Tag: Visakhapatnam

  • ಅಭಿಮಾನಿಗಳ ಟೀಕಾಪ್ರಹಾರ – ಧೋನಿ ನೆರವಿಗೆ ಬಂದ ಮ್ಯಾಕ್ಸ್‌ವೆಲ್

    ಅಭಿಮಾನಿಗಳ ಟೀಕಾಪ್ರಹಾರ – ಧೋನಿ ನೆರವಿಗೆ ಬಂದ ಮ್ಯಾಕ್ಸ್‌ವೆಲ್

    ವಿಶಾಖಪಟ್ಟಣ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದ ವೇಳೆ ಸಿಂಗಲ್ ರನ್ ಗಳನ್ನು ಓಡಲು ನಿರಾಕರಿಸಿದ ಧೋನಿ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ.

    ಪಂದ್ಯದ ಅಂತಿಮ 3 ಓವರ್ ಗಳನ್ನು ಎದುರಿಸಿದ ಧೋನಿ 17 ರನ್ ಮಾತ್ರ ಗಳಿಸಿದ್ದರು. ಅಲ್ಲದೇ ಈ ಹಂತದಲ್ಲಿ 1 ಬೌಂಡರಿಯನ್ನು ಸಿಡಿಸಿದ್ದರು. ಅಂತಿಮವಾಗಿ 37 ಎಸೆತಗಳಿಂದ 29 ರನ್ ಗಳಿಸಿದ್ದರು. ಟೀಂ ಇಂಡಿಯಾ ಪರ ಟಿ20 ಪಂದ್ಯದಲ್ಲಿ ಅವರ ಸ್ಟ್ರೈಕ್ ರೇಟ್ 35 ಪ್ಲಸ್ ಎಸೆತಗಳಲ್ಲಿ ಗಳಿಸಿದ 2ನೇ ಅತಿ ಕಡಿಮೆ ರನ್ ಆಗಿದ್ದು, ಪಂದ್ಯದ ಅಂತಿಮ ಓವರ್ ಗಳಲ್ಲಿ ಧೋನಿ ಮತ್ತಷ್ಟು ರನ್ ಗಳಿಸಿದ್ದರೆ ಎದುರಾಳಿ ತಂಡ ಜಯಗಳಿಸುತ್ತಿರಲಿಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಅಂತಿಮ ಮೂರು ಓವರ್ ಗಳಲ್ಲಿ 8 ಬಾರಿ ಒಂಟಿ ರನ್ ಓಡಲು ಧೋನಿ ನಿರಾಕರಿಸಿದ್ದರು. ಆದರೆ 109 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಬ್ಯಾಟಿಂಗ್ ನಡೆಸಿದ ಧೋನಿ ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳಿತ್ತು. ಆದರ ಧೋನಿ ತಂಡದ ಮೊತ್ತ ಹೆಚ್ಚಿಸಲು ವಿಫಲರಾಗಿದ್ದರು. ಪರಿಣಾಮ ತಂಡ ಸಾಧಾರಣ ಮೊತ್ತ ಗಳಿಸಿತ್ತು.

    ಇದರ ನಡುವೆಯೇ ಪಂದ್ಯದಲ್ಲಿ ಧೋನಿಯ ರಕ್ಷಣಾತ್ಮಕ ಆಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಮ್ಯಾಕ್ಸ್ ವೆಲ್ ಅರ್ಧ ಪಿಚ್‍ನಲ್ಲಿ ಬ್ಯಾಟಿಂಗ್ ನಡೆಸಲು ಕಷ್ಟಕರವಾಗಿತ್ತು. ಯಾವುದೇ ಬ್ಯಾಟ್ಸ್ ಮನ್‍ಗೆ ಆಡುವುದು ಅಷ್ಟು ಸುಲಭ ಆಗಿರಲಿಲ್ಲ ಎಂದಿದ್ದಾರೆ. ಧೋನಿ ತಮ್ಮ ಮ್ಯಾಚ್ ಫಿನಿಷಿಂಗ್ ಪ್ರದರ್ಶನಕ್ಕೆ ಖ್ಯಾತಿ ಪಡೆದವರು. ಪಂದ್ಯದ ಅಂತಿಮ ಓವರ್ ನಲ್ಲೂ ಕೂಡ ಅವರು ಸಿಕ್ಸರ್ ಸಿಡಿಸಿದ್ದರು. ಇದು ಅವರ ಬ್ಯಾಟಿಂಗ್ ಶಕ್ತಿಗೆ ಸಾಕ್ಷಿ. ಆದರೆ ಆ ಓವರ್ ನಲ್ಲಿ 7 ರನ್ ಗಳಿಸಲಷ್ಟೇ ಸಾಧ್ಯವಾಗಿದ್ದು, ಪಿಚ್ ಎಷ್ಟು ಕಠಿಣವಾಗಿತ್ತು ಎನ್ನುವುದಕ್ಕೆ ಉದಾಹಣೆ ಆಗಬಹುದು ಎಂದು ಸಮರ್ಥನೆಯನ್ನು ಮುಂದಿಟ್ಟಿದ್ದಾರೆ.

