Tag: viral

  • ರೋಡ್‍ಗಿಳಿದ ಸಿಂಹಿಣಿಯನ್ನು ಕಂಡು ಕಕ್ಕಾಬಿಕ್ಕಿ ಓಡಿದ ಗ್ರಾಮಸ್ಥರು

    ರೋಡ್‍ಗಿಳಿದ ಸಿಂಹಿಣಿಯನ್ನು ಕಂಡು ಕಕ್ಕಾಬಿಕ್ಕಿ ಓಡಿದ ಗ್ರಾಮಸ್ಥರು

    ಗಾಂಧಿನಗರ: ಮೃಗಾಲಯದಲ್ಲಿ ಬೋನಿನಲ್ಲಿಟ್ಟ ಸಿಂಹ/ಸಿಂಹಿಣಿಗಳನ್ನು ಹತ್ತಿರದಿಂದ ಕಂಡಾಗಲೇ ಕೆಲವರು ಹೆದರುತ್ತಾರೆ. ಹೀಗಿರುವಾಗ ರಾಜರೋಷವಾಗಿ ಸಿಂಹಿಣಿಯೊಂದು ರಸ್ತೆಗಿಳಿದು ಗ್ರಾಮಸ್ಥರನ್ನು ಬೆಚ್ಚಿಬೀಸಿರುವ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.

    ರಾತ್ರಿ ಹೊತ್ತು ಕಾಡು ಪ್ರದೇಶದಲ್ಲಿ ಹಾದು ಹೋಗುವ ರಸ್ತೆಗಳ ಮೇಲೆ ಸಿಂಹ, ಹುಲಿ ಹಾಗೂ ಇತರೆ ಕಾಡು ಪ್ರಾಣಿಗಳು ಕಾಣಿಸಿಕೊಳ್ಳೋದು ಸಾಮಾನ್ಯ. ಆದರೆ ಗುಜರಾತ್‍ನ ಮಾಧವ್‍ಪುರದಲ್ಲಿ ಹಾಡಹಗಲೇ ಸಿಂಹಿಣಿಯೊಂದು ಬೀದಿಗಿಳಿದು ಅಡ್ಡಾದಿಡ್ಡಿ ಓಡಾಡಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

    ರಸ್ತೆ ಮೇಲೆ ಸಿಂಹಿಣಿ ಓಡಾಡುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಅವರು ತಮ್ಮ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಇಷ್ಟು ವೇಗವಾಗಿ ಸಿಂಹಿಣಿ ಓಡಿಸಿಕೊಂಡು ಬಂದರೆ ಜಗತ್ತಿನ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ಕೂಡ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬರೆದು ಅಧಿಕಾರಿ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ಮೊದಲು ಗ್ರಾಮಸ್ಥರು ತಮ್ಮ ಪಾಡಿಗೆ ತಾವು ಮಾತನಾಡುತ್ತಾ, ಓಡಾಡುತ್ತಾ ನಿಂತಿರುತ್ತಾರೆ. ಇದೇ ವೇಳೆ ವೇಗವಾಗಿ ಓಡಿಬಂದ ಸಿಂಹಿಣಿ ಗ್ರಾಮಕ್ಕೆ ಎಂಟ್ರಿಕೊಡುತ್ತೆ. ಸಿಂಹಿಣಿಯನ್ನು ಕಂಡ ತಕ್ಷಣ ಗ್ರಾಮಸ್ಥರು ಎದ್ನೋ, ಬಿದ್ನೋ ಎಂದು ಓಡಿ ಹೋಗುತ್ತಿರುವ ದೃಶ್ಯ, ಸಿಂಹಿಣಿ ವೇಗವಾಗಿ ಜನರ ಮಧ್ಯೆ ಓಡಿ ಹೋದ ದೃಶ್ಯಗಳು ಸೆರೆಯಾಗಿದೆ.

  • ಪ್ರತಾಪ್ ಸಿಂಹಗೆ ಕೊಡಗಿನ ಬಾಲಕಿ ಬರೆದ ಭಾವನಾತ್ಮಕ ಪತ್ರ ವೈರಲ್

    ಪ್ರತಾಪ್ ಸಿಂಹಗೆ ಕೊಡಗಿನ ಬಾಲಕಿ ಬರೆದ ಭಾವನಾತ್ಮಕ ಪತ್ರ ವೈರಲ್

    ಮಡಿಕೇರಿ: ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯ ಪರಿಸರದ ಮೇಲೆ ನಡೆಯುತ್ತಿರುವ ಶೋಷಣೆ, ಅದರಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕೊಡಗಿನ ಪುಟಾಣಿಯೊಬ್ಬಳು ಸಂಸದ ಪ್ರತಾಪ್ ಸಿಂಹ ಅವರಿಗೆ ಬರೆದಿರುವ ಭಾವನಾತ್ಮಕ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಪತ್ರಕ್ಕೆ ಪ್ರತಾಪ್ ಸಿಂಹ ಕೂಡ ಉತ್ತರ ಕೊಟ್ಟಿದ್ದು, ಬಾಲಕಿಯ ಸಾಮಾಜಿಕ ಕಳಕಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. 2005ರ ತನಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇರಲಿಲ್ಲ. ಆದರೂ ಕೊಡಗಿನವರು ಚೆನ್ನಾಗಿಯೇ ಇದ್ದರು. ಆದರೆ ನಂತರ ಬಂದಿರುವ ಯೋಜನೆಗಳು ನಮ್ಮನ್ನು ಕೊಲ್ಲುತ್ತಿವೆ ಎನ್ನುವ ಅರ್ಥದಲ್ಲಿ ಪತ್ರ ಬರೆಯಲಾಗಿದೆ. ನೀವು ಒಬ್ಬ ಮಗಳ ತಂದೆ, ನಾನು ಒಬ್ಬ ತಂದೆಯ ಮಗಳು ಎನ್ನುತ್ತಾ ರಾಷ್ಟ್ರೀಯ ಹೆದ್ದಾರಿ ಕೊಡಗಿಗೆ ಬರುವುದರಿಂದ ಜಿಲ್ಲೆಯ ಪರಿಸರಕ್ಕೆ ಮಾರಕವಾಗುತ್ತದೆಯೇ ಹೊರತು ಇಲ್ಲಿನವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾಳೆ.

