Tag: viral

  • 2 ಕೋಟಿ ವ್ಯೂ, 3 ಲಕ್ಷ ಮಂದಿ ಶೇರ್ ಮಾಡಿರೋ ವಿಮಾನ ಹಾರಿಸುತ್ತಿರೋ ಬಾಲಕನ ವಿಡಿಯೋ ನೋಡಿ

    2 ಕೋಟಿ ವ್ಯೂ, 3 ಲಕ್ಷ ಮಂದಿ ಶೇರ್ ಮಾಡಿರೋ ವಿಮಾನ ಹಾರಿಸುತ್ತಿರೋ ಬಾಲಕನ ವಿಡಿಯೋ ನೋಡಿ

    ಅಬುಧಾಬಿ: 6 ವರ್ಷದ ಬಾಲಕ ಒಂದು ದಿನಕ್ಕೆ ಇತಿಹಾದ್ ಏರ್‍ವೇಸ್ ಕಂಪೆನಿಯ ವಿಮಾನದ ಪೈಲೆಟ್ ಆಗಿ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾನೆ. ಬಾಲಕ ವಿಮಾನವನ್ನು ಹಾರಿಸುತ್ತಿರುವ ವಿಡಿಯೋ ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.

    ಬಾಲಕ ಆದಮ್ ಸಮವಸ್ತ್ರ ಧರಿಸಿ ಎ380 ವಿಮಾನನದ ಕಾಕ್ ಪಿಟ್‍ನಲ್ಲಿ ಕುಳಿತು ಸಂಭ್ರಮಿಸಿದ್ದಾನೆ. ವಿಮಾನ ಕಾರ್ಯಾಚರಣಾ ವ್ಯವಸ್ಥೆ ಹಾಗೂ ತುರ್ತು ಕಾರ್ಯವಿಧಾನಗಳ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದು, ಅನೇಕ ಜನರ ಅಚ್ಚರಿಗೆ ಕಾರಣವಾಗಿದೆ ಎಂದು ಇತಿಹಾದ್ ಏರ್‍ವೇಸ್ ಹೇಳಿಕೊಂಡಿದೆ.

    ಕಾಕ್ ಪಿಟ್‍ನಲ್ಲಿ ಕುಳಿತು ಪೈಲೆಟ್ ಸಮೀರ್ ಯಾಕ್ಲಿಫ್ ಜೊತೆಗೆ ಆದಮ್ ಕುಳಿತಿರುವ ವಿಡಿಯೋವನ್ನು ಇತಿಹಾದ್ ಕಂಪೆನಿ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಅಕ್ಟೋಬರ್ 12 ರಂದು ಅಪ್ಲೋಡ್ ಮಾಡಿದ್ದು, ಇದೂವರೆಗೂ 2.1 ಕೋಟಿ ವ್ಯೂ ಕಂಡಿದ್ದು, 3 ಲಕ್ಷಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

    ಈ ವಿಡಿಯೋ ನೋಡಿದ ಮಂದಿ ಈ ಬಾಲಕ ಭವಿಷ್ಯದಲ್ಲಿ ನಿಜವಾಗಿಯೂ ಇತಿಹಾದ್ ಏರ್‍ವೇಸ್ ಗೆ ಅರ್ಹನಾದ ಕ್ಯಾಪ್ಟನ್ ಆಗುತ್ತಾನೆ. ದಯವಿಟ್ಟು ಒಂದು ಅವಕಾಶ ಕೊಡಿ ಎಂದು ಕಮೆಂಟ್ ಹಾಕಿದ್ದಾರೆ.

     

     

     

  • ವರದಕ್ಷಿಣೆಯಿಂದ ಹ್ಯಾಂಡ್ಸಮ್ ಹುಡ್ಗ ಸಿಗ್ತಾನಂತೆ, ವರರಿಗೆ ಸ್ವಯಂ ಉದ್ಯೋಗ ಸಿಗುತ್ತಂತೆ- ಕಾಲೇಜಿನ ಸ್ಟಡಿ ಮೆಟೀರಿಯಲ್ ವೈರಲ್

    ವರದಕ್ಷಿಣೆಯಿಂದ ಹ್ಯಾಂಡ್ಸಮ್ ಹುಡ್ಗ ಸಿಗ್ತಾನಂತೆ, ವರರಿಗೆ ಸ್ವಯಂ ಉದ್ಯೋಗ ಸಿಗುತ್ತಂತೆ- ಕಾಲೇಜಿನ ಸ್ಟಡಿ ಮೆಟೀರಿಯಲ್ ವೈರಲ್

    ಬೆಂಗಳೂರು: ಸಾಮಾಜಿಕ ಪಿಡುಗುಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಅವರನ್ನು ಜಾಗೃತರಾಗಿಸಬೇಕಾದ ಕಾಲೇಜೊಂದು ವಿದ್ಯಾರ್ಥಿಗಳಿಗೆ ವರದಕ್ಷಣೆಯನ್ನು ಬೆಂಬಲಿಸುವಂತಹ ಸ್ಟಡಿ ಮೆಟೀರಿಯಲ್ ನೀಡಿ ಮಹಾ ಎಡವಟ್ಟು ಮಾಡಿಕೊಂಡಿದೆ. ಈಗ ಆ ಸ್ಟಡಿ ಮೆಟೀರಿಯಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ನಗರದ ಶಾಂತಿ ನಗರದಲ್ಲಿರುವ ಸೆಂಟ್ ಜೋಸೆಫರ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವರದಕ್ಷಿಣೆಯನ್ನು ಬೆಂಬಲಿಸುವಂತಹ ಸ್ಟಡಿ ಮೆಟೀರಿಯಲ್ ನೀಡಲಾಗಿದೆ. ಇದನ್ನ ವಿದ್ಯಾರ್ಥಿಯೊಬ್ಬರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.