    ಧೋನಿ ಅವರಂತಹ ಬ್ಯಾಟ್ಸ್ ಮನ್‍ರನ್ನು ಅಂತಿಮ ಓವರ್ ಗಳಲ್ಲಿ ಕೇವಲ 1 ಬೌಂಡರಿಗೆ ಸಿಮೀತಗೊಳಿಸಿದ್ದು ಕೂಡ ನಮ್ಮ ಬೌಲರ್ ಸಾಧನೆಯೇ ಸರಿ ಎಂದು ಎಂದಿದ್ದಾರೆ. ಇದೇ ವೇಳೆ ಕೆಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾ ಹುತ್ಮಾತ ಯೋಧರಿಗೆ ಗೌರವ – ಅಭಿಮಾನಿಗಳಲ್ಲಿ ಮೌನವಾಗಿರುವಂತೆ ಕೊಹ್ಲಿ ಮನವಿ

    ಪುಲ್ವಾಮಾ ಹುತ್ಮಾತ ಯೋಧರಿಗೆ ಗೌರವ – ಅಭಿಮಾನಿಗಳಲ್ಲಿ ಮೌನವಾಗಿರುವಂತೆ ಕೊಹ್ಲಿ ಮನವಿ

    ವಿಶಾಖಪಟ್ಟಣ: ಪುಲ್ವಾಮಾ ದಾಳಿಯ ಬಳಿಕ ಮೊದಲ ಭಾರಿಗೆ ಮೈದಾನಕ್ಕಿಳಿದಿದ್ದ ಟೀಂ ಇಂಡಿಯಾಗೆ ಬೆಂಬಲವಾಗಿ ನೆರೆದಿದ್ದ ಅಭಿಮಾನಿಗಳು ‘ಭಾರತ್ ಮಾತ ಕೀ ಜೈ’ ಎಂಬ ಘೋಷಣೆ ಕೂಗಿ ಸ್ವಾಗತ ಮಾಡಿದ್ದರು.

    ಪಂದ್ಯ ಆರಂಭಕ್ಕೂ ಮುನ್ನ ಇತ್ತಂಡಗಳ ಆಟಗಾರರು ಕೂಡ ಕ್ರೀಡಾಂಗಣದಲ್ಲಿ 2 ನಿಮಿಷ ಮೌನಾಚರಣೆ ಮಾಡುವ ಮೂಲಕ ನಮನ ಹುತಾತ್ಮ ಯೋಧರಿಗೆ ಸಲ್ಲಿಸಿದರು. ಆದರೆ ಈ ವೇಳೆ ಅಭಿಮಾನಿಗಳು ಘೋಷಣೆ ಕೂಗುವುದನ್ನು ನಿಲ್ಲಿಸದ ಕಾರಣ ಕೊಹ್ಲಿ ಮೌನವಾಗಿ ಇರುವಂತೆ ಸೂಚನೆ ನೀಡಿ ಮನವಿ ಮಾಡಿದ್ದ ಘಟನೆ ನಡೆದಿದೆ.

    ರಾಷ್ಟ್ರ ಗೀತೆಯ ಬಳಿಕ ಆಟಗಾರರು 2 ನಿಮಿಷ ಮೌನಾಚರಣೆ ಮಾಡಿದ್ದರು. ಈ ವೇಳೆ ಅಭಿಮಾನಿಗಳ ಗ್ಯಾಲರಿಯಿಂದ ಘೋಷಣೆ ಮೊಳಗುತ್ತಲೇ ಇತ್ತು. ಈ ವೇಳೆ ಎಚ್ಚೆತ್ತ ಕೊಹ್ಲಿ ಕೈಸನ್ನೆ ಮಾಡುವ ಎಲ್ಲರ ಮನ ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಅವರ ಈ ಫೋಟೋ ಸಖತ್ ವೈರಲ್ ಆಗಿದೆ. ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರು.

    ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಯ ಸೋಲುಂಡಿತ್ತು. ಪಂದ್ಯದ ಸೋತ ಪರಿಣಾಮ ಕೆಲ ಅಭಿಮಾನಿಗಳು ತಂಡದ ಆಟಗಾರರ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಅಂತಿಮ ಓವರ್‍ಗಳನ್ನು ಆಡಿದ ಧೋನಿ ಹಾಗು ಅಂತಿಮ ಬೌಲರ್ ಎಸೆತ ಉಮೇಶ್ ಯಾದವ್ ವಿರುದ್ಧ ಹೆಚ್ಚು ಅಕ್ರೋಶ ವ್ಯಕ್ತವಾಗಿದೆ. 2 ಪಂದ್ಯ ಟಿ20 ಸರಣಿಯಲ್ಲಿ ಸದ್ಯ ಆಸೀಸ್ ಮುನ್ನಡೆ ಪಡೆದಿದ್ದು, ಬುಧವಾರ 2ನೇ ಹಾಗೂ ಅಂತಿಮ ಟಿ20 ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊನೆಯ ಎಸೆತದಲ್ಲಿ ಭಾರತಕ್ಕೆ ಸೋಲು!

