Tag: viral

  • ಮಾನವೀಯತೆ ಮರೆತ ಜನ- ಅಪಘಾತವಾಗಿ 1 ಗಂಟೆ ರಸ್ತೆಯಲ್ಲೇ ನರಳಿದ ಗಾಯಾಳು

    ಮಾನವೀಯತೆ ಮರೆತ ಜನ- ಅಪಘಾತವಾಗಿ 1 ಗಂಟೆ ರಸ್ತೆಯಲ್ಲೇ ನರಳಿದ ಗಾಯಾಳು

    ದಾವಣಗೆರೆ: ಅಪಘಾತವಾಗಿ ಗಾಯಾಳು ಸುಮಾರು ಒಂದು ಗಂಟೆಗಳ ಕಾಲ ರಸ್ತೆಯಲ್ಲಿಯೇ ನರಳಾಡಿದ್ರೂ ಅಲ್ಲಿಯ ಜನರು ಆಸ್ಪತ್ರೆಗೆ ಸೇರಿಸದೇ ಒಂದು ಗಂಟೆಗಳ ಕಾಲ ನೋಡುತ್ತಾ ನಿಂತ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕಂಚಿಪುರ ಗ್ರಾಮದ ಬಳಿ ನಡೆದಿದೆ.

    ಕಳೆದ ಮೂರು ದಿನಗಳಿಂದ ನಡೆದ ಘಟನೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಕಂಚಿಪುರ ರಸ್ತೆಯಲ್ಲಿ ಬೈಕ್ ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದ.

    ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ನಿವಾಸಿ ಸಿದ್ದೇಶ್(26) ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನಾಗಿದ್ದು, ಪತ್ನಿಯ ಮನೆಗೆ ಬೈಕಿನಲ್ಲಿ ಹೋದಾಗ ಘಟನೆ ನಡೆದಿದೆ. ಅಪಘಾತವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿದ್ದೇಶ್ ಒಂದು ಗಂಟೆಗಳ ಕಾಲ ರಸ್ತೆಯಲ್ಲಿ ನರಳುತ್ತಿದ್ದರು ಅಲ್ಲಿನ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸುವ ಬದಲು ಅಪಘಾತವನ್ನು ನೋಡಿಕೊಂಡು ನಿಂತಿದ್ದಾರೆ.

    ನಂತರ ಸಿದ್ದೇಶ್‍ನನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಿ ತದನಂತರ ಉಡುಪಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸದ್ಯ ಈ ಬಗ್ಗೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಳಕಲ್ ಜೋಗಿಯನ್ನು ಮರಳಿ ಕುಟುಂಬಕ್ಕೆ ಸೇರಿಸ್ತು ಫೇಸ್‍ಬುಕ್ ವೈರಲ್ ವಿಡಿಯೋ!

    ಇಳಕಲ್ ಜೋಗಿಯನ್ನು ಮರಳಿ ಕುಟುಂಬಕ್ಕೆ ಸೇರಿಸ್ತು ಫೇಸ್‍ಬುಕ್ ವೈರಲ್ ವಿಡಿಯೋ!

    ಬಾಗಲಕೋಟೆ: ಐದು ವರ್ಷದಿಂದ ದೂರ ಇದ್ದ ಮಾನಸಿಕ ಅಸ್ವಸ್ಥನೊಬ್ಬ ಫೇಸ್‍ಬುಕ್ ವಿಡಿಯೋದ ಮೂಲಕ ಮರಳಿ ಕುಟುಂಬವನ್ನು ಸೇರಿದ್ದಾನೆ. ಇಳಕಲ್ ಜೋಗಿ ಎಂದೇ ಹೆಸರಾಗಿದ್ದ ನರಸಿಂಹನನ್ನು ಸಾಮಾಜಿಕ ಜಾಲತಾಣದ ವೈರಲ್ ವಿಡಿಯೋ ಮೂಲಕ ಗಮನಿಸಿದ ಕುಟುಂಬಸ್ಥರು ಮನೆಗೆ ಕರೆದೊಯ್ದಿದ್ದಾರೆ.

    ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ನರಸಿಂಹ ಕಳೆದ ಐದು ವರ್ಷದಿಂದ ನಾಪತ್ತೆಯಾಗಿದ್ದ. ಮನೆಯವರೆಲ್ಲರೂ ಹುಡುಕಿ ಸುಸ್ತಾಗಿದ್ದರು. ಮಾನಸಿಕ ಅಸ್ವಸ್ಥನಾಗಿದ್ದರೂ ನರಸಿಂಹ ಇಳಕಲ್ ನಗರದಲ್ಲಿ ಸರ್ವ ವಿಜಯ ಸಂಸ್ಥೆಯವರು ನೆಟ್ಟ ನೂರಾರು ಗಿಡಗಳಿಗೆ ಪ್ರತಿ ನಿತ್ಯ ತಪ್ಪದೇ ಬಕೆಟ್ ಹಿಡಿದು ನೀರು ಹಾಕುತ್ತಿದ್ದ.

    ತಲೆ ತುಂಬ ಕೂದಲು ಬಿಟ್ಟುಕೊಂಡು ಹುಚ್ಚನಂತಾಗಿದ್ದ ನರಸಿಂಹನನ್ನು ಎಲ್ಲರೂ ಇಳಕಲ್ ಜೋಗಿ ಎಂದೇ ಕರೆಯುತ್ತಿದ್ದರು. ಮಾನಸಿಕ ಅಸ್ವಸ್ಥನಾಗಿದ್ದರೂ ಈತನ ಗಿಡದ ಮೇಲಿನ ಪ್ರೀತಿ ಎಲ್ಲರ ಮನಮಿಡಿಯುವಂತೆ ಮಾಡಿತ್ತು. ಕೊನೆಗೆ ಗಿಡಕ್ಕೆ ನೀರು ಹಾಕೋದನ್ನು ವಿಡಿಯೋ ಮಾಡಿದ ಸ್ಥಳೀಯರು ಅದಕ್ಕೆ ಒಳಿತು ಮಾಡು ಮನಸಾ ಎಂಬ ಹಾಡನ್ನು ಅಳವಡಿಸಿ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಸಾಕಷ್ಟು ಜನರಿಂದ ಶೇರ್, ಲೈಕ್ಸ್, ಕಮೆಂಟ್ ಪಡೆಯುತ್ತಾ ನರಸಿಂಹನ ಕುಟುಂಬದ ಗಮನಕ್ಕೂ ಬಂದಿದೆ. ಕೂಡಲೇ ಕುಟುಂಬಸ್ಥರು ಇಳಕಲ್ ನಗರಕ್ಕೆ ಭೇಟಿ ನೀಡಿದ್ದಾರೆ.

    ಈ ವೇಳೆ ಸ್ಥಳೀಯರು ತಲೆ ತುಂಬ ಕೂದಲು ಬಿಟ್ಟಿದ್ದ ಆತನಿಗೆ ಕ್ಷೌರ ಮಾಡಿಸಿ, ಸ್ನಾನಮಾಡಿಸಿ ಹೊಸ ಟಿ-ಶರ್ಟ್ ಹಾಕಿಸಿ ಮನೆಗೆ ಕಳಿಸಿ ಕೊಟ್ಟಿದ್ದಾರೆ. ಫೇಸ್‍ಬುಕ್ ನಿಂದ ಓರ್ವ ವ್ಯಕ್ತಿ ಮರಳಿ ಮನೆ ಸೇರಿದ್ದು, ಕುಟುಂಬಸ್ಥರಿಂದ ಅಗಲಿದ ನರಸಿಂಹ ಮತ್ತೆ ಮನೆಯವರ ಜೊತೆ ಒಂದಾದ ಘಟನೆ ಎಲ್ಲರ ಮನ ಕಲಕುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋರಿ ಸ್ವಚ್ಛ ಮಾಡಿ ಜನರಲ್ಲಿ ಜಾಗೃತಿ- ಸಿಎಂ ವಿಡಿಯೋ ವೈರಲ್

    ಮೋರಿ ಸ್ವಚ್ಛ ಮಾಡಿ ಜನರಲ್ಲಿ ಜಾಗೃತಿ- ಸಿಎಂ ವಿಡಿಯೋ ವೈರಲ್

    ನವದೆಹಲಿ: ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ಮೋರಿಯನ್ನು ಸ್ವಚ್ಛಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸ್ವಚ್ಛತಾ ಹಾಯ್ ಸೇವಾ ಯೋಜನೆಗೆ ಕಳೆದ ತಿಂಗಳು ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿದರು.