    ವರದಕ್ಷಿಣೆಯಿಂದ ಕುರೂಪಿ ಹೆಣ್ಮಕ್ಕಳ ಮದುವೆ ಆಗುತ್ತದೆ. ವರದಕ್ಷಿಣೆಯಿಂದ ಒಳ್ಳೆಯ ಹ್ಯಾಂಡ್ಸಮ್ ಹುಡುಗ ಸಿಗುತ್ತಾನೆ. ವರರಿಗೆ ಸ್ವಯಂ ಉದ್ಯೋಗ ದೊರೆಯುತ್ತದೆ. ಇದರಿಂದ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾರೆ. ಅಷ್ಟೇ ಅಲ್ಲದೇ ಬಡ ಹುಡುಗರಿಗೆ ಅನುಕುಲವಾಗುತ್ತೆ. ಇದರಿಂದ ಅವರು ತಮ್ಮ ಓದನ್ನು ಮುಂದುವರೆಸಬಹುದು. ನವ ದಂಪತಿಯ ಜೀವನ ಸುಖಮಯವಾಗಿರುತ್ತೆ. ಜೊತೆಗೆ ಆಸ್ತಿ ಮಾಡಬಹುದು ಎಂದೆಲ್ಲಾ ಅಧ್ಯಯನ ಸಾಮಗ್ರಿಯಲ್ಲಿ ಹೇಳಲಾಗಿದೆ.

    ವರದಕ್ಷಿಣೆ ಬೆಂಬಲಿಸುವ ಈ ಪಾಠವನ್ನು ಚೆನ್ನೈನ ರಿತಿಕಾ ರಮೇಶ್ ಎಂಬುವರು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಇವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸೆಂಟ್ ಜೋಸೇಫ್ ಕಾಲೇಜು ಸ್ಪಷ್ಟನೆ ನೀಡಿದೆ.

    ಇದು ಕಾಲೇಜಿನ ಲೆಕ್ಚರರ್ ನೀಡಿರುವ ಅಧ್ಯಯನ ಸಾಮಾಗ್ರಿ. ಇದಕ್ಕೂ ಕಾಲೇಜಿಗೂ ಸಂಬಂಧವಿಲ್ಲ. ಇದು ಮಹಾರಾಷ್ಟ್ರದ ಒಂದು ಪಠ್ಯಪುಸ್ತಕದಿಂದ ತೆಗೆದ ವಿಷಯ. ವಿದ್ಯಾರ್ಥಿಗಳು ಇದನ್ನೇ ಫೇಸ್‍ಬುಕ್ ಗೆ ಹಾಕಿದ್ದಾರೆ ಎಂದು ಹೇಳಿದೆ.

  • ಮರಕ್ಕೆ ಕಟ್ಟಿ ಬಿಜೆಪಿ ಕಾರ್ಪೊರೇಟರ್ ಮೇಲೆ 30 ಜನರಿಂದ ಹಲ್ಲೆ- ವಿಡಿಯೋ ವೈರಲ್

    ಮರಕ್ಕೆ ಕಟ್ಟಿ ಬಿಜೆಪಿ ಕಾರ್ಪೊರೇಟರ್ ಮೇಲೆ 30 ಜನರಿಂದ ಹಲ್ಲೆ- ವಿಡಿಯೋ ವೈರಲ್

    ವಡೋದರ: ನೋಟಿಸ್ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದ ಸ್ಥಳೀಯ ಬಿಜೆಪಿ ಪಾಲಿಕೆಯ ಕಾರ್ಪೊರೇಟರ್ ಒಬ್ಬರನ್ನು ಮರಕ್ಕೆ ಕಟ್ಟಿ 30 ಜನರು ಹಲ್ಲೆ ನಡೆಸಿರುವ ಘಟನೆ ಗುಜರಾತ್‍ನ ವಡೋದರದಲ್ಲಿ ನಡೆದಿದೆ.

    ಹಸ್ಮುಖ್ ಪಟೇಲ್ ಸ್ಥಳಿಯರಿಂದ ಹಲ್ಲೆಗೊಳಗಾದ ಬಿಜೆಪಿ ಕಾರ್ಪೊರೇಟರ್. ಪಾಲಿಕೆ ಅಲ್ಲಿ ನೆಲೆಸಿದ್ದ ನಿವಾಸಿಗಳ ಮನೆಗಳನ್ನು ಬುಲ್ಡೋಜರ್‍ನಿಂದ ಕೆಡವಲು ಮುಂದಾಗಿತ್ತು. ಈ ವೇಳೆ ಉದ್ರಿಕ್ತರ ಗುಂಪೊಂದು ಕಾರ್ಪೊರೇಟರ್‍ನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.