    ಕೊನೆಯ ಎಸೆತದಲ್ಲಿ ಭಾರತಕ್ಕೆ ಸೋಲು!

    – ಆಸೀಸ್‍ಗೆ 3 ವಿಕೆಟ್ ಗೆಲುವು
    – ಕೊನೆಯ ಓವರ್ ನಲ್ಲಿ 14 ರನ್ ಕೊಟ್ಟ ಉಮೇಶ್ ಯಾದವ್

    ವಿಶಾಖಪಟ್ಟಣ: ಇಲ್ಲಿನ ವೈ ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಆಸೀಸ್ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಕಂಡಿದ್ದು, ಆಸ್ಟ್ರೇಲಿಯಾ ಮೂರು ವಿಕೆಟ್‍ಗಳ ಜಯ ಸಾಧಿಸಿದೆ.

    127 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾಗೆ ಕೊನೆಯ ಓವರ್ ನಲ್ಲಿ 14 ರನ್ ಬೇಕಿತ್ತು. ಉಮೇಶ್ ಯಾದವ್ ಎಸೆದ ಈ ಓವರ್ ನಲ್ಲಿ ಎರಡು ಬೌಂಡರಿ ಸಿಡಿಸಿದ ಪರಿಣಾಮ ಕೊನೆಯ ಎಸೆತದಲ್ಲಿ 2 ರನ್‍ಗಳ ಅಗತ್ಯವಿತ್ತು. ಪ್ಯಾಟ್ ಕಮ್ಮಿನ್ಸ್ ಕೊನೆಯ ಎಸೆತದಲ್ಲಿ 2 ರನ್ ಕದಿಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆಯನ್ನು ಪಡೆದಿದೆ.

    ಟೀಂ ಇಂಡಿಯಾ ಸುಲಭ ಗುರಿಯನನ್ನು ಬೆನ್ನತ್ತಿದ ಆಸೀಸ್ ಪಡೆ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಸ್ಟೋಯಿನ್ಸ್ 1 ರನ್ ಗೆ ರನೌಟ್ ಆದ್ರೆ, ನಾಯಕ ಫಿಂಚ್ ರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಬುಮ್ರಾ ಶಾಕ್ ನೀಡಿದರು. ಪರಿಣಾಮ 5 ರನ್ ಗಳಿಗೆ ಆಸೀಸ್ ಪ್ರಮುಖ 2 ವಿಕೆಟ್ ಕಳೆದುಕೊಂಡಿತ್ತು.

    ಈ ಹಂತದಲ್ಲಿ ಬಂದ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್ 43 ಎಸೆತಗಳಲ್ಲಿ 56 ರನ್ ಗಳಿಸಿ ಮಿಂಚಿದರು. ಅರ್ಧ ಶತಕ ಗಳಿಸಿ ಟೀಂ ಇಂಡಿಯಾಗೆ ಮುಳುವಾಗಿದ್ದ ಮ್ಯಾಕ್ಸ್ ವೆಲ್‍ರನ್ನು ಚಹಲ್ ಪೆವಿಲಿಯಗಟ್ಟಲು ಯಶಸ್ವಿಯಾದರೆ, ಆರಂಭಿಕ ಶಾರ್ಟ್ 37 ರನ್ ಗಳಿಸಿ ರನೌಟ್ ಆದರು. ಬಳಿಕ ಬಂದ ಟರ್ನರ್ ಕೂಡ ಬಂದಷ್ಟೇ ವೇಗದಲ್ಲಿ ನಿರ್ಗಮಿಸಿದರು. ಈ ಹಂತದಲ್ಲಿ ಭಾರತ ಪಂದ್ಯ ಗೆಲುವಿನ ಆಸೆ ಮೂಡಿತು. ಇದನ್ನು ಓದಿ: ಕಮ್ ಬ್ಯಾಕ್ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಕೆಎಲ್ ರಾಹುಲ್

