Tag: Vivek Oberoi

  • ವಿವಾದಕ್ಕೆ ಕಾರಣವಾಯ್ತು ವಿವೇಕ್ ಒಬೇರಾಯ್ ಎಕ್ಸಿಟ್ ಪೋಲ್ ಪೋಸ್ಟ್

    ವಿವಾದಕ್ಕೆ ಕಾರಣವಾಯ್ತು ವಿವೇಕ್ ಒಬೇರಾಯ್ ಎಕ್ಸಿಟ್ ಪೋಲ್ ಪೋಸ್ಟ್

    – ಒಬೇರಾಯ್ ವಿರುದ್ಧ ಸೋನಂ, ಜ್ವಾಲಾ ಗುಟ್ಟಾ ಗರಂ

    ಮುಂಬೈ: ಬಾಲಿವುಡ್ ನಟ ವಿವೇಕ್ ಒಬೇರಾಯ್ ಇಂದು ಮಧ್ಯಾಹ್ನ ಮಾಡಿದ್ದ ಎಕ್ಸಿಟ್ ಪೋಲ್ ಪೋಸ್ಟ್ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ನಟಿ ಸೋನಂ ಕಪೂರ್, ಟೆನ್ನಿಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಸೇರಿದಂತೆ ದೇಶದ ಮಹಿಳೆಯರ ಕೆಂಗಣ್ಣಿಗೆ ವಿವೇಕ್ ಟ್ವೀಟ್ ಗುರಿಯಾಗಿದೆ.

    ಮಾಜಿ ವಿಶ್ವ ಸುಂದರಿ, ಬಿಗ್ ಬಿ ಅಮಿತಾಬ್ ಬಚ್ಚನ್ ಸೊಸೆಯಾಗಿರುವ ಐಶ್ವರ್ಯಾ ರೈ ಅವರ ವೈವಾಹಿಕ ಪೂರ್ವ ಸಂಬಂಧದ ವಿಚಾರಗಳನ್ನು ವಿವೇಕ್ ಒಬೇರಾಯ್ ಕೆಣಕ್ಕಿದ್ದು, ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. 2006ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೂಲಕ ಐಶ್ವರ್ಯಾ ತಮ್ಮ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಅಂತೆ-ಕಂತೆಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ. ಏಳು ವರ್ಷದ ಮುದ್ದು ಮಗಳ ತಾಯಿಯಾಗಿರುವ ಐಶ್ವರ್ಯಾ ಯಾವುದೇ ವಿವಾದಗಳಿಗೆ ಗುರಿಯಾಗದೇ ಖಾಸಗಿ ಜೀವನದಲ್ಲಿ ಖುಷಿಯಾಗಿದ್ದಾರೆ.

    ಇದೀಗ ಐಶ್ವರ್ಯಾರ ಹಳೆಯ ವಿಷಯಗಳನ್ನು ಕೆದಕಿರುವ ವಿವೇಕ್ ಒಬೇರಾಯ್ ವಿರುದ್ಧ ಮಹಾರಾಷ್ಟ್ರದ ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗಿದೆ. ಎಕ್ಸಿಟ್ ಪೋಲ್ ಟ್ರೋಲ್ ಫೋಟೋ ಹಾಕಿಕೊಂಡಿದ್ದ ವಿವೇಕ್, ಕ್ರಿಯೇಟಿವಿಟಿ ಫೋಟೋ ಶಾಪ್. ಇದರಲ್ಲಿ ರಾಜಕೀಯ ಇಲ್ಲ. ಇಷ್ಟೇ ಬದುಕು ಎಂದು ಬರೆದುಕೊಂಡಿದ್ದರು.

    ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಸೋನಂ ಕಪೂರ್, ಅಸಹ್ಯ ಮತ್ತು ತೆಗಳಿಕೆಗೂ ಈ ಟ್ವೀಟ್ ಅರ್ಹವಲ್ಲ ಎಂದು ಕಿಡಿಕಾರಿದ್ದಾರೆ. ಜ್ವಾಲಾ ಗುಟ್ಟಾ ಸಹ ಇದೊಂದು ಸಂಪೂರ್ಣ ಅಸಹ್ಯಕರ ಮತ್ತು ಅಸಂಬದ್ಧವಾದ ಟ್ವೀಟ್ ಇದಾಗಿದೆ ಎಂದು ಬರೆದುಕೊಂಡಿದ್ದಾರೆ. ವಿವೇಕ್ ಟ್ವೀಟ್ ಫೋಟೋಗೆ ಎಲ್ಲಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಐಶ್ವರ್ಯಾ ಅಥವಾ ಅಭಿಷೇಕ್ ಬಚ್ಚನ್ ಈ ವಿಷಯದ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಟ್ರೋಲ್ ಫೋಟೋದಲ್ಲಿ ಏನಿದೆ?
    ಸಲ್ಮಾನ್ ಮತ್ತು ಐಶ್ವರ್ಯ ಜೊತೆಗಿನ ಫೋಟೋ ಹಾಕಿ Opinion Poll, ವಿವೇಕ್-ಐಶ್ವರ್ಯಾ ಫೋಟೋಗೆ Exit Poll ಕೊನೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಮತ್ತು ಆರಾಧ್ಯ ಜೊತೆಗಿನ ಫೋಟೋಗೆ Result ಅಂತಾ ಬರೆಯಲಾಗಿದೆ.