    ಏನಿದು ಘಟನೆ:
    ಮನೆಗಳ ತೆರವು ಕಾರ್ಯಾಚರಣೆಗೆ ಪುರಸಭೆ ಮುಂದಾಗಿತ್ತು. ಇದಕ್ಕೆ ಸಂಬಂಧಿಸಿದ ನೋಟಿಸ್ ನೀಡುವಂತೆ ಜನರು ಪುರಸಭೆ ಆಯುಕ್ತರ ಬಳಿ ಹೋಗಿದ್ದಾರೆ. ನೋಟಿಸ್ ಈಗಾಗಲೇ ಕಾರ್ಪೊರೇಟರ್‍ಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ನೋಟಿಸ್ ನೀಡಿದ್ದರೂ ಸ್ಥಳೀಯರಿಗೆ ಮಾಹಿತಿ ನೀಡಿಲ್ಲವೆಂದು ಕೋಪಗೊಂಡು ನೇರ ಕಾರ್ಪೊರೇಟರ್ ಮನೆಗೆ ತೆರಳಿ ನೋಟಿಸ್ ತೋರಿಸುವಂತೆ ಕೇಳಿದ್ದಾರೆ. ನೋಟಿಸ್ ನೀಡಲು ನಿರಾಕರಿಸಿದ್ದಕ್ಕೆ ಉದ್ರಿಕ್ತ 30 ಜನರ ಗುಂಪೊಂದು ಹಸ್ಮುಖ್ ಪಟೇಲ್‍ರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.

    http://www.youtube.com/watch?v=VrUPxLZtYsg

    ಬಳಿಕ ಸ್ಥಳಕ್ಕೆ ವಡೋದರ ಪೊಲೀಸರು ಸ್ಥಳಕ್ಕೆ ಆಗಮಿಸಿ 30 ಮಂದಿ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ. ಸದ್ಯ ಕಾರ್ಪೊರೆಟರ್‍ನನ್ನು ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.

  • ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಬಚ್ಚನ್ ಕಿಸ್ಸಿಂಗ್ ಫೋಟೋ ವೈರಲ್

    ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಬಚ್ಚನ್ ಕಿಸ್ಸಿಂಗ್ ಫೋಟೋ ವೈರಲ್

    ಮುಂಬೈ: ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರಿಗೋಸ್ಕರ ಏನು ಬೇಕಾದ್ದರೂ ಮಾಡುತ್ತಾರೆ. ಆದರೆ ಈಗ ಮಾಜಿ ಪ್ರೇಮಿಗಳಾದ ಸಲ್ಮಾನ್ ಮತ್ತು ಐಶ್ವರ್ಯ ಕಿಸ್ಸಿಂಗ್ ಫೋಟೋವೊಂದ್ದನ್ನು ಫೋಟೋಶಾಪ್ ಮಾಡಿ ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದು, ಸಾಕಷ್ಟು ವೈರಲ್ ಆಗಿದೆ.

    ಅಭಿಮಾನಿಯೊಬ್ಬ ಸಲ್ಮಾನ್ ಮತ್ತು ಐಶ್ ಅವರ ಬೇರೆ ಬೇರೆ ಫೋಟೋಗಳನ್ನು ಒಟ್ಟಿಗೆ ಜೋಡಿಸಿ ಇಬ್ಬರು ಜೊತೆಯಲ್ಲಿರುವ ಹಾಗೇ ಫೋಟೋಶಾಪ್ ಮಾಡಿದ್ದಾರೆ. ಅವರಿಬ್ಬರ ಫೋಟೋ ನಿಜವಾದ ಫೋಟೋದ ಹಾಗೇ ಕಾಣುವ ರೀತಿಯಲ್ಲಿ ಮಾಡಿದ್ದಾರೆ.

    ಐಶ್ ಕೆಲವು ಕಾರ್ಯಕ್ರಮಗಳಲ್ಲಿ ನಟ-ನಟಿಯರ ಜೊತೆ ತೆಗೆಸಿಕೊಂಡಿದ್ದ ಫೋಟೋವನ್ನು ಫೋಟೋಶಾಪ್ ಮಾಡಿ ಬೇರೆ ಕಲಾವಿದರ ಜಾಗದಲ್ಲಿ ಸಲ್ಮಾನ್ ಖಾನ್ ಅವರ ಫೋಟೋವನ್ನು ಹಾಕಿದ್ದಾನೆ.