    ಯಾರ್ಯಾರು? ಯಾವ್ಯಾವ? ರೀತಿಯಲ್ಲಿ ಜಿಲ್ಲೆಗೆ ಮಾರಕವಾಗಲಿದ್ದಾರೆ ಎನ್ನುವುದನ್ನೂ ಬಾಲಕಿ ವಿವರಿಸಿದ್ದಾಳೆ. ಶೇ. 18ರಷ್ಟು ಮಂದಿ ಪ್ರವಾಸಿಗರಿಗೋಸ್ಕರ ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿಯೇ ಜಿಲ್ಲೆಯಲ್ಲಿ ಅರಣ್ಯ ನಾಶ ಆಗುತ್ತಿದೆ. ಜಿಲ್ಲೆಯ ಮಳೆಯ ಪ್ರಮಾಣ ಕುಸಿತಕ್ಕೆ ಕಾರಣವಾಗುತ್ತಿದೆ. ವಾರ್ಷಿಕ ಸರಾಸರಿ 220 ಇಂಚು ಮಳೆಯಾಗುತ್ತಿದ್ದಲ್ಲಿ ಈಗ 170 ಇಂಚು ಮಳೆಯಾಗುತ್ತಿದೆ. ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಅಪರೂಪದ ಪ್ರಾಣಿ, ಪಕ್ಷಿಗಳು ಕಣ್ಮರೆಯಾಗುತ್ತಿದೆ ಎಂದು ಬಾಲಕಿ ಪತ್ರದಲ್ಲಿ ಹೇಳಿದ್ದಾಳೆ.

    ಜಿಲ್ಲೆಯ ಹವಾಮಾನದಲ್ಲಿ ಬದಲಾವಣೆಗಳು ಕಂಡುಬರುತ್ತಿದೆ. ಕೊಡಗು ಪ್ಲಾಸ್ಟಿಕ್‍ಮಯ ಆಗುತ್ತಿದೆ ಎಂದು ಆತಂಕ ತೋಡಿಕೊಂಡಿದ್ದಾಳೆ. ಜಿಲ್ಲೆಯ ಶೇ. 82ರಷ್ಟು ಮಂದಿ ಪಶ್ಚಿಮಘಟ್ಟದ ಕಾಡು, ಕಾವೇರಿ ನದಿಯನ್ನು ರಕ್ಷಿಸುವ ವ್ಯವಸಾಯವನ್ನೇ ನಂಬಿಕೊಂಡಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ.

    ಬಾಲಕಿಯ ಮನವಿಗೆ ಪ್ರತಾಪ್ ಸಿಂಹ ಹೇಳಿದ್ದೇನು?
    ಬಾಲಕಿಯ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಅವರು, ನನ್ನ ಪ್ರೀತಿಯ ರಾಜ್‍ಕುಮಾರಿ ನೀನು ಈ ದೇಶದ ಭವಿಷ್ಯ. ಜನಪ್ರತಿನಿಧಿಯಾಗಿ ನಿನ್ನ ಭವಿಷ್ಯವನ್ನು ರಕ್ಷಿಸುವುದು ನನ್ನ ಕರ್ತವ್ಯ. ನಾನು ಈ ಬಗ್ಗೆ ವಿವರಣೆಯನ್ನು ನೀಡುತ್ತೇನೆ. ಆದರೆ ಸದ್ಯ ಸಂಸತ್ ಹಾಗೂ ಕೆಲ ಯೋಜನೆಗಳ ಕೆಲಸದಲ್ಲಿ ಬ್ಯುಸಿ ಇದ್ದೇನೆ. ನನಗೆ ಪ್ರತಿಕ್ರಿಯಿಸಲು ಒಂದೆರೆಡು ದಿನ ಸಮಯ ಕೊಡು. ಫೇಸ್‍ಬುಕ್ ಲೈವ್ ಬಂದು ಉತ್ತರಿಸಲಾ ಅಥವಾ ಬರವಣೆಗೆ ರೂಪದಲ್ಲಿ ಪ್ರತಿಕ್ರಿಯಿಸಲಾ ಎಂದು ಬರೆದು ಬಾಲಕಿ ಪತ್ರ ಹಿಡಿದು ನಿಂತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

  • ಬ್ಯಾಟಿಂಗ್, ಕೀಪಿಂಗ್ ಆಯ್ತು ಈಗ ಪಿಚ್ ಕೆಲಸಕ್ಕೂ ಸೈ – ರೋಲರ್ ಓಡಿಸಿದ ಕ್ಯಾಪ್ಟನ್ ಕೂಲ್

    ಬ್ಯಾಟಿಂಗ್, ಕೀಪಿಂಗ್ ಆಯ್ತು ಈಗ ಪಿಚ್ ಕೆಲಸಕ್ಕೂ ಸೈ – ರೋಲರ್ ಓಡಿಸಿದ ಕ್ಯಾಪ್ಟನ್ ಕೂಲ್

    ರಾಂಚಿ: ಭಾರತ ತಂಡದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ ಅವರು ಸ್ಟೇಡಿಯಂನಲ್ಲಿ ಪಿಚ್ ರೋಲರ್ ಡ್ರೈವ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