    https://twitter.com/vivekoberoi/status/1130380916142907392

  • ಎಕ್ಸಿಟ್ ಪೋಲ್ ಟ್ರೋಲ್ ಫೋಟೋ ಹಂಚಿಕೊಂಡು ‘ಐಶ್’ ನೆನೆದ ವಿವೇಕ್ ಒಬೇರಾಯ್

    ಎಕ್ಸಿಟ್ ಪೋಲ್ ಟ್ರೋಲ್ ಫೋಟೋ ಹಂಚಿಕೊಂಡು ‘ಐಶ್’ ನೆನೆದ ವಿವೇಕ್ ಒಬೇರಾಯ್

    ಮುಂಬೈ: ಭಾನುವಾರ ಲೋಕಸಮರದ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಂದಿವೆ. ಎಕ್ಸಿಟ್ ಪೋಲ್ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್, ಮೀಮ್ಸ್ ಗಳು ಸಹ ಹರಿದಾಡುತ್ತಿವೆ. ಈ ಟ್ರೋಲ್ ಗಳ ಮೂಲಕವೇ ರಾಜಕೀಯ ನಾಯಕರು ಒಬ್ಬರನ್ನೊಬ್ಬರ ಕಾಲೆಳೆಯುತ್ತಿದ್ದಾರೆ. ಈ ನಡುವೆ ಎಕ್ಸಿಟ್ ಪೋಲ್ ಟ್ರೋಲ್ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ನಟ ವಿವೇಕ್ ಒಬೇರಾಯ್ ತಮ್ಮ ಮಾಜಿ ಗೆಳತಿ ಐಶ್ವರ್ಯಾ ರೈ ನೆನೆಪು ಮಾಡಿಕೊಂಡಿದ್ದಾರೆ.

    ಮಾಜಿ ವಿಶ್ವ ಸುಂದರಿ, ಬಿಗ್ ಬಿ ಮನೆಯ ಮುದ್ದು ಸೊಸೆ ಐಶ್ವರ್ಯಾ ರೈ ಹೆಸರು ಹಲವು ನಟರೊಂದಿಗೆ ತಳಕು ಹಾಕಿಕೊಂಡಿತ್ತು. ಯಶಸ್ವಿ ಸಿನಿಮಾಗಳನ್ನು ನೀಡುತ್ತಿದ್ದ ಐಶ್ವರ್ಯಾ ರೈ ಹೆಸರು ಮೊದಲಿಗೆ ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಕೇಳಿ ಬಂದಿತ್ತು. ತದನಂತರ ವಿವೇಕ್ ಒಬೇರಾಯ್ ಜೊತೆಗೆ ಕೇಳಿ ಬಂದಿತ್ತು. ಎಲ್ಲ ಗಾಸಿಪ್ ಗಳ ನಡುವೆ ಅಭಿಷೇಕ್ ಬಚ್ಚನ್ ರನ್ನು ವರಿಸುವ ಮೂಲಕ ಎಲ್ಲ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದರು.

    ಸಲ್ಮಾನ್ ಮತ್ತು ಐಶ್ವರ್ಯ ಜೊತೆಗಿನ ಫೋಟೋ ಹಾಕಿ Opinion Poll, ವಿವೇಕ್-ಐಶ್ವರ್ಯಾ ಫೋಟೋಗೆ Exit Poll ಕೊನೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಮತ್ತು ಆರಾಧ್ಯ ಜೊತೆಗಿನ ಫೋಟೋಗೆ Result ಅಂತಾ ಬರೆಯಲಾಗಿದೆ. ಈ ಮೂರು ಫೋಟೋಗಳನ್ನು ಸೇರಿಸಿರುವ ಟ್ರೋಲ್ ವಿವೇಕ್ ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    https://twitter.com/vivekoberoi/status/1130380916142907392

  • ದೀದಿಯನ್ನು ಸದ್ದಾಂ ಹುಸೇನ್‍ಗೆ ಹೋಲಿಸಿದ ವಿವೇಕ್ ಓಬೇರಾಯ್!

    ದೀದಿಯನ್ನು ಸದ್ದಾಂ ಹುಸೇನ್‍ಗೆ ಹೋಲಿಸಿದ ವಿವೇಕ್ ಓಬೇರಾಯ್!

    ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಇರಾಕಿ ಸರ್ವಾಧಿಕಾರಿ ಸದ್ದಾಂ ಹುಸೇನ್ ರೀತಿ ವರ್ತಿಸುತ್ತಿದ್ದಾರೆ ಎಂದು ಬಾಲಿವುಡ್ ನಟ ವಿವೇಕ್ ಓಬೇರಾಯ್ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.