    ಈ ಜೋಡಿಯನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹೀಗಾಗಿ ಈ ರೀತಿ ಫೋಟೋಶಾಪ್ ಮಾಡಿದ್ದೇನೆ ಎಂದು ಬರೆದು ತನ್ನ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾನೆ.

    https://www.instagram.com/p/BZi23WjjYUi/?taken-by=salmanxaish

    https://www.instagram.com/p/BW0bHjNjoUU/?taken-by=salmanxaish

    https://www.instagram.com/p/BZg7vkXDgAa/?taken-by=salmanxaish

  • ಡೋರ್ ಮುಚ್ಚದೆಯೆ ಮೆಟ್ರೋ ರೈಲು ಸಂಚಾರ: ವಿಡಿಯೋ ವೈರಲ್ 

    ಡೋರ್ ಮುಚ್ಚದೆಯೆ ಮೆಟ್ರೋ ರೈಲು ಸಂಚಾರ: ವಿಡಿಯೋ ವೈರಲ್ 

    ನವದೆಹಲಿ: ಮೆಟ್ರೋ ಸಂಚಾರವನ್ನು ಟ್ರಾಫಿಕ್ ಫ್ರೀ ಮಾಡಿದೆ ಅನ್ನೋ ಕಾರಣಕ್ಕೆ ಸಾಕಷ್ಟು ಮಂದಿ ಮೆಟ್ರೋ ಸಂಚಾರವನ್ನೇ ಅವಲಂಭಿಸಿದ್ದಾರೆ. ಆದರೆ ದೆಹಲಿಯಲ್ಲಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸೋಮವಾರ ರಾತ್ರಿ 10 ಗಂಟೆ ವೇಳೆಯಲ್ಲಿ ಮೆಟ್ರೋ ರೈಲು ಬಾಗಿಲು ಮುಚ್ಚದೆ ಸಂಚಾರ ನಡೆಸಿದೆ.

    ಹಳದಿ ಲೈನ್ ರೈಲು ಚೌರಿ ಬಜಾರ್ ಸ್ಟೇಷನ್‍ನಿಂದ ಕಾಶ್ಮೀರಿ ಗೇಟ್ ಸ್ಟೇಷನ್ ತನಕ ಓಪನ್ ಡೋರ್‍ನಲ್ಲೇ ಸಂಚಾರ ಮಾಡಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಈ ದೃಶ್ಯವನ್ನು ರೈಲಿನಲ್ಲಿ ಸಂಚಾರ ಮಾಡುತ್ತಿದ್ದ ಪ್ರಯಾಣಿಕರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೆಟ್ರೋ ಸೇಫ್ಟಿ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    ಒಂದು ಡೋರ್‍ನಲ್ಲಿ ತೊಂದರೆಯಾಗಿತ್ತು ಹಾಗೂ ಡಿಎಂಆರ್‍ಸಿ ಸಿಬ್ಬಂದಿ ಡೋರ್ ಹತ್ತಿರ ಕಾವಲಾಗಿ ನಿಂತಿದ್ದರು. ವಿಳಂಬ ಆಗಬಾರದು ಎಂಬ ಕಾರಣ ರೈಲನ್ನು ವಿಶ್ವವಿದ್ಯಾಲಯ ಸ್ಟೇಷನ್‍ಗೆ ಕೊಂಡೊಯ್ಯಲಾಯ್ತು ಎಂದು ಮೆಟ್ರೋ ವಕ್ತಾರರು ತಿಳಿಸಿದ್ದಾರೆ.

    ಈ ಹಿಂದೆ 2014ರ ಜುಲೈನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಇದೇ ಲೈನ್‍ನಲ್ಲಿ ಘಿಟೋರ್ನಿ ಮತ್ತು ಅರ್ಜನ್‍ಘರ್ ನಿಲ್ದಾಣಗಳ ನಡುವೆ ಬಾಗಿಲು ತೆರೆದುಕೊಂಡೇ ಮೆಟ್ರೋ ರೈಲು ಸಂಚರಿಸಿತ್ತು.

    ಘಟನೆ ನಡೆದ ನಂತರ ಭದ್ರತಾ ವೈಫಲ್ಯದ ಮೇಲೆ ಟ್ರೈನ್ ಆಪರೇಟರ್‍ನನ್ನು ಅಮಾನತು ಮಾಡಲಾಗಿತ್ತು.

  • ಸ್ಪೀಡ್ ರೈಡಿಂಗ್: ಶೇಕ್ ಆಗಿ ತಿರುಗಿ, ತಿರುಗಿ ಬೈಕ್ ಪಲ್ಟಿ! ವಿಡಿಯೋ ನೋಡಿ

    ಸ್ಪೀಡ್ ರೈಡಿಂಗ್: ಶೇಕ್ ಆಗಿ ತಿರುಗಿ, ತಿರುಗಿ ಬೈಕ್ ಪಲ್ಟಿ! ವಿಡಿಯೋ ನೋಡಿ

    ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಬೈಕ್ ಸವಾರನೊಬ್ಬ ವೇಗವಾಗಿ ರೈಡ್ ಮಾಡುವ ವೇಳೆ ರಸ್ತೆಯಲ್ಲಿ ಬೀಳುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ.

    ಕ್ಯಾಲಿಫೋರ್ನಿಯಾ ಸಕ್ರಾಮೆಂಟೊ ಎಂಬಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದು ಈಗ ಯೂಟ್ಯೂಬ್‍ಗೆ ಅಪ್ಲೋಡ್ ಮಾಡಿದ್ದಾರೆ.