    2019 ವಿಶ್ವಕಪ್‍ನ ನಂತರ ಕ್ರಿಕೆಟ್‍ನಿಂದ ಕೊಂಚ ದೂರ ಉಳಿದಿರುವ ಧೋನಿ ಅವರು, ತನ್ನ ಹುಟ್ಟೂರು ರಾಂಚಿಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಿಚ್ ಅನ್ನು ಸಮತಟ್ಟಾಗಿಸಲು ಇರುವ ಪಿಚ್ ರೋಲರ್ ವಾಹನವನ್ನು ಓಡಿಸಿದ್ದಾರೆ. ಇದನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಧೋನಿ ಸರಳತೆಗೆ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಧೋನಿ ಅವರ ಫ್ಯಾನ್ಸ್ ಪೇಜ್‍ವೊಂದು ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, 12 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಧೋನಿ ಅವರು, ಪಿಚ್ ರೋಲರ್ ಅನ್ನು ಹಿಂದಕ್ಕೆ ಮುಂದಕ್ಕೆ ಓಡಿಸಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ಅವರ ಫ್ಯಾನ್ಸ್ ಪೇಜ್ ಒನ್ ಮ್ಯಾನ್ ಡಿಫರೆಂಟ್ ರೋಲ್ಸ್ ಎಂದು ಬರೆದುಕೊಂಡಿದ್ದಾರೆ. ಧೋನಿ ಅವರು ರಾಂಚಿ ಮೈದಾನದಲ್ಲಿ ದಿನ ಕಾಣಿಸಿಕೊಳ್ಳುತ್ತಿದ್ದು, ರಣಜಿ ಆಟಗಾರರ ಜೊತೆ ಅಭ್ಯಾಸ ಮಾಡುತ್ತಿದ್ದಾರೆ.

    ಮಾರ್ಚ್‍ನಲ್ಲಿ ಆರಂಭವಾಗುವ ಐಪಿಎಲ್ ಅಲ್ಲಿ ಧೋನಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಚೆನ್ನೈ ತಂಡದ ಸಿಇಓ ವಿಶ್ವನಾಥನ್, ಧೋನಿ ಅವರು ಮಾರ್ಚ್ 3 ರಂದು ಚೆನ್ನೈಗೆ ಬರಲಿದ್ದಾರೆ. ನಂತರ ಅವರು ಮಾರ್ಚ್ ಮೂರರಿಂದ ಎಂ.ಎ ಚಿದಂಬರಂ ಮೈದಾನದಲ್ಲಿ ಸುರೇಶ್ ರೈನಾ ಅವರ ಜೊತೆಗೆ ಅಭ್ಯಾಸ ಮಾಡಲಿದ್ದಾರೆ. ಈ ಇಬ್ಬರನ್ನು ಬಿಟ್ಟರೆ ಬೇರೆ ಯಾವುದೇ ಅಂತರಾಷ್ಟ್ರೀಯ ಆಟಗಾರರು ಬರುತ್ತಿಲ್ಲ ಎಂದು ಮಾಹಿತಿ ನೀಡಿದ್ದರು.

    2019 ರ ವಿಶ್ವಕಪ್‍ನಲ್ಲಿ ಸೆಮಿಫೈನಲ್‍ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತ ನಂತರ ಧೋನಿ ಅವರು ಕ್ರಿಕೆಟ್‍ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮಾರ್ಚ್ ನಲ್ಲಿ ಆರಂಭವಾಗುತ್ತಿರುವ ಐಪಿಲ್‍ನಲ್ಲಿ ಅವರನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  • ‘ನಿನಗೆ ಉಜ್ವಲ ಭವಿಷ್ಯವಿರಲಿ’ – ಮರಣ ಪ್ರಮಾಣ ಪತ್ರದಲ್ಲಿ ವಿಶ್ ಮಾಡಿದ ಊರಿನ ಮುಖ್ಯಸ್ಥ

    ‘ನಿನಗೆ ಉಜ್ವಲ ಭವಿಷ್ಯವಿರಲಿ’ – ಮರಣ ಪ್ರಮಾಣ ಪತ್ರದಲ್ಲಿ ವಿಶ್ ಮಾಡಿದ ಊರಿನ ಮುಖ್ಯಸ್ಥ

    ಲಕ್ನೋ: ಮರಣ ಪ್ರಮಾಣ ಪತ್ರದಲ್ಲಿ ನಿನಗೆ ಉಜ್ವಲ ಭವಿಷ್ಯವಿರಲಿ ಎಂದು ಊರಿನ ಮುಖ್ಯಸ್ಥನೋರ್ವ ಬರೆದಿರುವ ಡೆತ್ ಸರ್ಟಿಫಿಕೇಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಿರ್ವರಿಯಾ ಎಂಬ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ವೃದ್ಧ ಲಕ್ಷ್ಮಿ ಶಂಕರ್ ಕಳೆದ ತಿಂಗಳ ಜನವರಿ 22 ರಂದು ದೀರ್ಘಕಾಲದ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ್ದರು. ಇವರ ಡೆತ್ ಸರ್ಟಿಫಿಕೇಟ್ ನೀಡಿದ ಗ್ರಾಮದ ಮುಖ್ಯಸ್ಥ ನಿನಗೆ ಉಜ್ವಲ ಭವಿಷ್ಯವಿರಲಿ ಎಂದು ಬರೆದ್ದಾನೆ.

    ಲಕ್ಷ್ಮಿ ಶಂಕರ್ ಸಾವಿನ ನಂತರ ಅವರ ಮಗ ಯಾವುದೋ ಅರ್ಥಿಕ ವಹಿವಾಟಿಗೆ ಬೇಕೆಂದು ಮರಣ ಪ್ರಮಾಣ ಪತ್ರ ಪಡೆಯಲು ಗ್ರಾಮದ ಮುಖ್ಯಸ್ಥ ಬಾಬುಲಾಲ್ ಬಳಿ ಹೋಗಿದ್ದಾರೆ. ಈ ವೇಳೆ ಮರಣ ಪ್ರಮಾಣ ಪತ್ರವನ್ನು ಬರೆದುಕೊಟ್ಟಿರುವ ಬಾಬುಲಾಲ್, ಕೊನೆಯುಲ್ಲಿ ನಾನು ಸಾವನ್ನಪ್ಪಿದ ವ್ಯಕ್ತಿಗೆ ಉಜ್ವಲ ಭವಿಷ್ಯವಿರಲಿ ಎಂದು ಬಯಸುತ್ತೇನೆ ಎಂದು ಹಿಂದಿಯಲ್ಲಿ ಬರೆದುಕೊಟ್ಟಿದ್ದಾನೆ.