    ದೀದಿ ಕೈಯಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅವರು ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅವರನ್ನು ವಿವೇಕ್ ಸದ್ದಾಂ ಹುಸೇನ್ ಅವರಿಗೆ ಹೋಲಿಕೆ ಮಾಡಿದ್ದಾರೆ. ಈ ಹಿಂದೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ವಿವೇಕ್ ಪ್ರತಿಕ್ರಿಯಿಸಿ ಒಬ್ಬ ಹಿರಿಯ ನಟ ಹಾಗೂ ರಾಜಕಾರಣಿಯಾಗಿ ಈ ರೀತಿ ಹೇಳಿಕೆಗಳನ್ನು ನೀಡಿವುದು ಶೋಭೆಯಲ್ಲ. ಇದು ತಪ್ಪು ಎಂದು ಕಿಡಿಕಾರಿದ್ದರು. ಇದಾದ ಬಳಿಕ ಈಗ ದೀದಿಗೆ ಸಖತ್ ಟಾಂಗ್ ಕೊಟ್ಟು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಸ್ವತಂತ್ರ ಭಾರತದ ಮೊದಲ ಉಗ್ರ `ಹಿಂದೂ’: ಕಮಲ್ ಹಾಸನ್

    ಟ್ವೀಟ್‍ನಲ್ಲಿ ಏನಿದೆ?
    ಗೌರವಾನುತ ಮಹಿಳೆ ದೀದಿ ಅವರು ಸದ್ದಾಂ ಹುಸೇನ್ ರೀತಿ ಏಕೆ ವರ್ತಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ವಿಪರ್ಯಾಸವೆಂದರೆ ಸರ್ವಾಧಿಕಾರಿ ರೀತಿ ಆಡುತ್ತಿರುವ ದೀದಿಯಿಂದಲೇ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಮೊದಲು ಪ್ರಿಯಾಂಕಾ ಶರ್ಮಾ ಈಗ ತಜೀಂದ್ರಬಗ್ಗಾ. ಇಲ್ಲಿ ದೀದಿಗಿರಿ ನಡೆಯಲ್ಲ ಎಂದು ಬರೆದು ಬಂಗಾಳವನ್ನು ರಕ್ಷಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಿ, ಫ್ರೀ ತಜೀಂದ್ರಬಗ್ಗಾ ಎಂದು ಹ್ಯಾಷ್‍ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ.

    ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ರ‍್ಯಾಲಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಟ್ವೀಟ್ ಮಾಡಿ ಈ ಬಗ್ಗೆ ಬಿಜೆಪಿಯ ಐಟಿ ಸೆಲ್ಸ್ ಮುಖ್ಯಸ್ಥ ಅಮಿತ್ ಮಾಳ್ವಿಯಾ ಹಲವಾರು ಬಿಜೆಪಿ ನಾಯಕರನ್ನು ಬಂಧಿಸಿರುವುದನ್ನು ದೃಢಪಡಿಸಿದ್ದು, ಈ ವಿಚಾರ ರಾಜಕೀಯವಾಗಿ ಪ್ರೇರೆಪಿಸಲ್ಪಟ್ಟಿದೆ ಮತ್ತು ಕಾನೂನು ಬಾಹಿರವೆಂದು ಆರೋಪಿಸಿದ್ದಾರೆ.

  • ಮೋದಿ ಗೆಲುವು ನಿಶ್ಚಿತ: ವಿವೇಕ್ ಓಬೇರಾಯ್

    ಮೋದಿ ಗೆಲುವು ನಿಶ್ಚಿತ: ವಿವೇಕ್ ಓಬೇರಾಯ್

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲುವು ನಿಶ್ಚಿತ ಎಂದು ನಟ ವಿವೇಕ್ ಓಬೇರಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ದೆಹಲಿಯ ಇಂಡಿಯಾ ಗೇಟ್ ಬಳಿಯ ‘ಏಳು ಕ್ಷೇತ್ರ ಮೋದಿಗೆ ನೀಡಿ’ ಎಂಬ ಬಿಜೆಪಿ ಅಭಿಯಾನದಲ್ಲಿ ವಿವೇಕ್ ಓಬೇರಾಯ್ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್, ಭಾರತವನ್ನು ಆಳಿದ ಬಹುತೇಕ ರಾಜರು ಅಥವಾ ವಿದೇಶಿಗರು ನಮ್ಮ ದೇಶವನ್ನು ದೋಚುವ ಕೆಲಸ ಮಾಡಿದ್ದಾರೆ. ಇದೀಗ ದೇಶದ ಪ್ರತಿಯೊಬ್ಬ ನಾಗರಿಕರನು ಚೌಕಿದಾರ್ ಆಗಿದ್ದಾರೆ. ಮತ್ತೊಮ್ಮೆ ದೇಶವನ್ನು ಲೂಟಿ ಮಾಡುವವರ ಕೈಗೆ ನೀಡಲ್ಲ. ಮೋದಿ ಅವರ ಗೆಲುವು ನಿಶ್ಚಿತವಾಗಿದ್ದು, ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದರು.

