು?.. ಎಂಬಿತ್ಯಾದಿ ಪ್ರಶ್ನೆಗಳಿಗೆ ಮಾಹಿತಿ ಇಲ್ಲಿದೆ.
ರಷ್ಯಾದ ತೈಲ ಉತ್ಪಾದಕರು, ಟ್ಯಾಂಕರ್ಗಳಿಗೆ ನಿರ್ಬಂಧ
ವಿಶ್ವದ ಎರಡನೇ ಅತಿದೊಡ್ಡ ತೈಲ ರಫ್ತುದಾರ ದೇಶ ರಷ್ಯಾ. ಈ ದೇಶದ 2 ತೈಲ ಉತ್ಪಾದಕರಾದ ಗಾಜ್ಪ್ರೊಮ್ ನೆಫ್ಟ್, ಸುರ್ಗುಟ್ನೆಫ್ಟೆಗಾಸ್ ಮತ್ತು ರಷ್ಯಾದ ತೈಲವನ್ನು ಸಾಗಿಸುವ 183 ಹಡಗುಗಳ ಮೇಲೆ ಯುಎಸ್ ಹೊಸ ನಿರ್ಬಂಧಗಳನ್ನು ಹೇರಿದೆ. ಕಳೆದ ವಾರ ನಿರ್ಬಂಧಗಳ ಕುರಿತು ಬೈಡೆನ್ ಘೋಷಣೆ ಮಾಡಿದ್ದಾರೆ. ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾಗೆ ಪ್ರಮುಖ ಆದಾಯ ಮೂಲವಾಗಿರುವ ಕ್ಷೇತ್ರವನ್ನೇ ಗುರಿಯಾಗಿಸಿ ಅಮೆರಿಕ ಈ ನಿರ್ಧಾರ ಪ್ರಕಟಿಸಿದೆ. ‘ರಷ್ಯಾದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ವಲಯಗಳ ಮೇಲೆ ನಿರ್ಬಂಧ ಹೇರಲು ಇದು ಸಹಕಾರಿಯಾಗಲಿದೆ’ ಬೈಡೆನ್ ತಿಳಿಸಿದ್ದಾರೆ. ಈ ವಲಯಗಳು ರಷ್ಯಾದ ಆರ್ಥಿಕತೆಯ ಚಾಲಕರು ಎಂದು ಭಾವಿಸಲಾಗಿದೆ. ಅದಕ್ಕೆ ಕಡಿವಾಣ ಹಾಕುವುದೇ ಯುಎಸ್ ಉದ್ದೇಶವಾಗಿದೆ.
ಭಾರತ-ಚೀನಾಗೆ ರಷ್ಯಾ ತೈಲ
ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು 2022 ರಲ್ಲಿ ಗ್ರೂಪ್ ಆಫ್ ಸೆವೆನ್ ದೇಶಗಳು ಹೇರಿದ ಬೆಲೆಯ ಮಿತಿಯಿಂದಾಗಿ ಯೂರೋಪ್ನಿಂದ ಏಷ್ಯಾಗೆ ರಷ್ಯಾದ ತೈಲ ವ್ಯಾಪಾರವನ್ನು ಬದಲಾಯಿಸಲಾಗಿತ್ತು. ಆಗಿನಿಂದ ಹೆಚ್ಚಿನ ಟ್ಯಾಂಕರ್ಗಳನ್ನು ಭಾರತ (India) ಮತ್ತು ಚೀನಾಗೆ (China) ತೈಲ ರವಾನಿಸಲು ಬಳಸಲಾಯಿತು. ಕೆಲವು ಟ್ಯಾಂಕರ್ಗಳು ಇರಾನ್ನಿಂದ ತೈಲವನ್ನು ರವಾನಿಸಿದ್ದವು.
ಭಾರತದ ಮೇಲೆ ಎಫೆಕ್ಟ್ ಏನು?
