Tag: Visha Prasada

  • ಅವರೊಬ್ಬರ ಫೋನ್ ಕಾಲ್ ವಿಷ ಪ್ರಸಾದ ಪ್ರಕರಣದ ಸುಳಿವು ನೀಡಿತ್ತು!

    ಅವರೊಬ್ಬರ ಫೋನ್ ಕಾಲ್ ವಿಷ ಪ್ರಸಾದ ಪ್ರಕರಣದ ಸುಳಿವು ನೀಡಿತ್ತು!

    – ಕಾಲ್ ರೆಕಾರ್ಡ್ ನೀಡಿದ್ದ ಕೃಷಿ ಅಧಿಕಾರಿ
    – ಕೃಷಿ ಅಧಿಕಾರಿಯ ಜೊತೆ ರೇಗಾಡಿದ್ದ ಅಂಬಿಕಾ

    ಚಾಮರಾಜನಗರ: ಕೃಷಿ ಅಧಿಕಾರಿಯೊಬ್ಬರು ನೀಡಿದ ಫೋನ್ ಕಾಲ್ ಮಾಹಿತಿ ಸುಳ್ವಾಡಿ ಮಾರಮ್ಮ ದೇವಸ್ಥಾನದ ಪ್ರಕರಣವನ್ನು ಬಯಲು ಮಾಡಲು ಸಹಾಯವಾಗಿದೆ.

    ಕೃಷಿ ಅಧಿಕಾರಿ ಶಿವಣ್ಣ ಅವರು ಮೊಬೈಲ್ ಮೂಲಕ ಆರೋಪಿ ಅಂಬಿಕಾ ಜೊತೆಗೆ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದರು. ದುರಂತ ಪ್ರಕರಣದ ತನಿಖೆ ಆರಂಭಿಸುತ್ತಿದ್ದಂತೆ ಪೊಲೀಸರಿಗೆ ಕಾಲ್ ರೆಕಾರ್ಡ್ ನೀಡಿದ ಪರಿಣಾಮ ಎಲ್ಲ ಆರೋಪಿಗಳ ಬಂಧನ ಕೆಲಸ ಸುಲಭವಾಗಿದೆ.

    ಸಂದೇಹ ಬಂದಿದ್ದು ಹೇಗೆ?
    ಸುಳ್ವಾಡಿ ದೇವಾಲಯದ ಪ್ರಸಾದ ಸೇವಿಸಿದವರ ದೇಹದಲ್ಲಿ ಮನೋಕ್ರೋಟೋಫೋಸ್ ಅಂಶ ವೈದ್ಯಕೀಯ ವರದಿಯಲ್ಲಿ ಪತ್ತೆಯಾಗಿದ್ದನ್ನು ಕಂಡು ಶಿವಣ್ಣ ಅವರಿಗೆ ಸ್ವಲ್ಪ ಅನುಮಾನ ಬಂದಿದೆ. 10 ದಿನಗಳ ಹಿಂದೆ ಅಂಬಿಕಾ ನನ್ನ ಬಳಿ ಗಿಡಗಳಿಗೆ ರೋಗ ಬಂದಿದೆ ಎಂದು ಹೇಳಿ ಈ ಕೀಟನಾಶಕವನ್ನು ತೆಗೆದುಕೊಂಡು ಹೋಗಿದ್ದಳು. ಈ ರಾಸಾಯನಿಕ ಪ್ರಸಾದದಲ್ಲಿ ಸೇರಿದ್ದು ಹೇಗೆ ಎಂದು ಶಿವಣ್ಣ ತಲೆಕೆಡಿಸಿಕೊಂಡಿದ್ದಾರೆ.

    ಅನುಮಾನ ಬಂದ ಹಿನ್ನೆಲೆಯಲ್ಲಿ ನಾನು ಕೊಟ್ಟ ಔಷಧಿಯೇ ಈ ಅನಾಹುಕ್ಕೆ ಕಾರಣವಾಯಿತೇ ಎಂದು ಶಿವಣ್ಣ ಅವರು ಫೋನ್ ಮಾಡಿ ಅಂಬಿಕಾಳನ್ನು ಕೇಳಿದ್ದಾರೆ. ಈ ವೇಳೆ ಸತ್ಯ ಒಪ್ಪಿಕೊಳ್ಳದ ಅಂಬಿಕಾ ನೀವು ಕೊಟ್ಟ ಔಷಧಿಯನ್ನು ಗಿಡಕ್ಕೆ ಬಳಸಿದ್ದೇನೆ. ನಾವೇನೂ ವಿಷ ಹಾಕುವವರು ಅಂತಾ ತಿಳಿದುಕೊಂಡಿದ್ದಾರಾ ಎಂದು ಪ್ರಶ್ನಿ ಅಂಬಿಕಾ ರೇಗಾಡಿದ್ದಾಳೆ. ಪ್ರಕರಣದ ಕುರಿತು ಬಾಯಿ ಬಿಡಿಸಲು ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಶಿವಣ್ಣ ಆಕೆಯ ಜೊತೆಗೆ ಮಾತನಾಡಿದ್ದನ್ನು ಸಂಪೂರ್ಣವಾಗಿ ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ಇದನ್ನು ಪೊಲೀಸರಿಗೆ ನೀಡಿ ತನಿಖೆಗೆ ಸಹಾಯ ಮಾಡಿದ್ದಾರೆ.