    ಪಿಎಂ ನರೇಂದ್ರ ಮೋದಿ ಚಿತ್ರದಲ್ಲಿ ಪ್ರಧಾನಿ ಪಾತ್ರದಲ್ಲಿ ವಿವೇಕ್ ಓಬೇರಾಯ್ ನಟಿಸಿದ್ದಾರೆ. ಏಪ್ರಿಲ್ 11ರಂದು ಸಿನಿಮಾ ಬಿಡುಗಡೆಯಾಗಲು ಸಿದ್ಧಗೊಂಡಿತ್ತು. ಆದರೆ ಚುನಾವಣಾ ಆಯೋಗ ಸಿನಿಮಾ ಬಿಡುಗಡೆ ತಡೆ ನೀಡಿತ್ತು. ಚುನಾವಣಾ ಫಲಿತಾಂಶ ಮರುದಿನ ಮೇ 24ರಂದು ಚಿತ್ರ ಬಿಡುಗಡೆಯಾಗಲಿದೆ.

  • ಹ್ಯಾಟ್ರಿಕ್ ಹೀರೋ ಜತೆ ಸೂಪರ್ ಸ್ಟಾರ್ ನಾಗಾರ್ಜುನ್ ನಟಿಸಲ್ವಂತೆ..!

    ಹ್ಯಾಟ್ರಿಕ್ ಹೀರೋ ಜತೆ ಸೂಪರ್ ಸ್ಟಾರ್ ನಾಗಾರ್ಜುನ್ ನಟಿಸಲ್ವಂತೆ..!

    ಬೆಂಗಳೂರು: ಸೂರಿ ನಿರ್ದೇಶನದ ಟಗರು ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಖಡಕ್ ಪೊಲೀಸ್ ಅಧಿಕಾರಿಯಾಗಿ ರುಸ್ತುಂ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಗೊತ್ತಿರದ ವಿಚಾರವೇನಲ್ಲ. ಟಗರು ಚಿತ್ರದಲ್ಲಿ ಶಿವಣ್ಣನಿಗೆ ಡಾಲಿ ಧನಂಜಯ್, ಚಿಟ್ಟೆ ವಸಿಷ್ಠ ಸಿಂಹ ವಿಲನ್ ಗಳಾಗಿ ಠಕ್ಕರ್ ಕೊಟ್ಟಿದ್ರು. ರುಸ್ತುಂ ಚಿತ್ರದಲ್ಲಿಯೂ ವಿಲನ್ ಗಳದ್ದೇ ಹಾವಳಿಯಿದ್ದು ಶಿವಣ್ಣನಿಗೆ ಎದುರಾಳಿಯಾಗಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತಾಗಿದ್ದರೆ ತೆಲುಗಿನ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಹಾಗೂ ಶಿವಣ್ಣನ ನಡುವಿನ ಕಾಳಗವನ್ನೇ ನೋಡಬಹುದಾಗಿತ್ತು. ಆದ್ರೆ ಅಕ್ಕಿನೇನಿ ನಾಗಾರ್ಜುನ್ ಶಿವರಾಜ್ ಕುಮಾರ್ ಜತೆ ನಟಿಸೋದಿಲ್ಲ ಅಂತಾ ಹೇಳಿದ್ದಾರಂತೆ..!

    ಅಕ್ಕಿನೇನಿ ರಿಜೆಕ್ಟ್ ಮಾಡೋದಕ್ಕೆ ಕಾರಣವೇನು?
    ಶಿವಣ್ಣ ಮೊದಲೇ ಮಾಸ್ ಹೀರೋ. ಅಲ್ಲದೇ ರುಸ್ತುಂ ಹೇಳಿ ಕೇಳಿ ಮಾಸ್ ಎಂಟರ್ ಟೈನಿಂಗ್ ಸಿನಿಮಾ. ಆಕ್ಷನ್ ಓರಿಯೆಂಟೆಡ್ ಸಿನಿಮಾ ಕೂಡ. ಶಿವಣ್ಣ ಖಡಕ್ಕಾಗಿ ತಮ್ಮ ಖದರ್ ತೋರಿಸ್ತಾರೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಹಾಗಿರೋವಾಗ ಅವರ ಎದುರಿಗೆ ತೊಡೆ ತಟ್ಟಿ ನಿಲ್ಲೋ ವಿಲನ್ ಅವರಿಗೆ ಸರಿ ಸಮನಾಗಿ ಇರಬೇಕಲ್ವಾ. ಯಾರೋ ನಟಿಸಿದ್ರೆ ಆ ಪಾತ್ರಕ್ಕೆ ತೂಕ ಇರೋದಿಲ್ಲ ಅಂದರಂತೆ.