    ಕಾರನ್ನು ಹಿಂದಿಕ್ಕಿ ವೇಗವಾಗಿ ಹೋಗುತ್ತಿರಬೇಕಾದರೆ ಬೈಕ್ ಅಲುಗಾಡಿದೆ. ಅಲುಗಾಡುತ್ತಿದ್ದಾಗ ಸವಾರ ಬೈಕನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾನೆ. ಓವರ್ ಸ್ಪೀಡ್ ಇದ್ದ ಕಾರಣ ನಿಯಂತ್ರಣಕ್ಕೆ ಸಿಗದ ಬೈಕ್ ತಿರುಗಿ ತಿರುಗಿ ರಸ್ತೆಗೆ ಪಲ್ಟಿಯಾಗಿದೆ.

    ರಸ್ತೆಗೆ ಬಿದ್ದ ಸವಾರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಜೂನ್ 30 ರಂದು ಈ ವಿಡಿಯೋ ಅಪ್ಲೋಡ್ ಆಗಿದ್ದು, ಇದೂವರೆಗೂ 7 ಲಕ್ಷ ಕ್ಕೂ ಅಧಿಕ ವ್ಯೂ ಆಗಿದೆ.

  • ಮಹಿಳಾ ಸ್ಪರ್ಧಿಯ ಕೈಯನ್ನೇ ಮುರಿದ್ಳು: ಶಾಕಿಂಗ್ ವಿಡಿಯೋ ನೋಡಿ

    ಮಹಿಳಾ ಸ್ಪರ್ಧಿಯ ಕೈಯನ್ನೇ ಮುರಿದ್ಳು: ಶಾಕಿಂಗ್ ವಿಡಿಯೋ ನೋಡಿ

    ಬ್ಯೂನಸ್ ಐರಿಸ್: ಕಾರ್ಯಕ್ರಮ ಒಂದರ ಕೈ ಬಾಗಿಸುವ ಸ್ಪರ್ಧೆಯಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ಮತ್ತೊಬ್ಬ ಸ್ಪರ್ಧಿಯ ಕೈಯನ್ನು ಮುರಿದಿರುವ ಆಘಾತಕಾರಿ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ.

    ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಇಬ್ಬರು ಮಹಿಳಾ ಸ್ಪರ್ಧಿಗಳು ಸ್ಪರ್ಧಿಸುತ್ತಿರುತ್ತಾರೆ. ಸ್ಪರ್ಧೆ ಜೋರಾಗಿ ನಡೆಯುತ್ತಿರುವಾಗ ಸ್ಪರ್ಧಿಯೊಬ್ಬರ ಕೈ ಮುರಿದಿದ್ದಾರೆ.

    ಕೂಡಲೇ ಕೈ ಮುರಿತಕ್ಕೆ ಒಳಗಾದ ಸ್ಪರ್ಧಿಯನ್ನು ಆಸ್ಪತ್ರೆಗೆ ದಾಖಲಾಸಲಾಗಿದೆ. ಈಗ ಕೈ ಮುರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಈ ರೀತಿಯ ಸ್ಪರ್ಧಿಗಳನ್ನು ಆಯೋಜನೆ ಮಾಡಬಾರದು ಎಂದು ಕಮೆಂಟ್ ಮಾಡುತ್ತಿದ್ದಾರೆ.

    https://youtu.be/3YzW5_DYFNc

     

     

     

  • ಮಾಲೀಕನೇ ಐದು ಮಂದಿ ದರೋಡೆಕೋರರ ವಿರುದ್ಧ ಹೋರಾಡಿ ಅವ್ರನ್ನು ಓಡಿಸಿದ ವಿಡಿಯೋ ನೋಡಿ

    ಮಾಲೀಕನೇ ಐದು ಮಂದಿ ದರೋಡೆಕೋರರ ವಿರುದ್ಧ ಹೋರಾಡಿ ಅವ್ರನ್ನು ಓಡಿಸಿದ ವಿಡಿಯೋ ನೋಡಿ

    ಫ್ಲೋರಿಡಾ: ದರೋಡೆಕೋರರು ಮನೆಗೆ ದಾಳಿ ಮಾಲೀಕರನ್ನು ಹೆದರಿಸಿ ಕೊಳ್ಳೆ ಹೊಡೆಯುವುದು ನಿಮಗೆ ಗೊತ್ತಿರುವ ವಿಚಾರವೇ. ಆದರೆ ಅಮೆರಿಕದಲ್ಲಿ ಮನೆ ಮೇಲೆ ದಾಳಿ ನಡೆಸಿ ದರೋಡೆಕೋರರನ್ನು ಮಾಲೀಕನೇ ಹರಿತವಾದ ಕತ್ತಿಯನ್ನು ಹಿಡಿದು ಓಡಿಸುವ ಮೂಲಕ ವಿಶ್ವದೆಲ್ಲಡೆ ಸುದ್ದಿಯಾಗಿದ್ದಾನೆ.