    ಬಾಬುಲಾಲ್ ಬರೆದುಕೊಟ್ಟಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರವನ್ನು ತಿಳಿದ ಬಾಬುಲಾಲ್ ಮತ್ತೆ ಲಕ್ಷ್ಮಿ ಶಂಕರ್ ಪುತ್ರನನ್ನು ವಾಪಸ್ ಕರೆಸಿ ಕ್ಷೆಮೆ ಕೇಳಿ ಹೊಸ ಮರಣ ಪ್ರಮಾಣ ಪತ್ರವನ್ನು ಬರೆದು ಕೊಟ್ಟುಕಳುಹಿಸಿದ್ದಾನೆ.

  • ಕೊಲೆ ಬೆದರಿಕೆ ಹಾಕಿದವರ ಬಗ್ಗೆ ಕನಿಕರ ಇದೆ: ಯು.ಟಿ.ಖಾದರ್

    ಕೊಲೆ ಬೆದರಿಕೆ ಹಾಕಿದವರ ಬಗ್ಗೆ ಕನಿಕರ ಇದೆ: ಯು.ಟಿ.ಖಾದರ್

    ಮಂಗಳೂರು: ಸಿಎಎ ಪರ ಮಂಗಳೂರಿನಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಕೊಲೆ ಬೆದರಿಕೆ ಘೋಷಣೆ ಬಗ್ಗೆ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದು, ಘೋಷಣೆ ಕೂಗಿದವರ ಬಗ್ಗೆ ಕನಿಕರ ಇದೆ ಎಂದಿದ್ದಾರೆ.

    ಅವರ ವಿರುದ್ಧವಾಗಿ ಯಾವುದೇ ಕೇಸ್ ನೀಡುವುದಿಲ್ಲ. ಕೊಲೆ ಬೆದರಿಕೆಯ ಘೋಷಣೆ ಕೂಗಿದವರು ಯಾರೂ ಜಿಲ್ಲೆಯವರಲ್ಲ. ಎಲ್ಲರೂ ಹೊರಗಿನಿಂದ ಬಂದರವರು. ಅವರೆಲ್ಲಾ ಮಲಯಾಳಂ ಮಾತನಾಡುತ್ತಿದ್ದರು. ಅವರನ್ನು ಜೈಲಿಗೆ ಕಳುಹಿಸೋದು ದೊಡ್ಡ ವಿಷಯವೇನಲ್ಲ. ಆದರೆ ಅವರ ಮನೆಯವರ ಪರಿಸ್ಥಿತಿ ಬಗ್ಗೆ ಆಲೋಚನೆ ಮಾಡಿ ದೂರು ನೀಡೋ ವಿಷಯಕ್ಕೆ ಹೋಗೋದಿಲ್ಲ ಎಂದು ಯುಟಿ ಖಾದರ್ ಹೇಳಿದ್ದಾರೆ.

    ಇದೇ ವೇಳೆ ಸಿಎಎ ಸಮಾವೇಶದ ಬಗ್ಗೆ ಟೀಕಿಸಿದ ಖಾದರ್, ಸಮಾವೇಶದಲ್ಲಿ ಯಾರ ಕೈಯಲ್ಲೂ ರಾಷ್ಟ್ರಧ್ವಜ ಇರಲಿಲ್ಲ. ಸಮಾವೇಶ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂದು ಹೇಳಿದ್ದಾರೆ.

    ನಡೆದಿದ್ದೇನು?
    ಮಂಗಳೂರಿನ ಕೂಳೂರು ಗೋಲ್ಡ್ ಫಿಂಚ್ ಸಿಟಿಯ ಮೈದಾನದಲ್ಲಿ ಸೋಮವಾರ ನಡೆದ ಸಿಎಎ ಪರ ಜನಜಾಗೃತಿ ಸಭೆಗೆ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರ ಯುವಕರ ಗುಂಪೊಂದು ಘೋಷಣೆ ಕೂಗುತ್ತಿದ್ದು, ಖಾದರ್ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದಾರೆ. ಮಲಯಾಳಂ ಭಾಷೆಯಲ್ಲಿ ‘ನಾಯಿಯ ಮಗ ಖಾದರ್, ನಮ್ಮ ಸುದ್ದಿಗೆ ಬರಬೇಡ’. ‘ನಮ್ಮ ಸುದ್ದಿಗೆ ಬಂದರೆ, ಕೈ ಕಾಲು ಎರಡೂ ಕಟ್’. ‘ಬೇಕಾಗಿದ್ದಲ್ಲಿ ತಲೆಯನ್ನೂ ಕಡಿಯುವೆವು’ ಈ ರೀತಿ ಬೆದರಿಕೆ ಹಾಕುವ ಘೋಷಣೆ ಹಾಕಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್ ಆಗಿದೆ.