    ನಿರ್ದೇಶಕ ರವಿ ವರ್ಮ ಏನ್ ಹೇಳ್ತಾರೆ..?
    ಈ ಮೊದಲು ರುಸ್ತುಂ ನಿರ್ದೇಶಕ ರವಿ ವರ್ಮ ಶಿವಣ್ಣನಿಗೆ ಎದುರಾಳಿಯಾಗಿ ನಾಗಾರ್ಜುನ ಮ್ಯಾಚ್ ಆಗ್ತಾರೆ ಅಂತ ಯೋಚಿಸಿ ಅವರನ್ನು ಅಪ್ರೋಚ್ ಮಾಡಿದ್ದಂತೆ. ಪ್ರಾರಂಭದಲ್ಲಿ ಖಂಡಿತಾ ಮಾಡ್ತೀನಿ ಅಂತ ನಾಗಾರ್ಜುನ್, ಆಮೇಲೆ ಪಾತ್ರದ ಆಳ ತಿಳಿದ ಮೇಲೆ ನಟಿಸಲು ನೋ ಎಂದಿದ್ದಾರಂತೆ. ಆಮೇಲೆ ಅನಿಲ್ ಕಪೂರ್ ಸೆಲೆಕ್ಟ್ ಮಾಡಿದ್ರೂ ಕಾರಣಾಂತರಗಳಿಂದ ಅವರೂ ರಿಜೆಕ್ಟ್ ಆಗಿ ಅಂತಿಮವಾಗಿ ವಿವೇಕ್ ಒಬೇರಾಯ್ ಅವರನ್ನು ಫೈನಲ್ ಮಾಡಲಾಗಿದೆಯಂತೆ.

  • ಮೋದಿ ಸಿನ್ಮಾ ಬಿಡುಗಡೆಗೆ ವಿರೋಧ

    ಮೋದಿ ಸಿನ್ಮಾ ಬಿಡುಗಡೆಗೆ ವಿರೋಧ

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ ಸಿನಿಮಾ ಬಿಡುಗಡೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ವಿರೋಧ ವ್ಯಕ್ತಪಡಿಸಿದೆ. ಏಪ್ರಿಲ್-ಮೇ ತಿಂಗಳಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದ್ದು, ಚಿತ್ರ ಬಿಡುಗಡೆಯಾದ್ರೆ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಎಂಎನ್‍ಎಸ್ ನಾಯಕಿ ಶಾಲಿನಿ ಠಾಕ್ರೆ, ಬಿಜೆಪಿ ತನ್ನ ಸರ್ಕಾರದ ಯೋಜನೆಗಳನ್ನು ಪ್ರಚಾರಗೊಳಿಸಲು ಸಿನಿಮಾಗಳನ್ನು ಬಳಸಿಕೊಳ್ಳುತ್ತಿದೆ. ಈ ಮೊದಲು ‘ಟಾಯ್ಲೆಟ್-ಏಕ್ ಪ್ರೇಮ್ ಕಥಾ’ ಮತ್ತು ‘ಪ್ಯಾಡ್ ಮ್ಯಾನ್’ ಸಿನಿಮಾಗಳಿಗೆ ಸರ್ಕಾರವೇ ಪ್ರಾಯೋಜಕತ್ವ ಮಾಡಿತ್ತು. ಒಂದು ವರ್ಷದ ಅವಧಿಯಲ್ಲಿಯೇ ಮತ್ತೊಂದು ಸಿನಿಮಾವನ್ನು ತೆರೆಯ ಮೇಲೆ ಬಿಜೆಪಿ ತರುತ್ತಿದೆ. ಆದ್ರೆ ನಮ್ಮ ಪಕ್ಷ ಸಿನಿಮಾ ಬಿಡುಗಡೆಗೆ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

    ಬಿಜೆಪಿ ನಾಯಕರು ಸಿನಿಮಾಗಳ ಮೂಲಕ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ. ಸಿನಿಮಾ ನಿರ್ಮಾಪಕರು ಕಥೆ, ಸಂಭಾಷಣೆ ಜಾವೇದ್ ಅಖ್ತರ್ ಮತ್ತು ಸಮೀರ್ ಲೇಖನಿಯಲ್ಲಿ ಮೂಡಿ ಬಂದಿದೆ ಎಂದು ಹೇಳುತ್ತಾರೆ. ಇಬ್ಬರು ಸಾಹಿತ್ಯಗಾರರು ಮೋದಿ ಜೀವನಾಧರಿತ ಸಿನಿಮಾಗೂ ಮತ್ತು ನಮಗೂ ಸಂಬಂಧವಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಬಿಜೆಪಿ ಈ ರೀತಿ ಪ್ರಚಾರಕ್ಕಾಗಿ ಕೆಳಮಟ್ಟದ ರಾಜಕಾರಣವನ್ನು ಬಿಡಬೇಕೆಂದು ಎಂದು ಮಹಾರಾಷ್ಟ್ರ ನವನಿರ್ಮಾಣ ಚಿತ್ರಪಥ್ ಕರ್ಮಚಾರಿ ಸೇನೆ ಅಧ್ಯಕ್ಷ ಅಮೇ ಕೋಪ್ಕರ್ ಆಗ್ರಹಿಸಿದ್ದಾರೆ.