    ಅಂಬಿಕಾಗೆ ವಿಷ ಪಡೆದಿದ್ದ ಹೇಗೆ?:
    ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶವನ್ನು ಇಮ್ಮಡಿ ಮಹದೇಸ್ವಾಮಿ ಹೊಂದಿದ್ದ. ಈ ನಿಟ್ಟಿನಲ್ಲಿ ತನ್ನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಅಂಬಿಕಾ ಸಹಾಯ ಕೂಡ ಪಡೆದಿದ್ದ. ಮಾರಮ್ಮ ದೇವಿ ಶಂಕುಸ್ಥಾಪನೆ ದಿನದಂದು ಪ್ರಸಾದಕ್ಕೆ ವಿಷ ಬೆರೆಸಲು ಪ್ಲಾನ್ ರೂಪಿಸಿದ್ದ ಅಂಬಿಕಾ, ಮನೆಯ ಗಿಡಗಳಿಗೆ ರೋಗ ಬಂದಿದೆ ಎಂದು ಕೃಷಿ ಅಧಿಕಾರಿ ಶಿವಣ್ಣ ಅವರ ಬಳಿ ಕ್ರಿಮಿನಾಶಕ ಕೊಡಿ ಎಂದು ಕೇಳಿದ್ದಳು. ಆಕೆಯ ಮಾತು ನಂಬಿದ್ದ ಅಧಿಕಾರಿ 500 ಮೀ ಲೀಟರ್ ನಂತೆ 2 ಬಾಟಲ್ ಮನೋಕ್ರೋಟೋಫೋಸ್ ಕೀಟನಾಶಕವನ್ನು ಕೊಟ್ಟಿದ್ದರು.

    ಅಂಬಿಕಾ ಖತರ್ನಾಕ್ ಪ್ಲಾನ್:
    ಪ್ರಸಾದ ಮುಗಿದಿದೆ ಎಂದು ಪತಿ ಮಾದೇಶ್ ಫೋನ್ ಮಾಡಿ ಹೇಳಿದ ಮೇಲೆ ಅಂಬಿಕಾ ದೇವಸ್ಥಾನಕ್ಕೆ ಹೋಗಿದ್ದಳು. ದೇವಸ್ಥಾನಕ್ಕೆ ಹೋದ ತಕ್ಷಣ ಕೆಲಸ ಸರಿಯಾಗಿ ಆಗಿದೆಯಾ ಅಂತ ಅಡುಗೆ ಮನೆ ಹೋಗಿ ಪರಿಶೀಲನೆ ಮಾಡಿದ್ದಳು. ತಾನು ಅಂದುಕೊಂಡಂತೆ ಕೆಲಸ ಮುಗಿದಿದೆ ಎನ್ನುವುದು ಖಚಿತ ಪಡೆಸಿಕೊಂಡು ದೇವರ ಬಳಿ ಹೋಗಿ ತೀರ್ಥವನ್ನು ಕೂಡ ಪಡೆದಿರಲಿಲ್ಲ. ಈ ವೇಳೆ ದೇವಾಲಯದಲ್ಲಿಯೇ ಅರ್ಚಕ ದೊಡ್ಡಯ್ಯನಿಗೆ ಎರಡು ಸಾವಿರ ರೂ. ನೀಡಿದ್ದಾಳೆ.

    https://www.youtube.com/watch?v=9QOHKI5h4z8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇನ್ಮುಂದೆ ಮಾರಮ್ಮ ದೇವಸ್ಥಾನದ ವಿಚಾರಕ್ಕೆ ತಲೆ ಹಾಕಲ್ಲ: ಕಣ್ಣೀರಿಟ್ಟ ಚಿನ್ನಪ್ಪಿ