  • ರಾಧಿಕಾ ಜೊತೆ ಹಿಂದಿ ಹಾಡಿಗೆ ರೋಮ್ಯಾನ್ಸ್ ಮಾಡಿದ ರಾಕಿಭಾಯ್: ವಿಡಿಯೋ

    ರಾಧಿಕಾ ಜೊತೆ ಹಿಂದಿ ಹಾಡಿಗೆ ರೋಮ್ಯಾನ್ಸ್ ಮಾಡಿದ ರಾಕಿಭಾಯ್: ವಿಡಿಯೋ

    ಬೆಂಗಳೂರು: ಕೆಜಿಎಫ್ ಸ್ಟಾರ್ ರಾಕಿಭಾಯ್ ಯಶ್ ತನ್ನ ಪತ್ನಿ ರಾಧಿಕಾ ಪಂಡಿತ್ ಜೊತೆ ಹಿಂದಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕೇವಲ 15 ಸೆಕೆಂಡ್ ಇರುವ ವಿಡಿಯೋದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಪತ್ನಿ ಜೊತೆಗೆ ಹಿಂದಿ ಚಿತ್ರ ಆಶಿಕಿ-2 ಚಿತ್ರದ ಬಹುಜನಪ್ರಿಯ ಗೀತೆ ತುಮ್ ಹೀ ಹೋ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಯಶ್ ದಂಪತಿ ಮಾಡಿರುವ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    https://www.instagram.com/p/B7XUT3KAayZ/?utm_source=ig_embed&utm_campaign=embed_video_watch_again

    ವೈರಲ್ ಆಗಿರುವ ಈ ವಿಡಿಯೋದಲ್ಲಿ ಯಶ್ ಅವರು ನೀಲಿ ಬಣ್ಣದ ಸೂಟ್ ಧರಿಸಿದ್ದು, ರಾಧಿಕಾ ಪಂಡಿತ್ ಅವರು ಪಿಂಕ್ ಬಣ್ಣದ ಗೌನ್ ತೊಟ್ಟು ಹಿಂದಿ ಹಾಡಿಗೆ ನೃತ್ಯ ಮಾಡಿದ್ದಾರೆ. ಯಶ್ ಮತ್ತೆ ರಾಧಿಕಾ ಡ್ಯಾನ್ಸ್ ಮಾಡುತ್ತಿರುವುದನ್ನು ಜೊತೆಯಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಯಶ್ ಅಭಿಮಾನಿಗಳು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಸಧ್ಯ ಕೆ.ಜಿ.ಎಫ್-2 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಯಶ್ ಕಳೆದ ವಾರವಷ್ಟೇ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಬೆಂಗಳೂರಿನ ನಾಯಂಡಹಳ್ಳಿ ಸಿಗ್ನಲ್ ಬಳಿ ನಂದಿ ಲಿಂಕ್ ಗ್ರೌಂಡ್‍ನಲ್ಲಿ ನಡೆದಿದ್ದ ಯಶ್ ಹುಟ್ಟುಹಬ್ಬಕ್ಕೆ 5000 ಕೆಜಿ ಕೇಕ್ ತಯಾರಿಸಲಾಗಿತ್ತು. ರಾತ್ರಿ ಪತ್ನಿ ರಾಧಿಕಾ ಜೊತೆಗೆ ಆಗಮಿಸಿದ ಯಶ್ 5000 ಕೆಜಿ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅಲಹಬಾದ್‍ನಿಂದ ಆಗಮಿಸಿದ ವರ್ಲ್ಡ್ ರೆಕಾರ್ಡ್ ಕಮಿಟಿ ಅಧ್ಯಕ್ಷ ಪವನ್ ಸಾಲಂಗಿ ಐದು ಸಾವಿರ ಕೆಜಿ ಕೇಕ್ ಪರಿಶೀಲನೆ ನಡೆಸಿದ್ದರು.

    ಇದೇ ವೇಳೆ ಮಾತಾಡಿದ್ದ ಅಧ್ಯಕ್ಷ ಪವನ್ ಸಾಲಂಗಿ, ಇದು ಸೌತ್ ಇಂಡಿಯಾದಲ್ಲೇ ಮೊದಲು ಮತ್ತು ಇಲ್ಲಿಯವರೆಗೆ ಯಾವುದೇ ಸೆಲೆಬ್ರಿಟಿ ಐದು ಸಾವಿರ ಕೆಜಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡಿಲ್ಲ. ಹಾಗಾಗಿ ಇದು ವಿಶ್ವ ದಾಖಲೆ ಪಟ್ಟಿಗೆ ಸೇರಲಿದೆ ಎಂದು ಹೇಳಿದ್ದರು.

    ಹುಟ್ಟುಹಬ್ಬದ ದಿನ ಕೇಕ್ ಕಟ್ ಮಾಡಿದ ನಂತರ ಮಾತನಾಡಿದ್ದ ಯಶ್, `ಕೆಜಿಎಫ್ 2′ ಚಿತ್ರದ ಒಂದು ಡೈಲಾಗ್ ನಿಮಗೋಸ್ಕರ ಹೇಳುತ್ತೇನೆ. ಸಿನಿಮಾದಲ್ಲಿ ನೋಡಿದ್ದರೆ ಮಜಾ ಬಂದಿರೋದು. ಆದರೆ ನಿಮಗೋಸ್ಕರ ಸಣ್ಣದಾಗಿ ಹೇಳುತ್ತೇನೆ ಎಂದು ಚಿತ್ರದ ಡೈಲಾಗ್ ಹೇಳಿದ್ದರು.

    “ಏನಂದೆ ಒಂದು ಹೆಜ್ಜೆ ಇಟ್ಕೊಂಡು ಬಂದೋನು ಅಂತ ಹೇಳ್ದ. ಕರೆಕ್ಟ್, ಗಡಿಯಾರದಲ್ಲಿ ಒಂದು ಗಂಟೆಯಾಗಬೇಕು ಅಂದರೆ ದೊಡ್ಡ ಮುಳ್ಳು 60 ಹೆಜ್ಜೆ ಇಡಬೇಕು. ಆದರೆ ಚಿಕ್ಕ ಮುಳ್ಳು ಒಂದು ಹೆಜ್ಜೆ ಇಟ್ಟರೆ ಸಾಕು. ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ. ನಿನ್ನ ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ. ಇನ್ಮೇಲೆಯಿಂದ ಆ ಟೆರಿಟರಿ ನಂದು, ಈ ಟೆರಿಟರಿ ನಿಂದು ಅನ್ನೋದೆಲ್ಲ ಬಿಟ್ಟುಬಿಡಿ, ವರ್ಲ್ಡ್ ಈಸ್ ಮೈ ಟೆರಿಟರಿ” ಎಂದು ಸಿನಿಮಾದ ಖಡಕ್ ಡೈಲಾಗ್ ಹೇಳಿದ್ದರು. ಈ ಡೈಲಾಗ್ ಹೇಳುತ್ತಿದ್ದಂತೆ ಅಭಿಮಾನಿಗಳು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದರು.