    ಮಿಂಚಿದ ಬುಮ್ರಾ: 98 ರನ್ ಗಳಿಗೆ 3 ವಿಕೆಟ್ ಗಳಿಸಿ ಸುಸ್ಥಿತಿಯಲ್ಲಿದ್ದ ಆಸೀಸ್‍ಗೆ ಶಾರ್ಟ್ ರನೌಟ್ ಆದ ಬಳಿಕ ರನ್ ವೇಗಕ್ಕೆ ಕಡಿವಾಣ ಬಿತ್ತು. ಕೊನೆಯ 12 ಎಸೆತಗಳಲ್ಲಿ ಆಸೀಸ್ ಗೆಲುವಿಗೆ 16 ರನ್ ಬೇಕಿತ್ತು. ಬೂಮ್ರಾ ಈ ಓವರ್ ನಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತ ಪರಿಣಾಮ ಪಂದ್ಯ ಕುತೂಹಲ ಘಟ್ಟದತ್ತ ತಿರುಗಿತು. ಆದರೆ ಉಮೇಶ್ ಯಾದವ್ ಓವರ್ ನಲ್ಲಿ 2 ಬೌಂಡರಿ ಹೋದ ಪರಿಣಾಮ ಪಂದ್ಯ ಭಾರತದಿಂದ ಕೈ ಜಾರಿತು. ಬುಮ್ರಾ 4 ಓವರ್ ಎಸೆದು 16 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಅರ್ಧ ಶತಕ ಹಾಗೂ ನಾಯಕ ಕೊಹ್ಲಿ 24, ಧೋನಿ 29 ರನ್ ಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿತ್ತು.

    ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಟೀಂ ಇಂಡಿಯಾ ರೋಹಿತ್ ಶರ್ಮಾ ವಿಕೆಟ್ ಕಳೆದು ಬಹುಬೇಗ ಕಳೆದುಕೊಂಡರೂ ಕೂಡ ಉತ್ತಮ ಆರಂಭ ಪಡೆಯಿತು. ಆರಂಭದ 8.3 ಓವರ್ ಗಳಲ್ಲಿ 69 ರನ್ ಗಳಿಸಿ ಟೀಂ ಇಂಡಿಯಾ ಉತ್ತಮ ಹಂತದಲ್ಲಿತ್ತು. ಕೊಹ್ಲಿ 17 ಎಸೆತಗಳಲ್ಲಿ 24 ರನ್ ಗಳಿಸಿ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಆದರೆ ಆ್ಯಡಂ ಜಂಪಾ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಭಾರತ ರನ್ ವೇಗಕ್ಕೆ ಕಡಿವಾಣ ಹಾಕಲು ಯಶಸ್ವಿಯಾದರು. ಕೊಹ್ಲಿ ಪಂದ್ಯದಲ್ಲಿ ಆಸೀಸ್ ವಿರುದ್ಧ 500 ರನ್ ಪೂರ್ಣಗೊಳಿಸಿದ ಹೆಗ್ಗಳಿಕೆ ಗಳಿಸಿದರು.

    ಪಂತ್ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ಉತ್ತಮವಾಗಿ ಆಡುತ್ತಿದ್ದ ರಾಹುಲ್‍ರನ್ನು ಕಾಲ್ಟರ್ ನೈಲ್ ಪೆವಿಲಿಯಗಟ್ಟಿದರು. ಈ ಹಂತದಲ್ಲಿ ಟೀಂ ಇಂಡಿಯಾ 12.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಬಂದ ಧೋನಿ 37 ಎಸೆತಗಳನ್ನು 29 ರನ್ ಗಳಿಸಿ ಅಜೇಯರಾಗಿ ಉಳಿದರು.

    ಟೀಂ ಇಂಡಿಯಾ 8.3 ಓವರ್ ಗಳಲ್ಲಿ 1 ವಿಕೆಟ್ ಕಳೆದು ಕೊಂಡು 69 ರನ್ ಗಳಿಸಿದರೆ, ಉಳಿದ 11.3 ಓವರ್ ಗಳಲ್ಲಿ 57 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಇತ್ತ ಧೋನಿ 35 ಪ್ಲಸ್ ಎಸೆತ ಎದುರಿಸಿದರೂ ಕೂಡ 29 ರನ್ ಮಾತ್ರ ಗಳಿಸಿ ಟಿ20 ಮಾದರಿಯಲ್ಲಿ ಭಾರತದ ಪರ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ ಆಟಗಾರ ಎನಿಸಿಕೊಂಡರು. ಈ ಹಿಂದೆ 2009ರಲ್ಲಿ ಇಂಗ್ಲೆಂಡ್ ವಿರುದ್ಧ ಜಡೇಜಾ 71.82 ಸ್ಟ್ರೈಕ್ ನಲ್ಲಿ ರನ್ ಗಳಿಸಿದ್ದರು. ಇಂದು ಧೋನಿ 78.37 ಸ್ಟ್ರೈಕ್ ರೇಟ್ ಹೊಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗನ ಮದುವೆಗೆ ಕೇವಲ 18 ಸಾವಿರ ರೂ. ವೆಚ್ಚ – ಐಎಎಸ್ ಅಧಿಕಾರಿ ನಿರ್ಧಾರ