    ಇನ್ಮುಂದೆ ಮಾರಮ್ಮ ದೇವಸ್ಥಾನದ ವಿಚಾರಕ್ಕೆ ತಲೆ ಹಾಕಲ್ಲ: ಕಣ್ಣೀರಿಟ್ಟ ಚಿನ್ನಪ್ಪಿ

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಶದಲ್ಲಿದ್ದ ದೇವಸ್ಥಾನದ ಟ್ರಸ್ಟಿ ಚಿನ್ನಪ್ಪಿ ಐದು ದಿನದ ಬಳಿಕ ಗ್ರಾಮಕ್ಕೆ ಮರಳಿದ್ದಾರೆ. ಈ ವೇಳೆ ಕುಟುಂಬಸ್ಥರ ಜೊತೆ ಸೇರಿ ಕಣ್ಣೀರಿಟ್ಟು ಇನ್ನೂ ಮುಂದೆ ನಾನು ದೇವಸ್ಥಾನದ ವಿಚಾರಕ್ಕೆ ಹೋಗುವುದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

    ಪ್ರಸಾದದಲ್ಲಿ ವಿಷ ಬೆರೆಸಿದ ಆರೋಪದಡಿ ಚಿನ್ನಪ್ಪಿಯನ್ನು ಪೊಲೀಸರು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸಿದ್ದರು. ಈಗ ಆರೋಪಿಗಳಾದ ಸಾಲೂರು ಮಠದ ಕಿರಿಯ ಸ್ವಾಮಿ ಮಹದೇವಸ್ವಾಮಿ, ಮಾರಮ್ಮ ದೇವಸ್ಥಾನದ ವ್ಯವಸ್ಥಾಪಕ ಮಾದೇಶ್, ಆತನ ಪತ್ನಿ ಅಂಬಿಕಾ ಹಾಗೂ ನಾಗರಕಲ್ಲಿನ ಅರ್ಚಕನಾಗಿದ್ದ ದೊಡ್ಡಯ್ಯ ತಪ್ಪು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇಂದು ಚಿನ್ನಪ್ಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

    ಕುಟುಂಬದ ಸದಸ್ಯರನ್ನು ಸೇರುತ್ತಿದ್ದಂತೆ ಚಿನ್ನಪ್ಪಿ ಕಣ್ಣೀರು ಸುರಿಸಲು ಆರಂಭಿಸಿದರು. ದೇವಸ್ಥಾನದ ವಿಚಾರಕ್ಕೆ ನಾನು ಹಾಗೂ ನೀವು ಯಾರೊಬ್ಬರೂ ತಲೆ ಹಾಕುವಂತಿಲ್ಲ ಎಂದು ಚಿನ್ನಪ್ಪಿ ಮನೆಯ ಸದಸ್ಯರಿಗೆ ಸೂಚಿಸಿದ್ದಾರೆ. ಈ ಮೂಲಕ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ಧರ್ಮಾಧಿಕಾರಿ ಸ್ಥಾನದಿಂದ ಚಿನ್ನಪ್ಪಿ ಹಿಂದೆ ಸರಿಯಲಿದ್ದಾರೆ.

    ಅಕ್ರಮ ಸಂಬಂಧ ಹೊಂದಿದ್ದ ಇಮ್ಮಡಿ ಮಹದೇಸ್ವಾಮಿ ಮತ್ತು ಅಂಬಿಕಾ ಇಬ್ಬರು ಸೇರಿಯೇ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಈ ಇಬ್ಬರು ಆರೋಪಿಗಳು ಕೊಳ್ಳೇಗಾಲ ತಾಲೂಕಿನ ಶಾಗ್ಯ ಗ್ರಾಮದವರಾಗಿದ್ದು, ಸಾಲೂರು ಮಠ ಹಾಗೂ ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ.