  • ‘ಪಕ್ಕೆಲುಬು’ ವಿಡಿಯೋ ವೈರಲ್ ಮಾಡಿದ್ದ ಶಿಕ್ಷಕ ಅಮಾನತು

    ‘ಪಕ್ಕೆಲುಬು’ ವಿಡಿಯೋ ವೈರಲ್ ಮಾಡಿದ್ದ ಶಿಕ್ಷಕ ಅಮಾನತು

    ಬಳ್ಳಾರಿ: ಶಾಲೆಯ ಮುಗ್ಧ ಬಾಲಕನಿಗೆ ಪಕ್ಕೆಲುಬು ಶಬ್ದವನ್ನು ಉಚ್ಚರಿಸುವಂತೆ ಹೇಳಿಕೊಟ್ಟು, ಬಾಲಕ ಅದನ್ನು ತಪ್ಪು ತಪ್ಪಾಗಿ ಹೇಳುವ ವಿಡಿಯೋ ಮಾಡಿ ವೈರಲ್ ಮಾಡಿದ್ದ ಶಾಲಾ ಶಿಕ್ಷಕ ಕೊನೆಗೂ ಪತ್ತೆಯಾಗಿದ್ದಾನೆ.

    ಹೌದು. ಶಾಲಾ ಬಾಲಕನೋರ್ವ ತೊದಲು ತೊದಲಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ ಚಂದ್ರಶೇಖರಪ್ಪಾ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದರು. ಹೀಗಾಗಿ ಶಿಕ್ಷಕನನ್ನು ತಾಲೂಕಿನ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.

    ಇತ್ತ ವಿಡಿಯೋ ವೈರಲ್ ಆಗುತಿದ್ದಂತೆಯೇ ಶಿಕ್ಷಣ ಸಚಿವರು ಎಚ್ಚೆತ್ತುಕೊಂಡು ಕೂಡಲೇ ಶಿಕ್ಷಕನ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಇಲಾಖೆಗೆ ಸೂಚನೆ ನೀಡಿದ್ದರು. ಸಚಿವರು ನೀಡಿದ್ದ ಆದೇಶದ ಪ್ರತಿ ಸಹ ವೈರಲ್ ಆಗಿತ್ತು. ಹೀಗಾಗಿ ವಿಷಯ ತಿಳಿದು ಹೂವಿನಹಡಗಲಿ ತಾಲೂಕಿನ ಬಿಇಓ ನಾಗರಾಜ್ ಅವರು ಶಿಕ್ಷಕನ ವಿಚಾರಣೆ ನಡೆಸಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಈ ಆದೇಶದ ನಂತರ ಶಿಕ್ಷಕರನ್ನು ಅಮಾನತ್ತಿನ ವಿಚಾರವಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಶಿಕ್ಷಕ ಚಂದ್ರಶೇಖರ್ ಅವರು ತುಂಬಾ ಒಳ್ಳೆಯವರು. ಹೀಗಾಗಿ ಅಮಾನತು ಆದೇಶ ಹಿಪಡೆಯುವಂತೆ ಮನವಿ ಮಾಡಿದ್ದಾರೆ.

  • ಸಲಿಂಗಿಗಳ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ವೈರಲ್

    ಸಲಿಂಗಿಗಳ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ವೈರಲ್

    ತಿರುವನಂತಪುರಂ: ಇತ್ತೀಚೆಗೆ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ಸಖತ್ ಟ್ರೆಂಡ್ ಆಗಿದ್ದು, ಮದುವೆಗೆ ಮುನ್ನ ಫೋಟೋಶೂಟ್ ಮಾಡಿಸಿಕೊಳ್ಳಲು ಅನೇಕ ಜೋಡಿಗಳು ಖುಷಿಪಡುತ್ತಾರೆ. ಹಾಗೆಯೇ ಇತ್ತೀಚೆಗೆ ಕೇರಳದ ಸಲಿಂಗಿ ಜೋಡಿಯೊಂದು ಮಾಡಿಸಿರುವ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಎಲ್ಲೆಡೆ ವೈರಲ್ ಆಗಿದೆ.

    ಕೇರಳ ಮೂಲದ ಸಲಿಂಗ ಜೋಡಿ ಅಬ್ದುಲ್ ರೆಹಿಮ್ ಮತ್ತು ನೆವಿದ್ ಆಂಟೋನಿ ಚುಲ್ಲಿಕಾಲ್ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಜೋಡಿ ನೀಡಿರುವ ರೊಮ್ಯಾಂಟಿಕ್ ಪೋಸ್‍ಗಳು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಸಾಮಾನ್ಯವಾಗಿ ಎಲ್ಲರು ಪ್ರಿ-ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ. ನಮಗೂ ಎಲ್ಲರಂತೆ ಖುಷಿ ಖುಷಿಯಾಗಿ ಮದುವೆ ಆಗಬೇಕು ಎನ್ನುವ ಆಸೆ ಇದೆ. ಅದಕ್ಕೆ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ಮಾಡಿಕೊಂಡಿದ್ದೇವೆ ಎಂದು ಸಲಿಂಗಿಗಳು ಹೇಳಿದ್ದಾರೆ. ಇದನ್ನೂ ಓದಿ: ಪ್ರಿ-ವೆಡ್ಡಿಂಗ್ ಶೂಟ್‍ನಲ್ಲಿ ಕಿಸ್ ಮಾಡೋವಾಗ ಮಗುಚಿದ ದೋಣಿ – ವಿಡಿಯೋ ನೋಡಿ

    ತಮ್ಮ ರೊಮ್ಯಾಂಟಿಕ್ ಪ್ರಿ-ವೆಡ್ಡಿಂಗ್ ಫೋಟೋಗಳನ್ನು ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇವರ ಫೋಟೋಗಳನ್ನು ನೋಡಿ ನೆಟ್ಟಿಗರು ಕೂಡ ಖುಷಿಪಟ್ಟಿದ್ದು, ಜೋಡಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

    ಈ ಸಲಿಂಗ ಜೋಡಿ ತಮ್ಮ ಸಾಕು ನಾಯಿಗಳ ಜೊತೆ ಕೂಡ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಎಲ್ಲಾ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಶೇಷ ಫೋಟೋಶೂಟ್‍ಗೆ ನೆಟ್ಟಿಗರು ಮನಸೋತಿದ್ದಾರೆ.