    ಮಗನ ಮದುವೆಗೆ ಕೇವಲ 18 ಸಾವಿರ ರೂ. ವೆಚ್ಚ – ಐಎಎಸ್ ಅಧಿಕಾರಿ ನಿರ್ಧಾರ

    -ಒರ್ವ ಅತಿಥಿಗೆ 10 ರೂ. ಖರ್ಚು

    ವಿಶಾಖಪಟ್ಟಣಂ: ವಿವಾಹವನ್ನು ಅದ್ಧೂರಿಯಾಗಿ ಮಾಡಲು ಅನೇಕರು ಲಕ್ಷಾಂತರ ರೂ. ವೆಚ್ಚ ಮಾಡುತ್ತಾರೆ. ಆದರೆ ಐಎಎಸ್ ಅಧಿಕಾರಿಯೊಬ್ಬರು ಕೇವಲ 18 ಸಾವಿರ ರೂ. ವೆಚ್ಚದಲ್ಲಿ ಮಗನ ಮದುವೆಯನ್ನು ಮಾಡಲು ನಿರ್ಧರಿಸಿದ್ದಾರೆ.

    ಆಂಧ್ರಪ್ರದೇಶದ ವಿಶಾಖಪಟ್ಟಣ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ವಿಎಂಆರ್ ಡಿಎ) ಆಯುಕ್ತ ಪಿ. ಬಸಂತ್ ಕುಮಾರ್ ಅವರು ಇಂತಹ ಸರಳ ವಿವಾಹಕ್ಕೆ ಮುಂದಾಗಿದ್ದಾರೆ. ಈ ವಿವಾಹ ವಿಶಾಖಪಟ್ಟಣದಲ್ಲಿ ಫೆಬ್ರವರಿ 10 ರಂದು ನಡೆಯಲಿದೆ.

    ಪಿ. ಬಸಂತ್ ಕುಮಾರ್ ಅವರು 2017ರ ಸೆಪ್ಟೆಂಬರ್ ನಲ್ಲಿ ನಡೆದ ಪುತ್ರಿ ವಿವಾಹಕ್ಕೂ ಕೇವಲ 16,100 ಖರ್ಚು ಮಾಡಿದ್ದರು. ಅಷ್ಟೇ ಅಲ್ಲದೆ 1988ರಲ್ಲಿ ತಮ್ಮ ಮದುವೆಗೂ ಬಸಂತ್ ಅವರು 2,345 ರೂ. ವೆಚ್ಚ ಮಾಡಿದ್ದಾರೆ. ಐಎಎಸ್ ಅಧಿಕಾರಿಯಾಗಿ ಈ ರೀತಿಯ ಸರಳ ಮದುವೆ ಮಾಡುವ ಮೂಲಕ ಬಸಂತ್ ಅವರು ಅನೇಕರಿಗೆ ಮಾದರಿಯಾಗಿದ್ದಾರೆ.

    1988ರಲ್ಲಿ ನಾನು ಸರಳ ವಿವಾಹವಾಗುತ್ತೇನೆ ಎಂದು ಪತ್ನಿಯ ಪೋಷಕರಿಗೆ ತಿಳಿಸಿದ್ದೆ. ಅವರು ಕೆಲವು ವಾರಗಳ ಕಾಲ ಸಮಯ ತೆಗೆದುಕೊಂಡು ಯೋಚಿಸಿ ಒಪ್ಪಿಗೆ ಸೂಚಿಸಿದರು. ಹೀಗಾಗಿ ನಾನು ವಿಶೇಷ ಮದುವೆ ಕಾಯಿದೆ ಅಡಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದೆ. ಆಗ ಕೇವಲ 25 ಅತಿಥಿಗಳು ಭಾಗವಹಿಸಿದ್ದರಿಂದ 2,345 ರೂ. ಖರ್ಚು ಮಾಡಿದ್ದೇವು ಎಂದು ಪಿ.ಬಸಂತ್ ಕುಮಾರ್ ತಮ್ಮ ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ.

    ವಿಶಾಖಪಟ್ಟಣನಲ್ಲಿ ಫೆಬ್ರವರಿ 10ರಂದು ನಡೆಯುತ್ತಿರುವ ಪುತ್ರನ ಮದುವೆಯನ್ನು ಸಹೋದ್ಯೋಗಿಗಳು ಹಾಗೂ ರಾಧಾ ಸೋಮಿ ಸತ್ಯಂಗ ಸಭಾ ಸದಸ್ಯರ ಸಹಾಯದಿಂದ ಮಾಡುತ್ತಿರುವೆ. ಒಂದು ವೇಳೆ ಅವರ ಸಹಾಯವಿಲ್ಲದಿದ್ದರೆ 18 ಸಾವಿರ ರೂ. ವೆಚ್ಚದಲ್ಲಿ ವಿವಾಹ ನೆರವೇರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