    ಈ ವಿಡಿಯೋದಲ್ಲಿ ಪುದುಚೇರಿಯ ಮುಖ್ಯಮಂತ್ರಿ ಬಿಳಿ ಬಟ್ಟೆ ಮತ್ತು ಪಂಚೆಯನ್ನು ತೊಟ್ಟಿದ್ದು, ರಸ್ತೆಯ ಬದಿಯಿದ್ದ ಮೋರಿಯಲ್ಲಿರುವ ಕೊಳೆ ನೀರನ್ನು ಸಲ್ಕೆಯಿಂದ ಹೊರತೆಗೆಯುವ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಮೂಡಿಸಿದರು.

    ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಮತ್ತು ಸಮರ್ಪಿತ ಪ್ರಯತ್ನಗಳನ್ನು ನೋಡಿದಾಗ ನಿಜವಾಗಿಯೂ ಸಂತೋಷವಾಗಿದೆ. ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೀವು ಮಾದರಿಯಾಗಿದ್ದೀರಿ. ನಮ್ಮ ದೇಶಕ್ಕೆ ಹೆಚ್ಚು ಸೇವೆ ನೀಡಲು ದೇವರು ನಿಮಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ಟ್ವಿಟರ್‌ನಲ್ಲಿ  ಕಾಂಗ್ರೆಸ್ ಕಾರ್ಯಕರ್ತರು ಬರೆದುಕೊಂಡಿದ್ದರು.

    ಕಳೆದ ನಾಲ್ಕು ವರ್ಷಗಳಲ್ಲಿ ಒಂಬತ್ತು ಕೋಟಿ ಶೌಚಾಲಯಗಳನ್ನು ಕಟ್ಟಲಾಗಿದೆ ಮತ್ತು 4.5 ಲಕ್ಷಕ್ಕಿಂತ ಹೆಚ್ಚು ಹಳ್ಳಿಗಳನ್ನು ತೆರೆದ ಮಲವಿಸರ್ಜನೆ ಮುಕ್ತ ಮಾಡಲಾಗಿದೆ ಎಂದು ಘೋಷಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 123 ಕಿ.ಮೀ ಓಡಿ ವಿಶ್ವ ದಾಖಲೆ ಬರೆದ 85 ರ ವೃದ್ಧ!- ವಿಡಿಯೋ ವೈರಲ್

    123 ಕಿ.ಮೀ ಓಡಿ ವಿಶ್ವ ದಾಖಲೆ ಬರೆದ 85 ರ ವೃದ್ಧ!- ವಿಡಿಯೋ ವೈರಲ್

    ಲಂಡನ್: 85 ವರ್ಷದ ಹರೆಯದ ವೃದ್ಧರೊಬ್ಬರು 24 ಗಂಟೆಯಲ್ಲಿ 123 ಕಿ.ಮಿ(77 ಮೈಲಿ) ಓಡಿ ವಿಶ್ವ ದಾಖಲೆ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ದಕ್ಷಿಣ ಲಂಡನ್‍ನ ಹಿಂಕ್ಲಿ ರನ್ನಿಂಗ್ ಕ್ಲಬ್‍ನ ಜಿಯೋಫ್ ಒಲಿವರ್ ಎಂಬವರೇ ಈ ಸಾಧಕ. ಹರೆಯದವರಿಗೆ ಏರ್ಪಡಿಸಲಾಗಿದ್ದ 24 ಗಂಟೆಗಳ ಓಟದ ಸ್ಫರ್ಧೆಯಲ್ಲಿ ಬರೋಬ್ಬರಿ 77 ಮೈಲಿಗಳಷ್ಟು ದೂರವನ್ನು ಓಡುವ ಮೂಲಕ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

    ಈ ವಿಡಿಯೋವನ್ನುಪತ್ರಕರ್ತೆ ಸೋಫಿ ರಾವರ್ತ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇದು ಜೆಫ್ ಆಲಿವರ್ ಎಂಬವರಿಗೆ 85 ವರ್ಷ. ಅವರು 24 ಗಂಟೆಗಳ ಓಟದ ಸ್ಫರ್ಧೆಯಲ್ಲಿ ಸುಮಾರು 70 ಮೈಲಿಗಿಂತ ಹೆಚ್ಚು ಓಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಒಲಿವರ್ ಈ ಮೊದಲು 50ನೇ ದಶಕದಲ್ಲಿ 65 ವರ್ಷ ವಯಸ್ಸಿದ್ದಾಗ ತನ್ನ ಮೊದಲ ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ದಕ್ಷಿಣ ಲಂಡನ್ ನಲ್ಲಿ 2009 ರಲ್ಲಿ ನಡೆದ ಒಂದೇ ಕ್ರೀಡಾಕೂಟದಲ್ಲಿ ನಾಲ್ಕು ರಾಷ್ಟ್ರೀಯ ಮತ್ತು ಎರಡು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವಮೊಗ್ಗದಲ್ಲಿ ಹಲವೆಡೆ ಸೂರ್ಯನ ಸುತ್ತ ಕಾಣಿಸಿಕೊಂಡ ಕಾಮನಬಿಲ್ಲು

    ಶಿವಮೊಗ್ಗದಲ್ಲಿ ಹಲವೆಡೆ ಸೂರ್ಯನ ಸುತ್ತ ಕಾಣಿಸಿಕೊಂಡ ಕಾಮನಬಿಲ್ಲು

    ಶಿವಮೊಗ್ಗ: ಜಿಲ್ಲೆಯ ಹಲವೆಡೆ ಸೂರ್ಯನ ಸುತ್ತ ಕಾಮನಬಿಲ್ಲು ಕಾಣಿಸಿಕೊಂಡಿದೆ.

    ಮಧ್ಯಾಹ್ನ 12 ಗಂಟೆಗೆ ಕಾಣಿಸಿಕೊಂಡ ಈ ರಿಂಗ್ ಒಂದೂವರೆ ಗಂಟೆ ಕಾಲ ಇತ್ತು. ಸೂರ್ಯನ ಸುತ್ತ ರಿಂಗ್ ಕಾಣಿಸಿಕೊಂಡ ಫೋಟೋ, ವಿಡಿಯೋ ವಾಟ್ಸಪ್ ನಲ್ಲಿ ವೈರಲ್ ಆಗುತ್ತಿದೆ. ಶಾಲಾ ಮಕ್ಕಳು, ಕಚೇರಿ ಸಿಬ್ಬಂದಿ, ಸಾರ್ವಜನಿಕರು ಅಲ್ಲಲ್ಲಿ ನಿಂತು ಖಗೋಳ ಕೌತುಕ ಕಣ್ತುಂಬಿಕೊಂಡರು.

    ಅಲ್ಲದೇ ಈ ರಿಂಗ್ ನೋಡಿ ಏನೋ ಆಪತ್ತು ಕಾದಿದೆ, ಸಿಕ್ಕಾಪಟ್ಟೆ ಮಳೆ ಸುರಿಯಲಿದೆ ಎಂದು ವಿಶ್ಲೇಷಣೆಗಳು ಈಗ ಆರಂಭವಾಗಿದೆ. ವೈಜ್ಞಾನಿಕವಾಗಿ 22 ಡಿಗ್ರಿ ಹ್ಯಾಲೋ ಎಂದು ಕರೆಯಲಾಗುವ ಇದು ಖಗೋಳದ ಸಾಮಾನ್ಯ ಪ್ರಕ್ರಿಯೆ. ನೆಲದಿಂದ ಸುಮಾರು 2 ಸಾವಿರ ಅಡಿ ಎತ್ತರದ ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಈ ವೃತ್ತಕಾರ ಕಾಣಿಸಿಕೊಳ್ಳುತ್ತದೆ.

    ಅಲ್ಲಿ ತೇವಾಂಶ ಹೆಚ್ಚಾಗಿ ನೀರಿನ ಶೈತ್ಯೀಕರಣದಿಂದ ಮಂಜು ಹರಳುಗಟ್ಟುತ್ತದೆ. ಈ ಪ್ರದೇಶವನ್ನು ಸೂರ್ಯನ ಕಿರಣಗಳು ಹಾದು ಬರುವಾಗ ಬೆಳಕಿನ ವಕ್ರೀಭವನ, ಬೆಳಕಿನ ಪ್ರತಿಫಲನ ಹಾಗೂ ಬೆಳಕಿನ ಚದುರುವಿಕೆ ನಡೆದು ವೃತ್ತಾಕಾರದ ಕಾಮಬಿಲ್ಲು ಕಾಣಿಸುತ್ತದೆ. ಒಟ್ಟಾರೆಯಾಗಿ ಖಗೋಳದ ವಿದ್ಯಾಮಾನ ಶಿವಮೊಗ್ಗ ಜನರಲ್ಲಿ ವಿಸ್ಮಯ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತಿಯನ್ನು ಗುರುತಿಸಿ-ವೈರಲ್ ಆಯ್ತು ಸೆಹ್ವಾಗ್ ಟ್ವೀಟ್

    ಪತಿಯನ್ನು ಗುರುತಿಸಿ-ವೈರಲ್ ಆಯ್ತು ಸೆಹ್ವಾಗ್ ಟ್ವೀಟ್

    ನವದೆಹಲಿ: ಕ್ರಿಕೆಟ್ ವೃತ್ತಿ ಜೀವನದಿಂದ ನಿವೃತ್ತಿ ಪಡೆದ ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಮತ್ತೊಮ್ಮೆ ವಿಶಿಷ್ಟ ಟ್ವೀಟ್ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

    ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎರಡು ಪಕ್ಷಿಗಳ ಫೋಟೋ ಟ್ವೀಟ್ ಮಾಡಿರುವ ಸೆಹ್ವಾಗ್, ಪಕ್ಷಿಗಳ ಬಗ್ಗೆ ಹೆಚ್ಚು ತಿಳಿಯದಿದ್ದರೂ ಈ ಚಿತ್ರದಲ್ಲಿ ಪತಿಯನ್ನು ಗುರುತಿಸುವುದು ಸುಲಭ ಎಂದು ಫೋಟೋಗೆ ಹಣೆಬರಹ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸೆಹ್ವಾಗ್ ಟ್ವೀಟ್ ಮಾಡಿರುವ ಫೋಟೋ ವೈರಲ್ ಆಗಿದ್ದು, ಹಲವರು ಮರು ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೆಹ್ವಾಗ್ ಈ ಹಿಂದೆಯೂ ತಮ್ಮ ಟ್ಟಿಟ್ವರಿನಲ್ಲಿ ಕೌಟುಂಬಿಕ ಜೀವನದಲ್ಲಿ ಗಂಡನ ಪಾತ್ರದ ಕುರಿತು ತಿಳಿಹಾಸ್ಯ ದಾಟಿಯಲ್ಲಿ ಟ್ವೀಟ್ ಮಾಡಿ ಗಮನೆಸೆಳೆದಿದ್ದರು.

    ಸೆಹ್ವಾಗ್‍ರ ಈ ಟ್ವೀಟನ್ನು 3 ಸಾವಿರಕ್ಕೂ ಅಧಿಕ ಮಂದಿ ಮರುಟ್ವೀಟ್ ಮಾಡಿದ್ದು, 33 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 900ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. ಕೆಲವರು ಸೆಹ್ವಾಗ್ ರ ಹಾಸ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತು ಕೆಲವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ತಮ್ಮ ಪತ್ನಿ ಅರತಿ ಅವರೊಂದಿನ ಫೋಟೋ ಟ್ವೀಟ್ ಮಾಡಿದ್ದ ಸೆಹ್ವಾಗ್, ವೈವಾಹಿಕ ಜೀವನದಲ್ಲಿ ಮಹಿಳೆಯರೇ ಸ್ಟ್ರಾಂಗ್ ಎಂಬರ್ಥದ ಹಣೆಬರಹ ನೀಡಿದ್ದರು. ಬಳಿಕ ಜೂನ್‍ನಲ್ಲೂ ಇಂತಹದ್ದೇ ಟ್ವೀಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಜಯ್ ದೇವರಕೊಂಡ ತನ್ನ ಗರ್ಲ್ ಫ್ರೆಂಡ್ ಜೊತೆಯಿರುವ ಫೋಟೋ ವೈರಲ್

    ವಿಜಯ್ ದೇವರಕೊಂಡ ತನ್ನ ಗರ್ಲ್ ಫ್ರೆಂಡ್ ಜೊತೆಯಿರುವ ಫೋಟೋ ವೈರಲ್

    ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ತನ್ನ ಗರ್ಲ್ ಫ್ರೆಂಡ್ ಜೊತೆಯಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಜಯ್ ಅವರಿಗೆ ಗರ್ಲ್ ಫ್ರೆಂಡ್ ಇದ್ದಾರೆ ಎಂಬುದು ತಿಳಿದಿತ್ತು. ಆದರೆ ಆ ಯುವತಿ ಯಾರೂ ಎಂಬುದರ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಆದರೆ ಈಗ ವಿಜಯ್ ವಿದೇಶಿ ಹುಡುಗಿಯ ಜೊತೆಯಿರುವ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಜಯ್ ಯುವತಿ ಜೊತೆಯಿರುವ ವೈರಲ್ ಫೋಟೋಗಳು ಈಗಿನ ಫೋಟೋ ಅಲ್ಲ ಎಂದು ಹೇಳಲಾಗುತ್ತಿದೆ. ‘ಅರ್ಜುನ್ ರೆಡ್ಡಿ’ ಸಿನಿಮಾ ಬಿಡುಗಡೆಯಾಗುವ ಮೊದಲು ಈ ಫೋಟೋಗಳನ್ನು ತೆಗೆಯಲಾಗಿತ್ತು. ಆದರೆ ಈಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ವಿಜಯ್ ಆಪ್ತರು ತಿಳಿಸಿದ್ದಾರೆ.