    ಕಳೆದ 5 ವರ್ಷಗಳಿಂದ ಈ ಜೋಡಿ ಡೇಟಿಂಗ್ ಮಾಡುತ್ತಿದ್ದರಂತೆ. ಆದರೆ 2018ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗ ಕಾಮ ಅಪರಾಧವಲ್ಲ ಎಂದು 377 ವಿಧಿಯನ್ನು ರದ್ದುಗೊಳಿಸಿದ ಬಳಿಕ ಇಬ್ಬರೂ ಮದುವೆಯಾಗಲು ಇಚ್ಛಿಸಿದ್ದಾರೆ. ಈ ಮದುವೆಗೆ ಮನೆಯವರ ಒಪ್ಪಿಗೆ ಇಲ್ಲದಿದ್ದರೂ ಅಬ್ದುಲ್ ಮತ್ತು ನೆವಿದ್ ವಿವಾಹವಾಗುತ್ತಿದ್ದಾರೆ.

    ಈ ಸಲಿಂಗ ಜೋಡಿ ಸದ್ಯದಲ್ಲೇ ಬೆಂಗಳೂರಿನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ, ಆದರೆ ಮದುವೆ ದಿನಾಂಕವನ್ನು ನಿಗದಿಗೊಳಿಸಿಲ್ಲ.

  • ಪುರುಷರು ಮನೆಯಲ್ಲೇ ಇದ್ದರೆ ಮಹಿಳೆಯರು ಸುರಕ್ಷಿತವಾಗಿರುತ್ತಾರೆ – ಮಹಿಳೆಯ ವಿಡಿಯೋ ವೈರಲ್

    ಪುರುಷರು ಮನೆಯಲ್ಲೇ ಇದ್ದರೆ ಮಹಿಳೆಯರು ಸುರಕ್ಷಿತವಾಗಿರುತ್ತಾರೆ – ಮಹಿಳೆಯ ವಿಡಿಯೋ ವೈರಲ್

    ನವದೆಹಲಿ: ಮಹಿಳೆಯರು ಮನೆಯ ಒಳಗಿರುವುದರಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರ ಬದಲಿಗೆ ಪುರುಷರು ಮನೆಯಲ್ಲಿದ್ದರೆ ಅತ್ಯಾಚಾರ ಪ್ರಕರಣಗಳು ನಡೆಯುವುದಿಲ್ಲ ಎಂದು ಮಹಿಳೆಯೊಬ್ಬರು ಪ್ರತಿಭಟಿಸಿ, ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ವಿಡಿಯೋವನ್ನು ನತಾಶಾ ಎಂಬುವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಭಾರತೀಯ ಮಹಿಳೆಯ ಧ್ವನಿ ಇದಾಗಿದೆ. ನಮಗೆ ಪುರುಷರು ಸುರಕ್ಷತೆ ನೀಡುವುದು ಬೇಕಾಗಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪುರುಷರೇ ಕಾರಣ. ನೀವು ಮನೆಯ ಒಳಗಿದ್ದರೆ ಇಡೀ ಜಗತ್ತೇ ಮುಕ್ತವಾಗಿರುತ್ತದೆ ಎಂದು ಮಹಿಳೆ ಹೇಳಿದ್ದಾರೆ. ಇವರ ಹೇಳಿಕೆಯನ್ನು ಎಷ್ಟು ದಿನಗಳ ಕಾಲ ನಾವು ನಿರ್ಲಕ್ಷಿಸಬಹುದು ಎಂದು ನತಾಶಾ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

    ಈ ವಿಡಿಯೋದಲ್ಲಿ ವಯಸ್ಕ ಮಹಿಳೆಯೊಬ್ಬರು ಭಿತ್ತಿ ಪತ್ರ ಹಿಡಿದು ಪ್ರತಿಭಟಿಸಿದ್ದು, ಅದರಲ್ಲಿ ಅವಳು ಅತ್ಯಾಚಾರವಾದಳು, ಅವಳನ್ನು ಅತ್ಯಾಚಾರಗೈದ ಎಂದು ಬರೆದಿದೆ. ಇದರಲ್ಲಿ ಅವಳು ಅತ್ಯಾಚಾರವಾದಳು ಎಂಬ ಸಾಲುಗಳಿಗೆ ತಪ್ಪು ಎಂದು ಚಿಹ್ನೆ ಹಾಕಲಾಗಿದೆ. ಅವಳನ್ನು ಅತ್ಯಾಚಾರಗೈದ ಎಂಬುದಕ್ಕೆ ಸಹಿ ಚಿಹ್ನೆ ಹಾಕಲಾಗಿದೆ. ಅಲ್ಲದೆ ಹ್ಯಾಶ್‍ಟ್ಯಾಗ್‍ನೊಂದಿಗೆ ಚೇಂಜ್ ದಿ ನರೇಟಿವ್ ಎಂದು ಇನ್ನೊಂದು ಭಿತ್ತಿ ಪತ್ರದಲ್ಲಿ ಬರೆಯಲಾಗಿದೆ.