    ಫ್ಲೋರಿಡಾದಲ್ಲಿ ಐದು ಮಂದಿ ದರೋಡೆಕೋರರು ಆಡ್ಸ್ ಎಂಬಾತನ ಮನೆ ಮೇಲೆ ದಾಳಿ ಶಸ್ತ್ರಾಸ್ತ್ರ ಹಿಡಿದುಕೊಂಡು ದಾಳಿ ಮಾಡಿದ್ದಾರೆ. ಮುಖಕ್ಕೆ ಕಪ್ಪು ಬಟ್ಟೆಯನ್ನು ಧರಿಸಿ ಗನ್ ಹಿಡಿದು ಮನೆಯಲ್ಲಿ ಇದ್ದವರನ್ನು ಬೆದರಿಸಿದ್ದಾರೆ.

    ಅದರಲ್ಲೂ ಮೂವರು ದರೋಡೆಕೋರರು ಆಡ್ಸ್ ಮೇಲೆ ದಾಳಿ ಮಾಡುತ್ತಾರೆ. ಈ ವೇಳೆ ಅವರನ್ನು ಹೆದರಿಸಲು ಆಡ್ಸ್ ಪಕ್ಕದಲ್ಲಿ ಇದ್ದ ಕುರ್ಚಿಯನ್ನು ಎತ್ತಿಕೊಂಡು ಮನೆಯ ಒಳಗಡೆ ಓಡಿ ಹೋಗುತ್ತಾನೆ. ಆಡ್ಸ್ ಓಡುತ್ತಿದ್ದಂತೆ ಆತನ್ನು ಹಿಂಬಾಲಿಸಿ ಕಳ್ಳರು ಓಡುತ್ತಾರೆ.

    ಆದರೆ ಆಡ್ಸ್ ಮನೆಯ ಒಳಗಡೆ ಹೋಗಿ ಹರಿತವಾದ ಕತ್ತಿಯನ್ನು ಹಿಡಿದು ಅವರನ್ನು ಬೆದರಿಸಿದ್ದಾನೆ. ಮಾಲೀಕನ ಈ ರೌದ್ರಾವತಾರವನ್ನು ನೋಡಿದ ಕಳ್ಳರು ಹೆದರಿ ಅಲ್ಲಿಂದಲೇ ಓಡಿದ್ದಾರೆ. ಅದರಲ್ಲೂ ಒಬ್ಬ ಕಳ್ಳನಿಗೆ ಆಡ್ಸ್ ಚೆನ್ನಾಗಿ ಓದೆ ಕೊಟ್ಟಿದ್ದಾನೆ. ಮಾಲೀಕನ ಕೈಯಲ್ಲಿ ಹರಿತವಾದ ಕತ್ತಿಯನ್ನು ನೋಡಿ ದಾಳಿ ಮಾಡಿದ ಎಲ್ಲ ವ್ಯಕ್ತಿಗಳು ಮನೆಯಿಂದಲೇ ಪರಾರಿಯಾಗಿದ್ದಾರೆ.

    ಮನೆಯ ಮೇಲೆ ದರೋಡೆಕೋರರು ದಾಳಿ ಮಾಡುವುದು ಮತ್ತು ಮಾಲೀಕ ಕತ್ತಿಯನ್ನು ಹಿಡಿದು ಅವರನ್ನು ಬೆದರಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈಗ ವೈರಲ್ ಆಗಿದೆ. ಈ ವಿಡಿಯೋ ಆಧಾರಿಸಿ ಕೃತ್ಯ ಎಸಗಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

     

  • ತನ್ನ ಈ ವಿಶಿಷ್ಟ ಸೇವೆಯಿಂದ ದೇಶದ ಗಮನ ಸೆಳೆದ ಮಂಗ್ಳೂರಿನ ಕ್ಯಾಬ್ ಡ್ರೈವರ್

    ತನ್ನ ಈ ವಿಶಿಷ್ಟ ಸೇವೆಯಿಂದ ದೇಶದ ಗಮನ ಸೆಳೆದ ಮಂಗ್ಳೂರಿನ ಕ್ಯಾಬ್ ಡ್ರೈವರ್

    ಮಂಗಳೂರು: ಕ್ಯಾಬ್ ಡ್ರೈವರ್ ಗಳ ವಿರುದ್ಧ ಗ್ರಾಹಕರು ದೂರು ನೀಡುವುದು ನಿಮಗೆ ಗೊತ್ತೆ ಇದೆ. ಆದರೆ ಗ್ರಾಹಕರೊಬ್ಬರ ಫೇಸ್‍ಬುಕ್ ಪೋಸ್ಟ್ ನಿಂದಾಗಿ ಮಂಗಳೂರಿನ ಕ್ಯಾಬ್ ಡ್ರೈವರ್ ಒಬ್ಬರು ಈಗ ದೇಶದ ಗಮನ ಸೆಳೆದಿದ್ದಾರೆ.