    ಮೋದಿ ಬಯೋಪಿಕ್ ಸಿನಿಮಾದಲ್ಲಿ ಪ್ರಧಾನಿಗಳ ಪಾತ್ರದಲ್ಲಿ ನಟ ವಿವೇಕ್ ಓಬೇರಾಯ್ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಏಪ್ರಿಲ್ 12ರಂದು ಒಟ್ಟು 23 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಬೊಮ್ಮನ್ ಇರಾನಿ, ಮನೋಜ್ ಜೋಶಿ, ಬರ್ಖಾ ಬಿಷ್ತ, ಜರೀನಾ ವಹಾಬ್, ದರ್ಶನ್ ರಾವಲ್, ಅಕ್ಷತಾ ಆರ್.ಸಲುಜಾ, ಅಂಜನಾ ಶ್ರೀವಾತ್ಸವ, ರಾಜೇಂದ್ರ ಗುಪ್ತಾ ಮತ್ತು ಯಥೀನ್ ಸೇರಿದಂತೆ ದೊಡ್ಡ ತಾರಾಗಣವನ್ನೇ ಸಿನಿಮಾ ಒಳಗೊಂಡಿದೆ.

  • ಪ್ರಧಾನಿ ಜೀವನಚರಿತ್ರೆಗೆ ವಿವೇಕ್ ಓಬೆರಾಯ್ ಯಾಕೆ ಬೆಸ್ಟ್: ಸಂದೀಪ್ ಎಸ್ ಸಿಂಗ್ ಸ್ಪಷ್ಟನೆ

    ಪ್ರಧಾನಿ ಜೀವನಚರಿತ್ರೆಗೆ ವಿವೇಕ್ ಓಬೆರಾಯ್ ಯಾಕೆ ಬೆಸ್ಟ್: ಸಂದೀಪ್ ಎಸ್ ಸಿಂಗ್ ಸ್ಪಷ್ಟನೆ

    ಮುಂಬೈ: ಪ್ರಧಾನಿ ಮೋದಿ ಅವರ ಜೀವಚರಿತ್ರೆ ಆಧಾರಿತ `ಪಿಎಂ ನರೇಂದ್ರ ಮೋದಿ’ ಸಿನಿಮಾಕ್ಕೆ ವಿವೇಕ್ ಒಬೆರಾಯ್ ಅವರನ್ನು ಯಾಕೆ ಆಯ್ಕೆ ಮಾಡಲಾಯ್ತು ಎನ್ನುವ ಪ್ರಶ್ನೆಗೆ ಚಿತ್ರದ ನಿರ್ಮಾಪಕ ಸಂದೀಪ್ ಎಸ್. ಸಿಂಗ್ ಉತ್ತರಿಸಿದ್ದಾರೆ.

    ಸೋಮವಾರದಂದು ಬಿಡುಗಡೆಯಾದ `ಪಿಎಂ ನರೇಂದ್ರ ಮೋದಿ’ ಸಿನಿಮಾದ ಮೊದಲ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ವಿವೇಕ್ ಓಬೆರಾಯ್ ಸೂಕ್ತ ಅಲ್ಲ ಎಂದು ಹಲವರು ಟೀಕಿಸಿದ್ದಾರೆ. ಆದರಿಂದ ಜನರಿಗೆ ಯಾಕೆ ವಿವೇಕ್ ಅವರನ್ನೇ ಈ ಚಿತ್ರಕ್ಕೆ ಆಯ್ಕೆ ಮಾಡಲಾಯ್ತು ಎಂದು ನಿರ್ಮಾಪಕರು ತಿಳಿಸಿದ್ದಾರೆ.

    ಮಂಗಳವಾರ ಖಾಸಗಿ ಚಾನೆಲ್‍ವೊಂದರ ಸಂದರ್ಶನದಲ್ಲಿ ಈ ಕುರಿತು ಮಾತನಾಡಿ, ಈ ಚಿತ್ರದಲ್ಲಿ ಏನೇನು ಇರಬೇಕು, ಯಾವ ನಟರು ಮುಖ್ಯ ಪಾತ್ರಕ್ಕೆ ಸೂಕ್ತ ಎಂದು ಸೆಟ್ ಮಾಡಲು ನನಗೆ ಮೂರು ವರ್ಷ ಬೇಕಾಯ್ತು. ಚಿತ್ರದ ಬಗ್ಗೆ ಮೊದಲು ವಿವೇಕ್ ಅವರನ್ನು ಕೇಳಿದಕ್ಕೆ ತಕ್ಷಣ ಅವರು ನಟಿಸಲು ಒಪ್ಪಿಕೊಂಡರು. ಅವರಂತಹ ಪ್ರತಿಭಾವಂತ ನಟರೇ ನನಗೆ ಬೇಕಾಗಿತ್ತು. ಅವರಿಗೆ 18 ವರ್ಷ ಚಿತ್ರರಂಗದಲ್ಲಿ ನಟನೆಯ ಅನುಭವವಿದೆ. ಮೊದಲ ಚಿತ್ರದಲ್ಲೇ ವಿವೇಕ್ ಅವರ ಉತ್ತಮ ನಟನೆಯಿಂದ ಎಲ್ಲರ ಗಮನ ಸೆಳೆದವರು. ಶೃದ್ಧೆಯಿಂದ ನಟನೆ ಮಾಡುತ್ತಾರೆ. ಅವರು ಮೋದಿಯವರ ಪಾತ್ರವನ್ನು ಚೆನ್ನಾಗಿ ನಿಭಾಯಿಸಬಲ್ಲರು ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.