    ಈ ಮೂಲಕ ಮಹಿಳೆಯು ಸಂದೇಶ ರವಾನಿಸಿದ್ದು, ಮಹಿಳೆಯರು ಅತ್ಯಾಚಾರಕ್ಕೊಳಗಾಗುವುದಿಲ್ಲ. ಬದಲಿಗೆ ಅವಳನ್ನು ಅತ್ಯಾಚಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸಂಜೆ 7ರ ನಂತರ ಮಹಿಳೆಯೇ ಯಾಕೆ ಮನೆಯಲ್ಲಿರಬೇಕು? ಪುರುಷರು ಏಕೆ ಇರಬಾರದು ಇದನ್ನು ಸ್ಪಷ್ಟಪಡಿಸಬೇಕು. ಎಲ್ಲ ಪುರುಷರು ಸಂಜೆ 7 ಗಂಟೆಯೊಳಗೆ ಮನೆಗೆ ಸೇರಿ ಬೀಗ ಹಾಕಿಕೊಳ್ಳಿ. ಆಗ ಅತ್ಯಾಚಾರ ಪ್ರಕರಣಗಳು ನಡೆಯುವುದಿಲ್ಲ, ಮಹಿಳೆಯರು ಸುರಕ್ಷಿತವಾಗಿರುತ್ತಾರೆ. ಪೊಲೀಸರು ನಮಗೆ ಸುರಕ್ಷತೆ ನೀಡಲು ಮುಂದಾಗುತ್ತಾರೆ. ಆದರೆ ನಮಗೆ ನೀಡುವ ಬದಲು ನಮ್ಮ ಸಹೋದರರು, ಪುರುಷರಿಗೆ ಸುರಕ್ಷತೆ ನೀಡಬೇಕು. ಏಕೆಂದರೆ ಅವರಿಂದಲೇ ಸಮಸ್ಯೆಯಾಗುತ್ತಿದೆ. ಪುರುಷರು ಮನೆಯ ಒಳಗಡೆ ಇದ್ದರೆ ಇಡೀ ಜಗತ್ತೇ ಮುಕ್ತವಾಗಿರುತ್ತದೆ, ಮಹಿಳೆಗೆ ಯಾವುದೇ ಆತಂಕ ಇರುವುದಿಲ್ಲ ಎಂದು ವಿಡಿಯೋದಲ್ಲಿ ಮಹಿಳೆ ಹೇಳಿದ್ದಾರೆ.

    ಈ ವಿಡಿಯೋ ಇಂಟರ್ ನೆಟ್‍ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಲವರು ಈ ಕುರಿತು ಸಮರ್ಥನೆ ಮಾಡಿಕೊಂಡಿದ್ದು, ಭಾರತದ ಎಲ್ಲ ಮಹಿಳೆಯರ ಭಾವನೆಯನ್ನು ಇವರು ಹೇಳಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಲಾಂಗ್ ಹಿಡಿದು, ಡೈಲಾಗ್ ಹೊಡೆದು ಭರ್ಜರಿ ಸ್ಟೆಪ್ಸ್ ಹಾಕಿದ ವೈದ್ಯ

    ಲಾಂಗ್ ಹಿಡಿದು, ಡೈಲಾಗ್ ಹೊಡೆದು ಭರ್ಜರಿ ಸ್ಟೆಪ್ಸ್ ಹಾಕಿದ ವೈದ್ಯ

    ಚಿಕ್ಕಮಗಳೂರು: ಗೆರೆ ಎಳೆದಾಯ್ತು, ವೃತ್ತ ಬರೆದಾಯ್ತು, ವೃತ್ತದಲ್ಲಿರೋದೆಲ್ಲಾ ನಂದೇ ಎಂದು ಲಾಂಗ್ ಹಿಡಿದು ಚಿಕ್ಕಮಗಳೂರಿನಲ್ಲಿ ವೈದ್ಯರೊಬ್ಬರು ಭರ್ಜರಿ ಡೈಲಾಗ್ ಹೊಡೆಯುತ್ತಾ ಸ್ಟೆಪ್ಸ್ ಹಾಕಿದ್ದಾರೆ.

    ಜಿಲ್ಲೆಯ ಎನ್.ಆರ್ ಪುರದ ಬಾಳೆಹೊನ್ನೂರಿನ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ರಮೇಶ್ ಲಾಂಗ್ ಹಿಡಿದು ಕುಣಿದಿದ್ದಾರೆ. ಶೃಂಗೇರಿಯ ರೋಟರಿ ಕ್ಲಬ್‍ನಲ್ಲಿ ನಡೆದ ಕಲಾ ವೈಭವ ಕಾರ್ಯಕ್ರಮದಲ್ಲಿ ಲಾಂಗ್ ಹಿಡಿದು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಕನ್ನಡದ ‘ಉಗ್ರಂ’ ಚಿತ್ರದ ಡೈಲಾಗ್ ಹೊಡೆದು ವೈದ್ಯ ನಟನೆ ಮಾಡಿದ್ದಾರೆ. ಹಾಗೆಯೇ ‘ವಿಲನ್’ ಚಿತ್ರದ ಅಣ್ಣಾ ನಿನ್ನ ಊರು ಹಾಡಿಗೂ ಭರ್ಜರಿ ಹೆಜ್ಜೆ ಹಾಕಿದ್ದಾರೆ.

    ಲಾಂಗ್ ಹಿಡಿದು ಕುಣಿದ ವೈದ್ಯನ ನೃತ್ಯಕ್ಕೆ ಪ್ರೇಕ್ಷಕರು ಫಿದಾ ಆಗಿಬಿಟ್ಟಿದ್ದಾರೆ. ಈ ವೇಳೆ ಚಪ್ಪಾಳೆ, ಶಿಲ್ಲೆ ಹೊಡೆದು ನೆರೆದಿದ್ದ ಜನರು ವೈದ್ಯನಿಗೆ ಸಾಥ್ ನೀಡಿದ್ದು, ಲಾಂಗಿನೊಂದಿಗೆ ವೈದ್ಯನ ಕುಣಿತದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.