    ಹೌದು. ಮಂಗಳೂರು ಸಮೀಪದ ಮೂಡುಶೆಡ್ಡೆಯ ಸುನಿಲ್ ಅವರು ತಮ್ಮ ವಿಶಿಷ್ಟ ಸೇವೆಯಿಂದಾಗಿ ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಾರೆ. ಎಫ್‍ಬಿ ಪೋಸ್ಟ್ ನಿಂದಾಗಿ 10ನೇ ತರಗತಿ ಓದಿರುವ ಸುನೀಲ್ ಈಗ ಹೀರೋ ಎನಿಸಿಕೊಂಡಿದ್ದಾರೆ.

    ನಡೆದಿದ್ದು ಏನು?
    ಅನಾರೋಗ್ಯಕ್ಕೆ ಒಳಗಾಗಿದ್ದ ತಮ್ಮ ತಂದೆಯನ್ನು ನಗರದ ಆಸ್ಪತ್ರೆಗೆ ಕರೆದೊಯ್ಯಲು ಕಾವ್ಯ ಅವರು ಓಲಾ ಕಾರನ್ನು ಮಂಗಳವಾರ ಮಧ್ಯಾಹ್ನ ಬುಕ್ ಮಾಡಿದ್ದರು. ಬುಕ್ ಮಾಡಿದ ಹಿನ್ನೆಲೆಯಲ್ಲಿ ಅಶೋಕ ನಗರದಿಂದ ಕಾವ್ಯ ಅವರ ತಂದೆಯನ್ನು ಸುನಿಲ್ ಆಸ್ಪತ್ರೆಗೆ ಡ್ರಾಪ್ ಮಾಡುತ್ತಾರೆ. ಕಾರಿನ ಬಾಡಿಗೆಯಾದ 140 ರೂ. ಅನ್ನು ಕಾವ್ಯ ಅವರ ತಾಯಿ ನೀಡಲು ಹೋದಾಗ ಸುನಿಲ್ ನಿರಾಕರಿಸಿತ್ತಾರೆ. ಎಷ್ಟು ಹೇಳಿದರೂ ಬಾಡಿಗೆ ಬೇಡ ಎಂದೇ ಹೇಳುತ್ತಾರೆ. ಕೊನೆಗೆ ತಾಯಿ ಬಾಡಿಗೆ ಬೇಡ, ಮನೆಯಿಂದ ಆಸ್ಪತ್ರೆಗೆ ಬರಲು ಪೆಟ್ರೋಲ್ ಖರ್ಚು ಆಗಿದೆಯಲ್ಲ. ಅದರ ದುಡ್ಡನ್ನು ತೆಗೆದುಕೊಳ್ಳಿ ಎಂದಾಗಲೂ ಸುನಿಲ್ ಬೇಡ ಎಂದು ಹೇಳಿ ಹಣವನ್ನು ಪಡೆಯಲು ನಿರಾಕರಿಸುತ್ತಾರೆ.

    ಈ ವೇಳೆ ಯಾಕೆ ಬಾಡಿಗೆ ತೆಗೆದುಕೊಳ್ಳುವುದಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, “ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ನಾನು ದುಡ್ಡು ತೆಗೆದುಕೊಳ್ಳುವುದಿಲ್ಲ” ಎಂದು ಸುನಿಲ್ ಹೇಳುತ್ತಾರೆ. ಸಂಜೆ ತಾಯಿ ಅವರು ಮಗಳು ಕಾವ್ಯ ಅವರಲ್ಲಿ ನಡೆದ ವಿಚಾರವನ್ನು ತಿಳಿಸುತ್ತಾರೆ. ಈ ವಿಚಾರ ತಿಳಿದು ಸಂತೋಷಗೊಂಡ ಕಾವ್ಯ ಅವರು ಘಟನೆಯನ್ನು ಫೇಸ್‍ಬುಕ್‍ನಲ್ಲಿ ಬರೆದು ಪೋಸ್ಟ್ ಪ್ರಕಟಿಸಿದ್ದಾರೆ.

    ಬಾಡಿಗೆ ತೆಗೆದುಕೊಂಡಿಲ್ಲ ಯಾಕೆ?
    ಎರಡೂ ವರ್ಷಗಳಿಂದ ನಾನು ಮಂಗಳೂರಿನಲ್ಲಿ ಕಾರು ಓಡಿಸುತ್ತಿದ್ದೇನೆ. ನನ್ನ ತಾಯಿ 8 ತಿಂಗಳ ಹಿಂದೆ ನಿಧನರಾಗಿದ್ದಾರೆ. ತಾಯಿಯ ನೆನಪಿನಲ್ಲಿ ರೋಗಿಗಳಿಗೆ ಏನಾದರೂ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದಾಗಿ ಆಸ್ಪತ್ರೆಗೆ ಹೋಗಲು ಕಾರನ್ನು ಯಾರಾದರೂ ಬುಕ್ ಮಾಡದರೆ ನಾನು ಬಾಡಿಗೆ ತೆಗೆದುಕೊಳ್ಳುವುದಿಲ್ಲ. ಈ ಕಾರಣಕ್ಕಾಗಿ ಮಂಗಳವಾರವೂ ನಾನು ಬಾಡಿಗೆ ತೆಗೆದುಕೊಂಡಿರಲಿಲ್ಲ. ಆದರೆ ಬಾಡಿಗೆ ತೆಗೆದುಕೊಳ್ಳದೇ ಇರುವ ವಿಚಾರ ಈ ರೀತಿ ಶೇರ್ ಆಗುತ್ತದೆ ಎನ್ನುವುದು ನನಗೆ ಗೊತ್ತಿರಲಿಲ್ಲ ಎಂದು ಸುನಿಲ್ ಪ್ರತಿಕ್ರಿಯಿಸಿದ್ದಾರೆ.

    ಫೇಸ್‍ಬುಕ್‍ನಲ್ಲಿ ವೈರಲ್:
    ಕಾವ್ಯ ಅವರು ಮಂಗಳವಾರ ಸಂಜೆ 6.35ಕ್ಕೆ ಫೇಸ್‍ಬುಕ್ ನಲ್ಲಿ ತಾಯಿಗೆ ಆದ ಅನುಭವವನ್ನು ಬರೆದು ಪೋಸ್ಟ್ ಪ್ರಕಟಿಸಿದ್ದಾರೆ. ಇದೂವರೆಗೆ ಈ ಪೋಸ್ಟನ್ನು ಅನ್ನು 4 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದರೆ, ಮೂರು ಸಾವಿರ ಮಂದಿ ಕಮೆಂಟ್ ಮಾಡಿದ್ದಾರೆ. 65 ಸಾವಿರ ಮಂದಿ ಲೈಕ್ ಮಾಡಿದ್ದಾರೆ. “ನಂಬಲು ಸಾಧ್ಯವೇ ಇಲ್ಲ. ನಿಜವಾದ ಮನುಷ್ಯತ್ವ ಅಂದರೆ ಇದು” ಎಂದು ಜನರು ಪ್ರಶಂಸೆ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ.

    ಆಟೋ ಡ್ರೈವರ್‍ಗಳು “200 ರೂ.” ಅಥವಾ “ಡಬಲ್ ಚಾರ್ಜ್” ಎಂದು ಹೇಳಿ ನಮ್ಮ ಜೊತೆ ಮಾತನಾಡಲು ಆರಂಭಿಸುತ್ತಾರೆ. ಕೆಲವು ಕ್ಯಾಬ್ ಡ್ರೈವರ್‍ಗಳು ಸ್ಥಳ ಇಷ್ಟ ಇಲ್ಲದ್ದಕ್ಕೆ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಾರೆ. ಈ ರೀತಿಯ ವ್ಯಕ್ತಿಗಳ ನಡುವೆ ಡ್ರೈವರ್ ಸುನಿಲ್ ರತ್ನದಂತೆ ಹೊಳೆಯುತ್ತಾರೆ ಎಂದು ಕಾವ್ಯ ಅವರು ಎಫ್‍ಬಿಯಲ್ಲಿ ಬರೆದುಕೊಂಡಿದ್ದಾರೆ.

  • ಚಂದ್ರಲೋಕದಲ್ಲಿ ಅನ್ಯ ಗ್ರಹ ಜೀವಿಗಳ ಟ್ಯಾಂಕ್ ಪತ್ತೆ? ವಿಡಿಯೋ ನೋಡಿ

    ಚಂದ್ರಲೋಕದಲ್ಲಿ ಅನ್ಯ ಗ್ರಹ ಜೀವಿಗಳ ಟ್ಯಾಂಕ್ ಪತ್ತೆ? ವಿಡಿಯೋ ನೋಡಿ

    ನವದೆಹಲಿ: ಚಂದ್ರಲೋಕದಲ್ಲಿ ಅನ್ಯ ಗ್ರಹ ಜೀವಿಗಳ ಟ್ಯಾಂಕ್ ಒಂದು ಪತ್ತೆಯಾಗಿದೆ ಎನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇದು ಟ್ಯಾಂಕ್ ಅಥವಾ ದೊಡ್ಡ ಬಂಡೆಯಾಗಿರಬಹುದು ಎಂದು ಅನ್‍ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸೆಕ್ಯೂರ್‍ಟೀಂ10 ಹೆಸರಿನ ತಂಡವೊಂದು ಚಂದ್ರ ಲೋಕದಲ್ಲಿ ಕಂಡ ಈ ವಸ್ತುವಿನ ವಿಡಿಯೋವನ್ನು ಯೂ ಟ್ಯೂಬ್‍ನಲ್ಲಿ ಮೇ 9ರಂದು ಅಪ್ಲೋಡ್ ಮಾಡಿದ್ದು 6.29 ಲಕ್ಷ ವ್ಯೂ ಕಂಡಿದೆ.

    ಸಂಶೋಧಕರ ಈ ಸಂಶೋಧನೆಯ ಬಗ್ಗೆ ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಚಂದ್ರನ ನೆಲದಲ್ಲಿ ಟ್ಯಾಂಕ್ ರೀತಿಯ ವಸ್ತುವೊಂದು ಪತ್ತೆಯಾಗಿದೆ ಎಂದು ಸೆಕ್ಯೂರ್‍ಟೀಂ10 ವಿಡಿಯೋದಲ್ಲಿ ಹೇಳಿಕೊಂಡಿದೆ.