    ದೇವಸ್ಥಾನ ಟ್ರಸ್ಟಿ ಚಿನ್ನಪ್ಪಿ ಹಾಗೂ ದೇವಸ್ಥಾನದ ಗೋಪುರ ನಿರ್ಮಾಣದಲ್ಲಿ ಭಾಗವಹಿಸಿದ್ದ ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಹೆಸರು ಹಾಳು ಮಾಡುವ ಉದ್ದೇಶದಿಂದ ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಈ ಕೃತ್ಯದಿಂದ ಟ್ರಸ್ಟಿಗಳು ಜೈಲು ಶಿಕ್ಷೆ ಗುರಿಯಾಗಲಿದ್ದು, ದೇವಸ್ಥಾನದ ಆಡಳಿತ ನಮ್ಮ ಕೈಸೇರುತ್ತದೆ ಎನ್ನುವುದು ಮಹದೇವಸ್ವಾಮಿ ಹಾಗೂ ಅಂಬಿಕಾ ಪ್ಲಾನ್ ಆಗಿತ್ತು. ಅಷ್ಟೇ ಅಲ್ಲದೆ ಪ್ರಕರಣದಲ್ಲಿ ಸಾಲೂರು ಮಠದ ಹಿರಿಯ ಸ್ವಾಮೀಜಿ ಕೂಡ ಜೈಲು ಸೇರುತ್ತಾರೆ. ಹೀಗಾಗಿ ಮಠ ಹಾಗೂ ದೇವಸ್ಥಾನದ ಆಡಳಿತ ನಮ್ಮ ಕೈಗೆ ಸೇರುತ್ತದೆ ಎನ್ನುವ ದುರಾಲೋಚನೆಯಿಂದ ಈ ಕೃತ್ಯ ಎಸಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತ – ವಿಷರಾಕ್ಷಸಿಯ ಜೊತೆ ಸ್ವಾಮಿಗೆ ಇತ್ತು ಅಕ್ರಮ ಸಂಬಂಧ

    ಸುಳ್ವಾಡಿ ದುರಂತ – ವಿಷರಾಕ್ಷಸಿಯ ಜೊತೆ ಸ್ವಾಮಿಗೆ ಇತ್ತು ಅಕ್ರಮ ಸಂಬಂಧ

    – ಸಾಲೂರು ಮಠದ ಹಿರಿಯ ಸ್ವಾಮಿಯನ್ನು ಜೈಲಿಗಟ್ಟಲು ಪ್ಲಾನ್
    – ಕರ್ಪೂರ ಜಾಸ್ತಿಯಾಗಿದೆ ಪ್ರಸಾದ ತಿನ್ನಿ ಎಂದಿದ್ದ ಮಾದೇಶ

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಾಸ್ಥಾನ ವಿಷ ಪ್ರಸಾದ ಪ್ರಕರಣ ದಿನದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಸ್ವಾಮಿ ಹಾಗೂ ಆರೋಪಿ ಮಹಿಳೆಯ ನಡುವೆ ಅನೈತಿಕ ಸಂಬಂಧವಿತ್ತು ಎನ್ನುವುದು ವಿಚಾರಣೆ ವೇಳೆ ಬೆಳಕಿದೆ ಬಂದಿದೆ.

    ಇಮ್ಮಡಿ ಮಹದೇಸ್ವಾಮಿ ಮತ್ತು ಅಂಬಿಕಾ ಇಬ್ಬರು ಸೇರಿಯೇ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಈ ಇಬ್ಬರು ಆರೋಪಿಗಳು ಕೊಳ್ಳೇಗಾಲ ತಾಲೂಕಿನ ಶಾಗ್ಯ ಗ್ರಾಮದವರಾಗಿದ್ದು, ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ.

    ಅಂಬಿಕಾ ಮಹದೇವಸ್ವಾಮಿಯನ್ನು ಭೇಟಿಯಾಗಲು ಆಗಾಗ ಪತಿ ಮಾದೇಶ ಜೊತೆಗೆ ಸಾಲೂರು ಮಠಕ್ಕೆ ಬರುತ್ತಿದ್ದಳು. ಹೀಗಾಗಿ ಒಂದೇ ಗ್ರಾಮದವರಾಗಿದ್ದ ಸ್ವಾಮೀಜಿ ಹಾಗೂ ಅಂಬಿಕಾ ನಡುವೆ ಅನೈತಿಕ ಸಂಬಂಧವಿತ್ತು. ಇತ್ತ ಮಹದೇವಸ್ವಾಮಿ ಮಾರಮ್ಮ ದೇವಸ್ಥಾನದ ಮೇಲೆ ಹಿಡಿತ ಸಾಧಿಸಲು ಅಂಬಿಕಾ ಸಹಾಯ ಪಡೆದಿದ್ದಾನೆ.

    ವಿಷ ಹಾಕಿದ್ದು ಯಾಕೆ?
    ದೇವಸ್ಥಾನ ಟ್ರಸ್ಟಿ ಚಿನ್ನಪ್ಪಿ ಹಾಗೂ ದೇವಸ್ಥಾನದ ಗೋಪುರ ನಿರ್ಮಾಣದಲ್ಲಿ ಭಾಗವಹಿಸಿದ್ದ ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಹೆಸರು ಹಾಳು ಮಾಡುವ ಉದ್ದೇಶದಿಂದ ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಈ ಕೃತ್ಯದಿಂದ ಟ್ರಸ್ಟಿಗಳು ಜೈಲು ಶಿಕ್ಷೆ ಗುರಿಯಾಗಲಿದ್ದು, ದೇವಸ್ಥಾನದ ಆಡಳಿತ ನಮ್ಮ ಕೈಸೇರುತ್ತದೆ ಎನ್ನುವುದು ಮಹದೇವಸ್ವಾಮಿ ಹಾಗೂ ಅಂಬಿಕಾ ಪ್ಲಾನ್ ಆಗಿತ್ತು. ಅಷ್ಟೇ ಅಲ್ಲದೆ ಪ್ರಕರಣದಲ್ಲಿ ಸಾಲೂರು ಮಠದ ಹಿರಿಯ ಸ್ವಾಮೀಜಿ ಕೂಡ ಜೈಲು ಸೇರುತ್ತಾರೆ. ಹೀಗಾಗಿ ಮಠ ಹಾಗೂ ದೇವಸ್ಥಾನದ ಆಡಳಿತ ನಮ್ಮ ಕೈಗೆ ಸೇರುತ್ತದೆ ಎನ್ನುವ ದುರಾಲೋಚನೆಯಿಂದ ಈ ಕೃತ್ಯ ಎಸಗಿದ್ದಾರೆ.

    ವಿಷ ಬೆರೆಸಿದ್ದು ಹೇಗೆ?:
    ಮಹದೇಸ್ವಾಮಿ ಜೊತೆಗೆ ಪ್ಲಾನ್ ರೂಪಿಸಿದ್ದ ಅಂಬಿಕಾ ಮನೆಯ ಗಿಡಗಳಿಗೆ ರೋಗ ಬಂದಿದೆ ಎಂದು ಕೃಷಿ ಅಧಿಕಾರಿಗೆ ಸುಳ್ಳು ಹೇಳಿದ್ದಳು. ಆಕೆಯ ಮಾತು ನಂಬಿದ್ದ ಅಧಿಕಾರಿ 500 ಮೀ ಲೀಟರ್ ನಂತೆ 2 ಬಾಟಲ್ ಮನೋಕ್ರೋಟೋಫೋಸ್ ಕೀಟನಾಶಕವನ್ನು ಕೊಟ್ಟಿದ್ದರು. ಈ ಕೀಟನಾಶಕವನ್ನು ಅಂಬಿಕಾ ನಾಗರಕಲ್ಲಿನ ಅರ್ಚಕನಾಗಿದ್ದ ದೊಡ್ಡಯ್ಯನಿಗೆ ನೀಡಿದ್ದಳು.

    ದೇವಸ್ಥಾನ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪ್ರಸಾದ ತಯಾರಿಸುತ್ತಿದ್ದ ಅಡುಗೆಯವರ್ನು ಮಾದೇಶ ಬೇರೆ ಕಡೆಗೆ ಕಳುಹಿಸಿದ್ದ. ಈ ವೇಳೆ ಅಲ್ಲಿಗೆ ಬಂದಿದ್ದ ದೊಡ್ಡಯ್ಯ ತಂಬಡಿ ವಿಷ ಬೆರೆಸಿ ಪರಾರಿಯಾಗಿದ್ದಾನೆ. ಆದರೆ ಈ ಪ್ರಸಾದವನ್ನು ಭಕ್ತರಿಗೆ ಕೊಟ್ಟರೇ ಹೊರತು ದೇವಸ್ಥಾನದ ಟ್ರಸ್ಟ್ ನ ಪದಾಧಿಕಾರಿಗಳು ಸೇವಿಸಲಿಲ್ಲ. ಬದಲಾಗಿ ತಮ್ಮ ಮನೆಯಿಂದ ತಂದಿದ್ದ ಇಡ್ಲಿ ಹಾಗೂ ಪೊಂಗಲ್ ಅನ್ನು ಪೂಜೆಯ ಬಳಿಕ ಸೇವಿಸಿದ್ದಾರೆ.

    ಕರ್ಪೂರ ಜಾಸ್ತಿಯಾಗಿದೆ ಎಂದಿದ್ದ:
    ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಸಾದ ತಯಾರಿಸಲಾಗಿತ್ತು. ಈ ಪ್ರಸಾದದಿಂದ ವಾಸನೆ ಬರುತ್ತಿದೆ ಎಂದು ಕೆಲವರು ದೂರುತ್ತಿದ್ದಂತೆ, ಕರ್ಪೂರ ಜಾಸ್ತಿಯಾಗಿದೆ ತಿನ್ನಿ ಏನು ಆಗಲ್ಲ ಎಂದು ಆರೋಪಿ ಮಾದೇಶ ಭಕ್ತರಿಗೆ ಒತ್ತಾಯಿಸಿದ್ದ ವಿಚಾರ ಪ್ರಕಟವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv