Tag: viral

  • ನನ್ನಿಂದ ಜಲಾಭಿಷೇಕ ಮಾಡಿಸಿಕೊಳ್ಳಲು ಶಿವ ಬಯಸಿದ್ದಾನೆ, 6 ದಿನ ರಜೆ ಕೊಡಿ: ಪೇದೆ ಪತ್ರ ವೈರಲ್

    ನನ್ನಿಂದ ಜಲಾಭಿಷೇಕ ಮಾಡಿಸಿಕೊಳ್ಳಲು ಶಿವ ಬಯಸಿದ್ದಾನೆ, 6 ದಿನ ರಜೆ ಕೊಡಿ: ಪೇದೆ ಪತ್ರ ವೈರಲ್

    ಲಕ್ನೋ: ಹರಿದ್ವಾರದ ಶಿವ ನನ್ನಿಂದ ಜಲಾಭಿಷೇಕ ಮಾಡಿಸಿಕೊಳ್ಳಲು ಬಯಸಿದ್ದಾನೆ, ಹೀಗಾಗಿ ನನಗೆ ರಜೆ ನೀಡಬೇಕು ಎಂದು ಉತ್ತರ ಪ್ರದೇಶ ಪೇದೆಯೊಬ್ಬ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬುಲಂದ್‍ಶಹರದ ಸಿಯಾನಾ ಪೊಲೀಸ್ ಠಾಣೆಯ ವಿನೋದ್ ಕುಮಾರ್ ಹೀಗೆ ಪತ್ರ ಬರೆದ ಪೇದೆ. ಆಗಸ್ಟ್ 5 ರಂದು ವಿನೋದ್ ಕುಮಾರ್ ಡೆಪ್ಯುಟಿ ಎಸ್‍ಪಿಗೆ 6 ದಿನಗಳ ರಜೆ ಕೋರಿ, ಪತ್ರ ಬರೆದಿದ್ದರು. ಇದು ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಕಮೆಂಟ್ ಹರಿದಾಡುತ್ತಿವೆ.

    ಪತ್ರದಲ್ಲಿ ಏನಿದೆ?
    ನನ್ನ ಕನಸಿನಲ್ಲಿ ಶಿವ ಕನಸಿನಲ್ಲಿ ಬಂದಿದ್ದನು. ಶ್ರಾವಣ ಮಾಸದಲ್ಲಿ ನಡೆಯುವ ಕನ್ವರ್ ತೀರ್ಥಯಾತ್ರೆ ಪಾಲ್ಗೊಂಡು, ಹರಿದ್ವಾರದಲ್ಲಿ ತನಗೆ ಜಲಾಭಿಷೇಕ ಮಾಡುವಂತೆ ಸೂಚಿಸಿದ್ದಾನೆ. ಹೀಗಾಗಿ ದಯವಿಟ್ಟು ನನಗೆ 6 ದಿನಗಳ ರಜೆಯನ್ನು ನೀಡಿ ಎಂದು ವಿನೋದ್ ಕುಮಾರ್ ಬರೆದು ಡೆಪ್ಯುಟಿ ಎಸ್‍ಪಿಗೆ ನೀಡಿದ್ದರು.

    ರಜೆ ಕೇಳಿ ಇದೇ ಮೊದಲ ಬಾರಿಗೆ ಇಂತಹ ಅರ್ಜಿಯೊಂದು ಬಂದಿದ್ದು, ಅರ್ಜಿ ಪರಿಗಣಿಸಿರುವ ಮೇಲಾಧಿಕಾರಿಗಳು ವಿನೋದ್‍ಗೆ 6 ದಿನಗಳ ರಜೆ ಮಂಜೂರು ಮಾಡಿದ್ದಾರೆ ಎಂದು ಸಿಯಾನಾ ಠಾಣೆಯ ಎಎಸ್‍ಪಿ ಪ್ರಮೋದ್ ಕುಮಾರ್ ಹೇಳಿದ್ದಾಗಿ ವರದಿಯಾಗಿದೆ.

  • ಹೊಸ ಅವತಾರದ ವೀರೇಂದ್ರ ಸೆಹ್ವಾಗ್ ಫೋಟೋ ವೈರಲ್!

    ಹೊಸ ಅವತಾರದ ವೀರೇಂದ್ರ ಸೆಹ್ವಾಗ್ ಫೋಟೋ ವೈರಲ್!

    ಮುಂಬೈ: ಕ್ರಿಕೆಟ್ ವೃತ್ತಿ ಜೀವನದಿಂದ ನಿವೃತ್ತಿ ಬಳಿಕ ಸಾಮಾಜಿಕ ಜಾಲ ತಾಣಗಳಲ್ಲಿ ಕ್ರಿಯಾಶೀಲರಾಗಿರುವ ಸೆಹ್ವಾಗ್ ತಮ್ಮದೇ ವಿಶೇಷ ಫೋಟೊವೊಂದನ್ನು ಟ್ವೀಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಹಿಂದೆಯೂ ಹಲವು ಬಾರಿ ಕ್ರಿಕೆಟ್ ಆಟಗಾರರು ಸೇರಿದಂತೆ ತಮ್ಮ ಆತ್ಮೀಯರನ್ನು ತಮ್ಮ ಟ್ವೀಟ್ ಮೂಲಕ ಕಾಲೆಳೆಯುತ್ತಿದ್ದ ಸೆಹ್ವಾಗ್, ಸದ್ಯ ಬಾಬಾ ಅವತಾರದಲ್ಲಿ ಕಾಣಿಸಿಕೊಂಡಿರುವ ಫೋಟೋ ಶೇರ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

    ಬಾಬಾ ವೇಷದಲ್ಲಿ ಕಾಣಿಸಿಕೊಂಡಿರುವ ಸೆಹ್ವಾಗ್, ಗುರು ಕಾರ್ನಾ ಜಾನ್ ಕರ್, ಪಾನಿ ಪೀನಾ ಚಾನ್ ಕರ್. ಜೈ ಭೋಲೆ! ಜೈ ಶ್ರೀ ರಾಮ್! ಜೈ ಬಜರಂಗಬಲಿ! ಎಂದು ಸ್ವಾಮೀಜಿ ಶೈಲಿಯಲ್ಲಿ ಫೋಟೋಗೆ ಅಡಿ ಬರಹವನ್ನು ನೀಡಿದ್ದಾರೆ.

    ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹುಟ್ಟುಹಬ್ಬದ ವಿಶೇಷವಾಗಿ ಟ್ವೀಟ್ ಮಾಡಿ ಸೆಹ್ವಾಗ್ ಗಮನ ಸೆಳೆದಿದ್ದರು. ಗಂಗೂಲಿ ಮೈದಾನದಲ್ಲಿ ಹೇಗಿರುತ್ತಾರೆ ಎಂದು ತಿಳಿಸಿ 4 ಉದಾಹರಣೆ ನೀಡಿ ಪೂರಕವಾಗಿ 4 ಫೋಟೋಗಳನ್ನು ಸೆಹ್ವಾಗ್ ನೀಡಿದ್ದರು. ಇದರಲ್ಲಿ ವಿಶೇಷವಾಗಿ ಗಂಗೂಲಿ ಜೀವನ ಶ್ರೇಷ್ಠ ಬ್ಯಾಟಿಂಗ್ ನೆನಪಿಸುವ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ 183 ರನ್ ಸಿಡಿದ್ದ ಫೋಟೋ, ಬಳಿಕ ಅಭಿಮಾನಿಯೊಬ್ಬ ಗಾಯಗೊಂಡು ರಕ್ತ ಸುರಿಸಿದ್ದು, ಗಂಗೂಲಿ ಬೌಲಿಂಗ್ ಫೋಟೋ ಸೇರಿದಂತೆ ನ್ಯಾಟ್‍ವೆಸ್ಟ್ ಟೆಸ್ಟ್ ಸರಣಿ ಗೆದ್ದ ವೇಳೆ ಶಾರ್ಟ್ ಬಿಚ್ಚಿ ಸಂಭ್ರಮಿಸಿದ್ದ ಫೋಟೋಗಳು ಪೋಸ್ಟ್ ಮಾಡಿದ್ದರು. ಸೆಹ್ವಾಗ್ ಅವರ ಈ ನಡೆ ಹಲವು ಅಭಿಮಾನಿಗಳಿಗೆ ಇಷ್ಟವಾಗಿದ್ದು, ಅವರ ಟ್ವೀಟ್ ಗಳಿಗೆ ಮರುಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

  • ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್: ವಿಡಿಯೋ ವೈರಲ್

    ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್: ವಿಡಿಯೋ ವೈರಲ್

    ಬೀಜಿಂಗ್: ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್ ಆದ ಘಟನೆಯೊಂದು ಚೀನಾದಲ್ಲಿ ನಡೆದಿದೆ.

    ಮನೆಯೊಳಗೆ ಎಲೆಕ್ಟ್ರಿಕ್ ಸ್ಕೂಟರೊಂದು ಚಾರ್ಜ್‌ಗೆ ಇಟ್ಟಿದ್ದರು. ಆ ಸ್ಕೂಟರ್ ಬ್ಲಾಸ್ಟ್ ಆಗುವ ಮೊದಲು ಹೊಗೆ ಕಾಣಿಸಿಕೊಂಡಿದೆ. ಈ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಮನೆಯಲ್ಲಿ ತಂದೆ, ಮಗಳು ಹಾಗೂ ನಾಯಿ ಅಲ್ಲಿಂದ ಓಡಿ ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

    ಈ ಘಟನೆ ಚೀನಾದ ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಈ ಘಟನೆ ಭಾನುವಾರ ಸಂಜೆ ಸುಮಾರು 5.30ಕ್ಕೆ ನಡೆದಿದೆ. ಸದ್ಯ ಈ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ವಿಡಿಯೋದಲ್ಲಿ ತಂದೆ, ಮಗಳು ಹಾಗೂ ನಾಯಿ ಸ್ಕೂಟರ್ ಬಳಿ ಇದ್ದರು. ಆಗ ಚಾರ್ಜ್ ಹಾಕಿದ ಸ್ಕೂಟರ್ ನಿಂದ ಜೋರಾಗಿ ಶಬ್ಧವೊಂದು ಕೇಳಿಸಿದೆ. ತಂದೆ ಶಬ್ಧ ಏನೆಂದು ನೋಡಲು ಹೋದಾಗ ಸ್ಕೂಟರ್ ನಿಂದ ಹೊಗೆ ಬರುತ್ತಿತ್ತು. ಅದನ್ನು ಕಂಡ ತಂದೆ ತನ್ನ ಮಗಳು ಹಾಗೂ ನಾಯಿಯನ್ನು ಕರೆದುಕೊಂಡು ಓಡಿ ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡರು.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಘಟನೆಯಲ್ಲಿ ಯಾರಿಗೂ ಯಾವುದೇ ಪ್ರಾಣಹಾನಿ ಆಗಿಲ್ಲ. ಪೊಲೀಸರು ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

  • ಕೈಯಲ್ಲೊಂದು ಸುಂದರ ಗೋಲ್ಡನ್ ಬ್ರಿಡ್ಜ್ – ಫೋಟೋಗಳಲ್ಲಿ ನೋಡಿ

    ಕೈಯಲ್ಲೊಂದು ಸುಂದರ ಗೋಲ್ಡನ್ ಬ್ರಿಡ್ಜ್ – ಫೋಟೋಗಳಲ್ಲಿ ನೋಡಿ

    ಹನೋಯಿ: ವಿಯೆಟ್ನಾಮ್ ನ ಅರಣ್ಯ ಬೆಟ್ಟಗಳಲ್ಲಿ ಅನಾವರಣಗೊಂಡಿರುವ ದೈತ್ಯ ಕೈಗಳ ಮೇಲಿರುವ ಗೋಲ್ಡನ್ ಬ್ರಿಡ್ಜ್ ಪ್ರವಾಸಿಗರನ್ನು ಈಗ ತನ್ನ ಸೆಳೆಯುತ್ತಿದೆ.

    ಈ ಗೋಲ್ಡನ್ ಸೇತುವೆ ಡ್ಯಾನಾಂಗ್ ಬಳಿಯ ಬಾ ನಾ ಬೆಟ್ಟದಲ್ಲಿ ನಿರ್ಮಿಸಲಾಗಿದ್ದು, ಕಳೆದ ಜೂನ್ ತಿಂಗಳಲ್ಲಿ ಈ ಸೇತುವೆಯನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ. ಸದ್ಯಕ್ಕೆ ಗೋಲ್ಡನ್ ಸೇತುವೆ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜೊತೆಗೆ ಅತ್ಯಂತ ಸುಂದರವಾಗಿ ಕಾಣುವ ಈ ಸೇತುವೆ ಫೋಟೋಗಳನ್ನು ಅನೇಕ ಮಂದಿ ಶೇರ್ ಮಾಡಿದ್ದಾರೆ.

    ಗೋಲ್ಡನ್ ಸೇತುವೆ 150 ಮೀಟರ್ (490 ಅಡಿ) ಎತ್ತರದಲ್ಲಿದ್ದು, ಪರ್ವತಗಳ ಎತ್ತರದ ಅರಣ್ಯದ ಮೂಲಕ ಹಾವು ಹಾದು ಹೋಗುವ ರೀತಿ ಈ ಸೇತುವೆ ಕಾಣುತ್ತದೆ. ಈಗ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕೇಬಲ್ ಕಾರಿನ ಜೊತೆ ಮಧ್ಯಕಾಲಿನ ಫ್ರಾನ್ಸ್ ಗ್ರಾಮದ ಕಲ್ಪನೆಯಲ್ಲಿ ಪ್ರದೇಶನವನ್ನು ಅಭಿವೃದ್ಧಿ ಪಡಿಸಲಾಗಿದೆ.

    ಇಷ್ಟೇ ಅಲ್ಲದೇ ಮೇಣದ ವಸ್ತು ಸಂಗ್ರಹಾಲಯವಿದ್ದು, ಇದರಲ್ಲಿ ಪಾಪ್ ಗಾಯಕಿ ಲೇಡಿ ಗಾಗಾ ಮತ್ತು ಅಮೆರಿಕದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ಮೈಕೆಲ್ ಜೋರ್ಡಾನ್ ಪ್ರತಿಮೆಯನ್ನು ನಿರ್ಮಿಸಲಾಗಿದೆ.

    ಎಲ್ಲೂ ನಿರ್ಮಾಣವಾಗದ ವಾಸ್ತುಶಿಲ್ಪದ ಶೈಲಿಯಲ್ಲಿ ಈ ಸೇತುವೆಯು ಸುಂದರವಾಗಿ ಕಾಣುತ್ತಿದೆ. ಇಲ್ಲಿಂದ ನಾವು ಡ್ಯಾನಂಗ್ ನಗರವನ್ನು ನೋಡಬಹುದು. ಇಲ್ಲಿಂದ ನಗರವನ್ನು ನೋಡಲು ತುಂಬಾ ಸಂತೋಷವಾಗುತ್ತದೆ ಎಂದು ಪ್ರವಾಸಿಗರೊಬ್ಬರು ತಿಳಿಸಿದ್ದಾರೆ.

    ಕಳೆದ ವರ್ಷ ಒಟ್ಟು 1.3 ಕೋಟಿ ಪ್ರವಾಸಿಗರು ವಿಯೆಟ್ನಾಂಗೆ ಆಗಮಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಚೀನಾ ಪ್ರಜೆಗಳು ಇಲ್ಲಿಗೆ ಆಗಮಿಸಿದ್ದಾರೆ. ಆದರೆ ಥೈಲ್ಯಾಂಡ್‍ಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆಯಿದ್ದು 2017ರಲ್ಲಿ ಥೈಲ್ಯಾಂಡ್‍ಗೆ 3.5 ಕೋಟಿ ವಿದೇಶಿಗರು ಭೇಟಿ ನೀಡಿದ್ದಾರೆ.

    https://twitter.com/Travelingpic_FR/status/1024319167070183427

  • ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಶುರುವಾಯ್ತು ಕಿಕಿ ಚಾಲೆಂಜ್ ಭಯ- ಏನಿದು ಕಿಕಿ ಚಾಲೆಂಜ್?

    ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಶುರುವಾಯ್ತು ಕಿಕಿ ಚಾಲೆಂಜ್ ಭಯ- ಏನಿದು ಕಿಕಿ ಚಾಲೆಂಜ್?

    ಬೆಂಗಳೂರು: ಬಾಲಿವುಡ್ ಸೆಲಬ್ರಿಟಿಗಳ ಕಿಕಿ ಚಾಲೆಂಜ್ ಕಾಟಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಭಯ ಶುರುವಾಗಿದೆ.

    ಮುಂಬೈ ಸೇರಿದಂತೆ ಕೆಲ ಸಿಟಿಗಳಲ್ಲಿ ಈ ಕಿಕಿ ಚಾಲೆಂಜ್ ವೈರಲ್ ಆಗಿದೆ. ಈ ಚಾಲೆಂಜ್‍ಗೆ ಮುಂಬೈ ಪೊಲೀಸರು ಬೇಸತ್ತು ಹೋಗಿದ್ದು, ಈಗ ಈ ಚಾಲೆಂಜ್ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ತಲೆ ನೋವಾಗಿದೆ.

    ಏನಿದು ಕಿಕಿ ಚಾಲೆಂಜ್ ?
    ಟ್ರಾಫಿಕ್ ಮಧ್ಯೆ ಚಲಿಸುವ ಕಾರಿನಿಂದ ಜಿಗಿದು ಹಾಲಿವುಡ್ ಗಾಯಕ ಡ್ರೇಕ್ ನ “ಇನ್ ಮೈ ಫೀಲಿಂಗ್ಸ್ ” ಹಾಡು ಹೇಳಿಕೊಂಡು ಕಾರಿನ ವೇಗಕ್ಕೆ ರಸ್ತೆಯಲ್ಲಿ ಡ್ಯಾನ್ಸ್ ಮಾಡಬೇಕು. ಮತ್ತೆ ಕಾರಿನೊಳಗೆ ಜಿಗಿದು ಕುಳಿತುಕೊಳ್ಳಬೇಕು. ಈ ಅಪಾಯಕಾರಿ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ಬಾಲಿವುಡ್‍ನ ಸೆಲೆಬ್ರಿಟಿಯರು ಈ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇತ್ತೀಚಿಗೆ ನಟಿ ಆದಾ ಶರ್ಮಾ ಈ ಚಾಲೆಂಜ್ ಸ್ವೀಕರಿಸಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಯುವಕ ಯುವತಿಯರಲ್ಲಿ ಹೆಚ್ಚಾಗಿ ಕಿಕಿ ಚಾಲೆಂಜ್ ಹುಚ್ಚು ಶುರುವಾಗಿದೆ.

    ಐಟಿ ಸಿಟಿ ಬೆಂಗಳೂರಿಗೆ ಕಿಕಿ ಚಾಲೆಂಜ್ ಜ್ವರ ಬರಬಹುದು ಅಂತಾ ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕಿಕಿ ಚಾಲೆಂಜ್ ಅಪಾಯಕಾರಿ ಈ ರೀತಿ ಮಾಡಿದರೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸುಮ್ಮನಿರಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಿಕಿ ಚಾಲೆಂಜ್ ನಿಮ್ಮ ಬಾಡಿಗೂ ಗಾಡಿಗೂ ಅಪಾಯಕಾರಿ ಅಂತಾ ಜಾಗೃತಿ ನಡೆಸುತ್ತಿದ್ದಾರೆ. ಜೊತೆಗೆ ಕಿಕಿ ಚಾಲೆಂಜ್‍ನಿಂದ ತಲೆಬುರುಡೆ ಒಡೆದುಕೊಂಡ ಯುವಕನ ವಿಡಿಯೋ ಕೂಡ ಆಡುಗೋಡಿ ಟ್ರಾಫಿಕ್ ಪೊಲೀಸರು ಅಪ್ಲೋಡ್ ಮಾಡಿದ್ದಾರೆ.

  • ಬಾಲಿವುಡ್ ಲೆಜೆಂಡ್ ಜೊತೆ ಚಂದನ್ ಶೆಟ್ಟಿ ಹಾಡಿಗೆ ರಶ್ಮಿಕಾ ಮಂದಣ್ಣ ಡ್ಯಾನ್ಸ್: ವಿಡಿಯೋ ವೈರಲ್

    ಬಾಲಿವುಡ್ ಲೆಜೆಂಡ್ ಜೊತೆ ಚಂದನ್ ಶೆಟ್ಟಿ ಹಾಡಿಗೆ ರಶ್ಮಿಕಾ ಮಂದಣ್ಣ ಡ್ಯಾನ್ಸ್: ವಿಡಿಯೋ ವೈರಲ್

    ಬೆಂಗಳೂರು: ಬಾಲಿವುಡ್ ಸೂಪರ್ ಸ್ಟಾರ್ ಅನಿಲ್ ಕಪೂರ್ ಜೊತೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.

    ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಅತಿಥಿಯಾಗಿ ಭಾಗವಹಿಸಿದ್ದರು. ರಶ್ಮಿಕಾ ಕೂಡ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅನಿಲ್ ಕಪೂರ್ ಜೊತೆ ಚಂದನ್ ಶೆಟ್ಟಿ ‘ಮೂರೇ ಮೂರು ಪೆಗ್ಗಿಗೆ’ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನಿಲ್ ಕಪೂರ್ ನಾನು ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಲು ಇಷ್ಟಪಡುತ್ತೇನೆ ಆದರೆ ರಶ್ಮಿಕಾ ಮಂದಣ್ಣ ನನ್ನ ಜೊತೆಯಲ್ಲಿ ಡ್ಯಾನ್ಸ್ ಮಾಡಲು ಒಪ್ಪಿದ್ದರೆ ಮಾತ್ರ ಡ್ಯಾನ್ಸ್ ಮಾಡುತ್ತೇನೆ ಎಂದು ಹೇಳಿದರು.

    ಅನಿಲ್ ಕಪೂರ್ ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಲು ತುಂಬಾ ಆತುರಾಗಿದ್ದರು. ಸಾಮಾನ್ಯವಾಗಿ ನಾನು ಸ್ಟಾರ್ ಗಳ ಜೊತೆ ಇದ್ದರೆ ನನಗೆ ಏನೂ ಮಾಡಬೇಕು ಎಂದು ತೋಚುವುದಿಲ್ಲ. ಆದರೆ ಲೆಜೆಂಡ್ ಒಬ್ಬರ ಜೊತೆ ವೇದಿಕೆ ಮೇಲಿದ್ದಾಗ ತುಂಬಾನೇ ಭಯಗೊಂಡಿದ್ದೆ. ಅನಿಲ್ ಕಪೂರ್ ಜೊತೆ ನಾನು ಹೇಗೆ ಡ್ಯಾನ್ಸ್ ಮಾಡಲಿ” ಎಂದು ಮನಸ್ಸಿನಲೇ ಯೋಚಿಸುತ್ತಿದೆ ಎಂದು ರಶ್ಮಿಕಾ ಡ್ಯಾನ್ಸ್ ಅನುಭವ ಹಂಚಿಕೊಂಡಿದ್ದಾರೆ.

    ನಾನು ವೇದಿಕೆ ಮೇಲೆ ಹೋದಾಗ ಅನಿಲ್ ಕಪೂರ್ ತಮ್ಮನ್ನು ತಾವು ಪರಿಚಯಿಸಿಕೊಳ್ಳುತ್ತಿದ್ದರು. ಆಗ ನಾನು ಸರ್ ನೀವು ನಿಮ್ಮ ಪರಿಚಯ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದೆ. ನಂತರ ಜನರು ಅವರನ್ನು ನೋಡಿ ಅವರು “ಲಿವಿಂಗ್ ಲೆಜೆಂಡ್” ಎಂದು ಕೂಗುತ್ತಿದ್ದರು ಎಂದು ರಶ್ಮಿಕಾ ಹೇಳಿದ್ದಾರೆ.

    ಸದ್ಯ ಅನಿಲ್ ಕಪೂರ್ ಜೊತೆ ಡ್ಯಾನ್ಸ್ ಮಾಡಿದ ವಿಡಿಯೋವನ್ನು ರಶ್ಮಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ಅಬ್ಬಾ, ಆ ಕ್ಷಣದಲ್ಲಿ ನನಗೆ ತುಂಬಾ ನಾಚಿಕೆ ಆಗುತ್ತಿತ್ತು. ಅನಿಲ್ ಎಲ್ಲ ಚಿತ್ರರಂಗದವರ ಜೊತೆ ತುಂಬಾ ಫ್ರೆಂಡ್ಲಿ ಆಗು ಇರುತ್ತಾರೆ. ಆದರೆ ಆ ಕ್ಷಣ ಅದ್ಭುತವಾಗಿತ್ತು. ನಾವು ಯಾವುದೇ ಭಾಷೆಯಲ್ಲಿ ಎಷ್ಟೇ ಸಿನಿಮಾ ಮಾಡಿದರು ನಾವು ಒಟ್ಟಿಗೆ ಬಂದಾಗ ತುಂಬಾ ಸಂತೋಷದಿಂದ ಇರುತ್ತೇವೆ. ನಾನು ಅನಿಲ್ ಕಪೂರ್ ತರಹ ಇರಲು ಇಷ್ಟ ಪಡುತ್ತೇನೆ” ಎಂದು ರಶ್ಮಿಕಾ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  • ಚಿಕ್ಕಮಗಳೂರಿನ ತರೀಕೆರೆಯಲ್ಲಿ ಈಜಾಡಿದ ಗಜರಾಜ: ವಿಡಿಯೋ ವೈರಲ್

    ಚಿಕ್ಕಮಗಳೂರಿನ ತರೀಕೆರೆಯಲ್ಲಿ ಈಜಾಡಿದ ಗಜರಾಜ: ವಿಡಿಯೋ ವೈರಲ್

    ಚಿಕ್ಕಮಗಳೂರು: ಆನೆ ಈಜೋದನ್ನ ಅಷ್ಟಾಗಿ ಯಾರು ನೋಡಿರಲ್ಲ. ನೋಡಿದ್ರು ಕೂಡ ದಡದಲ್ಲಿ ನಿಂತು ಸೊಂಡಿಲಿನಿಂದ ಮೈಮೇಲೆ ನೀರು ಉಗ್ಗಿಕೊಳ್ಳೋದ್ನಷ್ಟೇ ನೋಡಿರ್ತಿರಾ. ಆದರೆ ಗಜರಾಜ ಅಷ್ಟು ದೊಡ್ಡ ಗಾತ್ರದ ದೇಹವನ್ನ ಸಂಪೂರ್ಣ ನೀರಿನಲ್ಲಿ ಮುಳುಗಿಸಿ ಈಜುತ್ತಾ ಮುಂದೆ ಹೋಗೋದ್ನ ನೋಡಸಿಗೋದು ತೀರಾ ವಿರಳ.

    ಅಂತಹಾ ಅಪರೂಪದ ವಿಡಿಯೋ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೆಲೇನಹಳ್ಳಿ ಹುಡುಗರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಹೌದು ಇಷ್ಟು ದಿನ ಮಲೆನಾಡಿನ ಕಾಡಂಚಿನ ಗ್ರಾಮಗಳಿಗೆ ಬರ್ತಿದ್ದ ಗಜರಾಜ ಇದೀಗ ಬಯಲು ಸೀಮೆಯ ಭತ್ತದ ಗದ್ದೆಗಳಿಗೆ ಬರೋದಕ್ಕೆ ಶುರುವಿಟ್ಟಿದ್ದಾನೆ.

    ಕಳೆದ ರಾತ್ರಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೇಲೆನಹಳ್ಳಿ ಗ್ರಾಮದಂಚಿಗೆ ಭದ್ರಾ ಸಂರಕ್ಷಿತ ಅರಣ್ಯದಿಂದ ಬಂದ ಒಂಟಿ ಸಲಗ ಇಡೀ ರಾತ್ರಿ ಗ್ರಾಮದಂಚಿನಲ್ಲೇ ಬೀಡು ಬಿಟ್ಟಿದ್ದಾನೆ. ರಾತ್ರಿ ಬೆಲೇನಹಳ್ಳಿಯಲ್ಲಿ ಕಾಲ ಕಳೆದ ಗಜೇಂದ್ರ ಬೆಳಗಾಗುತ್ತಿದ್ದಂತೆ ಸಮೀಪದ ಕೆರೆಯಲ್ಲಿ ಫ್ರೆಶ್ ಆಗಿ ಹುರುಳುಹಳ್ಳಿ, ಹಿರೇಕಾತೂರಿನ ಜಮೀನುಗಳಲ್ಲೂ ಓಡಾಟ ನಡೆಸಿದೆ.

    ಐರಾವತನಿಂದ ಹೊಲ-ಗದ್ದೆ-ತೋಟಗಳು ನಾಶವಾಗಿದ್ದು, ಇದನ್ನೆಲ್ಲಾ ಕಂಡ ರೈತರು ಜೀವಭಯದಿಂದ ಹೊಲ ಗದ್ದೆಗಳಲ್ಲಿ ಕೆಲಸ ಮಾಡೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಸ್ಥಳಕ್ಕೆ ಬಂದ ತರೀಕೆರೆ ಅರಣ್ಯಾಧಿಕಾರಿಗಳು ಆನೆಯನ್ನ ಓಡಿಸಲು ಹರಸಾಹಸ ಪಟ್ಟಿದ್ದಾರೆ.

    https://www.youtube.com/watch?v=xw-t4if4uPo&feature=youtu.be

  • ಭಾರೀ ಮಳೆಗೆ ಕೊಳಚೆ ನೀರಿನಲ್ಲಿ ಕೊಚ್ಚಿ ಹೋದ ಕಾರು-ವಿಡಿಯೋ ನೋಡಿ

    ಭಾರೀ ಮಳೆಗೆ ಕೊಳಚೆ ನೀರಿನಲ್ಲಿ ಕೊಚ್ಚಿ ಹೋದ ಕಾರು-ವಿಡಿಯೋ ನೋಡಿ

    ಭೋಪಾಲ್: ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾದ ಕಾರಣ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ವಾಲಿಯರ್ ನಗರದಲ್ಲಿ ಮಳೆ ನೀರಿಗೆ ಕಾರು ಸೇರಿದಂತೆ ವಿವಿಧ ವಾಹನಗಳು ಕೊಳಚೆ ನೀರಿನಲ್ಲಿ ಕೊಚ್ಚಿ ಹೋಗಿವೆ.

    ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು, ಗ್ವಾಲಿಯಾರ್ ನ ನಗರದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರು, ಟೆಂಪೋ, ಸೇರಿದಂತೆ ವಿವಿಧ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ವಾಹನಗಳು ಕೊಚ್ಚಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀರಿನಲ್ಲಿ ಕೊಚ್ಚಿ ಹೋದ ವಾಹನಗಳಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ಪ್ರಾಣಹಾನಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಮಧ್ಯಪ್ರದೇಶದ ಪಶ್ಚಿಮ ಜಿಲ್ಲೆಗಳು ಅಲ್ಲದೇ ಒಡಿಸ್ಸಾ, ವಿದರ್ಭ ಪ್ರದೇಶಗಳಲ್ಲಿ ಮಳೆ ಮುಂದುವರಿಯುವ ಸೂಚನೆ ನೀಡಲಾಗಿದೆ. ಉಳಿದಂತೆ ಆಗ್ರಾ, ಗ್ವಾಲಿಯರ್, ಅಲಹಾಬಾದ್ ಪ್ರದೇಶಗಳಲ್ಲಿಯೂ ಮನ್ಸೂನ್ ಅಬ್ಬರ ಜೋರಾಗಿದೆ.

  • ಸಂಗೀತ್ ಕಾರ್ಯಕ್ರಮದಲ್ಲಿ ಧೋನಿ ಪುತ್ರಿಯ ಕ್ಯೂಟ್ ಡ್ಯಾನ್ಸ್ : ವಿಡಿಯೋ ವೈರಲ್

    ಸಂಗೀತ್ ಕಾರ್ಯಕ್ರಮದಲ್ಲಿ ಧೋನಿ ಪುತ್ರಿಯ ಕ್ಯೂಟ್ ಡ್ಯಾನ್ಸ್ : ವಿಡಿಯೋ ವೈರಲ್

    ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಇಂಗ್ಲೆಂಡ್‍ನಲ್ಲಿ ಪಂದ್ಯ ಮುಗಿಸಿ ಪತ್ನಿ, ಮಗಳ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮದಲ್ಲಿ ಧೋನಿ ಪುತ್ರಿ ಜೀವಾ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಮಾಜಿ ಕೇಂದ್ರ ಮಂತ್ರಿ ಹಾಗೂ ಎನ್‍ಸಿಪಿಯ ಕದ್ವಾರ್ ಮಂತ್ರಿ ಪ್ರಫುಲ್ ಪಟೇಲ್ ಮಗಳು ಪೂರ್ಣ ಪಟೇಲ್ ಜೊತೆ ನಮಿತ್ ಸೋನಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಧೋನಿ ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು.

    ಮೆಹೆಂದಿ ಹಾಗೂ ಸಂಗೀತ್ ಕಾರ್ಯಕ್ರಮದ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಧೋನಿ ಪುತ್ರಿ ಜೀವಾ ಡ್ಯಾನ್ಸ್ ವಿಡಿಯೋ ಸಹ ವೈರಲ್ ಅಗಿದೆ. ಇಂಗ್ಲಿಷ್ ಹಾಡಿಗೆ ಜೀವಾ ತನಗೆ ತೋಚಿದಂತೆ ನೃತ್ಯ ಮಾಡುತ್ತಿರುವ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಮದುವೆಯಲ್ಲಿ ಧೋನಿ ಕುಟುಂಬ ಹೊರತುಪಡಿಸಿ ಜಹೀರ್ ಖಾನ್ ಮತ್ತು ಪತ್ನಿ ಸಾಗರಿಕಾ, ಯುವರಾಜ್ ಸಿಂಗ್ ಕೂಡ ಭಾಗಿಯಾಗಿದ್ದರು.

  • ಊಟ ನೀಡ್ತಿದ್ದ ಮಹಿಳೆ ಮೈ ಮೇಲೆ ಶಿರೂರು ಶ್ರೀಗಳ ಆಭರಣಗಳು

    ಊಟ ನೀಡ್ತಿದ್ದ ಮಹಿಳೆ ಮೈ ಮೇಲೆ ಶಿರೂರು ಶ್ರೀಗಳ ಆಭರಣಗಳು

    ಉಡುಪಿ: ನಿಗೂಢವಾಗಿ ಸಾವನ್ನಪ್ಪಿದ ಶಿರೂರು ಸ್ವಾಮೀಜಿ ಗಳಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದ ಮಹಿಳೆ ವಿಚಾರಣೆ ನಡೆಸಲಾಗುತ್ತಿದೆ. ಶಿರೂರು ಶ್ರೀಗಳ ಆಭರಣಗಳು ಮಹಿಳೆಯ ಮೈಮೇಲೆ ಕಂಡುಬಂದಿದ್ದು ಹಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ರಮ್ಯಾ ಶೆಟ್ಟಿ ಎಂಬ ಮಹಿಳೆ ಶ್ರೀ ಗಳಿಗೆ ಊಟ ವ್ಯವಸ್ಥೆ ಮಾಡುತ್ತಿದ್ದರು. ರಮ್ಯಾರನ್ನು ಬ್ರಹ್ಮಾವರದ ವ್ಯಕ್ತಯೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ರಮ್ಯಾ ಮಣಿಪಾಲದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಪ್ರತಿ ನಿತ್ಯ ತಾಯಿ ಜೊತೆ ಶಿರೂರು ಮೂಲ ಮಠಕ್ಕೆ ಆಗಮಿಸುತ್ತಿದ್ದ ರಮ್ಯಾ ಶ್ರೀಗಳಿಗೆ ಉಟ ತೆಗೆದುಕೊಂಡು ಬರುತ್ತಿದ್ದರು. ಹಲವು ಬಾರಿ ಮಠದಲ್ಲಿಯೇ ತಂಗುತ್ತಿದ್ದರೂ ಎಂದು ಹೇಳಲಾಗುತ್ತಿದೆ.

    ರಮ್ಯಾ ಶೆಟ್ಟಿ, ಇತ್ತೀಚೆಗೆ ಮೂಲಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಳು ಎಂಬ ಮಾಹಿತಿ ಮಠದ ಮೂಲಗಳಿಂದ ಲಭಿಸಿದ್ದು, ಪ್ರತಿ ಸೋಮವಾರ ಕೆಲಸಗಾರರಿಗೆ ಸಂಬಳವನ್ನು ರಮ್ಯಾ ನೀಡುತ್ತಿದ್ರು. ಶ್ರೀ ಗಳಿಗೆ ರಮ್ಯಾ ಹೇಗೆ ಆಪ್ತೆಯಾದಳು? ಶ್ರೀಗಳಿಗೆ ನೀಡುತ್ತಿದ್ದ ಆಹಾರದ ಪಟ್ಟಿ ಎಂಬುದರ ಬಗ್ಗೆ ಪೊಲೀಸರು ರಮ್ಯಾರಿಂದ ಮಾಹಿತಿ ಪಡೆಯುತ್ತಿದ್ದಾರೆ. ಸ್ವಾಮೀಜಿಗೆ ಭಕ್ತರಿಂದ ಉಡುಗೊರೆಯಾಗಿ ಬಂದಿದ್ದ ಚಿನ್ನಾಭರಣ ಮಹಿಳೆ ಮೈಮೇಲೆ ಇರುವುದು ಈಗ ಚರ್ಚೆಗೆ ಕಾರಣವಾಗಿದೆ. ಶಿರೂರು ಶ್ರೀ ತೊಡುತ್ತಿದ್ದ ಚಿನ್ನದ ಐದು ಕಡಗಗಳ ಪೈಕಿ ಒಂದನ್ನು ರಮ್ಯಾ ತೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ರಮ್ಯಾ ಶೆಟ್ಟಿ ಮೈ ಮೇಲೆ ಶಿರೂರು ಸ್ವಾಮೀಜಿ ಕಡಗ, ಸರ ಇರುವುದರಿಂದ ರಮ್ಯಾ ಯಾಕಿಷ್ಟು ಆತ್ಮೀಯಳು ಎಂಬ ಪ್ರಶ್ನೆಯೂ ಎದ್ದಿದೆ.

    ಪೇಜಾವರಶ್ರೀ ಪತ್ರಿಕಾಗೋಷ್ಠಿಯಲ್ಲಿ, ಶಿರೂರು ಶ್ರೀಗಳು ಮಹಿಳೆ ಜೊತೆ ಸಂಪರ್ಕ ಇರುವುದಾಗಿ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿ ಹೇಳಿದ್ದ ಮಹಿಳೆ ಇವರೇನಾ? ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.