    ಈ ಚಿತ್ರದ ಮೊದಲ ಪೋಸ್ಟರ್‍ವೊಂದಕ್ಕೆ ನಟ ವಿವೇಕ್ ಓಬೆರಾಯ್ ಸತತ 7 ಗಂಟೆ ಮೇಕಪ್ ಮಾಡಿಕೊಂಡು ಸುಮಾರು 15 ಲುಕ್‍ಗಳಲ್ಲಿ ಪೋಸ್ ಕೊಟ್ಟಿದ್ದಾರೆ. ಈ ಚಿತ್ರಕ್ಕಾಗಿ ಬಹಳ ಶೃದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ಅತ್ಯುತ್ತಮ ಪ್ರತಿಭೆಯನ್ನು ಟೀಕಿಸುವುದು ಸರಿಯಲ್ಲ ಎಂದರು. ಹಾಗೆಯೇ ಜನವರಿ ಮಧ್ಯದಲ್ಲಿ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.

    ಇತ್ತೀಚಿಗಷ್ಟೆ `ದಿ ಆಕ್ಸಿಡೆಂಟೆಲ್ ಪ್ರೈಮ್ ಮಿನಿಸ್ಟರ್’ ಸಿನಿಮಾದ ಟ್ರೇಲರ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಈ ಚಿತ್ರದ ವಿರುದ್ಧ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆಯೇ ಮತ್ತೆ ರಾಜಕೀಯ ವಲಯದಲ್ಲಿ ಸದ್ದು ಮಾಡಲು `ಪಿಎಂ ನರೇಂದ್ರ ಮೋದಿ’ ಸಿನಿಮಾ ತಯಾರಾಗ್ತಿದೆ.

    ಈ ಚಿತ್ರದಲ್ಲಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ವಿವೇಕ್ ಓಬೆರಾಯ್ ನಟಿಸುತ್ತಿದ್ದಾರೆ. ಚಿತ್ರವನ್ನು ಓಮಂಗ್ ಕುಮಾರ್ ನಿರ್ದೇಶಿಸುತ್ತಿದ್ದು, ಸುರೇಶ್ ಓಬೆರಾಯ್ ಹಾಗೂ ಸಂದೀಪ್ ಎಸ್. ಸಿಂಗ್ ನಿರ್ಮಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿವೇಕ್ ಒಬೆರಾಯ್ ಜೊತೆಗಿನ ಫೋಟೋ ರಚಿತಾ ಫೇವರಿಟ್!

    ವಿವೇಕ್ ಒಬೆರಾಯ್ ಜೊತೆಗಿನ ಫೋಟೋ ರಚಿತಾ ಫೇವರಿಟ್!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಯಶಸ್ಸಿನ ನಾಗಾಲೋಟದಲ್ಲಿರೋ ನಟಿ ರಚಿತಾ ರಾಮ್. ಕಮರ್ಶಿಯಲ್ ಚಿತ್ರಗಳಲ್ಲಿಯೂ ಭಾರೀ ಬೇಡಿಕೆ ಹಿಂದಿರೋ ಘಳಿಗೆಯಲ್ಲಿಯೇ ಭಿನ್ನ ಬಗೆಯ ಚಿತ್ರಗಳಲ್ಲಿಯೂ ನಟಿಸುತ್ತಿರುವ ರಚಿತಾ ರಾಮ್‍ಗೆ ಇದೀಗ ತಾವೇ ನಟಿಸಿರೋ ಚಿತ್ರವೊಂದರ ಸೀನು ಮತ್ತು ಫೋಟೋವೊಂದು ತುಂಬಾ ಫೇವರಿಟ್ ಆಗಿದೆ. ಮತ್ತದನ್ನು ರಚಿತಾ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

    ಬಹುಶಃ ಡಬ್ಬಿಂಗ್ ಹಂತದಲ್ಲಿ ಸೆರೆ ಹಿಡಿದ ಚಿತ್ರವೊಂದನ್ನು ರಚಿತಾ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ್ದಾರೆ. ಜೊತೆಗೆ ಇದು ತುಂಬಾ ಮುದ್ದು ಮುದ್ದಾಗಿರುವ, ತನಗೆ ತುಂಬಾ ಇಷ್ಟವಾದ ಫೋಟೋ ಅಂತಲೂ ರಚಿತಾ ಹೇಳಿಕೊಂಡಿದ್ದಾರೆ.

    ಇದು ರಚಿತಾ ರಾಮ್ ನಟಿಸಿರೋ ರುಸ್ತುಂ ಚಿತ್ರದ ದೃಶ್ಯ. ಡಬ್ಬಿಂಗ್ ಹಂತದಲ್ಲಿ ರಚಿತಾ ಸೆರೆ ಹಿಡಿದಿರೋ ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ರಚಿತಾ ಕೆನ್ನೆ ಸವರಿ ಮುದ್ದು ಮಾಡುತ್ತಿರೋವಂಥಾ ರೊಮ್ಯಾಂಟಿಕ್ ಸೀನಿದೆ. ಇದು ಇದುವರೆಗಿನ ಅಷ್ಟೂ ಚಿತ್ರಗಳಲ್ಲಿ ರಚಿತಾಗೆ ತುಂಬಾ ಹಿಡಿಸಿರೋ ಚಿತ್ರವಂತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವಣ್ಣನ ಬಗ್ಗೆ ವಿವೇಕ್ ಒಬೇರಾಯ್ ಹೇಳಿದ್ದೇನು?