ಬೈಡೆನ್ ಆಡಳಿತವು ವಿಧಿಸಿದ ಹೊಸ ನಿರ್ಬಂಧಗಳು, ರಷ್ಯಾದೊಂದಿಗೆ ವ್ಯವಹಾರದಲ್ಲಿ ತೊಡಗಿರುವ ಘಟಕಗಳನ್ನೂ ಟಾರ್ಗೆಟ್ ಮಾಡಿವೆ. ರಷ್ಯಾದ ಎರಡು ದೊಡ್ಡ ಗ್ರಾಹಕರಾದ ಭಾರತ ಮತ್ತು ಚೀನಾದೊಂದಿಗಿನ ತೈಲ ವ್ಯಾಪಾರಕ್ಕೆ ಅಡ್ಡಿಪಡಿಸಲಿದೆ. ಗಾಜ್ಪ್ರೊಮ್ ನೆಫ್ಟ್, ಸುರ್ಗುಟ್ನೆಫ್ಟೆಗಾಸ್ ದಿನಕ್ಕೆ 1 ಮಿಲಿಯನ್ ಬ್ಯಾರೆಲ್ಗಳಿಗಿಂತ ಹೆಚ್ಚು ತೈಲವನ್ನು ಉತ್ಪಾದಿಸುತ್ತವೆ. ಇದು ವರ್ಷಕ್ಕೆ 23 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ. ಈ ಎರಡು ಕಂಪನಿಗಳ ಮೇಲಿನ ನಿರ್ಬಂಧಗಳು ಭಾರತ ಮತ್ತು ಚೀನಾದಲ್ಲಿನ ತೈಲ ಸಂಸ್ಕರಣಾಗಾರರ ಕಳವಳಕ್ಕೆ ಕಾರಣವಾಗಿವೆ.
ಹೊಸ ನಿರ್ಬಂಧಗಳು ಭಾರತೀಯ ತೈಲ ಸಂಸ್ಕರಣಾಗಾರಗಳಿಗೆ ರಷ್ಯಾದ ಸರಬರಾಜನ್ನು ಸಂಪೂರ್ಣವಾಗಿ ಅಡ್ಡಿಪಡಿಸಲು ಸಾಧ್ಯವಿಲ್ಲ. ಆದರೆ, ಪರಿಣಾಮ ಬೀರುವುದಂತೂ ಖಚಿತ. ರಷ್ಯಾದ ಬದಲಿಗೆ ಪಶ್ಚಿಮ ಏಷ್ಯಾ ಮತ್ತು ಆಫ್ರಿಕನ್ ದೇಶಗಳಿಂದ ಹೆಚ್ಚಿನ ತೈಲವನ್ನು ಪಡೆಯಲು ಭಾರತೀಯ ಕಂಪನಿಗಳ ಮೇಲೆ ಒತ್ತಡ ಸೃಷ್ಟಿಯಾಗಲಿದೆ. ಅಮೆರಿಕದ ನಿರ್ಬಂಧಗಳು ತೈಲ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು. ಇದರಿಂದ ಎರಡೂ ದೇಶಗಳ ಸರಕು ಸಾಗಣೆ ವೆಚ್ಚ ಹೆಚ್ಚಳ ಆಗಬಹುದು.
ಭಾರತದ ಪ್ಲ್ಯಾನ್ ಏನು?
ಅಮೆರಿಕದ ನಿರ್ಬಂಧಗಳು ಭಾರತದ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ. ಮುಂದಿನ ಎರಡು ತಿಂಗಳಿಗೆ ಅಗತ್ಯವಿರುವ ಕಚ್ಚಾ ತೈಲವನ್ನು ಈಗಾಗಲೇ ಹಡಗುಗಳಲ್ಲಿ ಸಾಗಾಣಿಕೆಗೆ ಲೋಡ್ ಮಾಡಲಾಗಿದೆ. ಇದು ಭಾರತಕ್ಕೆ ಪೂರೈಕೆಯಾಗುವುದರಿಂದ, ತೈಲದ ಅಲಭ್ಯತೆಯಲ್ಲಿ ತಕ್ಷಣವೇ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಹೇಳಿದೆ. ಜನವರಿ 10 ರ ಮೊದಲು ಕಾಯ್ದಿರಿಸಿದ ರಷ್ಯಾದ ತೈಲ ಸರಕುಗಳನ್ನು ನಿರ್ಬಂಧಗಳ ನಿಯಮಕ್ಕೆ ಅನುಗುಣವಾಗಿ ಬಂದರುಗಳಲ್ಲಿ ಬಿಡುಗಡೆ ಮಾಡಲು ಭಾರತಕ್ಕೆ ಅವಕಾಶ ನೀಡಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಂತರ ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಗ್ರಾಹಕವಾಗಿದೆ. ಹೀಗಾಗಿ, ಭಾರತವನ್ನು ತಲುಪಲು ರಷ್ಯಾ ಮಾರ್ಗಗಳನ್ನು ಕಂಡುಕೊಳ್ಳುತ್ತದೆ ಎಂದು ಭಾರತ ಸರ್ಕಾರದ ಅಧಿಕಾರಿಗಳು ಭಾವಿಸಿದ್ದಾರೆ. ಭಾರತದ ಕಂಪನಿಗಳು ಪಾಲನ್ನು ಹೊಂದಿರುವ ರಷ್ಯಾದ ವೋಸ್ಟಾಕ್ ತೈಲ ಯೋಜನೆಯ ಮೇಲೆ ಹೊಸ ಯುಎಸ್ ನಿರ್ಬಂಧಗಳ ಪರಿಣಾಮಗಳ ಬಗ್ಗೆ ಭಾರತ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
ಭಾರತದ ತೈಲ ಬೆಲೆಗಳ ಮೇಲೆ ಬೀಳುತ್ತಾ ಎಫೆಕ್ಟ್?
ಎರಡು ತಿಂಗಳಲ್ಲಿ ವಿಂಡ್-ಡೌನ್ ಅವಧಿ (ಒಪ್ಪಂದದ ಅವಧಿ ಮುಗಿದ ನಂತರದ ದಿನಗಳು) ಮುಗಿದ ನಂತರವೇ ನಿರ್ಬಂಧಗಳ ಪರಿಣಾಮ ಕಂಡುಬರುವ ಸಾಧ್ಯತೆಯಿದೆ. ಆದರೆ, ಆಗಲೂ ಭಾರತಕ್ಕೆ ತೈಲ ಪೂರೈಕೆ ಸಮಸ್ಯೆಯಾಗುವುದಿಲ್ಲ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ದಿನಕ್ಕೆ 3 ಮಿಲಿಯನ್ ಬ್ಯಾರೆಲ್ಗಳ ಬಿಡಿ ಸಾಮರ್ಥ್ಯವನ್ನು ಹೊಂದಿದೆ. ಆದರೆ ಯುಎಸ್, ಕೆನಡಾ, ಬ್ರೆಜಿಲ್ ಮತ್ತು ಗಯಾನಾ ಮುಂತಾದ ಒಪೆಕ್ ಅಲ್ಲದ ಪೂರೈಕೆದಾರರು ಸುಲಭವಾಗಿ ಬ್ಯಾರೆಲ್ಗಳನ್ನು ಸೇರಿಸಬಹುದು.
ತೈಲ ದರಗಳ ಹೆಚ್ಚಳವು ಹೆಚ್ಚು ಕಾಲ ಉಳಿಯಬಾರದು. ಮಧ್ಯಪ್ರಾಚ್ಯ ಪೂರೈಕೆದಾರರೊಂದಿಗೆ ಪೂರೈಕೆ ಒಪ್ಪಂದಗಳನ್ನು (2025/26 ವಾರ್ಷಿಕ ಒಪ್ಪಂದ) ಅಂತಿಮಗೊಳಿಸಲು ಮಾತುಕತೆಗೆ ಭಾರತೀಯ ರಿಫೈನರ್ಗಳು ಮುಂದಾಗಿದ್ದಾರೆ. ಮಾರುಕಟ್ಟೆಯನ್ನು ಅವಲಂಬಿಸಿ, ಅವರಿಂದ ಹೆಚ್ಚುವರಿ ಬ್ಯಾರೆಲ್ಗಳನ್ನು ಪಡೆದುಕೊಳ್ಳಬಹುದು.
4 ತಿಂಗಳ ಗರಿಷ್ಠ ಮಟ್ಟಕ್ಕೆ ತೈಲ ಬೆಲೆ
ಸೋಮವಾರ ತೈಲ ಬೆಲೆಗಳು 2% ನೊಂದಿಗೆ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ರಷ್ಯಾದ ತೈಲದ ಮೇಲೆ ವ್ಯಾಪಕವಾದ ಯುಎಸ್ ನಿರ್ಬಂಧಗಳು ಭಾರತ ಮತ್ತು ಚೀನಾದಲ್ಲಿ ಖರೀದಿದಾರರಲ್ಲಿ, ಇತರ ಪೂರೈಕೆದಾರರನ್ನು ಹುಡುಕಲು ಒತ್ತಡ ಸೃಷ್ಟಿಸಿವೆ. ಬ್ರೆಂಟ್ ಫ್ಯೂಚರ್ಸ್ 1.25 ಡಾಲರ್ ಅಥವಾ 1.6% ನಷ್ಟು ಏರಿಕೆಯಾಗಿ ಬ್ಯಾರೆಲ್ಗೆ 81.01 ಡಾಲರ್ಗೆ ಸ್ಥಿರವಾಯಿತು. ಆದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲ 2.25 ಡಾಲರ್ ಅಥವಾ 2.9% ನಷ್ಟು ಏರಿಕೆಯಾಗಿ 78.82 ಕ್ಕೆ ಸ್ಥಿರವಾಯಿತು ಎಂದು ವರದಿಯಾಗಿದೆ.
ರಷ್ಯಾ ಮೇಲಿನ ನಿರ್ಬಂಧದ ಪರಿಣಾಮಗಳೇನು?
ಶುಕ್ರವಾರ ಯುಎಸ್ ಘೋಷಿಸಿದ ನಿರ್ಬಂಧಗಳು ರಷ್ಯಾದ ಇಂಧನ ವ್ಯಾಪಾರದ ಮೇಲೆ ಇನ್ನೂ ಹೆಚ್ಚು ಆಕ್ರಮಣಕಾರಿಯಾಗಿದೆ. ನೂತನ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ತಕ್ಷಣ ಉಕ್ರೇನ್ ಸಂಘರ್ಷವನ್ನು ತ್ವರಿತವಾಗಿ ಕೊನೆಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಹೀಗಾಗಿ, ಬೈಡೆನ್ ಹೇರಿರುವ ನಿರ್ಬಂಧಗಳನ್ನು ಟ್ರಂಪ್ ಉಳಿಸಿಕೊಳ್ಳುತ್ತಾರಾ ಅಥವಾ ಕೈಬಿಡುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ಬೈಡೆನ್ ಅವರ ನಿರ್ಬಂಧದ ಕ್ರಮವು ಜಾಗತಿಕ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸುತ್ತದೆ. ಮಾಸ್ಕೋ ಪ್ರಭಾವವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲವನ್ನೂ ಅಮೆರಿಕ ಮಾಡುತ್ತಿದೆ ಎಂದು ಕ್ರೆಮ್ಲಿನ್ ತಿಳಿಸಿದೆ. ನಿರ್ಬಂಧಗಳಿಗೆ ಅನುಸಾರ, ಯುಎಸ್ ಪೆಟ್ರೋಲಿಯಂ ಸೇವಾ ಕಂಪನಿಗಳು ಫೆಬ್ರವರಿ 27 ರೊಳಗೆ ರಷ್ಯಾದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಗುತ್ತದೆ. ಬ್ಲೂಮ್ಬರ್ಗ್ ವರದಿಯ ಪ್ರಕಾರ, ಉಕ್ರೇನ್ ಅನ್ನು ಕ್ರೆಮ್ಲಿನ್ ಆಕ್ರಮಿಸಿದ ನಂತರವೂ ಕನಿಷ್ಠ ಎರಡು ಯುಎಸ್-ಮೂಲದ ಜಾಗತಿಕ ಪೂರೈಕೆದಾರರು ರಷ್ಯಾದೊಂದಿಗೆ ತೈಲ ವ್ಯಾಪಾರ ಮುಂದುವರಿಸಿದ್ದಾರೆ.
ಆದರೂ, ಯುಎಸ್ನ ವ್ಯಾಪಕವಾದ ನಿರ್ಬಂಧಗಳು ಕಚ್ಚಾ ತೈಲವನ್ನು ಪೂರೈಸುವ ಮಾಡುವ ರಷ್ಯಾದ ಸಾಮರ್ಥ್ಯದ ಮೇಲೆ ಯಾವುದೇ ತಕ್ಷಣದ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಏಕೆಂದರೆ ಹಿಂದೆ ವಿದೇಶಿ ಹೂಡಿಕೆದಾರರ ಒಡೆತನದ ಕಂಪನಿಗಳು ಸೇರಿದಂತೆ ದೇಶೀಯ ಪೂರೈಕೆದಾರರು ದೇಶದಲ್ಲಿ ಹೆಚ್ಚಿನ ತೈಲ ವ್ಯವಹಾರ ನಡೆಸಿದ್ದಾರೆ. ರಷ್ಯಾದ ತೈಲ ಮಾರುಕಟ್ಟೆಯ ಸುಮಾರು 15% ಮಾತ್ರ ವಿದೇಶಿ ತಂತ್ರಜ್ಞಾನಗಳನ್ನು ಅವಲಂಬಿಸಿದೆ. ಯುಎಸ್ ನಿರ್ಬಂಧಗಳಿಂದ ಆರ್ಕ್ಟಿಕ್ ಮೀಸಲುಗಳಲ್ಲಿ ರಷ್ಯಾದ ಆಕ್ರಮಣ ಮತ್ತು ಕಡಲಾಚೆಯ ಕ್ಷೇತ್ರಗಳ ಅಭಿವೃದ್ಧಿ ನಿಧಾನವಾಗಬಹುದು.
ಮಾಸ್ಕೋ: ರಷ್ಯಾದ (Russia) ನೆಲದಲ್ಲಿ ಗುಂಡಿನ ದಾಳಿಯಿಂದಲೇ ವಿಮಾನ ಪತನವಾಗಿದೆ ಎಂದು ಅಜರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ದೂರಿದ್ದಾರೆ.
ರಷ್ಯಾದ ವಾಯು ಪ್ರದೇಶದಲ್ಲಿ ಅಜರ್ಬೈಜಾನ್ ವಿಮಾನ ಪತನಗೊಂಡು (Azerbaijan Plane Crash) 38 ಜನರ ಸಾವಿಗೆ ಕಾರಣವಾದ ಈ ದುರಂತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಕ್ಷಮೆ ಕೇಳಿದ ಒಂದು ದಿನದ ನಂತರ ಅಜರ್ಬೈಜಾನ್ ಅಧ್ಯಕ್ಷ ಈ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅಜರ್ಬೈಜಾನ್ ವಿಮಾನ ಪತನದಿಂದ 38 ಸಾವು – ʻದುರಂತʼಕ್ಕೆ ಕ್ಷಮೆ ಕೋರಿದ ಪುಟಿನ್
ರಷ್ಯಾದ ಗುಂಡಿನ ದಾಳಿಯಿಂದಲೇ ವಿಮಾನ ಪತನಗೊಂಡಿದೆ. ಆದ್ರೆ ಮಾರಣಾಂತಿಕ ಜೆಟ್ ಅಪಘಾತ ಪ್ರಕರಣವನ್ನು ಮರೆಮಾಚಲು ಮಾಸ್ಕೋ ಪ್ರಯತ್ನಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಷ್ಯಾದ ಕೆಲವು ವಲಯಗಳು ಅಪಘಾತದ ಪ್ರಕರಣದ ಬಗ್ಗೆ ಸತ್ಯ ಮುಚ್ಚಿಡಲು ಪ್ರಯತ್ನಿಸುತ್ತಿವೆ. ವಿಮಾನದಲ್ಲಿದ್ದ 67 ಪ್ರಯಾಣಿಕರಲ್ಲಿ 38 ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ ಅಪಘಾತದ ಕಾರಣಗಳ ಬಗ್ಗೆ ಸುಳ್ಳು ನಿರೂಪಣೆಯನ್ನು ರಷ್ಯಾ ಬಿತ್ತರಿಸುತ್ತಿದೆ ಎಂದರಲ್ಲದೇ ರಷ್ಯಾ ತನ್ನ ತಪ್ಪನ್ನು ಒಪ್ಪಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕೊರಿಯಾ | ಲ್ಯಾಂಡಿಂಗ್ ಗೇರ್ ವೈಫಲ್ಯದಿಂದ ವಿಮಾನ ಪತನ – 179 ಮಂದಿ ದುರ್ಮರಣ
ಕ್ಷಮೆ ಕೇಳಿದ ಪುಟಿನ್:
38 ಜನ ಸಾವನ್ನಪ್ಪಿದ ದುರಂತ ನೆನೆದು ಅಜರ್ಬೈಜಾನ್ ಅಧ್ಯಕ್ಷ ಇಲ್ಹ್ಯಾಮ್ ಅಲಿಯೆವ್ ಅವರಿಗೆ ಶನಿವಾರ ಕರೆ ಮಾಡಿದ ಪುಟಿನ್ ಕ್ಷಮೆ ಯಾಚಿಸಿದ್ದರು. ದೊಂದು ಘೋರ ದುರಂತ ಎಂದು ಸಹ ಕರೆದಿದ್ದರು.
ವಿಮಾನ ದುರಂತಕ್ಕೂ ಮುನ್ನ ಅಜರ್ಬೈಜಾನ್ ಏರ್ಲೈನ್ಸ್ಗೆ ಸೇರಿದ ವಿಮಾನವು ಗೋಝಿ ಪ್ರಾಂತ್ಯದ ಬಳಿ ಲ್ಯಾಂಡಿಂಗ್ ನಡೆಸಲು ಪ್ರಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ಉಕ್ರೇನ್ನ ಡೋನ್ಗಳು ಹಾಗೂ ರಷ್ಯಾದ ವಾಯು ಸೇನೆ ನಡುವೆ ಯುದ್ಧ ನಡೆಯುತ್ತಿತ್ತು. ಇದರಲ್ಲಿ ಪ್ರಯಾಣಿಕರಿದ್ದ ಈ ವಿಮಾನ ಪತನಗೊಂಡಿತು. ವಿಮಾನ ಪತನಕ್ಕೆ ಯಾರು ಕಾರಣ ಎಂಬ ವಿಷಯದಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪ ನಡೆಸಿದ್ದವು. ಅಜರ್ಬೈಜಾನ್ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಹೊರಗಿನ ದಾಳಿಯಿಂದ ವಿಮಾನ ಪತನಗೊಂಡಿದೆ ಎಂದು ವರದಿಯಾಗಿತ್ತು.
ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಈ ವಿಮಾನ ಪತನಗೊಂಡಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇನ್ನೂ ಕೆಲವು, ಉಕ್ರೇನ್ ನಡೆಸಿದ ದಾಳಿಯಿಂದ ದುರಂತ ಸಂಭವಿಸಿದೆ ಎಂದೆನ್ನಲಾಗಿತ್ತು.
ಮಾಸ್ಕೋ: ರಷ್ಯಾದ ವಾಯು ಪ್ರದೇಶದಲ್ಲಿ ಅಜರ್ಬೈಜಾನ್ ವಿಮಾನ ಪತನಗೊಂಡು (Azerbaijan Plane Crash) 38 ಜನರ ಸಾವಿಗೆ ಕಾರಣವಾದ ಈ ದುರಂತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಷಮೆ ಕೋರಿದ್ದಾರೆ. ಅಜರ್ಬೈಜಾನ್ ಅಧ್ಯಕ್ಷ ಇಲ್ಹ್ಯಾಮ್ ಅಲಿಯೆವ್ ಅವರಿಗೆ ಶನಿವಾರ ಕರೆ ಮಾಡಿದ ಪುಟಿನ್ ಕ್ಷಮೆ ಯಾಚಿಸಿದ್ದಾರೆ (Vladimir Putin’s Apology) ಎಂದು ವರದಿಯಾಗಿದೆ.
ಕಝಾಕಿಸ್ತಾನದಲ್ಲಿ (Kazakhstan) ಸಂಭವಿಸಿದ ವಿಮಾನ ದುರಂತ ಸಂದರ್ಭದಲ್ಲಿ ಉಕ್ರೇನ್ ಡೋನ್ಗಳ (Ukraine Drone) ವಿರುದ್ಧ ರಷ್ಯಾದ ವಾಯುಸೇನೆ ಕಾರ್ಯಾಚರಣೆ ನಡೆಸುತ್ತಿತ್ತು. ದಕ್ಷಿಣ ರಷ್ಯಾದಿಂದ ಡ್ರೋನ್ಗಳನ್ನು ಹಾರಿಸಿದ ಬಳಿಕ ಕಝಾಕಿಸ್ತಾನ್ನ ಅಕ್ಟೌ ನಗರದ ಬಳಿಕ ಅಜರ್ಬೈಜಾನ್ನ J2-8243 ವಿಮಾನ ಪತನಗೊಂಡಿತು. 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ 38 ಮಂದಿ ಸಾವನ್ನಪ್ಪಿದ್ದು, ಉಳಿದ 29 ಮಂದಿ ಗಾಯಗೊಂಡು, ಬದುಕುಳಿದಿದ್ದಾರೆ. ಈ ದುರಂತ ನೆನೆದು ಪುಟಿನ್ ಕ್ಷಮೆ ಕೋರಿದರಲ್ಲದೇ ಇದೊಂದು ಘೋರ ದುರಂತ ಎಂದು ಸಹ ಕರೆದಿದ್ದಾರೆ.
ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ಹಾರೈಸುತ್ತೇನೆ ಎಂದು ಕ್ರೆಮ್ಲಿನ್ ವರದಿ ಮಾಡಿದೆ.
ವಿಮಾನ ದುರಂತಕ್ಕೂ ಮುನ್ನ ಅಜರ್ಬೈಜಾನ್ ಏರ್ಲೈನ್ಸ್ಗೆ ಸೇರಿದ ವಿಮಾನವು ಗೋಝಿ ಪ್ರಾಂತ್ಯದ ಬಳಿ ಲ್ಯಾಂಡಿಂಗ್ ನಡೆಸಲು ಪ್ರಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ಉಕ್ರೇನ್ನ ಡೋನ್ಗಳು ಹಾಗೂ ರಷ್ಯಾದ ವಾಯು ಸೇನೆ ನಡುವೆ ಯುದ್ಧ ನಡೆಯುತ್ತಿತ್ತು. ಇದರಲ್ಲಿ ಪ್ರಯಾಣಿಕರಿದ್ದ ಈ ವಿಮಾನ ಪತನಗೊಂಡಿತು. ವಿಮಾನ ಪತನಕ್ಕೆ ಯಾರು ಕಾರಣ ಎಂಬ ವಿಷಯದಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪ ನಡೆಸಿದ್ದವು. ಅಜರ್ಬೈಜಾನ್ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಹೊರಗಿನ ದಾಳಿಯಿಂದ ವಿಮಾನ ಪತನಗೊಂಡಿದೆ ಎಂದು ವರದಿಯಾಗಿತ್ತು.
ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಈ ವಿಮಾನ ಪತನಗೊಂಡಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇನ್ನೂ ಕೆಲವು, ಉಕ್ರೇನ್ ನಡೆಸಿದ ದಾಳಿಯಿಂದ ದುರಂತ ಸಂಭವಿಸಿದೆ ಎಂದೆನ್ನಲಾಗಿತ್ತು.