    ಸದ್ಯ ವಿಜಯ್ ಜೊತೆಯಿರುವ ಯುವತಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ಮೂಲಗಳ ಪ್ರಕಾರ ಈ ಯುವತಿ ವಿಜಯ್ ಅವರ ಗರ್ಲ್ ಫ್ರೆಂಡ್ ಆಗಿದ್ದರು. ಆದರೆ ಈಗ ಇವರಿಬ್ಬರ ಬ್ರೇಕಪ್ ಆಗಿದೆ ಎನ್ನಲಾಗಿದೆ.

    ಸದ್ಯ ‘ಗೀತಾ ಗೋವಿಂದಂ’ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ವಿಜಯ್ ಈಗ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ‘ನೋಟ’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಆದ ಬಳಿಕ ‘ಡಿಯರ್ ಕಾಮ್ರೆಡ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ಲಾಮರಸ್ ಲುಕ್‍ನಲ್ಲಿ ಸ್ವೀಟಿ ರಾಧಿಕಾ- ಫೋಟೋ ವೈರಲ್

    ಗ್ಲಾಮರಸ್ ಲುಕ್‍ನಲ್ಲಿ ಸ್ವೀಟಿ ರಾಧಿಕಾ- ಫೋಟೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಅವರು ಕಪ್ಪು ಬಣ್ಣದ ಟಾಪ್ ಹಾಗೂ ಶಾರ್ಟ್ ಸ್ಕರ್ಟ್ ಧರಿಸಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಉಡುಪನ್ನು ಧರಿಸಿರುವ ರಾಧಿಕಾ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಫಿಟ್ನೆಸ್ ಬಗ್ಗೆ ಗಮನ ಹರಿಸುವ ರಾಧಿಕಾ ಇನ್ನೂ ತೆಳ್ಳಗೆ ಆಗಿದ್ದಾರೆ.

    15 ವರ್ಷಗಳ ಹಿಂದೆ ಇದ್ದಾಗ ಹೇಗಿದ್ದಿರೋ ಈಗಲೂ ಹಾಗೆಯೇ ಇದ್ದೀರಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಈ ಹಿಂದೆ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಯಾವಾಗಲೂ ಪಾಸಿಟೀವ್ ಆಗಿ ಇರುತ್ತೇನೆ. ನಾನು ಯಾವುದೇ ವಿಚಾರಕ್ಕೂ ಟೆನ್ಷನ್ ಮಾಡಿಕೊಳ್ಳುವುದಿಲ್ಲ. ಒತ್ತಡ ಅನ್ನೋದು ಎಲ್ಲರ ಜೀವನದಲ್ಲೂ ಇರುತ್ತದೆ. ಆದರೆ ನಾನು ಅದನ್ನು 5-10 ಮಿನಿಟ್ ತೆಗೆದುಕೊಳ್ಳುತ್ತೇನೆ. ನಂತರ ಅದನ್ನು ಮರೆತು ನನ್ನ ಕೆಲಸದ ಕಡೆ ಗಮನ ಕೊಡುತ್ತೇನೆ. ಯಾವಾಗಲೂ ಸಿನಿಮಾ, ಕುಟುಂಬ ಎಂದು ಬ್ಯುಸಿಯಾಗಿರುತ್ತೇನೆ. ಕುಟುಂಬದೊಂದಿಗೆ ಸಂತೋಷದಿಂದ ಇರುತ್ತೇನೆ ಎಂದು ತಮ್ಮ ಬ್ಯೂಟಿ ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದರು.

    ಸದ್ಯಕ್ಕೆ ರಾಧಿಕಾ `ಭೈರಾದೇವಿ’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಮೂರು ಭಾಷೆಯಾಗಿರುವುದರಿಂದ ಸ್ವಲ್ಪ ತಡವಾಗುತ್ತಿದೆ. ಈ ತಿಂಗಳು ಸಂಪೂರ್ಣ ಶೂಟಿಂಗ್ ಮುಗಿಯುತ್ತದೆ ಎಂದು ಹೇಳಿದ್ದರು. ಜೊತೆಗೆ ರಾಜೇಂದ್ರ ಪೊನ್ನಪ್ಪ, ಹಾಗೂ ದಮಯಂತಿ ಸಿನಿಮಾದಲ್ಲಿಯೂ ಕೂಡ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಬ್ಬಾವಿನ ಜೊತೆ ಪುಟ್ಟ ಬಾಲಕನ ತುಂಟಾಟ- ವಿಡಿಯೋ ವೈರಲ್

    ಹೆಬ್ಬಾವಿನ ಜೊತೆ ಪುಟ್ಟ ಬಾಲಕನ ತುಂಟಾಟ- ವಿಡಿಯೋ ವೈರಲ್

    ಜಕಾರ್ತ: ಪುಟ್ಟ ಬಾಲಕನೊಬ್ಬ ಹೆಬ್ಬಾವಿನ ಜೊತೆ ಆಟವಾಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸುಮಾರು 10 ಪಟ್ಟು ದೊಡ್ಡದಾಗಿರುವ ಹೆಬ್ಬಾವಿನ ಜೊತೆ ಆಟವಾಡುತ್ತಿದ್ದಾಗ ಅವರ ಪೋಷಕರೇ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದೀಗ ಅದು ಸಖತ್ ವೈರಲ್ ಆಗುತ್ತಿದೆ. ಈ ರೋಮಾಂಚನವಾದ ದೃಶ್ಯ ಇಂಡೊನೆಷಿಯಾದ ಇಸ್ಟ್ ಜಾವದಲ್ಲಿ ನಡೆಯಿತು.

    ವಿಡಿಯೋದಲ್ಲಿ ಪುಟ್ಟ ಬಾಲಕನಿಗಿಂತ ಹತ್ತುಪಟ್ಟು ಗಾತ್ರದಲ್ಲಿರುವ ಹೆಬ್ಬಾವಿನ ಜೊತೆ ಬಾಲಕ ತುಂಟಾಟವನ್ನು ಆಡುತ್ತಾನೆ. ಅಷ್ಟೇ ಅಲ್ಲದೇ ಹಾವು ಕೂಡ ಅವನೊಂದಿಗೆ ಆಟವಾಡುತ್ತದೆ. ಹೆಬ್ಬಾವು ಪುಟ್ಟ ಬಾಲಕನಿಂದ ತಪ್ಪಿಸಿಕೊಂಡು ದೂರ ಹೋಗುತ್ತಿದ್ದರೆ, ಬಾಲಕ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಮತ್ತೆ ಹಾವಿನೆಡೆಗೆ ಹೋಗುತ್ತಾನೆ. ಬಳಿಕ ಹೆಬ್ಬಾವಿನ ತಲೆ ಹಿಡಿದು ಎಳೆದು ತರುತ್ತಾನೆ.

    ಇದೇ ಮೊದಲು ಅಲ್ಲ ಈ ಹಿಂದೆಯೂ ಮೇ ತಿಂಗಳಲ್ಲಿ ಇಬ್ಬರು ಬಾಲಕಿಯರು ಹಾವಿನೊಂದಿಗೆ ಆಟವಾಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=CpIZh4NOuZY

  • ತಿನ್ನಲು ಬಂದ ಚಿರತೆಯನ್ನು ಹೆದರಿಸಿ ಓಡಿಸಿದ ನಾಯಿ: ವಿಡಿಯೋ

    ತಿನ್ನಲು ಬಂದ ಚಿರತೆಯನ್ನು ಹೆದರಿಸಿ ಓಡಿಸಿದ ನಾಯಿ: ವಿಡಿಯೋ

    ಜೈಪುರ್: ತನ್ನನ್ನು ತಿನ್ನಲು ಬಂದ ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ನಾಯಿಯೊಂದು ಅದನ್ನು ಬೆದರಿಸಿ ಓಡಿಸಿದ ವಿಡಿಯೋವೊಂದು ರಾಜಸ್ಥಾನದ ಝಲಾನಾ ಅರಣ್ಯದಲ್ಲಿ ಸಫಾರಿಗೆ ತೆರೆಳಿದ್ದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

    ಸಫಾರಿಗೆ ಹೋದ ಪ್ರವಾಸಿಗರ ತಂಡಕ್ಕೆ ಈ ಚಿರತೆ ಎದುರಾಗಿದೆ. ಪಾಂಥರ್ ಜೋಪಾ ಮತ್ತು ಕಾಳಿ ಮಾತಾ ದೇವಸ್ಥಾನ ಮಾರ್ಗದಲ್ಲಿ ಟ್ರ್ಯಾಕ್ ನಂಬರ್ 2ರಲ್ಲಿ ಚಿರತೆ ಪೋದೆಯಿಂದ ಹೊರಬಂದು ಪ್ರವಾಸಿಗರ ವಾಹನದ ಮುಂದೆ ಪ್ರತ್ಯಕ್ಷವಾಗಿದೆ. ಚಿರತೆಯನ್ನು ನೋಡುತ್ತಿದ್ದಂತೆ ಚಾಲಕ ತಮ್ಮ ವಾಹನವನ್ನು ನಿಲ್ಲಿಸಿದ್ದರು.

    ಚಿರತೆಯನ್ನು ನೋಡುತ್ತಿದ್ದಂತೆ ನಾನು ವಾಹನವನ್ನು ನಿಲ್ಲಿಸಿದೆ. ಆ ಚಿರತೆಯನ್ನು ನೋಡಿ ಎಲ್ಲರು ಒಂದು ಕ್ಷಣ ಭಯಭೀತರಾಗಿದ್ದರು. ಆದರೆ ಈ ಭಯದ ನಡುವೆಯೂ ನಮಗೆ ಥ್ರಿಲ್ಲಿಂಗ್ ಹಾಗೂ ಅಡ್ವೆಂಚರ್ ದೃಶ್ಯ ನೋಡಲು ಸಿಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ನಾವು ವಾಹನ ನಿಲ್ಲಿಸಿದ್ದಾಗ ಅಲ್ಲಿ ನಾಯಿ ಇತ್ತು. ಚಿರತೆ ನೋಡಿ ನಾವು ಏನೂ ಶಬ್ಧ ಮಾಡಲಿಲ್ಲ. ಹಾಗಾಗಿ ನಾಯಿಗೆ ಅಲ್ಲಿ ಚಿರತೆ ಇದ್ದ ವಿಷಯ ಗೊತ್ತಾಗಲಿಲ್ಲ ಎಂದು ಟೂರಿಸ್ಟ್ ವಾಹನ ಚಾಲಕ ವೇದ್ ಪ್ರಕಾಶ್ ತಿಳಿಸಿದರು.

    ನಮ್ಮ ವಾಹನದ 10 ಅಡಿ ದೂರದ ಪೊದೆಯಲ್ಲಿ ಚಿರತೆ ಅಡಗಿತ್ತು. ಈ ವೇಳೆ ನಮ್ಮ ವಾಹನದ ಮುಂದೆಯೇ ನಾಯಿ ಮಲಗಿತ್ತು. ಆ ಚಿರತೆ ನಾಯಿಯ ಮೇಲೆ ಎರಗಿತ್ತು. ಆ ಚಿರತೆಯನ್ನು ನೋಡಿ ನಾಯಿ ಕೂಡ ಒಂದು ಕ್ಷಣ ಹೆದರಿತ್ತು. ಆದರೆ ಅದು ಚಿರತೆಯನ್ನು ನೋಡಿ ಜೋರಾಗಿ ಬೊಗಳಲು ಶುರು ಮಾಡಿತ್ತು. ನಾಯಿಯನ್ನು ನೋಡುತ್ತಾ ಚಿರತೆ ಕೆಲ ಹೊತ್ತು ಅಲ್ಲಿಯೇ ನಿಂತಿತ್ತು. ಆದರೆ ನಾಯಿ ಬೊಗಳುವುದು ನಿಲ್ಲಿಸದಿದ್ದಾಗ ಚಿರತೆ ಮತ್ತೆ ಪೊದೆಯೊಳಗೆ ಹೋಯಿತು ಎಂದರು ವೇದ್ ಪ್ರಕಾಶ್ ಹೇಳಿದರು.

    ನಾಯಿ ಆ ಚಿರತೆಯನ್ನು ಓಡಿಸಿದ್ದು ನೋಡಿ ಪ್ರವಾಸಿಗರು ಹಾಗೂ ಚಾಲಕ ಒಂದು ಕ್ಷಣ ದಂಗಾದರು. ಅಲ್ಲದೇ ಆ ನಾಯಿಯನ್ನು ಅಲ್ಲಿಯೇ ಬಿಟ್ಟರೆ ಅಪಾಯ ಎಂದು ತಮ್ಮ ಜೊತೆ ಅರಣ್ಯದಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಆ ನಾಯಿ ಕಾಡಿನಲ್ಲಿರುವ ಕಾಳಿ ಮಂದಿರದಲ್ಲಿ ವಾಸವಿರುತ್ತಿತ್ತು ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv