Tag: Vivek Agni Hotri

  • ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸಿದರೂ, ನನ್ನ ಮೊದಲ ಆದ್ಯತೆ ಕನ್ನಡಕ್ಕೆ: ʻಕಾಂತಾರʼ ನಟಿ

    ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸಿದರೂ, ನನ್ನ ಮೊದಲ ಆದ್ಯತೆ ಕನ್ನಡಕ್ಕೆ: ʻಕಾಂತಾರʼ ನಟಿ

    `ಕಾಂತಾರ’ (Kantara) ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚ್ತಿರುವ ಸಪ್ತಮಿ ಗೌಡ (Saptami Gowda) ಇದೀಗ ಬಾಲಿವುಡ್‌ಗೆ (Bollywood) ಹಾರಿದ್ದಾರೆ. `ಕಾಶ್ಮೀರ್ ಫೈಲ್ಸ್’ (Kashmir Files) ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಜೊತೆ ಸಿನಿಮಾಗಾಗಿ ಸಪ್ತಮಿ ಕೈ ಜೋಡಿಸಿದ್ದಾರೆ. ನಾನು ಯಾವುದೇ ಭಾಷೆಯಲ್ಲಿ ನಟಿಸಿದ್ರು ನನ್ನ ಆದ್ಯತೆ ಕನ್ನಡಕ್ಕೆ ಎಂದು ಇತ್ತೀಚಿನ ಸಂದರ್ಶನದಲ್ಲಿ ಸಪ್ತಮಿ ಮಾತನಾಡಿದ್ದಾರೆ.

    ಹೊಂಬಾಳೆ ಸಂಸ್ಥೆಯ `ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ ಪಾತ್ರಕ್ಕೂ ತೂಕವಿದೆ. ತಮಗೆ ಸಿಕ್ಕ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಈಗ ಸಪ್ತಮಿಗೆ ಬಹುಭಾಷೆಗಳಿಂದ ಅನೇಕ ಆಫರ್ಸ್‌ಗಳು ಅರಸಿ ಬರುತ್ತಿದೆ. ಸದ್ಯ ಬಾಲಿವುಡ್ ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ `ದಿ ವಾಕ್ಸಿನ್ ವಾರ್’ ಚಿತ್ರಕ್ಕೆ ಓಕೆ ಅಂದಿದ್ದಾರೆ. ಈ ಸಿನಿಮಾಗೆ ಆಯ್ಕೆಯಾಗಿದ್ದು ಹೇಗೆ? ಎಂಬುದರ ಜೊತೆಗೆ ಸಾಕಷ್ಟು ವಿಚಾರಗಳ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

    ವಿವೇಕ್ ಅಗ್ನಿಹೋತ್ರಿ ಅವರು, ಕಾಂತಾರ ಸಿನಿಮಾದಲ್ಲಿ ಸಪ್ತಮಿ (Saptami) ನಟನೆ ನೋಡಿ, ರಿಷಬ್‌ಗೆ ಕಾಲ್ ಮಾಡಿದ್ದರು. ಚಿತ್ರದಲ್ಲಿನ ಪಾತ್ರಕ್ಕೆ ಸಪ್ತಮಿ ಸೂಕ್ತ ಎಂದೆನಿಸಿ ನನ್ನ ಫೋನ್ ನಂಬರ್ ಕೇಳಿದ್ದಾರೆ. ಬಳಿಕ ನನಗೆ ಕರೆ ಮಾಡಿ, ಈ ಪಾತ್ರ ನಾನು ಮಾಡಿದರೆ ಚೆನ್ನಾಗಿರುತ್ತದೆ ಎಂದು ಹೇಳಿದರು. ನಾನು ತಕ್ಷಣ ಒಪ್ಪಿಕೊಂಡೆ, ಬಳಿಕ ನನಗೆ ಸ್ಕ್ರಿಪ್ಟ್ (Script) ಕಳುಹಿಸಲಾಯಿತು. ಬಳಿಕ ನಾನು ಈ ಚಿತ್ರದ ಭಾಗವಾದೆ ಎಂದು `ಕಾಂತಾರ’ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ: `ವಾರಿಸು’ದಲ್ಲಿ ತನ್ನ ಪಾತ್ರಕ್ಕೆ ಮಹತ್ವವಿಲ್ಲ: ಕಾರಣ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Sapthami Gowda ???? (@sapthami_gowda)

    ಮುಂದೆ ಕೂಡ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತೀರಾ ಎಂದು ಕೇಳಿದಾಗ, ನನಗೆ ಕಥೆ ಇಷ್ಟವಾದರೆ ಖಂಡಿತಾ ನಟಿಸುತ್ತೇನೆ. ಆದರೆ ನನ್ನ ಆದ್ಯತೆ ಕನ್ನಡಕ್ಕೆ ಮತ್ತು ಕನ್ನಡ ಸಿನಿಮಾಗಳಿಗಾಗಿ (Kannada Films) ಎದುರು ನೋಡುತ್ತಿದ್ದೇನೆ ಎಂದು ನಟಿ ಮಾತನಾಡಿದ್ದಾರೆ.

    ಇನ್ನೂ `ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ನಾಯಕ- ನಾಯಕಿ ಎಂಬುದಿಲ್ಲ. ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ನನ್ನ ಪಾತ್ರವಂತೂ ಕಷ್ಟಕರವಾಗಿದೆ. ಸುಲಭ ಇದ್ದರೆ ಮಜಾ ಇರೋಲ್ಲ. ಈ ಪಾತ್ರ ಮಾಡುವುದ್ದಕ್ಕೆ ನನಗೆ ವಿವೇಕ್ ಅಗ್ನಿಹೋತ್ರಿ ನನಗೆ ತುಂಬಾ ಬೆಂಬಲಿಸಿದ್ದಾರೆ ಎಂದು ನಟಿ ಸಪ್ತಮಿ ಮುಕ್ತವಾಗಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೋಲು ಒಪ್ಪಿಕೊಂಡು, ನನ್ನನ್ನು ಬಿಟ್ಟು ಬಿಡಿ ಎಂದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

    ಸೋಲು ಒಪ್ಪಿಕೊಂಡು, ನನ್ನನ್ನು ಬಿಟ್ಟು ಬಿಡಿ ಎಂದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

    ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek AgniHotri) ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳ ಮೇಲೆ ಮುಗಿಬಿದ್ದಿದ್ದರು. ಅದರಲ್ಲೂ ಹಿಂದೂ ವಿರೋಧಿ ನಟರ ಮತ್ತು ನಿರ್ದೇಶಕರ ಸಿನಿಮಾಗಳ ಬಗ್ಗೆ ವಿವಾದ ಆಗುವಂತಹ ಕಾಮೆಂಟ್ ಗಳನ್ನು ಮಾಡುತ್ತಿದ್ದರು. ಹೀಗಾಗಿ ಕಂಗನಾ ರಣಾವತ್ (Kangana Ranaut) ಅವರ ಪಟ್ಟಿಗೆ ಇವರನ್ನು ಸೇರಿಸಲಾಗಿತ್ತು. ಈ ಇಬ್ಬರೂ ಸೇರಿಕೊಂಡು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾದ ಮೇಲೆ ಕಾಮೆಂಟ್ ಮೇಲೆ ಕಾಮೆಂಟ್ ಮಾಡುತ್ತಿದ್ದರು.

    ಬ್ರಹ್ಮಾಸ್ತ್ರ (Brahmastra) ಸಿನಿಮಾ 250 ಕೋಟಿಗೂ ಅಧಿಕ ಹಣವನ್ನು ಗಳಿಸಿದೆ ಎನ್ನುವ ಸುದ್ದಿಯನ್ನು ಕಂಗನಾ ಮತ್ತು ಅಗ್ನಿಹೋತ್ರಿ ಇಬ್ಬರಿಗೂ ಅರಗಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ಬಾಕ್ಸ್ ಆಫೀಸ್ ರಿಪೋರ್ಟ್ ಸುಳ್ಳು ಎಂದು ವಾದಿಸುತ್ತಿದ್ದರು. 650 ಕೋಟಿಗೂ ಅಧಿಕ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಸಿನಿಮಾ 250 ಕೋಟಿ ಗಳಿಸಿದರು ಹೇಗೆ ಗೆದ್ದಂತೆ ಎಂದು ಪ್ರಶ್ನೆಯನ್ನು ಮಾಡಿದ್ದರು. ಹಾಗಾಗಿ ಬ್ರಹ್ಮಾಸ್ತ್ರ ಸಿನಿಮಾ ಗೆದ್ದಿಲ್ಲ ಎನ್ನುವುದು ಅವರ ವಾದವಾಗಿತ್ತು. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಈಗ ಬ್ರಹ್ಮಾಸ್ತ್ರ ಚಿತ್ರವು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಮೀರಿಸಿದೆ ಅಂತೆ. ಹಾಗಾಗಿಯೇ ಎರಡೂ ಸಿನಿಮಾಗಳನ್ನು ಹೋಲಿಕೆ ಮಾಡುತ್ತಾ, ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ನಿರ್ದೇಶಕನನ್ನು ಟ್ರೋಲ್ ಮಾಡುತ್ತಿದ್ದರು. ಕೊನೆಗೂ ನೀವೇ ಸೋತಿದ್ದು, ರಣಬೀರ್ (Ranbir Kapoor) ಗೆದ್ದರು ಎಂದು ಕಾಮೆಂಟ್ ಮಾಡಲಾಗುತ್ತಿದೆ. ಹಾಗಾಗಿ ಈ ಆಟದಲ್ಲಿ ನಾನಿಲ್ಲ. ನನ್ನನ್ನು ಬಿಟ್ಟು ಬಿಡಿ ಎಂದು ವಿವೇಕ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದೂ ಅವರು ಹೇಳಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕಲೆಕ್ಷನ್ ಅನ್ನು ಬ್ರಹ್ಮಸ್ತ್ರಾ ಸಿನಿಮಾ ನಿಜವಾಗಿಯೂ ಮೀರಿಸಿದೆಯಾ? ಈವರೆಗೂ ಅದು 250 ಕೋಟಿಗೂ ಅಧಿಕ ಹಣವನ್ನು ಗಳಿಕೆ ಮಾಡಿದೆಯಾ? ಈ ಕುರಿತು ಅಧಿಕೃತವಾಗಿ ಸಿನಿಮಾ ಟೀಮ್ ಹೇಳದೇ ಇದ್ದರೂ, ಬಾಲಿವುಡ್ ವಿಮರ್ಶೆಕರು ಈ ಕುರಿತಾಗಿ ಸುದ್ದಿಗಳನ್ನು ಮಾಡಿದ್ದಾರೆ. ಹಾಗಾಗಿ ಈ ಪ್ರಮಾಣದಲ್ಲಿ ಹಣ ಬಂದಿದೆ ಎಂದು ಟ್ರೋಲ್ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]