    ಮದುವೆಗೆ ಬೇಕಾಗುವ ತರಕಾರಿಯನ್ನು ವಿಶಾಖಪಟ್ಟಣದ ದಯಾಳ್‍ಬಾಗ್ ನಗರದ ತೋಟದಿಂದ ತರಲಾಗುತ್ತದೆ. ಮದುವೆ ನಿಮಿತ್ತ ಫೆಬ್ರವರಿ 8ರಂದು ಸತ್ಸಂಗ ನೆಡೆಸುತ್ತೇವೆ. ಈ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ಕೇವಲ 10 ರೂ. ವೆಚ್ಚ ಮಾಡಲಾಗುತ್ತದೆ. ಮದುವೆಯ ದಿನ 200 ಜನ ಸಂಬಂಧಿಕರು ಸೇರಲಿದ್ದು, ತಲಾ 7 ರೂ. ವೆಚ್ಚದಲ್ಲಿ ಅವರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಆಂಧ್ರಪ್ರದೇಶದ ಗವರ್ನರ್ ಇಎಸ್‍ಎಲ್ ನರಸಿಂಹನ್ ಅವರು ವಿವಾಹಕ್ಕೆ ಆಗಮಿಸಲಿದ್ದಾರೆ ಎಂದು ಆಯುಕ್ತ ಪಿ. ಬಸಂತ್ ಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಹೆಲಿಕಾಪ್ಟರ್ ಶಾಟ್’ ಬಳಿಕ ಧೋನಿ ಪ್ರತಿಕ್ರಿಯೆ ಹೀಗಿತ್ತು- ವಿಡಿಯೋ ವೈರಲ್

    `ಹೆಲಿಕಾಪ್ಟರ್ ಶಾಟ್’ ಬಳಿಕ ಧೋನಿ ಪ್ರತಿಕ್ರಿಯೆ ಹೀಗಿತ್ತು- ವಿಡಿಯೋ ವೈರಲ್

    ವಿಶಾಖಪಟ್ಟಣ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಎಂಎಸ್ ಧೋನಿ ಸಿಡಿಸಿದ ಹೆಲಿಕಾಪ್ಟರ್ ಶಾಟ್ ಸಿಕ್ಸರ್ ವಿಡಿಯೋ ವೈರಲ್ ಆಗಿದ್ದು, ಸಿಕ್ಸರ್ ಸಿಡಿಸಿದ ಬಳಿಕ ನೀಡಿದ ಪ್ರತಿಕ್ರಿಯೆ ವಿಶೇಷವಾಗಿತ್ತು.

    ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಆಗಮಿಸುತ್ತಿದಂತೆ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಧೋನಿ 38 ಓವರ್ ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದರು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಕೊಹ್ಲಿ ಕೂಡ ಒಂದು ಕ್ಷಣ ಅಚ್ಚರಿಗೊಂಡರು. ಕೊಹ್ಲಿ ಪ್ರತಿಕ್ರಿಯೆ ಕಂಡ ಧೋನಿ ಕೂಡ ಸಂತಸದಿಂದ ನಸು ನಕ್ಕು ಸಂಭ್ರಮಿಸಿದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ವೆಬ್‍ಸೈಟ್ ನಲ್ಲಿ ಪೋಸ್ಟ್ ಮಾಡಿದ್ದು, ಇದೂವರೆಗೂ 1 ಲಕ್ಷ ವ್ಯೂ ಕಂಡಿದೆ.

    ಧೋನಿ ಅವರ ಪ್ರತಿಕ್ರಿಯೆ ಕಂಡ ಅಭಿಮಾನಿಗಳು ಈ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಧೋನಿ ಅವರ ಬ್ಯಾಟಿಂಗ್ ಕುರಿತು ಹಲವು ಕ್ರಿಕೆಟ್ ವಿಶ್ಲೇಷಕರು ಟೀಕೆ ವ್ಯಕ್ತಪಡಿಸಿದ್ದು, ಯುವ ಆಟಗಾರರಿಗೆ ಅವಕಾಶ ನೀಡುವ ಚಿಂತನೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿಂಡೀಸ್ ವಿರುದ್ಧ ಪಂದ್ಯದಲ್ಲೂ ಧೋನಿ 25 ಎಸೆತಗಳಲ್ಲಿ 20 ರನ್ ಸಿಡಿಸಿ ಔಟಾಗಿದ್ದರು.

    ಇತ್ತ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಕೊಹ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 10 ಸಾವಿರ ರನ್ ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದರು. ವಿರಾಟ್ ಬ್ಯಾಟಿಂಗ್ ಶೈಲಿಗೆ ವಿಶ್ವದ ಹಲವು ಕ್ರಿಕೆಟ್ ಸ್ಟಾರ್ ಗಳು ಹಾಗೂ ಅಭಿಮಾನಿಗಳು ಪ್ರಶಂಸೆಯನ್ನ ವ್ಯಕ್ತಪಡಿಸಿದ್ದರು. ಈ ಪಂದ್ಯ ಟೈ ನಲ್ಲಿ ಅಂತ್ಯ ಕಂಡ ಕಾರಣ ಟೂರ್ನಿಯಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಮುನ್ನಡೆಯಲ್ಲಿ ಮುಂದುವರಿಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/ghanta_10/status/1055052075434950656?

  • ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ಯೋಗಶಿಕ್ಷಕನ ಬರ್ಬರ ಹತ್ಯೆ!

    ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ಯೋಗಶಿಕ್ಷಕನ ಬರ್ಬರ ಹತ್ಯೆ!

    ಹೈದರಾಬಾದ್: ಯೋಗ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳಿಬ್ಬರು ಮನಸೋ ಇಚ್ಚೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ ಭಯಾನಕ ಘಟನೆ ನಡೆದಿದೆ.

    ಯೋಗ ಮಾಸ್ಟರ್ ವೆಂಕಟರಮಣನ್ ಕೊಲೆಯಾದ ವ್ಯಕ್ತಿ. ಶುಕ್ರವಾರ ರಾತ್ರಿ ಸುಮಾರು 10.11ರ ವೇಳೆಗೆ ವಿಶಾಖಪಟ್ಟಣ ನಗರದ ವೂಡ ಕಾಲೋನಿಯಲ್ಲಿ ವೆಂಕಟರಮಣನ್ ಕೊಲೆ ನಡೆದಿದೆ. ವೆಂಕಟರಮಣನ್ ಕೊಲೆಯ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ವಿಡಿಯೋದಲ್ಲಿ ಏನಿದೆ?: ಮೊದಲಿಗೆ ವೆಂಕಟರಮಣನ್ ಒಬ್ಬ ವ್ಯಕ್ತಿಯ ಜೊತೆ ಕಾಣಿಸಿಕೊಳ್ಳುತ್ತಾರೆ. ಕ್ಷಣಾರ್ಧದಲ್ಲಿ ವೆಂಕಟರಮಣನ್ ಜೊತೆಗಿರುವ ವ್ಯಕ್ತಿ ಅವಸರವಾಗಿ ಮುಂದೆ ಹೋಗುತ್ತಾನೆ. ರಸ್ತೆಯಲ್ಲಿ ಒಂಟಿಯಾಗಿ ವೆಂಕಟರಮಣನ್ ನಿಂತಾಗ ಹಿಂದಿನಿಂದ ಬಂದ ದುಷ್ಕರ್ಮಿ ತನ್ನ ಕೈಯಲ್ಲಿರುವ ಕಬ್ಬಿಣದ ರಾಡ್ ನಿಂದ ತಲೆಯ ಭಾಗಕ್ಕೆ ಹಲ್ಲೆ ಮಾಡುತ್ತಾನೆ. ಹಲ್ಲೆಗೊಳಗಾದ ವೆಂಕಟರಮಣನ್ ಸ್ಥಳದಲ್ಲೇ ಕುಸಿದು ಬೀಳುತ್ತಾರೆ. ಕೂಡಲೇ ಈ ಮೊದಲು ವೆಂಕರಮಣನ್ ಜೊತೆಗಿದ್ದ ವ್ಯಕ್ತಿ ಬಂದು, ಅವನು ಕೂಡ ಹಲ್ಲೆ ಮಾಡುತ್ತಾನೆ. ಹೀಗೆ ಇಬ್ಬರು ದುಷ್ಕರ್ಮಿಗಳು ಮೂರು ಬಾರಿ ಹಲ್ಲೆ ನಡೆಸಿದ್ದಾರೆ.

    ಈ ಸಂಬಂಧ ನಗರದ ವಿಮಾನ ನಿಲ್ದಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ವಿಶೇಷ ಜಾಲ ಬೀಸಿದ್ದಾರೆ. 2017ರಲ್ಲಿ ವಿಶಾಖಪಟ್ಟಣ ನಗರವೊಂದರಲ್ಲಿಯೇ 40 ಕೊಲೆಗಳು ನಡೆದಿವೆ ಎಂದು ಅಂಕಿ ಅಂಶಗಳು ಹೇಳುತ್ತವೆ. 2018 ಜನವರಿ ಒಂದೇ ತಿಂಗಳಲ್ಲಿ 4 ಕೊಲೆಗಳು ನಡೆದಿವೆ.

    https://www.youtube.com/watch?v=Mracbur3XWQ

  • ಸ್ವಚ್ಚ ರೈಲ್ವೆ ನಿಲ್ದಾಣಗಳ ಪಟ್ಟಿ ಪ್ರಕಟ: ವಿಶಾಖಪಟ್ಟಣ ಫಸ್ಟ್, ದರ್ಭಾಂಗ್ ಲಾಸ್ಟ್, ಬೆಂಗಳೂರು?

    ಸ್ವಚ್ಚ ರೈಲ್ವೆ ನಿಲ್ದಾಣಗಳ ಪಟ್ಟಿ ಪ್ರಕಟ: ವಿಶಾಖಪಟ್ಟಣ ಫಸ್ಟ್, ದರ್ಭಾಂಗ್ ಲಾಸ್ಟ್, ಬೆಂಗಳೂರು?

    ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣ ರೈಲು ನಿಲ್ದಾಣ ದೇಶದಲ್ಲೇ ಅತ್ಯಂತ ಸ್ವಚ್ಛ ರೈಲು ನಿಲ್ದಾಣ ಎಂಬ ಹೆಗ್ಗಳಿಕಗೆ ಪಾತ್ರವಾಗಿದ್ದರೆ, ಬಿಹಾರದ ದರ್ಭಂಗ್ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

    ದೇಶದ 407 ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಯನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಕಟಿಸಿದ್ದಾರೆ. ನಮ್ಮ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಪಡೆದುಕೊಂಡಿದೆ. `ಎ’ ಕೆಟಗಿರಿಯಲ್ಲಿರುವ ರಾಜ್ಯದ ರಾಯಚೂರು ನಿಲ್ದಾಣ 66 ನೇ ಸ್ಥಾನದಲ್ಲಿದೆ. ಕಳೆದ ಬಾರಿ ಇದೇ ರಾಯಚೂರು ನಿಲ್ದಾಣ 330ನೇ ಸ್ಥಾನವನ್ನು ಹೊಂದಿತ್ತು.

    ಸ್ವಚ್ಛ ರೈಲು ಅಭಿಯಾನದ ಅಡಿಯಲ್ಲಿ ರೈಲ್ವೆ ಇಲಾಖೆ ದೇಶದ ಸ್ವಚ್ಛ ರೈಲು ನಿಲ್ದಾಣಗಳ ಸಮೀಕ್ಷೆ ನಡೆಸಲಾಗಿದೆ. ದೇಶಾದ್ಯಂತ ಅತಿ ಹೆಚ್ಚು ಕಾರ್ಯನಿರ್ವಹಿಸುವ 75 ರೈಲು ನಿಲ್ದಾಣಗಳ ಪೈಕಿ ವಿಶಾಖಪಟ್ಟಣ ರೈಲ್ವೆ ನಿಲ್ದಾಣ ಅತ್ಯಂತ ಸ್ವಚ್ಛ ರೈಲು ನಿಲ್ದಾಣವಾಗಿದ್ದು, ಸಿಕಂದರಾಬಾದ್ ಮತ್ತು ಜಮ್ಮು-ಕಾಶ್ಮೀರ ರೈಲು ನಿಲ್ದಾಣ ಕ್ರಮವಾಗಿ 2 ಮತ್ತು 3ನೇ ಸ್ಥಾನವನ್ನು ಪಡೆದಿವೆ.

    ರೈಲ್ವೆ ನಿಲ್ದಾಣಗಳನ್ನು ಎ1, ಎ, ಬಿ, ಸಿ., ಡಿ, ಇ ಮತ್ತು ಎಫ್ ಎಂದು ವರ್ಗಿಕರಿಸಲಾಗಿದೆ. ವಾರ್ಷಿಕವಾಗಿ 50 ಕೋಟಿ ರೂ. ಗಳಿಸುವ ನಿಲ್ದಾಣಗಳು ಎ1 ವಿಭಾಗದಲ್ಲಿ ಬರುತ್ತವೆ. ವಾರ್ಷಿಕವಾಗಿ 6 ರಿಂದ 50 ಕೋಟಿ ರೂ. ಗಳಿಸುವ ನಿಲ್ದಾಣಗಳು `ಎ’ ವಿಭಾಗದಲ್ಲಿ ಸೇರ್ಪಡೆಯಾಗುತ್ತವೆ. ಇನ್ನು ಉಳಿದ ಸಬ್ ಅರ್ಬನ್ ರೈಲ್ವೆ ನಿಲ್ದಾಣಗಳು `ಸಿ’ ವಿಭಾಗದಲ್ಲಿ ಬರುತ್ತವೆ. ಉಳಿದ ಹಾಲ್ಟ್ ಸ್ಟೇಶ್‍ನ್‍ಗಳು `ಎಫ್’ ವಿಭಾಗದಲ್ಲಿ ಸೇರುತ್ತದೆ.

    ಒಟ್ಟು 75 ರೈಲು ನಿಲ್ದಾಣಗಳು `ಎ1′ ವರ್ಗದಲ್ಲಿವೆ. 332 ರೈಲು ನಿಲ್ದಾಣಗಳು `ಎ’ ವಿಭಾಗದಲ್ಲಿ ಬರುತ್ತವೆ. ಈ 332 ನಿಲ್ದಾಣಗಳಲ್ಲಿ ಪಂಜಾಬ್ ರಾಜ್ಯದ ಬಿಯಾಸ್ ರೈಲು ನಿಲ್ದಾಣ ಸ್ವಚ್ಛತೆಯಲ್ಲಿ ಮೊದಲ ಸ್ಥಾನದಲ್ಲಿದೆ. ಬಿಹಾರ ರಾಜ್ಯದ ಜೊಗ್ಬನಿ ನಿಲ್ದಾಣ ಕೊನೆಯ ಸ್ಥಾನದಲ್ಲಿದೆ.