    ಶಿವಣ್ಣನ ಬಗ್ಗೆ ವಿವೇಕ್ ಒಬೇರಾಯ್ ಹೇಳಿದ್ದೇನು?

    ಬೆಂಗಳೂರು: ಶಿವರಾಜ್‍ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸಿದ್ದಾರೆ. ಇದು ಕೆಲ ದಿನಗಳ ಹಿಂದೆಯೇ ಜಾಹೀರಾಗಿರುವ ವಿಚಾರ. ಇದೀಗ ಅತಿಥಿ ಪಾತ್ರದಲ್ಲಿ ವಿವೇಕ್ ತಮ್ಮ ಭಾಗದ ಚಿತ್ರೀಕರಣವನ್ನೂ ಮುಗಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಮತ್ತು ತಮ್ಮ ವರ್ಷಾಂತರಗಳ ನಂಟಿನ ಬಗ್ಗೆ ಇಂಟರೆಸ್ಟಿಂಗ್ ಆದ ವಿಚಾರವನ್ನೂ ಅವರು ಹೇಳಿಕೊಂಡಿದ್ದಾರೆ!

    ರುಸ್ತುಂ ಚಿತ್ರದ ಮೂಲಕ ಮೊದಲ ಸಲ ವಿವೇಕ್ ಒಬೇರಾಯ್ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಶಿವರಾಜ್ ಕುಮಾರ್ ಅವರ ಜೊತೆ ನಟಿಸೋ ಆಫರ್ ಅವರಿಗೆ ಸಿಕ್ಕಿದ್ದದ್ದು ಇದೇ ಮೊದಲ ಸಲವಲ್ಲ. ಯಾಕೆಂದರೆ ದಶಕಗಳ ಹಿಂದೆಯೇ ಅಂಥಾದ್ದೊಂದು ಆಫರ್ ಖುದ್ದು ಶಿವಣ್ಣನ ಕಡೆಯಿಂದಲೇ ಅವರಿಗೆ ಬಂದಿತ್ತಂತೆ.

    ಶಿವರಾಜ್ ಕುಮಾರ್ ಅವರನ್ನು ವಿವೇಕ್ ಒಬೇರಾಯ್ ಮುಂಬೈನ ಫ್ಯಾಮಿಲಿ ಪ್ರೋಗ್ರಾಂ ಒಂದರಲ್ಲಿ ಭೇಟಿ ಮಾಡಿದ್ದು ವರ್ಷಾಂತರಗಳ ಹಿಂದೆ. ಆಗ ವಿವೇಕ್ ಗೆ ಹದಿನೇಳು ವರ್ಷ. ಆಗ ವಿವೇಕ್ ಅವರನ್ನು ಶಿವಣ್ಣನ ಜೊತೆ ಯಾರೋ ಮಾತಾಡಿಸಿದ್ದರಂತೆ. ಚೂಟಿಯಾಗಿದ್ದ ಇವರನ್ನು ತಮ್ಮ ಚಿತ್ರದಲ್ಲಿ ನಟಿಸುವಂತೆ ಖುದ್ದು ಶಿವಣ್ಣನೇ ಹೇಳಿದ್ದರಂತೆ. ಅದಾದ ನಂತರ ವಿವೇಕ್ ಒಬೇರಾಯ್ ನಾಯಕ ನಟನಾಗಿ ಬಾಲಿವುಡ್‍ನಲ್ಲಿಯೂ ಮಿಂಚಿದ್ದರು. ಅವರು ಕನ್ನಡ ಚಿತ್ರಗಳಲ್ಲಿ ನಟಿಸೋ ಬಗ್ಗೆ ಆಗಾಗ ಗುಲ್ಲೇಳುತ್ತಿದ್ದವಾದರೂ ಅದಕ್ಕೆ ಅವಕಾಶ ಕೂಡಿ ಬಂದಿರಲಿಲ್ಲ.

    ಆದರೆ ಇದೀಗ ದಶಕಗಳ ಹಿಂದೆ ತಮ್ಮೊಂದಿಗೆ ನಟಿಸುವಂತೆ ಹೇಳಿದ್ದ ಅದೇ ಶಿವಣ್ಣನ ಜೊತೆ ನಟಿಸೋ ಮೂಲಕವೇ ವಿವೇಕ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ರುಸ್ತುಂ ಸೆಟ್ಟಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನೂ ಭೇಟಿಯಾದ ಸಂದರ್ಭದಲ್ಲಿ ವಿವೇಕ್ ಒಬೇರಾಯ್ ಈ ರಸವತ್ತಾದ ವಿಚಾರವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv